ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ”

ಕಾವ್ಯ ಸಂಗಾತಿ ನಿಂಗಮ್ಮ ಭಾವಿಕಟ್ಟಿ “ವಿಚಿತ್ರ ಅಮ್ಮ” ತಿಂಗಳೆಚ್ಚರವಿದ್ದುಬೆಳದಿಂಗಳ ಸ್ನಾನಮಾಡುವ ಅಮ್ಮ ನಕ್ಷತ್ರಗಳೊಂದಿಗೆಆಡುವ ಅಮ್ಮ ಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ  ಒಬ್ಬಳೇ ನಗುತಯಾವುದೋ ಮಂತ್ರಗುನುಗುಣಿಸುತ ಓಡಾಡುವ ಎಲ್ಲಾ ಕಾಯಿಲೆಗೂಮದ್ದು ಹೇಳುವ ಅಮ್ಮಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ ಎಲ್ಲ ಮಕ್ಕಳನ್ನುಮುಟ್ಟಿ ನಗಿಸುವಪಕ್ಕದ ಮನೆ ಗಿಡಕುನೀರು ಹನಿಸುವ ಅಮ್ಮವ್ಯಕ್ತಿ ವಸ್ತುಗಳ ಭೇದವರಿಯದೆ ಧನ್ಯವಾದ ಹೇಳುವಅಮ್ಮ ಒಮ್ಮೊಮ್ಮೆಹುಚ್ಚಿ ಎನಿಸಿ ಬಿಡುತ್ತಾಳೆ  ಹಸಿವೆಯ ಹಾಸಿಹೊದ್ದು ಎದ್ದು ಬಂದ ಆಕೆಗೆಲ್ಲರ ಹಸಿವೆಯ ಸದ್ದು ಗೊತ್ತು ಮುತ್ತಿನೊಂದಿಗೆ ಪ್ರೀತಿಬಡಿಸುವ  ವಿಚಿತ್ರ ಅಮ್ಮ ಅಲ್ಲ ಆಕೆ ಹುಚ್ಚಿ ಅಲ್ಲಮಕ್ಕಳು ನೆರೆಯವರಿಗೆಲ್ಲ ಪ್ರೀತಿ ಸಹಾಯ ಕರುಣೆಗಳಹುಚ್ಚು ಹಿಡಿಸಿದವಳು ಹೊಳೆಯುವ ಮೊದಲೇ ಹೋಗಿ ಹೊಳೆಯತೊಡಗಿದಳು ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ” Read Post »

ನಿಮ್ಮೊಂದಿಗೆ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ

ಅನುವಾದ ಸಂಗಾತಿ ೧೯೩೦೦ ರ ಹೆಣ ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ ಬ್ಯಾಂಕಿನ ಹೊಸ್ತಿಲಿಗೆಇವತ್ತು ಯಾವ ಗ್ರಾಹಕನೂ ಬಂದಿಲ್ಲಬAದಿರುವುದು ಒಂದು ಪ್ರಶ್ನೆಅವನ ಕೈಯಲ್ಲಿ ಪಾಸ್‌ಬುಕ್ ಇಲ್ಲಒಂದು ಅಸ್ಥಿಪಂಜರವಿದೆಅವನು ಅರ್ಜಿ ತುಂಬಲಾರಸಹಿ ಹಾಕಲಾರಆದರೆ ಅವನು ಇತಿಹಾಸದ ಪುಟಗಳಲ್ಲಿಮೂಳೆಗಳಿಂದಲೇ ಒಂದು ಹೆಗ್ಗುರುತು ಮಾಡಿದ್ದಾನೆ ಸಮಾಧಿಯ ಮಣ್ಣು ಇನ್ನು ಹಸಿಯಾಗಿಯೇ ಇದೆತಂಗಿಯ ಕೊನೆಯ ಉಸಿರುನೆಲದಲ್ಲಿ ಸಿಲುಕಿಕೊಂಡಿವೆಯೇನೋ ಎಂಬಂತ್ತಿದೆಆ ಅಣ್ಣ ತನ್ನದೇ ರಕ್ತದ ಮೂಳೆಗಳನ್ನು ಅಗೆಯುತ್ತವ್ಯವಸ್ಥೆಯ ಬಾಗಿಲು ತಟ್ಟುತ್ತಿದ್ದಾನೆ “ಪುರಾವೆ ತನ್ನಿ; ಬದುಕಿರುವಳೋ ಅಥವಾ ಸತ್ತಿರುವಳೋ”ಕಾಗದಗಳ ಕಾಡನಲ್ಲಿ ಕುಳಿತಬಾಯಲ್ಲಿ ನಿಯಮಗಳ ಮೊಳೆ ಹೊಡೆದ ಅಧಿಕಾರಿಗಳು ಹೇಳಿದರು ಹೇಳುತ್ತಾರೆಇದು ವ್ಯವಸ್ಥೆ, ಇದು ನಿಯಮ,ಇದು ಪ್ರಕ್ರಿಯೆ, ಇದು ಕಾನೂನು…ಆದರೆ ಇವತ್ತುಒಬ್ಬ ಬಡ ಆದಿವಾಸಿನಿಮ್ಮ ನಿಯಮಗಳನ್ನುತನ್ನ ತಂಗಿಯ ಮೂಳೆಗಳಲ್ಲಿ ಸುತ್ತಿನಿಮ್ಮ ಮುಂದೆ ಎಸೆದಿದ್ದಾನೆ ನೀವು ಹೇಳುತ್ತೀರಿ“ಖಾತೆದಾರ ಬಂದರೆ ಮಾತ್ರ ಹಣ ಸಿಗುವುದು”ಅವನು ಕೇಳುತ್ತಾನೆ“ಸತ್ತ ನಂತರ ಯಾರು ಬರುತ್ತಾರೆ?”ನಿಮ್ಮ ಬಳಿ ಯಾವ ಉತ್ತರವೂ ಇಲ್ಲಬರೀ ಮೌನಅದೂ ಸಹ ಎಸಿ ಕೋಣೆಯಲ್ಲಿ ಕುಳಿತ ಮೌನ ಎರಡು ತಿಂಗಳ ಕಾಲಅವನು ನಿಮ್ಮ ಬಾಗಿಲಿಗೆ ಮನುಷ್ಯನಾಗಿ ಬರುತ್ತಿದ್ದನೀವು ಅವನನ್ನು ಅಟ್ಟಿಸಿದಿರಿಇವತ್ತು ಅವನು ಅಸ್ಥಿಪಂಜರವಾಗಿ ಬಂದಿದ್ದಾನೆನೀವು ಬೆಚ್ಚಿಬಿದ್ದಿದ್ದೀರಿ ಕೇಳಿಇದು ನೀವೇ ಹುಟ್ಟಿಸಿದ ಭಯಈ ಅಸ್ಥಿಪಂಜರಕೇವಲ ಆ ತಂಗಿಯದ್ದಲ್ಲಎಂದೋ ಸತ್ತ ನಿಮ್ಮ ಮನುಷ್ಯತ್ವದ್ದು ಊರಿನವರು ಹುಚ್ಚ ಎಂದರುಬ್ಯಾಂಕಿನವರು ನಿಯಮ ಹೇಳಿದರುಪೊಲೀಸರು ಪ್ರಕರಣ ದಾಖಲಿಸಿದರುಆದರೆ ಯಾರಿಗೂ ಕಾಣಲಿಲ್ಲಇವನೇ ಎಲ್ಲರಿಗಿಂತ ಬುದ್ಧಿವಂತನೆಂದುಏಕೆಂದರೆ ಇವನು ಅರ್ಥಮಾಡಿಕೊಂಡಿದ್ದಾನೆಈ ದೇಶದಲ್ಲಿಬದುಕಿರುವ ಮನುಷ್ಯನಿಗೆ ಯಾವ ಅಸ್ತಿತ್ವವೂ ಇಲ್ಲಆದರೆ ಸತ್ತ ದೇಹಕ್ಕೆ ಪೋಸ್ಟ್ಮರ‍್ಟಂ ಮಾಡಲಾಗುವುದುಇಲ್ಲಿ ಮನುಷ್ಯರಿಗಿಂತ ಹೆಣಗಳೇ ಅಧಿಕೃತ ದಾಖಲೆಗಳು ಇವನು ಕೇವಲ ಒಬ್ಬ ಅಣ್ಣನಲ್ಲಇಡೀ ಸಮಾಜದ ಹರಿದಹೋದ ನರನಾಡಿಇದರಿಂದ ರಕ್ತವಲ್ಲವ್ಯವಸ್ಥೆಯ ಕೊಳೆತ ವಾಸನೆ ಸೋರುತ್ತಿದೆಸಮಾದಿಯಿಂದ ತೆಗೆದ ಅಸ್ಥಿಪಂಜರಈಗ ಕೇವಲ ತಂಗಿಯದ್ದಾಗಿ ಉಳಿದಿಲ್ಲಅದು ಈ ಪ್ರಜಾಪ್ರಭುತ್ವದಎಂದೋ ಮುರಿದುಹೋದ ಬೆನ್ನೆಲುಬು ಇವತ್ತು ಅವನು ನಿಂತಿದ್ದಾನೆಜನರ ನಡುವೆಹಾಸ್ಯ ಮತ್ತು ಭಯದ ನಡುವೆಒಂದು ಪ್ರಶ್ನೆಯಾಗಿ“ಈಗಲಾದರೂ ನಂಬುವಿರಾ?”ಈ ಅಧಿಕಾರ?ಅದು ತಲೆ ತಗ್ಗಿಸಿ ಫೈಲ್ ತಿರುವುತ್ತಿದೆ…ಯಾಕೆಂದರೆಅದರ ಬಳಿ ಪ್ರತಿ ಸಾವಿನ ದಾಖಲೆಯಿದೆಆದರೆ ಪ್ರತಿ ಅನ್ಯಾಯಗಳದ್ದು ಇಲ್ಲ ಇದು ಕವಿತೆಯಲ್ಲ ಇದೊಂದು ಚಾರ್ಜ್ಶೀಟ್ಇದರಲ್ಲಿ ಆರೋಪಿಗಳು:ನಿಮ್ಮ ವ್ಯವಸ್ಥೆನಿಮ್ಮ ಕಾನೂನುಮತ್ತು ಆ ಇಡೀ ಚೌಕಟ್ಟುಯಾವುದು ಬಡವರಿಗೆ ಹೇಳುತ್ತದೆಯೋ ಅದು“ಮೊದಲು ಸತ್ತಿದ್ದಕ್ಕೆ ಪುರಾವೆ ತನ್ನಿನಂತರ ಬದುಕುವ ಹಕ್ಕು ಸಿಗುತ್ತದೆ” ಸುಧೀರ್ ಧಾವಳೆ : ಸುಧೀರ್ ಧಾವಳೆ ಅವರು ಮಹಾರಾಷ್ಟçದ ಪ್ರಸಿದ್ಧ ಸಾಹಿತಿ, ಸಾಮಾಜಿಕ ಕಾರ್ಯಕರ್ತರು. ‘ವಿದ್ರೋಹಿ’ ಎಂಬ ಮರಾಠಿ ದ್ವೈಮಾಸಿಕ ಪತ್ರಿಕೆಯ ಸಂಪಾದಕರು. ದಲಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇವರು ಸಮಾಜದ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರು. ಇವರ ಕವಿತೆಗಳು ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಅಸ್ತ್ರಗಳಾಗಿವೆ. ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ Read Post »

