ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಹಿಳಾ ವಿಶೇಷ ದಿನ, ಡಾ.ಭಾರತಿ ಅಶೋಕ್

ಮಹಿಳಾ ವಿಶೇಷ ದಿನ ಡಾ.ಭಾರತಿ ಅಶೋಕ್ ಅವಳ ದಿನಕ್ಕೆ ಹೆಣ್ಣು ತಾನೆಷ್ಟೇ ಬುದ್ಧಿವಂತಳಾದರೂ, ಹೊರಗೆ ತಾನೆಷ್ಟೇ ಮುಂದುವರಿದರೂ, ಮನೆಯೊಳಗೆ ಬಂದೊಡನೆ ತನ್ನ ಜವಾಬ್ಧಾರಿ ಯನ್ನು ಮರೆಯುವುದಿಲ್ಲ. ಹೆಚ್ಚು ಶಿಕ್ಷಣ ಪಡೆದ ಮಾತ್ರಕ್ಕೆ ಅವಳಿಗೆ ಜವಾಬ್ದಾರಿಗಳಿಲ್ಲ ಎನ್ನುವುದಲ್ಲ.  ಇತ್ತೀಚಿನ ದಿನಗಳಲ್ಲಿ  ಅನಕ್ಷರಸ್ಥ ಮಹಿಳೆಯರಿಗಿಂತ ವಿದ್ಯಾವಂತ ಮಹಿಳೆಯರೇ ಹೆಚ್ಚು ನೋವನ್ನು, ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಅವಳ ಜವಾಬ್ದಾರಿಯ ವಿಸ್ತಾರ ಮತ್ತು ಸೈರಿಣಿಯೇ ಕಾರಣ. ಹಿಂದೆ ಅವಳು ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದ ಕಾಲವೊಂದಿತ್ತು. ಒಮ್ಮೆ ತಾಳಿಗೆ ಕೊರಳನ್ನು ಒಡ್ಡಿದಳೆಂದರೆ ಅವಳ ಬದುಕಲ್ಲಿ ಎಂಥ ಬದಲಾವಣೆ ಆಗುತ್ತಿತ್ತು  ಮತ್ತು ಆಕೆಯ ಸಂಪೂರ್ಣ ಬದುಕು ಯಾರು ನಿಯಂತ್ರಿಸುತ್ತಿದ್ದರು ಎನ್ನುವುದನ್ನು ಬೆಳೆಗೆರೆ ಜಾನಕಮ್ಮನವರ ಕವಿತೆಯ ಸಾಲಗಳನ್ನು ಅವಲೋಕಿಸುವ ಮೂಲಕ ಗ್ರಹಿಸಬಹುದು “ಗಂಡನೆಂದರೆ ಪ್ರಾಣಗಂಡ ಹೆಣ್ಣೆ ನೀ ಗಂಡನ ಕೂಡಿಕೊಂಡ್ಯಾನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆಬಾಡೀಗೆ ಬಸವನು ಶಿರಬಾಗಿಕೊಂಡಂತೆಅಧಿಕಾರಿ ನಿನಗವನೊಬ್ಬ ನಿರುತ ದುಡಿದರೆ ಆಶನದ ಹಬ್ಬತಪ್ಪಿ ಬೇನೆ ಬೇಸರವಾಗಿ ಉಸ್ಸೆನ್ನಲಬ್ಬಬ್ಬಏನಾಯ್ತು ಎಂದು ಗಂಟ್ಹಾಕುವ ಹುಬ್ಬ”  ಇದು ಹೆಣ್ಣಿಗೆ ಮದುವೆ ಎಂಬುದು ಒಂದು ನೆರಳು ಸಿಕ್ಕಂತೆ ಎಂಬ ನಿಲುವನ್ನೇ ಬಡುಮೇಲು ಮಾಡುತ್ತದೆ. ಇದು ನೆರಳು ನಿಜ ಆದರೆ ಮಂಡೂಕದ ಹೆಡೆಯ ಕೆಳಗಿನ ನೆರಳು ಎಂಬುದಂತು ಸತ್ಯ ಅವಳು ಸದಾ ದುಡಿಯುತ್ತಿರಬೇಕು ಅಪ್ಪಿ ತಪ್ಪಿ ಅವಳು ಬೇಸರಿಕೆ ಬೇನೆ ಎಂದರೆ ಗಂಡನು ಅವಳನ್ನು ಸಹಿಸದಾಗುವನು. ಆದರೆ ಅವಳು ಇಂದು ಇದನ್ನು ದಾಟಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾಳೆ. ಮನೆಗೆ ಸೀಮಿತವಾಗಿದ್ದ ಅವಳ ಬದುಕು ಈಗ ತನ್ನ ಮನೆಯ ನಿರ್ವಹಣೆಗಾಗಿ ಹೊರಗೂ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯಾ ನಂತರದಲ್ಲಿ ಆದ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಯು ಅವಳ ಬದುಕನ್ನು ಹೀಗೆ ಬದಲಿಸಿತು ಅಷ್ಟೇ ಅಲ್ಲದೇ ಅವಳ ಕಾರ್ಯ ಕ್ಷೇತ್ರವನ್ನೂ ವಿಸ್ತರಿಸಿತು. ಪುರುಷನಿಗೆ ಸರಿ ಸಮನವಾಗಿ ಜ್ಞಾನ, ಶಿಕ್ಷಣ ಸಾಮರ್ಥ್ಯ ಎಲ್ಲವೂ ಇರುವ ಆಕೆ ಕೇವಲ ಮನೆಗೆ ಮಾತ್ರ ಸೀಮಿತವಾಗದೇ ಜ್ಞಾನ, ಕಾರ್ಯಕ್ಷೇತ್ರವು ವಿಸ್ತಾರಗೊಂಡಿದ್ದರೂ  ಮನೆಯನ್ನು ಮೊದಲಿಗಿಂತಲೂ  ಚನ್ನಾಗಿ ನಿಭಾಯಿಸುವ ಕಲೆ ಕರಗತವಾಗಿದ ಮಹಿಳೆ ಮಾಡುವಷ್ಟು ಕೆಲಸವನ್ನು ಪುರುಷ ಮಾಡಲಾರ. ಮಾಡಲಾರ ಅಂದರೆ, ಅವನಿಗೆ ಶಕ್ತಿ ಸಾಮರ್ಥ್ಯ ಇಲ್ಲ ಎಂದಲ್ಲ ಗಂಡಸು ಹೊರಗೆ ದುಡಿದು ಬಂದನೆಂದರೆ ಆತ ಮನೆಯ ಕಡೆಗೆ ಜವಾಬ್ದಾರಿಯಿಂದ ನುಸಿಳಿಕೊಳ್ಳುವುದೇ ಹೆಚ್ಚು.  ನಮ್ಮಲ್ಲಿ ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕೆಲವು ಕುಟುಂಬಗಳಲ್ಲಿ  ಹೊರಗು ದುಡಿಯದ ಗಂಡಸರು ಇರುವುದನ್ನು ಕಾಣುತ್ತೇವೆ. ಆದರೆ ಹೆಣ್ಣು ಇಂದು ಒಳ ಹೊರಗೂ ದುಡಿಯುವ ಯಂತ್ರವಾಗುತ್ತಿದ್ದಾಳೆ. ಆದರೂ ಕುಟುಂಬದಲ್ಲಿ ಅವಳಿಗೆ ಹತ್ತು ಹಲವು ತಾಪತ್ರಯಗಳು, ಅದೆಲ್ಲವನ್ನು ಮೀರಿ ತನ್ನ ಸ್ಥಾನ ಮಾನಗಳನ್ನು ಭದ್ರಪಡಿಸಿಕೊಳ್ಳುವ ಅಗತ್ಯವಿದೆ ಇದೆಲ್ಲದರ ಜೊತೆಗೆ  ಮಕ್ಕಳ ಲಾಲನೆ-ಪಾಲನೆ ಮಾಡುವುದು ಮುಖ್ಯ ಕೆಲಸಗಳಲ್ಲಿ ಒಂದು, ಹಿಂದೆ ಅವಳು ಕೇವಲ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾಗ ಪುರುಷ ಕೊನೆಯ ಪಕ್ಷ ಹೊರಗೆ ದುಡಿದು ತರುತ್ತಿದ್ದ ಮನೆಯ ಸಂಪೂರ್ಣ ಜವಾಬ್ದಾರಿ ಅವಳು ನಿರ್ವಹಿಸುತ್ತಿದ್ದಳು ಆದರೆ ಬದಲಾದ ಸಂದರ್ಭದಲ್ಲಿ ಅವಳಿಗೆ ಇದೆಲ್ಲಾ ಹೊರೆ ಆಗುತ್ತಿದೆ.ಆದರೂ ದೈರ್ಯಗೆಡದೇ ಗಂಡಸಿನ ಸಮನಾಗಿ ಎಲ್ಲಾ ರಂಗಕ್ಕೂ ಪಾದಾರ್ಪಣೆ ಮಾಡಿ ಈಗ ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆಗೈದ ಅವಳಿಗಾಗಿ ಒಂದು ದಿನವನ್ನು ಅವಳ ಸಾಧನೆಯನ್ನು ಮೆರೆಸುವ ದಿನವನ್ನಾಗಿ ಆಚರಿಸಲಾಗುತ್ತಿದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಮಾನದಿಂದ ಆಚರಿಸುತ್ತಾ ಬರಲಾಗುತ್ತಿದೆ. ೧೯೧೧ ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯಾ,ಜರ್ಮನಿ,ಸ್ವಿಟ್ಜರ್ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನ ಸೇರಿ ಈ ದಿನವನ್ನು ಆಚರಿಸುತ್ತಿದ್ದರು. ಪ್ರಾರಂಭದಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ “ಕೂಲಿ ಚಳವಳಿ”ಯ ಮೂಲಕ(ಲೇಬರ್ ಮೂವ್‌ಮೆಂಟ್) ಉತ್ತರ ಅಮೇರಿಕಾ  ಮತ್ತು ಯುರೋಪ್ ನಲ್ಲಿ ಆಚರಿಸಲಾಯಿತು. ಈ ದಿನವನ್ನು ಆಚರಿಸುವ ಮೂಲಕ “ಲಿಂಗ ಸಮಾನತೆ”ಯನ್ನು ರೂಪಿಸುವುದಾಗಿತ್ತು.ಮಹಿಳೆಯ ಬಹುಮುಖ ಸಾಧನೆಯನ್ನು, ಆಕೆಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಮೀಸಲಾಗಿರಿಸಿದೆ. ಇಷ್ಟಾದರೂ ಗಂಡು ಹೊರಗೆ, ಹೆಣ್ಣು ಒಳಗೆ ದುಡಿಯುತ್ತಿದ್ದ ಕಾಲದಲ್ಲಿ ಅದನ್ನು “ಶ್ರಮ ವಿಭಜನೆ”ಎಂದು  ಹೇಳಬಹುದು. ಆದರೆ ಇಲ್ಲೊಂದು ವಿಷಯ ಮರೆಯುವಂತಿಲ್ಲ ಗಂಡಸೇ ಯಾಕೆ ಹೊರಗಿನ ಕೆಲಸವನ್ನು ನಿರ್ವಹಿಸುತ್ತಿದ್ದ ಎನ್ನುವುದಿಲ್ಲಿ ನಿಜಕ್ಕೂ ಚರ್ಚಿಸುವ ವಿಚಾರ. ಇಂದು ಎಲ್ಲಾ ರಂಗದಲ್ಲೂ ಪುರುಷನಿಗೆ  ಸಮಾನವಾಗಿ ದುಡಿಯುತ್ತಿರುವ ಅವಳಿಗೆ  ವ್ಯವಹಾರ ಜ್ಞಾನ ಇರಲಿಲ್ಲವೇ? ಆದರೂ ಅವಳನ್ನು ನಾಲ್ಕು ಗೋಡೆಯ ನಡುವೆ ಹೊರಗಿನ ವ್ಯಹಾರಗಳಿಂದ ದೂರ ಇರಿಸಿದ್ದು ಮಾತ್ರ ಪುರುಷನ ವ್ಯವಹಾರ ಚತುರತೆಯೇ ಸರಿ ಲೇಖಕಿ ಡಯೇನ್ ಮೇರಿ ಚೈಲ್ಡ`ರ “ಮಹಿಳೆಯರಲ್ಲಿ ಸೃಷ್ಟಿಸುವ, ಪೋಷಿಸುವ, ಮತ್ತು ರೂಪಾಂತರಿಸುವ ಶಕ್ತಿ ಇದೆ” ಎನ್ನುವ ಮಾತು ಅತಿಶಯೋಕ್ತಿ ಎನಿಸದು. ಇತಿಹಾಸದುದ್ದಕ್ಕೂ ಅವಳ ಸಾದನೆಯನ್ನು ಕಾಣುತ್ತೇವೆ. ಮಹಿಳೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೇ, ಇಂದು ಆರ್ಥಿಕ. ಸಾಮಾಜಿಕ, ರಾಜಕೀಯ ಮತ್ತು ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಇಂಥಹ ಇವಳನ್ನು ಲಿಂಗ ಅಸಮಾತೆಯಂತಹ ಸಮಸ್ಯೆಯಿಂದ ದೂರ ಇಡಲು ಆಗದಿರುವ ದುರಂತ ಸಂದರ್ಭವನ್ನು ಎದುರಿಸುತ್ತಿದೆ-ಪ್ರಪಂಚ.ಆದ್ದರಿಂದ  ೧೮/೧೯ನೇ ಶತಮಾದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಇದು ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸರಕಾರಿ ವಲಯದಲ್ಲಿಯೂ `ಜಂಡರ್ ಪೇ ಗ್ಯಾಪ್` ಬಗ್ಗೆ ಧ್ವನಿ ಎತ್ತಲಾಗಿದೆ. ಸಮಾನತೆಗಾಗಿ ಹಲವು ಮಹಿಳಾವಾದಿಗಳು ೧೯೭೦/೮೦ ರ ದಶಕದಲ್ಲೂ ಹೆಚ್ಚು ಹೋರಾಟ ನಡೆಸಿದ್ದಾರೆ. ಅವಳು ಹೋರಾಡುತ್ತಲೇ ಇದ್ದಾಳೆ ಅವಳ ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಲು ಆಗದಂತೆ. “ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ಐದು ಮಹಿಳೆಯರಲ್ಲಿ ಒಬ್ಬ ಮಹಿಳೆ ಕೆಲವು ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಾಳೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ,ಧಾರ್ಮಿಕ ರಂಗಗಳಲ್ಲಿ ಲಿಂಗ ತಾರತಮ್ಯ, ಕೌಟುಂಬಿಕ ಹಿಂಸೆ,ಇತರ ಅಂಶಗಳಿಂದಾಗಿ ಮಹಿಳೆಯರು ಮಾನಸಿಕ ಆರೋಗ್ಯದಂತಹ ಸಮಸ್ಯೆಗಳಿಂದಾಗಿ ಹೆಚ್ಚು ದುರ್ಬಲರಾಗಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯದ ಸಮಸ್ಯೆಗಳು ಸಮಾಜಿಕ ಒತ್ತಡಗಳು, ಅವುಗಳ ವಿವರಣೆಯಿಂದ ಅಪಹಾಸ್ಯ ಮಾಡುವ ಮೂಲಕ ತರ್ಕಬದ್ಧಗೊಳಿಸಲಾಗುತ್ತಿದೆ  ಮಹಿಳೆ ಎಂಬ ಕಾರಣದಿಂದ ಹೆಚ್ಚು ಋಣಾತ್ಮಕವಾಗಿದೆ. ಎಂದು ಕ್ಲಿನಿಕಲ್ ಸೈಕಾಲಜಿಷ್ಟ್ ರುಚಿ ಶರ್ಮ ಹೇಳುತ್ತಾರೆ. ಡಾ. ಭಾರತಿ ಅಶೋಕ್

