ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ

ಪುಸ್ತಕ ಸಂಗಾತಿ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರುರವರು ಸನ್ 2025ನೇ ಸಾಲಿನ ಪುಸ್ತಕ ಸೊಗಸು ಮುದ್ರಣ ಸೊಗಸು ಯೋಜನೆ ಅಡಿಯಲ್ಲಿ ಪುಸ್ತಕ ಗಳನ್ನು ಆಯ್ಕೆ ಮಾಡಲಾಗಿದ್ದು. ಹಿರಿಯ ಕವಿ, ಪ್ರಕಾಶಕ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯ ಕವನ ಸಂಕಲನದ ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.               ನಿರಂತರ ಪ್ರಕಾಶನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿ ಗಳನ್ನು ನೀಡಿದ ಮಕಾನದಾರ ಅವರ ಅಕ್ಕಡಿ ಸಾಲು ಮತ್ತು ಪ್ಯಾರಿ ಪದ್ಯ ಸಂಕಲನಗಳ ಕವಿತೆಗಳು  ಆರು ಭಾಷೆಗಳಿಗೆ ತರ್ಜುಮೆಗೊಂಡಿದ್ದು. ಕುವೆಂಪು ವಿಶ್ವ ವಿದ್ಯಾಲಯ, ವಿಜಯ ನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿಗಳಿಗೆ ಮತ್ತು ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವ ವಿದ್ಯಾಲಯ ಹಾಗೂ ಪುಣ್ಯ ಶ್ಲೋಕ ಅಹಲ್ಯಬಾಯಿ ಹೋಳ್ಕರ್ ವಿಶ್ವ ವಿದ್ಯಾಲಯಗಳಿಗೆ ಗಜಲ್ ಪಠ್ಯ ಪುಸ್ತಕ ದಲ್ಲಿ ಸೇರ್ಪಡೆಗೊಂಡಿವೆ.           ಬೀದರ್ ಜಿಲ್ಲೆ ಬೇಲೂರ್ ಉರಿಲಿಂಗ ಪೆದ್ದಿ ಸಂಸ್ಕೃತಿ ಕ ವೇದಿಕೆ ಯ ರಾಜ್ಯಮಟ್ಟದ ಅತ್ಯುತ್ತಮ ಪ್ರಕಾಶನ ಪುರಸ್ಕಾರ ನಿರಂತರ ಪ್ರಕಾಶನಕ್ಕೆ ಲಭಿಸಿದ್ದನ್ನಿಲ್ಲಿ ಸ್ಮರಿಸ ಬಹುದು ದರ್ವೇಶಿ ಪದ್ಯ ಒಡಲ ಸಂಕಟದ ಆಯ್ದ ಪದಗಳ ಕಟ್ಟು ಸಂಕಲನದ ಮುಖಪುಟ ಚಿತ್ರ ಕಲಾವಿದ ಈಶ್ವರ. ಬಡಿಗೇರ್ ಅವರು ರಚಿಸಿದ್ದು ನಿರಂತರ ಪ್ರಕಾಶನದಿಂದ ಪ್ರಕಟಣೆಯಾಗಿದೆ. ಸಾಹಿತಿ ಎ ಎಸ್. ಮಕಾನದಾರ ಮತ್ತು ಚಿತ್ರ ಕಲಾವಿದ ಈಶ್ವರ್ ಬಡಿಗೇರ್ ಅವರಿಗೆ ಗದಗ ಜಿಲ್ಲೆಯ ಸಾರಸ್ವತ ಲೋಕದ ಗೆಳೆಯರ ಬಳಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ Read Post »

ಕಾವ್ಯಯಾನ, ಗಝಲ್

ಡಾ.ರೇಖಾಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾಉದಯ್‌ ಗಜಲ್ ನಾನೆಂಬ ಅಹಂಕಾರ ನಿನ್ನನ್ನೇ ಸುಡುವುದು ಮರುಳೇಅಂತಿಮದಲ್ಲಿ ನಿನ್ನನ್ನೇ ನಾಶ ಮಾಡುವುದು ಮರುಳೇ. ಪ್ರೇಮ ಪ್ರೀತಿಯಲ್ಲಿ ಗೆಲ್ಲಬಹುದು ಜಗದ ಜೀವಿಗಳನ್ನದ್ವೇಷ ಹಗೆಗಳು ಪಾತಾಳಕ್ಕೆ ದೂಡುವುದು ಮರುಳೇ ಹಿರಿಯರು ಕಿರಿಯರೆಂಬ ಗೌರವ ನೀಡುವುದ ಕಲಿತುಕೋನಾನೆಂದು ಮೆರೆದರೆ ಆತ್ಮವೇ ಕಾಡುವುದು ಮರುಳೇ ಹಿತಚಿಂತಕರು ಹಿತಶತ್ರುಗಳ ಗುರುತಿಸುವುದ ತಿಳಿದುಕೋದುರ್ಬುದ್ಧಿಯೊಳಿದ್ದರೆ ವಿಧಿ ಬೇರೆ ಆಡುವುದು ಮರಳೇ ರೇಖೂ ಇರುವ ಬದುಕನು ಚಂದದಿ ಬದುಕಲು ಹೇಳಿಬಿಡುದುರುಳರ ಸಂಗದಿ ನಿನ್ನ ಬದುಕೇ ಕೆಡುವುದು ಮರುಳೇ ಡಾ.ರೇಖಾಉದಯ್

