ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ, ಕಥಾಗುಚ್ಛ

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ಕಥಾ ಸಂಗಾತಿ “ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು ದಿ ಮೇಕಿಂಗ್  ಆಫ್  ಅವರ್ ಡ್ರಾಮ-ದೇಶ ದ್ರೋಹಿಗಳುತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು “ಸಾರ್, ಈಬಾರಿ ಆಗಸ್ಟ್  ಹದಿನೈದರಂದು ನಾವು ಕೂಡಾ ಒಂದು ನಾಟಕ ಪ್ರದರ್ಶಿಸಲು ಬಯಸುತ್ತಿದೇವೆ ಸಾರ್”ಸ್ಟಾಫ್  ರೂಮಿನಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ವಿಜಯಕುಮಾರ್ ಸಾರ್ ಮುಂದೆ ನಮ್ಮ ಬಯಕೆಯನ್ನು ನಾನು-ಮಲ್ಲಿ ಹೇಳಿಕೊಂಡೆವು.ವಿಜಯಕುಮಾರ್ ಸಾರ್  ತೆಲುಗು ಶಿಕ್ಷಕರಷ್ಟೇಅಲ್ಲ, ಸಾಹಿತ್ಯ ಮತ್ತು ನಾಟಕಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಅಲ್ಲೆನ್ನ ಸಾರ್ ಜೊತೆ ಸೇರಿ ಹಲವುನಾಟಕಗಳು,ಮತ್ತು ಏಕಾಂಕಗಳನ್ನು ಪ್ರದರ್ಶಿಸಿದ ಅನುಭಅವ ಅವರಿಗಿದೆ.“ಯಾವ ನಾಟಕವಪ್ಪಾ?” ಎಂದುಕೇಳಿದರು.“ದೇಶದ್ರೋಹಿಗಳು” ನಾನು ಉತ್ತರಿಸಿದೆ.“ದೇಶದ್ರೋಹಿಗಳಾ ? ಎಂದೂ ಕೇಳಿಲ್ಲವಲ್ಲಾ, ಬರೆದವರು ಯಾರು? ಸ್ಕ್ರಿಪ್ಟ್ಇದೆಯೇ?” ಎಂದು ಕೇಳಿದರು.“ನಾನೇ ಬರೆಯುತ್ತಿದ್ದೇನೆ ಸಾರ್, ಇನ್ನೂ ಮುಗಿದಿಲ್ಲ, ಇನ್ನೆರಡು ದಿನಗಳಲ್ಲಿ ತೋರಿಸ್ತೇನೆ ಸಾರ್” ಅಂದೆ.ಅದಕ್ಕೂ ಮುಂಚೆ ಏಳನೇ ಕ್ಲಾಸ್ ನಲ್ಲಿ ನಮ್ಮ ECA (Extra Curricular Activities)ಪಿರಿಯಡ್ ನಲ್ಲಿ ನಾನು ಬರೆದ ‘ಈ ಸಮಾಜ ಬದಲಾಗದೆ?’ ಎಂಬ ಏಕಾಂಕ ನಾಟಕವನ್ನು,ಅದಕ್ಕೂ ಮುಂಚೆ ನಮ್ಮ ಕ್ಲಾಸ್ ಪುಸ್ತಕದಲ್ಲಿ ಇರುವ ‘ಬುರ್ರಕಥೆ’ ಯನ್ನು ಅನುಸರಿಸುತ್ತಾ  ಚಂದ್ರಶೇಖರ್, ನಾನು, ಕೂನ ಶ್ರೀನಿವಾಸ್ ಪ್ರದರ್ಶಿಸಿದ ವಿಷಯ ನೆನಪಿದ್ದರಿಂದ ಆಶ್ಚರ್ಯಪಡಲಿಲ್ಲ. ಆದರೆ ಎಷ್ಟು ಮಾತ್ರವೂ ಆಸಕ್ತಿ ತೋರಲಿಲ್ಲ. ಅಷ್ಟೇ ಅಲ್ಲದೆ,“ಏನೋ, ಸ್ಕ್ರಿಪ್ಟ್ ರೆಡೀ ಇರುವ ನಾಟಕಗಳಿಗೆ ರಿಹರ್ಸಲ್ಮಾಡಿಸಲು ಸಮಯ ಸಾಕಾಗುತ್ತದೋ, ಇಲ್ಲವೋ ಎಂದು ನಾವು ಯೋಚಿಸುತ್ತಿದ್ದರೆ, ನಿಮ್ಮ ಸ್ಕ್ರಿಪ್ಟ್ ಇನ್ನೂ ರೆಡೀನೇ ಇಲ್ಲ. ಯಾವಾಗ ಬರೆಯುತ್ತೀರಿ? ಯಾವಾಗ ಪ್ರಾಕ್ಟೀಸ್ ಮಾಡುತ್ತೀರಿ? ಇದು ಸಾಧ್ಯವಾಗುವ ಕೆಲಸ ಅಲ್ಲ” ಎಂದು ಹೇಳಿದರು.ನಮಗೆ ನಿರಾಶೆಯಾಯಿತು. ಆದರೆ ಹಿಂದೆ ಸರಿಯಲಿಲ್ಲ. ಅಲ್ಲಿರುವಾಗಲೇ ನಾನು, ಮಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ, ಅವರನ್ನು ಹೇಗೆ ಒಪ್ಪಿಸುವುದು ಎಂದು ಯೋಚಿಸುತ್ತಿರುವಾಗ, ಏನಂದುಕೊಂಡರೊ ಏನೋ  ಅವರೇ-“ಸರಿ ಅಪ್ಪಾ, ಒಂದು ಕೆಲಸ ಮಾಡಿರಿ. ಇವತ್ತು ಇಪ್ಪತ್ತಾರು ಅಲ್ಲವೇ? ಮುವ್ವತ್ತನೇ  ತಾರೀಕಿನ  ಒಳಗೆ  ಸ್ಕ್ರಿಪ್ಟ್ ,ಟೀಮ್ ಎಲ್ಲಾ ರೆಡಿಯಾದರೆ ನಿಮ್ಮ ಡ್ರಾಮಾ  ಇರುತ್ತದೆ, ಇಲ್ಲದಿದ್ದರೆ ಮುಂದಿನ ವರ್ಷ ಹಾಕಿರಿ” ಎಂದರು.“ಸರಿ ಸಾರ್” ಎಂದು ನಾವು ಖುಷಿಯಿಂದ ಹೇಳಿ,ಇನ್ನೂ ಅಲ್ಲೇ ಇದ್ದರೆ, ಮತ್ತೆ ಎಲ್ಲಿ ಅವರ ಮನಸು ಬದಲಾಗುತ್ತದೋ ಎಂದು ಒಂದೇ ಹೆಜ್ಜೆಯಲ್ಲಿ ಹೊರ ಬಿದ್ದೆವು.ನಾವು ಹೊರಗೆ ಬಂದು ಯೋಚಿಸ ತೊಡಗಿದೆವು.ತಲೆಯಲ್ಲಿ ಹೀರೋ ಕೃಷ್ಣ ಅವರ ಸಿನಿಮಾಗಳು ಗಿರ್ರೆಂದು ಸುತ್ತುತ್ತಿದ್ದವು. ಗೂಢಚಾರಿ (ಗೂಢಚಾರ) 116, ಏಜೆಂಟ್  ಗೋಪಿ ಕಣ್ಣ ಮುಂದೆ ಕದಲುತ್ತಾ ಇರುತ್ತವೆ. ಅದಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದ  ರಫ್  ಸ್ಕೆಚ್ ಇದೆ. ಅದರ ತುಂಬಾ ಈಗ  ‘ವನ್ಸ್ ಮೋರ್ ‘ ಡೈಲಾಗ್‌ಗಳಿಂದ ತುಂಬಿಸಬೇಕು. ಇಡೀ ನಾಟಕ ತುಂಬಾ  ಬಂದೂಕಿನ     ವ್ಯವಹಾರವಾಗಿದ್ದರಿಂದ ಮಾತುಗಳು  ಕೂಡಾ ಗುಂಡುಗಳಂತೆ ಸಿಡಿಯಬೇಕು. ಖಳನಾಯಕನ‘ಚಾಲೆಂಜ್ ಮಾತುಗಳು, ಹೀರೋ ಪಂಚ್ ಡೈಲಾಗ್ ಗಳು  ಉತ್ಪ್ರೇಕ್ಷಿತ ಅಲಂಕಾರಗಳಿಂದ ನಡುಗಬೇಕು. ಫಿರದೌಸಿ ಷಾನಾಮಾ ಗ್ರಂಥಕ್ಕೆ ಪಟ್ಟಿರುವ ಕಷ್ಟವನ್ನು ಪಟ್ಟಿದ್ದೇನೆ. ತಿನ್ನುತಿದ್ದರೂ, ತರಗತಿಯಲ್ಲಿದ್ದರೂ, ಮನೆಗೆ,ಶಾಲೆಗೆ ಹೋಗುತ್ತಿದ್ದರೂ, ಅವೇ ಆಲೋಚನೆಗಳು. ಯಾವಾಗ  ಯಾವ ಡೈಲಾಗ್ ಮನಸ್ಸಿಗೆ ಹೊಳೆಯುತ್ತದೋ ತಿಳಿಯದು, ಅದರಿಂದ, ನಾಟಕ ಬರೆಯುತ್ತಿದ್ದ ಲೇಪಾಕ್ಷಿ ನೋಟ್ ಬುಕ್ ಯಾವಾಗಲೂ ನನ್ನೊಂದಿಗೆ ಇರುತ್ತಿತ್ತು. ಎಷ್ಟೋ ಬರಹಗಳು, ಹೊಡೆದು ಹಾಕುವುದು, ತಿದ್ದುಪಡಿಗಳಾದ ಮೇಲೆ  ಇಡೀ ಸ್ಕ್ರಿಪ್ಟ್  ಒಂದು ಸ್ತರಕ್ಕೆ ಬಂದಿತ್ತು. ಈಗ ನಮಗೆ ನಟೀ ನಟರು ಬೇಕು. ಹೀರೋ  ಇನ್ ಸ್ಪೆಕ್ಟರ್ ಆದ್ದರಿಂದ ಇನ್ನೂ ಇಬ್ಬರು ಅಥವಾ ಮೂವರು ಪೋಲೀಸು ಪೇದೆಗಳು ಇರಬೇಕು. ವಿಲನ್  ದೊಡ್ಡ ಡಾನ್. ಅದ್ದರಿಂದ ಅವನಿಗೆ  ಅನುಚರಗಣ ಇರಬೇಕು. ಅವರು ಇಬ್ಬರು ಅಥವಾ ಮೂವರು ಇರಬೇಕು. ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುವ ಡಾನ್‌ನ್ನ ಗುಪ್ತವೇಷದಲ್ಲಿ ಬಂದಿರುವ ಹೀರೋ ಹೇಗೆ ವಿಲನ್ ಕಥೆಯನ್ನು ಮುಗಿಸುತ್ತಾನೆ ಎಂಬುದು ಕಥಾಂಶ.   ಆಗಲೂ ನಮ್ಮ ಮಿತ್ರರಾದವರು, ನಮ್ಮ ಮಾತು ಕೇಳುವವರು ಎಂಬ ಅಂಶಗಳ ಆಧಾರದಮೇಲೆ ನಟಿ ನಟರ ಆಯ್ಕೆ ಮುಗಿಸಿದ್ದೇನೆ. ಪಾತ್ರಗಳು- ಪಾತ್ರಧಾರಿಗಳು ಎಂಬ ಪೇಪರ್ ಮುಂದೆ ಇಟ್ಟುಕೊಂಡು, ಬಾಕಿ ಸ್ಕ್ರಿಪ್ಟ್ ಎಲ್ಲ ಬರೆದಿರುವ ನೋಟ್ ಬುಕ್ ಹಿಡಿದುಕೊಂಡು ವಿಜಯಕುಮಾರ್ ಸಾರ್ ರೂಮಿಗೆ ಹೋದೆ.ಅಷ್ಟುಹೊತ್ತಿಗೆ ಸಾರ್  ಬೇರೆ ತರಗತಿಗೆ ಹೋಗುವ ಆತುರದಲ್ಲಿದ್ದರು. ಒಮ್ಮೆ ಇಡೀ ಸ್ಕ್ರಿಪ್ಟ್ ಇದೆಯೋ ಇಲ್ಲೋ ಎಂದು ನೋಡಿಕೊಂಡು ಸಮಾಧಾನಪಟ್ಟೆ.“ಸರಿ ಕಣಯ್ಯ, ಎಷ್ಟು ಸಮಯತೆಗೆದು ಕೊಳ್ಳುತ್ತದೆ?” ಎಂದು ಕೆಳಿದರು,ಡಸ್ಟರ್, ಚಾಕ್ ಪೀಸ್ ತೆಗೆದುಕೊಳ್ಳುತ್ತ-“ಇನ್ನೂ ನೋಡಿಲ್ಲ ಸಾರ್, ಇವತ್ತು ಸಾಯಂಕಾಲ ಎಲ್ಲರನ್ನು ಬರುವಂತೆ ಹೇಳಿದ್ದೀನಿ. ಒಮ್ಮೆ ರಿಹರ್ಸಲ್ಸ್ ಮಾಡಿದ್ರೆ ಗೊತ್ತಾಗುತ್ತೆ” ಎಂದೆ.“ಅದು ಬೇಕಾಗಿಲ್ಲ, ನಿನಗೆ ಎಲ್ಲರೂ ಸಿಕ್ಕಿ, ಎಲ್ಲರಿಗೂ ಡೈಲಾಗ್‌ಗಳು ಬಾಯಿಗೆ ಬಂದು ಅವರು ಅಭ್ಯಾಸ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀನೆ ಎಲ್ಲ ಡೈಲಾಗ್ ಗಳನ್ನು ಹೇಗೆ ಬರೆದಿದ್ದೀಯೋ  ಹಾಗೆ ಓದುತ್ತಾ, ನಡುವೆ ನಡುವೆ ಗ್ಯಾಪ್ ಕೊಡುತ್ತಾ ಹೋದರೆ ನಿನಗೆ ಗೊತ್ತಾಗುತ್ತೆ. ಎಷ್ಟು ಸಮಯ ತೆಗೆದುಕೊಳ್ಳುತ್ತದೋ ನನಗೆ ಸಂಜೆಗೆ ಹೇಳು” ಅಂದರು.ನಾನು ಕೂಡಲೇ ನನ್ನ ತರಗತಿಗೆ ಹೋದೆ. ಮಧ್ಯಾಹ್ನ ಲಂಚ್ ಸಮಯದಲ್ಲಿ ಬೇಗಬೇಗನೆ ಮುಗಿಸಿ, ಎಲ್ಲ ಪಾತ್ರಧಾರಿಗಳ ಡೈಲಾಗ್ ಗಳನ್ನು ಅಭಿನಯಿಸುತ್ತಾ ಹೋದರೆ  ಹದಿನೈದು ನಿಮೊಷಗಳು ತೆಗೆದುಕೊಳ್ಳಿತ್ತು. ಸಂಜೆ ನಾನು ಹೋಗಿ ಸಾರ್ ಗೆ ಹೇಳಿದೆ. ಅವರು ಸ್ಟೇಜ್ ಬದಲಾವಣೆಗಳು ಮತ್ತು ವಿರಾಮಗಳನ್ನು ಒಳಗೊಂಡಂತೆ ಇಪ್ಪತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರ್ಧರಿಸಿದರು.“ಸರಿ, ನೀವು ಹೋಗಿ ರಿಹರ್ಸಲ್ಸ್  ಮಾಡಿಕೊಳ್ಳಿ.ಹನ್ನೆರಡನೇ ತಾರೀಖಿಗೆ  ನಾನು, ಅಲ್ಲೆನ್ನ ಸಾರೂ ಬಂದು ನೋಡ್ತೀವಿ” ಎಂದು ಹೇಳಿದಾಗ ಹೃದಯ ಸಂತೋಷದಿಂದ ಕುಣಿಯಿತು.  ನಾನು ತಕ್ಷಣ ಮಲ್ಲಿ ಕಡೆಗೆ ಹೋದೆ. . ಅವನು ಕೂಡಾ ತನ್ನ ಪಾತ್ರಕ್ಕೆ ತಕ್ಕ ಕೆಲವು ಡೈಲಾಗ್ ಗಳನ್ನು ಬರೆದುಕೊಂಡು ಸಿದ್ದವಾಗಿದ್ದ.ನಾವಿಬ್ಬರೂ ಕುಳಿತು ಫೈನಲ್  ಸ್ಕ್ರಿಪ್ಟ್  ಸಿದ್ಧಪಡಿಸಿದೆವು. ಮರುದಿನದಿಂದ ರಿಹಾರ್ಸಲ್ಸ್  ಎಂದು ಹೇಳಿ ಎಲ್ಲರನ್ನು ಸಂಜೆ ಶಾಲೆ ಮುಗಿದಮೇಲೆ ತರಗತಿ ಕೋಣೆಯಲ್ಲೇ ಇರಲು ಹೇಳಿದೆ. ಹಾಗೆ ಮರುದಿನ ನಾವು ಎಲ್ಲರೂ ಸೇರಿದವು. ಆಗಲೇ ನಾನು ಎಲ್ಲರಿಗೂ ಅವರವರ ಡೈಲಾಗ್ ಗಳು ಪ್ರತ್ಯೇಕವಾಗಿ ಬರೆದು ಹಂಚಿದೆ. ಕಡಿಮೆ ಡೈಲಾಗ್ ಗಳು ಬಂದವರುಸ್ವಲ್ಪ ಮುಖ ಸಪ್ಪಗೆ ಮಾಡಿಕೊಂಡರು. ಅವನು ಎಸ್‌.ಐ.ಆದರೆ  ನಾನು ಕಾನಸ್ಟೇಬಲ್ ಆಗುವುದಿಲ್ಲ ಎಂದು ಕೆಲವರು ಹಠ ಹಿಡಿದರು. ಡಾನ್‌ ಆಗಿ ನಾನಿರುತ್ತೇನೆ ಎಂದು ಕೆಲವರು ಡಿಮಾಂಡ್  ಮಾಡಿದರು. ಎಲ್ಲರನ್ನು ಸಮಾಧಾನಮಾಡಿ, ಬೇಡಿಕೊಂಡು, ದಾರಿಗೆ ತರಲು ಆ ದಿನ ಕಳೆದುಹೋಯಿತು.ಮರುದಿನ ತರಗತಿಯಲ್ಲಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿದ್ದಾಗ,ಹಿಂದಿನದಿನ ಒಪ್ಪಿಕೊಂಡವರು ತಮ್ಮ‌ ಹಿತೈಷಿಗಳ ಮಾತು ಕೇಳಿ  ರಿಹರ್ಸಲ್ಸ್ ಗೆ ಬರಲು ನಿರಾಕರಿಸಿದರು. ಯಾರು ಅನಿವಾರ್ಯವಾಗಿ/ ಅವಶ್ಯಕವಾಗಿ  ಬೇಕೋ ನಿರ್ಧರಿಸಿ, ಉಳಿದ ಪಾತ್ರಗಳಿಗೆ ಇಬ್ಬರು ಮೂವರನ್ನು ಸ್ಪೇರ್  ಆಗಿ ಇಟ್ಟುಕೊಂಡು, ಅವರಿಗೆ ಅಸಿಸ್ಟೆಂಟ್  ಡೈರೆಕ್ಟರ್ ಸ್ಥಾನಮಾನ ಕೊಟ್ಟು, ನಾಟಕದಲ್ಲಿ ಸಾಧ್ಯವಾದರೆ ಒಂದು ಪಾರ್ಟ್ ಕೊಡುತ್ತೇನೆ ಎಂದು ಆಶೆ ತೋರಿಸಿ ಒಪ್ಪಿಸಲು ಸಾಕುಸಾಕಾಯಿತು.ಇಷ್ಟೆಲ್ಲಾ ಮಾಡಿದ ಮೇಲೆ ನಮ್ಮ ಫುಲ್ ರಿಹರ್ಸಲ್ಸ್  ಶುರುವಾಗಲಿಕ್ಕೆ ಮೂರುದಿನ ಬೇಕಾಯಿತು.ವೇದಿಕೆಯ ಅಲಂಕಾರ, ನಡುವೆ ನಡುವೆ ಅಂಕಗಳು ಬದಲಾಗುವುದು ಅವೆಲ್ಲಾ ಲೆಕ್ಕಿಸಲಾಗಲಿಲ್ಲ. ನಿಜಕ್ಕೆ ನಾವು ಬಣ್ಣಗಳು ಬಳೆದುಕೊಂಡು,ಒಳ್ಳೆಯ ಸ್ಟೇಜ್ ಮೇಲೆ ವೇಷ ಧರಿಸುತ್ತೇವೆ ಎಂದು ಭಾವಿಸಿರಲಿಲ್ಲ.ನಮಗೆ ಸ್ವಲ್ಪ ಸಮಯ ಕೊಡುತ್ತಾರೆ . ನಾವು ಮಾಡಬೇಕಾದ್ದು ಮಾಡುತ್ತೇವೆ ಎಂದು ಭಾವಿಸುತ್ತಿದ್ದೆವು. ರಿಹಾ ರ್ಸಲ್ಸ್  ನಡೆಯುತ್ತಿದ್ದವು. ಪಾತ್ರಗಳು ಸಿಗದವರು,  ನಮ್ಮನ್ನು ತಮಾಷೆ ಮಾಡುತ್ತಿದ್ದರು. ಗೇಲಿಮಾಡುತ್ತಿದ್ದರು. ಹಿಂದೆ ಸೇರಿಕೊಂಡು ಕಾಮೆಂಟ್  ಮಾಡುತ್ತಿದ್ದರು.ಅವರ ಕಾಮೆಂಟ್‌ಗಳಿಗೆ,ನೊಂದುಕೊಂಡವರು ನಾಟಕದಿಂದ  ಹೊರಟುಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮರುದಿನದಿಂದ ಸಾರ್ ಗೆ ಹೇಳಿ ನಮ್ಮ ಟೀಮನ್ನು  ರೂಮಿನೊಳಗೆ ಬರಮಾಡಿಕೊಂಡು ಬಾಗಿಲುಗಳು ಮುಚ್ಚಿಕೊಂಡು ಪ್ರಾಕ್ಟೀಸ್ ಮಾಡಿದೆವು.  ಆದರೂ ಕೆಲವರು ಕಿಟಕಿಯ ಬಳಿ ನಿಂತು,ಬಾಗಿಲಿನ ಸಂದುಗಳಿಂದ ಕಾಮೆಂಟ್ ಗಳು ಮಾಡುತ್ತಲೇ ಇದ್ದರು.ಹತ್ತು ದಿನಗಳ ನಂತರ ಇಡೀ ವಿಷಯ ಒಂದು ಹಂತಕ್ಕೆಬಂದಿತು. ಅಷ್ಟರೊಳಗೆ ಹನ್ನೆರಡನೆ ತಾರೀಕು ಬಂದಿತ್ತು. ವಿಜಯಕುಮಾರ್ ಸಾರ್ , ಮತ್ತು ಅಲ್ಲೆನ್ನ  ಸಾರ್  ಬಂದರು. ನಾವು ಅವರಿಗಾಗಿ ನಮ್ಮ ನಾಟಕವನ್ನು ಪ್ರದರ್ಶಿಸಿದೆವು. ಸಣ್ಣಸಣ್ಣ ಬದಲಾವಣೆಗಳನ್ನುಸೂಚಿಸಿದರು. ಒಟ್ಟಾರೆ ಲಾಜಿಕಲ್ ಆಗಿ ನೋಡಿದರೆ ಚನ್ನಾಗಿದೆ  ಎಂದರು ಅಲ್ಲೆನ್ನ ಸಾರ್.  ವಿಜಯಕುಮಾರ್ ಸಾರ್  ಏನನ್ನೂ ಮಾತಾಡಲಿಲ್ಲ. ಅವರು ನನ್ನನ್ನು ಕರೆದು  ಯಾವ ದೃಶ್ಯಕ್ಕೆ ಯಾವ ಹಿನ್ನೆಲೆ ಇರಬೇಕು, ಸ್ಟೇಜ್ ಮೇಲೆ ಯಾವ ಯಾವವಸ್ತುಗಳು ಅಗತ್ಯವೋ ವಿವರವಾಗಿ ಬರೆಯಬೇಕೆಂದು, ಅದರ ಪ್ರಕಾರವೇ  ಅಲಂಕಾರಮಾಡುತ್ತಾರೆಂದು ಹೇಳಿದರೇ ಆಶ್ಚರ್ಯ ಪಟ್ಟೆ. ಇಷ್ಟೆಲ್ಲಾ ವ್ಯವಸ್ಥೆ ಇರುತ್ತದೆಂದು, ಇಷ್ಟು ಆಡಂಬರವಾಗಿ ಇರುತ್ತದೆಂದು ನನಗೆ ಗೊತ್ತಿರಲಿಲ್ಲ. ಊಹಿಸಿರಲಿಲ್ಲ. ಆಶಿಸಿರಲೂ ಇಲ್ಲ. ನನ್ನ ಜೀವನದಲ್ಲಿ ನಾನು ಆಶಿಸಿದ್ದು ಬಹಳ ಕಡಿಮೆ. ಹಾಗಾಗಿ ನಿರೀಕ್ಷೆಗಿಂತಲೂ ಹೆಚ್ಚಾಗಿ ಸಿಕ್ಕಿದೆ. ಮೊದಲನೆಯ ನಾಟಕ–ಅಷ್ಟು ಜನರ ಮುಂದೆ!ನನ್ನ ಉತ್ಸಾಹ ದುಪ್ಪಟ್ಟಾಯಿತು. ಮಲ್ಲಿ, ಜೈನುಲ್ಲಾ, ಚೆನ್ನಯ್ಯ, ರಮಣ, ಜಾಕೀರ್, ಅಚ್ಚಯ್ಯ, ನಾವೆಲ್ಲರೂ ತಯಾರಾಗಿದ್ದೇವೆ. ಆಗಾಗ ಡೈಲಾಗ್ ಗಳನ್ನು ಮನನಮಾಡಿಕೊಂಡು,ಎಲ್ಲಾ  ದೃಶ್ಯಗಳನ್ನು ರಿವೈಂಡ್ ಮಾಡಿಕೊಳ್ಳುತ್ತಿದ್ದೆ. ತರಗತಿಯಲ್ಲಿ ನಾಟಕದ ಬಗ್ಗೆ  ಸಾಕಷ್ಟು ಗಲಾಟೆ ನಡೆಯುತ್ತಿತ್ತು. ಗೆಳೆಯರನ್ನು ನಾಟಕದ ಹೆಸರಿನಿಂದ ಕರೆಯುವುದು, ನಾವು ಪ್ರಾಕ್ಟೀಸ್  ಮಾಡುವಾಗ ನೋಡಿದ, ಕೇಳಿದ  ಡೈಲಾಗ್ ಗಳು ತರಗತಿಯಲ್ಲಿ ಬೇರೆಯವರಮೇಲೆ ಪ್ರಯೋಗಿಸುವುದು,‘ಅರೆ!,ಗಬ್ಬರ್  ಬರುತ್ತಿದ್ದಾನೋ’ ಎಂದು ತಮಾಷೆ ಮಾಡುವುದು ಮಾಮೂಲು ವಿಷಯವಾಯಿತು. ಈಗ ಅದು ನೆನೆದರೆ ನಗು ಬರುತ್ತದೆ, ಆದರೆ ವಿಪರೀತವಾದ ಕೊಪವೂ ಬಂದು, ನಾಟಕದಲ್ಲಿ ಬಳಸಿದ ಡಮ್ಮೀ  ಗನ್ನು  ನಿಂದ ಷೂಟ್ ಮಾಡಬೇಕೆಂದು ಅನ್ನಿಸುತ್ತಿತ್ತು. ಅಷ್ಟು ಗಲಭೆ ಮತ್ತು ಅಪಹಾಸ್ಯನಡೆಯುತ್ತಿತ್ತು.ಆಗಸ್ಟ್  ಹದಿನೈದು ಬಂತು. ಎಲ್ಲಾ ತೊಡಕುಗಳನ್ನು ದಾಟಿ,ನಾವು ಗ್ರೀನ್ ರೂಮಿನಲ್ಲಿಮುಖಕ್ಕೆ ಬಣ್ಣ ಬಳಿದು ಕೊಳ್ಳುತ್ತಿದ್ದರೆ ಅದೊಂದು ಅನಿರ್ವಚನೀಯ ಅನುಭವ.ಮೊದಲು ನಮ್ಮ ನಾಟಕ ಮುಗಿಸಿದನಂತರ ವಿಜಯಕುಮಾರ್ ಸಾರ್ ಅವರ ನಾಟಕ ಪ್ರದರ್ಶಿಸಬೇಕು. ನಾಟಕದ ಡೈಲಾಗ್‌ಗಳು ನೆನಪಿಲ್ಲದಿದ್ದರೇ, ಪ್ರಾಂಪ್ಟರ್  ಇರುತ್ತಾನೆಂದು ಕೂಡಾ ತಿಳಿಯದು. ಅದರಿಂದ ಯಾರನ್ನು ಆ ಕೆಲಸಕ್ಕೆ ನೇಮಿಸಲಿಲ್ಲ. ವಿಜಯಕುಮಾರ್ ಸಾರ್ ಅವರೇ ನಮ್ಮಸ್ಕ್ರಿಪ್ಟ್  ತೆಗೆದುಕೊಂಡು ಎರಡು ಮೂರು ಬಾರಿ ಹಿಂದೆ ಮುಂದೆ ತಿರುಗಿಸಿ ಸ್ಟೇಜ್ ಹಿಂದೆ ನಿಂತು ಆ ಪಾತ್ರವನ್ನುನಿರ್ವಹಿಸಿದರು. ಮಲ್ಲಿ ಸರಿಯಾಗಿ ಸ್ಟೇಜ್ ಬರುವ ಮುಂಚೆ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡ. ಅದರಿಂದ ಕುಂಟುತ್ತಾ ನಡೆಯಬೇಕಾಯಿತು. ಅವನು ತುಂಬಾ –ಸಮಯಸ್ಪೂರ್ತಿಯಿಂದ ಕುಂಟುತ್ತಾ ನಡೆಯುವುದು ವಿಲನ್ ಮ್ಯಾನೇರಿಜಮ್ ಅಂತೆ ಬದಲಿಸಿ ನಟಿಸಿದ. ಒಳ್ಳೆಯ ಮೆಚ್ಚುಗೆಯನ್ನು ಪಡೆದ.  ನಾನು ಮಾಡಿದ ಹೀರೋ ಇನ್ ಸ್ಪೆಕ್ಟರ್  ಪಾತ್ರಕ್ಕಿಂತ ವಿಲನ್  ಪಾತ್ರದಲ್ಲಿ ಮಲ್ಲಿ ಅದ್ಭುತವಾಗಿ ನಟಿಸಿದ್ದ. ಎಲ್ಲರೂ ತಮ್ಮತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದರು. ಅಲ್ಲೊಂದು ಇಲ್ಲೊಂದು ಕೆಲವು‌ ದೋಷಗಳೊಂದಿಗೆ (ಮಿಷ್ಟರ್ ಗೋಪಿ, ವಾಟ್ ಈಜ್ ಯುವರ್ ನೇಮ್… ಇತ್ಯಾದಿ)ಒಟ್ಟಾರೆ ನಾಟಕ ತುಂಬಾ ಚೆನ್ನಾಗಿತ್ತು. ಅದಾವುದೂ ಸಿನಿಮಾ ಷೂಟಿಂಗ್ ನಡೆದಂತೆ ಮೂರು ನಾಲ್ಕು ಡೈಲಾಗ್ ಗಳಿಗೆ ಒಂದು ಸೀನ್  ಚೇಂಜ್ ಮಾಡುತ್ತಾ ಹೋದರೆ,ಪ್ರತಿಬಾರಿಯೂ ಸ್ಟೇಜ್ ಅಲಂಕರಿಸಲು ಅಲ್ಲಿಯ ಸಹಾಯಕರು ತುಂಬಾನೇ ಕಷ್ಟಪಟ್ಟರು. ಸಿನಿಮಾವನ್ನು ಕಲ್ಪಿಸಿಕೊಂಡು ನಾಟಕ ಬರೆದರೆ ಎಷ್ಟು ತೊಂದರೆ ಯಾಗುತ್ತದೆ ಎಂದು ಅರ್ಥವಾದಾಗ ನಮ್ಮ ನಾಟಕ ಮುಗಿಯಿತು.ವಿಜಯಕುಮಾರ್ ಸಾರ್, ಪಾತ್ರಗಳು- ಪಾತ್ರಧಾರಿಗಳು ಎಂದು ಎಲ್ಲರನ್ನು ಪರಿಚಯಿಸಿದರು. ಅಂದುನಾನು ‘ಮೇಘ ಸಂದೇಶಂ’ ಪೋಸ್ಟರ್ ಗಳ ಮೇಲೆ ಬರೆದಿರುವ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ –ದಾಸರಿ ನಾರಾಯಣರಾವ್ ಎಂಬ  ನೆನಪಿನ ಆಧಾರದ ಮೇಲೆ ಹಾಗೆ ಬರೆದು