ಮಹಿಳಾ ವಿಶೇಷ ದಿನ, ಡಾ.ಭಾರತಿ ಅಶೋಕ್ Read Post »

ಇತರೆ

ಮಹಿಳಾ ದಿನದ ವಿಶೇಷ,ವನಜ ಮಹಾಲಿಂಗಯ್ಯ

ಮಹಿಳಾ ದಿನದ ವಿಶೇಷ ವನಜ ಮಹಾಲಿಂಗಯ್ಯ ಹೆಣ್ಣೆಂದರೆ ಹೆಣ್ಣೆಂದರೆ ಏನೆಂದು ತಿಳಿಯಬೇಕಾ?ಅವಳೇ ಮಮತೆಯ ಮಡಿಲು,ತಾಯಿಯೇ ಪ್ರೀತಿಯ ಗಣಿ,ಆಕೆಯೇ ತಾಳ್ಮೆಯ ಮೂರುತಿ. ಹೃದಯಾಂತರಾಳದ್ದು ಅವಳ ಪ್ರೀತಿ,ಅವಳ ತಾಳ್ಮೆ ಬೇರಾರಿಗೂ ಬಾರದು,ಅವಳೇ ತನ್ನ ಗಂಡನಿಗೆ ಸರ್ವಸ್ವ,ತನ್ನ ಮುದ್ದು ಮಕ್ಕಳಿಗೆ ಮಹಾತಾಯಿ. ತಾಯಿಯೇ ಮಕ್ಕಳಿಗೆ ಮೊದಲ ಗುರು,ಅಕೆಯಿಂದ ಪಾಠ ಕಲಿತ ಮಕ್ಕಳೇ ಧನ್ಯರು,ಅಕೆ ಕಲಿಸುವ ಪಾಠ ಬದುಕಿಗೆ ದಾರಿದೀಪ,ಆ ಮಕ್ಕಳು ಸದಾ ತಾಯಿಯನ್ನು ಸ್ಮರಿಸಬೇಕು. ಆಕೆಯಿಂದ ಪಾಠಕಲಿತವರು ಜಗವ ನೋಡಬೇಕು,ಆಕೆಯ ಪ್ರೀತಿ ಮಕ್ಕಳ ಯಶಸ್ಸಿಗೆ ಕಾರಣವಾಗಬೇಕು,ಅವಳ ಸ್ಪರ್ಶ ಮಕ್ಕಳಿಗೆ ಶಕ್ತಿ ತುಂಬಬೇಕು,ಅವಳ ಸಹನೆ ಮಕ್ಕಳ ಹೃದಯದಲ್ಲಿ ನೆಲೆಸಬೇಕು. ತಾಯಿ ಆಶೀರ್ವಾದ ಮಕ್ಕಳ ಅಭಿವೃದ್ಧಿಯಾಗಬೇಕು,ಅವಳ ವಾತ್ಸಲ್ಯದಿಂದ ಮಕ್ಕಳು ಗುರಿ ಮುಟ್ಟಬೇಕು,ಅವಳ ತಾಳ್ಮೆ ಅಪ್ರತಿಮವಾದುದಾಗಿರಬೇಕು,ತಾಯಿ ಮಮತೆ ದೀರ್ಘ ತಮ್ಮ ಬದುಕಾಗಬೇಕು. ವನಜ ಮಹಾಲಿಂಗಯ್ಯ

ಮಹಿಳಾ ದಿನದ ವಿಶೇಷ,ವನಜ ಮಹಾಲಿಂಗಯ್ಯ Read Post »

ಕಾವ್ಯಯಾನ

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ ರಶ್ಮಿ ಶಮಂತ್ ಪ್ರೇಮಕುಸುಮ ಅಲೆವಳು ಅವಳುಜವಾಬ್ದಾರಿಗಳ ಸಂತೆಯಲಿಕನಸಿನ ಅಂಗಡಿಯ ಹುಡುಕುತಪರಿಚಿತರ ಮುಖವಾಡದೊಳಗೆತನ್ನವರೆಂಬುವರ ಅರಸುತ ಹೊರುವಳು ಆಕೆಹೊಣೆಯ ಮೂಟೆಗಳದೊರಕದವಳಿಗೆ ಸನ್ಮಾನಅಲಂಕರಿಸುವುದುಕೊಂಕು ಬಿರುದುಗಳ ತಾತ್ಸಾರ ಮನದ ಬಯಲಿನಲಿಸುಂಟರಗಾಳಿ ತಾಂಡವವಾಡುತಿರಲುತಾಳ್ಮೆ ಸಹನೆಗಳ ಕಡಿವಾಣವದಕೆಬೆನ್ನೆಲುಬಾಗಿಹಳುತನ್ನದಲ್ಲದ ಕನಸುಗಳ ಸಾಕಾರಕೆ ನಗುನಗುತಲೇ ಬದುಕುವಳುತನ್ನದಲ್ಲದ ಜೀವನದಲಿಪ್ರವಾಹಗಳನೇ ಎದುರಿಸುವಳುಸಂಸಾರದ ಹೊನಲಿನಲಿಸುಗಂಧವ ಬೀರುವ ಪ್ರೇಮಕುಸುಮವಾಕೆ…. ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್ Read Post »