ಡಾ.ರೇಖಾಉದಯ್‌ ಅವರ ಗಜಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ ಕ್ರಾಂತಿಕಾರಿ ಕವಿ ಸರ್ವಜ್ಞ ಸರ್ವಜ್ಞ ಕವಿ 16ನೇ  ಶತಮಾನದಲ್ಲಿ ಜೀವಿಸಿದ್ದ ಕನ್ನಡದ ಅತ್ಯಂತ ಜನಪ್ರಿಯ ಕ್ರಾಂತಿಕಾರಿ ತ್ರಿಪದಿ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು.  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸರ್ವಜ್ಞ ಅಪ್ಪಟ ಬಸವ ಭಕ್ತ ಕ್ರಾಂತಿಕಾರಿ ಕವಿ. ತನ್ನ ಮೊನಚಾದ ಟೀಕೆ ಟಿಪ್ಪಣಿಗಳು ವಿಡಂಬನೆಯಿಂದ ಸುತ್ತಲಿನ ಅಂಕು ಡೊಂಕುಗಳನ್ನು ತಿದ್ದಿದ್ದಾನೆ. ಸಮಾಜದ ಆಷಾಢಭೂತಿತನಕ್ಕೆ ನೇರ ಚಾಟಿ ಏಟು ಬೀಸಿದ್ದಾನೆ. ಮೂರು ಸಾಲುಗಳ ಸರಳ ‘ತ್ರಿಪದಿ’ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಾರ್ವಕಾಲಿಕ ನೀತಿ ಮತ್ತು ಮೌಲ್ಯಗಳನ್ನು ಬೋಧಿಸಿದ ದಾರ್ಶನಿಕರಾಗಿದ್ದಾರೆ.  ಜನನ ಮತ್ತು ಬಾಲ್ಯ ಹುಟ್ಟೂರು: ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು. ನಿಜನಾಮ: ಸಂಶೋಧನೆಗಳ ಪ್ರಕಾರ ಈತನ ನಿಜವಾದ ಹೆಸರು ಪುಷ್ಪದತ್ತ, ‘ಸರ್ವಜ್ಞ’ ಎಂಬುದು ಕಾವ್ಯನಾಮ. ತಂದೆ ತಾಯಿ : ತಂದೆ ಕುಂಬಾರ ಮಲ್ಲ  ಮತ್ತು ತಾಯಿ ಮಾಳೆ (ಮಾಳಲಾದೇವಿ). ತಂದೆ ಕುಂಬಾರ ಮಲ್ಲ ತಾಯಿ ಮಾಳಲಾದೇವಿ ಇಂದು ಧರೆಗೆ ಬಂದ ಚಂದ್ರಶೇಖರ ನಾನು ಸರ್ವಜ್ಞ  ಎಂದು ತನ್ನ ಹುಟ್ಟಿನ ಬಗ್ಗೆಯೇ ಹೇಳಿಕೊಂಡಿದ್ದಾನೆ. ಸಾಹಿತ್ಯ ಮತ್ತು ತ್ರಿಪದಿಗಳ ವೈಶಿಷ್ಟ್ಯ ತ್ರಿಪದಿ ಚಂದಸ್ಸು: ಮೂರು ಸಾಲುಗಳ ಪದ್ಯ ಪ್ರಕಾರವಾದ ತ್ರಿಪದಿಗೆ ಸರ್ವಜ್ಞ ಅತ್ಯಂತ ಪ್ರಸಿದ್ಧರಾಗಿದ್ದಾರೆ. ಜಾತಿ ಪದ್ಧತಿಯ ವಿರೋಧ, ಮೂಢನಂಬಿಕೆಗಳ ಖಂಡನೆ, ನೀತಿ, ಕಾಯಕದ ಮಹತ್ವ, ಸ್ನೇಹ ಮತ್ತು ಲೌಕಿಕ ಜ್ಞಾನ ಇವರ ವಚನಗಳ ಮುಖ್ಯ ವಸ್ತುಗಳಾಗಿದ್ದವು. ಸರಳ ಭಾಷೆ: ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಉಪಮೆ ಹಾಗೂ ಉದಾಹರಣೆಗಳನ್ನು ಬಳಸಿ ಕಾವ್ಯ ರಚಿಸಿದ್ದಾರೆ.  ಪ್ರಸಿದ್ಧ ವಚನ (ತ್ರಿಪದಿ) ತಮ್ಮ ಜ್ಞಾನದ ಕುರಿತು ಸರ್ವಜ್ಞ ಅತ್ಯಂತ ವಿನಮ್ರವಾಗಿ ಹೀಗೆ ಹೇಳಿಕೊಂಡಿದ್ದಾರೆ:  “ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ”  ( ನಾನು ಹುಟ್ಟುತ್ತಲೇ ಎಲ್ಲವನ್ನೂ ತಿಳಿದ ಮಹಾಜ್ಞಾನಿಯಾಗಿರಲಿಲ್ಲ ಅಥವಾ ಅಹಂಕಾರದಿಂದ ಸರ್ವಜ್ಞನಾಗಲಿಲ್ಲ. ಸಮಾಜದಲ್ಲಿ ಸಿಗುವ ಪ್ರತಿಯೊಬ್ಬರಿಂದಲೂ ಒಂದೊಂದು ಒಳ್ಳೆಯ ವಿಷಯಗಳನ್ನು ಕಲಿತು ಜ್ಞಾನದ ಪರ್ವತವಾಗಿದ್ದೇನೆ) ಎಂದು ಹೇಳಿಕೊಂಡಿದ್ದಾನೆ. ಸರ್ವಜ್ಞನು ಕಂಡ ಬಸವಣ್ಣ ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬಸವಣ್ಣ ಮತ್ತು ಶರಣರ ಕಾರ್ಯವನ್ನು ನೆನೆಸಿದ್ದಾನೆ. ಕನ್ನಡದ ಪ್ರಸಿದ್ಧ ತ್ರಿಪದಿ ಕವಿ ಸರ್ವಜ್ಞರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾದ ವಿಶ್ವಗುರು ಬಸವಣ್ಣನವರ ಮಹಿಮೆ, ಭಕ್ತಿ ಮತ್ತು ಆದರ್ಶಗಳನ್ನು ತಮ್ಮ ಕೆಲವು ಪ್ರಮುಖ ತ್ರಿಪದಿಗಳಲ್ಲಿ ಅತ್ಯಂತ ಗೌರವದಿಂದ ಕೊಂಡಾಡಿದ್ದಾರೆ. ಲಿಂಗಾಯತ ಧರ್ಮ ಮತ್ತು ಸಮಾಜಕ್ಕೆ ಬಸವಣ್ಣನವರ ಕೊಡುಗೆಯನ್ನು ಸರ್ವಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸರ್ವಜ್ಞ ಒಬ್ಬ ನೇರ ದಿಟ್ಟ ನಿರಂತರ ಕ್ರಾಂತಿಕಾರಿ ಕವಿ. ಒಂದು ಅರ್ಥದಲ್ಲಿ ಬಸವಣ್ಣನವರ ಶರಣರ ಕ್ರಾಂತಿಯ ವಾರಸುದಾರ.  ಬಸವಣ್ಣನವರ ಕುರಿತಾದ ಸರ್ವಜ್ಞನ ಪ್ರಮುಖ ತ್ರಿಪದಿಗಳು ಮತ್ತು ಅವುಗಳ ಸರಳ ಭಾವಾರ್ಥಗಳು ೧. ಲಿಂಗಾಯತ ಧರ್ಮದ ಕರ್ತೃ ಬಸವಣ್ಣ ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ | ಹುಸಿಮಾತನಾಡಿ ಕೆಡದಿರಿ ಲಿಂಗಾಯತಕೆ | ಬಸವಣ್ಣನೆ ಕರ್ತೃ ಸರ್ವಜ್ಞ ||  ಬಸವ ಗುರುವಿನ ಮಹಿಮೆ ಮತ್ತು ಹೆಸರಿನ ಶಕ್ತಿ ಎಲ್ಲರಿಗೂ ತಿಳಿಯದು. ಸುಳ್ಳು ಮಾತುಗಳನ್ನಾಡಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ಲಿಂಗಾಯತ ಧರ್ಮಕ್ಕೆ ಮತ್ತು ವೈಚಾರಿಕ ಸಮಾಜಕ್ಕೆ ಬಸವಣ್ಣನವರೇ ನಿಜವಾದ ಮೂಲಪುರುಷ ಅಥವಾ ಕರ್ತೃವಾಗಿದ್ದಾರೆ.  ೨. ಬಸವ ನಾಮಸ್ಮರಣೆಯ ಮಹಿಮೆ ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು | ಬಸವನ ಪಾದವ ನಂಬಿದ ಭಕ್ತರು | ಹಸನಾದರಯ್ಯ ಸರ್ವಜ್ಞ ||  ಬಸವ’ ಎಂಬ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ಸಾಕು, ಮನುಷ್ಯನ ಪಾಪಗಳೆಲ್ಲವೂ ದಿಕ್ಕೆಟ್ಟು ಓಡಿಹೋಗುತ್ತವೆ. ಬಸವಣ್ಣನವರ ತತ್ತ್ವಗಳನ್ನು ಮತ್ತು ಅವರ ಪಾದಗಳನ್ನು ನಂಬಿ ನಡೆದ ಭಕ್ತರ ಜೀವನವು ಅತ್ಯಂತ ಸುಂದರವಾಗಿ ಹಾಗೂ ಪಾವನವಾಗಿ ರೂಪಿತಗೊಂಡಿದೆ.  ೩. ಬಸವಣ್ಣನೇ ಜಗದ ಗುರು ಬಸವನೆ ಜಗದಾದಿ ಬಸವನೆ ಜಗದೀಶ | ಬಸವನೇ ಜಗದ ಗುರುಪ್ರಣವವೆಂದರಿದು | ಬಸವನನು ಜಪಿಸು ಸರ್ವಜ್ಞ ||   ಬಸವಣ್ಣನೇ ಈ ಜಗತ್ತಿನ ಕಲ್ಯಾಣದ ಆದಿಯಾಗಿದ್ದಾನೆ, ಅವನೇ ದೈವಸ್ವರೂಪಿಯಾಗಿದ್ದಾನೆ. ಬಸವಣ್ಣನೇ ಇಡೀ ಜಗತ್ತಿಗೆ ಓಂಕಾರದಂತಹ (ಪ್ರಣವ) ಜ್ಞಾನವನ್ನು ನೀಡಿದ ಜಗದ್ಗುರು ಎಂಬುದನ್ನು ಅರಿತು, ಸದಾ ಆತನ ನಾಮವನ್ನು ಜಪಿಸು.  ೪. ಮಂತ್ರಸಿದ್ಧ ಬಸವಣ್ಣ ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ | ಮಂತ್ರಸಿದ್ದನು ಬಸವಣ್ಣನ ಪಾದಕ್ಕ | ಶರಣೆನ್ನಿರೆಲ್ಲ ಸರ್ವಜ್ಞ  ಕಾಮವನ್ನು ಗೆದ್ದವನು ಬಸವಣ್ಣ. ಭಕ್ತರ ಚಿಂತೆಗಳನ್ನು ಪರಿಹರಿಸುವವನು ಬಸವಣ್ಣ. ಆಧ್ಯಾತ್ಮಿಕ ಮಂತ್ರಸಿದ್ಧಿಯನ್ನು ಹೊಂದಿರುವ ಆ ಬಸವಣ್ಣನ ಪಾದಗಳಿಗೆ ನಾವೆಲ್ಲರೂ ಭಕ್ತಿಯಿಂದ ಶರಣಾಗಬೇಕು. ೫. ಶಂಭುವಿನ ಕರುಣೆ ನಂಬಿ ಹೇಳುವೆ ಬಸವ ನಿಂಬಿಸಿ ಮಹಿಮೆಯ | ಶಂಭುವಿನ ಕರುಣ ನಿನಗುಂಟ ನಾನಿಮ್ಮ | ನಂಬಿ ಹೇಳಿದೆನು ಸರ್ವಜ್ಞ  ಬಸವಣ್ಣನೇ, ನಿನ್ನ ಅಪಾರವಾದ ಮಹಿಮೆಯನ್ನು ನಾನು ಪೂರ್ಣವಾಗಿ ನಂಬಿ ಹೇಳುತ್ತಿದ್ದೇನೆ. ಸಾಕ್ಷಾತ್ ಶಿವನ (ಶಂಭುವಿನ) ಸಂಪೂರ್ಣ ಕೃಪೆ ನಿನ್ನ ಮೇಲಿದೆ ಎಂಬುದನ್ನು ನಾನು ದೃಢವಾಗಿ ನಂಬಿ ಜಗತ್ತಿಗೆ ಸಾರುತ್ತಿದ್ದೇನೆ ಎಂದು ಹೇಳಿದ್ದಾರೆ.  ೬ ಲೋಕಕ್ಕೆ ಬಸವಣ್ಣನೇ ಮುದ್ದು ಹಸಿದೊಡಂಬಲಿ  ಮುದ್ದು ಬಿಸಿಲಿಗೆ ಕೊಡೆ ಮುದ್ದು ಬಸುರಿಗೆ ಶಿಶು ಮುದ್ದು ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ. ಬೇಸಿಗೆಯ ಬಳಲಿಕೆಗೆ ಅಂಬಲಿ ಕೊಟ್ಟಾಗ ಹೊಟ್ಟೆಗೆ ಹಿತವಾಗಿರುತ್ತದೆ. ಹಸಿದ ಹೊಟ್ಟೆ ತಣ್ಣಗೆ ಮಾಡುವ ಅಂಬಲಿ ಆರೋಗ್ಯಕ್ಕೂ ಒಳ್ಳೆಯದು. ಬಿಸಿಲಿಗೆ ಒಂದು ಕೊಡೆ ಇದ್ದರೆ ಅದಕ್ಕಿಂತ ಹೆಚ್ಚಿನ ಆನಂದ ಇನ್ನೊಂದಿಲ್ಲ. ಬಸುರಿ ಹೆಣ್ಣು ಮಗಳು ಓಣಿಯಲ್ಲಿ ಆಡುವ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡುತ್ತಾಳೆ ಬಸುರಿ. ೭ ಬಸವ ಪೀಠವು ಎದ್ದು ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ ಬಸವನ ಮುದ್ರೆ ಮೆರೆದಾವು,ಧರೆಯವಗೆ  ವಶವಾಗದಿಹುದೆ  ಸರ್ವಜ್ಞ ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪವು ಒಂದು ಪ್ರಬಲ ಪ್ರಜಾಪ್ರಭುತ್ವದ ಅಂಗವಾಗಿ ಹೊರ ಹೊಮ್ಮಿತು.ಅದನ್ನೇ ಸರ್ವಜ್ಞ ಬಸವ ಪೀಠವು ಎದ್ದು ಜಾಗೃತಗೊಂಡು ಹೊಸ ನಾಣ್ಯಗಳು ಚಲಾವಣೆಗಾಗಿ ಹುಟ್ಟಿ ಕೊಂಡು ಆ ಚಲಾವಣೆಗೊಳ್ಳುವ ನಾಣ್ಯಗಳ ಮೇಲೆ ಬಸವನ. ಮುದ್ರೆ ನಾಡಲ್ಲಿ ಮೆರೆಯುವಾಗ ಬೆಳಕಿಗೆ ಬರುವಾಗ. ಇಡೀ ಜಗತ್ತು ಅವನಿಗೆ ವಶವಾಗಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾನೆ. ಸರ್ವಜ್ಞರು ತಮ್ಮ ಈ ತ್ರಿಪದಿಗಳ ಮೂಲಕ ಬಸವಣ್ಣನವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಸಮಾಜವನ್ನು ಉದ್ಧಾರ ಮಾಡಲು ಬಂದ ಸಾಕ್ಷಾತ್ ಶಿವ ಕಲ್ಯಾಣದ ಜ್ಯೋತಿಯಾಗಿ ಆರಾಧಿಸಿದ್ದಾರೆ. ಸರ್ವಜ್ಞ ಒಬ್ಬ ದಿಟ್ಟ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ವ್ಯಕ್ತಿ. ತನ್ನ ಅನಿಸಿಕೆ ಭಾವನೆಗಳನ್ನು ನೇರವಾಗಿ ಹೇಳುವ ಗಟ್ಟಿತನ ಹೊಂದಿರುವ ಅಪರೂಪದ ಕವಿ. ಆಡು ಮುಟ್ಟದ ಸೊಪ್ಪಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ ಎನ್ನುವ ಜಾನಪದ ನಾಣ್ಣುಡಿಯಂತೆ ಸರ್ವಜ್ಞ ಎಲ್ಲಾ ವಿಷಯಗಳ ಬಗ್ಗೆ  ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆರೋಗ್ಯ ಕುಟುಂಬ ಗಂಡ ಹೆಂಡತಿ ಸಂಬಂಧ ಆಹಾರ ವೈದಿಕ ವ್ಯವಸ್ಥೆಯ ವಿರುದ್ಧ ಟೀಕೆ ಹೀಗೆ ಎಲ್ಲಾ ವಿಷಯಗಳನ್ನು ತನ್ನ ತ್ರಿಪದಿಗಳಲ್ಲಿ ದಾಖಲಿಸಿದ್ದಾನೆ. ಜಯಂತಿ: ಪ್ರತಿ ವರ್ಷ ಫೆಬ್ರವರಿ 20 ರಂದು ಸರ್ವಜ್ಞ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸಲಾಗುತ್ತದೆ.  ಯಾವುದಾದರೂ ಒಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ಸರ್ವಜ್ಞ ಪೀಠ ಸ್ಥಾಪಿಸಿ ಅವರ ಉಜ್ವಲ ಚಿಂತನೆ ಮಾನವ ಪ್ರೇಮ ಸಾಮಾಜಿಕ ಚಿಂತನೆಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಮಳೆ” ಮನೆ ತುಳಸಿ ಬಾಡಿತು,ಹೊಸ್ತಿಲ ದೀಪ ಆರಿತು;ಒಂದೇ ಸೂರಿನ ನೆರಳಲಿನಗುವು ಮೌನ ಸೇರಿತು. ಮಾತು ಹಕ್ಕಿ ಹಾರಿತು,ಮೌನ ಗೂಡು ಕಟ್ಟಿತು;ಕೈಯ ಸ್ಪರ್ಶವಿದ್ದರೂಮನಸು ದೂರ ಸರಿಯಿತು. ನಂಬಿಕೆ ಮೊಗ್ಗು ಬಾಡಿತು,ಸ್ವಾರ್ಥ ಗಾಳಿ ಬೀಸಿತು;ಅರಳುವ ಮೊದಲೇ ಪ್ರೀತಿಧೂಳಾಗಿ ಉದುರಿತು. ಕಾದ ಕಣ್ಣ ಬೆಳಕಲಿಹೊಸ್ತಿಲ ನೆರಳು ನಿಂತಿತು;ಹೆಜ್ಜೆ ಸದ್ದು ಮೂಡದೆಸಂಜೆ ಮೌನ ಹರಡಿತು ಒಣ ಮಣ್ಣ ಮಡಿಲಲಿಬೀಜ ಇನ್ನೂ ಮಲಗಿತು;ಪ್ರೀತಿಯ ಮೊದಲ ಹನಿಯಲಿಬಂಧ ಮತ್ತೆ ಚಿಗುರಿತು. ✍️ ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮೌನ” ಮೌನವೆಂದರೆ ಮಾತಿಲ್ಲದ ಸ್ಥಿತಿಯಲ್ಲಮನದ ಮಾತುಗಳ ಸಮ್ಮಿಲನ ಮೌನವೆಂದರೆ ಶೂನ್ಯವಲ್ಲಸಾವಿರ ಭಾವನೆಗಳ ಸಾಗರ ಮೌನವೆಂದರೆ ಪದಗಳ ಅಂತ್ಯವಲ್ಲಅಂತರಂಗದ ಅರಿವಿನ ಆರಂಭ ಮೌನವೆಂದರೆ ಅಂತರವಲ್ಲಜೀವ ಭಾವದ ಸೇತುವೆ ಮೌನವೆಂದರೆ ದೌರ್ಬಲ್ಯವಲ್ಲಸಂಯಮ ಸಹನೆಯ ಪ್ರತಿಕ ಮೌನವೆಂದರೆ ಕತ್ತಲೆಯಲ್ಲಆತ್ಮಜ್ಞಾನದ ಹೊಂಬೆಳಕು ಮೌನವೆಂದರೆ ಖಾಲಿತನವಲ್ಲಸಚ್ಛಿಂತನೆಗಳ ಚಿಲುಮೆ ಮೌನವೇ ಆತ್ಮಾವಲೋಕದ ಆಗರಮೌನವೇ ಮನಶಾಂತಿಯ ಮಂದಿರ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮೌನ” Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ”