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಅಂಕಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಹಾಮಾನವತಾವಾದಿ ಶರಣೆ ಮದರ್ ಥೆರೇಸಾ ಬಡವರ ನಿರ್ಗತಿಕರ ರೋಗಿಗಳ ಪಾಲಿನ ದೇವತೆ ಮಾನವತಾವಾದಿ ಮದರ್ ಥೆರೇಸಾ ಅವರ ಜೀವನವೇ ಒಂದು ದಿವ್ಯಾವದರ್ಶನ. ಮದರ್ ಥೆರೇಸಾ ಅವರು ಜಗತ್ತಿನಾದ್ಯಂತ ದಯೆ, ಕರುಣೆ ಮತ್ತು ನಿಸ್ವಾರ್ಥ ಸೇವೆಗೆ ಹೆಸರಾದ ಒಬ್ಬ ಮಹಾನ್ ಮಾನವತಾವಾದಿ. ಅವರು ತಮ್ಮ ಇಡೀ ಜೀವನವನ್ನು ಅನಾಥರು, ರೋಗಿಗಳು ಮತ್ತು ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ಬಡವರ ಸೇವೆಗಾಗಿ ಮುಡಿಪಾಗಿಟ್ಟರು. ೧. ಆರಂಭಿಕ ಜೀವನ ಮತ್ತು ಬಾಲ್ಯ ನಿಜವಾದ ಹೆಸರು: ಆಗ್ನೆಸ್ ಗೊಂಕ್ಷಾ ಬೊಜಾಕ್ಸಿಯು.ಜನನ: ಆಗಸ್ಟ್ ೨೬, ೧೯೧೦ ರಂದು ಉತ್ತರ ಮ್ಯಾಸಿಡೋನಿಯಾದ ಸ್ಕೋಪ್ಜೆಯಲ್ಲಿ ಜನಿಸಿದರು. ಅಲ್ಬೇನಿಯಾ ಕುಟುಂಬ:  ಇವರ ಪೋಷಕರು ನಿಕೊಲಾ ಮತ್ತು ಡ್ರಾನಾಫಿಲ್ ಬೊಜಾಕ್ಸಿಯು ಅಲ್ಬೇನಿಯಾ.  ಇವರ ಕುಟುಂಬವು ಬಡವರ ಬಗ್ಗೆ ಅಪಾರ ದಯೆ ಹೊಂದಿತ್ತು. ಧಾರ್ಮಿಕ ಕರೆ:  ಆಗ್ನೆಸ್ ಅವರಿಗೆ ಕೇವಲ ೧೨ನೇ ವಯಸ್ಸಿನಲ್ಲಿಯೇ ಧಾರ್ಮಿಕ ಜೀವನವನ್ನು ನಡೆಸುವ ಮತ್ತು ಬಡವರ ಸೇವೆ ಮಾಡುವ ಬಯಕೆ ಮೂಡಿತ. ೨. ಭಾರತಕ್ಕೆ ಆಗಮನ ಮತ್ತು ಶಿಕ್ಷಕಿಯಾಗಿ ಸೇವೆ ೧೮ನೇ ವಯಸ್ಸಿನಲ್ಲಿ ಅವರು ‘ಸಿಸ್ಟರ್ಸ್ ಆಫ್ ಲೊರೆಟೊ’ ಸಂಸ್ಥೆಯನ್ನು ಸೇರಿದರು.೧೯೨೯ರಲ್ಲಿ ಭಾರತಕ್ಕೆ ಬಂದ ಅವರು, ಕೋಲ್ಕೊತ್ತಾದ (ಕಲ್ಕತ್ತಾ) ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಭೂಗೋಳಶಾಸ್ತ್ರ ಶಿಕ್ಷಕಿಯಾಗಿ ಸೇವೆ ಆರಂಭಿಸಿದರು. ನಂತರ ಅಲ್ಲಿಯೇ ಮುಖ್ಯೋಪಾಧ್ಯಾಯಿನಿಯಾಗಿಯೂ ಕಾರ್ಯನಿರ್ವಹಿಸಿದರು ೩. ಮಿಷನರೀಸ್ ಆಫ್ ಚಾರಿಟಿ ಸ್ಥಾಪನೆ ೧೯೪೬ರಲ್ಲಿ ಕೋಲ್ಕೊತ್ತಾದ ಕೊಳೆಗೇರಿಗಳಲ್ಲಿದ್ದ ಬಡವರ ಕಷ್ಟಗಳನ್ನು ಕಂಡು, ಅವರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡಲು ತೀರ್ಮಾನಿಸಿದರು. ೧೯೫೦ರಲ್ಲಿ ವ್ಯಾಟಿಕನ್‌ನ ಅನುಮತಿಯೊಂದಿಗೆ “ಮಿಷನರೀಸ್ ಆಫ್ ಚಾರಿಟಿ” ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು.ಈ ಸಂಸ್ಥೆಯ ಸನ್ಯಾಸಿನಿಯರು ನೀಲಿ ಅಂಚಿನ ಸರಳ ಬಿಳಿ ಸೀರೆಯನ್ನು ತಮ್ಮ ಸಮವಸ್ತ್ರವಾಗಿ ಧರಿಸತೊಡಗಿದರು. ೧೯೫೨ರಲ್ಲಿ ಸಾಯುವ ಸ್ಥಿತಿಯಲ್ಲಿದ್ದವರಿಗಾಗಿ ‘ನಿರ್ಮಲ್ ಹೃದಯ’ ಎಂಬ ಧರ್ಮಶಾಲೆಯನ್ನು ಆರಂಭಿಸಿದರು. ಇಲ್ಲಿ ನಿರಾಶ್ರಿತರು ಘನತೆಯಿಂದ ಕೊನೆಯುಸಿರೆಳೆಯಲು ಆಸರೆಯಾಗುತ್ತಿದ್ದರು. ೪. ಪ್ರಶಸ್ತಿ ಮತ್ತು ಗೌರವಗಳು ಅವರ ನಿಸ್ವಾರ್ಥ ಮಾನವೀಯ ಸೇವೆಯನ್ನು ಗುರುತಿಸಿ ಜಗತ್ತಿನಾದ್ಯಂತ ನೂರಾರು ಪ್ರಶಸ್ತಿಗಳನ್ನು ನೀಡಲಾಯಿತು: ನೊಬೆಲ್ ಶಾಂತಿ ಪ್ರಶಸ್ತಿ  (೧೯೭೯). ಭಾರತ ರತ್ನ ಪ್ರಶಸ್ತಿ (೧೯೮೦)  – ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ (೧೯೬೨) ೫. ಕೊನೆಯ ದಿನಗಳು ಮತ್ತು ಸಂತ ಪದವಿ ನಿರಂತರ ಕಠಿಣ ಶ್ರಮ ಮತ್ತು ವಯೋಸಹಜ ಕಾಯಿಲೆಗಳಿಂದಾಗಿ ಮದರ್ ಥೆರೇಸಾ ಅವರು ಸೆಪ್ಟೆಂಬರ್ ೫, ೧೯೯೭ ರಂದು ಕೋಲ್ಕೊತ್ತಾದಲ್ಲಿ ನಿಧನರಾದರು.ಭಾರತ ಸರ್ಕಾರವು ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿತು. ಸೆಪ್ಟೆಂಬರ್ ೪, ೨೦೧೬ ರಂದು ವ್ಯಾಟಿಕನ್‌ನ ಪೋಪ್ ಫ್ರಾನ್ಸಿಸ್ ಅವರು ಮದರ್ ಥೆರೇಸಾ ಅವರಿಗೆ ‘ಸಂತ’ (Saint Teresa of Calcutta) ಪದವಿಯನ್ನು ನೀಡಿ ಗೌರವಿಸಿದರು. ಮದರ್ ಥೆರೇಸಾ ಅವರ ನಿಸ್ವಾರ್ಥ ಸೇವೆ, ಕರುಣೆ ಮತ್ತು ಮಾನವೀಯತೆಯನ್ನು ಭಾರತದ ರಾಷ್ಟ್ರೀಯ ನಾಯಕರು, ಕವಿಗಳು ಮತ್ತು ವಿಮರ್ಶಕರು ವಿಭಿನ್ನ ಹಾಗೂ ಗೌರವಾನ್ವಿತ ದೃಷ್ಟಿಕೋನಗಳಿಂದ ಕಂಡಿದ್ದಾರೆ. ಅವರ ಬಗ್ಗೆ ಪ್ರಮುಖರ ಅಭಿಪ್ರಾಯಗಳು ನೋಡೋಣ: 1. ರಾಷ್ಟ್ರೀಯ ನಾಯಕರ ಅಭಿಪ್ರಾಯ ಭಾರತದ ರಾಜಕೀಯ ನಾಯಕರು ಮದರ್ ಥೆರೇಸಾ ಅವರನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಮತ್ತು ಕರುಣೆಯ ಸಾಕಾರ ರೂಪವಾಗಿ ನೋಡಿದ್ದಾರೆ. ಮಹಾತ್ಮ ಗಾಂಧಿ ಮತ್ತು ಅವರ ತತ್ವಗಳ ಹೋಲಿಕೆ:  ಅನೇಕ ನಾಯಕರು ಮದರ್ ಥೆರೇಸಾ ಅವರ ಸೇವೆಯನ್ನು ಗಾಂಧೀಜಿಯವರ “ದರಿದ್ರ ನಾರಾಯಣ” (ಬಡವರಲ್ಲಿ ದೇವರನ್ನು ಕಾಣುವುದು) ತತ್ವಕ್ಕೆ ಹೋಲಿಸಿದ್ದಾರೆ. ಇಂದಿರಾ ಗಾಂಧಿ: “ಮದರ್ ಥೆರೇಸಾ ಅವರನ್ನು ಭೇಟಿಯಾಗುವುದೆಂದರೆ ನಂಬಿಕೆ, ಕರುಣೆ ಮತ್ತು ದೈವಿಕ ಶಕ್ತಿಯನ್ನು ಹತ್ತಿರದಿಂದ ಅನುಭವಿಸಿದಂತೆ. ಅವರು ಮಾತನಾಡುವುದು ಕಡಿಮೆ, ಮಾಡುವುದು ಹೆಚ್ಚು” ಎಂದು ಹೇಳಿದ್ದರು. ಡಾ. ಎಸ್. ರಾಧಾಕೃಷ್ಣನ್: “ಅವರು ಜಗತ್ತಿನ ಅತ್ಯಂತ ದೀನ ದಲಿತರಲ್ಲಿ ದೇವರನ್ನು ಕಂಡರು. ಅವರ ಸೇವೆ ಯಾವುದೇ ಧರ್ಮ ಅಥವಾ ದೇಶಕ್ಕೆ ಸೀಮಿತವಾಗಿರಲಿಲ್ಲ, ಅದು ಜಾಗತಿಕವಾಗಿತ್ತು” ಎಂದು ಶ್ಲಾಘಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ: ಮದರ್ ಥೆರೇಸಾ ನಿಧನರಾದಾಗ, “ಭಾರತವು ತನ್ನ ಅತ್ಯಂತ ಪ್ರೀತಿಯ ಮಗಳನ್ನು ಕಳೆದುಕೊಂಡಿದೆ. ಅವರು ಕತ್ತಲೆಯಲ್ಲಿದ್ದ ಕೋಟಿಗಟ್ಟಲೆ ಜನರ ಜೀವನದಲ್ಲಿ ಬೆಳಕಾಗಿದ್ದರು” ಎಂದು ಕಂಬನಿ ಮಿಡಿದಿದ್ದರು. 2. ಕವಿಗಳ ದೃಷ್ಟಿಕೋನ ಕವಿಗಳು ಮದರ್ ಥೆರೇಸಾ ಅವರನ್ನು ಶಾಂತಿ, ಪ್ರೀತಿ ಮತ್ತು ದೈವಿಕ ಕೃಪೆಯ ಸಂಕೇತವಾಗಿ ತಮ್ಮ ಕಾವ್ಯಗಳಲ್ಲಿ ಚಿತ್ರಿಸಿದ್ದಾರೆ.ನಡೆದಾಡುವ ದೇವತೆ: ಕವಿಗಳು ಅವರನ್ನು ಕಲ್ಕತ್ತಾದ ಬೀದಿಗಳಲ್ಲಿ ನಡೆದಾಡಿದ “ಕರುಣೆಯ ದೇವತೆ” ಎಂದು ವರ್ಣಿಸಿದ್ದಾರೆ. ಅಹಿಂಸೆ ಮತ್ತು ಪ್ರೀತಿಯ ಭಾಷೆ:  ಕಾವ್ಯಗಳಲ್ಲಿ ಅವರ ಬಿಳಿ ಮತ್ತು ನೀಲಿ ಅಂಚಿನ ಸೀರೆಯನ್ನು ಶಾಂತಿಯ ಧ್ವಜಕ್ಕೆ ಹೋಲಿಸಲಾಗಿದೆ. ಭಾಷೆ ತಿಳಿಯದ ದೇಶಕ್ಕೆ ಬಂದು ಕೇವಲ ‘ಪ್ರೀತಿಯ ಭಾಷೆ’ಯ ಮೂಲಕವೇ ಎಲ್ಲರ ಹೃದಯ ಗೆದ್ದರೆಂದು ಕವಿಗಳು ಕೊಂಡಾಡಿದ್ದಾರೆ. ತ್ಯಾಗದ ಮೂರ್ತಿ: ಸ್ವಂತ ಸಂಸಾರ, ದೇಶವನ್ನು ತೊರೆದು ಪರರ ಕಣ್ಣೀರು ಒರೆಸುವುದನ್ನೇ ಧರ್ಮವಾಗಿಸಿಕೊಂಡ ಅವರ ತ್ಯಾಗವನ್ನು ಕವಿಗಳು ದೈವಿಕ ಮಟ್ಟಕ್ಕೆ ಏರಿಸಿದ್ದಾರೆ. 3. ವಿಮರ್ಶಕರು ಕಂಡಂತೆ ವಿಮರ್ಶಕರು ಮದರ್ ಥೆರೇಸಾ ಅವರ ಕಾರ್ಯವನ್ನು ಸಾಮಾಜಿಕ ಮತ್ತು ತಾತ್ವಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಸಾಂಸ್ಥಿಕ ಸಮಾಜ ಸೇವೆ: ವಿಮರ್ಶಕರ ಪ್ರಕಾರ, ಮದರ್ ಥೆರೇಸಾ ಕೇವಲ ವೈಯಕ್ತಿಕವಾಗಿ ಸೇವೆ ಮಾಡಲಿಲ್ಲ. ಬದಲಿಗೆ ‘ಮಿಷನರೀಸ್ ಆಫ್ ಚಾರಿಟಿ’ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ವ್ಯವಸ್ಥಿತವಾದ ಸೇವಾ ಜಾಲವನ್ನು ನಿರ್ಮಿಸಿದರು. ಇದು ಆಧುನಿಕ ಜಗತ್ತಿಗೆ ಮಾದರಿ.ಮಾನವೀಯತೆಯೇ ಧರ್ಮ: ಕೆಲವರು ಅವರ ಧಾರ್ಮಿಕ ಹಿನ್ನೆಲೆಯನ್ನು ಚರ್ಚಿಸಿದರೂ, ಬಹುತೇಕ ವಿಮರ್ಶಕರು “ಅವರ ಸೇವೆ ಜಾತೀಯತೆ ಮತ್ತು ಧರ್ಮದ ಗಡಿಗಳನ್ನು ಮೀರಿದ್ದು. ರೋಗಿಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅವರು ಕುಷ್ಠರೋಗಿಗಳನ್ನು ತಬ್ಬಿ ಆರೈಕೆ ಮಾಡಿದ್ದು ಕ್ರಾಂತಿಕಾರಿ ಹೆಜ್ಜೆ” ಎಂದು ಒಪ್ಪಿಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿಯ ಸಾರ್ಥಕತೆ:  ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಾಗ, “ಈ ಪ್ರಶಸ್ತಿಯಿಂದ ಮದರ್ ಥೆರೇಸಾ ಅವರಿಗೆ ಗೌರವ ಬರಲಿಲ್ಲ, ಬದಲಿಗೆ ಅವರಿಗೆ ನೀಡಿದ್ದರಿಂದ ನೊಬೆಲ್ ಪ್ರಶಸ್ತಿಗೇ ಒಂದು ಸಾರ್ಥಕತೆ ಸಿಕ್ಕಿತು” ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಮದರ ಥೆರೇಸಾ ಎಂಬ ಮಹಾಮಾನವತೆಯ ದೇವತೆ ಹುಟ್ಟಿದ ಅಲ್ಬೇನಿಯಾ ರಾಷ್ಟ್ರ ಮತ್ತು ಕರ್ಮ ಭೂಮಿ ಭಾರತದ ನೆಲದ ಋಣ ತೀರಿಸಿದ ಸಂತೆ ಶರಣೆ. ಮನುಕುಲವು ನೆನಪಿಡುವ ಮಹಾ ಮಾನವತಾವಾದಿ ಸಾವಿಲ್ಲದ ಶರಣೆ _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಇತರೆ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ

