Category: ಕಾವ್ಯಯಾನ

ಕಾವ್ಯಯಾನ

ರಾಜು ಹೆಗಡೆಯವರ ಕವಿತೆಗಳು

ಕವಿತೆ ರಾಜು ಹೆಗಡೆಯವರ ಕವಿತೆಗಳು ಸಂಜೆಯ ವಾಕಿಂಗ್        ಇನ್ನೂ ಚುಕ್ಕಿಗಳು ಚಿಗುರದ ಆಕಾಶ ತೆಳುವಾಗಿ ಬೆಳಕು ಕತ್ತಲೆ ಬೆರೆತು ಉರಿಯುವ ಸಮಯ. ಆಗಲೇ ಲೈಟನ್ನು ಹೊತ್ತು ಓಡುವ ಕಾರು, ಮೋಟಾರು. ನಡೆಯಲಾರದೆ ನಿಂತ ಬೀದಿ ದೀಪಗಳು ಕೂಗಿದರೆ ಮಾತ್ರ ಕೇಳುವ ದೂರದ ಸಾಲು ಮರಗಳಲ್ಲಿ ಮೊರೆವ ಹಕ್ಕಿಗಳ ಮೌನ ಈಗಷ್ಟೇ ಬಿಟ್ಟು ಹೋದ ಪ್ರೇಮಿಗಳ ಪಿಸು ಮಾತಿನ ಬಿಸಿಯ ಹೀರುತ್ತ, ಸಾವಕಾಶವಾಗಿ ಒಂದೊಂದೆ ಹೆಜ್ಜೆಯಲ್ಲಿ ದಾಟುತ್ತಿದ್ದೇನೆ ಮರಗಳನ್ನು ದೀಪಗಳನ್ನು….. ———— ೨ ತಿರುಮಲೇಶರ….. ಅವರೀಗ ಹೈದರಾಬಾದನಲ್ಲಿದ್ದಾರೆ […]

ಹಕ್ಕು

ಕವಿತೆ ಹಕ್ಕು ರಜನಿ ತೋಳಾರ್ ನಿನ್ನನೆನಪುಗಳ ಶಿಖರದಮೇಲೆಮನೆಯಕಟ್ಟಿರುವೆನೀಚೂರುಚೂರುಮಾಡಿದಕನಸುಗಳಚೂರುಗಳ ಮೆಟ್ಟಿಲುನೋಡಿದಾಗಲೆಲ್ಲಾಪಾದಗಳಲ್ಲಿನೆತ್ತರು! ಮಂದಹಾಸದಮರೆಯಲ್ಲಿಬಚ್ಚಿಡುವಹನಿಗಳಕತ್ತಲಲ್ಲಿಬಿಚ್ಚಿದಾಗಹೊತ್ತಿಕೊಳ್ಳುವಹಣತೆಯಪ್ರತಿಉಸಿರಿನಲ್ಲೂನಿನ್ನದೇನಗುವಿನನೆರಳು! ನಿನ್ನಬರುವಿನಹಂಬಲವೇನಿಲ್ಲ…ಈನೆನಪುಗಳಮೇಲೆಹಕ್ಕುಕೇವಲನನ್ನದಾಗಿರಲಿಎಂಬುದೊಂದೇಛಲವು! ಹಕ್ಕುಕಾಯಿದೆಗಳಜಾತ್ರೆಗೆಜೊತೆಗೊಯ್ದುಕೊಡಿಸಿಹಾಳೆತುಂಬಾಪದಗಳಕ್ಷಣದಲ್ಲೇಕಣ್ಮರೆಯಾದೆಅಂದುಉಡುಗೊರೆಯಕೊಟ್ಟು! ಪದಗಳಬೇಡಿಯಿಂದಅಕ್ಷರಗಳಬಿಡಿಸಿಬಿತ್ತಿರುವೆಬೇಲಿಸುತ್ತಲೂನಿನ್ನನೆನಪಿನಲ್ಲಿಚಿಗುರಿಕವನವಾಗಲು!

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಜ್ಯೋತಿ ಡಿ.ಬೊಮ್ಮಾ ಎಳ್ಳು ಬೆಲ್ಲ ಜೊತೆಗೆ ಬೆಸೆದುಸಮರಸದಲ್ಲಿ ಬಾಳು ಹೊಸೆದುನೀಗಲಿ ಮನದ ಮತ್ಸರಬರುವ ಹತ್ತಿರ ಹತ್ತಿರ. ಸುಗ್ಗಿಯ ಸೊಬಗಲಿ ಹಿಗ್ಗಿನಾಭರಣಕಟ್ಟಿ ಮನೆ ಮನೆಗೂ ತಳಿರು ತೋರಣಹಾಕಿ ಮನೆ ಮುಂದೆ ರಂಗವಲ್ಲಿ ಶ್ರೀಕಾರಬಂತು ಬಂತು ಊರಿಗೆ ಹಿಗ್ಗಿನ ಹರಿಕಾರ. ನವಯುಗದ ಪಥವ ಹಿಡಿದುಉತ್ತರಾಯಣ ಪಣ್ಯಕಾಲವ ಸೇರಲುಹೊಸ ಲಯಕ್ಕೆ ಬದಲಾಯಿಸಿತು ಬದುಕು ಪಥಲಭಿಸಲಿ ಸಕಲರಿಗೂ ನೆಮ್ಮದಿ ಅನವರತ. ಎಳ್ಳು ಬೆಲ್ಲ ತಿಂದು ದೂರಾಗಲಿಮನಮನದಲ್ಲೂ ಬತ್ತಿದೊಡಕುಶಾಂತಿಯಲ್ಲಿ ನೆಟ್ಟ ಹಗೆಯ ಕನಸೂಓ ಸಂಕ್ರಾಂತಿಯೆ..ನೀ ಎಂದೆಂದಿಗೂ ಶುಭವ ಒಲಿಸು. […]

