ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಶ್ರೇಷ್ಠ ಶಿವಯೋಗ ಸಾಧಕರು ಮಲೆ ಮಹದೇಶ್ವರ ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ. ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ. ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರ ತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ). ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು: ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ ‘ಮಹದೇಶ್ವರ’ರಾಗಿ ಪ್ರಸಿದ್ಧಿ ಪಡೆದರು ಎಂಬ ಪ್ರತೀತಿ ಇದೆ. *ಅವತಾರ ಪುರುಷ: ಮಹದೇಶ್ವರರು ಯಾವುದೇ ಸಾಮಾನ್ಯ ಮಾನವನಂತೆ ಜನಿಸದೆ, ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಬಂದ ಶ್ರೇಷ್ಠ ಚಿಂತಕ ಅನುಭವಿ. ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ಅವರು ಸಣ್ಣ ವಯಸ್ಸಿನಲ್ಲೇ ಸಂಸಾರ ಮತ್ತು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಹಾದಿ ಹಿಡಿದರು.ಮಹದೇಶ್ವರ ಸ್ವಾಮಿಯ ಬಾಲ್ಯದ ಪವಾಡಗಳು ಅಥವಾ ಅವರು ಶ್ರೀಶೈಲದಿಂದ ಕರ್ನಾಟಕಕ್ಕೆ ಬಂದ ಇತಿಹಾಸದ ಬಗ್ಗೆ ಪುರಾಣ ಕಥನಗಳ ದಾಖಲೆಗಳಿವೆ. *ಹಿನ್ನೆಲೆ ಮತ್ತು ಸ್ಥಳ* ಪುರಾಣಮಹದೇಶ್ವರ ಸ್ವಾಮಿ: 14-15ನೇ ಶತಮಾನದಲ್ಲಿ ಬಾಳಿ ಬದುಕಿದ ಪವಾಡ ಪುರುಷ ಹಾಗೂ ಶರಣ ಸಂಸ್ಕೃತಿಯ ಸಂತ ಶ್ರೀ ಮಹದೇಶ್ವರರು ಸಾಕ್ಷಾತ್ ಶಿವನ ಅವತಾರ ಎಂದು ಅಲ್ಲಿನ ಜನಪದಿಗರು ನಂಬಿದ್ದಾರೆ. *ತಪೋಭೂಮಿ ಮತ್ತು ಮುಕ್ತಿ:* ಮಹದೇಶ್ವರರು ಈ ಬೆಟ್ಟಗಳಲ್ಲಿ ತಪಸ್ಸು ಆಚರಿಸಿ, ಭಕ್ತರ ಕಷ್ಟಗಳನ್ನು ನಿವಾರಿಸಿ, ಕೊನೆಗೆ ಇಲ್ಲೇ ಲಿಂಗ ರೂಪದಲ್ಲಿ ಐಕ್ಯರಾದರು (ಸಮಾಧಿ ಹೊಂದಿದರು). ಹುಲಿ ವಾಹನ: ಜನಪದ ಕಾವ್ಯಗಳ ಪ್ರಕಾರ, ಬಾಲಯೋಗಿ ಮಹದೇಶ್ವರರು ಕಾಡಿನ ಹುಲಿಯನ್ನೇ ತಮ್ಮ ವಾಹನವಾಗಿಸಿಕೊಂಡು ಬೆಟ್ಟಗಳಲ್ಲಿ ಸಂಚರಿಸುತ್ತಿದ್ದರು.ಶ್ರವಣ ಸಂಹಾರ: ಈ ಭಾಗದಲ್ಲಿ ಜನರಿಗೆ ಹಿಂಸೆ ನೀಡುತ್ತಿದ್ದ ಕ್ರೂರ ರಾಜ ‘ಶ್ರವಣ’ನನ್ನು ಮಹದೇಶ್ವರರು ಸಂಹರಿಸಿ ಜನರನ್ನು ಮುಕ್ತಗೊಳಿಸಿದರು ಎಂಬ ಇತಿಹಾಸವಿದೆ. ಏಳು ಮಲೆಗಳು (ಬೆಟ್ಟಗಳು)ಮಲೆ ಮಹದೇಶ್ವರ ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯದಿಂದ ಆವೃತವಾದ ಏಳು ಬೆಟ್ಟಗಳ ಸಾಲನ್ನು ಒಳಗೊಂಡಿದೆ: ಆನೆಮಲೆ ಜೇನುಮಲೆ ಕಾಡುಮಲೆ ಕಾನುಮಲೆ ಪೊನ್ನಾಚಿಮಲೆ ಪಾವಲಮಲೆ (ಪವಲಮಲೆ) ಪಚ್ಚೆಮಲೆ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳುಲಿಂಗ ರೂಪದ ದರ್ಶನ: ದೇವಸ್ಥಾನದ ಗರ್ಭಗುಡಿಯಲ್ಲಿ ಮಹದೇಶ್ವರರು ಸ್ವಯಂಭೂ ಲಿಂಗ ರೂಪದಲ್ಲಿ ನೆಲೆಸಿದ್ದಾರೆ. ಅಂತರಗಂಗೆ: ಬೆಟ್ಟದ ಸಮೀಪವಿರುವ ಒಂದು ಪವಿತ್ರ ನೀರಿನ ಸೆಲೆ. ಇಲ್ಲಿ ವರ್ಷದ ಯಾವುದೇ ಋತುವಿನಲ್ಲೂ ನೀರು ಬತ್ತುವುದಿಲ್ಲ. ಭಕ್ತರು ಇಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ದೊಡ್ಡ ನಂದಿ ವಿಗ್ರಹ: ದೇವಾಲಯದ ಆವರಣದಲ್ಲಿ ಶಿವನ ವಾಹನವಾದ ನಂದಿಯ ಬೃಹತ್ ಮೂರ್ತಿಯಿದೆ. ಜಾನಪದ ಕಾವ್ಯ: ಮಲೆ ಮಹದೇಶ್ವರ ಕಾವ್ಯ ಅಥವಾ ತಂಬೂರಿ ಶೈಲಿಯ ಗಾಯನವು ಕರ್ನಾಟಕದ ಪ್ರಸಿದ್ಧ ಜಾನಪದ ಪರಂಪರೆಯಾಗಿದೆ. ಭಕ್ತರು ಇಂದಿಗೂ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುತ್ತಾ ಮಾದಪ್ಪನ ಕಥೆಗಳನ್ನು ಹಾಡುತ್ತಾರೆ. ಕಾಡಿನ ಸೋಲಿಗರು ಮತ್ತು ಇತರೆ ಬುಡಕಟ್ಟಿನ ಜನರಿಗೆ ಲಿಂಗ ಸಂಸ್ಕಾರ ನೀಡಿ ಕಾಯಕ ದಾಸೋಹ ಗುರು ಲಿಂಗ ಜಂಗಮ ತತ್ವಗಳನ್ನು ಪರಿಚಯಿಸಿದ ಸಾವಿಲ್ಲದ ಶ್ರೇಷ್ಠ ಶಿವಯೋಗ ಸಾಧಕರು ಮತ್ತು ಶರಣರು. ಬಸವ ಪರಂಪರೆಯ ಶ್ರೇಷ್ಠ ಚಿಂತಕರ ಬದುಕಿನ ತಿರುಳನ್ನು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ತಿರುಗಾಡಿ ಬಸವ ತತ್ವ ಅಧ್ಯಯನ ಶಿವಯೋಗ ಸಾಧನೆಯನ್ನು ಅಲ್ಲಿನ ಬುಡಕಟ್ಟು ಮುಂತಾದ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು. ________________________’ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ನಾಗರಾಜ್ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ”
ಕಾವ್ಯ ಸಂಗಾತಿ ನಾಗರಾಜ್ ಹರಪನಹಳ್ಳಿ “ಭೂಮಿಗೆ ಆಕಳಿಕೆ ಸಮಯ” ಸೀರೆ ಸೆರಗ ತಾಗಿದ ಗಾಳಿಪ್ರೇಮದ ನವಿರು ಹೊತ್ತುತಂತುಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿಚಿತ್ರ ಬಿಡಿಸಿತುನೀನಿಡುವ ಪ್ರತಿ ಹೆಜ್ಜೆಯಲಿಕನಸು ಇಣುಕುತ್ತಿದೆ ಗೆಳತಿಮನಸುಗಳ ಅಗಣಿತ ತರಂಗಗಳುಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ?*** ನಿನ್ನ ದನಿ ಕೇಳದ ಭೂಮಿಗೆಆಕಳಿಕೆ ಸಮಯಅದಕ್ಕೆ ಮಗ್ಗಲು ಬದಲಿಸುತ್ತಿದೆಮುಗಿಲಿಗೆ ದಿಗಿಲು ಬಡಿದಿದೆಎಲ್ಲಿ ಹೋದೆ ?ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ *** ನಾನು ಸುಳಿದಾಡುವೆ ಒಬ್ಬಳೇ ಇರುವೆ ಎಂದು ಭಾವಿಸಬೇಡಸುಳಿಯುವ ಗಾಳಿಯಲ್ಲಿಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿಬದಲಾಗಿ ಬಿಡಲಿಕಣ್ಣಲ್ಲಿ ನಕ್ಷತ್ರಗಳು ಹಾಡಲಿಕಾಲ್ಗೆಜ್ಜೆಗಳಲ್ಲಿ ಏಳು ಸುತ್ತಿನ ಮಲ್ಲಿಗೆ ಅರಳಲಿ****ರುತುಗಳಿಗೆ ತಕ್ಕಂತೆಬಣ್ಣ ರೂಪ ಪಡೆಯುವ ಭೂಮಿಮನಸ್ಸಿನ ಏರಿಳಿತಕ್ಕೆ ತಕ್ಕಂತೆಬಣ್ಣಗಳ ಸೀರೆ ತೊಡುವ ಆಕೆಎಲ್ಲವೂ ಪ್ರಕೃತಿ ಕಲಿಸಿದ ಪಾಠಕ್ಕೆನಿಬ್ಬೆರಗಾಗುವುದು ಮಾತ್ರ ………**** ನೀನು ನಡೆದರೆಭೂಮಿ ಪಿಸುಗುಡುತ್ತದೆಮಣ್ಣ ಕಣ ಕಣವೂಜೀವಸೆಲೆಯಿಂದ ಪುಟಿದೇಳುತ್ತದೆ ದಾರಿ ಪಕ್ಕದ ಗಿಡ ಮರಗಳುಕಣ್ಣು ಮಿಟುಕಿಸುತ್ತವೆಮುಂಗುರುಳ ಲಾಸ್ಯಕ್ಕೆಗಾಳಿ ರೋಮಾಂಚನಗೊಳ್ಳುತ್ತದೆ ನಾಗರಾಜ್ ಹರಪನಹಳ್ಳಿ
ನಾಗರಾಜ್ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ” Read Post »
ಎ ಎಸ್ ಮಕಾನದಾರ ಗದಗ ಅವರ “ಶಾಯಿರಿಗಳು”
ಕಾವ್ಯ ಸಂಗಾತಿ ಎ ಎಸ್ ಮಕಾನದಾರ ಗದಗ “ಶಾಯಿರಿಗಳು” ಶಾಯಿರಿಗಳುಧರ್ಮ ದೇವರ ಹೆಸರಿನ್ಯಾಗಹಿಡಿಬ್ಯಾಡ್ರಿ ಕೈಯಾಗ ಕಲ್ಲು ಕಲ್ಲು ಮಣ್ಣಿನ್ಯಾಗಹುಟ್ಟಿಲ್ಲ ದೇವರೆಲ್ಲೂ ***ಪ್ರೀತಿ ಅನ್ನೂ ದೇವರಮುಂದಯಾವ ದೇವರೂ ದೊಡ್ಡವಲ್ಲ ಸತ್ಯ ಅನ್ನೂ ತತ್ವದ ಮುಂದಯಾವ ಗ್ರಂಥವೂ ದೊಡ್ಡದಲ್ಲ***ಉಸಿರಾಡುವವರು ಜೀವಂತಅದಾರಂತ ಎನ್ ಗ್ಯಾರಂಟಿಸತ್ತವರಲ್ಲಿ ಕೆಲವರುಇನ್ನೂ ಜೀವಂತ ಅದಾರಲ್ಲಇದಕೆ ನೀ ಏನಂತೀ*** ಎ ಎಸ್ ಮಕಾನದಾರ ಗದಗ
ಎ ಎಸ್ ಮಕಾನದಾರ ಗದಗ ಅವರ “ಶಾಯಿರಿಗಳು” Read Post »
ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು”
ಕಾವ್ಯ ಸಂಗಾತಿ ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” ಯುಗಗಳು ಉರುಳಿದರೂ ಮರೆಯದ ಆಸರೆ,ಅಮ್ಮನ ಸೀರೆಯ ಆ ಒಂದು ಸೆರಗು;ಅದರೊಳು ಅಡಗಿತ್ತು ಜಗದೊಳಗಿನ ಮಮತೆ,ಕಣ್ಣೀರ ಒರೆಸುತ್ತಿದ್ದ ದಿವ್ಯ ಬೆರಗು. ಬಿಸಿ ಪಾತ್ರೆಗೆ ಹಿಡಿಕೆಯಾಗಿದ್ದ ಆ ತುದಿ,ಮಗುವಿನ ಮುಖದ ಮಸಿ ತೊಳೆಯುವ ನದಿ;ನಾಚಿಕೆಗೆ ಅಡಗುದಾಣ, ಚಳಿಗೆ ಹೊದಿಕೆ,ಅಮ್ಮನ ಸೆರಗೊಂದೇ ಬಾಳಿನ ಅಸ್ತಿತ್ವದ ನಂಬಿಕೆ. ಗಂಟು ಹಾಕಿದರೆ ಕಳೆದುದ ಕರುಣಿಸುವ ಮಾಯೆ,ಕಾಸು ಬಚ್ಚಿಟ್ಟ ಚಲಿಸುವ ಬ್ಯಾಂಕಿನ ಛಾಯೆ;ಸುಡುವ ಕಣ್ಣಿಗೆ ಉಸಿರಿನ ಬಿಸಿ ಒತ್ತುವ ಸಾಂತ್ವನ,ಆ ಸೆರಗಿನ ನೆರಳಲ್ಲೇ ಅರಳಿತ್ತು ಧನ್ಯ ಬಾಲ್ಯದ ಜಗತ್ತಿನ ಪಯಣ. ಆದರೆ… ಕಾಲದ ಚಕ್ರ ಉರುಳಿದೆ ಇಂದು,ಉಡುಗೆ ತೊಡುಗೆಯ ರೂಪ ಬದಲಾಗಿದೆ ಅಂದು;ಜೀನ್ಸಿನ ಜೇಬಲಿ ಜಾಗವಿಲ್ಲ ಆ ಸೆರಗಿಗೆ,ಆಧುನಿಕತೆಯ ಓಟದಲಿ ಕಳೆದುಹೋಯಿತೇ ಆ ನೆರಳಿಗೆ? ಬಟ್ಟೆಯ ಸೆರಗು ಇಲ್ಲದಿರಬಹುದು ಜೀನ್ಸಿನ ಅಂಚಿನಲ್ಲಿ,ಆದರೆ ಅಮ್ಮನ ಮಮತೆ ಎಂದೂ ಕಮ್ಮಿಯಾಗದು ನೆನಪಿನಲ್ಲಿ;ಸೆರಗಿನ ಗಂಟಿನ ಹಣವೀಗ ಬ್ಯಾಂಕಿನ ಖಾತೆಯಾಗಿದೆ,ಕಣ್ಣೀರ ಒರೆಸುತ್ತಿದ್ದ ಕೈಗಳು ಈಗ ಹೆಗಲಿಗೆ ಹೆಗಲು ನೀಡಿದೆ. ರೂಪ ಬದಲಾದರೂ ಕರುಳಿನ ಕುಡಿ ಪ್ರೀತಿ ಬದಲಾಗದು,ಅಮ್ಮನ ಅಪ್ಪುಗೆಯ ಬೆಚ್ಚನೆಯ ಆಶ್ರಯ ಎಂದೂ ಮುಗಿಯದು;ಸೀರೆಯ ಸೆರಗಿಗೆ ತಲೆಬಾಗುತ್ತಲೇ ಇಂದಿನ ತಾಯ್ತನವನ್ನೂ ಗೌರವಿಸೋಣ,ಯುಗ ಯಾವುದೇ ಆದರೂ ಅಮ್ಮನ ಪ್ರೀತಿಯೇ ಜಗದ ಶಕ್ತಿ ಎನ್ನೋಣ. ಸುಮಲತಾ ಗಡಿಯಪ್ಪನವರ
ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” Read Post »
ಧಾರಾವಾಹಿ ಸಂಗಾತಿ ಅರ್ಜುನ ಉವಾಚ ಡಾ.ವಿಶ್ವನಾಥ ಎನ್ ನೇರಳೆಕಟ್ಟೆ ಹಯ ಹೆಣ್ಣಾಯಿತು; ಹುಲಿಯಾಯಿತು ಧರ್ಮರಾಯನಿದ್ದ ಪುರಕ್ಕೆ ಬಂದ ದಾನವಾಂತಕ ಚಂಪಕಾನಗರಿಯ ಸಮಸ್ತ ವಿಚಾರಗಳನ್ನು ಅವನಿಗೆ ಹೇಳಿದ. ಹಂಸಧ್ವಜ ಕೊಟ್ಟಿದ್ದ ಸಕಲ ಸಂಪದಗಳನ್ನು ಯುದಿಷ್ಠಿರನಿಗಿತ್ತ.ನಮ್ಮ ಯಾಗದ ಕುದುರೆಯದು ಈಗ ಉತ್ತರ ದಿಕ್ಕಿನಲ್ಲಿದ್ದ ಪಥವನ್ನು ಹಿಡಿದಿತ್ತು. ಆಗ ಗ್ರೀಷ್ಮ ಕಾಲ. ಬೇಸಿಗೆಯ ಬಿಸಿ ಸಂಪೂರ್ಣ ಧರೆಯನ್ನು ಇನ್ನಿಲ್ಲದಂತೆ ಸುಡತೊಡಗಿತ್ತು. ನಮಗೆ ಕಾಣುತ್ತಿದ್ದುದು ಸೂರ್ಯನುರಿಗೆ ಕಂಗೆಟ್ಟುಹೋಗಿದ್ದ ಕನಕಾಚಲ. ತನ್ನ ಕಣ್ಣಿಗೆ ಬೀಳದ ಹಾಗೆ ಈ ಪರ್ವತ ಮರೆಯಾಗಿನಿಂತಿದೆ ಎಂದು ಕ್ರೋಧಗೊಂಡ ಸೂರ್ಯ ಅದನ್ನು ಉರಿಸಿಹಾಕುವ ಸನ್ನಾಹದಲ್ಲಿದ್ದಾನೋ ಎನ್ನುವಂತೆ ಬಿರುಬಿಸಿಲು ಕನಕಾಚಲ ಪರ್ವತವನ್ನು ಬಿಸಿಬಿಸಿಯಾಗಿಸಿತ್ತು.ಸೂರ್ಯನ ಬಿಸಿ ತಾಪವನ್ನು ಹೊತ್ತು ಮೆರೆಯುತಿರುವ ತೇರು, ನೀರಿದೆಯೇನೋ ಎಂಬ ಭ್ರಮೆ ಹುಟ್ಟಿಸುವ ಬಿಸಿಲು ಕುದುರೆ, ಗಾಳಿಯನ್ನು ಹೊತ್ತುತರುತ್ತಿರುವ ಸೈನಿಕರು, ಬಿಸಿಲೆಂಬ ಆನೆ ಇವೆಲ್ಲವೂ ಗ್ರೀಷ್ಮರಾಜನ ಚತುರಂಗ ಬಲದಂತೆ ತೋರುತ್ತಿದ್ದವು.ಧರ್ಮಶಾಲೆಯಲ್ಲಿದ್ದ ಸುಂದರ ನೀರೆಯರು ದಾರಿಹೋಕರ ಕರಗಳಿಗೆ ನೀರನ್ನೆರೆಯುತ್ತಾ ಅವರ ದಾಹವನ್ನು ತಣಿಸುತ್ತಿದ್ದರು. ಬಯಲಿನಲ್ಲಿದ್ದ ತೊರೆಗಳು ಬಾಯಾರಿಕೆಯಿಂದ ಬಳಲಿದ್ದ ಮೃಗಗಳ ತೃಷೆಯನ್ನು ಮಣಿಸುತ್ತಿದ್ದವು. ಉಪ್ಪರಿಗೆಗಳ ಮೇಲೆ ಚೆಲುವೆಯರ ಜೊತೆ ದೇಹಸುಖವನ್ನು ಪಡೆಯುತ್ತಿದ್ದ ಕೆಲವರು ಸುಂದರಿಯರ ತುಟಿಗಳಿಂದ ಜಿನುಗುತ್ತಿದ್ದ ಅಮೃತದ ರುಚಿ ನೋಡುತ್ತಿದ್ದರು.ಪ್ರದ್ಯುಮ್ನ, ವೃಷಕೇತು, ಯೌವನಾಶ್ವ, ನೀಲಧ್ವಜ, ಅನುಸಾಲ್ವ ಈ ಐದು ಮಂದಿ ನನಗೆ ಸಹವರ್ತಿಗಳಾಗಿದ್ದರು. ನನ್ನ ಜೊತೆಜೊತೆಗೇ ಹೆಜ್ಜೆ ಹಾಕುತ್ತಿದ್ದರು. ಈಗ ಹಂಸಧ್ವಜನೂ ನಮ್ಮೊಡನೆ ಸೇರಿಕೊಂಡಿದ್ದ.