ಕಾವ್ಯಸಂಗಾತಿ ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ” ಮಕ್ಕಳ ಮೊದಲ ಹೀರೋ ಅಪ್ಪನೆಂಬ ದಿವ್ಯಪುರುಷಈ ಜಗದಲ್ಲಿ ಕಾಣಸಿಗುವ ಒಂದು ಅದ್ಭುತ ಹರುಷ ಮನದಲ್ಲಿ ಮನೆ ಮಾಡುವ ಈ ನಗುವಿನ ಸ್ಪರುಷಜೊತೆಯೊಳು ಸದಾ ಇದ್ದರೆ ಎಲ್ಲಿಲ್ಲದ ಒಂದು ಪೌರುಷ ಹಗಲಿರಲು ದುಡಿದು ದಣಿದು ಬೆವರ ಹನಿಯ ಹರಿಸುತ್ತಾ ಸಂಸಾರಕ್ಕೆ ನೀನಾದೆ ಗಟ್ಟಿ ಶಕ್ತಿ ಜವಾಬ್ದಾರಿಯೊಳು ಕಟು ಭಕ್ತಿ ಹಗಲು ಇರುಳು ಬೆಳಗಲು ಇರುವಂತೆ ಸೂರ್ಯ ಚಂದ್ರಮಕ್ಕಳ ಮುದನಗು ಮೂಡಲುಇರೋತ್ಯಾಗಿ ಅಪ್ಪನೆಂಬ ವಜ್ರ ಹೃದಯದಲ್ಲಿ ಜನ್ಮಿಸಿದಈ ಭಕ್ತಿಯ ಸಾಲುಗಳು ನಿನಗರ್ಪಣೆ ಓ ಜನ್ಮದಾತನೆ ಅಪ್ಪನೆಂಬ ಸ್ಪೂರ್ತಿದಾತನೆ ಚಂದ್ರು ಪಿ ಹಾಸನ್

ಚಂದ್ರು ಪಿ ಹಾಸನ್ “ಅಪ್ಪನಿಗೆ ಅರ್ಪಣೆ” Read Post »

ಕಾವ್ಯಯಾನ, ಗಝಲ್

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಣುಕಾತಾಯಿ. ಸಂತಬಾ ಗಜಲ್ ಬಾಳ ತಿರುಗುಣಿಯಲಿ ತಿರುಗಿ ತಿರುಗಿ ತಂದನು ತರಹೇವಾರಿ ಕನಸನುಸಂಸಾರದ ಸಂತೆಯಲಿ ತೂಗಿ ತೂಗಿ ತಂದನು ತರಹೇವಾರಿ ಬಣ್ಣವನು.ll ರಾತ್ರಿ ಹಗಲೆನ್ನದೆ ಗಾಣದ ಎತ್ತಿನಂತೆ ದಣಿಯಲಾರದ ದಣಿಯಿವನು,ದೋತರದಲಿ ಕಷ್ಟದ ಗಂಟು ಕಟ್ಟಿ ತಂದನು ತರಹೇವಾರಿ ಸುಖವನು.ll ಬಿಸಿಲು ಮಳೆಯನ್ನದೆ ದುಡಿ ದುಡಿದು ಸಣ್ಣಗೇನೆ ನರಳಿದವನು,ಮಮತೆಯಲಿ ಬಾನಷ್ಟು ಬಾಗಿ ತಂದನು ತರಹೇವಾರಿ ನಕ್ಷತ್ರವನು.ll ಬೊಗಸೆಯಷ್ಟು ನಿದ್ರೆಯನು ಮಾಡಿ ಸಾಗರದಷ್ಟು ಎಚ್ಚರವಿದ್ದವನು.ಗಂಧದಂತೆ ನುಣ್ಣಗೆ ತೇದು ತೇದು ತಂದನು ತರಹೇವಾರಿ ಸುಗಂಧವನು.ll ತಾಯಿಗೆ ಕೈ ತುಂಬಾ ಪ್ರೀತಿಯ ಮಲ್ಲಿಗೆ ಕೊಟ್ಟು ಮೆಲ್ಲಗೆ ಸರಿದವನು,ಅವ್ವನ ಸಿಡುಕಿಗೆ ನಕ್ಕು ಮರಳಿ ತಂದನು ತರಹೇವಾರಿ ಸಾಮಾನನು.ll ಡಾ.ರೇಣುಕಾತಾಯಿ. ಸಂತಬಾ.

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಪುಸ್ತಕ ಸಂಗಾತಿ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ

ಪುಸ್ತಕ ಸಂಗಾತಿ ಅಭಿಜ್ಞಾ ಪಿ.ಎಂ ಗೌಡ ಶ್ರೀಕಾಂತ್‌ ಪತ್ರೆಮರ “ವ್ಯಕ್ತಪತ್ರೆಗಳು” *ವ್ಯಕ್ತಪತ್ರೆಗಳ ಒಳ ಹೊಕ್ಕಾಗ*                ವ್ಯಕ್ತಪತ್ರೆಗಳು ಎಂಬ ಶೀರ್ಷಿಕೆಯೆ ಬಹಳ ಅರ್ಥಪೂರ್ಣವಾಗಿದೆ. ಈ ಕವನ ಸಂಕಲನವು ಶ್ರೀಕಾಂತ್ ಪತ್ರೆಮರ ರವರ ಚೊಚ್ಚಲ ಕೃತಿಯಾಗಿದ್ದು ಇದು ನೂರಕ್ಕೂ ಅಧಿಕ ಕವನಗಳನ್ನು ತನ್ನ ಒಡಲಿನೊಳಗೆ ಇಟ್ಟುಕೊಂಡಿರುವ ಅದ್ಭುತ ಕೃತಿ ಎಂದರೆ ತಪ್ಪಾಗಲಾರದು. ಇದರೊಳಗಿರುವ ಒಂದೊಂದು ಕವನಗಳು ಕೂಡ ಒಂದೊಂದು ಕಥೆಯನ್ನು ಹೇಳುವಂತಿವೆ.ಇಲ್ಲಿನ ಕವನಗಳಲ್ಲಿ ಭಾವನೆಗಳು, ಕಲ್ಪನೆಗಳು ಮತ್ತು ಆಲೋಚನೆಗಳನ್ನು ಅತ್ಯಂತ ಸುಂದರ ಹಾಗೂ ಅರ್ಥಗರ್ಭಿತ ಪದಗಳಲ್ಲಿ ವ್ಯಕ್ತಪಡಿಸಿರುವುದನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂಥರಾ ಆನಂದ. ಈ ಸಂಕಲನದಲ್ಲಿ ಶ್ರೀಕಾಂತ್ ಪತ್ರೆಮರ ರವರು ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು, ಭಾವನೆಯನ್ನು ತುಂಬಿ ಕವನಗಳ ರಚನೆ ಮಾಡಿರುವುದನ್ನು ಕಾಣಬಹುದು. ಈ ಸಂಕಲನದಲ್ಲಿನ ಕವನಗಳಲ್ಲಿ ಪ್ರೀತಿ, ಕರುಣೆ, ಕೋಪ, ದುಃಖ, ದೇಶಭಕ್ತಿ, ಪ್ರಕೃತಿಯ ಸೌಂದರ್ಯವನ್ನು ಮನಮುಟ್ಟುವಂತೆ ಹೇಳಿರುವುದಲ್ಲದೆ;ಕೆಲವೊಂದು ಕವನಗಳು ಲಯಬದ್ಧವಾಗಿ ರಚಿಸಿದ್ದಾರೆ. ಹಾಗಾಗಿ ಇಲ್ಲಿನ ಕೆಲವು ಕವನಗಳು ರಾಗವಾಗಿ ಹಾಡಲು ಮನಸ್ಸಿಗೆ ಮುದ ನೀಡುವಂತಿವೆ.ಪತ್ರೆಮರ ರವರು ​ತಮ್ಮ ಕಲ್ಪನಾ ಲೋಕದ ಮೂಲಕ ಸಾಮಾನ್ಯ ಸಂಗತಿಗಳಿಗೂ ಒಂದು ವಿಶಿಷ್ಟ ರೂಪವನ್ನು ಕೊಟ್ಟಿರುವುದು ಹಾಗು ಸುದೀರ್ಘವಾದ ಕಥೆಯನ್ನು ಹೇಳುವ ಬದಲು, ಕೆಲವೇ ಸಾಲುಗಳಲ್ಲಿ ಇಡೀ ಭಾವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯವೆನಿಸಿದೆ.ಅದರ ಜೊತೆಗೆ ಪ್ರಕೃತಿಯ ಐಸಿರಿ , ವಸುಂಧರೆಯ ಸೌಂದರ್ಯ; ಅವಳ ಅನನ್ಯ ಅಪ್ರತಿಮ ಒಡಲಿನಲಿ ತುಂಬಿರುವ ಅಗಾಧ ಅಂಶಗಳನ್ನು ಹೊತ್ತಿ ತರುವುದರ ಮೂಲಕ ಒಂದು ಪ್ರಚಲಿತ ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ವಿಧಾನ ನಾಡುನುಡಿಯ ಬಗ್ಗೆ ಗೌರವ, ಆದರಗಳು ಇತ್ಯಾದಿಗಳನ್ನು ಬಹಳ ಅಚ್ಚುಕಟ್ಟಾಗಿ ಹೆಣೆದಿದ್ದಾರೆ.“ಮನಸ್ಸಿನ ಆಳದಿಂದ ಉಕ್ಕಿ ಬರುವ ಭಾವನೆಗಳಿಗೆ ಶಬ್ದಗಳ ಬಣ್ಣ ಹಚ್ಚಿ, ಲಯದ ಚೌಕಟ್ಟಿನಲ್ಲಿ ಪೋಣಿಸಿರುವುದನ್ನು ಕೂಡ ಈ ಕೃತಿಯಲ್ಲಿ ನೋಡಬಹುದಾಗಿದೆ.                 ಪತ್ರೆಮರ ರವರು ತಮ್ಮ ಆಂತರ್ಯದ ಮೌನ, ಪ್ರೀತಿ, ವಿರಹ, ಹಳಹಳಿಕೆ, ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುತ್ತಾ ಪತ್ರಗಳ ರೂಪದಲ್ಲಿ ಕಾವ್ಯವಾಗಿಸಿ ವ್ಯಕ್ತಪಡಿಸಿರುವುದನ್ನು ಈ ಕವನಗಳನ್ನು ಓದುತ್ತಿದ್ದಂತೆಯೇ ಗೊತ್ತಾಗುವುದು.ಭಾವನೆಗಳನ್ನು ವ್ಯಕ್ತಪಡಿಸಿರುವ ಈ ಕವನಗಳು ಸಾಮಾನ್ಯವಾಗಿ ಓದುಗನಿಗೆ ನೇರವಾಗಿ ಕವಿಯು ತನ್ನೊಳಗಿನ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿರುವಂತೆಯೆ  ಆಪ್ತವೆನಿಸುವವು.                 ಪತ್ರೆಮರ ರವರು ತಮ್ಮ ಕವನ ಸಂಕಲನದಲ್ಲಿ ನಮ್ಮೊಳಗಿನ ಅಹಂಕಾರವನ್ನು ಕರಗಿಸಿ, ಭಗವಂತನಲ್ಲಿ ಶರಣಾಗುವ ದಿವ್ಯ ಮಾರ್ಗವನ್ನು ತೋರುವಂತಹ ಭಕ್ತಿ ಸುಧೆಯನ್ನು ಹರಿಸಿರುವುದನ್ನು ಕಾಣಬಹುದು.ಬದುಕಿನ ಏಳು ಬೀಳುಗಳನ್ನು ಕಂಡಂತಹ ಆಪ್ತ ವಿಷಯಗಳನ್ನು ಕಥನ ರೂಪದಲ್ಲಿ ಬಿಂಬಿಸಿರುವುದು ಅರ್ಥಗರ್ಭಿತವಾಗಿದೆ. ಅಪ್ಪನ ನೋವು, ಹೆತ್ತವ್ವನ ಕಷ್ಟ,ಜೀವಸಖಿಯ ಗೀತೆಗಳನ್ನು ಎಳೆ ಎಳೆಯಾಗಿ ರಚಿಸಿದ್ದಾರೆ. ಈ ಕೃತಿಯಲ್ಲಿರುವ ಎಲ್ಲಾ ಕವನಗಳು ತುಂಬಾ ಅರ್ಥಪೂರ್ಣವಾಗಿ ರಚನೆಗೊಂಡಿದೆ ಅದರಲ್ಲಿ ಕೆಲವೊಂದುಷ್ಟು ಕವನಗಳ ಸಾಲುಗಳು ತುಂಬಾ ಆಪ್ತವೆನಿಸಿತ್ತಿವೆ  *ತಾವರೆ ನಾವಾದರೆ* ಸುತ್ತಣ ಸುಂದರವಿದೆ ಒಳಗಣ ಅಂದಗೆಟ್ಟಿದೆಹಾಗೆಂದು ಅರಳದೇನು? ತಾವರೆ ಜೀವ ಚೈತನ್ಯದ ಚಾರುಲತೆ?       ಕವಿಯ ಈ ಸಾಲುಗಳಲ್ಲಿ ಅದೆಷ್ಟು ಅರ್ಥ ತುಂಬಿದ ನುಡಿಗಳಿವೆ. ನಮ್ಮ ಸುತ್ತಲಿನ ಪರಿಸರ ಎಷ್ಟೇ ಸುಂದರವಾಗಿದ್ದರೂ, ನಮ್ಮೊಳೊಗಿನ ಮನಸ್ಸು ಕುಸಿದಿರಬಹುದು; ಹಾಗೆಂದ ಮಾತ್ರಕ್ಕೆ ಬದುಕಿನ ಚೈತನ್ಯದ ಸಂಕೇತವಾದ ತಾವರೆ ಅರಳುವುದನ್ನು ನಿಲ್ಲಿಸುವುದಿಲ್ಲ.ನಾವು ತಾವರೆಯಂತಾದರೆ, ಎಂತಹ ಕಷ್ಟದ (ಕೆಸರಿನ) ಪರಿಸ್ಥಿತಿಯಲ್ಲೂ ಧೃತಿಗೆಡದೆ ನಮ್ಮೊಳಗಿನ ಜೀವಕಳೆಯನ್ನು ಜಾಗೃತವಾಗಿಟ್ಟುಕೊಂಡು ಮುನ್ನಡೆಯುತ್ತ,ನಮ್ಮನ್ನು ನೋಡುವ ಇಡೀ ಜಗತ್ತಿಗೆ ನಮ್ಮ ಮುಖದಲ್ಲಿನ ನಗು ಮತ್ತು ಸಕಾರಾತ್ಮಕತೆ ಸದಾ ಸ್ಪೂರ್ತಿ ನೀಡುವಂತಿರಬೇಕು ಎಂಬುದನ್ನ ತುಂಬಾ ಸೊಗಸಾಗಿ ಹೇಳಿದ್ದಾರೆ.  *ದೀವಟಿಕೆ*  ಮಾತಿರದ ಮೌನದಲಿ ಅರಳಿಸಿಹಳು ಹಣತೆಗಳೊಳಗಿಂದ ಬೆಳಕಿನ ಸಿಂಚನ ಮಾತಿರುವ ಮುನಿಸಿರುವ ಬದುಕಿನಲಿ ಪ್ರೀತಿಯ ಎದೆಗೂಡಲಿ ಮುಡಿದಿಹಳು ಜೀವಾತ್ಮದ ಜ್ಯೋತಿ ಸುಚೇತನವನು ಮಿಡಿದಿಹಳು ಸಖಳಾಗಿ ಸಕಲಕೆಲ್ಲಕು ದೀವಟಿಕೆ ಕವನದಲ್ಲಿ ಹೆಣ್ಣನ್ನು ಹಣತೆಗೆ ಹೋಲಿಸಿರುವ ಅವರ ಸಾಲುಗಳು ತುಂಬಾ ಚೆನ್ನಾಗಿವೆ ಮಾತುಗಳಿಲ್ಲದ ನಿಶ್ಯಬ್ದದ ಪರಿಸ್ಥಿತಿಯಲ್ಲಿ ಆಕೆ ಪ್ರೀತಿಯ ಹಣತೆಯನ್ನಿಟ್ಟು, ಬದುಕಿನಲ್ಲಿ ಜ್ಞಾನ ಮತ್ತು ಸಂತೋಷದ ಬೆಳಕನ್ನು ಚೆಲ್ಲುತ್ತ,ಮೌನದ ಬೆಳಕನ್ನು,ಪ್ರೀತಿಯ ಆಸರೆಯನ್ನು, ಆತ್ಮದ ಜಾಗೃತಿಯನ್ನು ಮಾಡುತ್ತಾ, ಕೊನೆಗೆ ತನ್ನ ಬದುಕಿನ ಪ್ರತಿಯೊಂದು ಅಣು-ಅಣುವಿನಲ್ಲೂ ತುಂಬಿ ಹೋಗಿ, ಜೀವನದ ಸಕಲಕ್ಕೂ ತಾನೇ ಸರ್ವಸ್ವವಾಗಿದ್ದಾಳೆ ಎಂಬುವುದನ್ನು ಈ ಸಾಲುಗಳಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ. ಅಮೂರ್ತ ಚಿಂತನೆಗೆ ಮೂರ್ತ ರೂಪ ನೀಡುವ ಇವರ ಕವನದ ಸಾಲುಗಳು, ಸಡಗರದ ಸಂಕ್ರಾಂತಿಯ ಕಿಚ್ಚು. ಎಳ್ಳು ಬೆಲ್ಲ ಸವಿಯುವ ಮೆಚ್ಚು, ಸಹಬಾಳ್ವೆ,ಸಮಾನತೆ,ಸಹಬಂಧಗಳ ಬಗ್ಗೆ ಮೂಡಿ ಬಂದಿರುವ ಸಾಲುಗಳ ತೇರು. ಕನ್ನಡ ನುಡಿ,ನಾಡಿನ ಕೆಚ್ಚೆದೆಯ ಬಗೆಗಿನ ಬರಹ ಅರ್ಥಪೂರ್ಣವಾಗಿದೆ.  *ಕನ್ನಡ ನುಡಿ* ವಿಶಾಲ ಕರುನಾಡಿನ ಊರು ಕೇರಿಗಳಲ್ಲಿಬಡವರ ಒಡಲುಗಳಲ್ಲಿ ಮಣ್ಣಿನ ಮಕ್ಕಳಲ್ಲಿಶ್ರಮಿಕ ಕಾರ್ಮಿಕರ ಉಸಿರಿನಲ್ಲಿ ಮತ್ತೆಲ್ಲರತುಟಿಗಳಲ್ಲಿ ನಲಿದಾಡುತಿರೆ ಭಯವೇಕೆ? ಕನ್ನಡ ನಾಡಿನ ಹಳ್ಳಿ-ಹಳ್ಳಿಗಳಲ್ಲಿ, ಬಡವರ ಹಾಗೂ ರೈತರ ಹೃದಯಗಳಲ್ಲಿ,ಕಷ್ಟಪಟ್ಟು ದುಡಿಯುವ ಕಾರ್ಮಿಕರ ಉಸಿರಿನಲ್ಲಿ ಕನ್ನಡ ನುಡಿ ರಾರಾಜಿಸುತ್ತಿದೆ. ಈ ಮಣ್ಣಿನ ಪ್ರತಿಯೊಬ್ಬರ ತುಟಿಗಳ ಮೇಲೂ ಕನ್ನಡವೇ ನಲಿದಾಡುತ್ತಿರುವಾಗ, ನಮ್ಮ ಭಾಷೆಗೆ ಯಾವುದೇ ಆಪತ್ತು ಬರುತ್ತದೆ ಎಂಬ ಭಯ ಪಡುವ ಅಗತ್ಯವೇ ಇಲ್ಲ. ಜನಸಾಮಾನ್ಯರ ಬದುಕಿನೊಂದಿಗೆ ಬೆರೆತುಹೋಗಿರುವ ಕನ್ನಡ ಭಾಷೆ ಸದಾ ಸುರಕ್ಷಿತ ಮತ್ತು ಚಿರಂತನ ಎಂಬುವುದನ್ನು ಅದ್ಭುತವಾಗಿ ತಮ್ಮ ಕವನದ ಸಾಲುಗಳಲ್ಲಿ ಹೇಳಿದ್ದಾರೆ.       