ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಹೊಸ ಶಿಕ್ಷಣ ನೀತಿ

ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ ಮತ್ತು ಕೊಡು ಕೊಳ್ಳುವಿಕೆ ಇರಲಿಕ್ಕೇ ಬೇಕು. ಆದರೆ ಮೆಕಾಲೆ ಸೃಷ್ಟಿಸಿದ್ದು ಕ್ಲೆರಿಕಲ್ ಶಿಕ್ಷಣ ವ್ಯವಸ್ಥೆಯನ್ನು. ಎಲ್ಲಕ್ಕೂ ಲೆಕ್ಕ ವರದಿ ಮತ್ತು ಉಸ್ತುವಾರಿ ಕಲಿಸಿತೇ ವಿನಾ ಕಸುಬನ್ನಲ್ಲ. ಜೊತೆಗೆ ಆಸಕ್ತ ವಿಷಯದ ಅಧ್ಯಯ‌ನವನ್ನು ಕೂಡ ನಿಷೇದ ಮಾಡಿತು. ವಿಜ್ಞಾನ ಮತ್ತು ಕಲೆ ಎರಡರಲ್ಲೂ ಆಸಕ್ತಿ ಇರುವವರನ್ನು ದೂರ ಇಟ್ಟಿತು. ಆನರ್ಸ್ ಇಲ್ಲದ ಬರಿಯ ತಿಳುವಳಿಕೆಯನ್ನೇ ಜ್ಞಾನ ಎಂದು ಬಿಂಬಿಸಿದ ಕಾರಣಕ್ಕೇ ಇವತ್ತು ಪರಸ್ಪರ ಅವಲಂಬನೆಗಿಂತ ಪರಸ್ಪರ ದ್ವೇಷ ಅಸೂಯೆ ತುಂಬಿಕೊಂಡಿದೆ. ಪಠ್ಯಪುಸ್ತಕ ಆಯ್ಕೆ ಸಮಿತಿಯು ಆಯಾ ಆಳುವ ಸರ್ಕಾರದ ಹುಕುಂಗಳನ್ನು ಅಂತಃ ಪಠ್ಯವಾಗಿ ಆರಿಸುವುದು ಕೂಡ ನಿಜದ ಚರಿತೆಯನ್ನು ಮುಚ್ಚಿಟ್ಟು ತಿದ್ದಿದ ಇತಿಹಾಸವನ್ನು ಕಲಿಸುವ ಮೂಲಕ ಪರಂಪರೆಯನ್ನು ದೂರ ಇರಿಸಿ ಆವಾಹಿತ ತಿಳುವಳಿಕೆಯನ್ನು ಜ್ಞಾನವೆಂದು ಬಿಂಬಿಸಲಾಯಿತು. ಈ ಕುರಿತು ಸಾದ್ಯಂತವಾದ ಅಧ್ಯಯನ ಮತ್ತು ಕಠಿಣ ಕಾಯಿದೆ ಅತ್ಯಗತ್ಯ *******************

ಹೊಸ ಶಿಕ್ಷಣ ನೀತಿ Read Post »

ಇತರೆ

ಮನಸ್ಸು ಎಂಬ ಮನುಷ್ಯನ ತಲ್ಲಣ

ಲೇಖನ ಮನಸ್ಸು ಎಂಬ ಮನುಷ್ಯನ ತಲ್ಲಣ ವಿ ಎಸ್ ಶಾನ್ ಭಾಗ್ ಕೋರೋನ ಎಂಬ ಮಹಾಮಾರಿ ರೋಗ ಜಗತ್ತನ್ನು ಕಾಡುತ್ತಿದೆ. ಎಲ್ಲ ದೇಶಗಳ ಜನರ ನಾಲಿಗೆಯ ಮೇಲೆ ಒಂದೇ ಹೆಸರು ಕೊರೊನ ಅಂದರೆ ಕೋವಿಡ್-೧೯ ಎಲ್ಲರ ಭಾವನೆ ,ಒಂದೇ ಅದೆಂದರೆ ಅನಿಶ್ಚಿತತೆ ಮತ್ತು ಅಸಹಾಯಕತೆ,ತನ್ನ ಆತ್ಮೀಯರನ್ನು ಕಳೆದುಕೊಳ್ಳುವ ಭೀತಿ ಒಂದಾದರೆ ಆಯಾ ದೇಶದ ಜನರಿಗೆ ವಿಧಿಸಿದ ಕೆಲವು ನಿಬಂದನೆಗಳು ಮನೋಕ್ಲೇಶವನ್ನು ಉಂಟುಮಾಡಿದೆ..ಕೋವಿಡ್_೧೯ ಮನುಷ್ಯನ ಜೀವನ ಮತ್ತು ಮರಣದ ನಡುವೆ ನಿಂತಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ‍್ಯ ನಂತರ ಹುಟ್ಟಿದವರಿಗೆ ಇದು ಹೊಸತೊಂದು ಅನುಭವದ ಪ್ರಪಂಚ ತೆರೆದುಕೊಟ್ಟಿದೆ. ಕೊರೋನ ಎಂಬ ಮಹಾರೋಗಕ್ಕೆ ಔಷದ ಇಲ್ಲದ ಕಾರಣ ಭೀತಿ ಜನರನ್ನು ಕಾಡುತ್ತದೆ,  ಹಲವು ಉತ್ಪೀಡಿತ ಅನುಭವಗಳನ್ನೆಲ್ಲ ಪುಸ್ತಕರೂಪದಲ್ಲಿ ತರಲು ಲೇಖಕರು ಬರೆಯುತ್ತಿದ್ದಾರೆ.. ರೋಗದ ಬಗ್ಗೆ ಹಾಗೂ,ಅದನ್ನು ಎದುರಿಸುವ ಬಗ್ಗೆ,ತೆಗೆದುಕೋಳ್ಳಬೇಕಾದ  ಔಷದಗಳ ಬಗ್ಗೆ ಮಾಹಿತಿಕೊಡುವ ಲೇಖಕರಲ್ಲಿ ಹೆಚ್ಚಾಗಿ ಡಾಕ್ಟರರು .ಸಮಯದ ವಿರುದ್ದ ಹೋರಾಡುವವರು ಆದರೆ ಈಗ ರೋಗದ ನಂತರ  ಗುಣಮುಖರಾದವರಲ್ಲಿ ಹಲವರು ಬದುಕಿನಲ್ಲಿ  ಮಾನಸಿಕ ರೋಗಕ್ಕೆ ತುತ್ತಾದವರು.ಇವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ  . ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ದಿನಾ ಭೇಟಿಯಾಗುತ್ತಿದ್ದವರು. ಸಾವಿಗೆ ತುತ್ತಾದನ್ನು ನೋಡಿ ತನ್ನ ಜೀವನದ ಬಗ್ಗೆ ಕಳೆದುಕೊಳ್ಳುವ ಭರವಸೆ,, ,ಭವಿಷ್ಯದ ಬಗ್ಗೆ ಚಿಂತೆ,, ಬಾಸ್ನ ಅನುಚಿತ ವರ್ತನೆ, ಆಫೀಸಿನ ರಾಜಕೀಯ,ಗುಂಪುಗಾರಿಕೆ  ಇವೆಲ್ಲದರ ಮೂಲಕ ಅನುಭವಿಸುವ  ಮಾನಸಿಕ ಒತ್ತಡ, ಅನಿಶ್ಚಿತತೆ  ನಿರಾಸೆಗಳಿಂದ ಜಗ್ಗಿಹೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಗಮನಕ್ಕೆ ಬಂದಿವೆ. ಕರೋನ ಶಾರೀರಿಕವಾಗಿಯೂ,ಮಾನಸಿಕವಾಗಿಯೂ ಹಲವು ಯುವಕರನ್ನು ಮತ್ತು ಹಿರಿಯ ನಾಗರಿಕರನ್ನು ಬಲಿ ತೆಗೆದುಕೊಂಡಿದೆ.  ಇತ್ತೀಚೆಗೆ ಹಿರಿಯ ನಾಗರಿಕರೊಬ್ಬರು ಹಳೆಯ ಮನೆಯೊಂದರಿಂದ ಹೊಸಮನೆಗೆ ಬಂದರು.ಆದು ೧೫ನೆಯ ಮಾಳಿಗೆಯಲ್ಲಿತ್ತು ಅವರಿಗೆ ಚಾಳಿನಲ್ಲಿರುವ ಮಗಳ ಮನೆಗೆ ಕಳಿಸೆಂದು ತಂದೆ ಒತ್ತಾಯ ಮಾಡಿದಾಗ ಮಗ ಕೇಳಲಿಲ್ಲ೧೫ನೇ ಮಾಳಿಗೆ ಮನೆ ಅಪ್ಪನಿಗೆ ಬಂಧೀಖಾನೆಯಾಯಿತು.ಆದರೆ ಅಪ್ಪನ ಈ ಬಾವನೆಯನ್ನು ಅರಿಯದೇ ಅಪ್ಪನನ್ನು ಕಳೆದುಕೊಂಡ ಬಗ್ಗೆ ಅವನ ಕಥೆ ಪ್ರಮುಖ ಚಾನೆಲ್ಗಳಲ್ಲಿ ಬಿತ್ತರವಾಯಿತು .ಹೀಗೆ ಸಾಮಾಜಿಕವಾಗಿ  ಮನುಷ್ಯನ ಸಂವೇದನೆ, ಇತರರೊಂದಿಗೆ ಹೊಂದಿರುವ ಸಂಬಂಧ ಇವು ಇನ್ನೊಮ್ಮೆ ಸಾವಿನ ಬಗ್ಗೆ ಚಿಂತಿಸುವಂತೆ ಮಾಡಿವೆ ಮಾನಸಿಕ ರೋಗಕ್ಕೆ ತುತ್ತಾಗಿದ್ದ ಉದ್ಯೋಗದಲ್ಲಿರುವ ೨೬ ವರ‍್ಷದ ಯುವಕನೊಬ್ಬ ಕರೋನದ ಸಂಧರ‍್ಭದಲ್ಲಿ ತೀರಿಕೊಂಡ ತಂದೆಯ.. ಹೆಣದ  ಅಂತ್ಯಸಂಸ್ಕಾರ ದ  ಕೊನೆಯ ವಿಧಿವಿಧಾನವನ್ನು ರೋಡಿನಲ್ಲಿ ಮುಗಿಸಿ ದೇಹಕ್ಕೆ  ಅಗ್ನಿಕೊಟ್ಟ. ನಂತರ ಮನೆಯಿಂದ  ಹೊರಗೆ ಹೋಗಲಿಲ್ಲ ಕಾರಣ ಅಕ್ಕ ಪಕ್ಕದವರ ನಡತೆ…ಮನಸ್ಸನ್ನು ಘಾಸಿಗೊಳಿಸಿತ್ತು ಇವು ಹೊಸತೇನು ಅಲ್ಲ. .ಆದರೆ ಕರೋನ ಬರಿಯ ದೇಹಕ್ಕೆ ರೋಗವಾಗಿ ಬರದೆ ನಮ್ಮ ಯೋಚನೆ,,ಸಂಬಂಧ, ಆಚಾರ ವಿಚಾರಗಳನ್ನು ಪ್ರಶ್ನಿಸಿದಂತೆ ಮತ್ತು ನಮ್ಮ ನಡುವಳಿಕೆಗಳಲ್ಲಿ ಆದ ಸ್ತಿತ್ಯಂತರವು ಮಾನಸಿಕ ರೋಗಕ್ಕೆ ಬಲಿಯಾಗುವಂತೆ ಕಾಡಿದೆ..ಕರೋನ ಆರುತಿಂಗಳಿಂದ ಬಂದಿದ್ದು ಅದು ನಮ್ಮೊಂದಿಗೆ ಸ್ವಲ್ಪಕಾಲ ಉಳಿಯುವುದು ಖಂಡಿತ ಕರೋನ ಬರುವ  ಮೊದಲೇ ಶೇಖಡ ೧೦(೧೦%) ಮನೋರೋಗಿಗಳು ನಮ್ಮ ದೇಶದಲ್ಲಿದ್ದಾರೆ.ಜೀವಮಾನದಲಿ ಒಮ್ಮೆಯಾದರೂ ಮಾನಸಿಕ ರೋಗಕ್ಕೆ ತುತ್ತಾಗದೇ ಇರಲು ಸಾದ್ಯವಿಲ್ಲ.ಕರೋನ ಕೇವಲ ದುರ‍್ಬಲರನ್ನ ವಿಶೇಷವಾಗಿ ಕಾಡುತ್ತದೆ  ಮನಸ್ಸು ತಲ್ಲಣ ಗೊಳಿಸುವ ಕೆಲವು ಸಂಗತಿಗಳನ್ನ ನೋಡೋಣ: ಬ್ಯ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹಿರಿಯ ಕರ್ಮಚಾರಿಯನ್ನು ಯಾವುದೇ ಸೂಚನೆ ಕೊಡದೇ ಒಂದು ವಿಭಾಗದಿಂದ ಅಷ್ಟೆನೂ ಕ್ಷಮತೆ ಬೇಡದ ಹೊಸ ನೌಕರರಿಗೆ ಕೊಡುವ ಟಪಾಲು ವಿಭಾಗಕ್ಕೆ ವರ್ಗಾಯಿಸಿದಾಗ ಅವರು ಮಾನಸಿಕ ಖಿನ್ನತೆಗೆ ಒಳಗಾದರು. ಇದನ್ನೇ ಒಂದು ದೊಡ್ಡ ದು ಮಾಡಿ ಅವನಿಗೆ ಯಾವ ಕೆಲಸ ಕೊಡದೇ ಒಂದು ಬದಿಯಲ್ಲಿ ಕೂರಿಸಲಾಯಿತು. ಇನ್ನೊಂದು ಚಿತ್ರ ನೋಡಿ. ಸ್ಕೂಲಿಗೆ ನಿಯಮಿತವಾಗಿ ಹೋಗುವ ಹುಡುಗಿಯೊಬ್ಬಳು ಅಚಾನಕ್ ಸ್ಕೂಲಿಗೆ ಹೋಗುವುದನ್ನೇ ಬಿಟ್ಟಳು. ತಂದೆ ತಾಯಿಯರು ಅವಳನ್ನು ಡಾಕ್ಟರಿಗೆ ತೋರಿಸಿದಾಗ ಅವಳಿಗೆ ಮಾನಸಿಕ ಒತ್ತಡ ಉಂಟಾಗಿದೆ ಎಂದೂ, ಅವಳ ದಷ್ಟಪುಷ್ಟ ದೇಹ ಹುಡುಗರ ಹಾಸ್ಯಕ್ಕೆ ಒಳಪಟ್ಟಿದ್ದು ಅವಳನ್ನು ಶಾಲೆಯ ಅನುಮತಿ ಪಡೆದು ಮನೆಯಲ್ಲೇ ಟ್ಯೂಷನ್ ಪಡೆದು ಹತ್ತನೆ ತರಗತಿ ಉತ್ತೀರ್ಣಳಾದಳು.         ಈ ಎರಡು ಘಟನೆಗಳು ಒಂದಕ್ಕೊಂದು ಸಂಬಂಧ ವಿರದ ಉದಾಹರಣೆಗಳು ಎಂದೆನಿಸಬಹುದುʼಮುಂಬಯಿಯ ದೊಡ್ಡ ಪಟ್ಟಣದಲ್ಲಿ ಮಾತ್ರ ಸೀಮಿತವಲ್ಲ. ಇದು ಚಿಕ್ಕ ಚಿಕ್ಕ ಶಹರಗಳಲ್ಲಿಯೂ ಕಾಣುವಂತಹವು. ಮೇಲಿನ ಎರಡೂ ಉದಾಹರಣೆಗಳು ರೋಗಿಯನ್ನು ನೋಡಿಕೊಳ್ಳುವ ರೀತಿಯಲ್ಲಿ ಇರುವ ವ್ಯತ್ಯಾಸ ನಮ್ಮೆದುರು ಬಂದು ನಿಲ್ಲುತ್ತದೆ. ಪ್ರಖ್ಯಾತ ಬಾಲಿವುಡ್ ನಟಿ ಮಾನಸಿಕ ಕುಸಿತದ ಲಕ್ಷಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಕಂಡಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದರು. ಮಾನಸಿಕ ಖಿನ್ನತೆ ತಮ್ಮ ವ್ಯಕ್ತಿತ್ವದಲ್ಲಿ ಪರಿಣಾಮ ಬೀರುವುದಲ್ಲದೇ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮಾನಸಿಕ ರೋಗ ಈಗಲೂ ಸಾಮಾಜಿಕ ವಾಗಿ ಅಬಿ಼ಶಾಪ, ಮತ್ತು ವ್ಯಕ್ತಿತ್ವದ ಮೇಲಿನ ಕಲೆ ಎಂದು ೨೦ ೨೦ರಲ್ಲಿಯೂ ಚಾಲ್ತಿಯಲ್ಲಿಇರುವುದು ದುರಂತ .ಮಾನವ ಸಂಪನ್ಮೂಲ ವಿಭಾಗ ಇರುವುದು ಇದೇ ಕಾರಣಕ್ಕಾಗಿ ಅಲ್ಲವೇ? ಇತ್ತೀಚೆಗೆ ಮುಂಬಯಿಯಲ್ಲಿ ನೆಲೆಸಿರುವ ಪಂಜಾಬಿನ ಯುವಕನೊಬ್ಬ ಬೆಳಿಗ್ಗೆ ಎದ್ದಾಗ ಉಸಿರಾಡಲು) ಕಷ್ಟವಾಗುತ್ತಿದ್ದು ಕೆಲಸಕ್ಕೆ ಹೋಗದೇ ತನಗೆ ಏನೋ ಆಗಿದೆಯೆಂದು ಸಂಶಯ ಬಂದು ಡಾಕ್ಟರರ ಹತ್ತಿರ ಹೋಗಿ  ತೋರಿಸಿದ. ಇದನ್ನು ತನ್ನ ಬಾಸ್‌ಗೆ (ಮೇಲಧಿಕಾರಿಗೆ) ತಿಳಿಸಲಿಲ್ಲ. ತನ್ನ ಸಹೋದ್ಯೋಗಿಗಳಿಗೆ ಹೇಳಿ ವಿಷಯವನ್ನು ಮುಚ್ಚಿಡಲಾಯಿತು. ಡಾಕ್ಟರು ಹೇಳಿದಂತೆ ಅವನ ಸ್ನೇಹಿತರು ಅವನ ಮೇಲಧಿಕಾರಿಗೆ ತಿಳಿಸಿ ಅವನನ್ನು ಒಂದೆರಡು ತಿಂಗಳ ಮಟ್ಟಿಗೆ ರಜೆನೀಡಿ ಸಲಹಬೇಕೆಂದು ವಿನಂತಿಸಿಕೊಂಡರು. ಅವನು ಕೆಲಸದಲ್ಲಿ ನಿಪುಣತೆ ಪಡೆದು ಒಬ್ಬ ಒಳ್ಳೆಯ ಅಧಿಕಾರಿ ಎಂದು ಕರೆಸಿಕೊಂಡಿದ್ದರಿಂದ ಅವನ ಮೇಲಧಿಕಾರಿಯನ್ನು ಒಪ್ಪುವಂತೆ ಮಾಡಿ ಎರಡು ತಿಂಗಳು ರಜೆ ಸಿಕ್ಕು ಆರೋಗ್ಯ ಸುಧಾರಣೆ ಕಂಡಿತು. ಐಸಿಎಂಆರ್(ಇಂಡಿಯನ ಕೌನ್ಸಿಲ್ ಆಫ್ ಮೆಡಿಕಲ್ ರೀಸರ‍್ಚ) ಪ್ರಕಾರ ಆ ಪಂಜಾಬಿ ಯುವಕ ವ್ಯಾಕುಲತೆ, ಚಿತ್ತಕ್ಷೋಭೆ ಯ ಜೊತೆಗೆ ಮನಸ್ಸಿನ ಅಲ್ಲೋಲ ಕಲ್ಲೋಲತೆ ಚಿಂತೆ, ಯೋಚನೆಗೆ ಒಳಗಾಗಿದ್ದ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣದಿಂದಾಗಿ ಹೊಸ ಸಾಧ್ಯತೆಗಳು ತೆರೆದುಕೊಂಡಂತೆ ಹೊಸ ಸವಾಲುಗಳು ಮತ್ತು ಆ ಸವಾಲುಗಳನ್ನು ಎದುರಿಸುವ ಮಾನಸಿಕತೆ (ಮಾನಸಿಕ ಸ್ಥಿತಿ)ಅಗತ್ಯವಿದೆ. ಆದ್ದರಿಂದ ಯುವಕರು, ಮಧ್ಯ ವಯಸ್ಕರು ಮತ್ತು ವಿದ್ಯಾರ್ಥಿಗಳು ಮನೋಚಿಕಿತ್ಸಕರ ಹತ್ತಿರ ಮಾನಸಿಕ ಸ್ವಾಸ್ಥ್ಯಕ್ಕೆ ಚಿಕಿತ್ಸೆ ಪಡೆಯುವುದು ಸಂಖ್ಯೆಯ ದೃಷ್ಟಿಯಿಂದ ಬಹಳ ಹೆಚ್ಚುವರಿ ಕಂಡಿದೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿ ಶಿಕ್ಷಿತನಾಗಿ ಇದ್ದರೆ, ಭೂತ ಪ್ರೇತಗಳ ಮೊರೆಹೋಗುವ ತಂದೆ ತಾಯಿಗಳ ಯೋಚನೆಯನ್ನು ಬದಲಿಸುವುದರ ಸಾಧ್ಯತೆ ಜೊತೆಗೆ ಮನೋ ಚಿಕಿತ್ಸೆಗಾಗಿ ಸರಿಯಾದ ಡಾಕ್ಟರು ಸಿಗುತ್ತಾರೆ ಎನ್ನುವ ಮೂಲ ಮಾಹಿತಿ ಈಗ ಲಭ್ಯವಾಗ್ತಿದೆ. ಮುಂಬಯಿಯಂತಹ ಶಹರಗಳಲ್ಲಿಯೂ ಹಲವು ಸಂಘ ಸಂಸ್ಥೆಗಳು, ಆರ್ಥಿಕವಾಗಿ ಮನೋರೋಗಕ್ಕೆ ತುತ್ತಾದ ವ್ಯಕ್ತಿಯ ಶುಶ್ರೂಷೆಯ ಅಗತ್ಯವನ್ನು ಕಾಣುತ್ತಾರೆ. ಮನೋರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಈ ಆರ್ಥಿಕ, ಕೈಗಾರಿಕ ಸಂಸ್ಥೆಗಳು ನೋಡಿಕೊಳ್ಳುವ ರೀತಿಯ ಮೇಲೆ ಆ ರೋಗಿಯ ಮನೋಬಲ ಅಡಗಿದೆ.ಪಡೆದುಕೊಂಡ ಸಾಲ ತೀರಿಸಲಾಗದೆ ಹತಾಶನಾದ ವ್ಯಕ್ತಿಯ ಬಗ್ಗೆ ಈ ಸಂಸ್ಥೆಗಳು ಮಾನಸಿಕವಾಗಿ ಬೆಂಬಲಕ್ಕೆ ನಿಲ್ಲುತ್ತಾರೆ ಅತ್ಯಂತ ಒಳ್ಳೆಯ ನೌಕರ ಅಥವ ಅಧಿಕಾರಿ ತನ್ನ ೧೦-೧೨ ವರ್ಷದ ಸೇವೆಯಲ್ಲಿ ಮನೋರೋಗಕ್ಕೆ ಅಂದರೆ ಮಾನಸಿಕ ತಳಮಳ, ತಗ್ಗುವಿಕೆ, ಇತರರೊಂದಿಗೆ ಬೆರೆಯುವಿಕೆ ಮುಂತಾದ ಸಂದರ್ಭದಲ್ಲಿ ಕಾಣುವ ಬದಲಾವಣೆಯನ್ನು ಮಾನವೀಯತೆಯಿಂದ ನೋಡಿದರೆ ರೋಗ ಉಲ್ಬಣಿಸದೇ ಪೂರ್ಣ ಗುಣಮುಖವಾಗುವ ಸಾಧ್ಯತೆ ಇದೆ. ಈ ಲೇಖನದ ಮೊದಲು ಕೊಟ್ಟ ಉದಾಹರಣೆಯಲ್ಲಿ ಹಿರಿಯ ಕರ್ಮಚಾರಿಯನ್ನು ಟಪ್ಪಾಲು ವಿಭಾಗಕ್ಕೆ ಹಾಕಿದ ಆ ನಿರ್ಣಯವೇ ಅಘಾತಕಾರಿಯಾಗಿ ಪರಿಣಮಿಸಿ ಅವನು ಹೃದಯಾಘಾತಕ್ಕೆ ಒಳಗಾಗಿದ್ದು ನಂತರ ಚೇತರಿಸಲಿಲ್ಲ. ಹಲವು ನೌಕರರು, ಅಧಿಕಾರಿ ವರ್ಗದವರು ತಮ್ಮ ಮನಸ್ಸಿನ ಸ್ವಾಸ್ಥ್ಯದ ಬಗ್ಗೆ  ತಮ್ಮ ಮುಂದಿನ ಅಧಿಕಾರಿಗಳೊಂದಿಗೆ ಏನೂ ಹೇಳಿಕೊಳ್ಳುವುದಿಲ್ಲ. ಕಾರಣ ಈಗಲೂ ಉನ್ನತ ಶಿಕ್ಷಣ ಪಡೆದ ಕಂಪೆನಿಯ ನಿರ್ದೇಶಕರುಗಳಿಗೂ ಸಹ ಚಿತ್ತ ಕ್ಲೇಷ, ಚಿತ್ತ ಗ್ಲಾನಿಯನ್ನು ಸರಿಯಾದ ಚಿಕಿತ್ಸೆ ಮೂಲಕ ಸರಿಪಡಿಸಬಹುದು ಎಂದು ಗೊತ್ತಿದ್ದರೂ ಮಾನವೀಯತೆಯ ಕೊರತೆಯಿಂದ ಆ ಮನೋರೋಗಿಗೆ ಭವಿಷ್ಯವೇ ಇಲ್ಲದ ಹಾಗೆ ಕರಾಳ ಸತ್ಯಕ್ಕೆ ತೆರೆದುಕೊಳ್ಳುತ್ತದೆ. ಕೆಲಕಾಲವಷ್ಟೇ ಇರುವ ಈ ಮಾನಸಿಕ ತಳಮಳದ ಈ ಜೀವನವನ್ನು ಇಡೀ ಜೀವಮಾನದ ಕೊರತೆ ಎಂದು ಕಾಣುವುದು ವಿಪರ‍್ಯಾಸ., ಹೆಚ್ಚಾಗಿ ನೌಕರ ವರ್ಗಕ್ಕೆ ಒಂದು ದೊಡ್ಡ ಆತಂಕ.             ಮನೋವಿಜ್ಞಾನದಲ್ಲಿ ಚಿತ್ತಕ್ಷೋಭೆ/ಕ್ಲೇಷ ಮತ್ತು ವ್ಯಾಕುಲತೆ (anxiety) ವಿಜ್ಞಾನದ ಬೇರೆ ಬೇರೆ ಭಾಗಗಳಾಗಿ ಡಾಕ್ಟರರು ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಎರಡೂ ಸ್ಥಿತಿಗಳು ತೋರಿಕೆಗೆ ಒಂದೇ ಆದರೂ ಮನೋರೋಗದ ಲಕ್ಷಣಗಳು.ಬೇರೆಬೇರೆ ಚಿತ್ತ ಕ್ಲೇಶ, ಚಿತ್ತ ಅಸ್ವಾಸ್ಥ್ಯ ಎರಡೂ ಒಂದಾದರೊಂದಂತೆ ಮರುಕಳಿಸಬಹುದು. ಚಿತ್ತ ಕ್ಲೇಶದಲ್ಲಿ ಸದಾ ಯೋಚಿಸುವುದು, ತಳಮಳ, ಮನಸ್ಸಿನ ಚಂಚಲತೆ, ನೆನಪಿನ ಕೊರಗು, ನಿದ್ದೆಯ ಕೊರತೆ ಇವೆಲ್ಲ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಕಾಣಬಹುದು. ಇದು ಮಾನಸಿಕ ರೋಗ ಬಹು ಸಮಯ ತೆಗೆದುಕೊಳ್ಳುವ ಮನಸ್ಸಿನ ಸ್ಥಿತಿಯದು. ಆದರೆ ಚಿತ್ತ ಅಸ್ವಸ್ಥತೆ ಅಥವಾ ಗ್ಲಾನಿ  ಒಂದು ಸಂಧರ್ಭ ಅಥವಾ ಘಟನೆಗಳಿಂದ ಆಗುವಂತಹುದು.  ಎನ್ನುವ ಪದವನ್ನು ಬಹುಬಾರಿ ಬಳಸುತ್ತೇವೆ. ಯಾವುದಾದರೂ ಘಟನೆ ಎದುರಾದಾಗ ಉಂಟಾದ ಹೆದರಿಕೆ ಅಥವಾ ಇಂಟರ್ ವ್ಯೂನಲ್ಲಿ ಆಗುತ್ತಿರುವ ನಡುಕ ಇವೆಲ್ಲ ಚಿತ್ತ ಅಸ್ವಸ್ಥತೆ (anxiety) ಗೆ   ಸಂಬಂಧ ಪಟ್ಟವು             ಇತ್ತೀಚಿನ ವರದಿ ಪ್ರಕಾರ ಚಿತ್ತಕ್ಲೇಶ ಮತ್ತು ಚಿತ್ತ ಅಸ್ವಾಸ್ಟ್ಯ  ಸಂಯುಕ್ತ ಗ್ರೇಟ್ ಬ್ರಿಟನ್ನಿನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಚಿತ್ತಕ್ಲೇಶ  ಹಲವು ಜನರಿಗೆ ಹಲವು ರೀತಿಯಲ್ಲಿ ,ಹಲವಾರು ರೋಗ ಲಕ್ಷಣಗಳು ಕಂಡರೆ ಚಿತ್ತ ಅಸ್ವಸ್ಥತೆಯಲ್ಲಿ  ಯಾವುದಾದರೂ ಒಂದು ರೋಗದ ಲಕ್ಷಣ ಕಾಣಬಹುದು. ಚಿತ್ತ ಅಸ್ವಸ್ಥತೆ ಹೆಚ್ಚಾಗಿ ಹೆದರಿಕೆ, ಸಂದೇಹ, ಹೊಸ ಜನರೊಂದಿಗೆ ಬೆರೆಯುವ ಚಿಂತೆ, ಏಕತಾನತೆಯ ಲಕ್ಷಣಗಳು ಕಾಣಬಹುದು. ಇದು ಭಾರತೀಯರು ಅನುಭವಿಸುತ್ತಿರುವ ಸಾಮಾನ್ಯ ಲಕ್ಷಣಗಳು. ಇತ್ತೀಚಿನ ವರದಿ ಪ್ರಕಾರ ಯೋ ಯೋ ಹನಿಸಿಂಗ್ (ಗಾಯಕ) ಅನುಷ್ಕಾ ಶರ್ಮ (ನಟಿ), ಕ್ಯಾಥರಿನ್ ಚೇಟಾ, ರ‍್ಯಾನ್ ರೊನಾಲ್ಟಸ್, ಲೇಡಿ ಗಾಗಾ(ಹಾಲಿವುಡ್ ನಟರು) ಮುಂತಾದವರು ಚಿತ್ತಕ್ಲೇಶ ಅಥವಾ ಚಿತ್ತ ಅಸ್ವಸ್ಥತೆಯ ರೋಗಿಗಳು. ಮಧ್ಯಮ ವರ್ಗದ ಹೆಚ್ಚು ಹೆಚ್ಚು ಜನರು ಉದ್ಯೋಗದಲ್ಲಿದ್ದು, ಜೀವನವನ್ನು ಸುಖಿಯಾಗಿಡುವ ನಿಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಣ ಒಂದು ಆಕರ್ಷಣೆಯಾದರೆ, ತನ್ನ ಕರ್ತೃತ್ವ ಶಕ್ತಿಯ ಮೂಲಕ ಯಾರೂ ಗಳಿಸದ ಸ್ಥಾನವನ್ನು ಪಡೆಯುವ ಹಂಬಲವೂ ಕಾರಣವಾಗಿದೆ.. ಅಂದರೆ ಒಂದು ರೀತಿಯ ಸ್ಪರ್ಧಾತ್ಮಕತೆ, ಮಾನಸಿಕ ಆರೋಗ್ಯವನ್ನು ಕೆಡಿಸುವ ಬಹುಮುಖ್ಯ ಕಾರಣವಾಗಿದೆ. ಐಸಿಎಂಆರ್  ಪ್ರಕಾರ ಪ್ರತಿ ಏಳು ಭಾರತೀಯರಲ್ಲಿ ಒಬ್ಬರು ಮನೋರೋಗದ ಶಿಕಾರಿಯಾಗುತ್ತಿದ್ದಾನೆ. ಮಹಾರಾಷ್ಟ ರಾಜ್ಯದಲ್ಲಿ ಪ್ರತಿ ಲಕ್ಷ ಜನರಲ್ಲಿ ಸುಮಾರು ಹತ್ತು ಸಾವಿರ ಜನ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ಅದರಲ್ಲಿ ಮಾನಸಿಕ ಅಸ್ವಸ್ಥತೆ ೪೦೦೦, ಚಿತ್ತ ಕ್ಲೇಷದಿಂದ ೪೦೦೦, ಕೆಲಸ ಅರ್ಥ ಮಾಡಿಕೊಳ್ಳಲಾಗದ ವiನಸ್ಸಿನ ಕುಗ್ಗುವಿಕೆ ೩,೫೦೦ ಮತ್ತು ವರ್ತನೆಯಲ್ಲಿ ಉಂಟಾಗುವ ಲಕ್ಷಣಗಳು ೮೦೦. ಹೀಗೆ ಜನರು ಮಾನಸಿಕ ಸ್ವಾಸ್ಥ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಆದ್ದರಿಂದ ಚಿತ್ತಕ್ಲೇಷದಂತಹ ಮನೋರೋಗಗಳು ಹೆಚ್ಚುತ್ತಿದ್ದು ಅದರ ಅರಿವು ಹಲವು ಜನರಿಗೆ ಅರಿವಿಲ್ಲದೇ, ಭೂತದ ಆರಾಧನೆ, ಕುರಿಬಲಿ, ಪೂಜೆ ಪುನಸ್ಕಾರಗಳ ಹಾದಿಯಲ್ಲಿ ಈಗಲೂ ನಡೆಯುತ್ತಿದೆ.. ಆದ್ದರಿಂದ ಮನೋರೋಗದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಮ್ಮ ಈ ಅನಾರೋಗ್ಯದ ವಿವರಗಳನ್ನು ಆಡಳಿತ ಮಂಡಳಿಯವರಿಗೆ ಕೊಡುವುದಿಲ್ಲ.  ಒಬ್ಬ ಎಂಜಿನಿಯರ್‌ಗೆ ತನ್ನ ವೈವಾಹಿಕ ಜೀವನದಲ್ಲಿ ಆದ ಕ್ಲೇಷಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲಸದಲ್ಲಿ ಮತ್ತು ಜನರೊಂದಿಗೆ ಮಾತನಾಡುವಾಗ ತಕ್ಷಣ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಿದ್ದ. ಒಬ್ಬ ಕಂಪನಿಯ ನಿರ್ದೇಶಕರು ಅವನನ್ನು ಕರೆದು