ಇತರೆ

ಮಹಿಳಾ ವಿಶೇಷ ದಿನ, ವೀಣಾ ಹೇಮಂತ್‌ ಗೌಡ ಪಾಟೀಲ್

ಮಹಿಳಾ ದಿನದ ವಿಶೇಷ ವೀಣಾ ಹೇಮಂತ್‌ ಗೌಡ ಪಾಟೀಲ್ ಮಹಿಳಾ ದಿನಾಚರಣೆ… ಹೊತ್ತವರಿಗಷ್ಟೇ ಗೊತ್ತು ಕಿರೀಟದ ಭಾರ. ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮಮತಾಮಯಿ, ತ್ಯಾಗಮಯಿ, ಕ್ಷಮಯಾಧರಿತ್ರಿ,ತಾನು ಅರೆಹೊಟ್ಟೆ ಉಂಡರೂ ಮನೆ ಜನರ ಹೊಟ್ಟೆ ತುಂಬಿಸುವ ಅನ್ನಪೂರ್ಣೆ, ಒಡಹುಟ್ಟಿದವರನ್ನು ಪೊರೆವ ಸಹೋದರಿ, ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾತಾಯಿ ಹೆಣ್ಣಿಂದಲೇ ಇಹ ಪರಗಳು ಅಬ್ಬಬ್ಬ ಅದೆಷ್ಟು ಪ್ರಿಫಿಕ್ಸುಗಳು, ಸಫೀಕ್ಸುಗಳು…. ಕೇಳಲು ಅದೆಂಥ ಮಧುರ, ಆದರೆ ನಿಭಾಯಿಸಲು…. ಹೊತ್ತವರಿಗಷ್ಟೇ ಗೊತ್ತು ಕಿರೀಟದ ಭಾರ!! ಹೆಚ್ಚು ಮಾತಾಡಿದರೆ ವಾಚಾಳಿ,ಬಾಯ್ಬಡಕಿ, ಮಾತನಾಡದಿದ್ದರೆ ಗುಮ್ಮನಗುಸುಗಿ, ಚಟುವಟಿಕೆಯಿಂದಿದ್ದರೆ ನಿಂತಲ್ಲಿ ಕಾಲು ನಿಲ್ಲುವುದಿಲ್ಲ, ಸುಮ್ಮನೆ ಕುಳಿತರೆ ಸೋಂಬೇರಿ, ಚೆನ್ನಾಗಿ ತಯಾರಾಗಿ ನಿಂತರೆ ತಯಾರಬಸಲಿಂಗಿ, ಸರಳವಾಗಿದ್ದರೆ ಮುಶಂಡಿ….ಹೇಗೆ ಆಕೆಯ ಸ್ವಭಾವವನ್ನು ಅಳೆಯುವರು. ಪುರಾಣ ಕಾಲದಿಂದಲೂ ಹೆಣ್ಣು ಮಕ್ಕಳನ್ನು ತಾಯಿಯಾಗಿ, ಸೋದರಿಯಾಗಿ,ಪತ್ನಿಯಾಗಿ, ಪ್ರೇಯಸಿಯಾಗಿ, ಮಗಳಾಗಿ, ಸಹಪಾಠಿಯಾಗಿ ಸ್ನೇಹಿತೆಯಾಗಿ ಹೀಗೆ ಹತ್ತು ಹಲವು ವಿಧಗಳಲ್ಲಿ ನೋಡಿದ್ದಾರೆ… ಎಲ್ಲವೂ ನಿಜ ಆದರೆ ಇವೆಲ್ಲವೂ ಅರ್ಧ ಸತ್ಯಗಳು!! ಒಪ್ಪಿದರೂ ಒಪ್ಪದಂತಹ ಕಟು ಸತ್ಯಗಳು. ಹೆಣ್ಣನ್ನು ಆಕೆಯ ಎಲ್ಲಾ ರೂಪಗಳಲ್ಲಿ, ಜೀವನದ ವಿವಿಧ ಹಂತಗಳಲ್ಲಿ ನೋಡುವ ಜನ … ಹೆಣ್ಣು ಕೂಡ ಓರ್ವ ವ್ಯಕ್ತಿ… ಆಕೆಗೂ ಒಂದು ವ್ಯಕ್ತಿತ್ವವಿದೆ, ಮನಸ್ಸಿದೆ, ಭಾವನೆಗಳಿವೆ, ಇಷ್ಟಾನಿಷ್ಟಗಳಿವೆ. ಆಕೆಯದ್ದೇ ಆದ ವೈಯುಕ್ತಿಕ ಜೀವನವಿದೆ ಎಂಬುದನ್ನು ಮರೆತಿದ್ದಾರೆ. ಸ್ವತಃ ಹೆಣ್ಣು ಮಕ್ಕಳು ಕೂಡ ತಮ್ಮ ಕುಟುಂಬದ ಜವಾಬ್ದಾರಿ ನಿರ್ವಹಿಸಬೇಕಿರುವ ಅನಿವಾರ್ಯತೆಯನ್ನು ಅಪ್ಪಿ ಒಪ್ಪಿಕೊಂಡು ಬಾಳುತ್ತಾರೆ. ಇದಕ್ಕೆ ಹತ್ತು ಹಲವಾರು ಕಾರಣಗಳು. ಮೊದಲನೆಯದಾಗಿ ತಮಗೆ ಹೆಣ್ಣು ಹುಟ್ಟಿರುವುದು ಪರರ ಮನೆ ಬೆಳಗಲು ಎಂಬುದು ಹೆಣ್ಣಿನ ಹೆತ್ತವರ ಭಾವವಾಗಿದ್ದು ಅವರು ಆಡುವ ಪ್ರತಿ ಮಾತಿನಲ್ಲಿಯೂ ಆಕೆ ತಾನು ಹೆರವರ ಸ್ವತ್ತು ಎಂದು ಪರಕೀಯ ಪ್ರಜ್ಞೆಯನ್ನು ಅನುಭವಿಸುತ್ತಾಳೆ. ಯಾವುದನ್ನು ಕಟುವಾಗಿ ವಿರೋಧಿಸದ ಹೆಣ್ಣು ಮಕ್ಕಳು ಇದನ್ನು ಒಪ್ಪಿ ಬಾಳುತ್ತಾರೆ. ಇನ್ನು ಆಕೆ ಮದುವೆಯಾಗಿ ಬಂದ ಗಂಡನ ಮನೆಯವರು ಆಕೆಯನ್ನು ಹೊರಗಿನಿಂದ ಬಂದವಳು, ತಮ್ಮ ಮನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮನೆಯೊಡತಿ!!? ಎಂದು ನಡೆಸಿಕೊಳ್ಳುತ್ತಾರೆ. ಆದರೆ ಇದು ಕೂಡ ಅರ್ಧ ಸತ್ಯವೇ. ಹುಟ್ಟಿದ ತವರು ಮನೆಗೆ ಹೊರಗಿನವಳು ಗಂಡನ ಮನೆಗೆ ಹೊರಗಿಂದ ಬಂದವಳು… ಎಂಬ ಅಡ್ಡಗೋಡೆಯ ಮೇಲಿನ ದೀಪದ ಹಾಗೆ ಜೀವನ. ಎಲ್ಲ ಕಡೆ ಇದ್ದರು ಎಲ್ಲೂ ಸಲ್ಲದವಳು ಎಂಬ ನೋವಿನ ಭಾವ ಜೀವಿತದ ಕಡೆಯವರೆಗೂ ಆಕೆಯನ್ನು ಅನಾಥ ಪ್ರಜ್ಞೆಯಲ್ಲಿ ಬಳಲುವಂತೆ ಮಾಡುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಯಾವತ್ತೂ ಪುರುಷನ ಅಡಿಯಾಳಾಗಿರುವುದು ಇದಕ್ಕೆ ಕಾರಣ. ಇನ್ನು ಸಮಾಜದಲ್ಲಿ ತನ್ನ ಮೇಲಾಗುವ ದೌರ್ಜನ್ಯಗಳಿಗೆ ಗಂಡಸನ್ನು ವಿರೋಧಿಸುವ ಹೆಣ್ಣುಮಕ್ಕಳು ಎಷ್ಟೋ ಬಾರಿ ಬಜಾರಿ, ಗಂಡು ಬೀರಿ, ಸಂಸಾರಒಡೆಯುವವಳು ಎಂದು ಕರೆಯಲ್ಪಡುತ್ತಾಳೆ. ಕೌಟುಂಬಿಕ ಕಲಹಗಳಲ್ಲಿ ತಪ್ಪು ಯಾರದ್ದೇ ಇರಲಿ ಹೊಂದಿಕೊಂಡು, ಅನುಸರಿಸಿಕೊಂಡು ಹೋಗಲು ಹೇಳುವುದು ಹೆಣ್ಣು ಮಕ್ಕಳಿಗೆ ಮಾತ್ರ. ಒಟ್ಟಿನಲ್ಲಿ ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು.ಕಾರಣ ಆಕೆ ಭೂಮಿ ತಾಯಿಯಷ್ಟೇ ತಾಳ್ಮೆಯನ್ನು ಹೊಂದಿರುವ ವ್ಯಕ್ತಿ ಎಂಬ ಬಣ್ಣದ ಹೋಲಿಕೆ!!. ಆದರೂ ನಮ್ಮ ಸಮಾಜ ಮತ್ತು ಜನರು ಇನ್ನೂ ತಮ್ಮ ಪುರಾತನ ಧೋರಣೆಗಳಿಂದ ಕಿಂಚಿತ್ತು ಬದಲಾಗಿಲ್ಲ. ಎಷ್ಟೋ ಬಾರಿ ದುಡಿಯುವ ಹೆಣ್ಣು ಮಕ್ಕಳ ವೇತನವನ್ನು ಕೂಡ ಗಂಡಸರೇ ಬಳಸುತ್ತಾರೆ ಅಕಸ್ಮಾತಾಗಿ ಈ ಕುರಿತು ಆಕೆ ಏನಾದರೂ ಪ್ರಶ್ನಿಸಿದರೆ ದುಡಿಯುತ್ತಿನಿ ಎಂಬ ಹಮ್ಮುಜೊತೆಗೆ ನಿನ್ನ ಉದ್ಯೋಗದ ಅವಶ್ಯಕತೆ ನಮ್ಮನೆಗೆ ಇಲ್ಲ ಕೆಲಸವನ್ನು ಬಿಟ್ಟು ಬಿಡು ಎಂಬ ರೋಪು ಬೇರೆ. ಉದ್ಯೋಗ ತನ್ನ ವೈಯುಕ್ತಿಕ, ಆರ್ಥಿಕ ಬೆಳವಣಿಗೆಯ ಮತ್ತು ತನ್ನ ಸ್ವಾವಲಂಬಿ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬ ಅರಿವನ್ನು ಹೊಂದಿರುವ ಹೆಣ್ಣುಮಕ್ಕಳು ಅನಿವಾರ್ಯವಾಗಿ ತಗ್ಗಿ ಬಗ್ಗಿ ನಡೆಯುತ್ತಾರೆ. ಹೆಣ್ಣು ಮಕ್ಕಳು ಉಡುವ ಬಟ್ಟೆಗಳು ಅವರ ಚಾರಿತ್ರ್ಯವನ್ನು ಹೇಳುತ್ತವೆ ಎಂಬುದು ಸಮಾಜದ ಅಂಬೋಣ. ಇದು ಎಷ್ಟರ ಮಟ್ಟಿಗೆ ಸರಿ. ತನ್ನಇಷ್ಠದಂತೆ ಬಟ್ಟೆ ತೊಡುವ,ಕಲಿಯುವ, ಬದುಕುವ ಅವಕಾಶಗಳು ಆಕೆಗೆ ಮರೀಚಿಕೆ ಎಂಬುದು ವಿಷಾದನೀಯ. ನಿನ್ನ ಜೀವನ ನಿನ್ನ ಬದುಕು… ನಿನ್ನಿಷ್ಟದಂತೆ ಬದುಕು ಕಟ್ಟಿಕೋ ಎಂದು ಎಂದಾದರೂ ನಿಮ್ಮ ತಾಯಿಗೆ, ಸಹೋದರಿಗೆ, ಪತ್ನಿಗೆ,ಸ್ನೇಹಿತೆಗೆ ಹೇಳಿದ್ದೀರಾ?? ನಿನ್ನ ಹವ್ಯಾಸಗಳನ್ನು ಮುಂದುವರೆಸು, ನಿನಗಾಗಿ ಸಮಯವನ್ನು ಮೀಸಲಿಡು ಎಂದು ಹೇಳಿದ್ದೀರ? ಆಕೆ ಕೆಲಸ ಮಾಡುವಾಗ ಒಂದು ಕಪ್ಪು ಚಹಾ ಮಾಡಿ ಕೊಟ್ಟಿದ್ದೀರಾ?? ಇತ್ತೀಚೆಗೆ ಬಹಳಷ್ಟು ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೆಚ್ಚು ಮಹತ್ವ ನೀಡುತ್ತಿದ್ದು ತತ್ಪರಿಣಾಮವಾಗಿ ಹೆಣ್ಣು ಮಕ್ಕಳು ಔದ್ಯೋಗಿಕವಾಗಿ, ಸಾಮಾಜಿಕವಾಗಿ ಮುಖ್ಯವಾಗಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಮಕ್ಕಳೆಡೆಗಿನ ತಂದೆ ತಾಯಿಗಳ ಈ ಬಗೆಯ ಪ್ರೀತಿ, ಕಾಳಜಿ ಮತ್ತು ಮಕ್ಕಳ ಭವಿಷ್ಯದ ಕುರಿತಾದ ಅವರ ಹಿತಾಸಕ್ತಿಗಳು ಮಕ್ಕಳ ಭದ್ರ ಭವಿಷ್ಯಕ್ಕೆ ಬುನಾದಿಯಾಗುತ್ತಿವೆ. ಇದು ಸ್ವಾಗತಾರ್ಹ ವಿಷಯ. ಹೆಣ್ಣು ಮಕ್ಕಳು ಯಾರೇ ಇರಲಿ, ಹೇಗೆ ಇರಲಿ ಏನೇ ಇರಲಿ ಅವರನ್ನು ಗೌರವಿಸಿ, ಅವರ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ ನೋಡಿ ಜಡ್ಜ್ ಮಾಡಬೇಡಿ. ಅದಾಗದಿದ್ದರೆ ಅವರ ಚಾರಿತ್ರ್ಯವಧೆ ಮಾಡದೆ, ನಿಮ್ಮ ಪಾಡಿಗೆ ನೀವಿರಿ. ಶತಮಾನಗಳಿಂದ ನೀವು ಸಿರುವ ಕಿರೀಟದ ಭಾರವನ್ನು ಹೊತ್ತು ಹೆಣ್ಣು ನಡೆದಿದ್ದಾಳೆ…. ಮುಂದೆಯೂ ನಡೆಯುತ್ತಾಳೆ ಕೂಡ. ಆದರೆ ಆಕೆಗೆ ಆಕೆಯದ್ದೇ ಜೀವನವನ್ನು ರೂಪುಗೊಳಿಸಿಕೊಳ್ಳಲು ಕೊಂಚ ಸ್ಪೇಸ್ ಕೊಡಿ….. ಅದುವೇ ನಿಜವಾದ ಮಹಿಳಾ ದಿನಾಚರಣೆಯ ಸಾರ್ಥಕತೆ. ವೀಣಾ ಹೇಮಂತ್ ಗೌಡ ಪಾಟೀಲ್ 