ಹಾಗೆಯೇ ಲೌಕಿಕ ಮತ್ತು ಅಲೌಕಿಕ ಎಂಬ ಎರಡು ವಿಭಿನ್ನ ತತ್ವಗಳನ್ನು ಸರಳವಾಗಿ ಅರ್ಥೈಸುವ ಇವರ ಕವನದ  ಸಾಲುಗಳನ್ನು ಓದಲೇಬೇಕು.”ವ್ಯಕ್ತಿಯು ತನ್ನ ಅಸ್ಮಿತೆ  ಮತ್ತು ಕಣ್ಣೀರಿನ ಮೂಲಕ ತನ್ನೊಳಗಿನ ದುಃಖ-ದುಮ್ಮಾನಗಳನ್ನು ಅರಿತುಕೊಳ್ಳುವ ಬಗ್ಗೆ,ಪ್ರಕೃತಿಯ ಮುಗ್ಧತೆ (ಹಕ್ಕಿಯ ಹಾಡು) ಹಾಗೂ ಜೀವನದ ಸಂತೋಷದ ಸಾಕಾರ ರೂಪವಾದ ನಗುವಿನಲ್ಲೇ (ಸಿರಿ ನಿನ್ನ ನಗುವಿನಲ್ಲಿದೆ) ನಿಜವಾದ ಸಂಪತ್ತನ್ನು ಕಂಡುಕೊಳ್ಳುವ ಬಗ್ಗೆಗಿನ ಸಾಲುಗಳನ್ನು ಕಾಣಬಹುದು ಮತ್ತು ಈ ರೀತಿ ತನ್ನನ್ನು ತಾನು ಗೆದ್ದು, ಜಗತ್ತಿಗೆ ಪ್ರೀತಿ ಮತ್ತು ಜ್ಞಾನವನ್ನು ಹಂಚುವ ಮೂಲಕವೆಮನುಷ್ಯ ಕೊನೆಗೆ ‘ವಿಶ್ವಗುರು’ ಆಗುತ್ತ ಉದಾತ್ತ ಎತ್ತರಕ್ಕೆ ಬೆಳೆಯುವ ಈ ಕವನದ ಸಾಲುಗಳನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಅರ್ಥಪೂರ್ಣವಾದ ಸಾಲುಗಳಿವು.​ಒಟ್ಟಾರೆಯಾಗಿ ಅಸ್ತಿತ್ವ, ಪ್ರಕೃತಿ, ಭಾವನೆ, ಆನಂದ ಮತ್ತು ಆಧ್ಯಾತ್ಮಿಕ ಉನ್ನತಿಯ ವಿಭಿನ್ನ ಹಂತಗಳನ್ನು ಧ್ವನಿಸುವಂತಿವೆ. ಮುಂದುವರೆದಂತೆ ಈ ಎಲ್ಲ ಪರಿಕಲ್ಪನೆಗಳು ಮನುಷ್ಯನ ಜೀವನದ ಸುದೀರ್ಘ ಪಯಣವನ್ನು ಮತ್ತು ಅದರಲ್ಲಿ ಎದುರಾಗುವ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವಂತಿರುವುದನ್ನು ನೋಡಬಹುದು. ಜಗತ್ತಿನ ಸತ್ಯವನ್ನು ಹುಡುಕುವ ‘ಶೋಧನಾ ಸವಾರಿ’ ಮತ್ತು ಸಾವಿನೆಡೆಗೆ ಸಾಗುವ ‘ಬಾಳಯಾನ’ಗಳು ‘ವಿಧಿ ಲಿಖಿತ’ದ ಚೌಕಟ್ಟಿಗೆ ಒಳಪಟ್ಟಿದ್ದರೂ, ಬದುಕು ಸಾರ್ಥಕವಾಗುವುದು ಪ್ರೀತಿಯ ಜ್ವಾಲೆಯಾದ ‘ಒಲುಮೆಯ ಕುಲುಮೆ’ಯಲ್ಲಿ ಬೆಂದು ಪಕ್ವವಾದಾಗ ಮಾತ್ರ. ಅಂತಿಮವಾಗಿ, ಜಗದ್ಜ್ಯೋತಿ ಬಸವೇಶ್ವರರು ತೋರಿದ ಕಾಯಕ, ಸಮಾನತೆ ಮತ್ತು ಭಕ್ತಿಯ ಮಾರ್ಗವು ಈ ಇಡೀ ಜೀವನದ ಪಯಣಕ್ಕೆ ಒಂದು ಸುಂದರವಾದ ಅರ್ಥವನ್ನು ಹಾಗೂ ಮುಕ್ತಿಯ ದಾರಿಯನ್ನು ಕಲ್ಪಿಸಿಕೊಡುತ್ತದೆ. ಇಂತಹ ಹಲವಾರು ಕವನಗಳನ್ನು ಓದಬೇಕಾದರೆ ಈ ಸಂಕಲನವನ್ನು ಖಂಡಿತ ಕೊಂಡು ಓದಿರಿ. ಅಷ್ಟೇ ಅಲ್ಲದೆ ಈ ಕೃತಿಯಲ್ಲಿ ಹಲವಾರು ಮಹಾನ್ ಕವಿಗಳು, ಸಂಗೀತಗಾರರ,ಬಗ್ಗೆ ತುಂಬಾ ಚೆಂದದ ಕವನಗಳಿವೆ.  *ಸಂಚಲನ* ಸಂಚಲನ ಕವನದಲ್ಲಿ ಮೂಡಿ ಬಂದಿರುವಂತಹ ಈ ಸಾಲುಗಳು ಮನಸ್ಸಿಗೆ ಮುದ ನೀಡುವಂತಿವೆ.“ದಟ್ಟ ಕಾನನದಿ ಫಲಪುಷ್ಪಗಳ ತೊನೆದ ತರುಲತೆಗಳು ತಂಗಾಳಿಗೆ ತೂಗುತ ತೇಲುತ ಜೀಕುವ ಜೋಗುಳದ ತರಂಗ ಲಾಲಿ ನಿತ್ಯ ಲೀಲೆ.” ಈ ಸಾಲುಗಳು ದಟ್ಟವಾದ ಅರಣ್ಯದಲ್ಲಿ ಪ್ರಕೃತಿ ಮತ್ತು ತಂಗಾಳಿಯ ನಡುವೆ ನಡೆಯುವ ಅದ್ಭುತ ಸುಂದರ ಬಾಂಧವ್ಯವನ್ನು ವರ್ಣಿಸುತ್ತಿವೆ. ಹೂವು-ಹಣ್ಣುಗಳಿಂದ ತುಂಬಿದ ಗಿಡಮರಗಳು ತಂಗಾಳಿಯ ಸೌಮ್ಯ ಸ್ಪರ್ಶಕ್ಕೆ ಲಯಬದ್ಧವಾಗಿ ತೂಗುತ್ತಾ, ಪ್ರಕೃತಿಯೇ ಒಂದು ದಿವ್ಯ ಜೋಗುಳವನ್ನು ಹಾಡುತ್ತಿರುವಂತೆ ಭಾಸವಾಗುತ್ತಿವೆ. ಕಾಡಿನ ಈ ಧ್ವನಿ ಮತ್ತು ಹಸಿರಿನ ನೃತ್ಯವು ಮನಸ್ಸಿಗೆ ಶಾಂತಿಯನ್ನು ನೀಡುವ ಜೋಗುಳದ ತರಂಗದಂತಿದೆ. ಯಾವುದೇ ಹಸ್ತಕ್ಷೇಪವಿಲ್ಲದ ನಿಗೂಢ ಕಾನನದಲ್ಲಿ ಈ ನೈಸರ್ಗಿಕ ಸೌಂದರ್ಯವು ಪ್ರತಿದಿನವೂ ನಿರಂತರವಾಗಿ ನಡೆಯುವ ಒಂದು ದೈವಿಕ ಲೀಲೆಯಾಗಿದೆ ಎಂಬುವುದನ್ನು ತುಂಬಾ ಸುಂದರವಾಗಿ ಹೇಳುತ್ತಾ, ಇಲ್ಲಿ ಪ್ರತಿದಿನ ಪ್ರಕೃತಿಯ ಸಂಚಲನ ಹೇಗಾಗುತ್ತಿದೆ ಎಂಬುದನ್ನು ಈ ಸಾಲುಗಳಲ್ಲಿ ಬಿಂಬಿಸಿದ್ದಾರೆ.            ಇಲ್ಲಿನ ಕವನಗಳಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಶ್ರೀಕಾಂತ್ ಪತ್ರೆಮರ ರವರು ಯಾವುದೇ ತ್ರಾಸಕ್ಕೆ ಬೀಳದೆ ಹೆಚ್ಚಿನ ಪ್ರಾಸವಿಲ್ಲದೆ ಅರ್ಥಪೂರ್ಣವಾದಂತಹ ಕವನಗಳನ್ನು ನೀಡಿದ್ದಾರೆ. ಹಾಗೆಯೇ ತಮ್ಮ ಕವನಗಳಲ್ಲಿ ರೂಪಕ ಉಪಮೇಗಳನ್ನು ಅಲ್ಲಲ್ಲಿ ಸೇರಿಸಿ ಉತ್ತಮ ನಿದರ್ಶನಗಳೊಂದಿಗೆ ಸಾಲುಗಳನ್ನು ಹೆಣೆಯುತ್ತ ಹಲವಾರು ಕವನಗಳನ್ನು ರಚಿಸಿದ್ದಾರೆ. ಇಲ್ಲಿ ಭಾವ ತುಂಬಿದ ಸಾಲುಗಳಿದ್ದು,ಪ್ರಸ್ತುತ ವಿಚಾರಗಳನ್ನ ಸೇರಿಸುತ್ತಾ ಅರ್ಥಪೂರ್ಣವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ರಚಿಸಿದ್ದಾರೆ.                ಕವಿತೆ ಕಟ್ಟಲು ಒಬ್ಬ ಕವಿಗೆ ತನ್ನೆಲ್ಲ ಅಭಿಷ್ಟಗಳಿಗಿಂತಲೂ ಮುಖ್ಯವಾಗಿ ತಾಳ್ಮೆ ಇರಬೇಕು. ಇಲ್ಲಿ ಶ್ರೀಕಾಂತ್ ಪತ್ರೆಮರ ರವರ ಕವನಸಂಕಲನದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಭಕ್ತಿಸುಧೆ, ಬದುಕಿನ ಏಳುಬೀಳಿಗೆ ಸಂಬಂಧಪಟ್ಟಂತಹ ಕವನಗಳು, ಹೆಣ್ಣು, ಕನ್ನಡ ನುಡಿ, ಮಹಾನ್ ವ್ಯಕ್ತಿಗಳ ಸಾಲುಗಳು, ಕಾಣದ ವೈರಾಣು, ನೀರಾಗಬೇಕು,ಕಂಬನಿ, ಹೊರಟೆ ಏಕೆ ನಿಷ್ಕಾರಣ.? ಜೋಪಡಿ, ಹುಲಿ ಉಳಿಸಿ, ಮದರಂಗಿ, ಮೇಘ ಮನ, ಕೊನೆಯೆಂದು,ಸ್ವಯಂ ಪ್ರೀತಿ,ನಿರುತ್ತರ, ನಿರಾಸೆ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತಹ ಕವನಗಳನ್ನು ನೋಡಬಹುದಾಗಿದೆ. ಕುತೂಹಲ ಭರಿತ ವಿಚಾರಗಳನ್ನ ನೀವು ತಿಳಿಯಬೇಕಾದರೆ ಈ ಸಂಕಲನವನ್ನು ಖಂಡಿತ ಓದಲೇಬೇಕು.ಈ ಅಂದರೆ ನೋವು, ನೋಲಿವು, ಅಕ್ಕರೆ, ಸಕ್ಕರೆ. ಹುರುಪು, ಉತ್ತೇಜನ. ಉತ್ಸಾಹ, ಧೈರ್ಯ, ಉಲ್ಲಾಸ, ಆಸೆ, ಆಕಾಂಕ್ಷೆ, ಅಭಿಷ್ಟಗಳು, ಹೆಣ್ಣು,ಪ್ರಕೃತಿ,ಗೆಳೆಯ, ಗೆಳತಿ ಹೀಗೆ ಎಲ್ಲಾ ರೀತಿಯ ಕವಿತೆಗಳು ಸಹ ಇಲ್ಲಿವೆ..       ಈ ಸಂಕಲನವು ಸುಮಾರು 100 ಕ್ಕು ಹೆಚ್ಚು ಕವನಗಳನ್ನು ಒಳಗೊಂಡಿದ್ದು ;ಇದರೊಳಗೆ ಓದುಗರ ಮನಸ್ಸಿನಲ್ಲಿ ಉಳಿಯುವ ಕವನಗಳನ್ನು ನೋಡಬಹುದಾಗಿದೆ. ಅಂದ ಹಾಗೆ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಯಲ್ಲಿ ಮತ್ತಷ್ಟು ಹೊಸತನ, ಲಯಬದ್ದ ಕವನಗಳು ಹಾಗೂ ಒಂದಷ್ಟು ಛoದೋಬದ್ದ ಕವನಗಳನ್ನು ಹೊತ್ತು ತರಲೆಂದು ಆಶಿಸುವೆ.ಈ ಒಂದು ಕೃತಿಗೆ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ ಶೈಲಾ ಜಯಕುಮಾರ್ ರವರು ಅಮೂಲ್ಯವಾದ ನುಡಿತೋರಣವನ್ನು ಮುನ್ನುಡಿಯೊಂದಿಗೆ ಕಟ್ಟಿಕೊಟ್ಟಿರುವರು. ಹಾಗೂ ಈ ಕೃತಿಗೆ ತಮ್ಮದೇ ಬೆನ್ನುಡಿಯಿದ್ದು ತುಂಬಾ ಸೊಗಸಾಗಿದೆ.ಹೀಗೆಯೆ ತಮ್ಮ ಸಾಹಿತ್ಯ ಸೇವೆ ಮುಂದುವರಿಯಲಿ ಶುಭವಾಗಲಿ ಸರ್.ನಿಮ್ಮಿಂದ ಮತ್ತಷ್ಟು ಕವನ ಸಂಕಲನಗಳು ಕನ್ನಡ ಸಾಹಿತ್ಯದ ಒಡಲಿನಲ್ಲಿ ಸೇರಿಕೊಳ್ಳಲೆಂದು ಹಾರೈಸುವೆ… ಅಭಿಜ್ಞಾ ಪಿ.ಎಂ ಗೌಡಮಂಡ್ಯ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ Read Post »