ನಿಮ್ಮೊಂದಿಗೆ

“ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ

ಪುಸ್ತಕ ಸಂಗಾತಿ “ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ ಕೃತಿಯ ಹೆಸರು :ಕೆಂಪು ಗುಲಾಬಿಯ ಹಾಯಿಕುಗಳು(ಐದುನೂರಾ ಮೂವತ್ತಾರು ಹಾಯಿಕುಗಳ ಸಂಕಲನ)ಕವಿಯ ಹೆಸರು: ಡಾ.ಗವಿಸಿದ್ದಪ್ಪ ಎಚ್ ಪಾಟೀಲ.ಪ್ರಕಾಶಕರು : ಸಮನ್ವಯ ಪ್ರಕಾಶನ ಕಲಬುರಗಿಪ್ರಥಮ ಮುದ್ರಣ: 2023ಬೆಲೆ: 100₹ ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು ಮೈದುನ ಡಾ. ಗವಿಸಿದ್ದಪ್ಪ ಪಾಟೀಲ ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ನಾನು 1985 ರಿಂದ 1987ರವರೆಗೆ ಕೊಪ್ಪಳದಲ್ಲಿ ಶಿಕ್ಷಕರ ತರಬೇತಿ (ಟಿ ಸಿ ಎಚ್) ಪಡೆದೆ.ಆ ಅವಧಿಯಲ್ಲಿ ಕೊಪ್ಪಳದ ಎಂ ಎಚ್ ಪಿ ಎಸ್ ಶಾಲೆಗೆ ಪಾಠ ಕೊಡಲು ಹೋಗುತ್ತಿದ್ದಾಗ ಅಲ್ಲಿ ಗವಿ ನಾಲ್ಕನೇ ತರಗತಿ ಓದುತ್ತಿದ್ದ ಪುಟ್ಟ ಹುಡುಗ. ಅದೇನು ಆಕರ್ಷಣೆಯೋ ನನ್ನ ಹಿಂದೆನೇ ಸುತ್ತುತ್ತಿದ್ದ. ಅಚ್ಚುಮೆಚ್ಚಿನ ಶಿಷ್ಯನಾದ.ಆಗ ನಾನು ಇವರ ಅಣ್ಣ ನರೇಂದ್ರ ಪಾಟೀಲ ಅವರನ್ನು ಮದುವೆಯಾಗುತ್ತೇನೆಂದು ನನಗೂ ಗೊತ್ತಿರಲಿಲ್ಲ,ಈ ಪುಟ್ಟ ಪೋರನಿಗೂ ಗೊತ್ತಿರಲಿಲ್ಲ. ಅದು ಕೇವಲ ಋಣಾನುಬಂಧ. ನಾನು ಪಾಟೀಲರ ಮನೆಯ ಸೊಸೆಯಾದೆ.ನೋಡು ನೋಡುತ್ತಿದ್ದಂತೆ ಗವಿಸಿದ್ದಪ್ಪ ಪಾಟೀಲ ಒಂದೊಂದೇ ಮೆಟ್ಟಿಲೇರುತ್ತ ಸಾಹಿತ್ಯದ ಎತ್ತರದ ಶಿಖರವನ್ನೇ ಹತ್ತಿದ್ದಾನೆ ಎಂಬುದು ನನಗೆ ಹೆಮ್ಮೆ ಮತ್ತು ಅಭಿಮಾನ !.ಕಾವ್ಯ, ಆಧುನಿಕ ವಚನ,ಚುಟುಕು, ಶಾಹಿರಿ, ದೋಹೆ,ಗಜಲ್ ಹೀಗೆ ಕಾವ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದಿದ್ದಾನೆ. ಅಲ್ಲದೇ ವಚನ ಸಾಹಿತ್ಯ, ವಿಮರ್ಶೆ,ಲೇಖನ,ಕಥೆ, ಜೀವನ ಚರಿತ್ರೆ, ಸಂಪಾದನೆ ಹೀಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾನೆ. ಕೊಪ್ಪಳದ ಹಿರಿಯ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾನ್ಯ ಎಚ್ಎಸ್ ಪಾಟೀಲರ ಮಗನಾಗಿ ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತ ಮನೆತನದ ಕುಡಿಯಾಗಿ ನೀಡಿರುವ ಕೊಡುಗೆ ಅಪಾರ.ಡಾ. ಗವಿಸಿದ್ದಪ್ಪ ಪಾಟೀಲ ಇವರ ಸಂಗಾತಿ ಜಯದೇವಿ ಗಾಯಕವಾಡ ಕೂಡ ಒಳ್ಳೆಯ ಬರಹಗಾರ್ತಿಯಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕ ತಂದಿದ್ದಾರೆ. ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವನಿಗೆ ಎನ್ನುವ ಶರಣರ ನುಡಿಯಂತೆ ಸತಿ-ಪತಿಗಳೊಂದಾಗಿ ಸಾಹಿತ್ಯ ಸರಸ್ವತಿಗೆ ಸಲ್ಲಿಸುತ್ತಿರುವ ಸೇವೆ ಅಮೋಘವಾದದು. ನಾನು 2010 ರಲ್ಲಿ “ರಸದ ತೆನಿ ಹೈಕುಗಳು” ಕೃತಿಯನ್ನು ತಂದೆ.ಅದು ಗವಿಯ ಒತ್ತಾಸೆಯೂ ಆಗಿತ್ತು. ಕಲ್ಯಾಣ ಕರ್ನಾಟಕದಲ್ಲಿ ಹಾಯಿಕು ಕೃತಿ ತಂದ ಮೊದಲ ಮಹಿಳೆ ಎಂದು ಗುರುತಿಸಿಕೊಂಡಿದ್ದೇನೆ. ಹಾಯಿಕು ಕಾವ್ಯ ಇದು ಜಪಾನ್ ಮೂಲದ ಸಾಹಿತ್ಯ. ಕೇವಲ ಮೂರು ಸಾಲುಗಳ 17 ಅಕ್ಷರ (syllables) ಗಳನ್ನು ಒಳಗೊಂಡ 5+7+5=17 ಅಕ್ಷರದ ಕ್ರಮಬದ್ಧ ಕಾವ್ಯ. ಇದನ್ನು ಜಪಾನಿನ ತ್ರಿಪದಿ ಎಂದು ಕರೆಯುಯಲಾಗುತ್ತದೆ. ಬಾಶೋ,ಬುಸೋನ, ಆಸ್ಸಾಂ,ಶಿಕಿ ಜಪಾನಿನ ಹಾಯಿಹಗ್ಗದಕು ಕವಿಗಳು. ಭಾಶೋ ಹೇಳುತ್ತಾನೆ “ಯಾರು ಜೀವನದಲ್ಲಿ ಮೂರರಿಂದ ಐದು ಹಾಯಿಕುಗಳನ್ನು ರಚಿಸುತ್ತಾರೋ ಅವರು ಹಾಯಿಕು ಕವಿ, “ಯಾರು 10 ಹಾಯ್ಕುಗಳನ್ನು ರಚಿಸುತ್ತಾರೋ ಅವರು ಮಹಾಕವಿ”ಎಂದಿದ್ದಾನೆ. ಇದರಿಂದ ನಮಗೆ ಗೊತ್ತಾಗುತ್ತದೆ ಹೈಕು‌ ರಚನೆ ಸುಲಭವಲ್ಲ . “ಗಾಗರ್ ಮೆಂ ಸಾಗರ ”  ಎನ್ನುವ ಹಾಗೆ, ಕರಿಯು ಕನ್ನಡಿಯಲ್ಲಿ ಅಡಗಿಕೊಂಡಂತೆ ಹಾಯಿಕುವಿನಲ್ಲಿ ಹಿರಿದಾದ ಅರ್ಥ ಅಡಗಿರುತ್ತದೆ. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಜಗದ ತುಂಬಾ ಎನ್ನುವಂತೆ ಹಾಯಿಕು ಇಂದು ಜಗದಗಲ ಪಸರಿಸಿದೆ. ಇತ್ತೀಚಿಗೆ 17 ಸಿಲಬಲ್ ಗಳ ನಿಯಮ ಪಾಲಿಸದೆ ಭಾವಕ್ಕೆ ಹೆಚ್ಚು ಮಹತ್ವ ಕೊಟ್ಟು ಅತ್ಯಂತ ಪರಿಣಾಮಕಾರಿಯಾಗಿ, ಅಕ್ಷರ ನಿಯಮಗಳನ್ನು ಮೀರಿ ಒಟ್ಟು ಮೂರು ಸಾಲಿನಲ್ಲಿ ಹೈಕುಗಳನ್ನು ಬರೆಯುತ್ತಿದ್ದಾರೆ. ಆದರೆ ಡಾ. ಗವಿಸಿದ್ದಪ್ಪ ಪಾಟೀಲ 17 ಸಿಲೆಬಲ್ಲಗಳ ಚೌಕಟ್ಟಿನಲ್ಲಿ ಅರ್ಥಗರ್ಭಿತವಾದ ಹಾಯಿಕುಗಳನ್ನು ಬರೆದು ಕನ್ನಡ ಹಾಯಿಕು ಸಾಹಿತ್ಯಕ್ಕೆ ಉತ್ತಮ  ಕೊಡುಗೆಯನ್ನು ನೀಡಿದ್ದಾನೆ. “ಕೆಂಪು ಗುಲಾಬಿಯ ಹಾಯಿಕುಗಳು”  ಕೃತಿಯು ಹೆಸರೇ ಹೇಳುವಂತೆ ಪ್ರೀತಿ- ಪ್ರೇಮ, ಪ್ರಣಯ- ಉತ್ಸಾಹ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕುರಿತು ತೀವ್ರ ಭಾವಗಳನ್ನು ಪ್ರತಿನಿಧಿಸುವ ಕೃತಿಯಾಗಿದೆ. ಪ್ರೀತಿ ಆದಾಗಪ್ರೇಮಿಗಳ ನಡುವೆಗುಲಾಬಿ ಹೂವು  **   ***   ** ಮುಳ್ಳಿನ ಮೇಲೆಕೆಂಪು ಗುಲಾಬಿ ಹೂವು ನಿಸರ್ಗ ಸ್ವರ್ಗ **   ***   **ಗುಲಾಬಿ ಹೂವುಮುಳ್ಳುಗಳ ನಡುವೆ ಚಂದ್ರೋದಯ ಗುಲಾಬಿ ಪ್ರೀತಿಯ ಸಂಕೇತ. ಎರಡು ಹೃದಯಗಳ ನಡುವೆ ಪ್ರೀತಿ ಮೂಡಿದಾಗ ಆ ಪ್ರೀತಿಯನ್ನು ಇಂದಿನ ಯುವ ಪೀಳಿಗೆ ಗುಲಾಬಿಯನ್ನು ಕೊಡು ಕೊಳ್ಳುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳುವ ಚಿತ್ರಣವನ್ನು ಈ ಹಾಯಿಕುಗಳಲ್ಲಿ ಕಾಣುತ್ತೇವೆ. ಇಂತಹ ಸುಂದರವಾದ ಗುಲಾಬಿ ಮುಳ್ಳಿನ ಮೇಲೆ ಇದ್ದೂ ತನ್ನ ಚೆಲುವಿನಿಂದ ನಿಸರ್ಗವನ್ನು ಸ್ವರ್ಗವಾಗಿಸುತ್ತದೆ. ಇದು ಮುಳ್ಳಿನ ನಡುವೆಯೂ ತನ್ನ ನೋವನ್ನು ಮರೆತು ಹುಣ್ಣಿಮೆಯ ಚಂದ್ರನಂತೆ ನಗುತ್ತಿರುತ್ತದೆ. ಎಂತಹ ಕಷ್ಟದ ಸಮಯದಲ್ಲೂ ನೊಂದುಕೊಳ್ಳದೆ ಸದಾ ನಗುವನ್ನು ಹಂಚಿಕೊಳ್ಳಬೇಕೆಂಬ ಸಂದೇಶವನ್ನು ಈ ಹಾಯಿಕುಗಳು ನೀಡುತ್ತವೆ. ಇಡೀ ಕೃತಿಯಲ್ಲಿ ಬಹುಪಾಲು ಹಾಯಿಕುಗಳು ಶ್ರಮಿಕ ವರ್ಗದವರು, ಶೋಷಿತರು,ಅಸ್ಪೃಶ್ಯರು, ಹಿಂದುಳಿದ ಮತ್ತು ದಲಿತ ವರ್ಗದವರು ಅನುಭವಿಸಿದ ಅನುಭವಿಸುತ್ತಿರುವ ನೋವಿನ ಚಿತ್ರಣವನ್ನು ನೀಡುತ್ತವೆ. ನಿತ್ಯ ದುಡಿಮೆಸುಖವೇ ಇಲ್ಲವೇನೋ ದಲಿತರಿಗೆ ***    ***   *** ಕಲ್ಲಿನ ದಾರಿತುಳಿದ ಅಸ್ಪೃಶ್ಯರುಕಲ್ಲಾಗಿಹರು ***    ***   ***ಎಲ್ಲಿಂದ ಬಂತೊ ಶೋಷಣೆ ಬೆಂದವರ ರಕ್ತ ಹೀರಲು ***   ***   ***“ಮಂಜು ಕಟ್ಟಿದೆಶತಮಾನದ ಬ್ಯಾನಿ ನೋಂದ ಕಣ್ಣಲ್ಲಿ“ ನಿತ್ಯವೂ ಕಲ್ಲು ಮುಳ್ಳುಗಳ ತುಳಿದು ದುಡಿದರೂ ಸುಖ ಕಾಣದ ದಲಿತ ವರ್ಗ ಕ್ಷಣ ಕ್ಷಣಕ್ಕೂ ಶೋಷಣೆಗೆ ಒಳಗಾಗುತ್ತಿದೆ. ಶತ ಶತಮಾನದಿಂದಲೂ ನೋವು, ಅವಮಾನ, ಅಸಡ್ಡೆಗಳಿಂದ ತತ್ತರಿಸಿ ಹೋಗಿರುವ ಈ ಜನರು ಸಹಜವಾಗಿ ಕಲ್ಲಂತೆ ಕಠಿಣ ಆಗುತ್ತಿದ್ದಾರೆ ಎಂದು ಕವಿಯ ಅಭಿಮತ.ಸಮಾನತೆಯ ಸರಿದಾರಿಯ ನಿರೀಕ್ಷೆಯಲ್ಲಿದ್ದವರಿಗೆ ಬುದ್ಧನ ಬೆಳಕು, ಗಾಂಧೀಜಿಯ ತತ್ವ, ಬಸವಾದಿ ಶರಣರ ವಿಚಾರಗಳು ಆತ್ಮವಿಶ್ವಾಸ ಮೂಡಿಸಿವೆ. ಸಂವಿಧಾನಕ್ಕೆಸಾಮಾಜಿಕ ನ್ಯಾಯವ ನೀಡಿದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ದಲಿತ ವರ್ಗದವರಿಗೆ ಸಾಂವಿಧಾನಿಕವಾಗಿ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ.  “ಕಪ್ಪು ಜನರನೋವಿನ ಒಡಲಾಳದಬೆಳಕು ಬಾಬಾ” ಹಿಂದುಳಿದ ಜಾತಿ ಜನಾಂಗದ ಜನರ ಒಡಲಾಳದ ನೋವಿಗೆ ಬೆಳಕಾದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಶಿಕ್ಷಣ, ಸಮಾನತೆ, ಸ್ವಾತಂತ್ರ್ಯದ ಬದುಕನ್ನು ನೀಡಿದವರು. ಕರಿಯ ಕಟ್ಟಿದ ಗೋಡೆಯ ಮೇಲೆ ಭಾರತದ ಧ್ವಜ ಹಾರಿತು ಎಂದು ಹೇಳುವಲ್ಲಿ  ಮನದಾಳದ ಕೆಚ್ಚು ಹೊರಹೊಮ್ಮಿದೆ.ಕೇವಲ ದಲಿತರಿಗೆ ಅಷ್ಟೇ ಅಲ್ಲ, ಇಡೀ ಮಾನವ ಕುಲದ ಏಳಿಗೆಗೆ  ಬಾ ಬಾ ಸಾಹೇಬರು ಶ್ರಮಿಸಿದರು. ಮನು ಕುಲಕ್ಕೆಹೊಸ ಭಾಷ್ಯ ಬರೆದಬಾ ಬಾ ಸಾಹೇಬ ***    ***   ***ಮಾನವತೆಯಧ್ವನಿ ಅಂಬೇಡ್ಕರ್ಈ ಸ್ವಾಭಿಮಾನಿ ಎಂದು ಅಂಬೇಡ್ಕರ್ ಅವರ ಮಾನವ ಪ್ರೇಮವನ್ನು ಇವರು ಹೈಕುಗಳಲ್ಲಿ ಹಿಡಿದಿಟ್ಟಿದ್ದಾರೆ. ಜಗಕೆ ಅನ್ನ ನೀಡುವ ರೈತನನ್ನು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ರೈತ ಎದುರಿಸುತ್ತಿರುವ ಸಂಕಷ್ಟಗಳು, ದಲ್ಲಾಳಿಗಳ ಶೋಷಣೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲದ ಬಾಧೆ ತಾಳದೆ  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬದುಕು ಕವಿ ಮನವನ್ನು ಕಲಕಿದೆ. ಬೆಳೆ ಯಾರಿಗೊ ದುಡಿಮೆಯ ಇನ್ನಾರಿಗೊಈ ದೇಶದಲ್ಲಿ ಎಂದು ನೋಯುವ ಕವಿ  ಕೈಗೆ ಕೆಸರುಆದರೂ ಬರಲಿಲ್ಲಬಾಯಿಗೆ ತುಪ್ಪ ಎಂದು ವಿಷಾದ ವ್ಯಕ್ತಪಡಿಸುತ್ತಾನೆ. ರೈತನ ಶ್ರಮಕ್ಕೆ ಬೆಲೆ ಸಿಗುವುದು ದುರ್ಲಭವಾಗಿರುವ ಪ್ರಚಲಿತ ದಿನಗಳಲ್ಲಿ ನೇಗಿಲ ಯೋಗಿಭಾರತ ಭಾಗ್ಯದಾತ ಕತ್ತು ನೇಣಿಗೆ ಎಂದು ರೈತನ ಸಮಸ್ಯೆ- ಸವಾಲುಗಳ ವಿವಿಧ ಮಗ್ಗಲುಗಳನ್ನು ಇಲ್ಲಿಯ ಹಾಯಿಕುಗಳು ಪರಿಚಯಿಸುತ್ತವೆ.  ‘ಯುವ ಜನ ದೇಶದ ಶಕ್ತಿ’ ಎಂದು ಹೇಳಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಹಲವು ದುಶ್ಚಟಗಳಿಗೆ ಬಲಿಯಾಗಿ, ಮೋಜು ಮಸ್ತಿಗಳಲ್ಲಿ ಕಾಲ ಕಳೆಯುತ್ತಾ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವವರನ್ನು ಕಂಡು ಕವಿಯ ಮನ ನೊಂದಿದೆ. ದುಡಿದ ದುಡ್ಡುಸಾರಾಯಿ ಅಂಗಡಿಗೆಭವಿಷ್ಯ ಹಾಳು ***   ***    ***ಕುಡಿತ ಚಟಬದುಕಿನಲ್ಲಿ ಬಂದಸುಂಟರಗಾಳಿ ***   ***   ***ದಾರಿ ತಪ್ಪಿದೆಮಗ ಬಾರಿನೊಳಗೆ ಚಿತೆ ಏರಿದ ಎನ್ನುವ ಹಾಯಿಕುಗಳು ಕುಡಿತದ ಚಟಕ್ಕೆ ಒಳಗಾಗಿ ದುಡಿದದ್ದನ್ನೆಲ್ಲಾ ಹಾಳು ಮಾಡಿಕೊಳ್ಳುತ್ತಿರುವವರನ್ನು ನಿತ್ಯವೂ ನಾವು ನೋಡುತ್ತೇವೆ. ಕುಡಿತ ಆರೋಗ್ಯವನ್ನು ಹಾಳು ಮಾಡುತ್ತದೆ. ಕುಟುಂಬದ ನೆಮ್ಮದಿಯನ್ನು ಕೆಡಿಸುತ್ತದೆ. ಅಲ್ಲದೆ ಗೌರವವನ್ನು ಹಾಳು ಮಾಡುತ್ತದೆ. ಇಂಥ ಚಟಗಳಿಂದ ಯುವಕರು ದೂರ ಇರಬೇಕೆಂಬ ಸಂದೇಶವನ್ನು ಇವು ನೀಡುತ್ತವೆ.  ಇವತ್ತಿನ ತಾಂತ್ರಿಕ ಯುಗದಲ್ಲಿ ಮನುಷ್ಯ ತನ್ನ ಸುಖ ಸಂತೋಷಕ್ಕಾಗಿ ಏನೆಲ್ಲ ಸಾಧನಗಳನ್ನು ಕಂಡು ಹಿಡಿದಿದ್ದಾನೆ.ಅದರೆ ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿದ ಮೇಲೆ ಸಾವು ಖಚಿತ !.ಹುಟ್ಟು ಸಾವುಗಳ ನಡುವಿನ ಈ ಬದುಕು ಅತ್ಯಂತ ಅಮೂಲ್ಯವಾದದ್ದು. ಬದುಕಿನ ಬಂಡಿ ಸರಾಗವಾಗಿ ಸಾಗಲು ಗಂಡ- ಹೆಂಡತಿ ಅನ್ಯೋನ್ಯವಾಗಿ ಇರಬೇಕು.  ಈ ಜೀವನಕೆದಾಂಪತ್ಯ ಸಾಮರಸ್ಯ ಜೀವನೋತ್ಸಾಹ  ದಾಂಪತ್ಯದಲ್ಲಿ ಸಾಮರಸ್ಯ ಇದ್ದಾಗ ಮಾತ್ರ ಜೀವನದಲ್ಲಿ ಉತ್ಸಾಹ ಸಹಜವಾಗಿ ಮೂಡುತ್ತದೆ. ಇಲ್ಲದಿದ್ದರೆ ಸಂಸಾರ ಎನ್ನುವುದು ಸಾರವನ್ನು ಕಳೆದುಕೊಳ್ಳುತ್ತದೆ.  ಗಂಡ ಹೆಂಡತಿಜೀವನ ಬೇವು- ಬೆಲ್ಲ ಯುಗಾದಿ ಹಬ್ಬ ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರಿತು ನಡೆದರೆ ಜೀವನ ಬೇವು ಬೆಲ್ಲದಂತೆ. ನಿತ್ಯವೂ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮವನ್ನು ಕಾಣಲು ಸಾಧ್ಯವಾಗುತ್ತದೆ. ಕವಿ ಡಾ. ಗವಿಸಿದ್ದಪ್ಪ ಪಾಟೀಲ ‘ಕೆಂಪು ಗುಲಾಬಿಯ ಹಾಯಿಕುಗಳು’ ಕೃತಿಯಲ್ಲಿ ಹೇಳದೆ ಇರುವ ವಿಷಯಗಳೇ ಇಲ್ಲ. ಸೃಷ್ಟಿಯ ಸೊಬಗಿನಲ್ಲಿ ಓಲಾಡಿದ್ದಾನೆ, ಸೂರ್ಯ ಚಂದ್ರ ನಕ್ಷತ್ರಗಳನ್ನು ಮಾತಾಡಿಸಿದ್ದಾನೆ, ಅಸಮಾನತೆಗೆ ಸಿಡಿದಿದ್ದಾನೆ, ಪ್ರೀತಿ- ಪ್ರೇಮ ಕನವರಿಕೆಯಲ್ಲಿ ಮೈಮನ ಮರೆತಿದ್ದಾನೆ.! ತಾನು ಒಬ್ಬ ಕವಿಯಾಗಿ ಕವಿತೆಯ ಬಗ್ಗೆ ಬರೆಯದಿದ್ದರೆ ಹೇಗೆ ?ಬರಹ ಅಪೂರ್ಣವೆನಿಸುತ್ತದೆ ಅಲ್ಲವೆ? ಅಂತೆಯೇ ಕಾವ್ಯವೆಂದರೆ ಏನು ಎನ್ನುವುದನ್ನು ಬಹಳ ಸೊಗಸಾಗಿ ತಿಳಿಸಿದ್ದಾನೆ.  ಶಬ್ದದೊಂದಿಗೆಕವಿ ಕಾವ್ಯ ತಿಕ್ಕಾಟ ಹೆರಿಗೆ ನೋವು  ಕಾವ್ಯವೆಂದರೆ ಕವಿ ತನ್ನ ಭಾವನೆಗಳನ್ನು ಶಬ್ದದ ಮೂಲಕ ಅಭಿವ್ಯಕ್ತಿಗೊಳಿಸುವುದಾಗಿದೆ. ಭಾವಗಳ ಜೊತೆಗೆ ಶಬ್ದಗಳ ತಿಕ್ಕಾಟ ಇದು ಸಾಮಾನ್ಯವಲ್ಲ. ಅದು ಹೆರಿಗೆ ನೋವಿನಷ್ಟೇ ಗಂಭೀರ ಎಂದು ಕವಿ ಅನುಭವದ ಅಮೃತ ಹಂಚಿಕೊಂಡಿದ್ದಾನೆ.  ಶಬ್ದಾರ್ಥಗಳ ಸಂಯೋಗವೇ ಕಾವ್ಯದ ಬಂಧನ ಕಟ್ಟು ಎಂದು ಕಾವ್ಯವನ್ನು ಅರ್ಥೈಸುತ್ತಾನೆ.  ಅವ್ವನ ಕೌದಿಚಿತ್ತ ಚಿತ್ತಾರದಿಂದಹೊಲಿದ ಕಾವ್ಯ  ಇದಂತೂ ಅದ್ಭುತ ರೂಪಕ! ಚಿತ್ತದಲ್ಲಿ ಹೊಳೆದ ಭಾವಗಳ ಬಣ್ಣ ಬಣ್ಣದ ಬಟ್ಟೆಗಳನ್ನು ಜೋಡಿಸಿ ಅವ್ವ ಹೊಲಿದ ಕೌದಿ ಎಂದು ವೈಶಿಷ್ಟ್ಯಪೂರ್ಣವಾಗಿ ಕಾವ್ಯವನ್ನು ಅರ್ಥೈಸಿದ್ದಾನೆ. ಕವಿ ಡಾ. ಗವಿಸಿದ್ದಪ್ಪ ಪಾಟೀಲ ಸಮಾಜದ ಜನತೆ, ಸಾಮಾಜಿಕ ವ್ಯವಸ್ಥೆಯ ಬಗೆಗೆ ವ್ಯಕ್ತಪಡಿಸುವ ವಿಶೇಷ ಕಾಳಜಿಯನ್ನು ಈ ಕೆಳಗಿನ ಹಾಯಿಕುಗಳಲ್ಲಿ ಕಾಣುತ್ತೇವೆ.  ಮೂಢನಂಬಿಕೆಹೊತ್ತು ಹರಿದ ಧರ್ಮ ನಾಲೆಯ ನೀರು ಜನರಲ್ಲಿ ಆಳವಾಗಿ ಬೇರೂರಿರುವ ಮೂಢ ನಂಬಿಕೆಯು ಧರ್ಮ ಎಂಬ ಕಾಲುವೆಯಲ್ಲಿ ತುಂಬಿ ಹರಿಯುವ ನೀರು ಇದ್ದಂತೆ ಎಂದು ಅಭಿಪ್ರಾಯ ಪಡುತ್ತಾನೆ. ಇಂತಹ ಮೌಢ್ಯತೆಯಿಂದ ಹೊರಗೆ ಬರಬೇಕು ಎಂದೂ ಇಲ್ಲದಿದ್ದರೆ ಬದುಕು ನರಕವಾಗುವ ಭೀತಿಯನ್ನು ಮೌಡ್ಯ ಆಚರಣೆತಂದಿದೆ ಜನರಲ್ಲಿ ಭೀತಿ ನರಕ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾನೆ. ನನ್ನ ಜನರುಹಣೆ ಬರಹ ಎಂದು ತಲೆಕೊಟ್ಟರು  ಬದುಕಿನಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಯಶಸ್ಸು ಸಿಗದಿದ್ದರೆ ಹಣೆ ಬರಹವನ್ನೇ ಹೊಣೆ ಮಾಡುವದು ಸಹಜ.ಇದು ಮೌಢ್ಯತೆ !.ಇದಕ್ಕೆ ಬದಲಾಗಿ ಎಲ್ಲಿ ತಪ್ಪಿದ್ದೇವೆ , ಯಾವುದೇ ಕಾರ್ಯ ವೈಫಲ್ಯಕ್ಕೆ ನನ್ನೊಳಗಿರುವ ದೌರ್ಬಲ್ಯವೇನು ಎಂಬುದನ್ನು ಅರಿತು ಸುಧಾರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಣೆ ಬರಹ ಎಂದು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಂಥ ಮೌಡ್ಯತೆಯನ್ನು ಬಿಟ್ಟು ವೈಚಾರಿಕ ಮನೋಭಾವವನ್ನು  ಬೆಳೆಸಿಕೊಂಡು ಜಾಗೃತರಾಗುವ ಸದಾಶಯವನ್ನು ಈ ಹಾಯಿಕುಗಳು ತಿಳಿಸುತ್ತವೆ. ಸ್ವಾರ್ಥವೇ ತುಂಬಿಕೊಂಡ ಈ ಭೂಮಿಯ ಮೇಲೆ ಪ್ರೀತಿ ಕರುಣೆ ಮತ್ತು ಸೋದರತೆಯಂತಹ ಮಾನವೀಯ ಗುಣಗಳು ಇಲ್ಲವಾಗಿ ಎಲ್ಲಿ ನೋಡಿದರೂ ದ್ವೇಷ – ಅಸೂಯೆ, ಹೊಡೆದಾಟ- ಬಡಿದಾಟಗಳನ್ನು ಕಂಡು ಕವಿ ಮರುಗುತ್ತಾನೆ. ಮನುಜ ಪಥ ದಾರಿ ಕಳಕೊಂಡಿದೆ ಯಾಕೋ ಸಾಲಾಗಿ ಎಂದು ಚಿಂತಿಸುತ್ತಾನೆ. ಓ ಮನುಷ್ಯರೇಮಾನವತೆಯ ತಂದುಕೊಡಿ ನನಗೆ  ಎಂದು ಹಂಬಲಿಸಿ

“ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ”

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ “ನೀ ಹೀಗೇಕೆ ಮಾಡಿದೆ” ಈ ಭೂಮಿಯ ಮೇಲೆಒಳ್ಳೆಯ ಜನರನ್ನು ಹುಟ್ಟಿಸಿಅವರ ನಡುವೆ ಕೆಟ್ಟವರನ್ನು ಸೃಷ್ಟಿಸಿಕಾಡಿಸಲು ಪೀಡಿಸಲು ಬಿಟ್ಟೆನೀ ಹೀಗೇಕೆ ಮಾಡಿದೆ… ಕಾಡಿನಲ್ಲಿ ಮುಗ್ಧ ಪ್ರಾಣಿಗಳನ್ನುಸ್ವಚ್ಛಂದವಾಗಿ ಅಲೆಯಲು ಬಿಟ್ಟೆಅವನ್ನು ಹಿಂಸಿಸಿ ತಿನ್ನಲುಕ್ರೂರ ಪ್ರಾಣಿಗಳ ಚೂಬಿಟ್ಟೆನೀ ಹೀಗೇಕೆ ಮಾಡಿದೆ… ಕೂಡಿ ಬಾಳಲು ದುಡಿದು ತಿಂದುನಲಿಯಲು,ಹಗಲನು ಸೃಷ್ಟಿಸಿದೆಕಳ್ಳಾಟ-ಅಕ್ರಮಗಳ ಮಾಡಲುಕತ್ತಲು ಕರುಣಿಸಿದೆನೀ ಹೀಗೇಕೆ ಮಾಡಿದೆ… ಪ್ರೀತಿ ಅಂತ:ಕರಣ ಮಾನವನ ಎದೆಯಲ್ಲಿ ನೆಟ್ಟೆಮನದಲ್ಲಿ ವಿಷ ಬೀಜ ಬಿತ್ತಿಕ್ರೂರಿ ಅತ್ಯಾಚಾರಿಅನಾಚಾರಿಯಾಗುವ ಮನಸನಿಟ್ಟೆನೀ ಹೀಗೇಕೆ ಮಾಡಿದೆ.. ಡಾ. ಗೀತಾ ದಾನಶೆಟ್ಟಿ, ಬಾಗಲಕೋಟೆ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ” Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” ಯಾವ ಶಿಲ್ಪಿಯೂ ಕೆತ್ತಲಾಗದಕಲಾವಿದನ ಕೈ ಚಳಕಕೂ ನಿಲುಕದಪರಮಾನಂದದ ನಿಮ್ಮ ನಗುಬದುಕಿನ ಪಾಠ ಹೇಳುತಿವೆ ನಮ್ಮೊಡನಿರುವ ಜೀವಂತ ದೇವರುಗಳುಅವರೊಡನಾಟವೇದೇವನೊಲುಮೆಯ ನೋಟಸುಖ ದುಃಖಗಳಸಮ್ಮಿಲನದ ‌ಸ್ಪೂರ್ತಿಯ ಪಾಠ ಮುಖದ ತುಂಬಾಚೈತನ್ಯದ ಚಿಲುಮೆಹೊತ್ತುಹೇಳುತಿರುವಿರಿಬಾಳೆಂಬ ಹೋರಾಟದನಗುವಿನ ಮೌಲ್ಯಬಲ್ಲವನ ಬೆಲ್ಲದ ಸವಿಮಧುರ ಮಿಲನದ ಸಂತೃಪ್ತಿ ಏನಿದ್ದರೇನ್ ಬಾಳಲಿನೆಮ್ಮದಿಯೊಂದಿಲ್ಲದಿದ್ದರೆಮಕ್ಕಳಾಟದಿ ಮೈಮರೆತುನೋವ ಮರೆತು ನಲಿವ ಕಾಣಬೇಕುಆ ಸತ್ಯ ಕಾಣುವ ಮನಸುನಮದಾಗಲಿಹರಸಿ ಹಾರೈಸಿ ಮಕ್ಕಳೇ ಶಿವಕುಮಾರ ಕೋಡಿಹಾಳ ಮೂಡಲಗಿ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” Read Post »