ಮನಸ್ಸು ಎಂಬ ಮನುಷ್ಯನ ತಲ್ಲಣ Read Post »

ಇತರೆ

ಹೊಸ ಶಿಕ್ಷಣ ನೀತಿ

ಅನುಷ್ಠಾನವಾದೀತೇ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦? ಗಣೇಶ್ ಭಟ್ ಶಿರಸಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ನೀತಿಯ ಪರ ಮತ್ತು ವಿರೋಧಿ ಹೇಳಿಕೆಗಳು, ಲೇಖನಗಳು ಪ್ರಕಟವಾಗುತ್ತಿವೆ. ಹೊಸ ಶಿಕ್ಷಣ ನೀತಿಯು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದರ ಜೊತೆಗೆ ಇಡೀ ರಾಷ್ಟ್ರವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.ಈ ಶಿಕ್ಷಣ ನೀತಿಯನ್ನು ಹೊಸ ಅವಿಷ್ಕಾರ, ಹೊಸ ಮನ್ವಂತರದ ಹರಿಕಾರ ನೀತಿ ಮುಂತಾಗಿ ಬಿಂಬಿಸಲಾಗುತ್ತಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, ಉತ್ತರದಾಯಿತ್ವಗಳ ಬುನಾದಿಯ ಮೇಲೆ ಆಧರಿತ ಈ ಶಿಕ್ಷಣ ನೀತಿಯಿಂದ ಜಾಗತಿಕ ಜ್ಞಾನ ಕೇಂದ್ರ ಮತ್ತು ಶಕ್ತಿಯಾಗಿ ಭಾರತವು ಹೊರಹೊಮ್ಮಲಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಈ ಶಿಕ್ಷಣ ನೀತಿಯ ಗುರಿ ಮತ್ತು ಉದ್ದೇಶಗಳು ಉದಾತ್ತವಾಗಿವೆ ಎಂಬುದು ನಿಜ. ಆದರೆ ವಾಸ್ತವವನ್ನು ನಿರ್ಲಕ್ಷಿಸಿ ನಿಗದಿಪಡಿಸುವ ಉದ್ದೇಶಗಳು ಸಫಲವಾಗುವುದು ದೂರದ ಮಾತಷ್ಟೇ ಅಲ್ಲ, ಅವುಗಳ ನಿರೂಪಣೆಯ ಪ್ರಾಮಾಣಿಕತೆಯೇ ಪ್ರಶ್ನಾರ್ಹವಾಗುತ್ತದೆ. ೨೦೨೦ ರ ಶಿಕ್ಷಣ ನೀತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದಾಗ, ಅದರ ಅನುಷ್ಠಾನಕ್ಕೆ ಇರುವ ತೊಡುಕುಗಳ ಅರಿವಾಗುತ್ತದೆ. ಉದಾಹರಣೆಗಾಗಿ,ಇದು ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನದ ಪ್ರಯತ್ನವೆಂದು ಹೇಳಿಕೊಳ್ಳಲಾಗಿದೆ. ಶಿಕ್ಷಣ ಕುರಿತಾದ ಭಾರತೀಯ ವ್ಯಾಖ್ಯೆ ” ಸಾ ವಿದ್ಯಾ ಯಾ ವಿಮುಕ್ತಯೇ” – ವಿದ್ಯೆ ಅಂದರೆ ಭೌತಿಕ, ಮಾನಸಿಕ, ಆದ್ಯಾತ್ಮಿಕ ಬಂಧನಗಳಿಂದ ಬಿಡುಗಡೆ. ಇದು ನಿಸರ್ಗದ ನಿಯಮವಾದ ವಿಕಾಸಕ್ಕೆ ಪೂರಕವಾದ ವಿಚಾರ. ತಜ್ಞರ ಅಭಿಪ್ರಾಯದಂತೆ ಮೊದಲಿನ ಏಳು ವರ್ಷಗಳ ಅವಧಿಯಲ್ಲಿ ಮಗುವಿನ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಉದಾತ್ತ ಚಿಂತನೆಗಳು, ಏಕತೆಯ ಭಾವ, ಮನಸ್ಸಿನ ವಿಸ್ತಾರ, ಸಮಗ್ರತೆಯ ಕಲ್ಪನೆ, ಜೀವಜಾಲದೊಂದಿಗಿನ ಅವಿಭಾವ ಸಂಬಂಧ, ಪರಸ್ಪರ ಪ್ರೀತಿ ಮುಂತಾದವು ಮಗುವಿನ ಮನಸ್ಸಿನಲ್ಲಿ ರೂಪುಗೊಳ್ಳುವ ಅವಧಿ ೦-೭ ವರ್ಷಗಳು. ಆಟ, ಪಾಠಗಳು, ಅಷ್ಠಾಂಗ ಯೋಗ, ಧ್ಯಾನ ಪದ್ಧತಿಗಳ ಮೂಲಕ ನೈತಿಕತೆಯ ನೆಲೆಗಟ್ಟಿನ ಮೇಲೆ ಸಮಗ್ರ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಗುರಿಯಾಗಬೇಕು. ಅಂಗನವಾಡಿ (ನರ್ಸರಿ) ಯಿಂದ ೨ ನೇ ವರ್ಗದವರೆಗಿನ ಶಿಕ್ಷಣ ಪದ್ಧತಿ ವಿಶಿಷ್ಟವಾಗಿರಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಈ ವಯಸ್ಸಿನ ಮಕ್ಕಳ ಕಲಿಕೆಯನ್ನು ಮೊದಲನೇ ಹಂತದ ೫ ವರ್ಷಗಳೆಂದು ಗುರ್ತಿಸಲಾಗಿದೆ. ಜಾತಿ ಮತ ಪಂಥಗಳ ಭೇಧಭಾವಗಳನ್ನು, ಮೂಡನಂಬಿಕೆಗಳನ್ನು ಬಳಸಿ, ಬೆಳಸಿ ಅಧಿಕಾರಕ್ಕೆ ಅಂಟಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಇಂತಹ ಶಿಕ್ಷಣ ನೀಡಿಕೆಯ ಅನುಷ್ಠಾನ ತರಲು ಇಚ್ಚಿಸುವುದಿಲ್ಲ. ಸರ್ವರಲ್ಲಿ ಸಮಭಾವ ಹೊಂದದೇ, ಆದ್ಯಾತ್ಮ ಮನೋಭಾವ ಮೂಡಿಸಲು ಪ್ರಯತ್ನಿಸದೇ, ಇತಿಹಾಸದ ಘಟನೆಗಳನ್ನೇ ಬಳಸಿ ಸಮಾಜದಲ್ಲಿ ದ್ವೇಷ ಅಸೂಯೆಗಳನ್ನು ಬಿತ್ತುತ್ತಿರುವ ರಾಜಕೀಯ ಪಕ್ಷವು ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಪುನರುತ್ಠಾನ ಮಾಡುತ್ತೇವೆಂದು ಹೇಳಿಕೊಳ್ಳುವುದು ಆಷಾಡಭೂತಿ ನಡತೆ.ಮಗುವಿನ ತಲೆಯಲ್ಲಿ ಮಾಹಿತಿ ತುರುಕಲು ಹೊಸ ಹೊಸ ವಿಧಾನಗಳ ಬಳಕೆಯನ್ನು ಪ್ರೋತ್ಸಾಹಿಸುವುದೇ ಶಿಕ್ಷಣವಲ್ಲ.  ಶಿಕ್ಷಣವನ್ನು ವಿವಿಧ ಹಂತದಲ್ಲಿ ಮೊಟಕುಗೊಳಿಸಿರುವ ೨ ಕೋಟಿಗೂ ಅಧಿಕ ಮಕ್ಕಳನ್ನು ಹೊಸ ಔಪಚಾರಿಕ ಶಿಕ್ಷಣ  ವ್ಯವಸ್ಥೆಗೆ  ಮರಳಿ ತರಲು ಹೊಸ ಶಿಕ್ಷಣ ನೀತಿಯಿಂದ ಸಾಧ್ಯವೆಂದು ಪ್ರತಿಪಾದಿಸಲಾಗಿದೆ. ಈ ಮಕ್ಕಳು ಶಿಕ್ಷಣ ಮುಂದುವರೆಸದಿರಲು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ದೋಷಗಳೇ ಕಾರಣವಲ್ಲ. ತಮ್ಮ ಅಥವಾ ತಮ್ಮ ಕುಟುಂಬದ ನಿರ್ವಹಣೆಗಾಗಿ ದುಡಿಯುವ ಅನಿವಾರ್ಯಯತೆಯಿಂದ ಹೆಚ್ಚಿನವರು ಶಿಕ್ಷಣ ಮುಂದುವರೆಸುವುದಿಲ್ಲ. ಶಿಕ್ಷಣ ಪದ್ಧತಿಯನ್ನೋ, ಪಠ್ಯ ಪುಸ್ತಕಗಳನ್ನೋ ಬದಲಾಯಿದೊಡನೆ ಶಿಕ್ಷಣ ಮುಂದುವರೆಸಲು ಮಕ್ಕಳು ವಾಪಾಸು ಬರುತ್ತಾರೆಂದು ವಾದಿಸುವುದು ಜನರನ್ನು ದಾರಿತಪ್ಪಿಸುವ  ಅವಾಸ್ತವಿಕ ನೆಲೆಗಟ್ಟಿನ ನಡೆ.   ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯ ಭದ್ರತೆಯಾದಾಗ ಮಾತ್ರ ಎಲ್ಲಾ ಮಕ್ಕಳೂ ಶಾಲೆಗೆ ಬರುತ್ತಾರೆ.ಆಹಾರ, ಬಟ್ಟೆ, ವಸತಿ, ಔಷಧೋಪಚಾರಗಳಂತೆಯೇ ಶಿಕ್ಷಣ ಕೂಡ ಜೀವನದ ಕನಿಷ್ಠ ಅಗತ್ಯತೆಯೆಂಬುದನ್ನು ಒಪ್ಪಿಕೊಂಡು, ಅವುಗಳನ್ನು  ಫಲಪ್ರದ ಉದ್ಯೋಗ ಸೃಷ್ಟಿಯ ಮೂಲಕ ಖರೀಧಿಶಕ್ತಿಯನ್ನು ನೀಡುವ ಭರವಸೆಯ ಈಡೇರಿಕೆಯಾದಾಗ ಮಾತ್ರ ಎಲ್ಲರಿಗೂ ಶಿಕ್ಷಣವೆಂಬ ಕನಸು ನನಸಾಗುತ್ತದೆ. ಸಿಕ್ಕಿದವರಿಗೆ ಸೀರುಂಡೆ ಯೆಂಬ ಆರ್ಥಿಕ ನೀತಿ, ಕೆಲವರ ಕೈಯಲ್ಲೇ ಸಂಪತ್ತು ಕ್ರೋಢಿಕರಣವಾಗುವ ಕೇಂದ್ರೀಕ್ರತ ಅರ್ಥವ್ಯವಸ್ಥೆಯಲ್ಲಿ ಈ ಪರಿವರ್ತನೆ  ಸಾಧ್ಯವಾಗದ ವಿಚಾರ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನದಿಂದ ಮಾತ್ರ ಇದು ಸಾಧ್ಯ. ಬಂಡವಾಳವಾದೀ ವ್ಯವಸ್ಥೆಯನ್ನು ಪ್ರತಿಪಾದಿಸುವ ಪ್ರಸ್ತುತ ಸರ್ಕಾರದ ಈ ಘೋಷಣೆ ಜನರನ್ನು ಮರುಳುಗೊಳಿಸುವ ತಂತ್ರವಷ್ಟೇ!  ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ೫ ನೇ ತರಗತಿವರೆಗೆ, ಸಾಧ್ಯವಾದರೆ ೮ ನೇ ತರಗತಿಯ ವರೆಗೂ ಶಿಕ್ಷಣ ನೀಡುವುದು ಉತ್ತಮ ವಿಚಾರ. ಹೊಸ ಶಿಕ್ಷಣ ನೀತಿಯಲ್ಲಿ ಇದನ್ನು ಕಡ್ಡಾಯವಾಗಿಸದೇ,  ಸಾಧ್ಯವಾದಲ್ಲಿ ಎಂಬ ಪದ ಸೇರಿಸಿರುವುದು ಪ್ರಾದೇಶಿಕ ಭಾಷಾ ಮಾಧ್ಯಮದ ಕುರಿತಾದ ಬದ್ಧತೆಯ ಕೊರತೆ.ಹಲವು ಸರ್ಕಾರಿ ಶಾಲೆಗಳಲ್ಲೇ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿರುವ ಈ ಸಮಯದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಪಾಲಕರನ್ನು ಹೊರತರುವ ಪರಿಣಾಮಕಾರಿ ಪ್ರಾಮಾಣಿಕ ಕಾರ್ಯಯೋಜನೆ ಇಲ್ಲದಿರುವ ಈ ಹೊಸ ನೀತಿ, ಜನರ ಕಣ್ಣೊರೆಸುವ, ಭಾಷಾ ಚಳುವಳಿಗಳನ್ನು ದಾರಿತಪ್ಪಿಸುವ ಕುತಂತ್ರವಷ್ಟೆ. ತ್ರಿಭಾಷಾ ಕಲಿಕೆಗೆ ಅವಕಾಶ ಒಳ್ಳೆಯದು. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಜೊತೆಗೆ ಇನ್ನೆರೆಡು ಭಾಷೆಗಳ ಕಲಿಕೆಯನ್ನು ಕಡ್ಡಾಯವಾಗಿಸಿ ಅವುಗಳಲ್ಲಿ ಎರಡು ಭಾಷೆಗಳು ಭಾರತೀಯ ಮೂಲದವಾಗಿರಬೇಕೆಂದಿರುವುದು ಹಿಂದಿ ಮತ್ತು ಸಂಸ್ಕೃತದ ಹೇರಿಕೆಯ ಪ್ರಯತ್ನವೆಂಬ ಭಾವನೆ ಮೂಡಲು ಕಾರಣವಾಗಿದೆ.ಕರಡು ಶಿಕ್ಷಣ ನೀತಿಯಲ್ಲಿ ಕಡ್ದಾಯಗೊಳಿಸಿದ್ದ ಇಂಗ್ಲೀಷ್ ಮತ್ತು ಹಿಂದಿಯ ಕಲಿಕೆಯನ್ನು ರಾಜಕೀಯ ಒತ್ತಡಗಳಿಂದಾಗಿ ಕೈ ಬಿಟ್ಟಿದ್ದರೂ ಸಂಶಯ ದೂರವಾಗಿಲ್ಲ.  ಆಂಗ್ಲ ಭಾಷೆಯನ್ನು ಬ್ರಿಟಿಷರ ಭಾಷೆಯೆಂದು ವ್ಯಾಖ್ಯಾನಿಸುವ ಕಾಲ ಮುಗಿದಿದೆ. ಜಾಗತಿಕ ಸಂಪರ್ಕಭಾಷೆಯಾಗಿ ಇಂಗ್ಲೀಷ್ ಕಲಿಕೆ ಅನಿವಾರ್ಯವಾಗುತ್ತಿದೆ. ಇಂಗ್ಲೀಷ್ ಅನ್ನು ಭಾಷೆಯಾಗಿ ಕಲಿಯುವದಕ್ಕೂ ಕಲಿಕಾ ಮಾಧ್ಯಮವಾಗಿ ಬಳಸುವದಕ್ಕೂ ತುಂಬಾ ವ್ಯತ್ಯಾಸವಿದೆ.ಈ ಹೊಣೆಗಾರಿಕೆಯನ್ನುಹಿಂದಿ ಪ್ರಿಯ ಕೇಂದ್ರ ಸರ್ಕಾರ ನಿಭಾಯಿಸಬಲ್ಲದೆಂಬುದಕ್ಕೆ ಆಧಾರವಿಲ್ಲ. ವೃತ್ತಿ ಆಧರಿತ ಶಿಕ್ಷಣ ನೀಡಿಕೆ,  ಹೆಚ್ಚು ಭಾಷೆಗಳನ್ನು ಕಲಿಯುವ ಅವಕಾಶ ಸೃಷ್ಟಿಸುವುದು ಉತ್ತಮ ಆಶಯಗಳು. ಆದರೆ ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಯಾರು ಭರಿಸಬೇಕು..?? ಸರ್ಕಾರಿ ಶಾಲೆಗಳಲ್ಲಿ ನೇಮಕಾತಿಗಳಿಲ್ಲ, ಖಾಸಗಿ ಶಾಲೆಗಳು ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸುವುದು ಸಹಜ. ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನ ವಿಧಾನ ವ್ಯವಹಾರಿಕವಾಗಿರದಿದ್ದಾಗ ಅದು ವಿಫಲಗೊಳ್ಳುತ್ತದೆ.  ತೊಂಭತ್ತರ ದಶಕದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ , ಜಾಗತೀಕರಣಗಳನ್ನುಐನ್ನಷ್ಟು ವೇಗವಾಗಿ ಅನುಷ್ಠಾನಗೊಳಿಸುತ್ತಿರುವ ಬಿಜೆಪಿಯಿಂದಾಗಿ ಉಳ್ಳವರು ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿದ್ದು, ಶೇಕಡಾ ೧೦ ರಷ್ಟು ಜನರು ದೇಶದ ಸಂಪತ್ತಿನ ೭೦% ಗೂ ಹೆಚ್ಚಿನ ಸಂಪತ್ತಿನ ನಿಯಂತ್ರಣ ಹೊಂದಿದ್ದಾರೆ.ಕೆಲವರ ಕೈಯಲ್ಲೇ ಸಂಪತ್ತು ಕೇಂದ್ರೀಕೃತವಾಗುತ್ತಿರುವ ಇಂತಹ ಸಂಧರ್ಭದಲ್ಲಿ, ೨೦೦ ಕ್ಕೂ ಹೆಚ್ಚು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಅವ್ಹಾನಿಸುವ ಕ್ರಮವು, ಉಳ್ಳವರಿಗೇ ಶಿಕ್ಷಣ ಪದೆಯುವ ಅವಕಾಶ ದೊರಕಿಸಿಕೊಡುವದರಿಂದ, ಸಾಮಾಜಿಕ – ಆರ್ಥಿಕ ತಾರತಮ್ಯ ಇನ್ನಷ್ಟು ಹೆಚ್ಚಲು ಅವಕಾಶವಾಗಲಿದೆ.ಆರ್ ಟಿ ಇ ಎಂಬ ವಿಫಲ ಯೋಜನೆ, ಮಧ್ಯಾನದ ಊಟ, ಬೆಳಗಿನ ತಿಂಡಿಗಳ ನೀಡಿಕೆಯಿಂದಲೇ ಎಲ್ಲರಿಗೂ ಶಿಕ್ಷಣದ ಸಮಾನ ಅವಕಾಶವೆಂಬುದು ಪೊಳ್ಳು ಘೋಷಣೆ. ೧೦+೨ ಪದ್ಧತಿಯನ್ನು ೫+೩+೩+೪ ನ್ನಾಗಿ ಬದಲಿಸುವುದೇ ಮಹತ್ತರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ೧+೨+೫+೩+೪ ರ ಪದ್ಧತಿ ಜಾರಿಯಲ್ಲಿರುವಾಗ ಬದಲಾವಣೆಯ ಕುರಿತಾಗಿ ಡಂಗುರ ಸಾರುವುದು ಢೋಂಗಿತನ.  ಪದವಿಗಳಿಂದ, ತರಬೇತಿಗಳನ್ನು ನೀಡುವುದರಿಂದಲೇ ಉತ್ತಮ ಶಿಕ್ಷಕರು ನಿರ್ಮಾಣವಾಗಲಾರರು. ನೈತಿಕತೆ ಆಧ್ಯಾತ್ಮಿಕತೆ, ವಿಶಾಲ ಮನೋಭಾವಗಳು ಶಿಕ್ಷಕರಿಗೆ ಅತಿ ಅಗತ್ಯ. ಉತ್ತಮ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಇದು ಅನಿವಾರ್ಯ. ಸಂಕುಚಿತ, ಸ್ವಾರ್ಥ ಮನೋಭಾವ ಬೆಳೆಸುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ನೇತಾರರ ನಡೆ ಮಾದರಿಯಾಗಿರಬೇಕು.ಜಾತಿ,ಮತ, ಪಂಥಗಳ ಹೆಸರಿನಲ್ಲಿ ಜನರನ್ನು ಒಡೆದು,ಮೂಢನಂಬಿಕೆ ಬಿತ್ತುತ್ತಾ, ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವವರಿಂದ ಇದು ಸಾಧ್ಯವಾಗದು.  ಉತ್ತಮ ಆಶಯ ಹೊಂದಿದ ಸಿದ್ಧಾಂತಗಳ ಯಶಸ್ಸು ಅಥವಾ ವೈಫಲ್ಯಕ್ಕೆ,ಅನುಷ್ಠಾನಗೊಳಿಸುವವರ ಮನೋಭೂಮಿಕೆಯೇ ಮುಖ್ಯ ಕಾರಣ. ಉತ್ತಮ ವಿಚಾರಗಳು, ಸದಾಶಯಗಳನ್ನು ಮುಂದಿಟ್ಟುಕೊಂಡು ಸಿದ್ಧಾಂತವನ್ನು ರೂಪಿಸಲಾಗುತ್ತದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸುವ ಕಾರ್ಯವಿಧಾನಗಳ ಬಗ್ಗೆ, ವ್ಯವಹಾರಿಕ ಸಾಧ್ಯತೆಗಳ ಕುರಿತು, ಆಷಾಡಭೂತಿ ಪ್ರತಿಪಾದಕರು ಪ್ರಾಮಾಣಿಕವಾಗಿ ಯೋಜಿಸುವುದಿಲ್ಲ; ಯೋಚಿಸುವುದೂ ಇಲ್ಲ. ತಾವು ಘನಂಧಾರಿ ಕೆಲಸ ಮಾಡುತ್ತಿದ್ದೇವೆಂದು ತೋರಿಸಿಕೊಳ್ಳುವುದೇ ಅವರ ಉದ್ದೇಶ. ಶಿಕ್ಷಣ ನೀತಿ ೨೦೨೦ ಈ ವರ್ಗಕ್ಕೇ ಸೇರಿದೆಯೆಂಬುದು ವಿಷಾದನೀಯ. *************************