ಹಾಗೆಯೇ ಮುಂದೆ ಮುಂದೆ ಹೋದ ಹಯವೀಗ ಪಾರಿಪ್ಲವ ಎಂಬ ಹೆಸರಿನ ದೇಶವನ್ನು ತಲುಪಿತ್ತು. ಅಲ್ಲಿಯ ನೆಲದ ಮೇಲೆ ಕುದುರೆ ಕಾಲಿಟ್ಟ ಕ್ಷಣದಲ್ಲಿಯೇ ನಾವೆಲ್ಲರೂ ವಿಸ್ಮಯಕ್ಕೀಡಾಗುವ ಪ್ರಸಂಗವದು ಎದುರಾಯಿತು. ಯಾಗಕ್ಕೆ ನಾವು ಆರಿಸಿದ ವಿಶೇಷಕುದುರೆಯದು ಗಂಡಾಗಿತ್ತು. ಪಾರಿಪ್ಲವದ ನೆಲದ ಸ್ಪರ್ಶವಾದೊಡನೆಯೇ ಹೆಣ್ಣುಗುದುರೆಯಾಗಿ ಬದಲಾಯಿತು. ಅಲ್ಲೇ ಇದ್ದ ಸರೋವರದ ನೀರನ್ನು ಕುಡಿದ ತಕ್ಷಣವೇ ಹುಲಿಯಾಯಿತು. ಇದಾವ ಬಗೆಯ ಮಾಯೆಯಿದು ಎಂದು ನಾವೆಲ್ಲರೂ ಸೋಜಿಗಪಟ್ಟೆವು. ನನ್ನಲ್ಲಿ ಆ ಕ್ಷಣಕ್ಕೆ ಮೂಡಿದ್ದು ಕೃಷ್ಣ ಸ್ಮರಣೆ. ನೆನೆದೆ ಶ್ರೀಹರಿಯನ್ನು. ಮೊದಲಿನಂತೆಯೇ ಗಂಡು ಕುದುರೆಯಾಯಿತು ನಮ್ಮ ಯಜ್ಞಾಶ್ವ. ಹೀಗೆ ನಮ್ಮ ಅಶ್ವವದು ತಕ್ಷಣದಲ್ಲಿಯೇ ಎರಡು ರೂಪಗಳನ್ನು ಹೊಂದುವುದಕ್ಕೆ ಕಾರಣವಿತ್ತು.ಹಿಂದೊಮ್ಮೆ ಪರ್ವತರಾಜನ ಮಗಳಾದ ಪಾರ್ವತಿದೇವಿ ಶಿವನನ್ನು ಪೂರ್ಣಮನಸ್ಸಿನಿಂದ ಅರ್ಚಿಸುವೆನೆಂಬ ನಿರ್ಧಾರ ಮಾಡಿದಳು. ತನ್ನ ತಪಸ್ಸಿಗೆ ಸರಿಹೊಂದುವ ತಾಣವೆಲ್ಲಿದೆ ಎಂದು ಹುಡುಕಾಟ ಆರಂಭಿಸಿದಳು. ಪ್ರಶಾಂತಮಯವಾದ, ಚಿತ್ತಾಕರ್ಷಕವಾದ ಸ್ಥಳವನ್ನು ಅವಳ ಮನಸ್ಸು ಬಯಸುತ್ತಿತ್ತು.ಹೀಗೆ ಅರಸಿ ಬರುತ್ತಿದ್ದ ಶಿವನರಸಿಗೆ ಕಾಣಿಸಿದ್ದು ನಯನಮನೋಹರವೆನಿಸುವ ಒಂದು ಸರೋವರ. ಹಂಸಗಳು ಜಲದಲ್ಲಿ ಈಜುತ್ತಿದ್ದವು. ದುಂಬಿಗಳು ಹಾರಾಡುತ್ತಿದ್ದವು. ಕಮಲಗಳು ಅರಳಿನಿಂತಿದ್ದವು. ಕೋಗಿಲೆಗಳ ಮಧುರ ಧ್ವನಿಯದು ಕೇಳಿಬರುತ್ತಿತ್ತು. ಹೊಳೆವ ಶುಭ್ರ ಜಲವದು ರತ್ನದಿಂದ ನಿರ್ಮಿಸಲಾದ ಹಾಸಿಗೆಯಂತೆ ತೋರುತ್ತಿತ್ತು. ಸುಂದರವಾದ ಮೀನುಗಳಿದ್ದವು. ಸರೋವರದ ಸವಿನೀರನ್ನು ಸವಿಯುವ ಚಕ್ರವಾಕ ಪಕ್ಷಿಗಳಿದ್ದವು. ಮೊಸಳೆಗಳಿದ್ದವು. ಸುಗಂಧಭರಿತವಾದ ಗಾಳಿ ಅಲ್ಲೆಲ್ಲಾ ಬೀಸುತ್ತಿತ್ತು. ತಂಪುತAಪಾದ ವಾತಾವರಣವಿತ್ತು. ಹೀಗೆ ಕಣ್ಣಿಗೆ ಶೋಭಾಯಮಾನವಾಗಿ ಕಾಣುತ್ತಿತ್ತು ಆ ಸರೋವರ.ಕಮಲದೆಲೆಗಳ ಹಸಿರು ಕಾಂತಿ. ಕೆಂದಾವರೆಗಳ ಕೆಂಪು ಕಾಂತಿ. ಬಿಳಿದಾವರೆಗಳ ಬಿಳುಪಿನ ಕಾಂತಿ. ಹೊಂದಾವರೆಗಳ ಹಳದಿ ಕಾಂತಿ. ಹೀಗೆ ಹಲವು ಬಣ್ಣಗಳ ಬೆಳಕಿನಿಂದ ಕಂಗೊಳಿಸುತ್ತಿದ್ದ ಆ ಸರೋವರ ಕಾಮನಬಿಲ್ಲಿನ ನೆನಪನ್ನು ತರುವಂತಿತ್ತು.ಶಿವಧ್ಯಾನಕ್ಕಿದು ಸೂಕ್ತ ಸ್ಥಳ ಎಂದು ತೋರಿತು ಗಿರಿಜೆಗೆ. ಸರೋವರವಿದ್ದ ತಾಣವನ್ನು ತನ್ನ ತಪಸ್ಸಿನ ಸ್ಥಾನವಾಗಿ ಆಯ್ಕೆ ಮಾಡಿದಳು. ಹೀಗೆ ಅಂದು ಪಾರ್ವತಿ ಆರಿಸಿದ ತಾಣವದು ಈಗ ನಮ್ಮ ಯಾಗದ ಕುದುರೆ ಪ್ರವೇಶಿಸಿದ್ದ ಪಾರಿಪ್ಲವ ದೇಶ.