ಛಾಯಾಚಿತ್ರ ಸಂಗಾತಿ “ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು (ಪ್ರಪಂಚದಾದ್ಯಂತ ದಿ.19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ಯ ಈ ಲೇಖನ )  ***                    ಕಣ್ಣಿಗೆ ಕಾಣುವ ಒಂದು ಕ್ಷಣವನ್ನು ಕ್ಯಾಮೆರಾದ ಕಣ್ಣಿನ ಮೂಲಕ ಸೆರೆಹಿಡಿದು, ಅದನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡುವ ಛಾಯಾಗ್ರಾಹಕರ ಸೃಜನಶೀಲತೆ ಮತ್ತು ಪರಿಶ್ರಮವನ್ನು ಗೌರವಿಸುವ ದಿನವಿದು. ಛಾಯಾಗ್ರಹಣವೆಂದರೆ ಕೇವಲ ಒಂದು ಚಿತ್ರ ತೆಗೆಯುವ ತಂತ್ರವಲ್ಲ; ಅದು ಕಾಲವನ್ನು ದಾಖಲಿಸುವ ಕಲೆ. ಒಂದು ಛಾಯಾಚಿತ್ರದಲ್ಲಿ ವ್ಯಕ್ತಿಯ ಭಾವನೆ, ಸಮಾಜದ ಸ್ಥಿತಿ, ಪ್ರಕೃತಿಯ ಸೌಂದರ್ಯ, ಇತಿಹಾಸದ ಹೆಜ್ಜೆಗುರುತು ಹಾಗೂ ಬದುಕಿನ ಅನೇಕ ನೆನಪುಗಳು ಅಡಗಿರುತ್ತವೆ. ಮಾತುಗಳಿಂದ ಹೇಳಲಾಗದ ಭಾವವನ್ನೂ ಒಂದು ಉತ್ತಮ ಛಾಯಾಚಿತ್ರ ಹೇಳಬಲ್ಲದು. ಒಬ್ಬ ಛಾಯಾಗ್ರಾಹಕ ಸಾಮಾನ್ಯ ದೃಶ್ಯದಲ್ಲಿಯೂ ಅಸಾಮಾನ್ಯ ಸೌಂದರ್ಯವನ್ನು ಕಂಡುಕೊಳ್ಳುತ್ತಾನೆ. ಬೆಳಕು–ನೆರಳು, ಬಣ್ಣ–ಭಾವ, ಕ್ಷಣ–ಕಾಲ ಇವೆಲ್ಲವನ್ನೂ ಸಮನ್ವಯಗೊಳಿಸಿ ಒಂದು ಚಿತ್ರಕ್ಕೆ ಜೀವ ತುಂಬುತ್ತಾನೆ. ಕೆಲವೊಮ್ಮೆ ಒಂದು ಛಾಯಾಚಿತ್ರವೇ ಸಾವಿರಾರು ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳಲ್ಲಿಯೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗಿವೆ. ಪ್ರತಿಯೊಬ್ಬರೂ ಛಾಯಾಚಿತ್ರ ತೆಗೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಚಿತ್ರ ತೆಗೆಯುವುದು ಬೇರೆ, ಚಿತ್ರವನ್ನು ಸೃಷ್ಟಿಸುವುದು ಬೇರೆ. ಸರಿಯಾದ ಕ್ಷಣವನ್ನು ಗುರುತಿಸುವ ದೃಷ್ಟಿ, ಬೆಳಕಿನ ಅರಿವು, ಸಂಯೋಜನೆಯ ಪ್ರಜ್ಞೆ ಮತ್ತು ವಿಷಯದ ಮೇಲಿನ ಸೂಕ್ಷ್ಮ ಸಂವೇದನೆ ಒಬ್ಬ ಉತ್ತಮ ಛಾಯಾಗ್ರಾಹಕನನ್ನು ರೂಪಿಸುತ್ತವೆ. ರೂಪ ದರ್ಶಿ ಫೋಟೋ ಗ್ರಫಿ, ನಿಸರ್ಗ, ವ್ಯಾಪಾರಿ, ಪತ್ರಿಕೋದ್ಯಮ,  ಫಿಲಂ ಫೋಟೋ ಗ್ರಫಿ ಹೀಗೆ ಅನೇಕ ಬಗೆಯ ಫೋಟೋ ಗ್ರಾಫರ್ಗಳ ಜೊತೆಗೆ ಹವ್ಯಾಸಿ ಫೋಟೋ ಗ್ರಾಫರ್ ನಮ್ಮ ನಡುವೆ ಇದ್ದಾರೆ.ಸುದ್ದಿ ಛಾಯಾಗ್ರಾಹಕರು ಸಮಾಜದ ಘಟನೆಗಳನ್ನು ದಾಖಲಿಸುತ್ತಾರೆ. ಪ್ರಕೃತಿ ಛಾಯಾಗ್ರಾಹಕರು ಪರಿಸರದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಾರೆ. ವನ್ಯಜೀವಿ ಛಾಯಾಗ್ರಾಹಕರು ಅಪರೂಪದ ಜೀವಿಗಳ ಬದುಕನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಕಲಾತ್ಮಕ ಛಾಯಾಗ್ರಾಹಕರು ಕಲ್ಪನೆ ಮತ್ತು ಸೌಂದರ್ಯದ ಹೊಸ ಲೋಕವನ್ನು ನಿರ್ಮಿಸುತ್ತಾರೆ. ಹೀಗೆ ಛಾಯಾಗ್ರಹಣದ ಪ್ರತಿಯೊಂದು ಕ್ಷೇತ್ರವೂ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಒಂದು ಹಳೆಯ ಛಾಯಾಚಿತ್ರವನ್ನು ನೋಡಿದಾಗ ನಾವು ಕೇವಲ ಮುಖಗಳನ್ನು ನೋಡುವುದಿಲ್ಲ; ಅದರೊಂದಿಗೆ ಒಂದು ಕಾಲಘಟ್ಟವನ್ನೇ ಮರುಕಾಣುತ್ತೇವೆ. ಕುಟುಂಬದ ನೆನಪುಗಳಿಂದ ಹಿಡಿದು ಐತಿಹಾಸಿಕ ಘಟನೆಗಳವರೆಗೆ, ಛಾಯಾಚಿತ್ರಗಳು ನಮ್ಮ ಸ್ಮೃತಿಯ ಅಮೂಲ್ಯ ದಾಖಲೆಗಳಾಗಿವೆ. ಆದ್ದರಿಂದ ವಿಶ್ವ ಛಾಯಾಗ್ರಾಹಕರ ದಿನವು ಕೇವಲ ಛಾಯಾಗ್ರಾಹಕರಿಗೆ ಶುಭಾಶಯ ಕೋರುವ ದಿನವಲ್ಲ. ಕಾಲವನ್ನು ಸೆರೆಹಿಡಿದು ನೆನಪುಗಳಿಗೆ ಜೀವ ನೀಡುವ ಪ್ರತಿಯೊಬ್ಬ ಛಾಯಾಗ್ರಾಹಕನ ಕಲೆಯನ್ನು ಗೌರವಿಸುವ ದಿನ. ಅವರ ಕ್ಯಾಮೆರಾದ ಕಣ್ಣು ಸಮಾಜವನ್ನು ನೋಡುವ ಮತ್ತೊಂದು ಸೂಕ್ಷ್ಮ ಕಣ್ಣಾಗಿದೆ. ಕ್ಷಣ ಕಳೆದುಹೋಗಬಹುದು; ಕಾಲ ಮುಂದೆ ಸಾಗಬಹುದು; ಆದರೆ ಅದನ್ನು ಪ್ರೀತಿಯಿಂದ ಸೆರೆಹಿಡಿದ ಒಂದು ಛಾಯಾಚಿತ್ರ ಮಾತ್ರ ನೆನಪಾಗಿ ನಮ್ಮೊಂದಿಗೆ ಉಳಿಯುತ್ತದೆ.ಗದಗ ಜಿಲ್ಲೆಯ ಪತ್ರಿಕಾ ಫೋಟೋ ಗ್ರಾಫರ್ ಗಳಿಗೆ ಒಂದು ವಿಶೇಷ ಸ್ಥಾನ ಮಾನ ವಿದೆ ಜೊತೆಗೆ ಇತಿಹಾಸ ಕೂಡ.   ನಾಗಪ್ಪ ಮಹೇಂದ್ರ ಕರ್ ಅವರು 1922ರಲ್ಲಿ ಸ್ಟುಡಿಯೋ ಆರಂಭಸಿದರು. ಮಹಾತ್ಮಾ ಗಾಂಧೀಜಿ ಯವರು ಜಕ್ಕಲಿ ಗೆ ಆಗಮಿಸಿದ ಸಂದರ್ಭವನ್ನು ಸೆರೆ ಹಿಡಿದಿದ್ದು ಈ ನಾಗಪ್ಪ ಅವರೇ. ಅವರ 5ಜನ ಮಕ್ಕಳು ಕೂಡ ಫೋಟೋಗ್ರಫಿಯಲ್ಲಿ ತೊಡಗಿ ಕೊಂಡಿದ್ದಾರೆ. ಅವರಲ್ಲಿ ಭೀಮರಾವ, ದತ್ತಾತ್ರೇಯ, ಶ್ರೀಧರ್, ವಸಂತ, ಮಧುಕರ್ ಅವರು ತಮ್ಮ ಉಸಿರನ್ನು ಫೋಟೋ ಗ್ರಫಿ ಗಾಗಿ ಮೀಲಿಟ್ಟಿದ್ದಾರೆ.73 ವಸಂತ ದಲ್ಲಿರುವ ವಸಂತ ಮಹೇಂದ್ರಕರ ಅವರು ಗದಗ ಕಾಟನ್ ಸೇಲ್ಸ್ ಸೊಸೈಟಿ ಗೆ ಆಗಮಿಸಿದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಯವರ ಫೋಟೋ ನಾನೇ ತೆಗಿದಿದ್ದು ಅಂತಾ ಹೆಮ್ಮೆ ಮತ್ತು ಅಭಿಮಾನದಿಂದ ಹೇಳುತ್ತಾರೆ ಅವರ ಕಂಗಳಲ್ಲಿ ಮೂರನೇ ಕಣ್ಣು ಕೂಡ ಗತ ಕಾಲದ ಘಟನೆಯ ರೀಲು ಚಕ್ ಚಕ್ ಹೊರಳುತ್ತದೆ. ಇವರ ಮಕ್ಕಳು ಗುತ್ತಿಗೆ ಆಧಾರದ ಮೇಲೆ ವಿಶ್ವ ವಿದ್ಯಾಲಯದ ಫೋಟೋ ಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನವೋದಯ. ವಾರ್ತಾ ಇಲಾಖೆಯ ಫೋಟೋ ಗ್ರಾಫರ್ ಕೂಡ ಹೌದು ಇವರ ಸಹೋದರ ಪೊಲೀಸ್ ಇಲಾಖೆಯ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಹೋದರರ ಮಗ ಚೋಟು  ಕಿತ್ತೂರು ಕರ್ನಾಟಕ ಪತ್ರಿಕೆಯ ಫೋಟೋ ಗ್ರಾಫರ್. ಪ್ರಜಾವಾಣಿ ಪತ್ರಿಕೆ ಫೋಟೋ ಗ್ರಾಫರ್ ಬನೇಶ್ ಕುಲಕರ್ಣಿ ಕೆಳೆದ 37 ವರುಷಗಳಿಂದ ಕ್ಯಾಮರಾ ಕೊರಳಿಗೆ ಹಾಕಿ ಕೊಂಡಿದ್ದಾರೆ. ಈ ಟಿವಿ, ಉದಯ ಟಿವಿ ಕ್ಯಾಮರಾ ಮ್ಯಾನ್. ಫೋಟೋ ಗ್ರಾಫರ್ ಆಗಿ ಸಧ್ಯ ಪ್ರಜಾವಾಣಿ ಪತ್ರಿಕೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯ ಕರ್ನಾಟಕ ಜಿಲ್ಲಾ ವರದಿ ಗಾರ ಸಲೀಂ ಬಳಬಟ್ಟಿ ಯವರದು ವಿಶೇಷ ಫೋಟೋ ಗ್ರಫಿ ಅವರ ತಂದೆಯವರಾದ ಬಂಡಾಯ ಸಾಹಿತಿ, ಕವಿ, ರಂಗಭೂಮಿ ಕಲಾವಿದ, ಫೋಟೋ ಗ್ರಾಫರ್ ಬಿ. ಬಾಬು ಅವರಿಂದ ಬಂದ ಬಳುವಳಿಯಾಗಿದೆ.  ಸಮೋಹ ಸಂವಹನ ಮತ್ತು ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸನ್ 2008ರಲ್ಲಿ ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ಯ ಫೋಟೋ ಜರ್ನಲಿಸ್ಟ ಆಗಿ ಸೇವೆ ಆರಂಭ ಮಾಡಿದರು. ಉದಯ ವಾಣಿ. ಕನ್ನಡ ಪ್ರಭಾ ಪತ್ರಿಕೆ ವರದಿ ಗಾರರಾಗಿ ವಿಶ್ವ ವಾಣಿ ಉಪ ಸಂಪಾದಕರಾಗಿ ಸೇವೆ ಕೂಡ ಸಲ್ಲಿಸಿದ್ದಾರೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಛಾಯಾ ಚಿತ್ರ ಪ್ರದರ್ಶನ ದಲ್ಲಿ ಭಾಗ ವಹಿಸಿ ಪ್ರಶಸ್ತಿ ಕೂಡ ಪಡೆದಿದ್ದಾರೆ.    ಕಳೆದ 34ವರ್ಷ ಗಳಿಂದ ಕೊರಳಿಗೆ ಕ್ಯಾಮರಾ ಹಾಕಿಕೊಂಡ  ಜಂಗಮ ಮುತ್ತು ಹಾಳಕೇರಿ. ಫೋಟೋ ಗ್ರಾಫರ್ ಚಿತ್ರ ಮಾತ್ರ ತೆಗೆಯುವದಲ್ಲ  ತನ್ನನ್ನು ತಾನೇ ಪ್ರಶ್ನಿಸಿ ಕೊಳ್ಳಬೇಕು, ಕ್ಯಾಮರಾ ಕಟ್ಟಿದ ಕೊರಳು ನೂರು ಕೊರಳುಗಳ ಬಗ್ಗೆ ಚಿಂತಿಸಬೇಕು . ಪ್ರಚಲಿತ ಸಮಸ್ಯೆ ಗಳ ಬಗ್ಗೆ, ಗ್ರಾಮೀಣ ಬದುಕಿನ ಜೀವನ ಬಗ್ಗೆ ಚಿಂತಿಸಬೇಕೆಂಬುದು ಅವರ ಆಶಯ. ಅಲೆಮಾರಿ ಕುರಿಗಾಯಿ ಗಳು ನೀರಿಗಾಗಿ ಅಲೆಯುವ ಮುತ್ತು ಅವರು ತೆಗೆದ ಫೋಟೋ 25 ಸಾವಿರ ರೂ ಬಹುಮಾನ ಪಡೆಯಿತು ಆ ಬಹುಮಾನ ದ ಮೊತ್ತ ಕುರಿಗಾಯಿಗಳಿಗೆ ಕಾಣಿಕೆ ಯಾಗಿ ಕೊಟ್ಟ ಸಹೃದಯಿ ಯಾಗಿದ್ದಾರೆ. ನಾಡಿನ ತುಂಬೆಲ್ಲ ಇವರ ಛಾಯಾಚಿತ್ರ ಪ್ರದರ್ಶನ ಗೊಂಡಿವೆ. ಮದುವೆ ಕ್ಷಣ ಗಳು ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುವರ್ಣ ನ್ಯೂಸ್ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಮುತ್ತು ಅವರದು. ಪ್ರತಿ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮ ದಲ್ಲಿ ಮುತ್ತು ಅವರ ಹಾಜರಾತಿ ಇದ್ದೆ ಇರುತ್ತದೆ. ಸಾರ್ವಜನಿಕ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮ ಗಳಲ್ಲಿ ರಾಮು ವಗ್ಗಿ ವಿಜಯ ಕರ್ನಾಟಕ ಪತ್ರಿಕೆ, ಲಕ್ಷ್ಮಣ ವಗ್ಗಿ ಉದಯ ವಾಣಿ ಪತ್ರಿಕೆ ಫೋಟೋ ಗಳಾಗಿ ಎಲ್ಲರ ಗಮನ ಸೆಳೆದಿದ್ದಾರೆ.ಗದಗ ಉತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಪ್ರಶಸ್ತಿ ಪುರಸ್ಕಾರ ಗಳನ್ನು ಸಹೋದರರು ತಮ್ಮ ಮೂಡಿಗೇರಿಸಿ ಕೊಂಡಿದ್ದಾರೆ.ಸಂಜೆವಾಣಿ ಪತ್ರಿಕೆಯ ಬಸವ ರಾಜ ದಂಡಿನ ಹಿರಿಯ ಪತ್ರ ಕರ್ತ್ ರು ಫೋಟೋ ಗ್ರಾಫರ್ ಕೂಡ.ಸಮಾಜ ಮುಖಿ ಚಿಂತನೆಗಳ ಬರವಣಿಗೆ ಯಲ್ಲಿ ತೊಡಗಿ ಕೊಂಡವರು ನಾಡಿನ ಅನೇಕ ಪತ್ರಿಕೆಗಳಲ್ಲಿ ಸಂಘಟನೆಗಳಲ್ಲಿ ಗುರುತಿಸಿ ಕೊಂಡವರು. ಶಂಕರ್ ಗುರಿಕಾರ. ಉಮೇಶ್ ಸಜ್ಜನ ಮಾತ್ರವಲ್ಲ ಜಿಲ್ಲೆಯ ತುಂಬಾ ಅನೇಕ ಪತ್ರಿಕೆ ಛಾಯಾಚಿತ್ರ ಕಲಾವಿದರು ಇದ್ದಾರೆ.ai ಮೊಬೈಲ್ ಹಾವಳಿಗಳ ನಡುವೆ ತಮ್ಮ ತನ ಉಳಿಸಿಕೊಂಡು ಪತ್ರಿಕಾ ಛಾಯಾ ಚಿತ್ರಕಾರರಾಗಿ ಪರೋಕ್ಷ ಅಪರೋಕ್ಷ ವಾಗಿ ಪತ್ರಿಕೋದ್ಯಮದ ಘನತೆ ಗೌರವ ಎತ್ತಿ ಹಿಡಿಯುತ್ತಿದ್ದಾರೆ ಇದೊಂದು ಅಭಿಮಾನ ದ ಸಂಗತಿ ವಿಶ್ವ ಛಾಯಾಗ್ರಾಹಕರ ದಿನದಂದು ಕ್ಷಣಗಳಿಗೆ ಚಿರಂತನತೆ ನೀಡುವ ಎಲ್ಲ ಛಾಯಾಗ್ರಾಹಕರಿಗೆ ಹೃತ್ಪೂರ್ವಕ ಶುಭಾಶಯಗಳು.. ಎ. ಎಸ್. ಮಕಾನದಾರಕವಿ, ಪ್ರಕಾಶಕ, ಸಂಪಾದಕನಿರಂತರ ಪ್ರಕಾಶನ, ಗದಗ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ Read Post »

