ಹುಡುಕುತ್ತಿರುವೆ

ಕಾವ್ಯ ಸಂಗಾತಿ

ಹುಡುಕುತ್ತಿರುವೆ

ಶ್ರೀವಲ್ಲಿ ಮಂಜುನಾಥ

ಮಾತನಾಡದೆಯೂ
ಅರ್ಥ ಧ್ವನಿಸುವ
ಮೌನಿ ಮನಸಿಗಾಗಿ!

ಕಲ್ಲು ಮನದಲೂ
ಒಮ್ಮೊಮ್ಮೆ ಒಸರುವ
ಪ್ರೀತಿಯೊರತೆಗಾಗಿ !

ಕತ್ತಲು ತುಂಬಿಹ
ಬದುಕಿನಲಿ ಬಣ್ಣದ
ಕನಸುಗಳಿಗಾಗಿ!

ಕೊನೆಯಿರದ
ಹಾದಿಗಳಲ್ಲಿನ
ಏಕಾಂತಕ್ಕಾಗಿ!

ಸತ್ತೇ ಹೋದಂತಹ
ಸಂಬಂಧದಲ್ಲೂ ಕಾಣುವ
ಹೊಸ ಚಿಗುರಿಗಾಗಿ!


Leave a Reply

Back To Top