ಕಾವ್ಯಯಾನ

ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ”

ಕಾವ್ಯ ಸಂಗಾತಿ ಬನಶ್ರೀ ಹತ್ತಿ ವಿಜಯಪುರ “ಮರೆಯಾದ ನನ್ನಪ್ಪ” ಬೆನ್ನ ಹಿಂದೆ ಬೆಟ್ಟದಂತೆ ನಿಂತಿದ್ದೆ,ಕಣ್ಣ ಮುಂದೆ ದಾರಿದೀಪವಾಗಿದ್ದೆ.ನಿನ್ನ ಕೈ ಹಿಡಿದು ನಡೆದ ಹಾದಿಇಂದಿಗೂ ನನ್ನ ಬಾಳ ಹಸಿರು,ಇಂದು ನೀನಿಲ್ಲದೆ ಬದುಕುಬರೀ ಬಳಲಿಕೆಯ ಉಸಿರು. ನನ್ನ ಸಣ್ಣ ತಪ್ಪುಗಳ ತಿದ್ದಿ ಬುದ್ದಿ ಹೇಳುತ್ತಿದ್ದೆ,ಕಷ್ಟ ಬಂದಾಗ ಧೈರ್ಯ ತುಂಬಿನಗು ಬೀರುತ್ತಿದ್ದೆ.ನೀನು ಹಾಕಿಕೊಟ್ಟ ಹಾದಿಯೇ ನನ್ನಾಸ್ತಿನಿನ್ನ ನೆನಪುಗಳೇ ನನ್ನ ಜೀವನದ ಬುತ್ತಿ. ಅಪ್ಪ ಅಂದರೆ ಕೇವಲ ಎರಡಕ್ಷರವಲ್ಲ,ಒಂದು ದೊಡ್ಡ ಆಲದ ಮರ,ನೀನಿಲ್ಲದ ಈ ಬಾಳು ಈಗ ಮರುಭೂಮಿಮರೆಯಾದರೂ ನೀನು ನನ್ನಎದೆಯ ಗೂಡಿನಲ್ಲಿರುವೆ,ನನ್ನ ಪ್ರತಿ ಯಶಸ್ಸಿನಲ್ಲೂ ನಿನ್ನ ದಿವ್ಯ ಚೇತನ ನೀನು ಮರೆಯಾಗಿ ಹೋಗಿಲ್ಲಇಲ್ಲಿಯೇ ಭೂಮಿ ಬೆಳೆ ಮಳೆಯಲ್ಲಿರುವೆಆಗಾಗ ನಿನ್ನ ತುಂತರ ಹನಿನನ್ನ ಕಣ್ಣೀರು ಮರೆಸುವವು ಅಪ್ಪಅಪ್ಪ ಮತ್ತೊಮ್ಮೆ ಬಂದು ಪ್ರೀತಿ ತೋರು ಬನಶ್ರೀ ಹತ್ತಿ ವಿಜಯಪುರ

ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ” Read Post »

ಕಾವ್ಯಯಾನ

ಮಹಾಂತೇಶ್‌ ಬಿ ನಿಟ್ಟೂರು ಅವರ ಕವಿತೆ “ನೆಲದ ಎದೆ ಅಗ್ನಿಕುಂಡ”

ಕಾವ್ಯ ಸಂಗಾತಿ ಮಹಾಂತೇಶ್‌ ಬಿ ನಿಟ್ಟೂರು “ನೆಲದ ಎದೆ ಅಗ್ನಿಕುಂಡ” ಹಾಗೂ ಹೀಗೂ ಹೇಗೋ ಮರ ಬೆಳೆದುದೊಡ್ಡದಾಗಿ ಮೈ ಕೈ ತುಂಬಿಕೊಳ್ಳಲು; ಫಲಕ್ಕಾಗಿ ಸರತಿಯ ಸಾಲುಕೆಲವೊಮ್ಮೆ ನೂಕುನುಗ್ಗಲು ಒಂದು ಗುಂಪು ಚೀಲ ಹಿಡಿದು ನಿಂತಿದೆಹಣ್ಣು ಹಂಪಲು ತುಂಬಿಕೊಳ್ಳಲು ಇನ್ನೊಂದು ಗುಂಪು ಪಾತ್ರೆ ಹಿಡಿದು ಕೂತಿದೆಕೊಂಬೆ ರೆಂಬೆಗಳ ಮೇಲಿಟ್ಟಿಹಜೇನುರಸ ಹಿಂಡಿ ತೆಗೆಯಲು ಮತ್ತೊಂದು ಗುಂಪು ಬುಟ್ಟಿಹಿಡಿದು ಕಾಯುತ್ತಿದೆಹಕ್ಕಿ-ಪಕ್ಷಿಗಳಿಟ್ಟ ಮೊಟ್ಟೆ ಹೊತ್ತು ಸಾಗಲುಕೊನೆಗೆ ಬೇಟೆಯಾಡಿ ಬೇಯಿಸಿ ತಿನ್ನಲು ಅಲ್ಲೊಂದು ತಂಡ ಮಚ್ಚು, ಕೊಡಲಿಗರಗಸ ತಂದು ಸುತ್ತುವರೆದಿದೆಆದಷ್ಟು ಬೇಗ ಕಡಿದು ಬುಡಮೇಲು ಮಾಡಿಮನೆ ಮಾರಿಗೆ ನಾಟಾ ಮಾಡಿಸಲುಓಲೈಕೆಯ ಒಲೆ ಉರಿಸಲು ಇಲ್ಲೊಂದು ಸಮೂಹ ಹೊಂಚಿ ಕೂತಿದೆಗಾಳಿಗೋ, ಮಳೆಗೋ ಬಿದ್ದ ಕೂಡಲೇ ಮರಆ ಜಾಗ ಕಬ್ಜಾ ಮಾಡುವ ಹುನ್ನಾರ….. ಪ್ರಕೃತಿಯ ಸುಕೃತಿಗಳಾದಮರ ಗಿಡ ಬಳ್ಳಿಯ ಪರಿವಾರವನ್ನುನೆಟ್ಟು ಬೆಳೆಸದೇ ಅಟ್ಟು ಉಣ್ಣುವಪರಮ ಸ್ವಾರ್ಥಿಗಳೀ ನೀಚ ನಡೆಗೆಕಲ್ಪವೃಕ್ಷಗಳ ಕಲ್ಪನಾತೀತ ವೇದನೆಗೆಮುಗಿಲು ಕೆಂಡ, ನೆಲದ ಎದೆ ಅಗ್ನಿಕುಂಡ ! ಮಹಾಂತೇಶ್‌ ಬಿ ನಿಟ್ಟೂರು    

