ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನೀನು ಬರದಿದ್ದರೆʼ

ಬಸವಣ್ಣ
ನೀನು ಬರದಿದ್ದರೆ
ನಾವು ಅಗ್ರಹಾರದ
ವೈದಿಕರ ಮನೆಯಲ್ಲಿ
ದನದ ಕೊಟ್ಟಿಗೆಯ
ಸಗಣಿ ಗೊಬ್ಬರ ಎತ್ತಬೇಕಿತ್ತು.

ಬಸವಣ್ಣ
ನೀನು ಬರದಿದ್ದರೆ
ನಾವು ಗುಡಿ ದೇವಾಲಯ
ಮಠಗಳ ಕಸ ಗುಡಿಸುವ
ದೊಡ್ಡವರ ಹೊಲದಲ್ಲಿ
ಕಸ ಕೀಳುವ ಜೀತಕ್ಕೆ ಬಲಿಯಾಗುತ್ತಿದ್ದೆವು

ಬಸವಣ್ಣ
ನೀನು ಬರದಿದ್ದರೆ
ಕನ್ನಡ ಕಲಿಯದೆ
ಸಂಸ್ಕೃತ ಪಂಡಿತರ
ಬ್ರಾಹ್ಮಣ ಪುರೋಹಿತರ
ಚಾಕರಿ ಮಾಡಬೇಕಿತ್ತು

ಬಸವಣ್ಣ
ನೀನು ಬರದಿದ್ದರೆ
ಅವರ ಮನೆಯ ಕಕ್ಕವ
ತಲೆಯ ಮೇಲೆ ಹೊತ್ತು
ಅವರ ಪಾದುಕೆಗೆ ನಮ್ಮ
ಚರ್ಮದ ಜೋಡು ಮಾಡಿಕೊಡಬೇಕಿತ್ತು

ಬಸವಣ್ಣ ನೀನು ಬಂದೇ
ಕಂಗೆಟ್ಟ ಕನ್ನಡದ ಕುಲಕ್ಕೆ
ಬಾಳ ಬಟ್ಟೆಯಾಗಿ
ಬದುಕುವ ಹೊಸ ಕನಸಿನ
ಕ್ರಾಂತಿ ಸೂರ್ಯನಾಗಿ

ನಮೋ ನಮೋ ಬಸವಣ್ಣ


4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನೀನು ಬರದಿದ್ದರೆʼ

Leave a Reply

Back To Top