ಹೊಸ ಶಿಕ್ಷಣ ನೀತಿ Read Post »

ಇತರೆ

ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ ಡಾ.ಎಂ.ಗೋಪಾಲಕೃಷ್ಣ ಅಡಿಗ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನುಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರಇಷ್ಟೇ ಸಾಕೆಂದಿದ್ದೆಯಲ್ಲೋ ? ಇಂದು ಏನಿದು ಬೇಸರ?ಸಪ್ತ ಸಾಗರದಾಚೆಯೆಲ್ಲೊಸುಪ್ತ ಸಾಗರ ಕಾದಿದೆಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?ಯಾವ ಸುಮಧುರ ಯಾತನೆ?ಯಾವ ದಿವ್ಯ ಯಾಚನೆ?ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನುಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು. ನವೋದಯ ಕಾಲದ ಕಾವ್ಯಗಳ ಸಾಲಿನಲ್ಲಿ ಪ್ರಾತಿನಿಧಿಕ ಕವನಗಳನ್ನು ಒಳಗೊಂಡ “ಕಟ್ಟುವೆವು ನಾವು” ಕವನ ಸಂಗ್ರಹದಲ್ಲಿ ” ಯಾವ ಮೋಹನ ಮುರಳಿ ಕರೆಯಿತು” ಕವಿತೆಯೂ ಒಂದು.೧೬ ಸಾಲುಗಳ ಈ ಕವನ ಪ್ರಸಿದ್ಧ ಭಾವಗೀತೆಯೂ , ಚಿತ್ರಗೀತೆಯೂ ಹೌದು.    ಜೋಡಿ ಸಾಲುಗಳಲ್ಲಿ ಅಂತ್ಯಪ್ರಾಸ ತ್ರಾಸವಿಲ್ಲದೇ ಸರಳವಾಗಿ , ಲಯ, ಗೇಯತೆ, ಮಾಧುರ್ಯತೆಯಿಂದ ಕೂಡಿದ ಹೃದ್ಯವೆನಿಸುವ ಸುಂದರ ಪದ್ಯ. ಕೆಲವು ಸಾಲುಗಳಂತೂ ಹಾಗೆಯೇ ನಾಲಿಗೆಯ ಮೇಲೆ ನರ್ತಿಸುವಂತೆ ಭಾಸವಾಗುತ್ತವೆ.    ಭಕ್ತಿ ಭಾವದೊಂದಿಗೆ ಕೃಷ್ಣ ಹಾಗೂ ಬೃಂದಾವನ ಗಳ ಉದಾಹರಣೆಯೊಂದಿಗೆ ನಮ್ಮ ಜೀವನ ಹಾಗೂ ನಶ್ವರವಾದ ಲೌಕಿಕ ಸುಖದಿಂದ ದೂರ ಸರಿಯುವ ಸಂದೇಶವನ್ನು ಈ ಸಾಲುಗಳು ನೀಡುತ್ತವೆ. ಅದೂ ಯಾರೋ ಕಿವಿಯಲ್ಲಿ ಮಧುರ ಕಂಠದಿಂದ ಜೇನ್ಮಳೆಯನ್ನು ಸುರಿಸಿದಂತೆ ಪದಗಳು ಲೀಲಾಜಾಲವಾಗಿ ಮನಸ್ಸಿಗೆ ನಾಟುವಂತೆ ಮೂಡಿಬಂದಿದೆ.ಪದಗಳ ಬಳಕೆಯಲ್ಲಿ ಪರ್ಯಾಯ ಪದಗಳಿಗೆ ಅವಕಾಶವೇ ಇಲ್ಲವೆಂಬಂತೆ ಪ್ರಯೋಗವಾಗಿದೆ. ಯಾವ ಮೋಹನನ ಕರೆಗೆ ಮನಸ್ಸು ಕರಗಿದೆಯೋ ಅಲ್ಲಿಗೇ ಸೆಳೆತ ಹೆಚ್ಚಾಗಿ ದೂರಕ್ಕೆ ಸಾಗುವಂತೆ ಮಾಡುವ ಅದಮ್ಯ ಶಕ್ತಿಯಿಂದಾಗಿ ಇಲ್ಲಿವರೆಗೂ ದೊರೆತದ್ದೆಲ್ಲವೂ ಬೇಡವೆನಿಸಿದೆ. “ಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?”     ಮಾನವ ಶರೀರದ ರಚನೆಯಲ್ಲಿ ರಕ್ತ- ಮಾಂಸ, ಚರ್ಮದ ಹೊದಿಕೆಯಿಂದ ಕೂಡಿದ್ದು ಕ್ಷಣಿಕ ಆಸೆಗಳೆಡೆಗೆ ಬಹುಬೇಗ ಮರುಳಾಗಿಬಿಡುತ್ತದೆ. ಪ್ರೀತಿ, ಪ್ರೇಮಗಳೆಂಬ ಮೋಹವು ಕಾಮದ ಜಾಡು ಹಿಡಿದು ಇದಿಷ್ಟೇ ಸಾಕೆಂಬ ನಿರ್ಧಾರ ಮಾಡಿದಂತಿತ್ತು.ಹಾಗೆಯೇ ತನ್ನನ್ನು ಲೌಕಿಕ ಜಗತ್ತಿನ ಗೊಡವೆಗಳ ,ಆಕರ್ಷಣೆಯ ಗುಲಾಮನಾಗಿಸಿತ್ತು. ಆದರೇಕೋ ಬಯಸಿದ, ಅನುಭವಿಸಿದ ಎಲ್ಲಾ ಸುಖ ಲೋಲುಪತೆಗಳು ಬೇಡವೆನಿಸಿ ಏಕತಾನತೆಗೆ ಮನಸ್ಸು ಹಪಹಪಿಸುತ್ತಿದೆ ಎಂಬುದು ಇದರ ಮೂಲಕ ಕಂಡುಬರುತ್ತದೆ.   ಬೇಸರಿಕೆಯೊಂದು ಮನದ ಮೂಲೆಯಲ್ಲಿ ಮೊಳೆತು ಜೀವನವೆಂದರೆ ಕೇವಲ ಪ್ರಾಪಂಚಿಕ ಸುಖದಲ್ಲಿ ಮುಳುಗಿ ಸದಾಕಾಲವೂ ಖಿನ್ನತೆ, ಮಾನಸಿಕ ವೇದನೆ ಅನುಭವಿಸುತ್ತಾ ತೊಳಲಾಡುತ್ತಿರುವುದಲ್ಲ , ಬದಲಾಗಿ ಇದೆಲ್ಲವನ್ನೂ ಮೀರಿದ ದಿವ್ಯ ಅನುಭವವೊಂದು ನಮಗಾಗಿ ಕಾದಿದೆ. ಅದನ್ನು ನಾವು ಪಡೆಯಲು ಸಜ್ಜಾಗಬೇಕಿದೆ.   ” ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ?” ಈ ಅದ್ಭುತ ಸಾಲುಗಳು ನೀಡುವ ಅರ್ಥ. ” ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲಿನಲ್ಲಿ ಎಲ್ಲಿಯೋ ಅಗೋಚರವಾದ ಸಪ್ತ ಸಾಗರದ ತೀರಕೆ ಸೆಳೆಯುವ ಕವಿಯ ಮನಸ್ಸಿಗೆ ಮೂಕವಾದ ಮರ್ಮರವೊಂದು ತಲುಪಿರುವಂತೆ ಭಾಸವಾಗುತ್ತಿದೆ. ನನ್ನ ಮನಸ್ಸನ್ನು ಮೆಚ್ಚಿದ ಸಾಲು ಹಾಗೂ ಸದಾ ಕಾಡುವ ಭಾವ. ಯಾವುದೋ ಅಲೌಕಿಕ ಶಕ್ತಿಯೊಂದು ಈ ಲೋಕದ ಜನರನ್ನು ಮೃದುವಾಗಿ ಎಚ್ಚರಿಸಿ ಇಹವನ್ನು ಬಿಡಲಾಗದೇ ಅಸಹಾಯಕ ಮನಸ್ಥಿತಿಯಲ್ಲಿರುವ ಯಾತನಾಮಯ ಜೀವಗಳನ್ನು ಚೈತನ್ಯಯುಕ್ತ ಜಗತ್ತಿಗೆ ಸೇರಿಸುತ್ತಿದೆ. ಹಾಗೆಯೇ ” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”ಈ ಸಾಲೂ ಕೂಡ ನಮ್ಮ ಸಾರ್ವಕಾಲಿಕ ಬದುಕಿಗೆ ಹಿಡಿದ ಕನ್ನಡಿಯೇ ಸರಿ. ಬದುಕೆಂದಿಗೂ ಗೊಂದಲಗಳ ಗೂಡಾಗದೇ ನೆಮ್ಮದಿಯ ತಾಣವಾಗಿರಬೇಕು.”ಇಲ್ಲ” ಗಳ ಕಡೆ ಮನಸ್ಸು ವಾಲಿರುವುದರಿಂದ ನಿಜವಾದ ಆನಂದವನ್ನು ಕೈಚೆಲ್ಲಿ ಮತ್ತೆಲ್ಲೋ ವ್ಯರ್ಥ ಪ್ರಯತ್ನ ಮಾಡುವುದೆಷ್ಟು ಸರಿ ಅಲ್ಲವೇ? ಇದ್ದುದರಲ್ಲಿ ನೆಮ್ಮದಿಯ ಕಂಡಾಗ ದೊರೆಯಬಹುದಾದ ಸಂತಸ ಪರರಿಂದ ಕಿತ್ತುಕೊಳ್ಳುವುದರಿಂದ ಸಿಗಲಾರದು, ಸಿಕ್ಕರೂ ಕ್ಷಣಿಕ.ತಮ್ಮ ಹತ್ತಿರ ಏನೋ ಇರುವುದಿಲ್ಲ ತಮಗೆ ಅದು ಬೇಕಾಗಿರುತ್ತದೆ.ಅದಕ್ಕಾಗಿ ಜಗತ್ತು ಸದಾ ಪ್ರಯತ್ನಿಸುತ್ತಲೇ ಇರುವುದನ್ನು ಕಾಣುತ್ತೇವೆ. ಪಡೆದಾಗ ಸಂತಸ ಪಡುವ ಮನಸ್ಸು ಕ್ರಮೇಣ ಮತ್ತೇನೋ ಬಯಸುತ್ತದೆ ಅಥವಾ ಇರುವುದು ಕಡಿಮೆ ಯೂ ಎನಿಸಬಹುದು. ಪುನಃ ಮನಸ್ಸು ಹಾತೊರೆಯುತ್ತದೆ.ಹೀಗೆ ಜೀವ ಇರುವ ತನಕ ಕೊರತೆಗಳಿಗೂ ಬರವಿಲ್ಲ.ಆಸೆಗಳಿರಲಿ ದುರಾಸೆಗಳು ನಿಷಿದ್ಧ. ಹೀಗೆ ಪ್ರಶ್ನೋತ್ತರಗಳ ಮೂಲಕವೇ ಸಹೃದಯ ಓದುಗರ ಅಭಿರುಚಿಗೆ ತಕ್ಕಂತೆ ಮನಮುಟ್ಟುವ , ಭಾವಗಳನ್ನು ತನ್ನೆಡೆಗೆ ಸೆಳೆಯುವ ಮೋಹಕ ಶಕ್ತಿಯಿರುವ ಪದ್ಯ. ಮರದೊಳಡಗಿದ ಬೆಂಕಿ ಕಣ್ಣಿಗೆ ಅಗೋಚರ.ಹಾಗೆಯೇ ಮನದೊಳಡಗಿರುವ ಬೇಸರವೂ. ಮನದ ಬೇಸರವು ಹೊತ್ತಿ ಉರಿದು ಕಾತರದ ರೂಪವಾಗಿದೆ. ಏನು- ಏಕೆ ಎಂಬ ಅತೀವ ಉತ್ಸುಕತೆಯ ಮನಸ್ಸಿಗೆ ಬಹಳಷ್ಟು ಕಾಡುತ್ತದೆ. ಜೀವಾಂಶವೇ ನನ್ನ ಬಿಟ್ಟು ದೂರ ಹೋದಂತೆ ಇರುವುದೆಲ್ಲವನ್ನು ಬಿಟ್ಟು ಮತ್ತೆಲ್ಲೊ ಮನಸ್ಸು ಏನನ್ನೊ ಅರಸುತ್ತಾ ಹೊರಡುತ್ತದೆ. ನಾ ಮೆಚ್ಚುವ ಈ ಕವಿತೆಯು ಸದಾ ಗುಯ್ಗುಡುತ್ತದೆ ನನ್ನ ಕಿವಿಯಲ್ಲಿ. ****************************** ಸರಿತಾ ಮಧು