ಮಹಾಂತೇಶ್‌ ಬಿ ನಿಟ್ಟೂರು ಅವರ ಕವಿತೆ “ನೆಲದ ಎದೆ ಅಗ್ನಿಕುಂಡ” Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ -18 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಪತಿ ಚೆನ್ನಮಲ್ಲಪ್ಪನವರ ವಿಯೋಗ ೧೯೪೮೯ ಸಮಯ ….ಆಗಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿತ್ತು….. ಸಂಸ್ಥಾನಗಳ ವಿಲೀನಿಕರಣವಾಗಿ, ನಿರಾಶ್ರಿತರು ತಮ್ಮ ತಮ್ಮ ತಾಣಕ್ಕೆ ಹೋಗಿ ಸೇರಿದ್ದರು.ಜಯದೇವಿ ತಾಯಿಯವರು ಅನೇಕ ಕುಟುಂಬಗಳ ಬದುಕಿಗೆ ಬೆಳಕಾಗಿದ್ದರು .. ಅವರಲ್ಲಿ ಆಶ್ರಯ ಪಡೆದ ಅನಾಥರಿಗೆ ಸಂಸಾರ ದೊರಕಿಸಿಕೊಟ್ಟರು…ತಾಯಿಯ ಮಮತೆಯಿಲ್ಲದೆ ಅಳುತ್ತಿದ್ದ ಮಕ್ಕಳಿಗೆ ತಾಯಿಯ ಅಕ್ಕರೆ ಸಿಕ್ಕಿತು…ಬಾಣಂತಿ ನೋವಿನಲ್ಲಿ ನರಳುತ್ತಿದ್ದ ಮಹಿಳೆಯರಿಗೆ ಅವರು ತಾಯಿ ಆಗಿ ಸೇವೆ ಸಲ್ಲಿಸಿದರು…ಅಜ್ಞಾನದಲ್ಲಿ ಕಳೆದು ಹೋಗುತ್ತಿದ್ದ ಮಕ್ಕಳಿಗೆ ಶಿಕ್ಷಣದ ದಾರಿ ತೋರಿಸಿದರು…ಬಡತನದ  ಸಂಕೋಲೆಗಳನ್ನು ಕತ್ತರಿಸಿ ಅವರ ಬದುಕಿಗೆ ನಂಬಿಕೆ ತುಂಬಿದರು…!!!ಆದರೆಜಯದೇವಿ ತಾಯಿಯವರ  ಮನಸ್ಸಿನಲ್ಲಿ ದುಃಖದ ಸಾಗರ ಉಕ್ಕುತ್ತಿತು……!!!ಎಲ್ಲರಿಗೂ ಬದುಕು ಕೊಟ್ಟ ಆ ಮಹಾತಾಯಿ,ಸ್ವಂತ ಮನಸ್ಸಿನಲಿ ನೋವನ್ನು ಹೋತ್ತು ಕೊಂಡಿದ್ದರು…..ತಮ್ಮಕಷ್ಟವನ್ನು ಮಾತ್ರ ಯಾರಿಗೂ ತೋರಿಸಲಿಲ್ಲ…ಬಾಹ್ಯವಾಗಿ ಅವರು ಸದಾ ನಗುತ್ತಿದ್ದರು…ಆದರೆ ಆ ನಗುವಿನ ಹಿಂದೆ ಅನೇಕ ಕಹಿ ಅನುಭವಗಳು, ತ್ಯಾಗಗಳ ಗಾಯಗಳು ಮರೆಮಾಚಿಕೊಂಡಿದ್ದವು…ಇತರರ ಕಣ್ಣೀರನ್ನು ಒರೆಸಿದ ಕೈಗಳು,ತಮ್ಮ ಕಣ್ಣೀರನ್ನು ತಾವೇ ಒರೆಸಿಕೊಳ್ಳುತ್ತಿದ್ದರು… ಎಲ್ಲರ ಸಂತೋಷವೇ ತನ್ನ ಸಂತೋಷ ಎಂದು ಕೊಂಡವರ ಬದುಕು ಒಂದು ತ್ಯಾಗದ ಗಾಥೆ,ತನ್ನ ನೋವನ್ನು ಮನದಲ್ಲಿ ಮಡಚಿಟ್ಟಕೊಂಡ ಮಹಾನ್ ಆತ್ಮವದು.ತಾಯಿಯವರ ಗಂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು .ಮಲಗಿದ ಅವರ ನಿಶಕ್ತ ದೇಹದ… ಪ್ರತಿ ಉಸಿರು ಅವರ ಆಯುಷ್ಯದ ರೇಖೆಯನ್ನು ಕಡಿಮೆಗೊಳ್ಳಿಸುತ್ತಿರುವದ  ತೋರುತ್ತಿತ್ತು. ಗಂಡನ ಕಣ್ಣಿನಲ್ಲಿ ಕಾಣುತ್ತಿದ್ದ ವೇದನೆ ಸಹಿಸದಾಗಿತ್ತು… ತಿಳಿಯದ ಅಜ್ಞಾತ ಭಯ ಕಾಡುತ್ತಿತ್ತು…..!!!! ಆದರೂ ಮುಖದಲ್ಲಿ ನೋವಿನ ಛಾಯೆ ತೋರಿಸಲಿಲ್ಲ. ಧೈರ್ಯವಾಗಿ ನಿಂತವರು. ಸಭೇ- ಸಮಾರಂಭ-ಜನರ ಮಧ್ಯೆ ಹಾಜರಾಗುತ್ತಿದ್ದರು. ಅವರಿಗೆ ಯಾವ  ಸಮಾರಂಭಕ್ಕೆ ಹೋಗುವದು ಬೇಡವಾದರೂ ಗಂಡ ಮಾತ್ರ ಹರ್ಷದಿಂದಲೇ ಅವರಿಗೆ ಹೋಗಿ ಬರಲು ಹೇಳುತ್ತಿದ್ದರು. “ನನ್ನನ್ನು ನೋಡಿಕೊಳ್ಳಲು ಆಳುಗಳು ಇದ್ದಾರಲ್ಲ ಎರಡು ದಿನದಲ್ಲಿ ನನಗೇನಾಗತದ??!! ಹೋಗಿ ಬಾ” ಅಂತ ಉತ್ಸಾಹ ತುಂಬಿಸುತ್ತಿದ್ದರು. ಒಂದು ಕಡೆ ದೇಶದ ಸ್ವಾತಂತ್ರ್ಯದ ಸಂಭ್ರಮದ ಆಚರಣೆ ಮತ್ತೊಂದು ಕಡೆ ಅತ್ಯಂತ ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಳ್ಳುವ ಭೀತಿ…ಈ ಎರಡರ ನಡುವೆ ತಾಯಿಯ ಮನಸ್ಸು ಹೋರಾಡುತ್ತಿತ್ತು.ತಮ್ಮ ವೈಯಕ್ತಿಕ ದುಃಖವನ್ನು ಮರೆತು, ಸಮಾಜದ ಹಿತಕ್ಕಾಗಿ ಸದಾ ಮುಂದೆ ಸಾಗಿದ ಅಜರಾಮರ ವ್ಯಕ್ತಿತ್ವ. *ಸಂಸಾರ ಸಾಗರವು|ಈಸಲು ಹೊರಟಾಗಏಸೊಂದು ಕಷ್ಟಗಳ ಮೊಸಳೆ -ಬಂದು ನುಸುಳೂತ ಹಾದಿ ಕಟ್ಟುವವು!! *.ಆ ಕ್ಷಣಗಳು ಅವರ ಜೀವನದ ಅತ್ಯಂತ ಕಠಿಣ ಅಧ್ಯಾಯವಾಗಿದ್ದರೂ, ತಾಯಿಯವರ ಅಂತರಂಗದ ಶಕ್ತಿಯನ್ನು ಮತ್ತಷ್ಟು ಗಾಢಗೊಳಿಸಿತು… ತಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದ ಚನ್ನಲ್ಲಪ್ಪನವರು ತನ್ನ ಹಿರಿಯ ಮಗಳ ಮದುವೆಯನ್ನಾದರೂ ಮಾಡಬೇಕೆಂದು ಹಂಬಲ ಪಟ್ಟರು ಹಾಗೆ ತನ್ನ ಮಾವನಾದ ಚನ್ನಬಸಪ್ಪ ಮಡಿಕಿ ಅವರೊಂದಿಗೆ ಸಮಾಲೋಚನೆ ಮಾಡಿ ಇತ್ಯರ್ಥಕ್ಕೆ ಬಂದರು. ಅವರ ಮಗ ರಾಜಶೇಖರ ಮಡಿಕೇರಿ (ಜಯದೇವಿ ತಾಯಿಯವರ ತಮ್ಮ)ಅತ್ಯಂತ ಸುಶೀಲರು ಸುದ್ರೂಪಿಯು ಆಗಿದ್ದ ರಾಜಶೇಖರನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನುವ ಹಂಬಲ ವ್ಯಕ್ತಪಡಿಸಿದರು……ಅದರಂತೆ ತಾಯಿಯವರು ಮನಸ್ಸಿನಿಂದ ಒಪ್ಪಿ ಮದುವೆ ಮಾಡಿ ಮುಗಿಸಿದರು. ಅತ್ಯಂತ ವಿಜೃಂಭಣೆಯಿಂದ ಮದುವೆಯನ್ನು ಮಾಡಿದರು. ಅಳಿಯನಿಗೆ ಕಾಲೇಜ್ ಹೋಗಿ ಬರಲು ಕುದುರೆಯನ್ನು ಕಾಣಿಕೆಯಾಗಿ ಕೊಟ್ಟರು. ಜಯದೇವಿ ತಾಯಿಯವರು ತಮ್ಮಗಂಡನ ಆರೋಗ್ಯದ ಸ್ಥಿತಿ ಸುಧಾರಿಸಲು ಅದೆಷ್ಟೊಂದು ವ್ರತಗಳನ್ನು ಉಪವಾಸ ತಪವಾಸಗಳನ್ನು ಮಾಡಲು ಪ್ರಾರಂಭಿಸಿದರು. ಹಾಗೆ ಸಿದ್ದರಾಮನ ದೇವಸ್ಥಾನಕ್ಕೆ ಬರಿಗಾಲಿನಿಂದ ನಡೆದುಕೊಂಡುಹೋಗುವರು… ,ಮನೆಯ ಹೂದೂಟದಲ್ಲಿ ಬೆಳೆದ ಹೂಗಳನ್ನು ತೆಗೆದುಕೊಂಡು ಸುಂದರವಾದ ಹಾರನ್ನು ಹೆಣೆದು ಸಿದ್ದರಾಮನಿಗೆ ಅರ್ಪಿಸಿ ನಂತರ ಮನೆಗೆ ಬಂದು ಪ್ರಸಾದ ತೆಗೆದುಕೊಳ್ಳುವರು .ಅಷ್ಟರೊಳಗಾಗಿ ಮೂರು ನಾಲ್ಕು ಗಂಟೆ ಆಗಿರುತ್ತಿತ್ತು ಅಲ್ಲಿಯವರೆಗೂ ಉಪವಾಸವಿರುತ್ತಿದ್ದರು. ಹೀಗಾಗಿ ಅವರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳು ಬೀಳಲು ಆರಂಭಿಸಿದವು ಅಂತ ತಾಯಿಯವರೇ ನಮಗೆ ಬಹಳಷ್ಟು ಸಲ ಹೇಳುತ್ತಿದ್ದ ನೆನಪು ……!!!ಹಾಗೆ ಮುಂಜಾನೆಯ ಫಲಹಾರ ಆರೋಗ್ಯದ ಗುಟ್ಟು ಅಂತನು ಹೇಳ್ತಾ ಇದ್ದರು . ಒಂದು ದಿನ ಸಿದ್ದರಾಮನ ಹಣೆಯ ಅಂಗಾರವ  ತಂದು ಗಂಡನ ಮಸ್ತಕಕ್ಕೆ ಹಚ್ಚಲು ಲಗುಬಗೆಯಿಂದ ಮೆಟ್ಟಲು ಏರಲು ಹೋಗಿ ಕಾಲು ಜಾರಿ ಬಿದ್ದು ಸೊಂಟ ನೋವನ್ನು ಅನುಭವಿಸಿದ್ದರು. ಆದರೆ ಈ ಸಮಾಚಾರವನ್ನು‌ ಗಂಡನಿಗೆ ಯಾರು ಹೇಳು ತಕ್ಕದ್ದಲ್ಲ ಅಂತ ಹೇಳಿದ್ದರು ಆ ನೋವಿನಲ್ಲಿ ಅವರು ಎದ್ದು ಮತ್ತೆ ಗಂಡನ ಸೂಶ್ರುಷಯದಲಿ ತೊಡಗಿದ್ದರು.ಪತಿ ಇಹಲೋಕವನ್ನು ಬಿಟ್ಟು ಹೋಗುವ ಸಮಯ ಸಮಿಪಿಸಿದಂತೆ…. ಗಂಡ ತಾಯಿಯವರಿಗೆ ಮಗುವಾದರು… ಮೇಲಿಂದ ಮೇಲೆ ತಾಯಿಯವರಿಗೆ ಕರೆದು  ಹತ್ತಿರ ಕುಳಿತುಕೊಳ್ಳಲು ಕೇಳುತ್ತಿದ್ದರು. ಆತುರದಿಂದ |ಓತು ನೋಡುವ ಕಣ್ಣು,ಆತುಮಕ್ಕೆ ಶಾಂತಿ ನೀಡೂವ- ಪರಿಶುದ್ಧ ಮಾತುಗಳನ್ನು ಕೇಳಿಸುವ ತವಕ ||  ಸತತವಾಗಿ ಬಸವಣ್ಣನ ವಚನಗಳನ್ನು ಪಠಣ ಮಾಡಲು ಕೇಳಿಕೊಳ್ಳುತ್ತಿದ್ದರು .ಹಾಗೆ ಮಂತ್ರಗಳ ಉಚ್ಚರಣೆ ಮಾಡಲು ಹೇಳುತ್ತಿದ್ದರು .ಅವರ ಜೊತೆಗೆ ತಾನು ಕೂಡ ಆ ಮಂತ್ರ ಪಠಣವನ್ನು ಮಾಡುತ್ತಿದ್ದರು. “ನಿಮಗೆ ಆಯಾಸವಾಗಿತ್ತು ಜೋರಾಗಿ ಹೇಳಬೇಡಿ ನಾನು ಹೇಳ್ತೀನಿ ಕೇಳ್ರಿ “ಅಂತ ತಾಯಿಯವರು ಬಹಳಷ್ಟು ಸಲ ಹೇಳಿದರೂ ಅದಕ್ಕೆ ಅವರು ನಕ್ಕು “ದೇವರ ಹೆಸರು ಹೇಳಿದರೆ ಆಯಾಸ ಯಾತರದು” ಅಂದು ತಾವು ಕೂಡ ಜೋರ ಜೋರಾಗಿ ಮಂತ್ರಗಳನ್ನು  ಹೇಳುತ್ತಿದ್ದರು. ಆ ದಿನ ಅದೇಕೋ ಪತಿಯ ಆರೋಗ್ಯ ಕ್ಷೀಣವಾಗ್ತಾ ಇದೆ ಅಂತ ಅನಿಸಿದಾಗ ತಾಯಿಯವರು   ಒಂದು ನಿಮಿಷವೂ ಗಂಡನಿಂದ ದೂರ ಸರಿಯಲಿಲ್ಲ .