Category: ಕಾವ್ಯಯಾನ

ಕಾವ್ಯಯಾನ

ಹೇ ದೇವಾ

ಹೇ ದೇವಾ ಗಂಗಾಧರ ಬಿ ಎಲ್ ನಿಟ್ಟೂರ್ ನಾನಾ ವಿಧದ ಶೃಂಗಾರವೈಭವದ ಅಲಂಕಾರಮನಬಂದಂತೆ ಜೈಕಾರಅಡ್ಡಬಂದವರಿಗೆ ಹೂಂಕಾರಅವ್ಯಾಹತ ಶವದ ಮೆರವಣಿಗೆಯುಗಯುಗಾಂತರ ದೈವ ಧರ್ಮದ ಸುಳಿಯಲಿಗಿರಕಿ ಮನುಷ್ಯತ್ವದ ನೆಲೆನಾಕ ನರಕಕೆ ನೈವೇದ್ಯ ಹಿಡಿದ ಗುತ್ತಿಗೆದಾರರ ಕಪಿಮುಷ್ಟಿಯಲಿನಿಜ ಬದುಕಿನ ಕಗ್ಗೊಲೆ ತನ್ನ ಬೇಲಿಯೊಳಗೆಎನಿತು ಮುಳ್ಳುಗಳು ಮಾನವಚುಚ್ಚಿದರೂ ರಕುತ ಹೀರಿದರೂಬೇಲಿಯೊಳಗೇ ಅರಳುವ ಭಾವ ಇದೇನು ಕುರಿಗಳ ಬಲಿಯೋಗಾವಿಲರ ಭಂಡತನವೋಸಾತ್ವಿಕರ ಮೌಢ್ಯದ ಕನ್ನಡಿಯೋಅಂತೂ ಲೋಕಕಿನ್ನೂನಿನ್ನಾಗಮನದ ನಿರೀಕ್ಷೆ ಹೇ ದೇವ ***************************

ಗಜಲ್

ತುಂಟ ಕಂಗಳು ನಿನ್ನ ಹುಡುಕೋದನ್ನು ಮಾತ್ರ ಕಲಿತಿದೆ
ಜೇನ ತುಟಿಗಳು ನಿನಗಾಗಿ ನಗೋದನ್ನು ಮಾತ್ರ ಕಲಿತಿದೆ

ಗಜಲ್

ಗಜಲ್ ಯಾಕೊಳ್ಳಿ.ಯ.ಮಾ ನನ್ನೊಳಗಿನ ‌ನಿನ್ನನ್ನು ನಾನು ಹುಡುಕುತ್ತಿದ್ದೇನೆ‌ ಗೆಳತಿನಿನ್ನ ಅಖಂಡ ಪ್ರೀತಿಗೆ ಶರಣಾದವನು‌ ನಾನು ಗೆಳತಿ ಇದು ಪ್ರಾಮಾಣಿಕರಿಗೆ ಬೆಲೆ ಕೊಡುವ ಲೋಕವಲ್ಲ ಗೆಳತಿಇಲ್ಲಿ ಗಿಲೀಟು ನಾಣ್ಯಗಳೇ ಬಹಳ ಹೊಳೆಯುತ್ತವೆ ಗೆಳತಿ ಬೆಳಕು ನೀಡುವ ಸೂರ್ಯ ಚಂದ್ರರನ್ನೆ ಸಂಶಯಿ ಸುವಾಗಜೀವನಾಡಿಯಾದ ಹರಿವ ನೀರನ್ನೇ ರಾಡಿಗೊಳಿಸಿದಾಗ ನಾವೆಷ್ಟರವರು ಗೆಳತಿ ಸಂಶಯದ ಬೇಲಿಯ‌ ಮೇಲೆಯೆ ನಮ್ಮ‌ಪ್ರೇಮದ ಬಳ್ಳಿ ಹೂ ಬಿಡಬೇಕುಅರಳಿ ಘಮ‌ಪಸರಿಸುವ ಪಕಳೆಗಳ ಅವರು ಮೂಸಲಿ ಗೆಳತಿ ಎನಿತೊ ದಿನಗಳಿಂದ ನಡೆದು ಬಂದ ಇತಿಹಾಸವೇ ಹೀಗೆ ಗೆಳತಿನಿಜ ಪ್ರೇಮವೆಂಬುದು ಬೆಂಕಿಯಲ್ಲಿ […]

ಗಜಲ್

ಒಲವೆನ್ನುವುದು ಅಗಲಿಕೆಯಲ್ಲೇ ಮುಗಿವ ಮಾತೇನು?
ಅರೆಗಳಿಗೆಯಾದರೂ ಜೊತೆಯಾಗುವ ಕನಸುಗಳ ಹಿಡಿಯಬೇಕು.

ಇಳಿ ವಯಸಿನ ಒಡನಾಡಿ

ಇಷ್ಟಾದರೂ
ಒಬ್ಬಂಟಿ ಬದುಕು ನನ್ನ
ನನ್ನೊಳಗಿನ ನರನಾಡಿಗಳನ್ನ
ಕೊಂಚ ಕೂಡ ನುಚ್ಚುಗುಟ್ಟಲಿಲ್ಲ
ಒಂದೇ ಒಂದು ಘಳಿಗೆ…

ಗಜಲ್

ಪೂರ್ಣ ಚಂದ್ರನ ಕಾಂತಿಯ ಚಿರ ಶಾಂತಿಯರಮನೆಯ ಹೊಳಪಲ್ಲ ಒಲವು।
ಬೆಳಕ ನುಂಗಿದ ಕಾಳರಾತ್ರಿಗಳ ದಿಗಿಲುಗೊಂಡ ಸ್ಮಶಾನ ಮೌನಕು ಮಿಗಿಲು।।

ಭಾವನೆಗಳ ಸಂಘರ್ಷ..

ಚಿಂತೆಯಿಂದ ಕೂಡಿ ಸಂತೆಯಂತೆ ಆಗಿರುವ ನನ್ನ ಚಂಚಲ ಚಿತ್ತ
ಸಾಂತ್ವನದ ನುಡಿಗಳಿಗೆ ಹಾತೊರೆಯುತ್ತಿದೆ ನನ್ನ ಮನೋ ವೃತ್ತ..

ನಾನು ಗಂಡಾಗಿ ಹುಟ್ಟಿದ್ದಿದ್ದರೆ..

ಅನೇಕ ಬೇಸರಿಕೆ, ಹೇವರಿಕೆಯ
ನಡುವಿನ ಚಿಕ್ಕ ಪುಟ್ಟ ಆಸೆಗಳ,
ಸಣ್ಣ ಖುಷಿಗಳ ಆನಂದವಿದೆ.

ಗಜ಼ಲ್

ರೆಪ್ಪೆ ಕಂಗಳ ಕಾದಂತೆ ಕಾಪಿಟ್ಟ ಘಳಿಗೆಗಳು ಹಚ್ಚ ಹಸಿರು ಎಂದೂ
ಕಣ್ಣ ಕಡಲೀಗ ಉಕ್ಕುಕ್ಕಿ ಹರಿಯುತಿದೆ ಹೇಗೆ ತೊರೆಯಲಿ ನಿಮ್ಮನು ?

Back To Top