ಆಶ್ರಮವೊಂದನ್ನು ನಿರ್ಮಿಸಿಕೊಂಡಳು ಪಾರ್ವತಿ. ಈಶ್ವರನ ಅನುಮೋದನೆಯೂ ದೊರಕಿತು. “ನಿನ್ನ ತಪಸ್ಸಿಗೆ ಯಾವ ತೊಂದರೆಯೂ ಎದುರಾಗದು ಇಲ್ಲಿ” ಎಂದು ಗಿರಿಜೆಯನ್ನು ಆಶೀರ್ವದಿಸಿದ ಗೌರೀರಮಣ. ಆ ತಾಣವೇ ಅನುದಿನದ ತಾಣವಾಯಿತು ಅವಳಿಗೆ. ತಪಸ್ಸಿನಲ್ಲಿ ಸುಖ ಕಂಡುಕೊಳ್ಳುವ ಯೋಗಿನಿಯಂತಾದಳು ಶಿವನ ಮಡದಿ. ಇದು ನಿಜಕ್ಕೂ ವಿಸ್ಮಯ. ಶಿವನ ಅರ್ಧ ಶರೀರ ಎನಿಸಿಕೊಂಡಿದ್ದ ಪಾರ್ವತಿ ಅವನಿದ್ದ ತಾಣವನ್ನು ತೊರೆದು ಇಲ್ಲಿಗೆ ಬಂದು ಮತ್ತೆ ಅವನನ್ನೇ ಧ್ಯಾನಿಸುವುದೆಂದರೆ, ಪೂಜಿಸುವುದೆಂದರೆ ಅದು ಭಕ್ತಿ ಪ್ರಕಟಣೆಯ ಇನ್ನೊಂದು ರೀತಿ. ದೇಹಗಳ ಅಂತರ ಅಧಿಕವಾದಾಗ ಪ್ರೀತಿ ಹೆಚ್ಚುವಂತೆ ಭಕ್ತಿಯೂ ಹೆಚ್ಚುವುದು ಎಂಬ ತತ್ವವನ್ನು ಸ್ವಯಂ ಮನಗಾಣಲು ಬಯಸಿದ್ದಳೋ ಏನೋ ಆ ಪಾರ್ವತಿದೇವಿ!ಸರೋವರದ ನೀರಿನಲ್ಲಿ ಜಳಕ. ಬಳಿಕ ಶಿವಜಪದ ಪುಳಕ. ಇದು ಗಿರಿಜೆಯ ಅನುದಿನದ ಬದುಕಾಗಿಹೋಯಿತು.ಅವಳ ತಪಜಪಗಳು ಆರಂಭಗೊAಡ ನಂತರ ಪೂರ್ಣ ವಾತಾವರಣವದು ಸುಂದರತೆಯನ್ನು ಪಡೆಯಿತು. ಬಿಸಿಗಾಳಿ ಬೀಸಲಿಲ್ಲ. ಗಿಡಮರಗಳು ಒಣಗಲಿಲ್ಲ. ನೀರ ಮೂಲಗಳು ಅಳಿಯಲಿಲ್ಲ. ಸದಾಕಾಲ ತಂಪುತಂಪಾದ ವಾತಾವರಣ. ಇಂಪುಇಂಪಾದ ಧ್ವನಿಯ ಅನುರಣನ. ಪಾರ್ವತಿಯಿದ್ದ ಕಾರಣದಿಂದಾಗಿ ಅಲ್ಲಿಯ ಪ್ರಾಣಿ ಪಕ್ಷಿಗಳು ತಮ್ಮ ವೈರತ್ವವನ್ನು ಮರೆತವು. ಶಿವಪೂಜೆಯನ್ನು ಅತೀವ ಭಕ್ತಿಭಾವದಿಂದ ನಡೆಸುತ್ತಿದ್ದಳು ಪಾರ್ವತಿ. ಜಗನ್ಮಾತೆಯಾದ ಪಾರ್ವತಿಗೇಕೆ ಶಿವನ ತಪಸ್ಸಿನ ಕಡು ಒಲವು! ಎಂದು ದೇವವೃಂದವೇ ಅಚ್ಚರಿಪಡುವ ರೀತಿಯಲ್ಲಿ ತ್ರಿನೇತ್ರನನ್ನು ಅರ್ಚಿಸುತ್ತಿದ್ದಳು ಭಕ್ತಿಭಾವನೇತ್ರೆ.ಅದೊಂದು ದಿನ ಎಂದಿನಂತೆ ಪಾರ್ವತಿದೇವಿ ಶಿವಧ್ಯಾನದಲ್ಲಿದ್ದಳು. ಆಗಲೇ ಅಲ್ಲಿ ಕಾಣಿಸಿದ್ದು ರಾಕ್ಷಸನೊಬ್ಬನ ದೈತ್ಯ ನೆರಳು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ”
ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” ಸೂರ್ಯ ಉದಯಿಸುತ್ತಾನೆಈಗ ಕೋಳಿ ಕೂಗುವದಿಲ್ಲ.ಓಡುತ್ತಿದ್ದಾರೆ ಬದುಕಿನ ಬೆನ್ನ ಹತ್ತಿರೈಲು ಬಸ್ ಆಟೋದಲ್ಲಿ ಪಯಣಕಾರ್ಖಾನೆಗೆ ಜನರ ಜಂಗುಳಿ.ಕೈಯಲ್ಲಿ ಮೊಬೈಲ್ ವಾಟ್ಸ್ ಆಪ್ಜನರು ಮುಖ ಕೆಳಗಿಟ್ಟು ಬದುಕುತ್ತಾರೆ.ನಗುವುದೇ ಕಡಿಮೆ .ದುಗುಡು ತಳಮಳ ಆತಂಕ .ದೇಶದಲ್ಲಿ ಬರ ಬಡತನ ‘ಸುದ್ಧಿ ಮಾಧ್ಯಮಗಳ ಅಬ್ಬರ .ದಿನಸಿ ಅಂಗಡಿಯ ಮುಂದೆ ಸಾಲು.ಗುಡಿ ಮಸೀದೆ ಚರ್ಚು ಭಿಕ್ಷುಕರು.ಜಾತ್ರೆ ಹಬ್ಬ ಮೊಹರಮ್ಮಿನ ಕುಣಿತ.ಕಳೆದುಕೊಂಡಿದ್ದೇವೆ ಜೀವ ಜಾಲವಕಾಣುತ್ತಿಲ್ಲ ಸಂತಸ ನೆಮ್ಮದಿ ದಿನಗಳು.ಹುಡುಕುತ್ತಿರುವೆ ನನ್ನ ನಾನುಹೊಲದ ಗದ್ದೆಯ ಮಧ್ಯೆಅಚ್ಚ ಹಸುರಿನ ಪೈರುಕೆರೆ ತುಂಬಿದ ನೀರು .ಪಕ್ಷಿ ಇಂಚರ ಧ್ವನಿಯ ಕೊರಳು .ಹುಡುಕುತ್ತಿರುವೆ ಹುಡುಕುತ್ತಲೇ ಇರುವೆ ಡಾ.ಶಶಿಕಾಂತ.ಪಟ್ಟಣ ಪುಣೆ
ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” Read Post »
ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು”
ಕಾವ್ಯ ಸಂಗಾತಿ ಸವಿತಾ ದೇಶಮುಖ “ಕಾಡಿನ ಕಣ್ಣೀರು” ಕಾನನಳ ಕಂಗಾಲ ಕಂಗಳ ಕಣ್ಣೀರುಕಾಣದಾದರೆ ಇಹದ ಮನುಜ ಕುಲದವರುಆಧುನಿಕ ಭರ ಭರಾಟೆಯಲಿ ನಿಂದವರು!!೧!! ಕಾಡಮ್ಮಳ ಒಡಲು ಪಶು ಪಕ್ಷಿ ಪ್ರಾಣಿವನ್ಯಜೀವಿ ಮರ ಗಿಡ ಗುಡ್ಡ-ಹಳ್ಳ ಕೊಳ್ಳಅವಳ ಬೆಚ್ಚನೆಯ ಗರ್ಭವೇ ಅವರ ತಾಣ!!೨!! ಸಕಲ ಜೀವ ರಾಶಿಗಳಿಗೆ ಉಸಿರಾಗಿಅಮೃತ ನಿಯುತ ನಿಂದಿಹಳು ಹಸಿರಾಗಿಸಕಲ ಪ್ರಾಣಿ ಪ್ರಾಣ ಸಂಜೀವಿನಿಯಾಗಿ !!೩!! ಹಚ್ಚ ಹಸಿರು ಬೆಚ್ಚನೆ ಸೌಖ್ಯದ ಹೊದಿಕೆಹೊಚ್ಚಿ ,ಕೊಡುತಿಹಳು ಪೋಷಣೆ ಪುಷ್ಟಿಕೆಸರ್ವರನು ಬೆಳೆಸಿ ತನ್ನೊಳಗೆ ಹುದುಗಿಸಿ !!೪!! ಸಾವಿರಾರು ಗಿರಿ-ಪರ್ವತಗಳ ತೊಟ್ಟಜಲ-ಹಣ್ಣು ಹಂಪಲ ಆಸರೆ ಕೊಟ್ಟುತಾಯಿಯಾಗಿ ನಿಂದವಳ ಕಟ್ಟಿಹರು ಚಟ್ಟ!!೫!! ಇಂದು ಬಾಡಿ ಒಣಗಿ ನಸಿಸುತಿಹಳುಲೆಕ್ಕವಿರದ ಪಶುಗಳ ಮರಗಿಡಗಳುಉರುಳಿತಿವೆ ನಿರ್ದಾಕ್ಷಣೆ ಮತಿಗೇಡಿತನದಿ!!೬!! ಎನಿತು ಪೇಳುಲಿ..ವೇದನೆಲಿ ಮರಗುತಿವೆಕರುಣೆ ತೋರಿ ನಿಲ್ಲಿಸಿ ನಾಶ ಕನವರಿಸುತ್ತಿವೆನದಿ ಹಳ್ಳ ಕೊಳ್ಳ ಬತ್ತುತಿವೆ ಬರಡಾಗುತಿವೆ!!೭!! ಕಾಡಿನ ಕಂಗಳಂಚಿನಲ್ಲಿ ಕಣ್ಣಿರ ಹನಿಹನಿಸುರಿಯುತ್ತಿವೆ ಬರಗಾಲದ ನೊರೆಯಾಗಿಮನುಕುಲದ ವಿನಾಶದ ಕರೆ ಓಲೆಯಾಗಿ !!೮!! ಇನ್ನಾದರೂ ಎಚ್ಚೆತ್ತಲೇಬೇಕು- ಸಂರಕ್ಷಿಸು,ಮನವಿಟ್ಟು ಒನವ ಸೀರಿಯ ಉಳಿಸಿಬೆಳಿಸುಸ್ವಾರ್ಥ ಬಿಟ್ಟು- ಮುಂದಿನ ಪೀಳಿಗೆ ನೆನಸು!!೯!! ತಾಂತ್ರಿಕತೆ ಮುಂದುವರೆವ ವ್ಯವಹಾರದಿಅನಿವಾರ್ಯತೆ ಒಡ್ಡಿದರೂ,ಮರ ಕೆಡವಿದರೆವಿನಾಶ ನಿಶ್ಚಿತತೆ ಪರಿಜ್ಞಾನದ ಅರಿವು..!!೧೦!! ಇಲ್ಲವೇ ನಮ್ಮಲಿ..!! ಬನ್ನಿ ಕೈಗೂಡಿಸೋಣಒಂದು ಮರ ಕೆಡವಿದರೆ ಎರಡು ಮರವ ನೆಟ್ಟಿ…, ನಮ್ಮ ಕೃತಜ್ಞತೆ ಸಲ್ಲಿಸೋಣ!!೧೧!! ಅವಳ ಉಸಿರಿಗೆ ನಾವು ಉಸಿರಾಗದ ಹೊರತು ನಮ್ಮ ಉಸಿರು ಉಳಿಯದು !!೧೨!! ತಿಳಿದು ಎಚ್ಚರದಿ ಮುನ್ನಡೆದರೆ ಮಾತ್ರ ಉಳಿವು ನಿಮ್ಮದು..ನಮ್ಮ ಪ್ರತಿಯೊಬ್ಬರದು ಸವಿತಾ ದೇಶಮುಖ
ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು” Read Post »