ಕೊನೆಗೆ ಸಂಜೆ ಹೊತ್ತಿಗೆ  ಸ್ವಲ್ಪ ಪ್ರಸಾದ ತೆಗೆದುಕೊಂಡು ಬರಲು ಒತ್ತಾಯಿಸಿದರೂ ಅವರು ಅಲ್ಲಿಂದ ಕದಲಲಿಲ್ಲ ….ತಾಯಿಯವರ ತಂದೆ ಬಂದಾಗ “ಈಗ ನಿಮ್ಮ ತಂದೆ ಬಂದಿದ್ದಾರೆ ಸ್ವಲ್ಪ ಹೋಗು ಹೊಟ್ಟೆ ಏನಾರು ತೆಗೆದುಕೊಂಡು ಬಾ”ಅಂತ ಒತ್ತಾಯಿಸಿದರು..ಆಗ ತಾಯಿಯವರು ಅಲ್ಲಿಂದ ಹೋಗಿ ಸ್ನಾನ ಪೂಜೆಯನ್ನು ಮುಗಿಸಿದರು . ಅವರಿಗೆ ಪ್ರಸಾದ ಸೇರಲೇ ಇಲ್ಲ ಅಂದೆಕೋ ಏನೋ ಕಳೆದು ಹೋಗುವ ತಳಮಳ ಅವರಲ್ಲಿ ಇತ್ತು . “ಗಂಡನನ್ನು ನೀನು ನೋಡಿಕೊಳ್ಳುವುದು ಹೇಗೆ ಸಾಧ್ಯ ಹೀಗೆ ಉಪವಾಸ ಇದ್ದರೆ “ಅಂತ ಅತ್ತಿಯಂದಿರ ಆಗ್ರಹಿಸಿದ್ದಕ್ಕೆ  ಒಲ್ಲದ ಮನಸ್ಸಿನಿಂದ ಒಂದು ಬಟ್ಟಲು ಹಾಲನ್ನು ಕುಡಿದು…. ಸಿದ್ದರಾಮನ  ಹಣೆಯ ಅಂಗಾರ ತೆಗೆದುಕೊಂಡು ಪತಿಯ ಹತ್ತಿರ ಬಂದರು.    ಅವರ ಹತ್ತಿರವಿದ ಆಳ ಶಂಕರವನ್ನು ” ಇನ್ನು ನೀನು ಹೋಗಿ ಪ್ರಸಾದ ತೆಗೆದುಕೊಂಡು ಬಾ, ನಾನು ಇರುತ್ತೇನೆ ಅಂದರು ಎಂಥ ಪರಿಸ್ಥಿತಿಯಲಿಯೂ ಎಲ್ಲರ ಕಾಳಜಿಯನ್ನು ಮಾಡುವುದನ್ನು ಮಾತ್ರ ಜಯದೇವಿ ತಾಯಿಯವರು ಮರೆಯುತ್ತಿರಲಿಲ್ಲ .ಗಂಡ ಚನ್ಮಲ್ಲಪ್ಪನವರು ದೀರ್ಘವಾಗಿ ತಾಯಿಯವರನ್ನು ಒಮ್ಮೆ ನೋಡಿ  ಮಂತ್ರ ಪಠಣ ಮಾಡಲು ಮತ್ತೇ ಹೇಳಿದರು *ಸಾವಿಗೆ ಅಂಜದಿರು |ನೋವಿಗೆ ಕುಗ್ಗದಿರುಭವ ಮಾಲೆಯಲ್ಲಿ ಸಿಗದಿರು- ಸುದೈವದೇವನ ಸ್ಮರಣೆಯ ಮರೆಯದಿರು !!* ಎನ್ನುವಂತೆ ಅಂತಿಮ ಕ್ಷಣಗಳು ಹತ್ತಿರವಾಗುತ್ತಿವೆ ಎಂಬುದನ್ನು ತಿಳಿಯಲು ತಡವಾಗಲಿಲ್ಲಮನೆಯಲ್ಲಿ ಒಂದು ವಿಚಿತ್ರ ವಾತಾವರಣ. ವಿದಾಯದ ಮುನ್ನದ ಭಾರವಾದ ನಿಶ್ಶಬ್ದ.ಮಂತ್ರ ಹೇಳುತ್ತಾ ಹೇಳುತ್ತಲೇ ತಾಯಿಯವರ ಸ್ವಲ್ಪ ಕಣ್ಣು ಕುಳಿತಲ್ಲಿಯೇ ಕಣ್ಣು ರೆಪ್ಪೆಗಳು ಮುಚ್ಚಿದ್ದವು…..ಪತಿ ತಾಯಿಯವರ ಹೆಸರನ್ನು ಜೋರಾಗಿ ಕೂಗಿ ಕರೆದರು ಗಡಿಬಿಡಿಸಿಕೊಂಡು ….. ಜಯದೇವಿ ತಾಯಿಯವರು” ಏನಾಯಿತು…. !!??ಅಂತ ಕೇಳಿದರು.ಪತಿ ನಿಧಾನವಾಗಿ ತಾಯಿಯವರ ಕೈ ಹಿಡಿದರು…, ಕಣ್ಣಲ್ಲಿ ಅನೇಕ ಕೇಳಬೇಕಾದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಸುಮ್ಮನೆ ನೋಡಿದರು.“ಮಂತ್ರ ಪಠಿಸು…”ಅಂದರುಆ ಮಾತು ಕೇಳುತ್ತಿದ್ದಂತೆ ತಾಯಿಯವರ ಹೃದಯ ನಡುಗಿತು…!!!ಆದರೂ ಅವರು ಕುಗ್ಗಲಿಲ್ಲ.ಕಣ್ಣೀರನ್ನು ಒಳಗೇ ನುಂಗಿ, ದೈರ್ಯವನ್ನು ಧರಿಸಿ ಮಂತ್ರಗಳನ್ನು ಜಪಿಸಲು ಆರಂಭಿಸಿದರು.“ಓಂ… ”ಅವರ ಧ್ವನಿ ಮೊದಲು ಸ್ವಲ್ಪ ನಡುಗಿತು…ಆದರೆ ನಂತರ ನಿಧಾನವಾಗಿ ಗಟ್ಟಿಯಾಗತೊಡಗಿತು.ವಚನಗಳನ್ನು ಹೇಳಲಾರಂಭಿಸಿದರು. ಒಂದು ಕಡೆ ದೇವರ ಸ್ಮರಣೆ, ಮತ್ತೊಂದು ಕಡೆ ಜೀವದ ಕೊನೆಯ ಹಂತ…ಆದರೆ ಅಚ್ಚರಿಯ ಸಂಗತಿಗಂಡನ ಧ್ವನಿಯೇ ಹೆಚ್ಚು ಜೋರಾಗಿ ಕೇಳಿಸತೊಡಗಿತಹಾಸಿಗೆಯ ಮೇಲೆ ನಿಶಕ್ತನಾಗಿ ಮಲಗಿದವರು, ತನ್ನ ಉಳಿದ ಶಕ್ತಿಯನ್ನೆಲ್ಲಾ ಸೇರಿಸಿಕೊಂಡು ತಾಯಿಯವರಿಗಿಂತಲೂ ಜೋರಾಗಿ ಮಂತ್ರಗಳನ್ನು ಉಚ್ಚರಿಸಲಾರಂಭಿಸಿದರು…… ಮಂತ್ರಪಠನವು..ಜೀವನದ ಅಂತಿಮ ಘೋಷಣೆಯಾಗಿತ್ತು….!!!!! ಒಂದು ಆತ್ಮ ತನ್ನ ಪಯಣವನ್ನು ಮುಗಿಸುವ ಮುನ್ನದ ಶುದ್ಧ ಸಂಕಲ್ಪ…ತಾಯಿಯವರ ಕಣ್ಣೀರು ತಡೆಯಲಾಗದೆ ಹರಿಯಲಾರಂಭೀಸಿದ್ದವು…ಆದರೂ ಜಪ ನಿಲ್ಲಿಸಲಿಲ್ಲ. *ಅತ್ತತ್ತು ಕಣ್ಣಿರು |ಬತ್ತಿ ಹೋಗಿವು ಇಂದುಹೊತ್ತಿಸಿದ ಒಲಿ ಆರುವದು-ನಿನಗಾಗಿಹೋತ್ತಿದ ಎದೆಯು ಆರದು||* ಪ್ರತಿ ಪದವೂ ಹೃದಯವನ್ನು ಕೀಳುತ್ತಿದ್ದರೂ, ಪಠಣ ನಿಲ್ಲಿಸಲಿಲ್ಲ ಅಂತಿಮ ಕ್ಷಣಗಳು ಸಮಿಪಿಸುತಿದ್ದಂತೆಗಂಡನ ಧ್ವನಿ ನಿಧಾನವಾಗಿ ಕುಂದುತ್ತಾ ಹೋಯಿತು…ಆದರೆ ಕೊನೆಯ ಉಸಿರಿನವರೆಗೂ ಮಂತ್ರವನ್ನು ಬಿಟ್ಟಿರಲಿಲ್ಲ…ಒಂದು ದೀರ್ಘ ಶ್ವಾಸ… ಶಾಂತ ಮುಖ…ಮತ್ತೊಂದು ಕ್ಷಣ…..ಎಲ್ಲವೂ ನಿಶ್ಶಬ್ದ… ಧ್ವನಿ ನಿಂತಿತು…ಆತ್ಮ ಶಾಂತವಾಗಿತ್ತು …!!!!! *ಕಣ್ಣೊಳಗಿನ ತೇಜ| ಬಣ್ಣಿಸಲಾಗುವುದುಹುಣ್ಣಿಮೆಯ ಚಂದ್ರನ ತಂಡವ -ಬೀರುತ್ತಾಕಣ್ಣು ಚಲಿಸದೆ ನಿಶ್ಚಲ||* ತಾಯಿಯವರ ಕೈಯಲ್ಲೇ ಅವರ ಜೀವ ಕೊನೆಯ ಬಾರಿ ನಡುಗಿ, ಶಾಂತವಾಗಿ ನಿಂತುಹೋಯಿತು… ಜೀವನದ ಅಂತ್ಯ… ಆತ್ಮದ ಪವಿತ್ರ ಮುಕ್ತಿಯ ಕ್ಷಣ…ತಾಯಿಯವರು ಕಣ್ಣೀರಿನಲ್ಲಿ ಮುಳುಗಿದರು . *ಸಮಾಧಾನವ ಹೇಳಿ| ರವಿಸುವ ಮಾತಿಲ್ಲ ಮಮತೆಯ ಬೀರುವ ನೋಟಿಲ್ಲ- ಓ ತಂದೆಆತುಮಕೆ ಶಾಂತಿ ಹೇಳವರ ಇನ್ನು ಇಲ್ಲ|| ಎಂದು ಅನ್ನಿಸಿದರೂ *ಆಯಾಸವಿಲ್ಲದೆ |ಕಾಯ ಬಯಲಾಯಿತು ಹಾಯಗೊಂಡಿತ್ತು ಎನಮನ- ಸಿದ್ದನ ಕರುಣೆಯಛಾಯೆ ಇದಂತೆ ತೋರಿತ್ತು||* ತಮ್ಮ ಜೀವನ ಸಂಗಾತಿ ದೇವರ ನಾಮಸ್ಮರಣೆಯಲ್ಲೇ ಕೊನೆಯ ಉಸಿರೆಳೆದಿದ್ದರು.ಅದು ದೇವರಲ್ಲಿ ಒಂದಾದ ಕ್ಷಣ ಶಾಂತಿಯಲಿ ಶಾಶ್ವತ ವಿದಾಯದ ಕ್ಷಣ…!!! ಮನಸ್ಸಿಗೆ ತುಸು ನೆಮ್ಮದಿ ತಂದಿತ್ತು. *ನೆನೆಯಲಿನ್ಯಾರಿಗೆ |ಮನ ಮಂದಿರದೊಳುಮನವೇ ಸಜ್ಜೆಯಾಗಿ ಪರಿಣಮಿಸಿ- ಎನ್ನಯ್ಯಮನವಿ ಲಿಂಗವಾಗಿ ಬೆಳಗಿತ್ತು||* ಪತಿಯ ವಿಯೋಗದಿಂದ ಪೂರ್ತಿಯಾಗಿ ಅವರು ಸಿದ್ದರಾಮನ ಭಕ್ತಿಯಲಿ ಲೀನವಾದರು.  ಲಿಂಗಪತಿ ಶರಣಸತಿಯನ್ನಾಗಿಸಿ ಬಾಳಲಾರಂಭಿಸಿದರು . *ಹುಟ್ಟಿದ ಗುಣ ಕಳೆದು| ಕೊಟ್ಟರು ಲಿಂಗವನಟ್ಟಿತು ಎನ ಮನ ಪ್ರಾಣ -ಭಾವವಮುಟ್ಟಿ ಲಿಂಗ ಧ್ಯಾನ ಮಾಡುವದಕ||* ಸಂಸಾರದ ವ್ಯಾಮೋಹವನ್ನೆಲ್ಲ ಕಳಚಿ… ಶರಣರ ಆಣತಿಯಂತೆ ಇಂದು ಸಂಸಾರವನ್ನು ಮಾಡಿ ಜಗವ ಗೆದ್ದು ಲಿಂಗಯ್ಯನ ಪತಿಯಾಗಿ ಸ್ವೀಕರಿಸಿ ಬಾಳಹತ್ತಿದ್ದರು… ಈಗ ಪೂರ್ತಿಯಾಗಿ ಗುರು ಸಿದ್ದರಾಮನ ಕೂಸಾಗಿ ಬಾಳಲು ಪ್ರಾರಂಭಿಸಿದರು. *ಕರುಣೆಯ ಕಂಗಳ |ಅರುಣೋದಯವಾಯಿತು ಗುರುವಿನ ಗುರು ಸಿದ್ದರಾಮನ-ದಯೆಯಿಂದದುರಿತ ಕರ್ಮವು ಹರಿಯಿತು||*ಎನ್ನುವಂತೆಸೊನ್ನಲಿಗೆಯಗುರು ಸಿದ್ದರಾಮನಲಿ ಒಂದಾಗಿ ನಿಂದರು.ಚೆನ್ನ ಮಲ್ಲಪ್ಪನವರು ಹೀಗೆ ಐದು ಮಕ್ಕಳು ಐದು  ಅತ್ತಿಯಂದಿರು ತಮ್ಮ- ತಮ್ಮನ ಹೆಂಡತಿ ಮಕ್ಕಳು ಹಾಗೂ ಅಪಾರವಾದ ಆಸ್ತಿಯ ಜವಾಬ್ದಾರಿ ಬಿಟ್ಟು ಭೂಲೋಕ ತೇಜಿಸಿದ್ದರು. ಚೆನ್ನ ಮಲ್ಲಪ್ಪನವರಿಗೆ ತಾಯಿಯವರ ಮೇಲೆ ಅಪಾರವಾದ ವಿಶ್ವಾಸವಿತ್ತು ,ಅಭಿಮಾನವಿತ್ತು “ಎಂತಹ ಕಷ್ಟಗಳು ಬಂದರೂ ನಿಭಾಯಿಸಿಕೊಂಡು ಹೋಗುವ,ಎಲ್ಲರ ಉದ್ಧಾರ ಮಾಡುವ ಕೈಗಳು ನಿನ್ನವು  ನಾನು ನಿಶ್ಚಿತವಾಗಿ ಎಲ್ಲವನ್ನು ಬಿಟ್ಟು ಹೋಗುತ್ತಿದ್ದೇನೆ” ಅಂತ ಹೇಳಿದ್ದರು .ಹಾಗೆ ಮುಂದೆ ತಾಯಿಯವರು ಇಡೀ ಆಸ್ತಿಯ ಜವಾಬ್ದಾರಿಯನ್ನು ಹೊತ್ತು ಅದನ್ನು ಒಂದು ಇಂಚನ್ನು ಕೂಡ ಮಾರದೇ ಎಲ್ಲವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದರು.(ಮುಂದುವರೆಯುವುದು) ಸವಿತಾ ದೇಶಮುಖ  