ಇತರೆ

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ

ವಿಮರ್ಶಾ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ”           ಇಂದು ಸಾಹಿತ್ಯ ಲೋಕದಲ್ಲಿ ‘ವಿಮರ್ಶೆ’ ಎಂಬ ಪದವು ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆದರೆ ವಿಪರ್ಯಾಸವೆಂದರೆ, ತನ್ನ ಮೂಲ ಅರ್ಥವನ್ನು ಕ್ರಮೇಣ ಕಳೆದುಕೊಳ್ಳುತ್ತಿರುವುದು! ಪುಸ್ತಕ ಪರಿಚಯ, ಕೃತಿಯ ಸಂಕ್ಷಿಪ್ತ ಸಾರಾಂಶ, ಲೇಖಕರ ಪರಿಚಯ, ಪ್ರಶಂಸಾತ್ಮಕ ಲೇಖನ, ಪ್ರಚಾರಾತ್ಮಕ ಬರಹ, ಮುನ್ನುಡಿ-ಬೆನ್ನುಡಿಯ ವಿವರಣೆ, ಬಿಡುಗಡೆ ಸಮಾರಂಭದ ಭಾಷಣ, ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ, ವೈಯಕ್ತಿಕ ಅಭಿಪ್ರಾಯ ….. ಇವೆಲ್ಲವನ್ನೂ ‘ವಿಮರ್ಶೆ’ಯೆಂದು ಕರೆಯುವ ಪ್ರವೃತ್ತಿ ವ್ಯಾಪಕವಾಗುತ್ತಿದೆ. ಈ ಗೊಂದಲವು ‘ವಿಮರ್ಶೆ’ಯ ಸ್ವರೂಪವನ್ನೇ ವಿಕೃತಗೊಳಿಸುತ್ತಿದೆ. ಪುಸ್ತಕವನ್ನು ಓದಿದ ನಂತರ ಅದನ್ನು ಪರಿಚಯಿಸುವುದು ಪುಸ್ತಕ ಪರಿಚಯ; ಅದರ ವಿಷಯವಸ್ತುವನ್ನು ವಿವರಿಸುವುದು ವಿವರಣೆ; ಕೃತಿಯ ಪ್ರಸಾರ ಮತ್ತು ಓದುಗರ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಬರೆಯುವುದು ಪ್ರಚಾರಾತ್ಮಕ ಬರಹ; ಓದುಗರ ವೈಯಕ್ತಿಕ ಅನುಭವವನ್ನು ದಾಖಲಿಸುವುದು ಓದುಗರ ಪ್ರತಿಕ್ರಿಯೆ. ಹಾಗಾಗಿ ಪುಸ್ತಕ ಪರಿಚಯವನ್ನು ಪರಿಚಯವೆಂದೇ, ಪ್ರಚಾರ ಬರಹವನ್ನು ಪ್ರಚಾರವೆಂದೇ, ಓದುಗರ ಪ್ರತಿಕ್ರಿಯೆಯನ್ನು ಪ್ರತಿಕ್ರಿಯೆಯೆಂದೇ ಗುರುತಿಸಬೇಕಾಗಿದೆ. ಇವೆಲ್ಲವೂ ತಮ್ಮದೇ ಆದ ಸಾಹಿತ್ಯಿಕ ಮಹತ್ವವನ್ನು ಹೊಂದಿವೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯೂ ತನ್ನದೇ ಆದ ಉದ್ದೇಶ ಮತ್ತು ಮಿತಿಯನ್ನು ಹೊಂದಿವೆ. ಅವುಗಳ ನಡುವಿನ ಭೇದವನ್ನು ಉಳಿಸಿಕೊಳ್ಳುವುದೇ ಸಾಹಿತ್ಯದ ಆರೋಗ್ಯವನ್ನು ಕಾಪಾಡುವ ಮೊದಲ ಹೆಜ್ಜೆಯಾಗಿದೆ.        ಇಂದು ಸಾಹಿತ್ಯ ಲೋಕದಲ್ಲಿ ಪುಸ್ತಕ ಪರಿಚಯ, ಓದುಗರ ಪ್ರತಿಕ್ರಿಯೆ, ಪ್ರಚಾರಾತ್ಮಕ ಬರಹ ಮತ್ತು ವಿಮರ್ಶೆ ಇವುಗಳ ನಡುವಿನ ಗಡಿರೇಖೆಗಳು ಮಸುಕಾಗುತ್ತಿರುವ ಸಂದರ್ಭದಲ್ಲಿ, ಅವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಮರುನಿರ್ವಚಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯನ್ನೂ ಅದರ ಉದ್ದೇಶಕ್ಕೆ ಅನುಗುಣವಾಗಿ ಗುರುತಿಸಿದಾಗ ಮಾತ್ರ ವಿಮರ್ಶೆಯ ಗೌರವ ಮತ್ತು ಸಾಹಿತ್ಯದ ಆರೋಗ್ಯ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯ. ‘ವಿಮರ್ಶೆ’ಯ ಉದ್ದೇಶವು ಕೇವಲ ಮಾಹಿತಿ ನೀಡುವುದಾಗಲಿ ಅಥವಾ ಆಸಕ್ತಿ ಹುಟ್ಟಿಸುವುದಾಗಲಿ ಅಲ್ಲ; ಕೃತಿಯ ಅಂತರಂಗವನ್ನು ವಿವೇಚನಾತ್ಮಕವಾಗಿ ಪರಿಶೀಲಿಸಿ ಅದರ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವುದಾಗಿದೆ. ಅಂದರೆ, ಕೃತಿಯ ರೂಪ, ಆಶಯ, ಭಾಷೆ, ಶೈಲಿ, ಸಾಂಸ್ಕೃತಿಕ ಹಿನ್ನೆಲೆ, ಸೌಂದರ್ಯಪ್ರಜ್ಞೆ ಮತ್ತು ಸಾಹಿತ್ಯಿಕ ಮೌಲ್ಯಗಳನ್ನು ಸಮಗ್ರವಾಗಿ ಪರಿಶೀಲಿಸುವ ಬೌದ್ಧಿಕ ಹಾಗೂ ಸೃಜನಾತ್ಮಕ ಕ್ರಿಯೆ. ಅದರ ಗುರಿ ಲೇಖಕರನ್ನು ಸಂತೋಷಪಡಿಸುವುದೂ ಅಲ್ಲ, ನೋಯಿಸುವುದೂ ಅಲ್ಲ; ಕೃತಿಯ ಸಾಹಿತ್ಯಸತ್ಯವನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ದಾಖಲಿಸುವುದಾಗಿದೆ.        ಸಮಕಾಲೀನ ಸಾಹಿತ್ಯದಲ್ಲಿ ಇನ್ನೊಂದು ಪ್ರವೃತ್ತಿಯೂ ಕಂಡುಬರುತ್ತಿದೆ. ಕೆಲವರು ಪ್ರಶಂಸೆಯನ್ನೇ ‘ವಿಮರ್ಶೆ’ ಎಂದು ಭಾವಿಸುತ್ತಿರುವುದು; ಇನ್ನೂ ಕೆಲವರು ದೋಷಗಳನ್ನು ಹುಡುಕುವುದನ್ನೇ ‘ವಿಮರ್ಶೆ’ಯ ಮುಖ್ಯ ಗುರಿಯೆಂದು ಪರಿಗಣಿಸುತ್ತಿರುವುದು. ಈ ಎರಡೂ ಅತಿರೇಕಗಳು ‘ವಿಮರ್ಶೆ’ಯ ನಿಜವಾದ ಧರ್ಮಕ್ಕೆ ವಿರುದ್ಧವಾಗಿವೆ. ಹಾಗಂತ ಹೊಗಳಿಕೆಯಾಗಲಿ, ತೆಗಳಿಕೆಯಾಗಲಿ ವಿಮರ್ಶೆಯಾಗುವುದಿಲ್ಲ. ಅದು ಪ್ರಶಂಸೆ ಮತ್ತು ಟೀಕೆ ಎಂಬ ಎರಡೂ ಅಂಶಗಳನ್ನು ಮೀರಿದ, ನ್ಯಾಯಸಮ್ಮತ ವಿವೇಚನೆಯಾಗಿದೆ. ಕೃತಿಯಲ್ಲಿ ಗುಣಗಳಿದ್ದರೆ ಅವುಗಳನ್ನು ಸೂಕ್ತವಾಗಿ ಗುರುತಿಸುವ, ಮಿತಿಗಳಿದ್ದರೆ ಅವುಗಳನ್ನು ವಸ್ತುನಿಷ್ಠವಾಗಿ ಸೂಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಆದರೆ ಈ ಎರಡನ್ನೂ ಮಾಡುವಾಗ ವಿಮರ್ಶಕರ ವೈಯಕ್ತಿಕ ರುಚಿ, ಸ್ನೇಹ, ದ್ವೇಷ, ಪೂರ್ವಾಗ್ರಹ ಅಥವಾ ಸಿದ್ಧಾಂತಗಳ ಒತ್ತಡ ನಿರ್ಣಾಯಕವಾಗಬಾರದು. ನಿರ್ಣಾಯಕವಾಗಬೇಕಾದುದು ಕೃತಿಯ ಸ್ವರೂಪ ಮತ್ತು ಅದರ ಸಾಹಿತ್ಯಿಕ ಮೌಲ್ಯ ಮಾತ್ರ! ನಿಜವಾದ ವಿಮರ್ಶೆಯು ಕೃತಿಯ ಕಥೆಯನ್ನು ಪುನಃ ಹೇಳುವುದಿಲ್ಲ; ಕೃತಿಯೊಳಗೆ ಅಡಗಿರುವ ಅರ್ಥವನ್ನು ಅನಾವರಣಗೊಳಿಸುತ್ತದೆ. ಅದು ಲೇಖಕರನ್ನು ಕೇಂದ್ರವಾಗಿಸಿಕೊಳ್ಳುವುದಿಲ್ಲ; ಕೃತಿಯನ್ನು ಕೇಂದ್ರವಾಗಿಸಿಕೊಳ್ಳುತ್ತದೆ. ಅದು ಓದುಗರ ಮೇಲೆ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸುವುದಿಲ್ಲ; ಅವರ ಗ್ರಹಿಕೆಯನ್ನು ವಿಸ್ತರಿಸುತ್ತದೆ. ವಿಮರ್ಶಕರು ನ್ಯಾಯಾಧೀಶರಂತೆ ಶಿಕ್ಷೆ ವಿಧಿಸುವವರೂ ಅಲ್ಲ; ಪ್ರಚಾರಕರಂತೆ ಹೊಗಳುವವರೂ ಅಲ್ಲ. ಅವರು ಕೃತಿಯ ಅಂತರಂಗವನ್ನು ಸೂಕ್ಷ್ಮವಾಗಿ ಅರಿತು, ಅದರ ಸಾಹಿತ್ಯಿಕ ಸತ್ಯವನ್ನು ಸಹೃದಯ ಓದುಗರ ಮುಂದಿಡುವ ಮಧ್ಯವರ್ತಿ!        ಭಾರತೀಯ ಕಾವ್ಯಮೀಮಾಂಸೆಯು ವಿಮರ್ಶಕರಲ್ಲಿ ಸಹೃದಯತೆಯನ್ನು ಅತ್ಯುನ್ನತ ಗುಣವೆಂದು ಪರಿಗಣಿಸುತ್ತದೆ. ಸಹೃದಯತೆ ಎಂದರೆ ಕೇವಲ ಮೆಚ್ಚುಗೆಯಲ್ಲ; ಕೃತಿಯ ಅಂತರಂಗದೊಂದಿಗೆ ತಾದಾತ್ಮ್ಯ ಸಾಧಿಸುವ ಸಾಮರ್ಥ್ಯ. ಪಾಶ್ಚಾತ್ಯ ವಿಮರ್ಶೆಯು ವಸ್ತುನಿಷ್ಠತೆ, ತಾರ್ಕಿಕತೆ ಮತ್ತು ಸಾಹಿತ್ಯಿಕ ಮಾನದಂಡಗಳನ್ನು ಒತ್ತಿ ಹೇಳುತ್ತದೆ. ಈ ಎರಡೂ ಪರಂಪರೆಗಳ ಸಾರ ಒಂದೇ, ಅದೆಂದರೆ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ಜ್ಞಾನ ಮತ್ತು ಸಂವೇದನೆಯ ಸಮನ್ವಯದ ವಿವೇಚನಾತ್ಮಕ ಕ್ರಿಯೆಯಾಗಿರಬೇಕು ಎಂಬುದು! ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಪುಸ್ತಕ ಪರಿಚಯವನ್ನು ವಿಮರ್ಶೆ ಎಂದು ಕರೆಯುವುದು, ಪ್ರಚಾರಾತ್ಮಕ ಬರಹವನ್ನು ವಿಮರ್ಶೆ ಎಂದು ಭಾವಿಸುವುದು ಅಥವಾ ವೈಯಕ್ತಿಕ ಅಭಿಪ್ರಾಯವನ್ನು ವಿಮರ್ಶೆಯೆಂದು ಪ್ರತಿಪಾದಿಸುವುದು ವಿಮರ್ಶೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತದೆ. ಇವು ಸಾಹಿತ್ಯ ಸಂವಹನದ ಅಗತ್ಯ ರೂಪಗಳಾದರೂ, ಅವುಗಳನ್ನು ವಿಮರ್ಶೆಯೊಂದಿಗೆ ಸಮೀಕರಿಸುವುದು ಶಾಸ್ತ್ರೀಯ ದೃಷ್ಟಿಯಿಂದ ಸಮಂಜಸವಲ್ಲ. ವಿಮರ್ಶೆಯು ವಿಶ್ಲೇಷಣೆ, ವ್ಯಾಖ್ಯಾನ, ಮೌಲ್ಯಮಾಪನ, ಸೌಂದರ್ಯಾಸ್ವಾದನೆ ಮತ್ತು ವಸ್ತುನಿಷ್ಠ ವಿವೇಚನೆಯ ಎಲ್ಲ ಆಯಾಮಗಳ ಸಮನ್ವಯದಿಂದ ರೂಪುಗೊಳ್ಳುವ ಸ್ವತಂತ್ರ ಸಾಹಿತ್ಯ ಪ್ರಕಾರವಾಗಿದೆ. ಹೀಗಾಗಿ ವಿಮರ್ಶೆಯು ಕೃತಿಯನ್ನು ಹೊಗಳುವ ಸಾಧನವಾಗಲಿ, ಅವಮಾನಿಸುವ ಆಯುಧವಾಗಲಿ, ಲೇಖಕರನ್ನು ಪ್ರತಿಷ್ಠಾಪಿಸುವ ವೇದಿಕೆಯಾಗಲಿ, ಅವರನ್ನು ನಿರಾಕರಿಸುವ ನ್ಯಾಯಪೀಠವಾಗಲಿ ಅಲ್ಲ. ಅದು ಕೃತಿಯ ಸಾಹಿತ್ಯಿಕ ಸತ್ಯವನ್ನು ಅನಾವರಣಗೊಳಿಸಿ, ಅದರ ಮೌಲ್ಯವನ್ನು ಸಮರ್ಥವಾಗಿ ನಿರ್ಣಯಿಸಿ, ಲೇಖಕ ಮತ್ತು ಸಹೃದಯ ಓದುಗರ ನಡುವೆ ಅರ್ಥಪೂರ್ಣ ಸಂವಾದವನ್ನು ನಿರ್ಮಿಸುವ ಸೃಜನಾತ್ಮಕ ಬೌದ್ಧಿಕ ಪ್ರಕ್ರಿಯೆಯಾಗಿದೆ.        ಸಾಹಿತ್ಯಕ್ಕೆ ಶ್ರೇಷ್ಠ ಸೃಜನಶೀಲರು ಎಷ್ಟು ಅಗತ್ಯವೋ, ಅಷ್ಟೇ ಪ್ರಾಮಾಣಿಕ ವಿಮರ್ಶಕರೂ ಅಗತ್ಯ. ಸೃಜನಶೀಲರು ಸಾಹಿತ್ಯವನ್ನು ನಿರ್ಮಿಸಿದರೆ, ವಿಮರ್ಶಕರು ಅದರ ಮೌಲ್ಯವನ್ನು ಗುರುತಿಸುತ್ತಾರೆ, ಸಾಹಿತ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಹಾಗೂ ಓದುಗರ ಅಭಿರುಚಿಯನ್ನು ಪರಿಷ್ಕರಿಸುತ್ತಾರೆ. ಸೃಷ್ಟಿ ಸಾಹಿತ್ಯವನ್ನು ವಿಸ್ತರಿಸಿದರೆ, ವಿಮರ್ಶೆ ಅದನ್ನು ಆಳಗೊಳಿಸುತ್ತದೆ. ಈ ನೆಲೆಯಲ್ಲಿ ವಿವೇಚಿಸಿದಾಗ ವಿಮರ್ಶೆಯು ಸಾಹಿತ್ಯದ ಪರಾವಲಂಬಿಯಲ್ಲ; ಅದು ಸಾಹಿತ್ಯದ ಸಹಸೃಷ್ಟಿ. ಒಂದು ಉತ್ತಮ ಕೃತಿ ಹೇಗೆ ಓದುಗರಲ್ಲಿ ಹೊಸ ಅನುಭವವನ್ನು ಮೂಡಿಸುತ್ತದೆಯೋ, ಅದೇ ರೀತಿ ಉತ್ತಮ ವಿಮರ್ಶೆಯು ಆ ಅನುಭವಕ್ಕೆ ಅರ್ಥ, ಆಳ ಮತ್ತು ದೃಷ್ಟಿಯನ್ನು ನೀಡುತ್ತದೆ ಎಂಬುದು ಮನವರಿಕೆಯಾಗುತ್ತದೆ. ನಿಜವಾದ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ತರ್ಕದಿಂದ ನಿಯಂತ್ರಿತವಾದ, ಸೌಂದರ್ಯಪ್ರಜ್ಞೆಯಿಂದ ಸಮೃದ್ಧವಾದ ಮತ್ತು ಸಾಹಿತ್ಯಸತ್ಯಕ್ಕೆ ಬದ್ಧವಾದ ಚಿಂತನಾ ಪ್ರಕ್ರಿಯೆಯಾಗಿದೆ. ಅದು ಲೇಖಕರ ಪರವೂ ಅಲ್ಲ, ವಿರುದ್ಧವೂ ಅಲ್ಲ; ಸಾಹಿತ್ಯದ ಪರವಾಗಿದೆ. ಆದ್ದರಿಂದ ವಿಮರ್ಶಕರ ಮೊದಲ ನಿಷ್ಠೆ ವ್ಯಕ್ತಿಯ ಮೇಲಲ್ಲ, ಕೃತಿಯ ಮೇಲೆ; ಕೃತಿಯ ಮೇಲಲ್ಲ, ಸಾಹಿತ್ಯಸತ್ಯದ ಮೇಲೆ ಇರಬೇಕು. ಈ ನಿಷ್ಠೆಯೇ ವಿಮರ್ಶೆಯನ್ನು ಸಾಮಾನ್ಯ ಅಭಿಪ್ರಾಯದಿಂದ ಪ್ರತ್ಯೇಕಿಸಿ, ಅದನ್ನು ಶಾಸ್ತ್ರೀಯ, ಸೃಜನಾತ್ಮಕ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯಾಗಿ ರೂಪಿಸುತ್ತದೆ. ವಿಮರ್ಶೆಯ ಈ ಮೂಲ ಸ್ವರೂಪವನ್ನು ಪುನಃ ಸ್ಥಾಪಿಸುವುದು ಇಂದಿನ ಸಾಹಿತ್ಯ ಲೋಕದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ವಿಮರ್ಶೆಯನ್ನು ಅದರ ನಿಜವಾದ ಅರ್ಥದಲ್ಲಿ ಮರುಸ್ಥಾಪಿಸುವುದು ಕೇವಲ ವಿಮರ್ಶಕರ ಹೊಣೆಗಾರಿಕೆಯಲ್ಲ; ಲೇಖಕರು, ಓದುಗರು, ಸಂಶೋಧಕರು ಮತ್ತು ಸಾಹಿತ್ಯ ಸಂಸ್ಥೆಗಳು ಸೇರಿದಂತೆ ಸಮಸ್ತ ಸಾಹಿತ್ಯ ಸಮುದಾಯದ ಜವಾಬ್ದಾರಿಯಾಗಿದೆ. ಏಕೆಂದರೆ ಉತ್ತಮ ಸಾಹಿತ್ಯವು ಶ್ರೇಷ್ಠ ಸೃಷ್ಟಿಯಿಂದ ಮಾತ್ರವಲ್ಲ, ಪ್ರಾಮಾಣಿಕ ಮತ್ತು ಪ್ರಬುದ್ಧ ವಿಮರ್ಶೆಯಿಂದಲೂ ರೂಪುಗೊಳ್ಳುತ್ತದೆ.        ಸಾಹಿತ್ಯವು ಸೃಷ್ಟಿಯ ಕಲೆ; ವಿಮರ್ಶೆಯು ಆ ಸೃಷ್ಟಿಯ ಸತ್ಯವನ್ನು ಅನಾವರಣಗೊಳಿಸುವ ಪುನರ್ ಕಲೆ. ಆದ್ದರಿಂದ ವಿಮರ್ಶೆಯು ಯಾವುದೇ ವ್ಯಕ್ತಿಯ ಪರವಾಗಲೀ ವಿರುದ್ಧವಾಗಲೀ ನಿಲ್ಲದೆ; ಸಾಹಿತ್ಯದ ಪರವಾಗಿ ಇರುವಂಥದ್ದು. ಈ ಉದ್ದೇಶವನ್ನು ಸಾಧಿಸಲು ಪ್ರತಿಯೊಬ್ಬ ವಿಮರ್ಶಕರು ಪಾಲಿಸಬೇಕಾದ ಹತ್ತು ಮೂಲ ತತ್ತ್ವಗಳನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದು!√೦೧. ಕೃತಿಯೇ ಕೇಂದ್ರ; ಲೇಖಕರಲ್ಲ : ವಿಮರ್ಶೆಯ ವಿಷಯ ಲೇಖಕರ ವ್ಯಕ್ತಿತ್ವವಲ್ಲ, ಕೃತಿ. ಲೇಖಕರ ಖ್ಯಾತಿ, ಸ್ನೇಹ, ವೈಯಕ್ತಿಕ ಬದುಕು ಅಥವಾ ಸಾಮಾಜಿಕ ಸ್ಥಾನಮಾನವು ವಿಮರ್ಶೆಯ ಮಾನದಂಡವಾಗಬಾರದು. ಕೃತಿಯೇ ವಿಮರ್ಶೆಯ ಕೇಂದ್ರಬಿಂದುವಾಗಬೇಕು.√೦೨. ಸಂಪೂರ್ಣವಾಗಿ ಓದದೆ ಕೃತಿಯ ವಿಮರ್ಶೆ ಸಲ್ಲದು : ಅಪೂರ್ಣ ಓದು ಅಪೂರ್ಣ ತೀರ್ಪಿಗೆ ಕಾರಣವಾಗುತ್ತದೆ. ಕೃತಿಯ ಆಶಯ, ರಚನೆ, ಭಾಷೆ, ಸಂದರ್ಭ ಮತ್ತು ಅಂತರಾರ್ಥವನ್ನು ಗ್ರಹಿಸದೆ ನೀಡುವ ಯಾವುದೇ ಅಭಿಪ್ರಾಯ ವಿಮರ್ಶೆ ಎಂದು ಅನಿಸಿಕೊಳ್ಳುವುದಿಲ್ಲ.√೦೩. ಹೊಗಳಿಕೆ-ತೆಗಳಿಕೆ ಎರಡನ್ನೂ ಸಮಾನವಾಗಿ ಕಾಣಬೇಕು : ಕಾರಣವಿಲ್ಲದ ಪ್ರಶಂಸೆ ಹೇಗೆ ಅಪಾಯಕಾರಿಯೋ, ಕಾರಣವಿಲ್ಲದ ಟೀಕೆಯೂ ಅಷ್ಟೇ ಅಪಾಯಕಾರಿ. ಗುಣವನ್ನು ಗುಣವೆಂದೂ, ಮಿತಿಯನ್ನು ಮಿತಿಯೆಂದೂ ಹೇಳುವ ಪ್ರಾಮಾಣಿಕತೆಯೇ ವಿಮರ್ಶೆಯ ಧರ್ಮ.√೦೪. ವೈಯಕ್ತಿಕ ಅಭಿರುಚಿಯನ್ನು ಸಾಹಿತ್ಯಿಕ ಮಾನದಂಡವೆಂದು ಭಾವಿಸಲಾಗದು : ‘ನನಗೆ ಇಷ್ಟ’ ಅಥವಾ ‘ನನಗೆ ಇಷ್ಟವಿಲ್ಲ’ ಎಂಬುದು ಓದುಗರ ಪ್ರತಿಕ್ರಿಯೆಯಾಗಬಹುದು; ಆದರೆ ವಿಮರ್ಶೆಯ ನಿರ್ಣಯ ಸಾಹಿತ್ಯಿಕ ಆಧಾರಗಳ ಮೇಲೆ ನಿಲ್ಲಬೇಕು.√೦೫. ಮೊದಲು ಮನನ; ನಂತರ ನಿರ್ಣಯ : ಅರ್ಥೈಸದೆ ನಿರ್ಣಯಿಸುವುದು ಪೂರ್ವಾಗ್ರಹವಾಗುತ್ತದೆ. ಕೃತಿಯು ಏನು ಹೇಳುತ್ತದೆ ಎಂಬುದನ್ನು ಮೊದಲು ಗ್ರಹಿಸಬೇಕು; ಅದು ಎಷ್ಟರ ಮಟ್ಟಿಗೆ ಸಾಧಿಸಿದೆ ಎಂಬುದನ್ನು ನಂತರ ಪರಿಶೀಲಿಸಬೇಕು.√೦೬. ಕೃತಿಯ ಕಾಲ, ಸಮಾಜ ಮತ್ತು ಸಾಹಿತ್ಯಿಕ ಹಿನ್ನೆಲೆಯನ್ನು ಗೌರವಿಸಬೇಕು : ಯಾವುದೇ ಕೃತಿಯನ್ನು ಅದರ ಸಂದರ್ಭದಿಂದ ಬೇರ್ಪಡಿಸಿ ಅಳೆಯಲಾಗದು. ಪ್ರತಿಯೊಂದು ಕೃತಿಯೂ ತನ್ನ ಕಾಲದ, ಸಂಸ್ಕೃತಿಯ ಮತ್ತು ಸಾಹಿತ್ಯ ಪರಂಪರೆಯೊಂದಿಗೆ ಸಂವಾದ ನಡೆಸುತ್ತದೆ.√೦೭. ದೋಷಗಳನ್ನು ಮಾತ್ರವಲ್ಲ, ಗುಣಗಳನ್ನೂ ಗುರುತಿಸಬೇಕು : ವಿಮರ್ಶೆಯ ಗುರಿ ಕೇವಲ ತಪ್ಪುಗಳನ್ನು ಪತ್ತೆ ಹಚ್ಚುವುದಲ್ಲ; ಕೃತಿಯ ನಿಜವಾದ ಸಾಹಿತ್ಯಿಕ ಮೌಲ್ಯವನ್ನು ಕಂಡುಹಿಡಿಯುವುದು. ಮಿತಿಗಳನ್ನು ಸೂಚಿಸುವಷ್ಟೇ ಪ್ರಾಮಾಣಿಕವಾಗಿ ಸಾಧನೆಗಳನ್ನೂ ಗುರುತಿಸಬೇಕು.√೦೮. ಓದುಗರ ಗ್ರಹಿಕೆಯನ್ನು ವಿಸ್ತರಿಸಬೇಕು; ನಮ್ಮ ಅಭಿಪ್ರಾಯಗಳನ್ನು ಹೇರಬಾರದು : ಉತ್ತಮ ವಿಮರ್ಶೆಯು ಓದುಗರಿಗೆ ಯೋಚಿಸಲು ಕಲಿಸುತ್ತದೆ. ಅದು ಅಂತಿಮ ತೀರ್ಪನ್ನು ಹೇರದೆ, ಹೊಸ ಅರ್ಥಗಳ ಕಡೆಗೆ ದಾರಿ ತೋರಿಸುತ್ತದೆ.√೦೯. ಸತ್ಯಕ್ಕೆ ನಿಷ್ಠವಾಗಿರಬೇಕು; ವ್ಯಕ್ತಿಗೆ ಅಲ್ಲ : ಸ್ನೇಹ, ದ್ವೇಷ, ಗುಂಪುಗಾರಿಕೆ, ಸಿದ್ಧಾಂತ ಅಥವಾ ವೈಯಕ್ತಿಕ ಹಿತಾಸಕ್ತಿಗಳು ವಿಮರ್ಶೆಯನ್ನು ನಿಯಂತ್ರಿಸಬಾರದು. ವಿಮರ್ಶಕರ ಮೊದಲ ನಿಷ್ಠೆ ಸಾಹಿತ್ಯಸತ್ಯಕ್ಕೆ ಇರಬೇಕು.√೧೦. ವಿಮರ್ಶೆ ಸಾಹಿತ್ಯಸೇವೆ; ಅಧಿಕಾರವಲ್ಲ : ವಿಮರ್ಶಕರು ನ್ಯಾಯಾಧೀಶರಲ್ಲ; ಸಾಹಿತ್ಯದ ಸಹಯಾತ್ರಿ. ಹಾಗಾಗಿ ವಿಮರ್ಶಕರ ಕೆಲಸ ಲೇಖಕರನ್ನು ಭಯಪಡಿಸುವುದಲ್ಲ, ಸಾಹಿತ್ಯವನ್ನು ಸಮೃದ್ಧಗೊಳಿಸುವುದು. ಆದ್ದರಿಂದ ವಿನಯ, ಸಹೃದಯತೆ, ತಾರ್ಕಿಕತೆ ಮತ್ತು ವಸ್ತುನಿಷ್ಠತೆ ವಿಮರ್ಶಕರ ಶಾಶ್ವತ ಗುಣಗಳಾಗಿರಬೇಕು.      ಈ ದಶಸೂತ್ರಗಳು ವಿಮರ್ಶಕರನ್ನು ಬಂಧಿಸುವ ನಿಯಮಗಳಲ್ಲ; ಅವರನ್ನು ಪ್ರಬುದ್ಧರನ್ನಾಗಿ ಮಾಡುವ ಮಾರ್ಗಸೂಚಿಗಳಾಗಿವೆ. ಇವುಗಳನ್ನು ಅನುಸರಿಸಿದಾಗ ಮಾತ್ರ ವಿಮರ್ಶೆಯು ಪುಸ್ತಕ ಪರಿಚಯದಿಂದ ಭಿನ್ನವಾಗಲು; ಪ್ರಶಂಸೆ ಮತ್ತು ಟೀಕೆಯ ಮಿತಿಗಳನ್ನು ಮೀರಲು ಹಾಗೂ ವೈಯಕ್ತಿಕ ಅಭಿಪ್ರಾಯದಿಂದ ಸಾಹಿತ್ಯಿಕ ಮೌಲ್ಯಮಾಪನದ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ಆಗ ವಿಮರ್ಶೆಯು ಕೇವಲ ಒಂದು ಬರವಣಿಗೆಯ ವಿಧಾನವಾಗಿ ಉಳಿಯುವುದಿಲ್ಲ; ಬದಲಿಗೆ ಸಾಹಿತ್ಯದ ಗುಣಮಟ್ಟವನ್ನು ಕಾಪಾಡುವ ಸಾಂಸ್ಕೃತಿಕ ಹೊಣೆಗಾರಿಕೆಯಾಗುತ್ತದೆ. ಅಂದಾಗ ಮಾತ್ರ ‘ಸೃಷ್ಟಿಯು ಸಾಹಿತ್ಯಕ್ಕೆ ಜೀವ ನೀಡಿದರೆ, ವಿಮರ್ಶೆಯು ಆ ಜೀವಕ್ಕೆ ದಿಕ್ಕು ನೀಡುತ್ತದೆ’ ಎಂಬ ಸೂಕ್ತಿ ನಿಜವೆನಿಸುತ್ತದೆ. ಡಾ. ಮಲ್ಲಿನಾಥ ಎಸ್. ತಳವಾರಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರುಕನ್ನಡ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ Read Post »