ನಂಟಿನ ಗುಟ್ಟು..

ಕವಿತೆ ನಂಟಿನ ಗುಟ್ಟು.. ಜ್ಯೋತಿ ಡಿ.ಬೊಮ್ಮಾ. ನೀರೆಗೂ ಸೀರೆಗೂ ಅಂಟಿದನಂಟನ್ನು ಬಲ್ಲಿರಾ..ಪಡೆದಷ್ಟು ಹೆಚ್ಚಾಗುವ ಹಂಬಲದಗುಟ್ಟೆನು ಗಮನಿಸಿದ್ದಿರಾ.. ಅಂಚು ಸೆರಗಿನ ವರ್ಣನೆಬಣ್ಣಿಸುವದೆ ಒಂದು ಕಲೆ.ಆ ವರ್ಣ ನೆ ಮುಂದೆ ಎಷ್ಟಿದ್ದರೇನುಸೀರೆಯ ಬೆಲೆ. ಎಷ್ಟು ಕೊಂಡರು ತೀರದಮನದ ಹಂಬಲ.ಇನ್ನೊಂದು ಮತ್ತೊಂದು ಎಂದುಬಯಸುವದು ಮನ ಚಂಚಲ. ಕಂಚಿ ಪಿತಾಂಬರ ರೇಷ್ಮೆಹೆಸರಿರುವವು ಅನೇಕ.ಕೆಂಪು ಹಳದಿ ಗುಲಾಬಿಗಳಲ್ಲಿಕಂಗೊಳಿಸುವದನ್ನು ನೋಡುವದೆ ಪುಳಕ. ಮೈಗೆ ಒಪ್ಪುವಂತೆ ಉಟ್ಟುಗತ್ತಿನ ಕುಪ್ಪಸ ತೊಟ್ಟುಚಿಮ್ಮುವ ನೀರಿಗೆಗಳನ್ನೆತ್ತಿಗಾಳಿಗೆ ಹಾರುವ ಸೆರಗಿಗೆ ಪಿನ್ನಿನ ಹೂ ಮುಡಿಸಿಹಂಸ ನಡಿಗೆಯಲ್ಲಿ ನಡೆವ ನೀರೆಯೆ.. ನಿನಗೂ ಸೀರೆಗೂ ಅಂಟಿದನಂಟಿನ […]

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” […]

ಮಿಂಚು ನಾದದಲೆಯ ಮೇಲೆ

ಕವಿತೆ ಮಿಂಚು ನಾದದಲೆಯ ಮೇಲೆ ನೂತನ ದೋಶೆಟ್ಟಿ ನಗುವ ಹೂಗಳು ಹಲವುಬೇಲಿಗುಂಟ ಬೆಳೆದಿವೆಕೈಚಾಚುವ ಆಸೆ ಮಾತ್ರ ಇಲ್ಲ ಕಣ್ಣು ಮಿಟುಕಿಸಿದ ನಕ್ಷತ್ರದ ಮೋಹಏಕೆಂದು ಹೇಳಲಿ? ಹಗಲು ಕಾಣುವ ಹೂಗಳಅಂದ ಚಂದ ಕಂಪುಯಾವುದೂ ಕಂಪಿಸಲೇ ಇಲ್ಲ ರಾತ್ರಿ ನಕ್ಕ ತಾರೆಗೆಒಲವೇ ಧಾರೆ ಎರೆದೆಹೊಳಪಿಗೊ ಚೆಲುವಿಗೊ ಹೇಳಲಾರೆ ಅಂತರಂಗವ ಆವರಿಸಿದ ಬೆಳಕುಮೂಲೆ ಮೂಲೆಯಲಿ ಮಿನುಗುತಿದೆಮಿಂಚುನಾದದಲೆಯ ಮೇಲೆಒಲುಮೆ ಹಾಯಿ ನಡೆಸಿದೆ ಸೊಗಸ ಸಂಗ ಸಾಕು ಇನ್ನುಪ್ರೀತಿ ತೊರೆಯು ಹರಿಯಲಿಬಾಳಿನಾಟದಂಕದಲ್ಲಿಬಣ್ಣ ಮೂಡಿ ಬರಲಿ **********************************