ಮಹಿಳಾ ವಿಶೇಷ ದಿನ, ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

ಮಹಿಳಾ ದಿನದ ವಿಶೇಷ,ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಬಾಗಲಕೋಟ ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ ಅವಳೆಂದರೆ ಅವಳೆಂದರೆಜೀವದ ಒಡಲುಮಮತೆಯ ಮಡಿಲುಕರುಣೆಯ ಕಡಲುಪ್ರೀತಿಗೆ ಮಿಗಿಲು ಅವಳೆಂದರೆಮಧುರ ಭಾವಗಳ ಸಾಗರಸದಾ ಸಂತಸದ ಆಗರತ್ಯಾಗ, ಸಹನೆಯ ಶಿಖರಜ್ಞಾನಧಾರೆಯ ಭಂಡಾರ ಅವಳೆಂದರೆಬದುಕಿಗೆ ಬಣ್ಣ ತುಂಬುವ ಕಲಾವಿದೆಕವಿ ಕಾವ್ಯದ ವಸುಂಧರೆಅಕ್ಕರೆಯ ಅಮೃತಧಾರೆಸೃಷ್ಟಿಯ ಸೌಂದರ್ಯ ಅವಳೆಂದರೆಅಬಲೆಯಲ್ಲ ಆದರ್ಶಆತ್ಮಾಭಿಮಾನದ ಅನರ್ಘ್ಯಆಧ್ಯಾತ್ಮದ ಅನುಭೂತಿಗಳತಿ,ಸಂಗಾತಿ ಸಂಪ್ರೀತಿ ಅವಳೆಂದರೆಮಿಡಿಯುವ ಮೌನಗಾನಮನ ಮಂದಿರದ ತಾಣಬದುಕಿನ ಉಯ್ಯಾಲೆಜ್ಞಾನದ ಸ್ಪೂರ್ತಿಸೆಲೆ ಅವಳೆಂದರೆಕುಟುಂಬದ ಹೊಣೆಗಾರಿಕೆದಡ ಸೇರಿಸುವ ನೌಕೆಎಲ್ಲರನು ಸಲಹುವ ಸೇವಕಿಸಕಲ ರಂಗದಲಿ ಸಾಧಕಿ ಅವಳೆಂದರೆಸೀಡಿದೇಳುವ ಶಕ್ತಿ ಸ್ವರೂಪಿಣಿದಣಿವರಿಯದ ಧರಣಿಜಗದ ಜೀವನಾಡಿಬಾಳ ಪುಟದ ಮುನ್ನುಡಿ ಅವಳೆಂದರೆಬರೀ ಹೆಸರು ಮಾತ್ರವಲ್ಲತಪ್ಪನ್ನು ತಿದ್ದಿ ಬುದ್ದಿ ಹೇಳುವವಳುಅತ್ತಾಗ ಅಪ್ಪಿ ಮುದ್ದಿಸುವವಳುಹಸಿದಾಗ ಕೈತುತ್ತು ಕೊಡುವವಳು ಅವಳೆಂದರೆಆಲದ ಮರದ ನೆರಳುನೋವು ನುಂಗಿ ನಲಿವಳುಭೂಮಿ ತೂಕದವಳುಹೃದಯ ತುಂಬಿ ಹರಿಸುವವಳು ಅವಳಿದ್ದರೆ ದಿನವೂ ನಿತ್ಯೋತ್ಸವಮತ್ಯಾಕೆ ಕುಣಿದು,ಕುಪ್ಪಳಿಸಿಮಾಡಿ ಮುಗಿಸುವಿರಿ ಅವಳಿಗೊಂದು ಉತ್ಸವಪ್ರೇರಣೆ,ಸಾಧನೆಗಿರಲಿ ಸಂಭ್ರಮೋತ್ಸವ ಡಾ.ಗೀತಾ ದಾನಶೆಟ್ಟಿ ಬಾಗಲಕೋಟ

ಮಹಿಳಾ ದಿನದ ವಿಶೇಷ,ಡಾ.ಗೀತಾ ದಾನಶೆಟ್ಟಿ Read Post »

ಕಾವ್ಯಯಾನ

ಡಾ.ವೈ.ಎಂ ಯಾಕೊಳ್ಳಿ ಅವರ ಕವಿತೆ “ನಾವಂದುಕೊಂಡಂತಲ್ಲ….”

ಕಾವ್ಯ ಸಂಗಾತಿ ಡಾ.ವೈ.ಎಂ ಯಾಕೊಳ್ಳಿ “ನಾವಂದುಕೊಂಡಂತಲ್ಲ….” ನಾವಂದಂತೆಬದುಕಲಾಗದಾದಾಗ‌ಬದುಕು ಬಂದಂತೆಬದುಕಬೇಕು ನಮ್ಮ ಆಸೆಗಳಿಗೆಅವಕಾಶವಿಲ್ಲದಾಗಜಗತ್ತಿ ಆಸೆಗಳ ಜೊತೆನಾವು ಸಾಗಬೇಕು ನಮ್ಮಿಚ್ಛೆಗಳನಷ್ಟೇಪೂರೈಸಲೆಂದು ಬಂದಿಲ್ಲಎಲ್ಲರಿಗೂ ತುಸುಸಮಯವಿತ್ತು ಕಾಯಬೇಕು ಜಗವು ಸ್ಪರ್ಧೆಯಕಣವಷ್ಟೇ ಅಲ್ಲಹೊಂದಾಣಿಕೆಯೂಬಾಳಿನ ಸೂತ್ರವಾಗಬೇಕು ಎಲ್ಲ ನಾನೆ ಗೆಲ್ಲಲಿಎನ್ನುವದು ಸರಿಯಲ್ಲಕೆಲವೊಮ್ಮೆ ನಾವೂ ನೂಸೋಲಿನ ಸವಿಯಅನುಭವಿಸಬೇಕು ಡಾ.ವೈ.ಎಂ‌.ಯಾಕೊಳ್ಳಿ

ಡಾ.ವೈ.ಎಂ ಯಾಕೊಳ್ಳಿ ಅವರ ಕವಿತೆ “ನಾವಂದುಕೊಂಡಂತಲ್ಲ….” Read Post »

ನಿಮ್ಮೊಂದಿಗೆ

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ “ಅರಿವಿನ ಅರಿವೆ ಕೊಳಕಾದೊಡೆ”