ಇತರೆ

“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಕು ಸರಿಯಾದ ಸಮಯಕೆ ಕಾಯುವಿಕೆ”                                       ಇನ್ಫೋಸಿಸ್ ಸಂಸ್ಥೆ ಹೆಸರು ಯಾರು ಕೇಳಿಲ್ಲ ಹೇಳಿ. ಅದು ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಹೀಗಾಗಿ ಎಲ್ಲರಿಗೂ ಗೊತ್ತು. ಈ ಸಂಸ್ಥೆಯನ್ನು ಪ್ರಾರಂಭಿಸುವಾಗ ನಾರಾಯಣ ಮೂರ್ತಿ ಅವರ ಬಳಿ ದೊಡ್ಡ ಬಂಡವಾಳವಿರಲಿಲ್ಲ. ಪರಸ್ಥಿತಿ ಎಲ್ಲ ಸುಧಾರಿಸಿದ ಮೇಲೆ ಕಂಪನಿ ಆರಂಭಿಸುತ್ತೇನೆoದು ಕಾಯಲಿಲ್ಲ. ಪತ್ನಿ ಸುಧಾ ಮೂರ್ತಿಯವರಿಂದ ಪಡೆದ ಕೇವಲ ೧೦,೦೦೦ ರೂ ಗಳೊಂದಿಗೆ ಚಿಕ್ಕ ಕೋಣೆಯಲ್ಲಿ ಕಂಪನಿಯನ್ನು ಆರಂಭಿಸಿದರು. ಅವರು ಅಂದು ಇಟ್ಟ ದೃಢ ನಿರ್ಧಾರದ  ಹೆಜ್ಜೆ  ಪರಿಸ್ಥಿತಿ ಪೂರಕವಾಗುವವರೆಗೆ ಕಾಯುವ ಅಗತ್ಯವಿಲ್ಲ ಎಂಬುದನ್ನು ಸಾರಿದೆ. ಶುಭ ಗಳಿಗೆ ಯಶಸ್ಸಿನ ದಾರಿಯಲ್ಲಿ ಅತ್ಯಂತ ದೊಡ್ಡ ತಡೆಗೋಡೆ ಎಂದರೆ ಶುಭ ಮುಹೂರ್ತಕ್ಕಾಗಿ, ಸರಿಯಾದ ಸಮಯಕ್ಕಾಗಿ ಕಾಯುವುದು. ನಮ್ಮಲ್ಲಿ ಬಹುತೇಕರು ಹೊಸ ಉದ್ಯೋಗ ಆರಂಭಿಸಲು ಇಲ್ಲವೇ ಹೊಸ ವ್ಯಾಪಾರ ಶುರು ಮಾಡಲು ಇಲ್ಲವೇ ಯಾವುದೇ ಒಳ್ಳೆಯ ಕೆಲಸ ಮಾಡಬೇಕಾದರೂ ಶುಭ ಮುಹೂರ್ತ ನೋಡಿಯೇ ಮುಂದುವರೆಯುತ್ತಾರೆ. ಈಗ ನನ್ನ ಪರಿಸ್ಥಿತಿ ಸರಿಯಾಗಿಲ್ಲ, ನನ್ನ ಬಳಿ ಹಣ ಇಲ್ಲ. ಗ್ರಹಗತಿಗಳು ಚೆನ್ನಾಗಿಲ್ಲ, ಶುಕ್ರ ದೆಸೆ ನಡೆಯುತ್ತಿಲ್ಲ. ಹಣ ಕೈಗೆ ಸೇರಿದ ಮೇಲೆ ಕೆಲಸ ಆರಂಭಿಸುವೆ ಗ್ರಹಗತಿಗಳು ಚೆನ್ನಾಗಿ ಆದ ಮೇಲೆ ಎಂಬ ಮಾತುಗಳನ್ನು ಹೇಳುತ್ತ ಮಾಡುವ ಉತ್ತಮ ಕೆಲಸವನ್ನು ಮುಂದೂಡುತ್ತಲೇ ಹೋಗುತ್ತಾರೆ. ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಿ ನಂತರ ಅವಕಾಶಗಳೇ ಇಲ್ಲವೆಂದು ಅಳುವುದು ಹುಚ್ಚುತನವಲ್ಲದೇ ಮತ್ತೇನು? ತಲೆಯಲ್ಲಿ ಭ್ರಮೆ ಇಟ್ಟುಕೊಂಡು ಶುಭ ಗಳಿಗೆ ಬರುವವರೆಗೂ ಕೆಲಸವನ್ನು ಶುರು ಮಾಡಲು ಕಾಯುತ್ತಾರೆ. ಕೆಲವರಿಗೆ ಆ ಗಳಿಗೆ ಎಂದಿಗೂ ಬರುವುದೇ ಇಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ. ಹಾಗಾದರೆ ಉತ್ತಮ ಕೆಲಸಕ್ಕೆ  ಕೈಯಲ್ಲಿರುವ ಈ ಗಳಿಗೆಯನ್ನು ಉತ್ತಮ ಗಳಿಗೆಯನ್ನಾಗಿ ಮಾಡಿಕೊಳ್ಳುವುದು ಹೇಗೆ ನೋಡೋಣ ಬನ್ನಿ. ಕಾರ್ಯಪ್ರವೃತ್ತರಾಗಿ ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡಲು ಕಾಯುವಷ್ಟು ಸಮಯವಿಲ್ಲ. ಹಾಗೆ ನೋಡಿದರೆ ಸರಿಯಾದ ಸಮಯಕ್ಕಾಗಿ ಕಾಯುವುದು ಒಳ್ಳೆಯ ಗಳಿಗೆಗಾಗಿ ಕಾಯುತ್ತಲೇ ಇರುವುದು ಒಂದು ತರಹ ಕೆಲಸವನ್ನು ಮುಂದೂಡುವ ಕಾಯಿಲೆಯೇ ಸರಿ. ಏಕೆಂದರೆ ಜೀವನ ತುಂಬಾ ಚಿಕ್ಕದು. ಹಾಗಾಗಿ ಉತ್ತಮ ಕೆಲಸಗಳನ್ನು ಮಾಡಲು ಸೂಕ್ತ ಸಮಯ ಅಥವಾ ಪರಿಪೂರ್ಣ ಸಂದರ್ಭಕ್ಕಾಗಿ ಕಾಯಬೇಕಿಲ್ಲ. ಕಾಯುವಿಕೆ ಪ್ರಗತಿಯ ಶತ್ರು ಎಂಬುದನ್ನು ಮರೆಯಬಾರದು. ಜಗತ್ತಿನ ಪ್ರಸಿದ್ಧ ಚಿಂತಕರಾದ ಮಾರ್ಕ್ ಟ್ವೇನ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. ‘ಮುಂದೆ ಸಾಗಲು ಇರುವ ಏಕೈಕ ರಹಸ್ಯವೆಂದರೆ ಕಾರ್ಯಪ್ರವೃತ್ತರಾಗುವುದು.’ ನೇರವಾಗಿ ಹೇಳಬೇಕೆಂದರೆ ಸರಿಯಾದ ಕೆಲಸಕ್ಕೆ ವಿಶೇಷ ಸಮಯದ ಅಗತ್ಯವಿರುವುದಿಲ್ಲ.. ಈ ಕಾಯುವಿಕೆ ಎಂಬುದು ಆಲಸ್ಯತನಕ್ಕೆ ಮಣೆ ಹಾಕುತ್ತದೆ. ಮತ್ತು ಇದರಲ್ಲಿ ಭಯವೂ ಅಡಗಿರುತ್ತದೆ. ಭಯ ಮತ್ತು ಆಲಸ್ಯವನ್ನು ಮೀರಿ ಕಾರ್ಯಪ್ರವೃತ್ತರಾದರೆ ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯ. ಲಭ್ಯ ಸೌಲಭ್ಯ ಬಳಸಿ ‘ಹಾಸಿಗೆ ಇದ್ದಷ್ಟು ಕಾಲು ಚಾಚು.’ ಎಂಬ ಗಾದೆ ಮಾತು ನಮಗೆ ಲಭ್ಯವಿರುವ ಸಂಪನ್ಮೂಲಗಳಲ್ಲೇ ಬದುಕುವುದನ್ನು ಕಲಿಸುತ್ತದೆ. ಸರಿಯಾದ ಕೆಲಸಕ್ಕೆ ಸಂಪನ್ಮೂಲಗಳಿಗಿoತ ನಾ ಈ ಕೆಲಸ ಮಾಡಿಯೇ ತೀರಬೇಕೆಂಬ ಛಲ ಮುಖ್ಯ. ಛಲವಿದ್ದರೆ ಕೆಲಸ ತಾನೇ ಕೂಡಿ ಬರುತ್ತದೆ. ಅದ್ಭುತ ಸಾಧನೆ ಮಾಡಿದವರೆಲ್ಲ ಎಲ್ಲ ಸೌಲಭ್ಯಗಳು ಲಭ್ಯವಾದ ಮೇಲೆ ತಮ್ಮ ಸಾಧನೆ ಆರಂಭಿಸಬೇಕೆoದು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಸೂಕ್ತ ಸಮಯಕ್ಕಾಗಿ ಕಾಯಲಿಲ್ಲ. ಬದಲಾಗಿ ಇದ್ದ ಪರಿಸ್ಥಿತಿಯಲ್ಲೇ ಕೆಲಸ ಆರಂಭಿಸಿದರು. ಕಷ್ಟಗಳ ಹಾದಿಯಲ್ಲೂ ಹೆದರದೇ ಮುನ್ನುಗ್ಗಿದರು. ಈ ಹೊತ್ತನ್ನು ಉತ್ತಮವಾಗಿ ಬಳಸಿಕೊಳ್ಳುವವನಿಗೆ ಯಾವಾಗಲೂ ಶುಭ ಸಮಯವೆ ಇರುತ್ತದೆಂಬುದನ್ನು ನೆನಪಿನಲ್ಲಿಡಿ. ಯಾರಿಗಾಗಿಯೂ ಯಾವುದಕ್ಕಾಗಿಯೂ ಕಾಯದೇ ನೀವಂದುಕೊoಡ ಉತ್ತಮ ಕೆಲಸ ಆರಂಭಿಸಿ. ನಿಮ್ಮ ಬಳಿ ಇರಲಾರದ್ದನ್ನು ನೆನೆಯುತ್ತ ಬಳಿಯಿರುವುದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಳಿ ಇರುವ ಸೌಲಭ್ಯಗಳನ್ನು ಸಂಪನ್ಮೂಲವನ್ನು ಗೌರವಿಸಿ. ಈಗ ನಿಮ್ಮ ಬಳಿಯಿರುವ ಬುದ್ಧಿವಂತಿಕೆಯನ್ನು ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಕೆಲಸದ ಫಲಾಫಲಗಳು ಅವಲಂಬಿತವಾಗಿರುತ್ತವೆ ಹೊರತು ಎಂದೋ ಬರುವ ಯಾವುದೇ ಸಮಯವಲ್ಲ. ಹಾಗಾಗಿ ನಿಮ್ಮ ಬಳಿ ಇರುವುದನ್ನು ಗೌರವಿಸುವುದನ್ನು ಕಲಿಯಬೇಕು.  ಕೈಯಲ್ಲೇ ಇದೆ. ಬುದ್ಧ ಹೇಳುತ್ತಾನೆ ‘ನಿಮ್ಮಲ್ಲಿರುವ ದೊಡ್ಡ ಭ್ರಮೆ ಎಂದರೆ ನಿಮಗೆ ಇನ್ನೂ ಸಮಯವಿದೆ ಎಂದುಕೊಳ್ಳುವುದು.’ ನಾಳೆ ದಿನ ಏನೋ ಹೇಗೋ ಯಾರಿಗೂ ಗೊತ್ತಿಲ್ಲ. ಆದರೆ ಇಂದು ಮಾತ್ರ ನಮ್ಮ ಕೈಯಲ್ಲೇ ಇದೆ. ಇರುವ ಸಮಯವನ್ನು ಮುಂದೂಡುತ್ತ ಹಾಳು ಮಾಡಿ ಮುಂದೆ ಬರುವ ಸಮಯಕ್ಕಾಗಿ ಕಾಯುತ್ತ ಕೂರುವುದು ಶುದ್ಧ ಮೂರ್ಖತನ. ನಾವು ದೃಢ ನಿರ್ಧಾರದಿಂದ ಇಡುವ ಮೊದಲ ಹೆಜ್ಜೆ. ಮನಸ್ಸಿನಲ್ಲಿರುವ ದೃಢ ಸಂಕಲ್ಪ ಮತ್ತು ಮಾಡಿಯೇ ತೀರಬೇಕೆಂಬ ಛಲಗಳೇ ಒಳ್ಳೆಯ ಕೆಲಸಕ್ಕೆ ಆ ಸಮಯವನ್ನು ಸರಿಯಾದ ಸಮಯವಾಗಿ ಬದಲಾಯಿಸುತ್ತವೆ. ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ.’ ಎಂಬ ಮಾತಿದೆ. ಕಾಯುತ್ತ ಕುಳಿತರೆ ಕಾಲ ದಾಟಿ ಹೋಗಿಬಿಡುತ್ತದೆ. ಒಮ್ಮೆ ಕಳೆದ ಸಮಯ ಮತ್ತೆಂದಿಗೂ ಮರಳಿ ಬಾರದು. ಉತ್ತಮ ಸಮಯಕ್ಕಾಗಿ ಕಾಯುವ ಬದಲು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ಸೂಕ್ತ ಸಮಯವನ್ನು ಸೃಷ್ಟಿಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಹೇಳಿದಂತೆ, ‘ನಿಮ್ಮ ಭವಿಷ್ಯವು ನೀವು ಇಂದು ಏನು ಮಾಡುತ್ತೀರಿ ಎಂಬುದರ ಮೇಲೆ ಆಧಾರಿತವಾಗಿದೆ.’ ಬೇಡ ನೆಪ ಇಂದು ಬೇಡ ನಾಳೆಯಿಂದ ಶುರು ಮಾಡುತ್ತೇನೆ. ಸೋಮವಾರದಿಂದ ಆರಂಭಿಸುತ್ತೇನೆ. ಇನ್ನೇನು ಈ ತಿಂಗಳು ಮುಗಿಯುತ್ತಲೇ ಬಂತು ಮುಂದಿನ ತಿಂಗಳು ಖಂಡಿತ ಆರಂಭಿಸುತ್ತೇನೆ. ಇಂಥ ನೆಪಗಳು ಜೀವವನ್ನು ತಿನ್ನುತ್ತವೆ. ನೆಪದ ಬಲೆಗೆ ಒಮ್ಮೆ ಬಿದ್ದರೆ ಸಾಕು ಅಲ್ಲಿಂದ ಮರಳಿ ಎದ್ದು ಬರುವುದು ಅಷ್ಟು ಸುಲಭದ ಮಾತಲ್ಲ. ದಿನದಿಂದ ದಿನಕ್ಕೆ ನೆಪಗಳ ಸುರುಳಿ ಹೆಚ್ಚುತ್ತಲೇ ಹೋಗುತ್ತದೆ. ನೆಪಗಳ ಗೂಡಿನಲ್ಲಿ ಉಳಿಯುವ ಚಟ ಒಮ್ಮೆ ಅಂಟಿಕೊoಡರೆ ಅದು ಅಷ್ಟು ಸರಳ ಬಿಟ್ಟು ಹೋಗುವುದಿಲ್ಲ. ಹಾಗಾಗಿ ಯಾವುದೇ ಹೊಸ ಕೆಲಸ  ಆರಂಭಿಸಲು ಇಂದಿಗಿಂತಶ್ರೇಷ್ಢವಾದ ದಿನ ಮತ್ತೊಂದಿಲ್ಲ. ಯಾವುದೇ ಹೊಸತನ್ನು ಆರಂಭಿಸಿದಾಗ ಆರಂಭದಲ್ಲಿ ಅಡೆತಡೆಗಳು ಬರುವುದು ಸಾಮಾನ್ಯ. ಅಡೆತಡೆಗಳಿಗೆ ನೆಪಗಳನ್ನು ಹೇಳುತ್ತ ಕುಳಿತುಕೊಳ್ಳಬಾರದು. ಉದ್ದೇಶ ಚೆನ್ನಾಗಿದ್ದರೆ ಸಾಕು ಸಮಯ ತನ್ನಷ್ಟಕ್ಕೆ ತಾನೇ ನಮ್ಮ ಜೊತೆ ನಡೆಯುತ್ತದೆ. ಉನ್ನತ ಧ್ಯೇಯದೊಂದಿಗೆ ಉತ್ತಮ ಉದ್ದೇಶದೊಂದಿಗೆ ಆರಂಭಿಸಿದ ಕೆಲಸಕ್ಕೆ ಪರಿಸ್ಥಿತಿಗಳು ತಾವಾಗಿಯೇ ಪೂರಕವಾಗಿ ಬದಲಾಗತೊಡಗುತ್ತವೆ. ಎದೆಗಾರಿಕೆ ‘ಆಳಾಗಿ ದುಡಿದವನೇ ಅರಸನಾಗುತ್ತಾನೆ.’ ಎನ್ನುವಂತೆ ಅಂದುಕೊoಡ ಕೆಲಸವನ್ನು ತಕ್ಷಣ ಆರಂಭಿಸಿದವನಿಗೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ.. ತಕ್ಷಣ ಆರಂಭಿಸುವವನೇ ಕೊನೆಗೆ ವಿಜಯಿಯಾಗುತ್ತಾನೆ. ‘ಇಂದು ಮಾಡುವ ಕೆಲಸ ಈಗಲೇ ಮಾಡು ಎನ್ನುವ ದಾಸರ ವಾಣಿ ಇಲ್ಲಿ ಅತ್ಯಂತ ಪ್ರಸ್ತುತ. ಕಾಲಾಯ ತಸ್ಮೈ ನಮಃ ಎಂಬ ನುಡಿ ಕಾಲದ ಮಹತ್ವವನ್ನು ಹೇಳುತ್ತದೆ. ಕಾಲ ಎಲ್ಲಕ್ಕಿಂತಲೂ ಶಕ್ತಿಶಾಲಿ.  ಕಾಲ ಮಿಂಚಿದರೆ ಕಣ್ಣೀರು ಗ್ಯಾರಂಟಿ. ಎನ್ನುವಂತೆ ಶುಭ ಮುಹೂರ್ತ ಒಳ್ಳೆಯ ಸಮಯವೆಂದು ಕಾಯುತ್ತ ಕುಳಿತರೆ ಪಶ್ಚಾತ್ತಾಪದ ಹೊರತು ಮತ್ತೇನೂ ಸಿಗುವುದಿಲ್ಲ. ಪರಿಸ್ಥಿತಿ ಹೇಗೆ ಇರಲಿ ಏನೇ ಬರಲಿ ಎದೆಗಾರಿಕೆಯಿಂದ ಎದುರಿಸುತ್ತ ಮುಂದೆ ಹೆಜ್ಜೆ ಹಾಕಿದರೆ ಸರಿಯಾದ ಗುರಿಗೆ ಸರಿಯಾದ ಸಮಯ ತಾನೇ ಜೊತೆಯಾಗುತ್ತದೆ. ಗೆಲುವಿನ ಅರಮನೆಗೆ ಕರೆದೊಯ್ಯುತ್ತದೆ. ಜಯಶ್ರೀ.ಜೆ. ಅಬ್ಬಿಗೇರಿ