ಎನ್.ಜಯಚಂದ್ರನ್ ಅವರ ಕವಿತೆ “ಅಂತರ”
ಕಾವ್ಯ ಸಂಗಾತಿ -ಎನ್.ಜಯಚಂದ್ರನ್ “ಅಂತರ” ಒಂದೇ ಊರು, ಒಂದೇ ಗಾಳಿ,ಆದರೂ ಮನಸುಗಳು ದೂರದ ದ್ವೀಪಗಳು. ಮುಖದಲ್ಲಿ ನಗುಗಳ ಹೂವಿದ್ದರೂ,ಒಳಗೆ ನೋವಿನ ಮಳೆ ಸುರಿಯುತ್ತದೆ. ಕೈಗಳು ಕೈ ಹಿಡಿಯುವ ಕಾಲದಲ್ಲಿ,ಹೃದಯಗಳು ಏಕೆ ದೂರವಾಗಿವೆ? ಮಾತುಗಳು ಸಾವಿರ ಹರಿದರೂ,ಅರ್ಥಗಳು ಮಧ್ಯೆ ಕಣ್ಮರೆಯಾಗಿವೆ. ಗೋಡೆಗಳು ಮನೆಗಳಲ್ಲಿ ಮಾತ್ರವಲ್ಲ,ಮನಸ್ಸಿನೊಳಗೂ ಎತ್ತರವಾಗಿವೆ. ಸ್ವಾರ್ಥದ ನೆರಳು ಬೆಳೆದಂತೆ,ಸಂಬಂಧಗಳ ಬೆಳಕು ಮಂಕಾಗಿದೆ. ಒಬ್ಬರ ನೋವು ಮತ್ತೊಬ್ಬರಿಗೆ,ಕೇವಲ ಸುದ್ದಿಯ ಸಾಲಾಗುತ್ತಿದೆ. ಪ್ರೀತಿಯ ನದಿ ಒಣಗಿದ ಜಾಗದಲ್ಲಿ,ಅಹಂಕಾರದ ಮರಳು ಬೀಸುತ್ತಿದೆ. ಆದರೂ ಎಲ್ಲೋ ಒಂದು ಮೂಲೆದಲ್ಲಿ,ಮಾನವೀಯತೆ ಇನ್ನೂ ಉಸಿರಾಡುತ್ತಿದೆ. ಮನಸು ಮನಸಿಗೆ ಸೇರುವ ದಿನದಲ್ಲಿ,ಈ ಭೀಕರ ಅಂತರ ಕರಗಿಹೋಗುತ್ತದೆ. ಎನ್.ಜಯಚಂದ್ರನ್
ಎನ್.ಜಯಚಂದ್ರನ್ ಅವರ ಕವಿತೆ “ಅಂತರ” Read Post »
ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ”
ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಕಂಗಳ ಕಾಟ ಗೆಳತಿ……ಕಥೆಯ ನೂರುಬಯಕೆಗಳ ಬೇಡಲು ಸಾವಿರಅದೇನೊ ಕಾಡಿತು ಸವಿಯ ಸಾರಹೊಳೆವ ನಿನ್ನಯ ಕಂಗಳ ಕಾಟದಲಿಸೋತು ಬೆರಗಿದೆನು, ನಿನ್ನ ದರ್ಶನಕ್ಕೆ,! ಗೆಳತಿ…ವ್ಯಥೆಯು ನೂರುಕಥೆಯ ಕವನ ಬರೆಯಲುಪ್ರಣಯದಾಟ ಪ್ರೀತಿ ಬೆಸೆದುಕಪ್ಪು ಪರದೆಯೊಳಗೆ ಮಿಟುಕಿದಕಂಗಳ ನೋಟವು ನನ್ನ ಸೆಳೆಯಿತು.!! ಹಮೀದ್ ಹಸನ್ ಮಾಡೂರು.
ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ” Read Post »
ಅಶ್ಫಾಕ್ ಪೀರಜಾದೆ ಅವರ ಗಜಲ್
ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ ಗಜಲ್ ಕಲರವರದ ನಂತರ ಕಲಹ ಮತ್ತೆ ಕಾಡಿದೆಎದೆಯ ಒಳಗಿನ ಗಾಯ ಮತ್ತೆ ಚಿಗುರಿದೆ ನೋವ ತೆರೆತೆರೆಯಾಗಿ ಸಾಗರ ಸೇರುತಿರೆನೀರಿನಲಿ ಮೀನ ಹೆಜ್ಜೆ ಮತ್ತೆ ಮೂಡಿದೆ ತಾವರೆಗಳು ಅಪರಾತ್ರಿ ಬಿಕ್ಕಳಿಸುತಿವೆತಂಗಾಳಿ ನಿಂತು ಬೆಂಕಿ ಮತ್ತೆ ಸುರಿದಿದೆ ಬರೆದುಕೊಂಡ ಬಂದ ಹಣೆಬರ ಇದುತಪ್ಪಿಸಬೇಕೆಂದ್ರೂ ತಪ್ಪದೆ ಮತ್ತೆ ಬರುತಿದೆ ದೂರದಿ ಶಾಂತವಾಗಿ ಕಾಣುವ ಸಮುದ್ರಕುದಿಯುವ ಲಾವಾರಸ ಮತ್ತೆ ತುಂಬಿದೆ ಕಲ್ಲಿಗೆ ಹೃದಯವಲ್ಲ ಕಣ್ಣು ಬಂದರೆ ಸಾಕುಅಪೀಯ ಪಾಡು ಹಾಡಾಗಿ ಮತ್ತೆ ಬಂದಿದೆ ಅಶ್ಫಾಕ್ ಪೀರಜಾದೆ.
ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »









