ಡಾ.ಸುರೇಖಾ ರಾಠೋಡ್ ಕವಿತೆ-ಮತ್ತೆ ಬರಬೇಕಾಗಿದೆ

ಕಾವ್ಯ ಸಂಗಾತಿ

ಡಾ.ಸುರೇಖಾ ರಾಠೋಡ್

ಮತ್ತೆ ಬರಬೇಕಾಗಿದೆ

ಹೆಣ್ಣು ಭ್ರೂಣವ ಕೊಂದು
ಸಾಲು ಸಾಲು ಅಪರಾಧ
ಮಾಡುವ ಪಾಪಿಗಳ
ಬದಲಿಸಲು ;
ಮತ್ತೆ ಬರಬೇಕಾಗಿದೆ
ಬುದ್ದ ,
ಅಂಗುಲಿ ಮಾಲನನ್ನು ಬದಲಿಸಿದಂತೆ…

ಗಂಡು ಬೇಕೆಂದು ಹಂಬಲಿಸುವ ಹಪಾಹಪಿಗಳಿಗೆ,
ಬದಲಿಸಬೇಕಿದೆ..
ಗಂಡು ಹೆಣ್ಣು
ಒಂದು ಗಾಡಿಯ ಚಕ್ರದಂತೆ,
ಮನುಷ್ಯನ ಎರಡು ಕಣ್ಣುಗಳಿದ್ದಂತೆ
ಎಂದು ಹೋರಾಡಲು
ಬರಬೇಕಾಗಿದೆ ಬುದ್ಧ, ಬಸವ, ಅಂಬೇಡ್ಕರ್
ಹೆಣ್ಣು ಭ್ರೂಣಗಳ ಉಳಿಸಲು,
ದೇಶವ ಬೆಳಸಲು..
ಮನುಷ್ಯ ಪೀಳಿಗೆಯು ಮುಂದುವರೆಸಲು…

ರಾತ್ರಿಯ ಹನ್ನೆರಡು ಗಂಟೆ ಹೋಗಲಿ
ಹಗಲಿನ ಹನ್ನೆರಡು ಗಂಟೆಗೆ
ಓಡಾಡಲು ಕಷ್ಟ ಪಡುತ್ತಿರುವ
ಹೆಣ್ಣುಗಳಿಗೆ,
ದಾರಿತೋರಲು ಬರಬೆಕಾಗಿದೆ ಅಕ್ಕಮಹಾದೇವಿ ತೋರಬೇಕಾಗಿದೆ
ಬೆಳಕಿನ ದಾರಿ…
———————————-

ಡಾ.ಸುರೇಖಾ ರಾಠೋಡ್ .

One thought on “ಡಾ.ಸುರೇಖಾ ರಾಠೋಡ್ ಕವಿತೆ-ಮತ್ತೆ ಬರಬೇಕಾಗಿದೆ

Leave a Reply

Back To Top