ಕನಸು

ಕವಿತೆ ಕನಸು ಮೋಹನ್ ಗೌಡ ಹೆಗ್ರೆ ಜಗದಗಲವ ಅಳೆದ ಕಣ್ಗಳುಎದೆಯದವ ತಟ್ಟಿದ ಮೌನ ಮಾತುಗಳುಅಮೂರ್ತ ವಿಸ್ಮಯಗಳ ಮೂಟೆ ಕಟ್ಟಿ ಮುದ್ದಾಡುತ್ತವೆನಮ್ಮೊಳಗೆ ಹೊಸ ಕನಸಿನ ಪರಪಂಚದೊಂದಿದೆ…….. ಕಣ್ಣಲ್ಲಿ ನೋಡದೇ ಇದ್ದರೂಕೈಯಲ್ಲಿ ಮುಟ್ಟದಿದ್ದರೂಅಲ್ಲೊಂದು ಕ್ಷಣಿಕ ಮೂರ್ತ ಸ್ಥಿತಿಪರಿಚಿತ ಅಪರಿಚಿತ ವ್ಯಕ್ತಿ ಜಾಗೆಗಳ ಅನಾವರಣ ಕನಸುಗಳಿಗೋ ಸಾಕಷ್ಟು ಕವಲುಗಳುಹೌದೆನಿಸುವ, ಬೇಕು, ಬೇಡವೆನಿಸೋನಮ್ಮದೇ ವಸ್ತು ವಿಷಯಗಳೇ ಕನಸಿನ ಒಡಲಾಳಆದರೂ ಹೋಲಿಕೆಯಾಗದ ಕನಸುಗಳೂ ಒಮ್ಮೊಮ್ಮೆ ಕನಸಿನ ನೂರು ಮುಖಗಳಲ್ಲಿಪ್ರೀತಿ, ಖುಷಿ, ಭಯ, ನಿರೀಕ್ಷೆಗಳಿದ್ದರೂಕಂಡು ಕಾಣದಾದ ಕನಸನೂಕ್ಷಣಿಕ ಮನದಾಳದಲ್ಲಿ ಇರಿಸಿಕೊಂಡಿದ್ದಿದೆ ಕನಸಿನ ವಿಳಾಸ ಪಡೆದು ಮಾತಾಡಬೇಕಿದೆಭ್ರಷ್ಟತೆ, […]

ಗಜಲ್

ಗಜಲ್ ಸರೋಜಾ ಶ್ರೀಕಾಂತ್ ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆ ಕೇಳು ಸಖಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆ ಕೇಳು ಸಖ ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನಒಲವರಿತ ಮುಂಗುರುಳಿಗೆ ಸ್ಪರ್ಶದ ಸಡಗರ ಕೇಳು ಸಖ ಸದ್ದಿಲ್ಲದ ಮೌನದೊಳಗೂ ನೂರೊಂದು ಮಾತುಗಳಿವೆಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿವೆ ಕೇಳು ಸಖ ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸಗೆಲುವಿನ ನಗೆ ನೀ ಬೀರುವಾಗ ಸೊಗಸಿದೆ ಕೇಳು ಸಖ ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ ***********************************

ಮಾಯಾವಿ 2020

ಕವಿತೆ ಮಾಯಾವಿ 2020 ರಜಿಯಾ ಕೆ ಭಾವಿಕಟ್ಟಿ ಅಳಿದು ಉಳಿದದ್ದು ಎಲ್ಲವೂನಿಗೂಢತೆಯ ಸಾರವನ್ನು ಹೊತ್ತು ತಂದು ತೇಲುವ ದೋಣಿಯಲ್ಲಿ ಜಲದ ಸುಳಿಯೇ ಇಲ್ಲದೆ ಮುಳುಗಿ ಸತ್ತಂತೆ ಭಾಸವಾಗಿತ್ತು ಅಂಧನಿಗೂ ಕುರಡನೆಂಬ ಹಣೆಪಟ್ಟಿ ಮೊದಲೇ ಇದ್ದರು ಹೊಸತರಹದ ಮುಖವಾಡದನೇತ್ರಗಳಿಗೆ ಬಣ್ಣಗಳ ಲೇಪಿಸಲಾಗಿತ್ತು ಕಾಣದಾ ಜೀವಯು ಎಂಬ ಸುಳ್ಳುಗಳ ಸೋಗಿಗೆ ಕಾಲವೇನಿಂತು ಮುನ್ನುಡಿ ಬರೆದಿತ್ತುಅದಕೆ ಸತ್ಯವೆಂಬಂತೆ ಸಮಯಸಾತು ನೀಡಿ ಗರ್ವಪಟ್ಟಿತ್ತು. ಬಿತ್ತಿದವನು ಬರೀಗೈಲಿ ಬೆತ್ತಲಾಗಿ ನಿಂತು ಪರರ ಪಾಲಿಗೆಹುಚ್ಚನಂತೆ ಕಂಡು ಬದುಕುವ ಪಾಡು ಬಂದು ನಿಂತಿತ್ತು. ಗುಡಿ ಗುಂಡಾರ ಮಸೀದಿಗಳನದೇವರಿಗೂ […]

ಗಜಲ್

ಗಜಲ್ ಶಿವರಾಜ್.ಡಿ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ *******************************************

Back To Top