ಕಾವ್ಯ ಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಅರಿವಿನ ಅರಿವೆ ಕೊಳಕಾದೊಡೆ” ತಡವಾಗಿಯಾದರೂ ಬೆಳಕು ಹರಿದಿದೆ;ಎಚ್ಚರಗೊಳ್ಳದ ಮಬ್ಬು ಜನಗಳೇಎದ್ದೇಳಿ ಬೇಗ ಎದ್ದೇಳಿ… ಸೂರ್ಯನು ಬಂದು ಬೈದಾನುಚಂದ್ರನು ಕೆರಳಿ ಕೆಂಡವಾದಾನುಇಂದ್ರನು ಶಾಪ ಕೊಟ್ಟಾನು! ಅರಿವಿನ ಅರಿವೆ ಕೊಳಕಾಗಿಸ್ನಾನ ಮಾಡುವುದನ್ನು ಮರೆತರೆಬತ್ತಿ ಹೋದೀತು ಹೊಳೆಸಾಲು,ಒತ್ತುವರಿಯಾಗಿದೆ ಕೆರೆಯ ಬಯಲುಎದ್ದೇಳಿ ಬೇಗ ಎದ್ದೇಳಿ ಚರಂಡಿಯಲ್ಲಿ ಹುಟ್ಟಿ ಬೆಳೆದಸೊಳ್ಳೆಗಳಾಗದಿರಿಹಂದಿಗಳಂತೆ ಹೊರಳಾಡಿ ಗಬ್ಬು ನಾತ ಹೊಡೆಯದಿರಿ ಕಂಬಕ್ಕೆ ಕಟ್ಟಿದ ಹುಲ್ಲು ತಿನ್ನುತಮುಲಾಜಿಗೆ ಬಲಿಯಾಗುವಕುರಿಗಳಾಗದಿರಿಹೊಂಚು ಹಾಕಿ ಸಂಚು ಹೂಡುವನರಿ, ತೋಳಗಳಿಗೆ ಆಹಾರವಾಗದಿರಿ ಬೀಜ ಮೊಳಕೆಯೊಡೆದುಬೆಳೆಯುವುದು ನಿಲ್ಲಿಸಿಲ್ಲಅನಂತಾನಂತ ಅಂಬರದಲ್ಲಿಹಕ್ಕಿಗಳ ಹಾರಾಟಕ್ಕೆ ಅಡ್ಡಿಯಿಲ್ಲಗಾಳ ಹಾಕಿದರೂ, ಬಲೆ ಬೀಸಿದರೂಮೀನುಗಳು ಈಜುವುದನ್ನು ಬಿಟ್ಟಿಲ್ಲ ಪ್ರಕೃತಿ ಬೋಧಿಸುವ ಪಾಠ ಕಲಿತುಸಕಲ ಜೀವಾತ್ಮರಿಗೆ ಲೇಸನ್ನು ಬಯಸಿವಿಶ್ವಮಾನವ ಸಂದೇಶ ಸಾರುವಈಗಲಾದರೂ ಎದ್ದೇಳಿ ಬೇಗ ಎದ್ದೇಳಿಅರಿವಿನ ಅರಿವೆ ಕೊಳಕಾಗದಂತೆನೋಡಿಕೊಳ್ಳಿ….. ಮಹಾಂತೇಶ್.ಬಿ.ನಿಟ್ಟೂರು,       

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ “ಅರಿವಿನ ಅರಿವೆ ಕೊಳಕಾದೊಡೆ” Read Post »

ಕಾವ್ಯಯಾನ

ಪರವಿನಬಾನು ಇ. ಯಲಿಗಾರ ಅವರ ಕವಿತೆ “ನೀನು ನೀನೇ”

ಕಾವ್ಯ ಸಂಗಾತಿ ಪರವಿನಬಾನು ಇ. ಯಲಿಗಾರ “ನೀನು ನೀನೇ” ಏನೆಂದು ಬಣ್ಣಿಸಲಿ ನಿನ್ನ ….?ಹೇಗೆಲ್ಲ ವರ್ಣಿಸಲಿ ನಿನ್ನ  ….? ಸೂರ್ಯನೆನ್ನಲೇ ? ಅಬ್ಭಾ ! ಕಡು ಕೋಪದಲ್ಲಿ ಸುಡುವವನು ,ಇರುಳಲಿ ಮರೆಯಾಗುವವನ ನಿನಗೆ  ಹೇಗೆ ಹೋಲಿಸಲಿ ,ತಂಪೆರೆಯುವ ಶೀತಲ ತಂಗಾಳಿ ನೀ ,ಎಂದೂ ಮರೆಯಾಗದ  ಬಂಧು ನೀ ….. ಚಂದ್ರನೆನ್ನಲೇ ? ಅಯ್ಯೋ ! ಅವನಿಗೂ ಗ್ರಹಣ ಬಾಧಿಸುವುದಲ್ಲ ,ಅಮವಾಸ್ಯೆಯಲಿ ಮಂಕು ಕವಿಯುವವನ ನಿನಗೆ ಹೇಗೆ ಹೋಲಿಸಲಿ ? ಕಲೆಗಳೇ ಇಲ್ಲದ ಶುಭ್ರ ಶ್ವೇತ ಮನಸಿಜ ನೀ ,ಸದಾ ಪಾದರಸ  …. ಸಾಗರವೆನ್ನಲೇ ? ಛೇ ! ಅದು ಉಕ್ಕುವುದು ನಿಷ್ಕರುಣಿಯಂತೆ , ಕೆಲವೊಮ್ಮೆ ಕೆರಳುವುದುರುದ್ರನಂತೆ  . ಹೇಗೆ ಹೋಲಿಸಲಿ ? ಶಾಂತ ಸಿಹಿ ನೀರಿನ ಸರೋವರ ನೀ , ಎಲ್ಲರನೂ ಪೊರೆದು ಪಾವನಗೋಳಿಸುವ ,ಅಂತರ್ಜಲ ನೀ …. ಗಾಳಿ ಎನ್ನಲೇ ? ಅಬ್ಬಬ್ಬಾ ! ನೋಡನೋಡುತ್ತಿದ್ದಂತೆ ಬಿರುಗಾಳಿ ,ಸುಂಟರ ಗಾಳಿಯಾಗಿ ಉಸಿರೇ ಕಸಿಯುವುದು  , ಹೇಗೆ ಹೋಲಿಸಲಿ ? ನೀ ದೇಹದೊಡನಾಡುವ ,ಹೃದಯ ಮಿಡಿಯುವ , ಜೀವ ನೀಡುವ ಉಸಿರು  ನೀ …. ಹೂ ಎನ್ನಲೇ ? ಪಾಪ ! ಅದು ಮುದುಡಿ ಬಾಡುವುದು ಸಂಜೆಗೆ , ಅಲ್ಪಾಯುಷಿಯಾದ ಅದಕೆ ಹೇಗೆ ಹೋಲಿಸಲಿ ? ನೀ ಚೀರಂಜೀವಿ ,ನಿತ್ಯ ನೂತನ ನಿನ್ನ ಜೀವನ  , ಬಾಡದ , ಬತ್ತದ ಅನುರಾಗದ ಸುಧೆ ನೀಯುವೆ ನೀ…… ಅಂಬರವೆನ್ನಲೇ ? ಛೇ ! ಒಂದು ದಿನಕ್ಕೆ ಹಲವು ಬಣ್ಣ ಬದಲಿಸುವುದು ,  ಕಣ್ಣಿಗೆ ಕಂಡರು ವಿಸ್ಮಯದಂತೆ ಕಾಡುವುದು , ಹೇಗೆ ಹೋಲಿಸಲಿ ?  ಎಂದೆಂದೂ ಒಂದೇ ಬಣ್ಣ , ನಿತ್ಯ ಸತ್ಯ ನೀ ….. ಯಾವ ಹೋಲಿಕೆಗೂ ಸಿಗದ , ಯಾವ ವರ್ಣನೆಗೂ ನಿಲುಕದ ನೀನು , ನೀನಾಗಿರು , ಬೇಡ ನಿನಗೆ ಯಾವ ಉಪಮಾನ , ಉಪಮೆಯ . ವರ್ಣನಾತೀತ ನೀ …… ಪರವಿನಬಾನು ಇ. ಯಲಿಗಾರ