“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು

ಕೃಷಿ ಸಂಗಾತಿ ಗೊರೂರು ಅನಂತರಾಜು “ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಪಠ್ಯ ಬೋಧನೆ, ಜನಪದ ಸಂಶೋಧನೆ, ಕೃಷಿಕಾಯಕ  ಈ ಮೂರೂ ಕ್ಷೇತ್ರಗಳ ಪ್ರಗತಿಪರ ಕೃಷಿಕ ಡಾ. ಬಿ.ಡಿ.ಕುಮಾರ್  ಅರಸೀಕೆರೆಯ ಜಗದ್ಗುರು ಶ್ರೀ ಕೋಡಿಮಠ ಪದವಿಪೂರ್ವ ಕಾಲೇಜಿನಲ್ಲಿ ೧೯೯೧ರಿಂದ ಕನ್ನಡ ಉಪನ್ಯಾಸಕರು. ಇವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಇತ್ತೀಚಿಗೆ ಬಿಡುಗಡೆಯಾಗಿದೆ. ಲೇಖನ ಕೊಟ್ಟಿದ್ದ ನಾನು  ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮೊನ್ನೆ ಕುಮಾರ್ ಹಾಸನಕ್ಕೆ ಬಂದು ಪೋನ್ ಮಾಡಿದರು. ಗೌರವ ಪ್ರತಿ ನೀಡಿದರು. ಬರೆಯಿರಿ ಎಂದು ಪ್ರೀತಿಯಿಂದ ಹೇಳಿದರು.  ಓದುತ್ತಾ ಹೋದ ನನಗೆ ಇಷ್ಟವಾಗಿದ್ದು ಇವರ ಬಾಲ್ಯದ ದಿನಗಳು.  ‘ಬಣ್ಣದ ಗುಬ್ಯಾರು ಮಳೆರಾಜ-ಅವರು ಮಣ್ಣಾಗಿ ಹೋದಾರು ಮಳೆರಾಜ.. ಮನದ ನೆನಪಿನ್ನು ಮಾಸಿಲ್ಲ. ನನ್ನ ಭೋಧನಾ ವೃತ್ತಿ ಬದುಕಿನ ಮೊದಲ ಭೋದನೆ ಈ ಜನಪದ ಗೀತೆಯಾಗಿತ್ತು. ಮಳೆಯ ಬೆಳೆಯ ಇಳೆಯ ಪೂರಕ ಸಂಬAಧ,ಉಳಿವಿದ್ದರೆ ಹೋರಾಟ ಕೂಳಿದ್ದರೆ ಕಾಳಗ ಮೇವಿದ್ದರೆ ಮೇಳ ಅನ್ನವಿದ್ದರೆ ಪ್ರಾಣ, ಪ್ರಾಣವಿದ್ದರೆ ಪರಾಕ್ರಮ ಈ ವೈವಿಧ್ಯ ವಿಷಯ ಲೇಪನದೊಂದಿಗೆ ಅತೀವೃಷ್ಟಿ  ಅನಾವೃಷ್ಟಿಯ ರಣಭೀಕರ ಕಠೋರತೆ ಹೇಳುತ್ತಾ ಒಕ್ಕಲ ಬಿಕ್ಕಲು ಆರಂಭವಾಗಿ ಬದುಕು ಮೂರಾಬಟ್ಟೆಯಾಗುತ್ತದೆ. ನಿಸರ್ಗದೆದುರು ಮಾನವನÀ ಆಟ  ನಡೆಯುವುದಿಲ್ಲ ಎಂಬ ಕರಾಳ ಸತ್ಯ ಈ ಗೀತೆಯಲ್ಲಿದೆ..ಲೇಖಕರು ಕನ್ನಡ ಉಪನ್ಯಾಸಕರಾಗಿ ಪ್ರಥಮ ಪಿಯುಸಿಗೆ ಈ ಪಾಠ ಮಾಡುವಾಗ  ಅವರಿಗೆ ಅರಿವಿಲ್ಲ. ತನ್ನ ಬದುಕು  ಇದೇ ಜನಪದ ಹಾಡಿನಂತೆ ಆಗುತ್ತದೆ ಎಂದು.  ನಿಜ, ಯಾರು ತಾನೇ ನಮ್ಮ ಭವಿಷ್ಯದ ಬದುಕು ಹೀಗೆ ಇರುವುದೆಂದು ಊಹಿಸಲು ಸಾಧ್ಯ. ಆದರೆ ನಾವು  ಸನ್ಮಾರ್ಗದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಕನಸು ಕಾಣುತ್ತೇವೆಯೋ ಅದು ಕೆಲವರಿಗೆ ಸಿಗುತ್ತದೆ. ಇದಕ್ಕೆ  ಕುಮಾರ್ ಉದಾಹರಣೆ ಅಷ್ಟೇ. ಪಠ್ಯ ಬೋಧನೆಯೊಂದಿಗೆ ತಮ್ಮ ಜೀವನದ ಅನುಭವ ಪಾಠವನ್ನು ಅರಗಿಸಿಕೊಂಡು ಒರ್ವ ಪ್ರಗತಿಪರ ರೈತನಾಗಿ ಹೊರಹೊಮ್ಮಿರುವುದು ಮಾದರಿ ಎನಿಸುತ್ತದೆ.  ಜೀವಿತದ ಹೋರಾಟ ಬದುಕಿನಲ್ಲಿ   ಹಲವು ಕಷ್ಟನಷ್ಟ ಎದುರಿಸಿ ಗೆದ್ದವರು ಈ ಬಿ.ಡಿ.ಕುಮಾರ್. ಕೃತಿಯ ಸಂಪಾದಕರು ಡಾ. ಹರೀಶ್ ಕುಮಾರ್ ಬರೆದಂತೆ ಇವರು  ವಿದ್ಯಾರ್ಥಿಗಳಿಗೆ ಕೇವಲ ಪಾಠ ಹೇಳಿಕೊಟ್ಟ ಮೇಷ್ಟುç ಮಾತ್ರವಲ್ಲ ಬದುಕಿನ ದಾರಿ ಕಂಡುಕೊAಡ  ಮಾರ್ಗದರ್ಶಿ. ಇವರ ವ್ಯಕ್ತಿತ್ವ ಬಹುಮುಖಿ ಕ್ಯಾನ್ವಾಸ್. ಜಮೀನಲ್ಲಿ ನಿಂತರೆ ಮಣ್ಣಿನ ವಾಸನೆಯ ಅಪ್ಪಟ ಕೃಷಿಕ. ತಮಟೆ ತಂಬೂರಿ ಹಿಡಿದರೆ ಜನಪದ ಕಲಾವಿದ. ಪುಸ್ತಕ ಹಿಡಿದರೆ ಓದಿನ ಸಂತ.  ಸಾವಿರ ಪುಟಗಳ ಕೃತಿಯಲ್ಲಿ ನನಗೆ ಇಷ್ಟವಾಗಿದ್ದು ಇವರ ನೇರ ನುಡಿಯ ಬಾಲ್ಯದ ಘಟನೆಗಳು.ದಿನಾಂಕ ೨೧-೬-೧೯೬೬ರ ಮಧ್ಯಾಹ್ನ ೪ ಗಂಟೆಯಲ್ಲಿ ದ್ಯಾವೇಗೌಡ ದೇವಮ್ಮ ಇವರ ದ್ವಿತೀಯ ಪುತ್ರನಾಗಿ ಈ ಭೂಮಿಗೆ ಬಂದನAತೆ. ನನ್ನ ಅಜ್ಜಿ ತಾಯಮ್ಮನ ತಮ್ಮ ಕೃಷ್ಣಪ್ಪ ಕಲ್ಯಾಡಿಕೊಪ್ಪಲಿನ ಬ್ರಾಹ್ಮಣ ಗೆಳೆಯ ಶಿವಪ್ರಕಾಶ್ ಇದೇ ದಿನ ಬೆಳಿಗ್ಗೆ ಹುಟ್ಟಿದರಂತೆ. ಇವನನ್ನು ನೋಡಿಕೊಂಡ ಕೃಷ್ಣಪ್ಪ ಬಸವಾಘಟ್ಟಕ್ಕೆ ಬಂದು ನನ್ನನ್ನು ನೋಡಿದರÀಂತೆ. ಈ ವಿಷಯದಿಂದ ನಾನು ಜನಿಸಿದ ನಿಜ ದಿನಾಂಕ ಗೊತ್ತಾಯಿತು..ಕುಮಾರ್ ಒಬ್ಬರೇ ಅಲ್ಲಾ ಎಲ್ಲಾ ಅನಕ್ಷರಸ್ಥ ನಮ್ಮ ತಂದೆತಾಯಿಗಳದು ಇದೇ ಸ್ಥಿತಿ.   ಐದು ವರ್ಷಗಳ ನಂತರ ಶಾಲೆಗೆ ಸೇರಿಸುವಾಗ ಹುಟ್ಟಿದ ದಿನಾಂಕ ಸರಿಯಾಗಿ ನೆನಪಿಲ್ಲದೇ ಒಂದು ಅಂದಾಜಿನ ಮೇಲೆ ಶಾಲೆಗೆ ಸೇರಿಸುತ್ತಿದ್ದ ಆ ದಿನಗಳು.   ಶಾಲೆಗೆ ಬೇಗನೇ ಸೇರಿಸಲು ಕೆಲವು ಪೋಷಕರು ಒಂದು ವರ್ಷ ಫ್ಲಸ್ ಮಾಡಿ ಬರೆಸಿ ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದುವಾಗ ಅದು ಮೈನಸ್ ಆಗಿದ್ದನ್ನು ನೊಂದುಕೊAಡು  ಹೇಳಿದ್ದನ್ನು ಕೇಳಿದ್ದೇನೆ. ಹಳ್ಳಿಯ ಹಂಚಿನ ಮನೆ ತೊಲೆಗಳಲ್ಲಿ ಮಕ್ಕಳು ಹುಟ್ಟಿದ ದಿನಾಂಕ ಬರೆದಿದ್ದನ್ನು  ನೋಡಿದ್ದೆನೆ.ಈ ಸಂದರ್ಭದಲ್ಲಿ ಒಂದು ನೆನಪು ನನ್ನನ್ನು ಮತ್ತೆ ಮತ್ತೆ ಕಾಡಿದೆ. ಅದೇನೆಂದರೆ ಅಷ್ಟೊತ್ತಿಗಾಗಲೇ ಹೊಲದಲ್ಲಿ ಹೊಸಮನೆ ಕಟ್ಟುತ್ತಿದ್ದೆವು. ಹಳೆ ಮನೆಗೂ ಹೊಸ ಮನೆಗೂ ತಿರುಗಾಟ ಸಾಗುತ್ತಿತ್ತು. ಆಗ ತಾನೇ ನೀರುಗುಂದ ಹೊಲಕ್ಕೆ ಅಲೆಮನೆ ಕಟ್ಟಿದ್ದರಂತೆ. ಅಲ್ಲಿ ಗಡಿಗೆಗಳಿಗೆ ಗುಳ ತುಂಬಿಸಿ ಮನೆಯಲ್ಲಿ ತಂದಿಟ್ಟಿದ್ದರು. ನಾನು ಅಂಕೆಯಿಲ್ಲದೆ ಅದನ್ನು ಕುಡಿದು ಹೊಟ್ಟೆಯಲ್ಲಿ ಲಾಡಿ ಉಳವಾಗಿತ್ತು. ಅದೊಂದು ಸುಂದರವಾದ ದಿನ ಆ ಹುಳ ಈಚೆಗೆ ಬರಲು ಆಗದೇ ಒಳಗೆ ಹೋಗಲು ಆಗದ ಅದನ್ನು ನೇತಾಡಿಸಿಕೊಂಡು ಊರಲೆಲ್ಲಾ ತಿರುಗಾಡಿದ್ದೆ. ನನ್ನ ಪಾಲಿಗೆ ಅದನ್ನು ಕಾಳಿಂಗ ಸರ್ಪವೆಂದೇ ಬಾವಿಸಿ ಭಯಭೀತರಾಗಿ ಊರ ತುಂಬಾ ಓಡಾಡಿದ್ದೆ… ಕುಮಾರರ ಈ ನೆನಪು ನಗು ತರಿಸಿದರೂ ಇಂತಹ ದೃಶ್ಯಗಳನ್ನು ಕಂಡಿರುವೆ.      