ಸಂಕ್ರಾಂತಿ ಕಾವ್ಯ ಸುಗ್ಗಿ

ಸಂಕ್ರಾಂತಿ.

ಜ್ಯೋತಿ ಡಿ.ಬೊಮ್ಮಾ

Sankranthi 2018 | Sri Prakash Schools

ಎಳ್ಳು ಬೆಲ್ಲ ಜೊತೆಗೆ ಬೆಸೆದು
ಸಮರಸದಲ್ಲಿ ಬಾಳು ಹೊಸೆದು
ನೀಗಲಿ ಮನದ ಮತ್ಸರ
ಬರುವ ಹತ್ತಿರ ಹತ್ತಿರ.

ಸುಗ್ಗಿಯ ಸೊಬಗಲಿ ಹಿಗ್ಗಿನಾಭರಣ
ಕಟ್ಟಿ ಮನೆ ಮನೆಗೂ ತಳಿರು ತೋರಣ
ಹಾಕಿ ಮನೆ ಮುಂದೆ ರಂಗವಲ್ಲಿ ಶ್ರೀಕಾರ
ಬಂತು ಬಂತು ಊರಿಗೆ ಹಿಗ್ಗಿನ ಹರಿಕಾರ.

ನವಯುಗದ ಪಥವ ಹಿಡಿದು
ಉತ್ತರಾಯಣ ಪಣ್ಯಕಾಲವ ಸೇರಲು
ಹೊಸ ಲಯಕ್ಕೆ ಬದಲಾಯಿಸಿತು ಬದುಕು ಪಥ
ಲಭಿಸಲಿ ಸಕಲರಿಗೂ ನೆಮ್ಮದಿ ಅನವರತ.

ಎಳ್ಳು ಬೆಲ್ಲ ತಿಂದು ದೂರಾಗಲಿ
ಮನಮನದಲ್ಲೂ ಬತ್ತಿದೊಡಕು
ಶಾಂತಿಯಲ್ಲಿ ನೆಟ್ಟ ಹಗೆಯ ಕನಸೂ
ಓ ಸಂಕ್ರಾಂತಿಯೆ..
ನೀ ಎಂದೆಂದಿಗೂ ಶುಭವ ಒಲಿಸು.


***************************************

This image has an empty alt attribute; its file name is JYOTHI-BOMMAAA-768x1024.jpg

Leave a Reply

Back To Top