ಪರವಿನಬಾನು ಇ. ಯಲಿಗಾರ ಅವರ ಕವಿತೆ “ನೀನು ನೀನೇ” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಬಾಯಲ್ಲಿಯ ಅಕ್ಕಿ ಕಾಳು” ತಥಾಕಥಿತ ದೊಡ್ಡಣ್ಣ ದೂರದೇಶದಿಂದಲೇ ಕಳುಹಿದ ತನ್ನೆಲ್ಲ ಅಷ್ಟೈಶ್ವರ್ಯದ ಶಸ್ತ್ರಾಸ್ತ ಸಾಮರ್ಥ್ಯ ತನ್ನ ನೆಲ ತಣ್ಣಗಿರಲಿಬೇರೆಯವನ ನೆಲ ಜಲ ವಾಯುಗಳು ವಿಷಾನಿಲಗಳಾಗಲಿ, ಉರಿಯುತಿರಲಿ ಸದಾ. ತಾ ಮಾತ್ರ ಹೊಂದಬೇಕು ಮಾರಕಾಸ್ತ್ರ ಅಣ್ವಸ್ತ್ರಅವನಿಗೇಕೆ ಬೇಕು ಈ ಅಶ್ವತ್ಥಾಮಾಸ್ತ್ರ ದೊಡ್ಡಣ್ಣ ನಾನೇ ನಾನೇದುರ್ಯೋಧನನೇ ಅಂದವನು. ಇಬ್ಬರೂ ಮೂರ್ಖರುಇಬ್ಬರೂ ದುರ್ಬುದ್ಧಿಯವರುಇಬ್ಬರಿಗೂ ಹೇಳ ಬಹುದುವಿನಾಶ ಕಾಲೇ ವಿಪರೀತ ಬುದ್ಧಿಃ ಅಡಕತ್ತರಿಯಲ್ಲಿರುವ ನಾವುಇಹ ಪರಗಳ ನೆನೆವವರು ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ- ಒಂಭತ್ತು ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಭಾಗ- ಒಂಬತ್ತುಜಯದೇವಿ ತಾಯಿಯ ಜೀವನ ವೃತ್ತಾಂತ   ಜಯದೇವಿ ತಾಯಿಯವರ ಒಂದು ಅಪೂರ್ಣ ಕನಸು ……ನನಸಾಗಿತ್ತು…!!ಕಷ್ಟ ಕಾರ್ಪಣ್ಯಗಳನ್ನು ಮೌನವಾಗಿ ಸಹಿಸುತಮನದಾಳದ ಕಿಚ್ಚಿನಲಿ ಮಂಥನಗೊಂಡು ಉಲ್ಬಣಗೋಳ್ಳುತ್ತಿದ್ದ ಭಾವನೆಗಳನ್ನು ಮೊದಲ ಬಾರಿಗೆ ಕನ್ನಡ ಭಾಷೆಲ್ಲಿ ಬರೆದಾಗ ಆದ ಆನಂದ ಹೇಳತಿರದಾಗಿತ್ತು…..,!!.  ಕನ್ನಡ ನುಡಿಗಳು ಅವರಿಗೊಂದು ಹೊಸ ಲೋಕದ ಬಾಗಿಲು ತೆರೆದವು. ವರ್ಷಗಳ ಕಾಲ ಮನದೊಳಗೆ ಸಂಗ್ರಹವಾಗಿದ್ದ ನಿಶ್ಶಬ್ದ ನೋವುಗಳು,  ಪ್ರಾರ್ಥನೆಗಳು,ಮಾತನಾಡಲಾಗದ ಮಾತುಗಳು  ಪದಗಳಾಗಿ ಹರಿಯಲಾರಂಭೀಸಿದವು….!! ಅವರು ಕನ್ನಡವನ್ನು ಅಪ್ಪಿಕೊಂಡದ್ದು ಕೇವಲ ಕಲಿಕೆಯ ಕಥೆಯಲ್ಲ,ಇದು ಸಾಹಿತ್ಯ ಲೋಕದ ವಿಜಯಗಾಥೆ! ಹೊಸ ಬೆಳಗಿನ ಉದಯ ಗಾಥೆ..!!  ಕನ್ನಡ ಭಾಷೆಯನು ಗಾಢವಾಗಿ ಪ್ರೀತಿಸುತ್ತ….ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ನಡೆದರು ಕರ್ನಾಟಕ ವಿಶ್ವವಿದ್ಯಾಲಯವೇ ಅವರ ಬಳಿ ಬಂದು ಡಾಕ್ಟರೇಟ್ ಪದವಿಯನ್ನು ಕೊಡಮಾಡಿತು. ಸರ್ವಜ್ಞ ನಂತರ ಪ್ರಥಮ ಬಾರಿಗೆ ತ್ರಿಪದಿಯಲ್ಲಿ ಪುರಾಣವನ್ನು ನಿರ್ಮಿಸಿದರು… ಕನ್ನಡ ಸರಸ್ವತ ಲೋಕದ ಅನಘ್ನ ರತ್ನರಾಗಿ ಖ್ಯಾತಿ ಪಡೆದುಕೊಂಡವರು. ಕನ್ನಡ ಭಾಷೆಯನ್ನು ಕಲಿತ ಜಯದೇವಿ ತಾಯಿಯವರು ಅತ್ಯಂತ ವೇದಾವಿ ಭಾಷಣಕಾರ್ತಿಯಾಗಿ ಹೊರಹೊಮ್ಮಿದರು. ನಾಡಿನ ಮೂಲೆ ಮೂಲೆಗಳಿಂದ ಸುತ್ತಮುತ್ತಲು ಹಳ್ಳಿಗಳಿಂದ ಅವರಿಗೆ ಅವ್ಹಾನ ಬರಲು ಆರಂಭಿಸಿತು . ತಮ್ಮ ಮಾತುಗಳಿಂದ ಜನರ ಮನವನ್ನು ಪರಿವರ್ತಿಸಲಾರಂಭಿಸಿದರು. ಜೊತೆ ಜೊತೆಗೆಪತಿ ಮತ್ತು ಅತ್ತೆ ಸಂತಸದಿಂದ ಸಹಕರಿಸಲಾರಂಭಿಸಿದರು.  ಸರಸ್ವತಿ ಮಂದಿರ ಸ್ಥಾಪನೆಯೊಂದಿಗೆ ಸ್ತ್ರೀಯರಿಗೆ ಶಿಕ್ಷಣ ಕೊಡಲು ಸೊಲ್ಲಾಪುರದಲ್ಲಿ ಪ್ರಾರಂಭಿಸಿದ್ದು.. ಅದು ಮಂದಗತಿಯಲ್ಲಿ ನಡೆದಿತ್ತು….ಆದರೆ ಜಯದೇವಿ ತಾಯಿಯವರು ಅಧ್ಯಕ್ಷತೆಯನ್ನು ವಹಿಸಿದ ಮೇಲೆ ಮೊದಲು ಸ್ತ್ರೀ ಶಿಕ್ಷಣದ ಅವಶ್ಯಕತೆಯನ್ನು ಹೆಚ್ಚು ಒತ್ತು  ಕೊಡಲಾರಂಭಿಸಿದರು. ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ *ಒಂದೆರಡು ಭಾಷೆಗಳನ್ನು ಮಾತನಾಡಲು ಕಲಿಯುವುದು ಮಾತ್ರವಲ್ಲ ನಿತ್ಯ ಜೀವನದಲ್ಲಿ ಉಪಯೋಗವಾಗುವಂತಹ ಗೃಹ ಜ್ಞಾನ..ಸಾಯನ್ಯಕಲಿಕಯೊಂದಿಗೆ …,ಉಚ್ಚ ಶಿಕ್ಷಣವು ಮಹಿಳೆಗೆ ಸಿಗಬೇಕು. ಇಂಗ್ಲೀಷರು ತಮ್ಮ ಅನುಕುಲಕ್ಕೆ ಹಾಕಿದ ಗಿಳಿ ಪಾಠದ ಪದ್ಧತಿಯ ಶಾಲೆ ಬದಲಾಗಬೇಕು. ಸುಸಂಸ್ಕೃತ ಜೀವನ ನಡೆಸುವಂತಹ  ಶಿಕ್ಷಣ ಸಿಗಬೇಕು. ಜೀವನದ ಎಲ್ಲಾ ಹಂತಗಳ ಅಧ಼ಃಪತನಕ್ಕೆ ಕಾರಣವಾದ ಅಜ್ಞಾನವನ್ನು ಹೊಡೆದು ಓಡಿಸಲು …..ಸಾಕ್ಷರತೆಯ ಅಸ್ತ್ರದಿಂದಲೇ  ಸಾಧ್ಯ. ಹಸಿರು ಕ್ರಾಂತಿ ಹೊಟ್ಟೆಯ ಹಸಿವನ್ನು ಹಿಂಗಿಸಿದರೆ ಅಕ್ಷರದ ಕ್ರಾಂತಿಯು ಬುದ್ಧಿ ಹಸಿವನ್ನು ಅಡಗಿಸುವದೆಂದು*ಅಭಿಪ್ರಾಯ ಪಡುತ್ತಿದ್ದರು. 1930ರ ಸಮಯದಲ್ಲಿ ಸೊಲ್ಲಾಪುರದ ಕೋರ್ಟ್ ಮಾರ್ಷಲ್ ನಡೆದಿತ್ತು… ಹಲವಾರು ಜನರು ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದರು. ಇದರಲ್ಲಿ ಮಹಿಳೆಯರು ಸೇರಿದ್ದರು. ಎಲ್ಲಿ ನೋಡಿದರಲ್ಲಿ ಅಸಹಕಾರ ಚಳುವಳಿಗೆ ಸಂಬಂಧಿಸಿದ ಗಲಭೆ ನಡೆದಿದ್ದವು ‌. ಇಬ್ಬರು ಪೊಲೀಸರು ಹತರಾಗಿದ್ದರೆಂದರೆ ಕೇಳಬೇಕೆ.,… ಬ್ರಿಟಿಷರ ಕ್ರೌರ್ಯವೂ  ಹೇಳತೀರದಾಗಿತ್ತು . ಧನಶೆಟ್ಟಿ ಹಾಗೂ ಇನ್ನು ಮೂರು ಜನರ ಮೇಲೆ ಮೊಕದಮೆ ಹುಡಿ ಗಲ್ಲಿಗೆರಿಸಲಾಗಿತ್ತು.ಈ ಶಿಕ್ಷೆಯನ್ನು ವಿರೋಧಿಸಿ ಪುಣೆ ಮುಂಬೈ, ಕನ್ನಡ ನಾಡಿನಲ್ಲಿಯೂ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆದಿದ್ದವು. ಈ ಹೋರಾಟಗಳಲ್ಲಿ ಜಯದೇವಿ ತಾಯಿಯವರ ತಾಯಿ ಸಂಗವ್ವನ ಜೊತೆ  ತಾಯಿಯವರು ಬೆಂಬಲಿಸಿ ಉಗ್ರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 1932 ರಲ್ಲಿ ಬ್ರಿಟಿಷ್ ಸೈನಿಕರು ರಾಷ್ಟ್ರಧ್ವಜವನ್ನು ಅಪಮಾನಿಸಿದ್ದರಿಂದ ದ್ವಜ ಸತ್ಯಾಗ್ರಹ ನಡೆದು ಅಲ್ಲಿ ದೇಶದ ವಿವಿಧ ಪ್ರಾಂತಗಳ ಜನರು ಸೇರಿದ್ದರು ಅಲ್ಲಿ ನಡೆದ ಗಲಿಬಿಯಲ್ಲಿ ನೂರಾರು ಜನ ಕನ್ನಡಿಗರು ಬಂದಿತ್ತರಾಗಿದ್ದರು.  ಈ ಸಂಘಟನೆಯು ಆರಂಭದಲ್ಲಿ ಹೆಚ್ಚಾಗಿ ಪುರುಷರೇ ಪಾಲ್ಗೊಳ್ಳುತ್ತಿದ್ದು ರಾಷ್ಟ್ರದ ಹಿತಕ್ಕಾಗಿ ಹೋರಾಡುವ ಮಹಿಳೆಯರಿಗೆ ಒಂದು ನಿರ್ದಿಷ್ಟವಾದ ಸಂಘಟನೆ ಇರ್ಲಿಲ್ಲ ನಂತರ ಮಹಿಳೆಯರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಲು ಜಯದೇವಿತಾಯಿ ಹಾಗೂ ಇನ್ನಿತರರು ರಾಷ್ಟ್ರೀಯ ಚಳುವಳಿ ತರಬೇತಿ ನೀಡುವ ಗುರಿಯನ್ನು ವಿಸ್ತರಿಸಿದರು . 