ನನ್ನ ಇಷ್ಟದ ಕವಿತೆ Read Post »

ಇತರೆ

ನನ್ನ ಇಷ್ಟದ ಕವಿತೆ

ಮುಂಬೈ ಜಾತಕ ರಚನೆ —– ಜಿ.ಎಸ್.ಶಿವರುದ್ರಪ್ಪ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು.  ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳ್ಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.                          _________  ನಾನು ನನ್ನ ಕನ್ನಡ ತರಗತಿಗಳಲ್ಲಿ   ವಿದ್ಯಾರ್ಥಿಗಳಿಗೆ ಆಗಾಗ ಓದಿಹೇಳುವ ಮತ್ತುನನಗಿಷ್ಟವಾದ ಕೆಲವೊಂದು ಕವಿತೆಗಳ ಸಾಲಿನಲ್ಲಿ ನವೋದಯ ಸಾಹಿತ್ಯದ,  ರಾಷ್ಟ್ರ ಕವಿ     ಜಿ. ಎಸ್. ಶಿವರುದ್ರಪ್ಪನವರು ಬರೆದಿರುವ  ‘ಮುಂಬೈ ಜಾತಕ’ವೂ ಸೇರಿಕೊಳ್ಳುತ್ತದೆ. ಇದಕ್ಕೆ ಕಾರಣವೇನೆಂದು ಯೋಚಿಸಿದರೆ ನನಗೆ ಹೊಳೆದದ್ದು, ಇದೊಂದು ವಿಚಿತ್ರ ಶೈಲಿಯ, ಎಲ್ಲಾಾ ಕಾಲಕ್ಕೂ ಸರಿಹೊಂದುವ ಕವನ.   ಏಕೆಂದರೆ ಕವನಗಳ ಪ್ರಮುಖ ಲಕ್ಷಣವಾದ  ಗೇಯತೆ ಮತ್ತು ಪ್ರಾಸಗಳೆರಡನ್ನೂ ಗಾಳಿಗೆ ತೂರಿ ರಚಿಸಲಾದ ಈ ಕವಿತೆ ಸರ್ವಕಾಲಿಕ ಸತ್ಯವನ್ನು ಸಾರುತ್ತದೆ. ಆದ್ದರಿಂದಲೇ  ಅಂದು, ಇಂದು ಮತ್ತು ಎಂದೆಂದಿಗೂ ಜೀವಂತವಾಗಿ ಉಳಿಯಬಲ್ಲ ಶಕ್ತಿ ಈ ಕವನಕ್ಕಿದೆ.  ಏಕೆಂದರೆ ಆಗಿನ ಕಾಲದಲ್ಲಿ ಮುಂಬೈಗಷ್ಟೇ ಸೀಮಿತವಾಗಿದ್ದ   ಬಿಡುವುಲ್ಲದ, ಯಾಂತ್ರಿಕ ಜೀವನ ಶೈಲಿ,  ಈಗ ಭಾರತದ ಎಲ್ಲಾ  ಪ್ರಮುಖ ನಗರ ವಾಸಿಗಳ    ಜೀವನದಲ್ಲಿ ಹಾಸುಹೊಕ್ಕಾಗಿದೆ. ಕವಿ ಜಿ. ಎಸ್. ಎಸ್  ಬಯೋಡ್ಯಾಟದಲ್ಲಿ  ಕವನವನ್ನು ಹೇಳಿದ್ದಾರೋ   ಅಥವಾ ಕವನದಲ್ಲಿ ಬಯೋಡ್ಯಾಟವನ್ನು ಹೇಳಿದ್ದಾರೋ ಎನ್ನುವಷ್ಷರ ಮಟ್ಟಿಗೆ  ತಮ್ಮ  ಕವಿತೆಯಲ್ಲಿ  ನೈಜತೆ ಹಾಗೂ ಸರಳತೆಯನ್ನು ಪ್ರತಿಬಿಂಬಿಸಿದ್ದಾರೆ.  ನಗರ ಪ್ರದೇಶಗಳಲ್ಲಿ ಬೆಳೆಯುವ, ಬದುಕನ್ನು ಕಟ್ಟಿಕೊಳ್ಳುವ ಲಕ್ಷಾಂತರ ಮಧ್ಯಮ ವರ್ಗದ    ಮಕ್ಕಳ ಬದುಕಿನ ಚಿತ್ರಣವನ್ನು  ಕಣ್ಣಮುಂದೆ ಕಟ್ಟಿದ ಹಾಗೆ ಇಲ್ಲಿ ಬಿಚ್ಚಿಡಲಾಗಿದೆ. “ಹುಟ್ಟಿದ್ದು ಬೆಳೆದದ್ದು, ಕುಡಿದದ್ದು, ಕಂಡದ್ದು, ಕಲಿತದ್ದು …………”  ಹೀಗೆ ಕವಿತೆ  ನೀಡುವ ಆಮೂಲಾಗ್ರ  ವಿವರಣೆಗಳ ಹಿಂದಿರುವ ವ್ಯಂಗ್ಯ  ಓದುಗರ ಮುಂದೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.   ತಂದೆ, ತಾಯಿಯರ ಬಗೆಗಿರುವ ವಿವರಣೆಯಂತೂ  ನಮ್ಮ  ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುವಂತದ್ದು..  “ಇರುವ ಒಂದಿಂಚು ಕೋಣೆಯಲ್ಲೇ”  ಹೊರಲೋಕವನ್ನು ಪತಿಚಯಿಸುವ ತಾಯಿಯೊಂದು ಕಡೆಯಾದರೆ,  ಬೆಳಗಿನಿಂದ ರಾತ್ರಿಯವರೆಗೆ ಸಂಸಾರಕ್ಕಾಗಿ ದುಡಿಯುವುದರಲ್ಲೇ ಜೀವ ಸವೆಸುತ್ತಿರುವ  ತಂದೆ, ಮಕ್ಕಳ ಆಟ ಪಾಟಗಳಿಂದ ಸ್ವತಃ ವಂಚಿತ.  “ಜೀವನಕ್ಕಾಗಿ ದುಡಿಮೆಯೇ ಹೊರತು, ದುಡಿಮೆಗಾಗಿ  ಜೀವನವಲ್ಲ!  ಅಲ್ಲವೇ?”.  ದುಡಿಮೆ ನಿಜವಾದ ಅರ್ಥ ಕಳೆದುಕೊಳ್ಳುವುದು ಇಲ್ಲೇ. ಕವಿತೆ ಮುಂದುವರೆದು  ವಿದ್ಯೆಯ ಬಗ್ಗೆ ಹೇಳುತ್ತಾ, “ನೀನಾಗಿ ಕಲಿತದ್ದು ಬಲು ಕಡಿಮೆ….”.   ಎಂಬಲ್ಲಿ “ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆ ಕಣ್ಣಾಡಿಸುವುದೊಂದನ್ನು ಹೊರತು” ಎಂದು ಹೇಳುವ ಮೂಲಕ  ಕವಿ ತಮ್ಮ ಕವನಕ್ಕೆ ಹಾಸ್ಯ ಲೇಪನವನ್ನೂ ಸಹ ಮಾಡಿದ್ದಾರೆ. ಬಣ್ಣಗಳ ಕಡೆಗೆ ಕಣ್ಣಾಡಿಸುವುದನ್ನು  ಕಲಿಸಲು ಯಾವ ಶಾಲೆ, ಕಾಲೇಜುಗಳೂ ಬೇಕಿಲ್ಲವಷ್ಟೆ!    ಇಷ್ಟೆಲ್ಲಾ ಆದ ಮೇಲೆ, ಆ ಮಗುವೂ ಬೆಳೆದು ದೊಡ್ಡವನಾದಂತೆ  ತಾನೂ ಸಹ ತನ್ನ ತಂದೆಯಂತೆಯೇ  “ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು……”‘ ಇಂತಹದ್ದೇ  ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ವಿಪರ್ಯಾಸ.   ಈಗ ತಾನೂ ತನ್ನ ತಂದೆಯಂತೆ  “ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ!”  ಇದಂತೂ  ಜೀವನದ ಕಟು ಸತ್ಯವನ್ನು ಓದುಗರಿಗೆ  ಬಿಚ್ಚಿ ತೋರಿಸುತ್ತದೆ.  ತನಗಾಗಿ ಒಂದಿಷ್ಟೂ ಸಮಯವಿಲ್ಲದೆ ಜೀವನವೆಲ್ಲಾ  ದುಡಿದು ದುಡಿದೂ ಸೊರಗಿ, ಕೊನೆಗೊಮ್ಮೆ ಕಣ್ಮುಚ್ಚುವ  ಪಟ್ಟಣಿಗರ ಬದುಕಿನಲ್ಲಿ  ನಿಜವಾದ ಬದುಕೆಲ್ಲಿದೆ?  ಯಾವ ಪಟ್ಟಣಿಗನು ಈ ಕವನವನ್ನು ಓದಿದರೂ ಇದು ತನ್ನದೇ ಬಯೋಡಾಟಾ ಎಂದು ಭಾವಿಸದಿರನೇ?  ಇಂದಿನ ಜೀವನ ಶೈಲಿಯನ್ನು , ಪಟ್ಟಣಿಗರ ಪಾಡನ್ನು ಸರಳವಾಗಿ, ಸುಂದರವಾಗಿ    ಅನಾವರಣಗೊಳಿಸಿರುವ  ಜಿ ಎಸ್ ಎಸ್ ರವರ ಈ ಕವಿತೆ ನನ್ನ ಫೇವರೇಟ್. **************************** ಅರುಣಾ ರಾವ್

ನನ್ನ ಇಷ್ಟದ ಕವಿತೆ Read Post »

ಇತರೆ

ಕವಿತೆ

ಹಿರಿಯ ಕವಿಗಳ ಹಳೆಯ ಕವಿತೆಗಳು ಹೊಸ ಪೀಳಿಗೆಯ ಓದುಗರಿಗಾಗಿಹಿರಿಯಕವಿಗಳಕವಿತೆಯೊಂದನ್ನು ನಿತ್ಯ ನೀಡಲಾಗುವುದು ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ. ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,ಹೆಂಟೆಗೊಂದು ಮೊಗೆ ನೀರು ಹಿಗ್ಗಿ;ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿಹೆಸರು ಗದ್ದೆಯ ನೋಡಿಕೊಂಡು,ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು. ಸತ್ತಳು ಈಕೆ:ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?ಎಷ್ಟೋ ಸಲ ಈ ಮುದುಕಿ ಅತ್ತಳುಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;ಎಷ್ಟುಸಲ ಹುಡುಕುತ್ತ ಊರೂರು ಅಲೆದಳುತಪ್ಪಿಸಿಕೊಂಡ ಮುದಿಯ ಎಮ್ಮೆಗೆ? ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ. ಬನದ ಕರಡಿಯ ಹಾಗೆಚಿಕ್ಕಮಕ್ಕಳ ಹೊತ್ತುಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.ಈಕೆ ಉರಿದೆದ್ದಾಳುಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ. ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;ನನ್ನವ್ವ ಬದುಕಿದ್ದುಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ, ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,ಮನೆಯಿಂದ ಹೊಲಕ್ಕೆ ಹೋದಂತೆತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ ********************************* ಪಿ.ಲಂಕೇಶ್

ಕವಿತೆ Read Post »

ಇತರೆ

ವಿದ್ಯಾರ್ಥಿ ಪ್ರತಿಭೆ

ಭರವಸೆಯ ವಿದ್ಯಾರ್ಥಿ ಕವಿ ಪೂಜಾ ನಾಯಕ್ ಪೂಜಾ ನಾಯಕ್ ಮೂಲತ:  ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿಯವರಾಗಿದ್ದು ಸದ್ಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಹೊಂದಿರುವ ಇವರು ತಮ್ಮ ಆರಂಭದ ಕೆಲ ಕವಿತೆಗಳಿಂದಲೇ ಭರವಸೆ ಮೂಡಿಸಿದ್ದಾರೆ.  ‘ಸದಾಶಯದೊಡನೆ ಮೂಡಿಬಂದ ಕವಿತೆಗಳು’               ಸಾಹಿತ್ಯ ರಚನೆಗೂ ಓದಿಗೂ ಏನಾದರೂ ಸಂಬಂಧವಿದೆಯೇ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವೇ ಕಾವ್ಯ ರಚನೆ ಸಿದ್ಧಿಸಿರುತ್ತದೆಯೇ? ಈ ಪ್ರಶ್ನೆಯಲ್ಲೇ ಹುರುಳಿಲ್ಲ. ಏಕೆಂದರೆ ಸಾಹಿತ್ಯೇತರ ಅಭ್ಯಾಸಗಳಲ್ಲಿ ತೊಡಗಿರುವವರಿಂದಲೂ ಹಲವಾರು ಶ್ರೇಷ್ಠ ಕೃತಿಗಳು ರಚನೆಯಾಗಿವೆ.        ಪೂಜಾ ನಾಯಕ್ ಕಾವ್ಯ ಕೃಷಿಯಲ್ಲಿ ತೊಡಗಿರುವ ವಿಜ್ಞಾನದ ವಿದ್ಯಾರ್ಥಿನಿ. ಅವರ ನಾಲ್ಕು ಕವನಗಳನ್ನು ನಾನು ಇತ್ತೀಚೆಗೆ ಓದಿದೆ. ಕಾವ್ಯದ ನಾಡಿಮಿಡಿತ  ಇವರಿಗೆ ಚೆನ್ನಾಗಿ ತಿಳಿದಿದೆ.     ಕರುಣಾಮಯಿ, ಮೂಡಿಬರಲಿ, ಜಂಜಾಟದ ಬದುಕು, ಕಾವ್ಯವಾಗಿ ಕರಗುತ್ತೇನೆ. ಇವೇ ಆ ನಾಲ್ಕು ಕವಿತೆಗಳು. ಕೇವಲ ನಾಲ್ಕು ಕವಿತೆಗಳಿಂದ ಒಬ್ಬ ಕವಿಯ ಸಮಗ್ರ ಸಾಹಿತ್ಯದ ಕುಸುರಿಯನ್ನು ಕುರಿತು ಮಾತನಾಡಲಾಗದು. ಹಾಗೆ ಮಾತನಾಡಲೂ ಬಾರದು.    ಹಾಗೆಂದು ಪೂಜಾ ಅವರ ನಾಲ್ಕು ಕವನಗಳು ನಿರ್ಲಕ್ಷಿಸಿ ಬಿಡುವಂತಹ ಕವನಗಳಲ್ಲ. ಕವಿಯ ಪ್ರಬುದ್ಧ ಮನಸ್ಸು ಹಾಗೂ ಕಾವ್ಯ ರಚನೆಯ ಹುಮ್ಮಸ್ಸನ್ನು ಈ ಕವನಗಳ ಮೂಲಕವೇ ಗುರುತಿಸಬಹುದು.  ‘ಕರುಣಾಮಯಿ’ ಕವನದ ‘ಹರಿದಿರುವ ಹರಕು ಅಂಗಿಯ ತುಂಡಿಗೂ ಮೊಂಡಾದ ಸೂಜಿಗೂ ಮಧುರವಾದ ಬಾಂಧವ್ಯ ಬೆಸೆದವಳು…’ ಎನ್ನುವ ಸಾಲುಗಳು ಲಂಕೇಶರ ‘ಅವ್ವ’ನನ್ನು ನೆನಪಿಗೆ ತಟ್ಟನೆ ತರಿಸುವಂತಿವೆ! ಆದರೆ ತಾಯೊಲುಮೆಯ ಹಿರಿಮೆ ಸಾರುವ ಈ ಕವಿತೆ ಆರಂಭಿಕ ಸಾಲುಗಳನ್ನು ಹೊರತುಪಡಿಸಿ ಉಳಿದಂತೆ ತೀರಾ ವಾಚ್ಯವಾಗಿ ಗದ್ಯದಲ್ಲಿ ನಿಂತುಬಿಡುತ್ತವೆ. ಕವಿ ಮತ್ತೊಮ್ಮೆ  ಸಾವಕಾಶ ಈ ಕವಿತೆಯನ್ನು ತಿದ್ದಿದರೆ ಉತ್ತಮ ಕವಿತೆ ಓದುಗರಿಗೆ ದಕ್ಕುತ್ತದೆ.      ‘ಕಾವ್ಯವಾಗಿ ಕರಗುತ್ತೇನೆ’ ಇದೊಂದು ಪ್ರಬುದ್ಧ ಕವಿತೆ.  ಕವಿ ಧ್ಯಾನಸ್ಥ ಮನಸ್ಥಿತಿಯಲ್ಲಿ ಈ ಕಾವ್ಯ ರಚಿಸಿದಂತಿದೆ. ನೋವು- ನಿರಾಸಗಳನ್ನು ಕಾಣುತ್ತಿರುವಾಗಲೇ ಬದುಕಿನ ಕುರಿತಂತೆ ಚಿಂತಿಸುತ್ತಾ, ತಾನು ಅದಮ್ಯ ಚೇತನವಾಗಿ ಉಳಿಯಬೇಕೆನ್ನುವ ತುಡಿತವನ್ನು ಈ  ಕಾವ್ಯದಲ್ಲಿ ಕಾಣಬಹುದು. ಎಷ್ಟೇ ವೈಫಲ್ಯ ಎದುರಾದರೂ ತನ್ನೊಳಗೆ ಗಟ್ಟಿಗೊಳ್ಳುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆನ್ನುವ ಛಲ ಕವಿಯದ್ದು.      ‘ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ       ನನಗನಿಸುತ್ತದೆ ನಾನು ಹೀಗೆಯೇ        ಕಾವ್ಯನಾಗಿ ಮಂಜುಗಡ್ಡೆಯಂತೆ        ಕರಗಿಬಿಡಬೇಕು!’     ಇಡೀ ಕವಿತೆ ಜ್ವಾಲಾಮುಖಿ, ಅಗ್ನಿಪರ್ವತ, ಶಿವಮ ರುದ್ರ ಮೂರ್ತಿ, ಮಂಜುಗಡ್ಡೆಗಳ ರೂಪಕಗಳಲ್ಲಿ ಕುದಿಯುವ ಕವಿಮನಸ್ಸನ್ನು ಕಟ್ಟಿಕೊಡುತ್ತದೆ.      ‘ಜಂಜಾಟದ ಬದುಕು’ ಇದೂ ಸಹ ಹದಿಹರಯದ ಮಹಾತ್ವಾಕಾಂಕ್ಷೆಯುಳ್ಳ ಮನಸ್ಸಿನ ಪ್ರತಿಫಲನದಂತಹ ಕವಿತೆ. ಆಸೆಗಳು ಹಕ್ಕುಗಳಾಗಿ, ಹಕ್ಕುಗಳನ್ನು ಈಡೇರಿಸಿಕೊಳ್ಳಲು ಬಯಸುವ ಕವಿಯ ಚಿತ್ತವೃತ್ತಿ ಇಡೀ ಕವಿತೆಯಲ್ಲಿ ಎದ್ದು ಕಾಣುವ ಮುಖ್ಯಾಂಶ.        ‘ ನಿಬಿಡ ಹಗಲುಗನಸುಗಳು       ದಿಬ್ಬಣದಂತೆ ಸಾಗುತ್ತಿವೆ…’            ‘ ಕಂಡ ಕನಸುಗಳು               ದೀಪ ನಂದಿದಂತೆ              ನಂದಿಹೋಗುತಿವೆ…’         ‘ ನಿತ್ಯವೂ ದಿನಪೂರ್ತಿ ಜಂಜಾಡುತ್ತಾ                      ಮತ್ತದೇ ವಿಫಲ ಯತ್ನದತ್ತ            ಚಿತ್ತ ಹರಿಸುತ್ತ…’       ಕವಿತೆ ಹೋರಾಟ- ನಿರಾಸೆಗಳನ್ನು ಹೇಳುವುದಾದರೂ ‘ಮರಳಿ ಯತ್ನವ ಮಾಡು’ ಎಂಬ ನಾಣ್ಣುಡಿಯನ್ನು ಅಂತರಾಳದಲ್ಲಿ ಪ್ರತಿಪಾದಿಸುತ್ತದೆ.       ಕವಿತೆಯೊಳಗೆ ಕೆಲವು ಭಾವಗಳು ಹಾಗೂ ಸಾಲುಗಳು ಪುನರಪಿ ಎನಿಸುವುದರಿಂದ ಕವಿ ಮತ್ತೊಮ್ಮೆ ಕಾವ್ಯವನ್ನು ಸಮಗ್ರವಾಗಿ ಪುನರಚಿಸುವುದು ಸೂಕ್ತವಾಗಬಹುದು ಎನ್ನುವುದು ನನಿನ ಅಭಿಪ್ರಾಯ.      ‘ಮೂಡಿ ಬರಲಿ’ ಎಂಬ ಮೂರು ಮೂರು ಸಾಲುಗಳಲ್ಲಿ ರಚಿತವಾಗಿರುವ ಈ ತ್ರಿಪದಿ ಪದ್ಯ ಕವಿಯ ಕವಿತ್ವಕ್ಕೆ ಸಾಕ್ಷಿ. ಇದೊಂದು ಸದಾಶಯದ ಕವಿತೆ. ಒಳಿತನ್ನು ಕಾಣುವ, ಒಳಿತನ್ನೇ ಬಯಸುವ ಪರಿಶುದ್ಧ ಕವಿ ಮನಸ್ಸನ್ನು ನಾವಿಲ್ಲಿ ಕಾಣಬಹುದು.    ‘ಒಳ್ಳೆ ಬುದ್ಧಿಯಿಂದ      ಕಾಂತಿ ಹೊಂದಿ     ಕತ್ತಲೋಡಿ ಹೋಗಲಿ’   ‘ದವಸ-ಧಾನ್ಯ ಬೆಳೆದ ರೈತ  ನಾಡಲೆಲ್ಲಾ ಮೆರೆಯಲಿ’ ‘ ಮೇಲು – ಕೀಳು  ಕೊಳಕು ಕೊಚ್ಚಿ ಮನವು ಸ್ವಚ್ಛವಾಗಲಿ’     ಹೀಗೆ ಪುಟ್ಟ ಪುಟ್ಟ ಸಾಲುಗಳಲ್ಲಿಯೇ ಉದಾತ್ತ ಭಾವವನ್ನು ಸಾರುವ ಈ ಕವಿತೆಯನ್ನು ಓದುಯಾದ ಮೇಲೆ ಮನಸ್ಸು ಹರ್ಷಗೊಳ್ಳದೇ ಇರಲಾರದು.         ವಿಸ್ತಾರ ಓದಿನೊಡನೆ ಬುದ್ಧಿ- ಭಾವಗಳ ಸಮನ್ವಯದೊಂದಿಗೆ ಈ ಕವಿ ಮತ್ತಷ್ಟು ಉತ್ತಮ ಕವನಗಳನ್ನು ರಚಿಸಲಿ ಎನ್ನುವ ಸದಾಶಯ ಪ್ರೀತಿಯೊಡನೆ  ಶುಭಹಾರೈಸುವೆನು.  ಪೂಜಾ ನಾಯಕ್ ಕವಿತೆಗಳು ಕರುಣಾಮಯಿ ಆಸುಪಾಸಲ್ಲಿ ಬಿದ್ದಿದ್ದ ಕಟ್ಟಿಗೆಯ ತುಂಡಾಯ್ದು ಕಲಬೆರಕೆ ಅಕ್ಕಿಯಲಿ ಬೆರೆತಿದ್ದ ಕಲ್ಲಾಯ್ದು ಹೊಲದಲ್ಲಿ ಬೆಳೆದಿದ್ದ ಕಾಯಿಪಲ್ಲೆಯ ಕೊಯ್ದು ಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳು ಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂ ಆಶಾ-ಭರವಸೆಯ ನುಡಿಯಾಡಿ ಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆ ತಾನೊಬ್ಬಳೇ ಹೋರಾಡಿ ಹರಿದಿರುವ ಹರುಕು ಅಂಗಿಯ ತುಂಡಿಗೂ ಮೊಂಡಾದ ಸೂಜಿಗೂ ಮಧುರವಾದ ಬಾಂಧವ್ಯ ಬೆಸೆದವಳು ಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗ ಕರುಳಬಳ್ಳಿಯ ಅಳಲು ತಾ ಮನದಲ್ಲೇ ಅರಿತು ನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿ ನನ್ನ ಸಾವಿರ ಕನಸುಗಳನು ನನಸು ಮಾಡಲು ಹೊರಟು ನಿಂತವಳು ಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿ ಶಾಲೆಗೆ ಪೀಜು ತುಂಬಿ ತನ್ನ ಹರುಕು ಸೀರೆಯ ಲೆಕ್ಕಿಸದೆ ನನಗೊಂದು ಹೊಸ ಅಂಗಿಯ ಕೊಡಿಸಿ ದೊಡ್ಡ ಅಧಿಕಾರಿಯ ಸ್ಥಾನದಲಿ ತಾ ಕೂಸ ನೋಡಬೇಕೆಂದು ಆಸೆಯಿಂದ ಕಾಯುತ್ತ ಕುಳಿತವಳು ಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕ ತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವ ಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?…. ಅವಳ ಋಣ ತೀರಿಸಲು ಸಾಧ್ಯವಿಹುದೇನು?… ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?… ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?. ಕಾವ್ಯವಾಗಿ ಕರಗುತ್ತೇನೆ ನಾನರಿಯಲಾಗದ  ಶೂಲೆಗಳೇ ಆಪ್ತವಾಗಿ ನನ್ನನ್ನು ಬಿಗಿದಪ್ಪಿಕೊಂಡಾಗ ಬದುಕು ಬರಡಾಗಿ ಬೆಂಬಿಡದೆ ಕಾಡಿದಾಗ ನನಗನಿಸುತ್ತದೆ, ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು! ಕಳೆದುಕೊಂಡ ಮಧುರವಾದ ಪ್ರೇಮ ನೆನಪಿನಾಳದಲಿ ಪುಟಿದೆದ್ದು ಕೂತಾಗ ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ ನನಗನಿಸುತ್ತದೆ, ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು! ಕಗ್ಗತ್ತಲ ವೇಳೆಯಲಿ ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ ನನಗನಿಸುತ್ತದೆ, ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು! ಏಕಾಂತದಲಿ ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ ಹಿಂದಿನ ಕಹಿ ನೆನಪೇ ತುಡಿದಾಗ ಕಂಬನಿಯೇ ಬೇರೂರಿದಾಗ ನನ್ನೆದೆಯ ಶರಧಿಯಲಿ ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ ನನಗನಿಸುತ್ತದೆ, ನಾನು ಹೀಗೆಯೆ ಕಾವ್ಯವಾಗಿ   ಮಂಜುಗಡ್ಡೆಯಂತೆ ಕರಗಿಬಿಡಬೇಕು!. ಜಂಜಾಟದ ಬದುಕು ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕು ಕಂಡರೇನಂತೆ, ಅತ್ತ ಹೋದರೆ ಸಿಗದಿರುವ ಹಕ್ಕು ಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗ ನಿತ್ಯವೂ ದಿನಪೂರ್ತಿ ಜಂಜಾಟ ಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳು ದಿಬ್ಬಣದಂತೆ ಸಾಗುತಿವೆ ಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆ ಸಹಿಸಲಾಗದ ಸಂಕಟ ಎತ್ತೆತ್ತಲಿಂದಲೋ ಕುಠಾರದ ಮೊನಚಂತೆ, ಕುಹಕ ಮಾತುಗಳೇಳುತಿವೆ ಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ. ತಪ್ತ ಹೃದಯಕೆ ತಿರಸ್ಕಾರ ಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿ ನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿ ದಿಕ್ಕು-ಹಕ್ಕುಗಳಿಲ್ಲದೇ ಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆ ನಿತ್ಯವೂ ದಿನಪೂರ್ತಿ ಜಂಜಾಡುತ್ತಾ ಮತ್ತದೇ ವಿಫಲ ಯತ್ನದತ್ತ ಚಿತ್ತ ಹರಿಸುತ್ತ. ಮೂಡಿ ಬರಲಿ ( ಕವನ) ಮೂಡಿ ಬರಲಿ ಮೂಡಿ ಬರಲಿ ದೇಶಪ್ರೇಮ ನಮ್ಮಲಿ..       ಕೂಡಿ ಬರುವ                    ಭಾವವೆಲ್ಲ       ಜಗದಲಿಂದು ಚಿಮ್ಮಲಿ. ಮೇಲು-ಕೀಳು ಕೊಳಕು ಕೊಚ್ಚಿ  ಮನವು ಸ್ವಚ್ಛವಾಗಲಿ.     ಒಳ್ಳೆ ಬೀಜ     ಪುಷ್ಟಿ ಗೊಬ್ಬರದಿಂದ     ಬೆಳೆಯು ಬೆಳೆದು ನಿಲ್ಲಲಿ. ದಾನ-ಧರ್ಮವ ಜಗಕೆ ಸಾರಿ ಒಳ್ಳೆ ಭಾವವು ತುಂಬಲಿ.       ಒಳ್ಳೆ ಬುದ್ಧಿಯಿಂದ       ಕಾಂತಿ ಹೊಂದಿ       ಕತ್ತಲೋಡಿ ಹೋಗಲಿ. ಊರಲೆಲ್ಲ ಮಳೆಯು ಬಿದ್ದು ಹಳ್ಳ-ಕೊಳ್ಳ ತುಂಬಿ ಹರಿಯಲಿ.       ಒಳ್ಳೆ ಬೆಳೆಯು       ಬೆಳೆದು ನಿಂತು       ಎಲ್ಲ ಜನರು ಹಾಡಲಿ. ದವಸ-ಧಾನ್ಯ ಬೆಳೆದ ರೈತ ನಾಡಲೆಲ್ಲ ಮೆರೆಯಲಿ.     ರಾಮರಾಜ್ಯ     ಪಡೆವ ಭಾಗ್ಯ     ಇಂದು ನಮ್ಮ ದಾಗಲಿ. ********************************************************* ಪರಿಚಯಬರಹ: ವಸುಂಧರಾ ಕದಲೂರು