ನಿಮ್ಮೊಂದಿಗೆ

ಬಾಗೇಪಲ್ಲಿ ಅವರ ಗಜಲ್

ಕಾವ್ಯ ಸಂಗಾತಿ ಬಾಗೇಪಲ್ಲಿ ಗಜಲ್ ಅದಾರು ಬಂದದು ಲಲನೆ ಥಟ್ಟoತ ಹೊಳೆಯುತಕರಿ ಮೋಡ ಸರಿದಾಗ ನಕ್ಷತ್ರ ಫಳ್ಳoತ ಮಿನುಗುತ ನೀಲಿ ಕಣ್ಣ, ತಲೆ ಕೂದಲಲಿ ಹೂ ವನು ಮುಡಿದವಳುಅವಳ ಆಗಮನದಿಂ ಕತ್ತಲೆ ಕೋಣೆ ಪಟ್ಟoತ ಬೆಳಗುತ ನೇರ ನಾಜೂಕು ಹೆದ್ದಾರಿಯಂತೆ ಬೈತಲೆ ಹೊಂದಿದವಳುಆದರ ರೂಬಿ ಕಲ್ಲ ಬಲಾಕು ಚಟ್ಟoತ ಫಳಗುಟ್ಟುತ ಕತ್ತಲ ಕೋಣೆ ಕತ್ತಲನು ಸುರೆಯಂತೆ ಸವಿಯುತ್ತಿರೆಅನಿರೀಕ್ಷಿತ ಮಿಂಚೊoದು ಫಳಾರoತ ಪ್ರಕಾಶಿಸುತ ಕೃಷ್ಣಾ! ನಿನ್ನ ಚಕ್ರ ಸೂರ್ಯನ ಮುಚ್ಚಿದ್ದು ತಿಳಿಯಲಿಲ್ಲಪಾರ್ಥ ಶಪಥ ತೀರಿದಂತೆ ಪ್ರಿಯೆ ಗೊಳ್ಳoತ ನಗುತ(ಬೇಸರದಿ ಕತ್ತಲ ಕೋಣೆಯಲಿ ಏಕಾಂಗಿ ಕುಳಿತಿರುವಾಗ ಅಚಾನಕ್ ಬೆಳಕಿನ ಕಿರಣ ಬಂದಾಗಿನ ಭಾವ ಗಝಲಾಗಿಸಿದೆ. ಇದು ಜುಲ್ ಕಾಫಿಯಾ ಆಗುವುದೇ.? ಬಲ್ಲವರು ತಿಳಿಸಿ ) ಬಾಗೇಪಲ್ಲಿ

ಬಾಗೇಪಲ್ಲಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಇಂದಿಗೆ ಬಾಳಲಿ ನಿನ್ನ ನನ್ನ ಹಿಸಾಬ್ ಚುಕ್ತಾ ಆಯ್ತುಮಂದಿಗೆ ಬಾಯಲಿ ನಮ್ಮಿಬ್ಬರ  ಕಿತಾಬ್ ಮಕ್ತಾ ಆಯ್ತು ಹೃದಯದಿಂದ ಲೆಕ್ಕದ ಪನ್ನಾಪನ್ನಾ ಕಿತ್ತು ಬಿಸಾಕಿದ್ದೇನೆಧೋಕಾ ಎಲ್ಲ ಸರಿಸಿದಾಗ ಬಜಾರಿನಲೇ ನಕಾಬ್ ಬಯಲಾಯ್ತು  ರಂಗಿಗೆ ಬಂಗು ಹತ್ತಿದಾಗ ಎಲ್ಲಿದೆ ಹೇಳು ಖೂಬ್ಸೂರ್ತಿಕಟ್ಟ ಕಡೆಗೆ ನಿನ್ನೆಲ್ಲ ಕರ್ತುತಗಳಿಗೆ ಜವಾಬ್ ಕೊಟ್ಟಾಯ್ತು ನಂಬಿಕೆಗಳ ಮೇಲೆಯೆ ನಂಬಿಕೆ ಸತ್ತು ಹೋಗಿದೆ ನನ್ನಲ್ಲಿನಟ್ಟನಡುರಾತ್ರಿಯಲೇ ರಾತ್ರಿಯಲೇ ನಕ್ಷತ್ರಗಳ ಶಬಾಬ್ ಹೊರಟೋಯ್ತು  ಸ್ವಪ್ನಗಳ ಸವಾರಿ ಮಾಡಿ ಆಸೆ ತೀರ ಮುಟ್ಟಲಿಲ್ಲ ಜ್ಯೋತಿ ಬದುಕಿನ ನಶೆ ಏರುವ ಮುನ್ನವೇ ಜಾಮಿನಿಂದ ಶರಾಬ್ ಚೆಲ್ಲೋಯ್ತು ಜ್ಯೋತಿ ಮಾಳಿ

ಜ್ಯೋತಿ ಮಾಳಿ ಅವರ ಗಜಲ್ Read Post »

ಇತರೆ

“ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಅನುಷ್ಠಾನ ಕಲೆಯ ನವ್ಯತೆ” ಗೊರೂರು ಅನಂತರಾಜು.

ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು,. ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆ ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆಗೊರೂರು ಅನಂತರಾಜು,. ಹಾಸನ.ಹಾಸನದ ಹಾಸನಾಂಬ ಕಲಾಕ್ಷೇತ್ರದ ಹೊರಗೆ ಯುವ ಕಲಾವಿದ ಕೃಷ್ಣಾಚಾರಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಪ್ರದರ್ಶಿತ ಚಿತ್ರಕಲೆ, ಅನುಷ್ಠಾನ ಕಲೆ ಯುವ ಕಲಾವಿದನ ತಾಜಾ ಪ್ರತಿಭೆ ಅನಾವರಣಗೊಳಿಸಿತು.೧೯೯೬ ನವೆಂಬರ್ ೨೭ ಜನ್ಮದಿನದ ಕೃಷ್ಣಾಚಾರಿ ಬ್ಯಾಚುಲರ್ ಆಫ್ ವಿಶುಯಲ್ ಆರ್ಟ್ ಕಲಾವ್ಯಾಸಂಗವನ್ನು ಹಾಸನದ ನಿರ್ಮಲ ಕಾಲೇಜಿನಲ್ಲಿ ಮಾಸ್ಟರ್ ಆಫ್ ವಿಶುಯಲ್ ಆರ್ಟ್ ವ್ಯಾಸಂಗವನ್ನು ಎಂ.ಎಂ.ಕೆ ಕಾಲೇಜು ಕಲ್ಬುರ್ಗಿಯಲ್ಲೂ ಮಾಡಿದ್ದಾರೆ. ೨೦೨೪ರಲ್ಲಿ ಚಾರು ಕಲಾ ಗ್ಯಾಲರಿ ಮೈಸೂರು, ಐಜಿಎನ್ ಸಿಎ ಗ್ರೂಪ್ ಶೋ ಬೆಂಗಳೂರು ಹೀಗೆ ಕೆಲವು ಗುಂಪು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ೨೦೨೩ರಲ್ಲಿ ದೆಹಲಿಯ ಇಂಡಿಯನ್ ಆರ್ಟ್ ಆರ್ಕಿಟೆಕ್ಚರ್ ಡಿಸೈನ್ ಬೈನ್ನಲೆ, ಆಹಮದಬಾದ್‌ನ ಅಬಿರ್ ಫಸ್ಟ್ ಟೇಕ್, ೨೦೨೨ರಲ್ಲಿ ರೂಟ್ ಆಫ್ ಸಾಯಿಲ್ ಏಕವ್ಯಕ್ತಿ ಪ್ರದರ್ಶನ, ಸಿಕೆಪಿ ಬೆಂಗಳೂರು, ೨೦೨೧ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ೫೨ನೇ ಕಲಾಮಹೋತ್ಸವ, ವಿಜಯಪುರ ಕರ್ನಾಟಕ ಲಲಿತಕಲಾ ಅಕಾಡೆಮಿ ೪೨ನೇ ವಾರ್ಷಿಕ ಕಲಾ ಪ್ರದರ್ಶನ, ಬೆಂಗಳೂರಿನ ಶಿಲ್ಪಕಲಾ ಅಕಾಡೆಮಿ ವಾರ್ಷಿಕ ಪ್ರದರ್ಶನ, ಅಮೃತ ದೃಶ್ಯಕಲಾ ಉತ್ಸವ ಪೈಂಟಿAಗ್ ಶೋ..ಹೀಗೆ ಇವರ ಪ್ರದರ್ಶನಗಳು ಸಾಕಷ್ವಟು ನಡೆದಿವೆ. ಹಲವಾರು ಕಲಾ ಕ್ಯಾಂಪ್‌ನಲ್ಲೂ ಭಾಗವಹಿಸಿದ್ದಾರೆ ಅಲ್ಲದೇ ಹತ್ತಾರು ಅವಾರ್ಡ್ ಪಡೆದಿದ್ದಾರೆ. ಹಾಸನದ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಈ ವ್ಯಕ್ತಿಯನ್ನು ಮಾತನಾಡಿಸಿದೆ. ಸಾರ್, ನನ್ನ ಕಲಾ ಅಭ್ಯಾಸವು ಮಣ್ಣು, ಪ್ರಕೃತಿ, ಪರಿಸರ ಮತ್ತು ಮಾನವ ಬದುಕಿನ ನಡುವಿನ ಆಳವಾದ ಸಂಬAಧವನ್ನು ಅನ್ವೇಷಿಸುತ್ತದೆ. ಭೂಮಿ ಕೇವಲ ನಮ್ಮ ಬದುಕಿನ ಆಧಾರವಲ್ಲ. ಅದು ಅನೇಕ ನೆನಪುಗಳು, ಅನುಭವಗಳು, ಸಂಸ್ಕೃತಿಗಳು ಮತ್ತು ಬದಲಾವಣೆಗಳನ್ನು ತನ್ನೊಳಗೆ ಸಂಗ್ರಹಿಸಿಕೊAಡ ಜೀವಂತ ಅಸ್ತಿತ್ವ. ನನ್ನ ಕಲಾಕೃತಿಗಳಲ್ಲಿ ಮಣ್ಣು, ನೈಸರ್ಗಿಕ ಬಣ್ಣಗಳು, ಬೀಜಗಳು, ಎಲೆ, ಬಿದಿರು, ಮರ ಇದ್ದಿಲು, ಟೆರಾಕೋಟಾ, ಕೈಯಿಂದ ತಯಾರಿಸಿದ ಕಾಗದ, ಖಾದಿ ಬಟ್ಟೆ.. ಹೀಗೆ ನೈಸರ್ಗಿಕ ವಸ್ತು ಬಳಸುತ್ತೇನೆ. ಈ ವಸ್ತುಗಳು ನನಗೆ ಕೇವಲ ಕಲಾ ಮಾಧ್ಯಮಗಳಲ್ಲ. ಅವು ತಮ್ಮದೇ ಆದ ಇತಿಹಾಸದ ನೆನಪು ಮತ್ತು ಸಾಂಸ್ಕೃತಿಕ ಅರ್ಥ ಹೊಂದಿರುವ ಜೀವಂತ ಅಂಶ.. ಮಣ್ಣಿನ ಪದರಗಳು, ಭೂ ದೃಶ್ಯಗಳ ಬದಲಾವಣೆ, ಜೀವ ವೈವಿಧ್ಯದ ಕಾಡು ಪರಿಸರ ನಾಶ, ನಗರೀಕರಣ, ಅತಿಯಾದ ಅಭಿವೃದ್ಧಿ, ಮಾನªನ ಪ್ರಕೃತಿಯ ಮೇಲಿನ ಹಸ್ತಕ್ಷೇಪ ಇವು ಇವರ ಕಲೆಯ ಒಳಸುಳಿ ಹುಳಿ ಪೆಟ್ಟು. ಪ್ರಕೃತಿಯೊಂದಿಗೆ ಮಾನವನ ಸಂಬAಧ ಬದಲಾಗುತ್ತಿರುವುದನ್ನು ಕಲಾಕೃತಿಗಳು ಪ್ರಶ್ನಿಸುತ್ತವೆ. ಹಾಗೆಯೇ ನಮ್ಮ ಸುತ್ತಲ ಪರಿಸರವನ್ನು ನಾವು ಮತ್ತೊಮ್ಮೆ ಮಗದೊಮ್ಮೆ ಗಮನಿಸುವಂತೆ ಸೂಚಿಸುತ್ತಲೇ ಹೊಸ ಹೊಳವು ಮನದಲ್ಲಿ ಮೂಡಿಸುತ್ತವೆ.ನೋಡಿ ಅದು ಒಂದು ಓಲ್ಡ್ ಮರದ ಖುರ್ಚಿ. ಬಹುಶ: ಅದರ ಮೇಲೆ ಇವರ ತಂದೆ ಅಥವಾ ತಾತಾ ಕೂರುತ್ತಿದ್ದಾರೇನೋ..? ಅದು ಸರಿ ಅದರ ಮೇಲೇಕೆ ಮಂಜಿನ ಗೆಡ್ಡೆ..? ಎಂದು ಕೇಳಿದರೆ ಅದಕ್ಕೊಂದು ವ್ಯಾಖ್ಯಾನ. ಅಜ್ಜ ಕೂರುತ್ತಿದ್ದ ಖುರ್ಚಿ ಕಾಲ ಕಳೆದಂತೆ ಶಿಥಿಲವಾಗುತ್ತದೆ. ಮಂಜು ಕರಗಿದಂತೆ ಅಜ್ಜನ ನೆನಪು ಕಾಲ ಕಳೆದಂತೆ ಮಾಸುತ್ತಾ ಹೋಗುತ್ತದೆ. ಅರೇ ಹೀಗೂ ಈ ಅನುಷ್ಟಾನ ಕಲೆ ಅರ್ಥೈಸುವುದೇ..? ಎಂದು ಆಶ್ಚರ್ಯಚಿಕಿತನಾದೆ. ಮತ್ತೊಂದು ಕಡೆ ಮೇಲೆ ಪ್ಲಾಸ್ಟಿಕ್ ತೆಳು ಪರದೆಯ ಉಯ್ಯಾಲೆಯಂತೆ ತೂಗುಹಾಕಿರುವಲ್ಲಿ ಅದರ ತುಂಬಾ ಪೇಪರ್ ದೋಣಿಗಳು. ನಾವು ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯ ಮುಂದೆ ಮಣ್ಣಿನ ಗುಂಡಿ ರಸ್ತೆಯಲ್ಲಿ ಅಥವಾ ಹರಿಯುವ ಚರಂಡಿ ನೀರಿನಲ್ಲಿ ಪೇಪರ್ ದೋಣಿ ಅದು ಸಾದಾ ದೋಣಿ, ಕತ್ತಿ ದೋಣಿ ಎಂದೆಲ್ಲಾ ಮಾಡಿ ಹರಿಯಲು ಬಿಟ್ಟು ಖುಷಿ ಪಡುತ್ತಿರಲಿಲ್ಲವೇ ಅದು ನೆನಪಾದರೆ ದೇಸಾಯಿ ಹೇಳಿದÀರು ಕೊಲ್ಲಿ ಯುದ್ಧದಲ್ಲಿ ಹರ್ಮುಜ್ ಜಲಸಂಧಿ ಬಂದ್ ಮಾಡಿ ಅಲ್ಲಿ ಬಾಂಬ್ ಹಾಕಿದ್ದರೆ ಪೆಟ್ರೋಲ್, ಗ್ಯಾಸ್ ಹಡಗುಗಳು ಹೀಗೆ ಮುಳುಗಿ ವುಡ್ ತೇಲುತ್ತಿತ್ತು ಪ್ರಪಂಚ ಫುಡ್ ಗಾಗಿ ಬಾಯಿ ಬಡಿದುಕೊಳ್ಳುತ್ತಿತ್ತು. ಅಣ್ಣಾ ಎತ್ತಣಿಂದ ಎತ್ತಣ ಹೋಲಿಕೆ..!ಓಕೆ ನೀವು ಏನಾದರೂ ಊಹಿಸಿಕೊಳ್ಳಿ, ಏನಾದರೂ ಹೇಳಿಕೊಳ್ಳಿ ನಿಮ್ಮ ಚಿಂತನೆ ನಿಮಗೆ ಬಿಟ್ಟಿದ್ದು ಎಂದು ಮೈಕ್ ಹಿಡಿದು ಎಲ್ಲರೂ ಶಾಂತವಾಗಿರಿ ಎನ್ನುತ್ತಿದ್ದರು ಕೃಷ್ಞಾಚಾರಿಯವರು. ಏಕೆಂದರೆ ಅಂದು ಅದೇ ಕಲಾಭವನದಲ್ಲಿ ಒಳಗೆ ವಾರ್ಷಿಕೋತ್ಸವ ಏರ್ಪಾಡು ನಡೆಯುತ್ತಿದ್ದರೆ, ಹೊರಗೆ ಮಾಸ್ತರುಗಳ ಉಭಯ ಕುಶಲೋಪರು ಮಾತುಕತೆಗಳು ನಡೆದಿದ್ದವು. ಮೈಕ್ ನಲ್ಲೇ ಜೋರಾಗಿ ಹೇಳಿ ಕೇಳಿಸಿಕೊಳ್ಳುತ್ತೇವೆ ಎಂದೆ.ನಾನು ಬಳಸುವ ನೈಸರ್ಗಿಕ ವಸ್ತುಗಳ ವಿನ್ಯಾಸ, ವಿನ್ಯಾಸದಲ್ಲಿನ ಸರಳತೆ ಮತ್ತು ಅವುಗಳ ಸಹಜ ಗುಣಗಳನ್ನು ಉಳಿಸಿಕೊಂಡು ಸಮಕಾಲೀನ ದೃಶ್ಯಭಾಷೆಯನ್ನು ರೂಪಿಸಲು ಪ್ರಯತ್ನಿಸುತ್ತೇನೆ. ನನ್ನ ಕಲಾಕೃತಿಗಳು ಒಂದು ನಿರ್ದಿಷ್ಠ ಕಥೆಯನ್ನು ಹೇಳವುದಕ್ಕಿಂತಲೂ ಪ್ರೇಕ್ಷಕರಲ್ಲಿ ನೆನಪು ಪ್ರಶ್ನೆ ಮತ್ತು ಅನುಭವಗಳನ್ನು ಹುಟ್ಟಿಸುವ ಒಂದು ಮುಕ್ತ ಸಂವಾದದAತೆ ಇರಬೇಕೆಂದು ಬಯಸುತ್ತೇನೆ..ಸರಿ, ಅಲ್ಲೊಂದು ಬಾವಿಯಲ್ಲಿ ನೀರು ಸೇದುವ ಹಗ್ಗವನ್ನು ಗುಪ್ಪೆಯಾಗಿ ಹುತ್ತದಂತೆ ಮಾಡಿ ಹಗ್ಗದ ತುದಿಗಳಿಗೆ ಕೆಂಪುಬಣ್ಣ ಹಚ್ಚಿದ್ದೀರಲ್ಲಾ ಇದರ ಕಥೆಯೇನು.. ? ಎಂದು ಕೇಳಿದೆ. ಅದು ಒಂದು ಕಡೆಯಿಂದ ನೋಡಿದರೆ ಯಾರೋ ಮುನಿವರ್ಯ ಮನೆಯಲ್ಲಿ ಧರ್ಮಪತ್ನಿಯೊಂದಿಗೆ ಮುನಿಸಿಕೊಂಡು ಕಾಡಿನಲ್ಲಿ ತಪಸ್ಸಿಗೆ ಕುಳಿತು ಕರ್ಮ ಕಳೆದುಕೊಳ್ಳುವಂತೆ ಕಂಡಿತು. ಈ ಹಗ್ಗಕ್ಕೆ ಕೊನೆ ಎಲ್ಲ ಅನಂತರಾಜು.. ಎಂದು ಚಿತ್ರಕಲಾ ಗುರು ಕಾರದಕಟ್ಟಿ ಹೇಳಿದರು. ಋಷಿ ಮೂಲ ಗುರು ಮೂಲ ಹುಡುಕಬಾರದು ತೆಪ್ಪಗಾದೆ. ನೋಡಿ ಈ ಅನುಷ್ಠಾನ ಕಲೆಗೆ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದು ಗುರುಗಳು ಶಿಷ್ಯನ ಕಲೆಗಾರಿಕೆ ಕಡೆ ಬೆರಳು ತೋರಿಸಿದರು. ಕಾರದಕಟ್ಟಿ ನಿರ್ಮಲ ಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಈಗ ನಿವೃತ್ತರು. ಇದು ಮಣ್ಣಿನಲ್ಲಿ ರೂಪಿಸಿದ ಅನುಷ್ಠಾನ ಕಲೆ ಎಂದರು. ಅಕಾಡೆಮಿಯೇ ಪ್ರಶಸ್ತಿ ಕೊಟ್ಟಮೇಲೆ ಕಲೆಯ ಗೂಢರ್ಥ ಕೇಳಲುಂಟೆ..? ಶಿಷ್ಯ ಮಾತು ಮುಂದುವರೆಸಿದರು. ನನ್ನ ಕಲಾ ಪ್ರಯಾಣದ ಮೂಲಕ ಭೂಮಿ ನಮ್ಮ ಹೊರಗಿನ ಆಸ್ತಿತ್ವವಲ್ಲ. ಅದು ನಮ್ಮ ಬದುಕಿನ ಅವಿಭಾಜ್ಯ ಭಾಗ ಎಂಬ ಅರಿವನ್ನು ಮೂಡಿಸುವುದು ನನ್ನ ಉದ್ದೇಶ. ಮಣ್ಣು ಮತ್ತು ಪ್ರಕೃತಿಯೊಂದಿಗೆ ನನ್ನ ನಿರಂತರ ಸಂವಾದದ ಮೂಲಕ ಕಳೆದು ಹೋಗುತ್ತಿರುವ ಪರಿಸರ, ಸಂಸ್ಕೃತಿ ನೆನಪುಗಳನ್ನು ಕಲೆಯ ಮೂಲಕ ದಾಖಲಿಸಿ ಅವುಗಳೊಂದಿಗೆ ಹೊಸ ಸಂಬAಧವನ್ನು ಕಟ್ಟಿಕೊಳ್ಳುವ ಪ್ರಯತ್ನ ಮುಂದುವರಿಸುತ್ತೇನೆ.. ಗುಡ್ ಲಕ್ ಎಂದೆ. ಬ್ಯಾಡ್ ಲಕ್ ಎಂದರೆ ಅದೇ ರೀತಿ ಮತ್ತೊಂದು ಅನುಷ್ಠಾನ ಕಲೆ ಪಕ್ಕದಲ್ಲಿತ್ತು. ಒಂದು ಹಸುವಿನ ಹೊಟ್ಟೆಯಲ್ಲಿ ಕರಗದ ಪ್ಲಾಸ್ಟಿಕ್ ಚೀಲಗಳು, ಹಾಲು ಕರೆಯುವ ಯಂತ್ರ ಗೋಮಾತೆಯ ಕೆಚ್ಚಲಿನಿಂದ ಹಾಲನ್ನು ಬಕೇಟಿಗೆ ಕರೆಯುತ್ತಿತ್ತು. ಈ ಕಲೆಯ ಕೆಳಗಿನ ದೃಶ್ಯವು ಆನೆಯ ಹೊಟ್ಟೆಯಲ್ಲಿ ಕಲ್ಲುಗಳ ರಸ್ತೆ. ಬಹುಶ: ಅದು ಎತ್ತಿನಹೊಳೆ ರಸ್ತೆ ಇರಬೇಕೆನಿಸಿತು. ಕೇಳಲಿಲ್ಲ ಅಷ್ಟೇ..! ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಅನುಷ್ಠಾನ ಕಲೆಯ ನವ್ಯತೆ” ಗೊರೂರು ಅನಂತರಾಜು. Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” ಪ್ರತಿ ಮುಂಜಾನೆಯುನನ್ನ ಮನೆ ಕಿಟಕಿಯ ಮುಂದೆಸೂರ್ಯೋದಯ ಬಂದು ನಿಲ್ಲುತ್ತದೆ!ಅದನ್ನು ತೆರೆಯುವ ಕೀಲಿಕೈಈ ಕಾಂಕ್ರೀಟಿನ ಮನೆ ಅಡಿಪಾಯದೊಳಗೆಹೂತುಹೋಗಿದೆ! ಈ ಮನೆಯ ಗೋಡೆಗಳುಇಟ್ಟಿಗೆ ಗಾರೆಯಿಂದಲ್ಲಅರ್ಧಕ್ಕೆ ಮುರಿದ ಸಂಭಾಷಣೆಗಳಿಂದಕಟ್ಟಲ್ಪಟ್ಟಿವೆ!ಅವುಗಳ ನಡುವೆಒಂದು ನಗು ಸಿಕ್ಕಿಕೊಂಡುವರ್ಷಗಳಿಂದ ಪ್ರತಿಧ್ವನಿಯಾಗಲು ಕಲಿಯುತ್ತಿದೆ! ನಗರದ ರಸ್ತೆಗಳುಮನುಷ್ಯರ ಕಾಲುಗಳನ್ನುಗಮ್ಯದ ಕಡೆಗೆ ಕರೆದೊಯ್ಯುವುದಿಲ್ಲ!ಹೆಜ್ಜೆಗಳ ನೆನಪುಗಳನ್ನುಡಾಂಬರಿನ ಕೆಳಗೆ ಸಮಾಧಿ ಮಾಡುತ್ತವೆ! ನನ್ನ ನೆರಳು ಸಂಜೆಯಾಗುತ್ತಿದ್ದಂತೆನನ್ನನ್ನು ಬಿಟ್ಟುಬೀದಿದೀಪದ ಕೆಳಗೆ ಕೆಲಸಕ್ಕೆ ಸೇರಿಕೊಳ್ಳುತ್ತದೆ! ರಾತ್ರಿ ಮನೆಗೆ ಬಂದಾಗಕನ್ನಡಿಯ ಮುಖದಲ್ಲೂ ನನ್ನಷ್ಟೇ ಆಯಾಸ! ಕನ್ನಡಿಯೊಳಗಿನ ನಾನು ಪ್ರತಿದಿನಸ್ವಲ್ಪ ಸ್ವಲ್ಪವಾಗಿ ಪಾರದರ್ಶಕನಾಗುತ್ತಿದ್ದೇನೆಮುಖ ಮರೆತು ಹೋಗದಂತೆ! ಮರಗಳು ಈಗಎಲೆಗಳನ್ನು ಉದುರಿಸುವುದಿಲ್ಲಹಕ್ಕಿಗಳ ವಿಳಾಸಗಳನ್ನುಒಂದೊಂದಾಗಿ ಕೆಳಗೆ ಬೀಳಿಸುತ್ತಿವೆ! ಗಾಳಿಯ ಕೈಯಲ್ಲಿ ಹೂವಿನ ಪರಿಮಳವಿಲ್ಲಬೀಗ ಹಾಕಿದ ಮನೆಗಳಕೊನೆಯ ನಿಟ್ಟುಸಿರನ್ನು ಹೊತ್ತು ತಿರುಗುತ್ತಿದೆ! ನಾನು ಇನ್ನೂ ಆಕಾಶವನ್ನು ನೋಡುತ್ತೇನೆಅದು ಮೇಲಿಲ್ಲನನ್ನ ಕಣ್ಣಿನಲ್ಲಿ ಬಿರುಕು ಬಿಟ್ಟ ನೀಲಿ ಬಣ್ಣವಾಗಿಮೆಲ್ಲಗೆ ಉದುರುತ್ತಿದೆ! ಆಕಾಶದಿಂದ ಬೀಳುವಪ್ರತಿ ಹನಿಯುಸತ್ತ ಕನಸಿನ ಕೊನೆಯ ಬೆಳಕು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಸತತವಾಗಿ ಅತ್ತಳು ಸತ್ಯಸತ್ವದ ಸತಿ ಸೀತೆ ಬಿರುಗಾಳಿಯ ಬಿರುಸಿಗೆ ಬಲವಿಲ್ಲದಂತಾದ ಬಾಳೆಗಿಡ ಬುವಿಯನ್ನಪ್ಪಿದಂತೆ ನೆಲಕ್ಕೆ ಬಿದ್ದಳು ಧರಣಿಸುತೆ, ಲಕ್ಷö್ಮಣನ ನುಡಿಯದು ಕಿವಿಗೆ ಬಿದ್ದ ಕ್ಷಣದಲ್ಲಿ. ಲೋಕವನ್ನೇ ಮರೆತಳು ತಕ್ಷಣದಲ್ಲಿ.ಸೀತೆಯ ಸ್ಥಿತಿಗೆ ಮರುಗಿದ ಲಕ್ಷö್ಮಣ ತನ್ನ ಉತ್ತರೀಯದಿಂದ ಅವಳಿಗೆ ಗಾಳಿಯನ್ನು ಬೀಸಿ, ಕಣ್ಣೀರು ಹರಿಸುತ್ತಾ ಅವಳನ್ನು ಸಾಂತ್ವನಗೊಳಿಸುವ ಪ್ರಯತ್ನ ನಡೆಸಿದ.ಕಣ್ಣುಗಳ ತೆರೆದಳು ರಾಮಸತಿ. ನಿಟ್ಟುಸಿರ ಬಿಟ್ಟಳು ಧರಣಿಸುತೆ. ಸುಮಿತ್ರಾಸುತನನ್ನು ನೋಡಿದಳು ಜನಕಸುತೆ.“ಅಪರಾಧವನ್ನೇನೂ ಮಾಡದ ನನ್ನನ್ನು ಹೀಗೆ ಅರಣ್ಯಕ್ಕೆ ಅಟ್ಟುವ ಬದಲು ಖಡ್ಗದಿಂದ ನನ್ನ ಶಿರವನ್ನೇ ಕತ್ತರಿಸಬಹುದಿತ್ತಲ್ಲಾ! ನನ್ನ ಮನೋವಲ್ಲಭನನ್ನು ತೊರೆದು ಈ ಕಾಡಿನಲ್ಲಿರುವಂತಾಯಿತೇ ನಾನು!” ಎಂದು ಅತ್ತಳು ಕೌಸಲ್ಯಾಸುತನ ಸತಿ.“ವಿವಾಹ ಆದಾಗಿನಿಂದಲೂ ನನ್ನ ಜೊತೆ ಸುಖಸುಖವಾಗಿ ಬದುಕಿದವರು, ನಾನು ಅಗಲಿದಾಗ ನೋವು ಅನುಭವಿಸಿದವರು, ನನಗಾಗಿ ಆ ದುಷ್ಟ ರಾವಣನನ್ನು ಕೊಂದವರು ಈಗ ತೊರೆದರೇ ನನ್ನನ್ನು!” ಎಂದು ಹಲುಬಿದಳು ಹಲವು ನಿಮಿಷ.ತನ್ನದೇನೂ ತಪ್ಪಿಲ್ಲ ಎಂದು ರುಜುವಾತುಪಡಿಸುವ ಸ್ವಪ್ರಜ್ಞೆ ಸೀತೆಯಲ್ಲೀಗ ಮೂಡತೊಡಗಿತು. “ಅಂದು ರಾವಣ ಸಂಹಾರದ ನಂತರ ಅಗ್ನಿಪ್ರವೇಶದ ಮೂಲಕ ನನ್ನ ಸತ್ಯವನ್ನು ಸಾಬೀತುಪಡಿಸಿಕೊಂಡವಳು ಈ ಸೀತೆ. ಹಾಗಿದ್ದೂ ನನ್ನನ್ನು ಅಪರಾಧಿ ಎನ್ನಲು ಕಾರಣವೇನು?” ಎಂಬ ಪ್ರಶ್ನೆಯೆತ್ತಿ ಲಕ್ಷö್ಮಣನ ಮುಖವನ್ನೇ ನೋಡಿದಳು.ಕಾಡಿನಲ್ಲಿ ತನ್ನನ್ನು ಬಿಟ್ಟುಹೋಗಲೆಂದು ಬಂದ ಲಕ್ಷ್ಮಣನು ಅವಳ ಕಣ್ಣಿಗೆ ಕಂಡದ್ದು ಕರುಣೆಯಿಲ್ಲದವನಾಗಿ. “ಕಲ್ಲುಮುಳ್ಳುಗಳೇ ಇರುವ ಕಾಡಿನಲ್ಲಿ ಅಂದು ಅಲೆದಾಡುತ್ತಿದ್ದೆವು. ಅಂತಹ ಕಷ್ಟದ ಸ್ಥಿತಿಯಲ್ಲಿ ನಾನು ನಡೆಯಲಾರದೆ ಒದ್ದಾಡುತ್ತಿದ್ದಾಗ ನನ್ನನ್ನು ಉಪಚರಿಸಿದವನು ನೀನು. ನನಗೆ ಸಂಕಟವಿತ್ತು ಘರ್ಜಿಸಿದ ವಿರಾಧನೆಂಬ ಅಸುರರನ್ನು ಕೊಂದವನು ನೀನು. ಅಂದು ಚಿನ್ನದ ಜಿಂಕೆಯ ಬೆನ್ನತ್ತಿಹೋದ ನನ್ನೊಡೆಯರಿಗೆ ಏನೋ ಕೆಡುಕು ಆಗಿದೆಯೆಂದು ನಾನು ವ್ಯಥೆಪಟ್ಟು, ಹೋಗಿ ನೋಡಿ ಬಾ ಎಂದು ನಿನ್ನಲ್ಲಿ ಕೇಳಿಕೊಂಡಾಗ ಅಯೋಧ್ಯಾಪತಿಯನ್ನು ಹುಡುಕಿಕೊಂಡು ಹೋದವ ನೀನು. ನನ್ನಿಷ್ಟದ ಮೈದುನ ನೀನು. ಹಾಗಿರುವಾಗ ನನ್ನನ್ನೊಬ್ಬಳನ್ನೇ ಈ ದುರ್ಗಮ ಕಾಡಿನಲ್ಲಿ ಬಿಟ್ಟುಹೋಗುವ ಮನಸ್ಸು ನಿನಗೆ ಬಂದೀತೇ ಲಕ್ಷö್ಮಣ!” ಎಂದು ದುಃಖವನ್ನು ತೋಡಿಕೊಂಡಳು.ಪತಿಯ ಮುಖವನ್ನು ಕಾಣದೆ ಎಂತಿರಲಿ ಇಲ್ಲಿ ಎಂದು ಪ್ರಲಾಪಿಸಿದಳು. ರಮಣನನ್ನು ರಮಿಸದೆ ಹೇಗಿರಲಿ ಇಲ್ಲಿ ಎಂದು ವಿಲಾಪಿಸಿದಳು. ಆಗಾಗ ಮೈಮರೆಯುತ, ಆಗಾಗ ಎಚ್ಚರವಾಗುತ ಸೋತ ಭಾವದಲ್ಲಿದ್ದಳು ಸೀತೆ, ಹಾವಿನಿಂದ ಕಚ್ಚಿಸಿಕೊಂಡ ಎಳೆಶಿಶುವಿನಂತೆ.ಈ ಬಗೆಯಲ್ಲಿ ಜಾನಕಿಯನ್ನು ಕಂಡ ಲಕ್ಷö್ಮಣ ತೊಳಲಾಟಕ್ಕೆ ಈಡಾದ. ತೊರೆದುಹೋಗಲೇಬೇಕಿತ್ತು ಅವನು ಅವಳನ್ನು ಕಾಡಿನಲ್ಲಿ, ರಾಮನಾಜ್ಞೆಗೆ ಶಿರಬಾಗಿ. ತೊರೆದುಹೋಗದಂತೆ ತಡೆಯಿತದೋ ಮಮಕಾರ, ದುಃಖಿಸಿದ ಅತಿಯಾಗಿ ಆ ಕ್ಷಣವೇ ಎದೆಬೀಗಿ.ಎಂತು ಹೋಗಲಿ ತಾನು, ಹೋಗದೇ ಇರಲೆಂತು ಇನ್ನು ಎಂಬ ದ್ವಂದ್ವ ಭಾವದಲ್ಲಿ ಸಂಕಟವನ್ನು ಸೌಮಿತ್ರಿ ಅನುಭವಿಸುತ್ತಿದ್ದಾಗಲೇ ಸೀತೆ ನುಡಿದಳು ತಪಸ್ವಿನಿಯ ತೆರದಲ್ಲಿ. “ಅಂದು ರೇಖೆಯನೆಳೆದು ರಾಮ ಶೋಧನೆಗೆ ಹೊರಟ ರೀತಿಯಲ್ಲಿಯೇ ಇಂದೂ ಹೊರಡು ಸೌಮಿತ್ರಿ. ನನ್ನ ಅಪರಾಧವಿಲ್ಲದೆ ನನ್ನ ಒಡೆಯರು ಇಂದು ತೊರೆದರೆನ್ನ ಎಂಬ ಸಮಾಚಾರವನ್ನು ಹೇಳಿಬಿಡು ಎನ್ನ ತಾಯಿಸಮಾನರಾದ ಕೌಸಲ್ಯೆಗೆ” ಎಂದಳು ಸೀತೆ.ರಾಮನ ಜೊತೆಗೆ ಯಾರೂ ಇಲ್ಲ ಸಹಾಯಕ್ಕೆ ಎಂಬ ಯೋಚನೆ ಮೂಡಿತು ಅವಳಲ್ಲಿ, ಆ ಕ್ಷಣದಲ್ಲಿ. “ತಡವಾದರೆ ಕೋಪಿಸಿಕೊಳ್ಳಬಹುದು ನಿನ್ನಣ್ಣ. ನನಗಾದರೂ ಈ ಕಾಡಿನಲ್ಲಿ ಕ್ರೂರಮೃಗಗಳ ನೆರವಿದೆ. ಅವರು ಅಲ್ಲಿ ಒಬ್ಬಂಟಿಯಾಗಿದ್ದಾರೆ. ವಿಳಂಬ ಮಾಡದೆ ಸೇರು ಕ್ಷಿಪ್ರವಾಗಿ ಅವರನ್ನು” ಎಂದಳು ಮರ್ಮಾರ್ಥಭರಿತವಾಗಿ.ತನ್ನನ್ನು ತೊರೆದ ರಾಮನದ್ದೇನೂ ತಪ್ಪಿಲ್ಲ. ಹೆಣ್ಣಾಗಿ ಜನಿಸಿದ ತನ್ನದೇ ಅಪರಾಧ ಎಂಬ ಕೀಳರಿಮೆಯ ಮಾತೂ ಹೊರಬಂತು ಅವಳಿಂದ.ಈ ಪರಿಯ ಪರಿತಾಪವನ್ನು ಕಂಡ ಲಕ್ಷö್ಮಣ ದೃಷ್ಟಿ ಹರಿಸಿದ ದೆಸೆದೆಸೆಗೆ. ಕಣ್ಣಿಗೆ ಕಂಡ, ಕಾಣದ ಮೃಗ- ಖಗ, ಕ್ರಿಮಿ- ಕೀಟ, ಗಿಡ- ಮರ, ಗಂಗಾನದಿ, ದಿಕ್ಕುಗಳು, ಪಂಚಭೂತಗಳು ಎಲ್ಲವುಗಳನ್ನೂ ಉದ್ದೇಶಿಸಿ ನುಡಿದ ಉದ್ದಂಡವಾದ ಮಾತನ್ನು.“ಜಾನಕಿಯನ್ನು ರಕ್ಷಿಸುವ ಹೊಣೆಯೀಗ ನಿಮ್ಮದು. ಭೂದೇವಿಯೇ ಪೊರೆಯಬೇಕು ನೀನೇ, ನಿನ್ನ ಈ ಮಗಳನ್ನು”ಅಸಹಾಯಕ ಹೆಣ್ಣನ್ನು ಅನಾಥೆಯ ತೆರದಲ್ಲಿ ಬಿಟ್ಟುಹೋಗಬೇಕಾದ ತನ್ನ ಹೀನಸ್ಥಿತಿಯನ್ನು ನೆನೆದು ಮತ್ತೆ ಮತ್ತೆ ಮರುಗಿದ ಲಕ್ಷö್ಮಣ. ಈ ನಿಷ್ಠುರದ ಬದುಕನ್ನು ತಾನು ನಡೆಸಬೇಕಾಗಿ ಬಂದದ್ದಕ್ಕೆ ತನ್ನ ದೇಹವನ್ನು ಎರಡು ಭಾಗವಾಗಿ ಸೀಳಿಹಾಕಬೇಕು ಎಂದು ತನಗೆ ತಾನೇ ಶಪಿಸಿಕೊಂಡ.ಏನಾದರಾಗಲಿ ಇಲ್ಲಿಂದ ಹೋಗಿಯೇ ಬಿಡುತ್ತೇನೆ ಎಂದು ಮುಂದೆ ಮುಂದೆ ಹೋದ, ಬಿರುಸಾಗಿ. ಏನಂದುಕೊಳ್ಳುವಳೋ ಜನಕಸುತೆ ಎಂದು ಆಲೋಚಿಸಿ ಮತ್ತೆ ಹಿಂದೆ ಹಿಂದೆ ಬಂದ, ಇರಿಸುಮುರುಸಾಗಿ. ಅಣ್ಣನನ್ನು ಸೇರಬೇಕೆಂಬ ತುಡಿತವದು ಮತ್ತೆ ಸೆಳೆಯಿತು ಅವನನ್ನು. ಸೀತೆಯನ್ನು ನೋಡದೆಯೇ ಮುಂದೆ ಹೋದ. ಹೆಂಗಳೆಯ ಮನವನ್ನು ನೋಯಿಸಿದೆ ಎಂಬ ಭಾವವದು ಎಳೆಯಿತು ಅವನನ್ನು. ಸೀತೆಯೆಡೆಗೆ ನೋಡುತ್ತಾ ಹಿಂದೆ ಬಂದ. ಒಮ್ಮೆ ಆ ಕಡೆಗೆ, ಮತ್ತೊಮ್ಮೆ ಈ ಕಡೆಗೆ. ಒಮ್ಮೆ ಮುಂದೆ, ಇನ್ನೊಮ್ಮೆ ಹಿಂದೆ. ತೊರೆಯದಿರಲಾರೆ ಈಗ ಎಂಬ ಭಾವ ಒಮ್ಮೆ. ತೊರೆದುಹೋಗಲಾರೆ ಬೇಗ ಎಂಬ ಭಾವ ಮಗದೊಮ್ಮೆ. ಮುಂದಕ್ಕೂ ಹಿಂದಕ್ಕೂ ಹೊಯ್ದಾಡುವ ಉಯ್ಯಾಲೆಯಂತಾದ ಲಕ್ಷö್ಮಣ.ಅದೋ! ಆ ಕ್ಷಣದಲ್ಲಿ, ಅದೊಂದು ಕ್ಷಣದಲ್ಲಿ, ಆ ಒಂದೇ ಒಂದು ಕ್ಷಣದಲ್ಲಿ ಸೀತೆಯನ್ನು ಅಗಲಿ ಹೋಗಿಯೆಬಿಟ್ಟ ಸೌಮಿತ್ರಿ! ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರಿನಿಂದ ಹಾಸನದತ್ತ ಸುಮತಿಯಪಯಣ ಬಾವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಅವಳ ನೋಟದಲ್ಲಿ ಯಾವುದೋ ಅವ್ಯಕ್ತವಾದ ದೃಢ ನಿರ್ಧಾರದ ಸೂಚನೆ ಬಾವನಿಗೆ ದೊರೆಯಿತು. ಆದರೂ ಅದೇನೆಂದು ತಿಳಿದುಕೊಳ್ಳಲು…. “ಏನು ನಿರ್ಧರಿಸಿದೆಯಮ್ಮಾ… ನೀನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಎಲ್ಲರ ಹಿತ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ ಎಂಬುದು ನನಗೆ ತಿಳಿದಿದೆ…. ವಯಸ್ಸು ಚಿಕ್ಕದಾದರೂ ನಿನ್ನ ಆಲೋಚನಾ ಶೈಲಿ ಬಹಳ ಪ್ರಬುದ್ಧವಾದದ್ದು…. ಎಂದಾಗ, ನಾದಿನಿ…”ಬಾವಾ… ನನ್ನ ನಿರ್ಧಾರ ಸರಿಯೋ ತಪ್ಪೋ ನನಗೆ ತಿಳಿದಿಲ್ಲ…. ಆದರೆ ನನಗೆ ಬೇರೆ ದಾರಿ ತೋಚುತ್ತಿಲ್ಲ….. ವಾರ್ಡಿನಲ್ಲಿ ದಾಖಲಾದ ಅಮ್ಮ ನಮ್ಮನ್ನು ಸಂಪೂರ್ಣವಾಗಿ ನಂಬಿದ್ದಾಳೆ…. ಅವಳ ಮುಖ ಈಗ ಸಂಪೂರ್ಣ ಗೆಲುವಿನಿಂದ ಕೂಡಿದೆ…. ಇಲ್ಲಿಂದ ಚಿಕಿತ್ಸೆ ಪಡೆದು ಹಿಂತಿರುವಾಗ ತಾನು ತನ್ನ ಹಿಂದಿನ ಆರೋಗ್ಯವನ್ನು ಪಡೆದು ಮನೆಗೆ ಹಿಂತಿರುತ್ತೇನೆ ಎಂಬ ಭರವಸೆಯನ್ನು ನನ್ನ ತಾಯಿಯ ಕಣ್ಣುಗಳಲ್ಲಿ ನಾನು ನೋಡಿದೆ… ಎಂದು ಅರ್ಧಕ್ಕೆ ನಿಲ್ಲಿಸಿದಳು. ವಿಷಯವನ್ನು ಪೂರ್ತಿ ಹೇಳದೇ ಏಕೆ ಅರ್ಧಕ್ಕೆ ನಿಲ್ಲಿಸಿದಳು? ಎಂದು ಪ್ರಶ್ನಾರ್ಥಕವಾಗಿ ಬಾವ ನಾದಿನಿಯನ್ನು ನೋಡುತ್ತಾ…. “ಹೌದು ನೀನು ಹೇಳಿದ್ದು ನಿಜ…. ನಾನು ಅದನ್ನು ಗಮನಿಸಿದೆ…. ಇಲ್ಲಿನ ಚಿಕಿತ್ಸೆ ಬಹಳ ದುಬಾರಿ ಎಂಬುದು ತಿಳಿಯಿತು…. ಆದರೆ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಲು ನಮ್ಮಿಂದ ಸಾಧ್ಯವೇ? ಎಂಬ ವಿಚಾರ ನನ್ನನ್ನು ಚಿಂತೆಗೀಡು ಮಾಡಿದೆ…. ನಮ್ಮೆಲ್ಲಾ ದುಡಿಮೆಯ ಹಣವನ್ನು ಸೇರಿಸಿದರೂ ಕೂಡ ಒಂದು ಬಾರಿಯ ಡಯಾಲಿಸಿಸ್ ಸಾಧ್ಯವಾಗುತ್ತದೆಯೇ? ಎಂಬುದು ಕೂಡಾ ನನಗೆ ಸಂಶಯ”… ಎಂದ ಚಿಂತಾಕ್ರಾಂತನಾಗಿ.  ಬಾವನ ಪರಿಸ್ಥಿತಿಯು ನಾದಿನಿಗೆ ತಿಳಿದಿತ್ತು. ಎಷ್ಟೋ ಬಾರಿ ತಮಗೆ ಹಣಕಾಸಿನ ತೊಂದರೆ ಬಂದಾಗ ತನ್ನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ನಮಗೆ ಕೊಟ್ಟು ಸಹಾಯ ಮಾಡಿದ್ದಾರೆ ಬಾವ. ಒಮ್ಮೆ ಇನ್ನೇನು ಬದುಕಲು ಬೇರೆ ದಾರಿಯೇ ಇಲ್ಲವೇನೋ? ಎನ್ನುವ ಪರಿಸ್ಥಿತಿಯಲ್ಲಿ ಬಾವನೇ ನಮಗೆ ಸಹಾಯ ಮಾಡಿ ನಮ್ಮೆಲ್ಲರ ಜೀವ ಉಳಿಸಿದ್ದು. ತಮ್ಮ ಕೈಲಿದ್ದರೆ ಖಂಡಿತ ಏನಾದರೂ ಸಹಾಯ ಮಾಡೇ ಮಾಡುತ್ತಾರೆ. ಈಗ ಮಳೆಗಾಲ ಬೇರೆ ಸಮೀಪಿಸುತ್ತಿರುವುದರಿಂದ ಅವರಿಗೆ ಕೆಲಸ ಇರುವುದಿಲ್ಲ  ಎನ್ನುವುದು ನಾದಿನಿ ಬಲ್ಲಳು. ನಾದಿನಿ ಏನೂ ಮಾತನಾಡದೆ ಸುಮ್ಮನೆ ಎಲ್ಲೋ ನೋಡುತ್ತಾ ಏನೋ ಆಲೋಚನೆ ಮಾಡುತ್ತಾ ನಿಂತಿರುವುದನ್ನು ಕಂಡು… “ಈಗ ಏನು ಮಾಡುವುದು?…ನೀನು ಏನು ನಿರ್ಧರಿಸಿರುವೆ? ಎಂದು ಬಾವ ಕೇಳಿದಾಗ…. “ಹೇಗೆ ಹೇಳಲಿ ಎಂದು ನನಗೆ ತಿಳಿಯುತ್ತಿಲ್ಲ ಬಾವಾ”…. ಎಂದು ತನ್ನ ಮನದಲ್ಲಿದ್ದ ಆಲೋಚನೆಯನ್ನು ಭಾವನೆಗೆ ತಿಳಿಸಿದಳು. ನಾದಿನಿಯ ಮಾತನ್ನು ಕೇಳಿದ ಬಾವ ಒಮ್ಮೆ ದೀರ್ಘವಾದ ನಿಟ್ಟಿಸಿರನ್ನು ಬಿಟ್ಟು… ₹ಸರಿ ನಡಿ… ಅತ್ತೆಗೆ ತಿಳಿಸೋಣ ಬಾ”…. ಎಂದು ಹೇಳಿ ಮುಂದೆ ಹೆಜ್ಜೆ ಹಾಕಿದ ಬಾವನನ್ನು ನಾದಿನಿ ಹಿಂಬಾಲಿಸಿದಳು. ಇಡುವ ಪ್ರತಿ ಹೆಜ್ಜೆಯೂ ಭಾರವಾದಂತ ಅನಿಸಿತು. ಎಷ್ಟೇ ವೇಗವಾಗಿ ನಡೆದರೂ ಹೆಜ್ಜೆ ಮುಂದಿಡಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಿತವಳಿಗೆ. ತುರ್ತು ಚಿಕಿತ್ಸಾ ಘಟಕ ವಿಭಾಗದ ವಾರ್ಡಿನ ಬಾಗಿಲ ಬಳಿ ಬಂದಾಗ ಅವಳ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.  ಹೆಜ್ಜೆ ಮುಂದಡಲಾಗದೆ ಅವಳು ಬಾಗಿಲ ಬಳಿಯೇ ನಿಂತು ಬಿಟ್ಟಳು. ನಾದಿನಿ ತನ್ನ ಹಿಂದೆ ಬರುತ್ತಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಹಿಂತಿರುಗಿ ನೋಡಿದ ಆತ, ನಾದಿನಿಯ ಕಣ್ಣುಗಳು ತುಂಬಿದ್ದನ್ನು ಕಂಡು… “ಅಳಬೇಡ… ಈಗ ನೀನು ಅಧೀರಳಾಗಬಾರದು…. ನಿನ್ನ ದುಗುಡ, ನೋವು ಏನೆಂದು ನನಗೆ ತಿಳಿದಿದೆ…. ದಯವಿಟ್ಟು ಕಣ್ಣುಗಳನ್ನು ಒರೆಸಿಕೊ….. ನಿನ್ನ ತುಂಬಿದ ಕಣ್ಣುಗಳನ್ನು ಗಮನಿಸಿದರೆ ಅತ್ತೆ ಎಲ್ಲವನ್ನೂ ಊಹಿಸಿಬಿಡುತ್ತಾರೆ…. ನೀನು ಈಗ ಧೈರ್ಯವನ್ನು ತಂದುಕೊಳ್ಳಲೇಬೇಕು…. ನಿನ್ನ ಮನಸ್ಸಿನಲ್ಲಿರುವ ಯೋಜನೆಯ ಪ್ರಕಾರ ಅತ್ತೆಗೆ ಮನನವಾಗುವಂತೆ ತಿಳಿಸಿಬಿಡು.”… ಎಂದು ಬಾವ ಹೇಳಿದ್ದು ಕೇಳಿ, ಹೌದು ಅವರು ನಿಜವನ್ನೇ ಹೇಳುತ್ತಿದ್ದಾರೆ ಎನ್ನುತ್ತಾ ತನ್ನ ಕಣ್ಣು ಒರೆಸಿಕೊಂಡಳು. ಬಾರದ ನಗುವನ್ನು ಮುಖದಲ್ಲಿ ತಂದುಕೊಂಡು ಬಾವನ ಜೊತೆಗೆ ವಾರ್ಡಿನ ಒಳಹೊಕ್ಕಳು. ಅಳಿಯ ವಾರ್ಡಿನ ಒಳಗೆ ಬಂದಿದ್ದನ್ನು ಗಮನಿಸಿದ ಸುಮತಿ…. “ಡಾಕ್ಟರ್ ಏನ್ ಹೇಳಿದರು?… ಎದ್ದು ಕೇಳಿದಳು. ಅತ್ತೆಯ ಪ್ರಶ್ನೆಗೆ ಅಳಿಯ ನಾದಿನಿಯ ಕಡೆ ತಿರುಗಿ, ಹೇಳು ಎನ್ನುವಂತೆ ಸನ್ನೆ ಮಾಡಿದ. ಗಂಟಲುಬ್ಬಿ ಬಂದರೂ, ಕಣ್ಣುಗಳು ಮತ್ತೆ ಹನಿಗೂಡ ತೊಡಗಿದರೂ ಅದನ್ನು ತಾಯಿಗೆ ತೋರಕೊಡದೆ….. “ಅಮ್ಮಾ…. ಡಾಕ್ಟರ್ ಹೇಳಿದರು…. ಇಲ್ಲಿ ದೊರಕುವ ಚಿಕಿತ್ಸೆಯು ನಮ್ಮ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಲಭ್ಯವಿದೆ. ಅಲ್ಲಿಗೆ ಹೋಗಿ ಪಡೆದುಕೊಳ್ಳಬಹುದು…. ಎಂದಿದ್ದಾರಮ್ಮಾ”…. ಎನ್ನುತ್ತಾ ಅಮ್ಮನ ಬಳಿಗೆ ಬಂದಳು. ತನ್ನ ಅಳುವನ್ನು ತಡೆ ಹಿಡಿದುಕೊಳ್ಳಲು ಅವಳು ಹರಸಾಹಸ ಪಡಬೇಕಾಯಿತು. ಸುಮತಿಯನ್ನು ಬಿಗಿಯಾಗಿ ಅಪ್ಪಿಕೊಂಡಳು.  “ಆದಷ್ಟು ಬೇಗನೇ ನಾವು ಇಲ್ಲಿಂದ ಹೋಗೋಣ… ಎಂದು ಹೇಳುತ್ತಾ ವಾರ್ಡಿನಲ್ಲಿದ್ದ ನರ್ಸ್ ಬಳಿಗೆ ತೆರಳಿದಳು…. “ಸಿಸ್ಟರ್…. ತಾಯಿಯನ್ನು ಇಲ್ಲಿ ಈಗ ಅಡ್ಮಿಟ್ ಮಾಡುವುದಿಲ್ಲ…. ಇನ್ನೊಂದೆರಡು ದಿನದ ಬಳಿಕ ಬರುತ್ತೇವೆ_…. ಎಂದು ಹೇಳಿದಳು.‌… “ಓ ಹೌದಾ… ನೀವು ಔಷಧಿಯನ್ನು ತಂದಿದ್ದರೆ ಹಾಗೂ ಇಲ್ಲಿ ಅಡ್ಮಿಟ್ ಮಾಡಿದ್ದರೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದಿತ್ತು…. ಸರಿ ನಿಮ್ಮ ಇಚ್ಛೆ”…. ಎಂದು ಹೇಳಿ ಸುಮತಿಯನ್ನು ವಾರ್ಡಿನಿಂದ ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಿದಳು. ಮಾವನಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ನಾದಿನಿ ಬಾವನನ್ನು ವಿನಂತಿಸಿಕೊಂಡಳು. ಸರಿ ಎಂದು ಹೇಳಿ ಬಾವ ರಿಸೆಪ್ಶನ್ ಗೆ ಹೋಗಿ ಅಲ್ಲಿಂದ ಮಾವನಿಗೆ ಕರೆ ಮಾಡಿ, ಅತ್ತೆಯನ್ನು ಇಲ್ಲಿಂದ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲು ಮಾಡುತ್ತೇವೆ. ಇಲ್ಲಿ ಹೆಚ್ಚು ಸಮಯ ಕಳೆಯಲು ಅತ್ತೆಯಿಂದ ಸಾಧ್ಯವಿಲ್ಲ ಹಾಗಾಗಿ ಇಲ್ಲಿಂದ ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಹಾಸನಕ್ಕೆ ಹೋಗುತ್ತೇವೆ ಎಂಬುದಾಗಿ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ತಮ್ಮನಿಗೆ ಅಳಿಯನ ಮಾತು ಕೇಳಿ ಮನದಲ್ಲಿ ಏನೋ ಕಸಿವಿಸಿ ಉಂಟಾಯಿತು. ಸ್ವಲ್ಪ ಆತಂಕವಾಯಿತು. ಆಸ್ಪತ್ರೆಯಲ್ಲಿ ನಡೆದ ವಿಷಯ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ಪರಿಸ್ಥಿತಿಯ ಅರ್ಥ ಅವನಿಗಾಯಿತು. ಅವನ ಮನಸ್ಸು ಭಾರವಾಯಿತು…”ಸರಿ ಅಕ್ಕನನ್ನು ನೀವು ಕರೆದುಕೊಂಡು ಹೋಗಿ….. ಹಾಸನದಲ್ಲಿ ಅಕ್ಕನಿಗೆ ಚಿಕಿತ್ಸೆ ಕೊಡಿಸಿ…. ನಾನು ಕುಟುಂಬ ಸಮೇತ ಅಲ್ಲಿಗೆ ಬರುತ್ತೇನೆ”….ಎಂದು ಸುಮತಿಯ ತಮ್ಮ ಹೇಳಿದ. ಸುಮತಿಯನ್ನು ಅಲ್ಲಿಂದ ಕರೆದುಕೊಂಡು ಅಳಿಯ ಮತ್ತು ಮಗಳು ಹಾಸನದ ಕಡೆಗೆ ಪ್ರಯಾಣ ಬೆಳೆಸಿದರು. 

Read Post »

You cannot copy content of this page

Scroll to Top