1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷಣೆಯಾಗಿ ಹೋದರು. 1939 ರಲ್ಲಿ ಜಯದೇವಿ ತಾಯಿಯವರು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷರಾದರು 1938 ರಲ್ಲಿ ಜಯದೇವಿ ತಾಯಿಯವರು ಸೊಲ್ಲಾಪುರ .ಹುಬ್ಬಳ್ಳಿ ಧಾರವಾಡಗಳಲ್ಲಿ ಅಕ್ಕನ ಬಳಗವನ್ನು ಸ್ಥಾಪಿಸಿದರು ಆ ಮೂಲಕ ಶರಣರ  ವಿಚಾರಧಾರೆಯನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಪ್ರಾರಂಭಿಸಿದರು. ಶರಣರ ಸಾಹಿತ್ಯಕ್ಕೆ ತಮ್ಮನ್ನು ತಾವು  ಅರ್ಪಿಸಿಕೊಳ್ಳುತ್ತಾ ಸಮಾಜದವರೊಂದಿಗೆ ಅದನ್ನು ತಿಳಿಹೇಳುತ್ತ ಅನುಭವ ಪಥದಲ್ಲಿ ಸಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ರಾಷ್ಟ್ರದ ಆಗು-ಹೋಗುಗಳ ಅರಿವು ಮೂಡಿಸಿ  ರಾಷ್ಟ್ರೀಯತೆಯನ್ನು ಉತ್ತೇಜಿಸಲು ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ಜಯದೇವಿಯವರು ಮಹಿಳೆಯರ ಹೋರಾಟಕ್ಕೆ ಬೆಂಬಲಿಸಲು 1947ರಲ್ಲಿ ತಮ್ಮ ಮನೆಯಾದ ಜಯನಿಕೀತನದಲ್ಲಿ ಸೇವಾ ದಳದ ಪ್ರೌಢ ಶಾಖೆಯನ್ನು ಆರಂಭಿಸಿದರು.  ಎರಡನೆ ಮಹಾ ಯುಧ್ಧದ ಸಂದರ್ಭದಲ್ಲಿ ಬ್ರಿಟಿಷರಿಗೆ ಸೈನಿಕರ ಅವಶ್ಯಕತೆ ಎದುರಾದಾಗ ದೇಶದಾದ್ಯಂತ ಬೆಟಾಲಿಯನ್ ಕಟ್ಟಲು ಜನರನ್ನು ಮತ್ತು ಪ್ರಮುಖರನ್ನು ಪ್ರೋತ್ಸಾಹಿಸುತ್ತಿದ್ದರು. ಇದರ ಪರಿಣಾಮವಾಗಿ ವಾರದ ಮಲ್ಲಪ್ಪನವರಿಗೆ ರಾವ್ ಬಹದ್ದೂರ್ ಪದವಿ ಕೊಟ್ಟರೆ….ಮಡಿಕೆ ಚನ್ನಬಸಪ್ಪನವರಿಗೆ ಮ್ಯಾಜಿಸ್ಟ್ರೇಟ್ ಪದವಿಯನ್ನು ಕೊಟ್ಟರು. ಸೊಲ್ಲಾಪುರದಲ್ಲಿ ಲಿಂಗಾಯತರು ಹೆಚ್ಚು ಇರುವುದರಿಂದ ಲಿಂಗಾಯತ ಬೆಟಾಲಿಯನ್ ಕಟ್ಟಲು ಪ್ರೇರೇಪಿಸಿದರು ಬ್ರಿಟಿಷರು .ಅಲ್ಲಿಯ ಸ್ಥಳೀಯ ಮುಖಂಡರಾದ ವಾರದ, ಮಡಕಿ ಲಿಗಾಡೆ,ತಂಬಾಕಿ ಮನೆತನಗಳ ಮೇಲೆ ಒತ್ತಾಯ ಬೀರಲು ಪ್ರಯತ್ನಿಸಿದರು.  ಅದೇ ರೀತಿಯಾಗಿ ಲಿಗಾಡೆ ಅವರ ಆಸ್ತಿಯ ಮೇಲೆ ಋಣ ಭಾರ ಹೇರಿದ್ದೇವೆಂದು ಇದಕ್ಕಾಗಿ ಜಯದೇವಿ ತಾಯಿಯವರು ತಮ್ಮ ಕೆಲಸಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು.ಅಂದಿನ ದಿನಗಳಲ್ಲಿ ಪ್ರಭಾವಿ ಭಾಷಣ ಕಾರ್ತಿ ,ಪ್ರಸಿದ್ಧ‌ಸಮಾಜ ಸೇವೆವಕಿಯಾದ ತಾಯಿಯವರು ಲಿಂಗಾಯತರನ್ನು ಇಂಗ್ಲಿಷ್ ಸೇನಾ ಪಡೆಗೆ ಸೇರಿಸಲು ಹುರಿದುಂಬಿಸುವಂತೆ ಭಾಷಣ ಮಾಡಲು ಕೇಳಿಕೊಂಡರು…… ಬ್ರಿಟಿಷ್ ಸರ್ಕಾರವು ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರಿಗೆ ವ್ಯಾಪಾರದ ಋಣಭಾರ ಕಡಿಮೆ ಮಾಡುವುದಾಗಿ  ಆಮಿಷೆ ಒಡ್ಡಿತು….  ಪತ್ನಿ ಜಯದೇವಿ ತಾಯಿಯವರು ಲಿಂಗಾಯೆತರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ಪ್ರಯತ್ನಿಸುವಂತೆ ಕೇಳಿಕೊಂಡರು….. ಕೊನೆಗೆ ಲಿಂಗಾಯೆತರನ್ನು ಸಂಘಟಿಸಲೇಬೇಕೆನ್ನುವ   ಆದೇಶವಿತ್ತರು ..!!!!  ಚನ್ನಮಲ್ಲಪ್ಪನವರಿಗೆ ಚೆನ್ನಾಗಿ ಗೊತ್ತಿತ್ತು ….. ಬಲಾಡ್ಯ ಬ್ರಿಟಿಷರ ವಿರುದ್ಧ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ … ದೇಶಪ್ರೇಮವೆನೋ ನಿಜ…..ದೇಶ ಸ್ವಾಭಿಮಾನ ,ದೇಶಮಾತೆಗಾಗಿ ಬಲಿದಾನ-ತ್ಯಾಗ ಇವೆಲ್ಲ ದುಷ್ಟ ಬ್ರಿಟಿಷರ ಎದುರು ನಿರರ್ಥಕ … ಬ್ರಿಟಿಷರ ಬಲದ ಎದುರು ನಾವು ತೃಣ ಸಮಾನರು  ವಿವೇಕತನವೆಂದರೆ ನಮ್ಮ ವ್ಯಾಪಾರವನ್ನು ನಮ್ಮ ಮನೆತನವನ್ನು ಉಳಿಸಿಕೊಳ್ಳುವುದರಲ್ಲಿ ಜಾಣತನವಿರುವದು ಇಲ್ಲದ್ದಿದರೆ ಹೇಳು ಹೆಸರಿಲ್ಲದಂತೆ ನಾಶವಾಗಿ ಹೋಗುವುದು ಖಚಿತ ಅನ್ನೋದು ದೃಢವಾಗಿ ನಂಬಿದವರು….ಹೀಗಾಗಿ  ವೈಯಕ್ತಿಕ ಹಿತಾಸಕ್ತಿಯುತರಾಗಿದ್ದರು, ತನ್ನ ವ್ಯಾಪಾರದತ್ತ ಹೆಚ್ಚು ಗಮನವನ್ನು ಕೊಡುತ್ತಿದ್ದರು. ಹಾಗೆ ಜಯದೇವಿತಾಯಿಯವರಿಗೆ ಸೈನ್ಯ ಕಟ್ಟುವುದಕ್ಕಾಗಿ ಕೇಳಿಕೊಂಡಿದ್ದರು ಕೂಡಾ ಪತಿ ಚೆನ್ನಲ್ಲಪ್ಪನವರು. ಬ್ರಿಟಿಷರು ಜಯದೇವಿ ತಾಯಿಯವರಿಗೆ ಕೇಸರಿ-ಇ- ಹಿಂದ್ ಪದವಿಯನ್ನು ಕೊಡುವುದಾಗಿ ಮುಂದೆ ಬಂದರು. ಇದ್ಯಾವದಕ್ಕೂ ಅವರು ವಿಚಲಿತರಾಗಲಿಲ್ಲ. ಅದಕ್ಕಾಗಿ ದೊಡ್ಡ ಮೊತ್ತದ *ವಾರ್ ಫಂಡ*ನ್ನು ಕಟ್ಟಬೇಕಾಯಿತು. ಮನೆಯವರ ಯಾವ ಒತ್ತಡಕ್ಕೂ ಮಣಿಯದ  ತಾಯಿಯವರು ರಾಷ್ಟ್ರೀಯ ಪ್ರೇಮ ಅಚಲವಾಗಿತು.. ಬ್ರಿಟಿಷರ  ಆಮಿಷದ ಪ್ರಸ್ತಾವನೆ, ಹೊರಗೆ ನೋಡಲು ಗೌರವದ ಹೊದಿಕೆ ಹೊದ್ದಿದ್ದರೂ, ಒಳಗೆ ದೇಶದ ಏಕತೆಯನ್ನು ಕುಗ್ಗಿಸುವ ಕುಯುಕ್ತಿಯೇ ಆಗಿತ್ತು…!!ಆ ಕ್ಷಣದಲ್ಲಿ ಜಯದೇವಿ ತಾಯಿಯವರು ಮೌನವಾಗಿರಲಿಲ್ಲ.ಅವರಲ್ಲಿ ಹೊತ್ತಿ ಉರಿದದ್ದು   ರಾಷ್ಟ್ರಪ್ರೇಮದ ಜ್ವಾಲೆ.“ಕೇಸರಿ-ಇ -ಹಿಂದ್” ಎಂಬ ಹೆಸರಿನಲ್ಲಿ ಅವರ ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ಕುತಂತ್ರ ಅರಿತವರಾಗಿದ್ದರು. ದೇಶದ ಧ್ವಜಕ್ಕೆ ತೋರುವ ಆದರವು‌  ತ್ಯಾಗದ ಸಂಕೇತ, ಧೈರ್ಯದ ಪ್ರತೀಕ, ತಾಯ್ನಾಡಿನ ಗೌರವ.ಬ್ರಿಟಿಷರು ಅಧಿಕಾರದ ಸಿಂಹಾಸನವನ್ನು ತೋರಿಸಿದರು,ಸ್ಥಾನಮಾನಗಳ ಸಿಹಿ ಮಾತುಗಳನ್ನು ಹೇಳಿದರೂ ತಾಯಿಯ ಹೃದಯಕ್ಕೆ ಕೇಳಿಸಿಕೊಂಡದ್ದು ಒಂದೇ ಶಬ್ದ —“ಭಾರತಮಾತೆಯ ಹಿತಾಸಕ್ತಿ….“ನನ್ನ ದೇಶದ ಏಕತೆಯನ್ನು ಮಸುಕುಗೊಳಿಸುವ ಯಾವ ಒಪ್ಪಂದಕ್ಕೂ ನಾನು ಸಮ್ಮತಿಸುವುದಿಲ್ಲ,”ಎಂದು ಅವರು ಅಟಲ ಧೈರ್ಯದಿಂದ ಹೇಳಿದರು. ಆ ನಿರಾಕರಣೆ ಸಾಮಾನ್ಯ ಪದವಿರೋಧವಲ್ಲ —ಅದು ಮಣ್ಣಿನ ಮಗಳು ತನ್ನ ತಾಯ್ನಾಡಿಗೆ ಕೊಟ್ಟ ಶಪಥ.