ವಿದ್ಯಾರ್ಥಿ ಪ್ರತಿಭೆ Read Post »

ಇತರೆ

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು

ಚರ್ಚೆ ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ?  ಎನ್ನುವುದು ತಿಳಿದ ತಕ್ಷಣ ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆಯೇ ಅದು. ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ನಾನರಿಯೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷೀಯ ಪೀಠವನ್ನು ಹತ್ತಲಿಲ್ಲ ಎಂಬ ಸಂಗತಿಯನ್ನಂತು ತಿಳಿದುಕೊಂಡೆ. ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ ತಾಯಿಯಾಗಿ, ಪ್ರೀತಿಯ ಸಹೋದರಿಯಾಗಿ, ಅತ್ತಾಗ ಸಾಂತ್ವನ ಹೇಳುವ ಗೆಳತಿಯಾಗಿ, ಮನೆಯಲ್ಲಿ ಎಲ್ಲರ ಪ್ರೀತಿಯ ಚಿಲುಮೆಯ ಮುದ್ದಿನ ಮಗಳಾಗಿ ಇಂದು ಮಹಿಳೆ ಸರ್ವ ಕ್ಷೇತ್ರಗಳಲ್ಲೂ ಸಾಧನೆಯ ದಾಪುಕಾಲನ್ನ ಹಾಕುತ್ತಾ ಜಗತ್ತಿನೆಲ್ಲರ ದೃಷ್ಟಿಯನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿರುವಾಗ, ಕಸಾಪನ ಅಧ್ಯಕ್ಷೀಯ ಪದವಿ ನೂರು ವರ್ಷಗಳಾದರೂ ಪಡೆಯದೇ ಇರುವುದು ತುಂಬಾ ವಿಷಾದನೀಯ ಹಾಗೆಯೇ ಮಹಿಳೆಯರಿಗೆ ಇದೊಂದು ಸವಾಲಿನ ಪ್ರಶ್ನೆಯು ಹೌದು. ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಸಾಹಿತ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಛಾಪು ಮೂಡಿಸಿದ್ದಾಳೆ. ನಾನಿಲ್ಲಿ  ಕಸಾಪನ ಬಗ್ಗೆ ಹೇಳುತ್ತಿರುವುದರಿಂದ ಕೇವಲ ಸಾಹಿತ್ಯದ ಬಗ್ಗೆಯಷ್ಟೇ ಕೊಂಚ ಗಮನ ಹರಿಸೋಣ . ಬರಹಗಾರ್ತಿಯರ ಸಂಖ್ಯೆ ತುಂಬಾ ಕಡಿಮೆಯಿದ್ದ ಹಿಂದಿನ ಕಾಲದಲ್ಲಿ, ಪ್ರತಿನಿತ್ಯದ ತಮ್ಮೆಲ್ಲ ಕಷ್ಟ-ಕಾರ್ಪನ್ಯಗಳನ್ನು ದೂರಮಾಡಿಕೊಳ್ಳುವ ಸಲುವಾಗಿ ಹಾಡುಗಳನ್ನು ತಾವೇ ಕಟ್ಟಿ ರಾಗವಾಗಿ ಹಾಡುತ್ತಿದ್ದರು ಅವೇ ಜಾನಪದ ಸಾಹಿತ್ಯ. ಈ ಜಾನಪದ ಸಾಹಿತ್ಯವನ್ನ ಹಿಂದೆ ಬಹುವಾಗಿ ರಚಿಸಿದವರೆಂದರೆ ಮಹಿಳೆಯರೇ. ಆ ಸೊಗಸಾದ ಸಾಹಿತ್ಯ ಆಕೆಯ ಕುಟುಂಬ,ನೋವು-ನಲಿವು, ಅವಳ ಒಂದಿಷ್ಟು ತಳಮಳಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಜಾನಪದ ಸಾಹಿತ್ಯದ ಸೊಗಡೇ ಅದ್ಬುತ. ಕವಿ ಮಹಲಿಂಗರಂಗರು ಹೇಳಿರುವಂತೆಯೇ “ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ,ಅಳಿದ ಉಷ್ಣದ ಹಾಲಿನಂದದಿ ಕನ್ನಡ ಸಾಹಿತ್ಯ”. ಈ ಜಾನಪದ ಸಾಹಿತ್ಯವೂ  ಹಾಗೆಯೇ ಅಷ್ಟೇ ಸುಲಭದ ಮತ್ತು ಓದುವಾಗ ಮನಸ್ಸಿಗೆ ತುಂಬಾ  ಮುದ ನೀಡುವಂತದ್ದು. ಜಾನಪದ ಸಾಹಿತ್ಯವನ್ನು ಆಗಲೇ ಗುರುತಿಸಿ ಪ್ರಶಂಸೆಯನ್ನು ನೀಡಿದ್ದೇ ಹೌದಾದರೆ ಮಹಿಳೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಲೋ ಏನೋ?ಯಾರಿಗೆ ಗೊತ್ತು. ಹಾಗೆಯೇ ಅಲ್ಲಿಂದ ಮಹಿಳಾ ಸಾಹಿತ್ಯದ ಉಲ್ಲೇಖದ ಬಗ್ಗೆ ಯೋಚಿಸುತ್ತಾ ಹೋದರೆ ಸಿಗುವುದು ವೈಭವದ ಸಾಮ್ರಾಜ್ಯವಾದ ವಿಜಯನಗರ ಕಾಲದಲ್ಲಿಯೇ ಗಂಗಾದೇವಿಯ” ವೀರ ಕಂಪಣರಾಯ ಚರಿತ” ಮತ್ತು ತಿರುಮಲಾಂಬ ಅವರು ರಚಿಸಿದಂತ “ವರದಾಂಬಿಕ ಪರಿಣಯಂ”. ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಅದೆಷ್ಟು ಬಾರಿ ಬಣ್ಣಿಸಿದರೂ ಸಾಲದು!! ಆ ಕಾಲದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ!! ಅಂದು ಹಂಪಿ ಪಟ್ಟಣವನ್ನು ಕಂಡು ಬೆರಗಾದ ಪೋರ್ಚುಗೀಸ್ ಪ್ರವಾಸಿಗ ದ್ವಾರ್ಟ್ ಬಾರ್ಬೊಸಾ, “ವಜ್ರ, ಮುತ್ತು, ರೇಶ್ಮೆ, ಬೆಲೆಬಾಳುವ ವಸ್ತುಗಳು ಬೀದಿಗಳಲ್ಲೇ ಮಾರಲ್ಪಡುತ್ತದೆ” ಎಂದು ಸಾರಿ ಹೇಳಿದ್ದ!! ಚೈನಾ ದೇಶದ ಬೌದ್ಧ ಬಿಕ್ಷು ಹೂಯನ್ ತ್ಸಾಂಗ್, “ವಿಜಯನಗರದ ಜನರು ಬಹಳ ಸಂತೋಷದಿಂದಿರುವವರು, ಎಲ್ಲಿ ನೋಡಿದರೂ ಭವ್ಯವಾದ ಅರಮನೆಗಳೇ, ರಾಜ ಬೀದಿಗಳಲ್ಲಿ ಅಸಂಖ್ಯಾತ ಮೊತ್ತದ ಚಿನ್ನ, ವಜ್ರ ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ಮಾಡುತ್ತಾರೆ. ನಿಜವಾಗಿಯೂ ಇದೊಂದು ಸ್ವರ್ಗ ಭೂಮಿ” ಎಂದಿದ್ದ!! ಎನ್ನುವ ವಿಷಯವನ್ನು ನಾವೆಲ್ಲ ಇತಿಹಾಸದಲ್ಲಿ ಓದಿಯೇ ಇರುತ್ತೇವೆ. ಈ ಎಲ್ಲ ವೈಭವದ ನಡುವೆ ಮಹಿಳಾ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಅವರೇ ಕೊಡಲಿಲ್ಲವೋ, ಮಹಿಳೆಯರೇ ತಮ್ಮ ಸುತ್ತಲಿನ ಪರಿಧಿಯನ್ನು ಬಿಟ್ಟು ಹೊರಗೆ ನುಸುಳಿ ಬರಲಿಲ್ಲವೋ ಗೊತ್ತಿಲ್ಲ. ಉಳಿದ ರಾಜ ಮಹಾರಾಜರ ಕಾಲದಲ್ಲೂ ಸಹ ಪುರುಷರ ಸಾಹಿತ್ಯದಷ್ಟು ಸ್ತ್ರೀ ಸಾಹಿತ್ಯ ಪ್ರಚಾರಕ್ಕೆ ಬರದೇ ಹೋಯಿತು. ಒಂದಿಷ್ಟು ಆಧುನಿಕ ಕನ್ನಡ ಸಾಹಿತ್ಯದ ಕಡೆ ಕಣ್ಣಾಡಿಸಿ ನೋಡಿದರೆ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಇಂದು ಮಹಿಳೆ ಪರಿಣಿತಳಾಗಿದ್ದಾಳೆ. ನನಗಂತೂ ದ್ವಿತೀಯ ಪಿಯುಸಿ ಓದುವಾಗ ಶ್ರೀಮತಿ ನೇಮಿಚಂದ್ರರು ಬರೆದ “ಆಯ್ಕೆ ಇದೆ ನಮ್ಮ ಕೈಯಲ್ಲಿ” ಎನ್ನುವ ಅನುಭವ ಕಥನವಂತೂ ನಾ ಓದಿದಾಗ ನನ್ನ ಮನಸನ್ನೇ ಸೂರೆ ಮಾಡಿತ್ತು. ನಿರಾಸೆಯ ಮಡಿಲಿಗೆ ಬೀಳದೇ ಎಚ್ಚರಿಕೆಯ ಎಲ್ಲೆಯಲ್ಲಿ ಬದುಕನ್ನು ಬದಲಿಸಿಕೊಳ್ಳುವ, ಸಾಧಿಸುವ ತಾಳ್ಮೆ, ಸಹನೆಗಳ ಅಗತ್ಯವನ್ನು ತುಂಬಾ ಮನಮುಟ್ಟುವಂತೆ ಅಲ್ಲಿ ಬರೆದಿದ್ದಾರೆ. ಹೀಗೆ ಮಹಿಳಾ ಸಾಹಿತ್ಯವನ್ನು ಕಟ್ಟಿ ಇಲ್ಲಿಯವರೆಗೆ ತಂದು ನಿಲ್ಲಿಸಿದ ಕೀರ್ತಿ ನಮ್ಮ ಸಾರ ಅಬೂಬಕ್ಕರ, ಮಾಲತಿ ಪಟ್ಟಣಶೆಟ್ಟಿ, ನೇಮಿಚಂದ್ರ, ಸುಧಾಮೂರ್ತಿ, ಟಿ. ಸುನಂದಮ್ಮ, ಲಲಿತಾ ಸಿದ್ಧಬಸವಯ್ಯ, ಸುಕನ್ಯಾ ಮಾರುತಿ, ಹೀಗೆ ಹೆಸರುಗಳ ಪಟ್ಟಿ ಒಂದರ ನಂತರ ಒಂದರಂತೆ ಬೆಳೆಯುತ್ತಲೇ ಹೋಗುತ್ತದೆ. ದ. ರಾ. ಬೇಂದ್ರೆಯವರು ತಮ್ಮ ಭಾವಗೀತೆಯಾದ “ಹಕ್ಕಿ ಹಾರುತಿದೆ ನೋಡಿದಿರಾ” ಇದರಲ್ಲಿ ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಿ ಅನೇಕಾನೇಕ ಬದಲಾವಣೆ ಆಗುತ್ತಲೇ ಇರುತ್ತದೆ, ಇಂದು ಇದ್ದಂತೆ ಮುಂದೆ ಎಂದಿಗೂ ಇರಲಾರದು ಎನ್ನುವ ಮಾತಿನಂತೆ ಕಾಲಘಟ್ಟಗಳು ಬದಲಾದ ಹಾಗೆ ಮಹಿಳಾ ಸಾಹಿತ್ಯ ಲೋಕ ಕೂಡ ತುಂಬಾ ಮುಂದುವರಿದಿದೆ. ಪ್ರವಾಸ, ಕೃಷಿ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಹೀಗೆ ಎಲ್ಲವನ್ನೂ ಒಳಗೊಂಡ ಸಾಹಿತ್ಯವನ್ನು ರಚಿಸುವಷ್ಟು ಪ್ರಬಲವಾಗಿದ್ದಾಳೆ. ಹೀಗಿರುವಾಗ ಅವಳಿಗೆ ಅಧ್ಯಕ್ಷೀಯ ಗದ್ದುಗೆ ಸಿಗಲೇ ಬೇಕು. “ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು” ಇನ್ನೂ ಕಸಾಪನ ಅಧ್ಯಕ್ಷತೆಯ ಸ್ಥಾನದಲ್ಲಿ ಕೂರಲು ಆಕೆಗೆ ಅರ್ಹತೆ ಇಲ್ಲವೇನು?? ಅಥವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವೆಂಬ ತೊರೆಗೆ ಸ್ತ್ರೀ ಮತ್ತು ಪುರುಷರೆಂಬ ಪ್ರತ್ಯೇಕ ಧಾರೆಗಳ ಹರಿವೇನಾದರು ಇದೆಯೇನು? ಅಧ್ಯಕ್ಷ ಪದವಿಯ ಆಯ್ಕೆಯಲ್ಲಿ ಮಹಿಳೆಯರಿಗೂ ಮೀಸಲಾತಿ ಸೌಲಭ್ಯ ಸಿಗುವಂತಾಗಿ ಇನ್ನೂ ಹೆಚ್ಚಿನ ಉತ್ತೇಜನ ಅವರಿಗೆ ದೊರಕುವ ಮೂಲಕ ಸಾಹಿತ್ಯ ಲೋಕ ಅನೇಕಾನೇಕ ಮಹಿಳಾ ಸಾಹಿತ್ಯ ರತ್ನದ  ಮಣಿಗಳನ್ನು ಪಡೆದು ಸಾಹಿತ್ಯ ಕ್ಷೇತ್ರ ಬಾನೆತ್ತರಕ್ಕೆ ಬೆಳೆಯಲಿ ಎನ್ನುವುದು ನನ್ನದೊಂದು ಆಶಯ. “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ********************************** ಪೂಜಾ ನಾರಾಯಣ ನಾಯಕ್..