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಶಿವಯೋಗಿನಿ ಸಜ್ಜಲ ಗುಡ್ಡದ ಶರಣಮ್ಮ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರು ಸಾರಿದ ಬಸವ ತತ್ವವು ಮಾನವೀಯತೆ, ಸಮಾನತೆ ಮತ್ತು ಕಾಯಕ ನಿಷ್ಠೆಯ ಮೇಲೆ ನಿಂತಿದೆ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಇಡೀ ಮನುಕುಲಕ್ಕೆ ಅನ್ವಯಿಸುವ ಜೀವನ ಮಾರ್ಗವಾಗಿದೆ. ಇಂತಹ ಅಪೂರ್ವವಾದ ಸಮಾನತೆಯ ಆಂದೋಲನವನ್ನು ಮುಂದಿನ ಜನಾಂಗಕ್ಕೆ ಒಯ್ದ ಕೆಲವೇ ಕೆಲವು ಶಿವಯೋಗ ಸಾಧಕರಲ್ಲಿ ಸಜ್ಜಲ ಗುಡ್ಡದ ಶರಣಮ್ಮ. ಸಜ್ಜಲಗುಡ್ಡದ ಶರಣಮ್ಮನವರು (ಕ್ರಿ.ಶ. 1878- 1981) ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಸಜ್ಜಲಗುಡ್ಡದಲ್ಲಿ ನೆಲೆಸಿದ್ದ ಒಬ್ಬ ಶ್ರೇಷ್ಠ ಶಿವಶರಣೆ ಮತ್ತು ಮಹಿಳಾ ಸಂತರು. ಇವರನ್ನು ಭಕ್ತರು ಶ್ರದ್ಧಾಭಕ್ತಿಯಿಂದ “ಸಜ್ಜಲಶ್ರೀ ಶರಣಮ್ಮ ತಾಯಿ” ಎಂದು ಕರೆಯುತ್ತಾರೆ.  *ಜೀವನದ ಹಿನ್ನೆಲೆ* ಜನ್ಮ: ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಲಿಂಗಣ್ಣ ಮತ್ತು ಲಿಂಗಮ್ಮ ಹಾಲುಮತದ   ದಂಪತಿಗಳ ಮಗಳಾಗಿ ಜನಿಸಿದರು. ಮೂಲ ಹೆಸರು: ಇವರ ಬಾಲ್ಯದ ಹೆಸರು ಯಮುನಮ್ಮ. ವೈರಾಗ್ಯ: ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು, ಬಡತನ ಮತ್ತು ಬರಗಾಲದ ಕಷ್ಟಗಳನ್ನು ಅನುಭವಿಸಿ ಲೌಕಿಕ ಜೀವನದ ಮೇಲೆ ವೈರಾಗ್ಯ ತಳೆದರು. ದೀಕ್ಷೆ: ಗುಡದೂರಿನ ದೊಡ್ಡಬಸವಾರ್ಯ ಶರಣರಿಂದ ಲಿಂಗದೀಕ್ಷೆ ಪಡೆದು, ಬಳ್ಳಾರಿಯ ಸಕ್ಕರಿ ಕರಡೆಪ್ಪನವರು ಸ್ಥಾಪಿಸಿದ ಶ್ರೀ ಗುರು ಬಸವ ಶಾಲೆಯಲ್ಲಿ ಬಸವ ತತ್ವದ ಶಿಕ್ಷಣವನ್ನು ಪಡೆದು  ಮುಂದೆ ಸಜ್ಜಲಗುಡ್ಡದಲ್ಲಿ ನೆಲೆಸಿ ಕಠಿಣ ತಪಸ್ಸು ಮತ್ತು ಶಿವಯೋಗವನ್ನು ಆಚರಿಸಿದರು.  ಸಮಾಜ ಸೇವೆ ಮತ್ತು ಆಧ್ಯಾತ್ಮ ಬಸವ ತತ್ವ: 12ನೇ ಶತಮಾನದ ಬಸವಾದಿ ಶರಣರ ತತ್ವಗಳಾದ ಕಾಯಕ ಮತ್ತು ದಾಸೋಹವನ್ನು ಪಾಲಿಸಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದರು. ಸಮಾನತೆ: ಜಾತಿ, ಮತ, ಪಂಥಗಳ ಬೇಧವಿಲ್ಲದೆ ದೀನ-ದಲಿತರ ಕಲ್ಯಾಣಕ್ಕಾಗಿ ಶ್ರಮಿಸಿದರು. ಬಾಲ್ಯ ಮತ್ತು ಆಧ್ಯಾತ್ಮಿಕ ಪಯಣ ಬಾಲ್ಯದ ಕಷ್ಟಗಳು: 1878ರ ಸುಮಾರಿಗೆ ಜನಿಸಿದ ಯಮುನಮ್ಮನವರು (ಶರಣಮ್ಮ) ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಕುಟುಂಬವು ತೀವ್ರ ಬಡತನ ಮತ್ತು ಬರಗಾಲವನ್ನು ಎದುರಿಸಿದಾಗ, ಅವರು ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ಕೆಲಸಕ್ಕಾಗಿ ವಲಸೆ ಹೋಗಬೇಕಾಯಿತು. ವಚನಗಳ ಪ್ರಭಾವ: ಇವರು ಮೂರು ವರ್ಷಗಳ ಕಾಲ ಅತ್ಯಂತ ನಿಷ್ಠೆಯಿಂದ ವಚನಗಳನ್ನು ಅಧ್ಯಯನ ಮಾಡಿದ್ದರು. ಸಮಗ್ರ ವಚನ ಸಂಪುಟವೇ ಅವರ ಮನದಲ್ಲಿತ್ತು ಮತ್ತು ಅವರ ಪ್ರತಿಯೊಂದು ಮಾತಿನಲ್ಲೂ ವಚನಗಳೇ ಇರುತ್ತಿದ್ದವು. ಗುರುಗಳು: ಗುಡದೂರು ಗ್ರಾಮದ ಶ್ರೀ ದೊಡ್ಡಬಸವಾರ್ಯ ಶರಣರು ಇವರ ಆಧ್ಯಾತ್ಮಿಕ ಗುರುಗಳು. ಅವರಿಂದ ಲಿಂಗದೀಕ್ಷೆ ಪಡೆದ ನಂತರ ಇವರು ಶಿವಯೋಗಿನಿಯಾದರು.  ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ಕೊಡುಗೆ ಕೇವಲ ಆಧ್ಯಾತ್ಮಕ್ಕೆ ಸೀಮಿತವಾಗದೆ, ಶರಣಮ್ಮನವರು ಸಮಾಜದ ಏಳಿಗೆಗಾಗಿ ಶ್ರಮಿಸಿದರು: ಶಿಕ್ಷಣ ಸಂಸ್ಥೆಗಳು: ಮಠದ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಅನೇಕ ಶಾಲೆ ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕಂಬಳಿಹಾಳ, ಮತ್ತು ಕಂದಗಲ್ ಗ್ರಾಮಗಳಲ್ಲಿ ಇವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ಇಂದಿಗೂ ಜ್ಞಾನದಾಸೋಹ ಮಾಡುತ್ತಿವೆ. ದಾಸೋಹ ಪರಂಪರೆ: ಸಜ್ಜಲಗುಡ್ಡದ ಮಠವು ಆಧ್ಯಾತ್ಮಿಕ ಚಿಂತನೆ ಮಾತ್ರವಲ್ಲದೆ, ಸಂಸ್ಕೃತ, ವಚನ  ಪಾಠಗಳ ಉಚಿತ ಬೋಧನೆ ಮತ್ತು ಉಚಿತ ಅನ್ನದಾಸೋಹಕ್ಕೆ ಹೆಸರಾಗಿದೆ. ಅಧ್ಯಯನ ಪೀಠ: ಶರಣಮ್ಮ ತಾಯಿಯವರ ಹೆಸರಿನಲ್ಲಿ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕೆಂಬ ಮನವಿಯನ್ನು ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಒಕ್ಕೂಟವು ಸಲ್ಲಿಸಿದೆ.  ಲಿಂಗೈಕ್ಯ: ಇವರು 102 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ, 1981ರ ಏಪ್ರಿಲ್ 24ರಂದು ಸಜ್ಜಲಗುಡ್ಡದಲ್ಲೇ ಲಿಂಗೈಕ್ಯರಾದರು. ಜಾತ್ರೆ: ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಶರಣಮ್ಮ ತಾಯಿಯವರ ದೊಡ್ಡ ಮಟ್ಟದ ಜಾತ್ರೆ ಮತ್ತು ರಥೋತ್ಸವ ಜರುಗುತ್ತದೆ.  ಸಜ್ಜಲಗುಡ್ಡ ಮಠ: ಇವರು ಸ್ಥಾಪಿಸಿದ ಸಜ್ಜಲಗುಡ್ಡದ ಮಠವು ಇಂದಿಗೂ ಶಿಕ್ಷಣ, ಉಚಿತ ಅನ್ನದಾಸೋಹ ಮತ್ತು ಆಧ್ಯಾತ್ಮಿಕ ಚಿಂತನೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆರಾಧನೆ ಮತ್ತು ಮಹಿಮೆ ಶರಣಮ್ಮನವರು ಅನೇಕ ಪವಾಡಗಳನ್ನು ಮಾಡಿದ್ದಾರೆಂಬ ನಂಬಿಕೆ ಭಕ್ತರಲ್ಲಿದೆ. ಇವರನ್ನು ಈ ಭಾಗದ ಆರಾಧ್ಯ ದೈವವೆಂದು ಪರಿಗಣಿಸಲಾಗುತ್ತದೆ. ನಡೆದಾಡುವ ದೈವಿ ಶಕ್ತಿ ಎಂದು ಜನರ ಭಾವನೆ. ಕರ್ಮಠಗಳನ್ನು ಕಳೆದು ಸ್ವಚ್ಛ ಸುಂದರ ಬಸವ ತತ್ವ ಪ್ರಸಾರ ಮಾಡಿದ ಅಧಿದೇವತೆ ಸಜ್ಜಲ ಗುಡ್ಡದ ಶರಣಮ್ಮ. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಇತರೆ

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು

ಕಲಾ ಸಂಗಾತಿ ಗೊರೂರು ಅನಂತರಾಜು “ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿ ಅವರಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ” ಹಾಸನದ ನಿವೃತ್ತ ಚಿತ್ರಕಲಾ ಶಿಕ್ಷಕರು ಕಲಾವಿದರು  ಬಿ.ಎಸ್.ದೇಸಾಯಿ ಅವರ ಕಲಾಸಾಧನೆಗೆ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ೨೦೨೫-೨೬ನೇ ಸಾಲಿನ ಗೌರವ ಪ್ರಶಸ್ತಿ ಒಲಿದು ಬಂದಿದೆ. ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ದಿನಾಂಕ ೨-೧೦-೧೯೬೫ ರಂದು ಜನಿಸಿದ ಇವರು ಹಾಸನದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿಯೇ ನೆಲೆಸಿದ್ದಾರೆ. ನಾನು ಹಾಸನಕ್ಕೆ ಬಂದು ೩೬ ವರ್ಷಗಳಾದವು ಗುರುವೇ (ಗೊರೂರು ಅನಂತರಾಜು) ಈ ಪರಿಸರವು ನನಗೆ ಪ್ರಿಯವಾಗಿ ಒಗ್ಗಿಹೋಯಿತು. ಬಂದ ಹೊಸದರಲ್ಲಿ ಊರ ಕಡೆಗೆ ವರ್ಗ ಮಾಡಿಸಿಕೊಳ್ಳುವ ಆಲೋಚನೆ ಇತ್ತಾದರೂ ಕಾಲಕ್ರಮೇಣ ಇಲ್ಲಿಯ ಕಲಾವಿದರು, ಸಾಹಿತಿಗಳ ಒಡನಾಟದಲ್ಲಿ ಇಲ್ಲಿಯೇ ಮನೆ ಮಾಡಿಕೊಂಡೆ ಎಂದು ಮನದುಂಬಿ ಹೇಳಿದರು. ಇವರು ಚಿತ್ರಕಲಾ ವ್ಯಾಸಂಗವು   ಪ್ರಿ-ಯೂನಿವರ್ಸಿಟಿ ಕೋರ್ಸ್ (ವಾಣಿಜ್ಯ ಕಲೆ), ಡ್ರಾಯಿಂಗ್ ಮತ್ತು ಪೇಂಟಿAಗ್‌ನಲ್ಲಿ ಡಿಪ್ಲೊಮಾ, ಡಿಪ್ಲೊಮಾ ಇನ್ ಆರ್ಟ್ ಮಾಸ್ಟರ್, ಮಾಸ್ಟರ್ ಆಫ್ ವಿಷುಯಲ್ ಆರ್ಟ್  ಆದರ್ಶ ಫೈನ್ ಆರ್ಟ್ ಕಾಲೇಜ್ ಇಂಡಿ ಬಿಜಾಪುರ ಜಿಲ್ಲೆ, ಅಮೂರ್ತ ಕಲೆಯ ಕಲಾವಿದರು:ಅಮೂರ್ತತೆಯ ಬೆಳವಣಿಗೆಯ ಹಿಂದಿನ ಪ್ರೇರಣೆಗಳಲ್ಲಿ ಒಂದು ವಿಷಯಗಳ ಪ್ರಪಂಚದಿAದ ದೂರವಿರಲು ಅನೇಕ ಕಲಾವಿದರ ಬಲವಾದ ಬಯಕೆಯಾಗಿದೆ. ಲೌಕಿಕ ಭೌತವಾದದ ಉಲ್ಲೇಖವನ್ನು ಬಹಿಷ್ಕರಿಸುವುದು ಅಮೂರ್ತ ಕಲಾವಿದರ ಕೇಂದ್ರ ಗುರಿಯಾಗಿದೆ. ಇದು ಔಪಚಾರಿಕ ಪರಿಶುದ್ಧತೆಯ ಹುಡುಕಾಟಕ್ಕೆ ಮತ್ತು ಅತಿಕ್ರಮಣಕ್ಕಾಗಿ ನಿರಂತರವಾದ ಮಾನವ ಅನ್ವೇಷಣೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಪರಿಗಣನೆಗೆ ಎರಡಕ್ಕೂ ಕಾರಣವಾಯಿತು. ದೇಸಾಯಿಯವರ ಕಲೆಯ ಪಯಣವೂ ಅದೇ ಹಾದಿಯಲ್ಲಿದೆ. ಯೋಗ ಮತ್ತು ಧ್ಯಾನದ ಸ್ವಾಭಾವಿಕತೆಯ ವರ್ಷಾಚರಣೆಯು ಅವರ ಹೊಸ ಅನ್ವೇಷಣೆಗೆ ಸರಿಹೊಂದುವAತೆ ಆಧ್ಯಾತ್ಮಿಕ ಭಾಷೆಯನ್ನು ಹುಡುಕುವಂತೆ ಮಾಡುತ್ತದೆ. ಸುತ್ತಮುತ್ತಲಿನ ಜೀವನದಲ್ಲಿ ಪರಮಾರ್ಥದ ಅನ್ವೇಷಣೆಯಲ್ಲಿ ಅವರು ತನ್ನದೇ ಆದ ರೀತಿಯಲ್ಲಿ ಅದರ ಸಾರವನ್ನು ಅಮೂರ್ತಗೊಳಿಸುತ್ತಾರೆ. ಆಕಸ್ಮಿಕ ಟೆಕಶ್ಚರ್‌ಗಳಿಂದ ಸ್ಫೂರ್ತಿ ಪಡೆದ ಅವರು ಹೊಸ ದೃಶ್ಯ ಪ್ರಪಂಚವನ್ನು ರಚಿಸಲು ಕ್ಯಾನ್ವಾಸ್‌ನಲ್ಲಿ ತೇವವಾದ ಎಣ್ಣೆ ಬಣ್ಣಗಳ ಕೆಲವು ಭಾಗವನ್ನು ತೆಗೆದುಹಾಕುವ ಕೆರೆದು ಅಳಿಸುವ ವಿಧಾನವನ್ನು ರೂಪಿಸಿದರು. ಅಂತಿಮ ಫಲಿತಾಂಶವೆAದರೆ ಐಷಾರಾಮಿ ಬಣ್ಣದ ಆರ್ಕೆಸ್ಟೆçÃಶನ್ ಮತ್ತು ಅದ್ದೂರಿ ಸಂಯೋಜನೆಗಳು. ಕೆಲವೊಮ್ಮೆ ಅಧೀನಗೊಂಡ ತೇಲುವ ರೂಪಗಳು ಕೆಲವು ಗುರುತಿಸಬಹುದಾದ ರೂಪಗಳ ಉಪಸ್ಥಿತಿಯನ್ನು ಸೂಚಿಸುತ್ತವೆಯಾದರೂ ಕಲಾವಿದನ ಉದ್ದೇಶವು ಎದ್ದುಕಾಣುವ ಮಾನಸಿಕ ಭಾವನೆಗಳನ್ನು ಹೆಚ್ಚಿಸುವುದು. ಅವರ ವರ್ಣಚಿತ್ರಗಳು ಈ ಬಣ್ಣ ಮತ್ತು ವಿನ್ಯಾಸದ ಕಾರಣದಿಂದಾಗಿ ಮತ್ತು ಸರಳವಾದ ಸುಂಟರಗಾಳಿ ರೂಪಗಳ ಮೇಲೆ ಕೇಂದ್ರೀಕರಿಸುವ ಮೂಲಕ ಪ್ರೇಕ್ಷಕರನ್ನು ಹೀರಿಕೊಳ್ಳುತ್ತವೆ. ಅವರ ಪ್ರತಿಯೊಂದು ಕೃತಿಯು ಭವ್ಯವಾದ ದೃಶ್ಯ ಕಾವ್ಯದ ಭಾವನೆಗಳನ್ನು ಉಂಟುಮಾಡುತ್ತದೆ.  ಸಿ.ಎಸ್.ಕೃಷ್ಣಶೆಟ್ಟಿ ವಿಮರ್ಶಕರು  ಅಭಿಪ್ರಾಯದಂತೆ   ದೇಸಾಯಿಯವರ ಕೆಲಸವನ್ನು ಅವರ ಆತ್ಮದ ಭೂದೃಶ್ಯ ಎಂದು ಕರೆಯಬಹುದು. ಆದರೆ ಇದು ಕಲಾವಿದ ಭಾವುಕ ಎಂದು ಸೂಚಿಸುವುದಿಲ್ಲ. ಅವರ ವರ್ಣಚಿತ್ರಗಳು ಭಾರತದ ಆಳವಾದ ವ್ಯಕ್ತಿತ್ವದ ಖಚಿತವಾದ ಪ್ರಭಾವವನ್ನು ಹೊಂದಿವೆ. ಅವರ ಬಣ್ಣಗಳ ವ್ಯಾಪ್ತಿಯು ಎದ್ದುಕಾಣುವ ಆದರೆ ಸಮಚಿತ್ತದಿಂದ ಅವರು ಸಾಧಿಸಿದ ಒಂದು ನಿರ್ದಿಷ್ಟ ಪರಿಶುದ್ಧತೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಕುಂಚದ ಹೊಡೆತಗಳು ಅತೀಂದ್ರಿಯ ತೀವ್ರತೆಯನ್ನು ಎತ್ತಿ ತೋರಿಸುತ್ತವೆ. ಅವರ ಆಕೃತಿಗಳು ಅಮೂರ್ತವಲ್ಲ ಆದರೆ ಸಾಮರಸ್ಯ. ಇದು ಸಂಯೋಜನೆಗಳು  ನಿಗರ್ವಿಯಾಗಿ ಅಸ್ತಿತ್ವದಲ್ಲಿರಲು ಶಕ್ತಗೊಳಿಸುತ್ತದೆ. ಸಂಯೋಜನೆಗಳ ಮನೋಧರ್ಮವು ಒಟ್ಟಾರೆ ಮನಸ್ಥಿತಿಗೆ ಪೂರಕವಾಗಿದೆ, ಮಾನಸಿಕ ಅಥವಾ ಆಧ್ಯಾತ್ಮಿಕ ಅಂಶಗಳಿAದ ಗುಣಗಳನ್ನು ಪುಷ್ಟೀಕರಿಸಲಾಗುತ್ತದೆ. ಅವರ ಕಲೆಯು ಮೂಲಭೂತವಾಗಿ ಸಂತಾನ ಮೌಲ್ಯಗಳೊಂದಿಗೆ ಬಲವಾದ ನಂಬಿಕೆಯ ಅಭಿವ್ಯಕ್ತಿಯಾಗಿದೆ. ಪೂಜ್ಯತೆ ಮತ್ತು ನಮ್ರತೆ ಸ್ಪಷ್ಟವಾಗಿದೆ, ಜೊತೆಗೆ ಉತ್ತಮ ಸಂತಾನೋತ್ಪತ್ತಿ ಮತ್ತು ಆಂತರಿಕ ಸಂಸ್ಕೃತಿಯನ್ನು ಸೂಚಿಸುವ ಹಿಂಜರಿಕೆ. ಕಲಾವಿದನು ತಾನು ನಿಜವಾಗಿಯೂ ಚಿತ್ರಿಸಲು ಇಷ್ಟಪಡುವುದನ್ನು ಚಿತ್ರಿಸುವ ಕೌಶಲ್ಯವನ್ನು ಹೊಂದಿದ್ದಾನೆ, ಗಟ್ಟಿಯಾದ ಬಣ್ಣದಲ್ಲಿ ಜೋರಾಗಿ ಕೂಗದಿರುವ ಚಾತುರ್ಯವನ್ನು ಅವನು ಹೊಂದಿದ್ದಾನೆ. ಅವರ ಕುಂಚದ ಕೆಲಸವು ಬ್ರಷ್ ಅಲ್ಲ. ದೇಸಾಯಿ ಅವರು ಆಧುನಿಕ ವರ್ಣಚಿತ್ರಕಾರರಾಗಿದ್ದು ಅವರು ಆಳವಾದ ಭಾವನೆಗಳು ಮತ್ತು ಜೀವನದಲ್ಲಿ ತಮ್ಮದೇ ಆದ ಸತ್ಯವನ್ನು ಚಿತ್ರಿಸುತ್ತಾರೆ ಎಂಬುದು  ಕೇಶವ್ ಮಲಿಕ್, ನವದೆಹಲಿ ಅವರ ಅಭಿಪ್ರಾಯವಾಗಿದೆ.ಇನ್ನು ದೇಸಾಯಿ ಸಾಧನೆಯ ಹಾದಿಯ ಹಿಂದೆ ಹುಡುಕಿ ಹೋದರೆ ಅವರ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಸಬ್ಲೈಮ್ ಆರ್ಟ್ ಗ್ಯಾಲರಿ, ಬೆಂಗಳೂರು (೨೦೧೮,೨೦೧೯) ಯುಬಿ ನಗರ,ಬೆಂಗಳೂರು-೨೦೧೧, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೧೦, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೦೫, ಸಂಸ್ಕೃತಭವನ ಹಾಸನ-೨೦೦೫, ಕಲಾಕೃತಿ ಪ್ರದರ್ಶನ, ಬೆಂಗಳೂರು-೧೯೮೯ ಮುಖ್ಯವಾಗಿವೆ.ಇವರು ಭಾಗವಹಿಸಿದ ಶಿಬಿರ ಕಾರ್ಯಾಗಾರಗಳಲ್ಲಿ  ಪ್ರಮುಖವಾಗಿ ಬಿಜಾಪುರ ಕಲಾ ಶಿಬಿರ- ೨೦೨೪, ಅಂತರಾಷ್ಟಿçÃಯ ಕಲಾ ಶಿಬಿರ-ಮೂಡುಬಿದರೆ-೨೦೨೩, ಕಾರ್ಕಳ ಕಲಾ ಶಿಬಿರ-೨೦೨೨, ರಾಷ್ಟಿçÃಯ ಕಲಾವಿದರ ಶಿಬಿರ, ವಾರಣಾಸಿ-೨೦೧೬, ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್–೨೦೧೪, ಕಾಗಿನೆಲೆ ಟ್ರಸ್ಟ್, ಕಾಗಿನೆಲೆ ಕಲಾಶಿಬಿರ, ಹಾವೇರಿ–೨೦೧೩,  ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ–೨೦೧೩, ವಿಶ್ವ ಕನ್ನಡ ಸಮ್ಮೇಳನ ಕಲಾ ಶಿಬಿರ ಬೆಳಗಾವಿ-೨೦೧೧, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾ ಶಿಕ್ಷಕರ ಶಿಬಿರ ಹಾಸನ-೨೦೧೦, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾಶಿಬಿರ, ಕೆಮ್ಮಣ್ಣು ಗುಂಡಿ-೨೦೦೯, ವೆಂಕಟಪ್ಪ ಗ್ಯಾಲರಿ, ಬೆಂಗಳೂರು-೨೦೦೭, ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ-೨೦೦೬, ಉಪಾಸನಾ ಕಲಾವಿದರ ಶಿಬಿರ ಸಮಸೆ ಚಿಕ್ಕಮಗಳೂರು-೨೦೦೬, ರಾಷ್ಟಿçÃಯ ಕಲಾ ಪ್ರದರ್ಶನ, ಮೌಂಟ್ ಅಬು-೨೦೦೪, ಅಕಾಡೆಮಿ ಸದಸ್ಯರಿಗೆ ಕಲಾ ಶಿಬಿರ, ಹೊನ್ನಾವರ-೨೦೦೩ ರಾಷ್ಟಿçÃಯ ಸಂಶೋಧನಾ ಕಾರ್ಯಾಗಾರ, ದೆಹಲಿ-೨೦೦೦, ಹೊಯ್ಸಳ ಉತ್ಸವ ಕಲಾ ಶಿಬಿರ, ಹಳೇಬೀಡು- ೧೯೯೯, ಕಲಾ ಬರಹಗಾರರ ಶಿಬಿರ, ಕರ್ನಾಟಕ ಲಲಿತಕಲಾ ಅಕಾಡೆಮಿ, ಇಳಕಲ್-೧೯೯೯, ಕಲಾ ಉಪನ್ಯಾಸಕರ ಚಿತ್ರಕಲಾ ಪ್ರದರ್ಶನ ಬಿಜಾಪುರ-೧೯೯೯, ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಕಲಾವಿದರ ಶಿಬಿರ ಅಲ್ಲದೇ ದೇಸಾಯಿಯವರು ೬೦  ಮೇಲ್ಪಟ್ಟ ಗುಂಪು ಪ್ರದರ್ಶನದಲ್ಲಿ ಈವರೆಗೆ ಭಾಗಿಯಾಗಿದ್ದಾರೆ.  ಇವರ ಪೈಂಟಿAಗ್ಸ್ಗಳ ಖಾಸಗಿ ಸಂಗ್ರಹಣೆಗಳು ಸಾಗರೋತ್ತರವಾಗಿ  ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಜರ್ಲ್ಯಾಂಡ್, ಜರ್ಮನಿ, ಆಸ್ಟ್ರಿಯಾ, ಯುಎಇ, ಮಸ್ಕತ್, ಕೆನಡಾಗಳಲ್ಲಿ ಅಲ್ಲದೇ ಭಾರತದಲ್ಲಿ ಮೌಂಟ್ ಅಬು, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಗುಲ್ಬರ್ಗಾ, ಕೊಪ್ಪಳ, ಮೈಸೂರು, ಹಾಸನ, ಹೊನ್ನಾವರ, ಮಂಗಳೂರು, ಉಡುಪಿ, ಕುಂದಾಪುರ, ಮುಂಬೈ, ಚೆನ್ನೈ, ಪಾಂಡಿಚೇರಿ, ಕೊಚ್ಚಿಯಲ್ಲಿ ಇವೆ.  ದೇಸಾಯಿಯವರು ಮಾಜಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಾಜಿ ಸದಸ್ಯರು  ಧಾರವಾಡ,  ಸಂಚಾಲಕರು ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ–೨೦೦೬, ಸುವರ್ಣ ಕರ್ನಾಟಕ ಕಲಾವಿದರ ಶಿಬಿರ, ಹಾಸನ ೨೦೦೬, ಸಂಚಾಲಕರು ಚಿತ್ಕಲಾ ಉದಯೋನ್ಮುಖ ಕಲಾವಿದರ ಪ್ರದರ್ಶನ, ಕಾರ್ಯದರ್ಶಿ ರಾಜ್ಯ ಕಲಾಶಿಕ್ಷಕರ ಸಮ್ಮೇಳನ ಹಾಸನ-೨೦೦೧,ಕಲಾವಿದರನ್ನು ಕಲೆ ಹಾಕಿ ಯಶಸ್ವಿ ಕಲಾಶಿಬಿರ ಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಕಲಾಸಕ್ತರ ಗಮನ ಸೆಳೆದಿರುವ ದೇಸಾಯಿಯವರು ಉತ್ತಮ ಛಾಯಾಗ್ರಾಹಕರೂ ಹೌದು. ಅವರು ತಮ್ಮ ಛಾಯಗ್ರಾಹಣದಿಂದ ಹಾಸನದ ಹುಣಸಿನಕೆರೆ ಪೋಟೋ ತೆಗೆದು ಸಾರ್ವಜನಿಕರ, ಪರಿಸರ ಪ್ರೇಮಿಗಳ ಮನಸೆಳೆದು ಕೆರೆ ಉಳಿವಿಗೆ ತಮ್ಮದೇ ಕಲ್ಪನೆಯಲ್ಲಿ ಕೆಲಸ ಮಾಡಿದ್ದಾರೆ. ಮನಕ್ಕೆ ಮುದ ನೀಡುವ ಚಿಂತನೆಗೀಡು ಮಾಡುವ ಹಲವಾರು ಚಿತ್ರಗಳಿಗೆ ಕುಂಚದಿAದ ಜನ್ಮ ನೀಡಿದ್ದಾರೆ. ನಿಸರ್ಗದ ಅನೇಕ ಚಿತ್ರಗಳನ್ನು ರಚಿಸಿರುವುದಲ್ಲದೇ  ತಮ್ಮ ಕ್ಯಾಮರದಿಂದಲೂ ಪ್ರಕೃತಿಯ ರಮ್ಯ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಪ್ರಕೃತಿಯ ವಿಶಿಷ್ಟ ಸೌಂದರ್ಯ ಕಲಾವಿದನನ್ನು ಪ್ರಭಾವಿಸುವಂತೆಯೆ ಅವನ ಭಾವನಾತ್ಮಕ ಪ್ರತಿಕ್ರಿಯೆಯು ಅವನ ಅಂತರAಗ ಸಾಮರ್ಥ್ಯವನ್ನು ಮತ್ತು ವೈಯಕ್ತಿಕ ಅಭಿರುಚಿಯನ್ನು ಒಳಗೊಂಡಿರುತ್ತದೆ. ಈ ದಿಸೆಯಲ್ಲಿ ದೇಸಾಯಿರವರ ಪ್ರಕೃತಿ ಮತ್ತು ವಿಕೃತಿ ಎಂಬ ಕಲಾಕೃತಿ ಅಮೂರ್ತ ಶೈಲಿಯ ಕಲಾರಚನೆಯಾಗಿದ್ದು ಚಿಂತನೆಗೆ ಹಚ್ಚುವ ಮೂಲದ್ರವ್ಯವನ್ನು ಒದಗಿಸುತ್ತದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬAಧವನ್ನು ವಿಕೃತಗೊಳಿಸುತ್ತಿರುವ ಮನುಷ್ಯರ ಮನೋಭಾವನೆಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದೆ. ಪ್ರಕೃತಿಯನ್ನೇ ಅವಲಂಬಿಸಿ ಬದುಕುವ ಮನುಷ್ಯ ಭವಿಷ್ಯವನ್ನು ಯೋಚಿಸದೆ ನಿಸರ್ಗ ನಾಶ ಮಾಡುತ್ತಿರುವ ವಿಕೃತ ಮನೋಭಾವನೆಯನ್ನು ಅರ್ಥಗರ್ಭಿತವಾಗಿ ಮತ್ತು ಸಾಂಕೇತಿಕವಾಗಿ ಚಿತ್ರಿಸಲ್ಪಟ್ಟ ಕಲಾಕೃತಿಯಲ್ಲಿ ಪ್ರಸ್ತುತ ಜನ ನೈಸರ್ಗಿಕ ಸಂಪತ್ತನ್ನು ಹಾಳುಗೆಡುವುತ್ತಿರುವ ಬಗ್ಗೆ ಕಲಾವಿದರಲ್ಲಿ ಆಕ್ರೋಶ ಮತ್ತು ಸಮಾಜಿಕ ಕಳಕಳಿಯಿದೆ. ಚಿತ್ರಕಲೆಯ ವಿವಿಧ ಆಯಾಮಗಳಲ್ಲಿ ಕೃಷಿ ಮಾಡಿ ಜಲವರ್ಣ, ತೈಲವರ್ಣ, ಪೋಸ್ಟರ್ ಕಲರ್, ಟ್ರಾನ್ಸ್ಪರೆಂಟ್ ಬಣ್ಣ ಬಳಸಿ ಮನೋಹರವಾದ ಕಲಾಕೃತಿಗಳನ್ನು  ರಚಿಸಿದ್ದಾರೆ. ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಲಿಯಂ, ಪ್ಯಾರಿಸ್, ಸ್ವಿಜ್ಜರ್ ಲ್ಯಾಂಡ್, ನ್ಯೂಜಿಲ್ಯಾಂಡ್ ಆಸ್ಟೆçÃಲಿಯ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ. ತಮ್ಮ ಮನೆಯನ್ನೇ ಕಲಾಗ್ಯಾಲರಿ ಮಾಡಿ ಬೇರೆ ಹೊರಗಿನ ಕಲಾವಿದರ  ಕಲಾಪ್ರದರ್ಶನಗಳನ್ನು ಮಾಡಿದ್ದಾರೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯,ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧, 

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು Read Post »

You cannot copy content of this page

Scroll to Top