ಆ ದಿನ ಅವರು ಆಮಿಷವನ್ನು ತಳ್ಳಿಹಾಕಿದಾಗ,ದೇಶಪ್ರೇಮಿಗಳು ಸಾಕ್ಷಿಯಾಗಿ ನಿಂದರು. ಅವರ ಎತ್ತಿದ ಧ್ವನಿಯಲ್ಲಿ ರಾಷ್ಟ್ರಪ್ರೇಮವು ಘೋಷವಾಗಿ ಪ್ರತಿಧ್ವನಿಸಿತು.ಅವರು ತೋರಿಸಿದ ಧೈರ್ಯ  —ನಿಜವಾದ ದೇಶಭಕ್ತಿ ….ಹೃದಯದ ಆಳದಿಂದ ಹೊರಹೊಮ್ಮುವ ನಿಷ್ಠೆ; ಧೇಶಮಾತೆಗೆ ತೋರಿದ ಗೌರವ. . *ಬ್ರಿಟಿಷರ ಇಂಥ ಆಸೆ ಆಮಿಷಕ್ಕೆ ಒಳಗಾಗದೆ ಜಾತಿಯ ಹೆಸರಿನಲ್ಲಿ ಸೇನೆ ಕಟ್ಟುವುದು ದೇಶದ ಅಹಿತಕ್ಕೆ ಕಾರಣವಾಗುವುದೆಂದು…ಯಾವುದೇ ಭೀತಿಗೂ ತಲೆಬಾಗಲಿಲ್ಲ. ಬ್ರಿಟಿಷರ ಪ್ರತ್ತಸ್ಸಾವನೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರು . *ನಡೆಯಣ್ಣ ಇಡು ಹೆಜ್ಜೆ ಮುಂದೆ ದೃಢತನದಿಂದೆ!! ಕದಳಿಯ ಬನಹೊಕ್ಕು ಚಣ ಮಜಗಜದ ತಾಣಎದುರಿಗೆ ಬರುವದು ಕಾಡಕೋಣ ತೆಗೆಯಲು ಪ್ರಾಣ ಕದಡಿಯ ಎಂಟು ದಿಕ್ಕು ಎಂಟಾನೇಗಳ ಸೊಕ್ಕು ಕಾನನದೊಳಗೆ ಪಕ್ಕು ಮುರಿಯಬೇಕಾದರೆ ಸೊಕ್ಕುಹೀಗೆ ಬ್ರಿಟಿಷರ ಸೊಕ್ಕನ್ನು ಮುರಿಯಬೇಕು ಅನ್ನುವ ಕರೆಯನ್ನು ಸಾರ್ವಜನಿಕರಿಗೆ ಕೊಡುತ್ತಿದ್ದರು *ನಡೆದಾರಿಗೆ ಅಡ್ಡ ಬಂದಿತಣ್ಣ ಹೆಡೆ ತೆಗೆದಾಚಣ ಬಿಡುವದು ತನ್ನು ಕೆಂಪುಗಣ್ಣ ಅದುವೆ ನಾಗಣ್ಣ ನಂಜೀನ ಅಂಜಿಕೆ ಹೊಲ್ಲ ಕೆಂಜೆಡೆಯವನ ಚಲ್ವ ಸಂಜೀವನಿ ಮದ್ದು ಬಲ್ಲ ಹಿಂಜರಿಯುವುದೇಕೆ ಇನ್ನು ಹಸಿದು ಹುಲಿ ಬರುವ ದಲ್ಲಿ ತಾಯಿ, ಪಸರಿಸಿ ಬಾಯಿ ವಸುಧೆ ನಡುಗುವ ಗುಡುಗಿನ ಛಾಯೆ ಅದುವೆ ಮಹಾಮಾಯಿ ಜಯ ಸಿದ್ದರಾಮನ ಸಿದ್ದಿ ಮಂತ್ರದ ಧ್ಯಾನ ಶುದ್ಧ ಮನದಿಂದಲೇ ಸಾಧನ ಇದ್ದುಗೆದೆ ಕದಳಿಯ ಬನ* ಹಸಿದು ಬರುವ ಬ್ರಿಟಿಷರನ್ನು ಬಗ್ಗು ಬಡಿಯಲೆಂದೆ ಅಂಜದೇ ಅಳುಕದೇ ಕೆಂಜಡಿಯವನ ಸಂಜೀವಿನಿ ಮದಿನ ಮೇಲೆ ನಂಬಿಕೆ ಇಟ್ಟು ಮುಂದೆ ನಡೆ ಅಂತ ಜನರಿಗೆ ಕರೆ ಕೊಡುತ್ತಿದ್ದರು.   ಭಾರತೀಯ ಸ್ವಾತಂತ್ರ ಹೋರಾಟ ಹಾಗೂ ಇನ್ನಿತರ ಚಳುವಳಿಗಳಲ್ಲಿ ಪುರುಷರೇ ಮುಖ್ಯ ಎದುರಿಸುತ್ತ ಬಂದಿದ್ದರು .ಅವರಿಗೆ ಭೌತಿಕವಾಗಿ ಮಹಿಳೆಯರ ಬೆಂಬಲವೂ ಇದ್ದಿತು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಅದಾಗಲೇ ಸಾಮಾಜಿಕ ಸುಧಾರಣೆ ಸ್ವಾತಂತ್ರ ಹೋರಾಟ ಶೈಕ್ಷಣಿಕ ಬೆಳವಣಿಗೆ ಹಾಗೂ ಮಹಿಳಾ ದಿನಾಚರಣೆ ಅಂತ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಯಲ್ಲಿ ಬಂದಿದ್ದರು. ಇದರೊಂದಿಗೆ ಗ್ರಾಮೀಣ ಭಾಗದ ಮಹಿಳೆಯರು ಸಹ ತಮ್ಮ ಮನೆಯ ಪುರುಷರಿಗೆ  ರಾಷ್ಟ್ರೀಯ ಹೋರಾಟದಲ್ಲಿ ಪಾಲ್ಗೊಳ್ಳಲು ನೈತಿಕ ಹಾಗೂ ಭೌತಿಕ ಬೆಂಬಲವನ್ನು ನೀಡುತ್ತಿದ್ದರು.  ತಮ್ಮ ಮನೆಯವರ ಬೆಂಬಲದಿಂದ ರಾಷ್ಟ್ರೀಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು .ಸ್ವಾತಂತ್ರ ಹೋರಾಟದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕೆಂಬುದೇ ಬಹು ಮುಖ್ಯ ಉದ್ದೇಶ ವಾಗಿತ್ತು..ಪುರುಷರು ಸೆರೆವಾಸವನ್ನು ಅನುಭವಿಸಿದಾಗ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಮಹಿಳೆಯರ ಮೇಲಿತ್ತು .ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು…ಚಳುವಳಿಯ ರೂಪರೇಷೆಗಳು ಮಹಿಳೆಯರ ಮನೋಬಲಕ್ಕೆ ಸೂಕ್ತವಾಗಿದ್ದು ಎಂದು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಭೆಗಳನ್ನು ಕರೆಯಲು ಹೇಳುತ್ತಿದ್ದರು .ಅಂತಹ ಸಮಿತಿಗಳಲಿ ಜಯದೇವಿ ತಾಯಿಯವರು ಮುಂಚೂಣಿಯಲ್ಲಿ ಇರುತ್ತಿದ್ದರು ಈ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಗೋಖಲೆ ,ಮಾರ್ಗರೇಟ್ ಕಸಿನ್ಸ ಹಾಗೂ ಅನಿಬೆಸೆಂಟರ ಪ್ರಭಾವಕ್ಕೆ ಒಳಗಾಗಿದ್ದನ್ನು ನಾವು ಗಮನಿಸಬಹುದಾಗಿದೆ.ಬಹು ವರ್ಷಗಳಿಂದ ಮಹಿಳೆಯರು ತಮ್ಮ ಆರಂಭದ ಹೋರಾಟವನ್ನು ರಚನಾತ್ಮಕ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡಿದ್ದರು ನಂತರ ತಮ್ಮ ಕಾರ್ಯ ವ್ಯಾಪ್ತಿಯನ್ನು ಉಪ್ಪಿನ ಸತ್ಯಾಗ್ರಹ ಸ್ವದೇಶಿ ಚಳುವಳಿ ಮಧ್ಯಪಾನ ನಿಷೇಧ ದಂತ ಚಟುವಟಿಕೆ ವಿಸ್ತರಿಸಿದರು. ಕಾನೂನು ಭಂಗ ಚಳುವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳದ ಕುರಿತು ರಾಷ್ಟ್ರೀಯ ನಾಯಕ ಯೋಚಿಸುವಂತಾಯಿತು.  ಕರ್ನಾಟಕದಲ್ಲಿ  ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡ ಪ್ರಮುಖ ಮಹಿಳೆಯರಲ್ಲಿ ಜಯದೇವಿತಾಯಿ ಲಿಗಾಡೆಯವರು ಒಬ್ಬರು ಇವರೊಂದಿಗೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು…… ಮುಖ್ಯವಾಗಿ ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ, ಕೃಷ್ಣ ಬಾಯಿ ಪಣಜಿ ಕರ್, ಅವರಂಥ ಮಹಿಳೆಯರು ತಮ್ಮ ಚಟುವಟಿಕೆಗಳನ್ನು ಪ್ರೆಸಿಡೆನ್ಸಿಯಾಚೆ ವ್ಯಾಪಕಗೊಳಿಸಿದರು. ಇದರಿಂದಾಗಿ ಕರ್ನಾಟಕದ ಪ್ರತಿ ಭಾಗಗಳಿಂದಲೂ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಹತ್ತಿದರು ಬಳ್ಳಾರಿ ಸಿದ್ದಮ್ಮ, ನಾಗಮ್ಮ ಪಾಟೀಲ, ಸುಬ್ಬಮ್ಮಾ ಜೋಯಿಸ್, ಟಿ. ಸುನಂದಮ್ಮ, ಯಶೋದಮ್ಮ ದಾಸಪ್ಪ, ನಾಗರತ್ನಮ್ಮ ಹಿರೇಮಠ, ಪದ್ಮಾವತಿ ಬಿದರಿ, ಜಯದೇವಿತಾಯಿ ಲಿಗಾಡಿ ಶಕುಂತಲಾ ಕುರ್ತುಕೋಟಿ, ಚೆನ್ನಮ್ಮ ಹಳ್ಳಿಕೇರಿ ಇನ್ನೂ ಅನೇಕ ಮಹಿಳೆಯರು ರಾಜಕೀಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ

Read Post »

You cannot copy content of this page

Scroll to Top