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು Read Post »

ಇತರೆ

ಮೂವರು ವೃತ್ತಿ ಕಲಾವಿದರ ಕಣ್ಮರೆ

ಲೇಖನ ಮಲ್ಲಿಕಾರ್ಜುನ ಕಡಕೋಳ ಅಂಜಲಿದೇವಿ ಅವರು ಎಂಟುಮಂದಿ ಅಕ್ಕತಂಗಿಯರು. ಎಂಟೂ ಮಂದಿಯು ವೃತ್ತಿರಂಗಭೂಮಿ ಅಭಿನೇತ್ರಿಯರು. ಆದವಾನಿ ಸುಭದ್ರಮ್ಮ, ಆದವಾನಿ ಸೀತಮ್ಮ, ಆದವಾನಿ ನಾಗರತ್ನಮ್ಮ… ಹೀಗೆ ಗದಗ ಪ್ರಾಂತ್ಯದ ಸಾಂಸ್ಕೃತಿಕ ಲೋಕದಲ್ಲಿ ಆಗ ಆದವಾನಿ ಸೋದರಿಯರದು ಬಲುದೊಡ್ಡ ಐಕಾನ್ ಹವಾ. ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಿಧನರಾದ ಜಿ.ಎನ್.ಅಂಜಲಿದೇವಿ (೭೨ ) ಆದವಾನಿ ಸೋದರಿಯರ ಬಳಗದ ಕೊನೆಯ ಕೊಂಡಿ. ಇವರ ತಂದೆ ಆ ಕಾಲದ ಸಂಗೀತ ವಿದ್ವಾಂಸ. ಹೆಸರಾಂತ ಮೃದಂಗ ವಾದಕ. ತಂದೆಯಿಂದ ಬಳುವಳಿಯಾಗಿ ಬಂದುದು ಸಂಗೀತ ಮತ್ತು ರಂಗಭೂಮಿ ಅಭಿನಯ ಕಲೆ. ಅಂಜಲಿದೇವಿಯ ಬಾಳಸಂಗಾತಿ ನೀಲಕಂಠಪ್ಪ ಹಾರ್ಮೋನಿಯಂ ನುಡಿಸುವಲ್ಲಿ, ರಾಗಸಂಯೋಜನೆ ಮಾಡುವಲ್ಲಿ ಸುಪ್ರಸಿದ್ಧರು. ಅಷ್ಟಕ್ಕೂ ಅವರೆಲ್ಲರೂ ವೀರೇಶ್ವರ ಪುಣ್ಯಾಶ್ರಮದ ಗರಡಿಯಲ್ಲಿ ಸಾಮು ತೆಗೆದವರು. ಅಂಜಲಿದೇವಿ ರಂಗಸೇವೆಗೈಯ್ದ ಪಡೇಸೂರ ಕಂಪನಿ, ಚಿತ್ತರಗಿ ಕಂಪನಿ, ಸುಳ್ಳದ ಕಂಪನಿ, ಅರಿಷಿಣಗೋಡಿ ಕಂಪನಿ, ಏಣಗಿ ಬಾಳಪ್ಪ ಕಂಪನಿ.. ಈ ಎಲ್ಲ ನಾಟಕ ಕಂಪನಿ ಹೆಸರುಗಳೇ ಅಭಿನೇತ್ರಿ ಅಂಜಲಿದೇವಿಯ ಔನ್ನತ್ಯಕ್ಕೆ ರಂಗಸಾಕ್ಷಿ. ಕೆಲಕಾಲ ನಾಟಕ ಕಂಪನಿ ಮಾಡಿ ಅಂಜಲಿದೇವಿ ಕೈ ಸುಟ್ಟುಕೊಂಡರು. ದ್ರೌಪದಿ ಪಾತ್ರಕ್ಕೆ ಮನ್ಸೂರು ಸುಭದ್ರಮ್ಮ ರಾಜ್ಯಮಟ್ಟದಲ್ಲಿ ಮಹೋನ್ನತಿ ಸಾಧಿಸಿದರೆ ಅಂಜಲಿದೇವಿ ಗದಗ ಸೀಮೆಯಲ್ಲಿ ಅಂತಹುದೇ ಹೆಸರು ಮಾಡಿದವರು. ಅಷ್ಟಕ್ಕೂ ಅವರದು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬ. ಇಟಗಿ ಭೀಮಾಂಬಿಕೆ ಪಾತ್ರದಲ್ಲಿ ತಾದಾತ್ಮ್ಯ ಸಾಧಿಸಿದ ಅವರು ಎಚ್.ಆರ್.ಜಿ. ಕ್ಯಾಂಪಲ್ಲಿ ಭೀಮಾಂಬಿಕೆ ದೇವಸ್ಥಾನವನ್ನೇ ಸ್ಥಾಪಿಸಿದರು. ಕಡೆಗೆ ಭೀಮಾಂಬಿಕೆಯ ಸನ್ನಿಧಿಯಲ್ಲೇ ರಂಗಸಾಯುಜ್ಯ ಕಾಣಬೇಕಾಯಿತು. ಸಿ. ರಮೇಶ ನಾಟಕ ಕಂಪನಿಗಳ ವಲಯದಲ್ಲಿ ದಾವಣಗೆರೆ ರಮೇಶ ಎಂತಲೇ ಚಿರಪರಿಚಿತ ಹೆಸರು. ಐವತ್ತೆರಡು, ಸಾಯುವ ವಯಸ್ಸಲ್ಲ. ಖಳನಾಯಕ ಪಾತ್ರಕ್ಕೆ ಹೇಳಿ ಮಾಡಿಸಿದ ಫೇಷಿಯಲ್ ಎಕ್ಸ್ ಪ್ರೆಸೆನ್ ಅಲ್ಲಲ್ಲ ಟ್ಯಾಲೆಂಟ್. ಕಣ್ಣು, ಹುಬ್ಬು, ಹಣೆ, ತಲೆಗೂದಲುಗಳಲ್ಲೇ ಅಭಿನಯದ ಅಮೋಘ ಚತುರತೆ ತೋರುವಲ್ಲಿ ರಮೇಶ ಪರಿಣತ. ಆತ ನಾಯಕ ಪಾತ್ರ ಮಾಡಿದರೂ ಪ್ರೇಕ್ಷಕರಿಗೆ ಖಳನಾಯಕನದೇ ಖಾಸಾ ಕನಸು. ರಮೇಶ ಮಾಡುವ ಹಾಸ್ಯ ಪಾತ್ರದಲ್ಲೂ ವಿಲನ್ ಚಹರೆಗಳ ಹುಡುಕಾಟ ನಡೆಸುವಷ್ಟು ಪ್ರೇಕ್ಷಕರಲ್ಲಿ ಖಳನಾಯಕ ರಮೇಶ್ ಅಭಿನಯ ಪ್ರಭಾವದ ಬೇರುಗಳು. ಶರೀರ ಮತ್ತು ಶಾರೀರ ಎರಡಲ್ಲೂ ರಮೇಶ ಲಕ್ಷಣವಂತ. ಸಿನೆಮಾನಟ ಧೀರೇಂದ್ರ ಗೋಪಾಲ, ವಜ್ರಮುನಿ ಅವರನ್ನು ಆವಾಹಿಸಿಕೊಂಡು ರಮೇಶ ಅಭಿನಯಿಸುತ್ತಿದ್ದರೆ ಪ್ರೇಕ್ಷಕರಿಗೆ ಹಂಡೆಹಾಲು ಕುಡಿದ ಸಂಭ್ರಮ. ” ಅಂಣಾ ನನ್ನೊಳಗಿನ ಕಲಾವಿದ ರಮೇಶನಿಗಿಂತಲೂ ಸಿನಿಮಾ ನಟರನ್ನೇ ನನ್ನ ಮೂಲಕ ನೋಡುವಲ್ಲಿ ಪ್ರೇಕ್ಷಕರು ಇಷ್ಟ ಪಡುತ್ತಾರೆ. ನನಗೆ ಅನ್ನ ನೀಡುವ ಪ್ರೇಕ್ಷಕರು ಮುಖ್ಯ. ಅವರಿಗೆ ನನ್ನೊಳಗಿನ ನಾನು ಯಾವಾಗ ಬೇಕೆಂದು ಬಯಸುತ್ತಾರೋ ಆಗ ಕಲಾವಿದ ಅಪ್ಪಟ ರಮೇಶ ಅಭಿನಯಿಸುತ್ತಾನೆ.” ಹೀಗೆ ನನ್ನೊಂದಿಗೆ ಮಾತಾಡುವಾಗ ಅನೇಕ ಬಾರಿ ಹೇಳುತ್ತಿದ್ದ. ನಿಸ್ಸಂದೇಹವಾಗಿ ರಮೇಶ ಅನುಕರಣೆಯಿಂದಲೇ ಪ್ರಸಿದ್ದಿ ಪಡೆದವರಲ್ಲ. ಅವನೊಳಗೊಬ್ಬ ಅನನ್ಯತೆಯ ನಾಯಕ ನಟನಿದ್ದ. ಆರ್ದ್ರತೆ ತುಂಬಿದ, ಉಕ್ಕುವ ಸಂವೇದನೆಯ ಅಪ್ರತಿಮ ಕಲಾವಿದನಿದ್ದ. ಓರ್ವ ಸಹೃದಯಿ ಸನ್ಮಿತ್ರನಿದ್ದ. ಕಂಪನಿ ಸಾಂಗತ್ಯದ ರೂಢಿಗತ ನಡವಳಿಕೆಗಳನ್ನು ಮೀರದ ದುಃಸಾಧ್ಯತೆಗಳ ನಡುವೆ ರಂಗಕರ್ಮಿ ರಮೇಶನ ಅಕಾಲಿಕ ನಿರ್ಗಮನ ಕಂಪನಿ ನಾಟಕಗಳಿಗೆ ತುಂಬಲಾಗದ ನಷ್ಟವೇ ಸೈ. ಕೋಗಳಿ ಪಂಪಣ್ಣ ಈ ಹೆಸರಿನಲ್ಲೇ ಸಾರಸ್ವತದ ಫೀಲಿಂಗ್ಸ್. ಸಂಗೀತ ಮತ್ತು ಸಾಹಿತ್ಯ ಸಮೃದ್ಧಿಯ ತುಳುಕಾಟ. ಕೋಗಳಿ ಎಂಬುದು ಕೋಗಿಲೆಯ ಮತ್ತು ಪಂಪಣ್ಣ ಎಂಬುದು ಪಂಪಕವಿಯ ನೆನಪು ತರಿಸುತ್ತವೆ. ಹೌದು ಪಂಪಣ್ಣನ ರಂಗಬದುಕು ಈ ಮಾತಿಗೆ ಹೆಚ್ಚು ಹತ್ತಿರ. ಅಷ್ಟಕ್ಕೂ ಬಳ್ಳಾರಿ ಜಿಲ್ಲೆಯ ಕೋಗಳಿಯು ಮಹಾಕವಿ ಶಿವಕೋಟಾಚಾರ್ಯರ ಕಾಯಕಭೂಮಿ. ಹುಟ್ಟಿನಿಂದಲೇ ಪೌರಾಣಿಕ ನಾಟಕಗಳಿಗೆಂದೇ ಶರೀರ ಮತ್ತು ಶಾರೀರ ಕಟ್ಟಿಕೊಂಡೇ ಬಂದಂತಹ ರಂಗ ಸಂಪನ್ನತೆ ನಮ್ಮ ಪಂಪಣ್ಣನದು. ಹದಿನಾಲ್ಕನೇ ವಯಸಿಗೆ ಸೀತೆಯ ಪಾತ್ರ. ದಶಕಕಾಲ ಹಲವಾರು ಸ್ತ್ರೀ ಪಾತ್ರಗಳಲ್ಲಿ ಶಹಬ್ಬಾಶಗಿರಿ. ನಂತರ ಪೌರಾಣಿಕ ನಾಟಕಗಳಲ್ಲಿ ಮುನ್ನಡೆ ಸಾಧಿಸಿದ ಪಂಪಣ್ಣ ಹಿನ್ನಡೆಗೆ ತಿರುಗಲಿಲ್ಲ. ವೃತ್ತಿ ನಾಟಕಗಳ ಮೂಲಕ ಗ್ರಾಮೀಣ ರಂಗಭೂಮಿಯ ಭೂಮತ್ವ ಮೆರೆದ ಪಂಪಣ್ಣ ಆಧುನಿಕ ರಂಗಭೂಮಿಯ ಸಂಗ್ಯಬಾಳ್ಯ, ಅಂಗುಲಿಮಾಲ, ಆಮ್ರಪಾಲಿ ಮೊದಲಾದ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದ ಕೃಷ್ಣನ ಪಾತ್ರ ಹೊರತು ಪಡಿಸಿ ಬಾಕಿ ಎಲ್ಲ ಪುರುಷ ಪಾತ್ರಗಳಲ್ಲಿ ಮನೋಜ್ಞ ಅಭಿನಯ. ಗುರುಮುಖೇನ ಸಂಗೀತ ಕಲಿತು ಕಂದಪದ್ಯಗಳನ್ನು ತುಂಬಾ ಸೊಗಸಾಗಿ ಹಾಡುವಲ್ಲಿ ಪರಿಣಿತರು. ಇದು ಯಾರತಪ್ಪು? ಯಾರು ನನ್ನವರು? ಇವನು ಗೆಳೆಯನೇ? ಹೀಗೆ ಪ್ರಶ್ನಾರ್ಥಕ ಚಿಹ್ನೆಹೊತ್ತ ನಾಟಕಗಳ ಮತ್ತು ಗುರುಭಕ್ತಿ ಗೀತಾಂಜಲಿ ಎಂಬ ಕವನ ಸಂಕಲನದ ರಚಯಿತೃ. ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಮೋಘ ಅಭಿನಯ, ಮುನ್ನೂರಿಪ್ಪತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ ಹೆಗ್ಗಳಿಕೆ ಪಂಪಣ್ಣರದು. ಲಾಲಿತ್ಯದ ಮಾತುಗಳ ಈ ವಾಗ್ಮಿ ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರ. ತುಂಬಾ ತಡವಾಗಿ ಪತ್ತೆಯಾದ ಕ್ಯಾನ್ಸರ್ ನಿಂದ ಬಳಲಿ ಎಪ್ಪತ್ತಾರನೇ ಏರುವಯಸ್ಸಲ್ಲಿ ನಿಧನ. *************************************************************

ಮೂವರು ವೃತ್ತಿ ಕಲಾವಿದರ ಕಣ್ಮರೆ Read Post »

You cannot copy content of this page

Scroll to Top