ಕೃತಿಯ ಕವಲು-೧À ಅಂತರAಗ ವಿಭಾಗದಲ್ಲಿ ೩೭ ಲೇಖಕರು ಇವರ ವ್ಯಕ್ತಿ ಚಿತ್ರಣವನ್ನು ತಮ್ಮ ಸ್ನೇಹನೆಲೆಯಲ್ಲಿ ಬರೆದಿದ್ದಾರೆ. ಕುಮಾರ್ ಪದವಿಪೂರ್ವ ಐಚ್ಛಿಕ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು. ಕೆ.ಪಿ.ಎಸ್.ಸಿ ಸ್ಫರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ ತಯಾಸಿದ್ದಾರೆ. ರಾಜ್ಯ ಸಬ್ ಇನ್ಸ್ಸ್ಪೆಕ್ಟರ್ ಪರೀಕ್ಷೆÀ ಮೌಲ್ಯಮಾಪಕರು. ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷರು. ದೆಹಲಿಯಲ್ಲಿ ೧೯೯೬ರಲ್ಲಿ ರಾಷ್ಟಿçÃಯ ಜಾನಪದ ಹಬ್ಬದಲ್ಲಿ  ತಮಟೆ ಕಲಾವಿದರಾಗಿ ಭಾಗವಹಿಸಿದ್ದಾರೆ.   ಇವರ ತೋಟದ ಮನೆಯಲ್ಲಿ ಹತ್ತು ಸಾವಿರ ಪುಸ್ತಕಗಳ ಸಂಗ್ರಹ ಇದೆ. ಅಮೇರಿಕದ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ತರಹ ಇವರದು ನಿಸರ್ಗಪ್ರೇಮ ಜೀವನ.  ಬಾಗೇಶಪುರದ ಬಳಿ  ೧೨ ಎಕರೆ ಭೂಮಿ ಖರೀದಿಸಿ ಗುಡ್ಡದಲ್ಲೊಂದು ಮನೆಯ ಮಾಡಿ ಪಂಚೆ ಕಟ್ಟಿ ಕೃಷಿ ಕಾಯಕ ಮಾಡಿದವರು. ಅದೀಗ ಜಮೀನಾಗಿ ಉಳಿಯದೇ ಅಲ್ಲಿ ನೂರಾರು ಜಾತಿಯ ಹಣ್ಣಿನ ಮರಗಳು ಬೆಳೆದು, ಪ್ರಾಣಿ ಪಕ್ಷಿಗಳ ನೆಲೆವೀಡಾಗಿ ಕಾಡುಕೃಷಿಗೆ ಮಾದರಿಯಾಗಿದೆ. ಹಸು ಕುರಿ ಕೋಳಿ ಸಾಕಣಿಕೆಯಿಂದ  ಕೃಷಿ ಬದುಕಿಗೆ ಮತ್ತೊಂದು ದಾರಿ ತೋರಿಸಿದ್ದಾರೆ. ಅಕ್ಷರ ಸಂಸ್ಕೃತಿ ಮಣ್ಣಿನ ಸಂಸ್ಕೃತಿ ನಡುವೆ ಸಂತನಾಗಿದ್ದಾರೆ. ಇದೊಂದು ಅಭಿನಂದನಾ ಗ್ರಂಥ ಮತ್ತು  ನಾಡಿನ ಅನೇಕ ಜನಪದ ವಿದ್ವಾಂಸರು ಲೇಖಕರ ವಿಶಿಷ್ಟ ಬರಹಗಳ ಸಂಗ್ರಹ.  ಕವಲು-೨ ಜನಪದ ಪಲುಕು ಜನಪದ ಸಾಹಿತ್ಯ ವಿಶೇಷವಾಗಿದೆ.  ಡಾ.ಕಾಳೇಗೌಡ ನಾಗವಾರರ  ಲೇಖನವು ಗಮನಾರ್ಹ. ಕರ್ನಾಟಕವು ವಿಸ್ತಾರ ಭೂಪ್ರದೇಶವಾಗಿ ನಾನಾ ಬಗೆಯ ವೈವಿಧ್ಯಗಳಿಂದ ಕೂಡಿದೆ. ಒಂದು ಕಡೆ ಅರಬ್ಬಿಸಮುದ್ರ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗ  ಆವರಿಸಿದ ಮಲೆನಾಡು, ಪೂರ್ವ ಪಶ್ಚಿಮ ಘಟ್ಟಗಳ ನಡುವಣ ಉತ್ತರ ದಕ್ಷಿಣ ಕರ್ನಾಟಕಗಳ ಬಗೆಬಗೆಯ ಪದ್ಧತಿ ಅನುಸರಿಸುವ ಜನರ ಗುಂಪು ಒಳಗೊಂಡಿದೆ. ಈ ನಡುವೆ ಕೊಡವ ತುಳು ಕೊಂಕಣಿ  ಭಾಷೆಗಳ ಜಾನಪದ ಸಂಪತ್ತು  ಅರಳಿದೆ. ಈ ಎಲ್ಲಾ  ಜನಪದ ಸಾಹಿತ್ಯವು ಪೂರ್ಣ ಸಂಗ್ರಹವಾಗಬೇಕೆAದು ಆಶಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆದು ಗಾಣದೆತ್ತಿನಂತೆ ನಿರಂತರವಾಗಿ ದುಡಿಯುತ್ತಲೇ ಬಂದು ಉದ್ದಕ್ಕೂ ಅಕ್ಷರ ಜ್ಞಾನದಿಂದ ವಂಚಿತರಾಗಿರುವ ನಮ್ಮ ಜನಪದ ಕಲಾವಿದರು ವಾಸ್ತವವಾಗಿ ಗಂಧರ್ವಲೋಕದ ಗೆಣೆಕಾರರು ಎಂದಿದ್ದಾರೆ.  ಡಾ.ಹಿ.ಶಿ.ರಾಮಚಂದ್ರೇಗೌಡರು ಬಿ.ಡಿ.ಕುಮಾರ್ ಅವರಿಗೆ ಗೈಡ್ ಆಗಿದ್ದವರು. ಇವರ ಮಾರ್ಗದರ್ಶನದಲ್ಲಿ ಕುಮಾರ್ ಡಾಕ್ಟರೇಟ್ ಮಾಡಿದ್ದಾರೆ. ಗೌಡರಿಗೆ ತಮ್ಮ ಶಿಷ್ಯನ ಸಾಧನೆಗೆ ಪ್ರೀತಿ ಇದೆ. ವೈಫಲ್ಯದ ಬಗ್ಗೆ ಬೇಸರವೂ ಇದೆ. ‘ನಾನು ಪ್ರತಿಭೆ ಮತ್ತು ಕ್ರಿಯಾಶೀಲತೆ  ಕಂಡಲ್ಲಿ ಪುಳಕಗೊಳುತ್ತೇನೆ, ಸಂಭ್ರಮಿಸುತ್ತೇನೆ. ಇಂಥ ದ್ವಿಜತ್ವವನ್ನು ಹೊಂದಿದ ವ್ಯಕ್ತಿ ಡಾ. ಬಿ.ಡಿ.ಕುಮಾರ್. ಅವರ ಬಗ್ಗೆ ನನಗೆ ಪ್ರೀತಿಯೂ ಇದೆ. ಸಿಟ್ಟು ಇದೆ. ಪ್ರೀತಿ ಯಾಕೆಂದರೆ ಆ ಎರಡನ್ನೂ ಒಳಗೊಂಡ ವ್ಯಕ್ತಿ. ಸಿಟ್ಟು ಯಾಕೆಂದರೆ ಅವನ್ನು ಫಲಪ್ರದವಾಗಿ ಬಳಸಿಕೊಂಡಿಲ್ಲ ಎಂದು. ಅವರ ಪ್ರತಿಭೆ ಹೊರಚೆಲ್ಲುವ ಯಾವ ಉತ್ತಮ ಕೆಲಸ ಅವರು ಮಾಡಿದಂತೆ ನನಗೆ ಕಂಡಿಲ್ಲ. ನನ್ನ ಮಾರ್ಗದರ್ಶನ ದಲ್ಲಿ ಅವರು ಪಿಹೆಚ್‌ಡಿ ಪಡೆದರು. ವಿಷಯ: ಹಾಸನ ಜಿಲ್ಲೆಯ ಐತಿಹ್ಯಗಳನ್ನು ಕುರಿತು. ಪಿಹೆಚ್‌ಡಿಯ ನಂತರ ಆ ವಿಷಯದಲ್ಲಿ ತುಂಬ ಕೆಲಸ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಆವರ ಪ್ರತಿಭೆಯನ್ನು ದುಡಿಸಿಕೊಳ್ಳಲಿಲ್ಲ..    ಇದೇ ಕೃತಿಯನ್ನು ಪರಿಚಯಿಸುವ ನನ್ನ ಲೇಖನವು (ಗೊರೂರು ಅನಂತರಾಜು)  ಕವಲು ೨ರಲ್ಲಿದೆ. ಜಾನಪದವು ವಿಶಾಲವೂ ಮತ್ತು ವ್ಯಾಪಕವೂ ಆಗಿದ್ದು ಜಗತ್ತನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ಪ್ರಾಚೀನ ಅರ್ವಾಚೀನಗಳೆರಡೂ ಸಂಧಿಸಿ ಪರಸ್ಪರ ಕೈಕುಲುಕುತ್ತವೆ. ಈ ಜಾನಪದಕ್ಕೆ ಆದಿ ಅಂತ್ಯಗಳಿಲ್ಲ ಸಾವಿಲ್ಲ. ಆಧುನಿಕ ಮಾನವನಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಾ ಬೀಜದಲ್ಲಿ ವೃಕ್ಷವಡಗಿರುವಂತೆ ಕಲೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಜಾನಪದ ಚೈತನ್ಯ ಸುಪ್ತವಾಗಿರುತ್ತದೆ. ಕೃತಿಯಲ್ಲಿ ಲೇಖಕರು ತಮ್ಮ ಭೌಗೋಳಿಕ ನೆಲೆಯಲ್ಲಿ ಐತಿಹ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅವುಗಳ ಸಾಂಸ್ಕೃತಿಕ ಒಳತೋಟಿಗಳನ್ನು ಒಳನುಗ್ಗಿ ನೋಡಲು ಪ್ರಯತ್ನ ಮಾಡಿದ್ದಾರೆ. ಬಹುಮುಖಿ ದೃಷ್ಟಿಯಿಂದ ಅವುಗಳ ಆಶಯ ಕಾರ್ಯತತ್ಪರತೆಯನ್ನು ಪ್ರಾತ್ಯಕ್ಷೀಕರಿಸಲು ಪ್ರಯತ್ನಿಸಿದ್ದಾರೆ. ಜನಪದದಲ್ಲಿ ಜಾತಿ ಇಲ್ಲ ಅರ್ಥಾತ್ ತಾರತಮ್ಯ ಇಲ್ಲ. ಅಲ್ಲಿರುವುದು ಸಹಜ ಮಾನವೀಯ ಬದುಕು.. ಇದು  ಡಾ. ಹಿ.ಶಿ.ರಾಮಚಂದ್ರೇಗೌಡರ ಮುನ್ನುಡಿ ಬರಹ. –ಗೊರೂರು ಅನಂತರಾಜು, ಹಾಸನ.ಮೊ:೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ. 

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು Read Post »

You cannot copy content of this page

Scroll to Top