ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಬೆಸೆದ ಮನಸು ಕನಸುಗಳ ಮೇಲೊಂದು ದೂರು ನೀಡಬೇಕಿದೆಬಸಿದ ಹನಿಯು ನಯನಗಳ ಮೇಲೊಂದು ದೂರು ನೀಡಬೇಕಿದೆ ತೊರೆದು ಭಾವ ಉರಿದ ಎದೆಯು ತಾಳಲಾರದು ಬೇಗುದಿಮುರಿದು ಮೌನವು  ಮಾತುಗಳ ಮೇಲೊಂದು ದೂರು ನೀಡಬೇಕಿದೆ ಎರೆದ ಪ್ರೀತಿ ಇರಿದ ರೀತಿ ತನುಮನಕೆ ತಾಗಿನಿಂತು ನರಳಿದೆಬೆಂದ ಎದೆಯು ತುಡಿತಗಳ ಮೇಲೊಂದು ದೂರು ನೀಡಬೇಕಿದೆ ಮುರಿದ ವೀಣೆ ಹರಿದ ತಂತಿ ಹಾಡಲಾಗದ ಅಪಸ್ವರಬೆರೆತ ಸ್ವರವು ಬೆರಳುಗಳ ಮೇಲೊಂದು ದೂರು ನೀಡಬೇಕಿದೆ ಬರೆದ ಕವಿಯು ಬ್ರಹ್ಮನಲ್ಲ ಗೀಚುತಿರುವನು  ತನ್ನ ಲಯದಲಿಉರಿದ ಜ್ಯೋತಿಯು ತೆರೆಗಳ ಮೇಲೊಂದು ದೂರು ನೀಡಬೇಕಿದೆ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಅಪರೂಪದ ಕನಸು” ಅಪರೂಪದ ಕನಸು ಕಂಡೆಇಪ್ಪತ್ತೈದರ ಮುಂಜಾವಲಿ;ಮಣ್ಣೆಣ್ಣೆ ದೀಪದ ಮಬ್ಬಿನಲಿಆಲವೂ ಅತ್ತಿಯೂ ಚಿಗುರಿದ್ದವು,ಒಂದೇ ಮಣ್ಣಿನ ಮಡಿಲಲಿ. ಆಲದ ಕೆಳಗೆ ಭೀಮ ನಿಂತ,ಬಾವಿಯ ಬಳಿ ಕೇರಿಯ ಮಗು;ಬೊಗಸೆ ತುಂಬ ನೀರು ಕೊಟ್ಟಾಗಮಗುವಿನ ಮುಖ ಅರಳಿತುನೀರೊಳಗೆ ಆಕಾಶವೂ ಅರಳಿತು. ಅತ್ತಿಯ ಕೆಳಗೆ ದುರ್ಯೋಧನ,ಮಡಿಲಲ್ಲಿ ಹಳೆಯ ಓಲೆ;ಕೋಲ ತುದಿಯಿಂದ ನೆಲವ ಗೀರಿಗೆರೆಯ ಮೇಲೆ ಗೆರೆ ಎಳೆದಮಣ್ಣಿನ ಎದೆಯಲಿ ಗಾಯವಾಯಿತು. ಆಲ ಮೆಲ್ಲಗೆ ಬೇರು ಚಾಚಿತುಕೇರಿಯಿಂದ ಬಾವಿಗೆ,ಬಾವಿಯಿಂದ ಶಾಲೆಯ ಹೊಸ್ತಿಲಿಗೆ;ಭೀಮ ಗದೆಯನ್ನು ನೆಲಕ್ಕಿಟ್ಟುಮಗುವಿನ ಕೈಗೆ ಸ್ಲೇಟು ಕೊಟ್ಟ. ಅತ್ತಿಯ ಕೊಂಬೆ ಹಣ್ಣಾಯಿತು,ಹಣ್ಣಿನೊಳಗೆ ಸಾವಿರ ಬೀಜ;ದುರ್ಯೋಧನ ಬೇಲಿ ಕಟ್ಟಿದರೂಹಕ್ಕಿಗಳು ಕೊಂಬೆಯಿಂದ ಹಾರಿದವುಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ. ಒಂದು ಸಂಜೆ ಬೆಂಕಿ ಎದ್ದಿತು,ಹಳೆಯ ಓಲೆ ಉರಿದು ಬೂದಿಯಾಯಿತು;ಬೂದಿ ಗಾಳಿಯ ಜೊತೆಗೆ ಹಾರಿದಾಗಆಲದ ಬರಿದ ಕೊಂಬೆಯ ತುದಿಯಲ್ಲಿಹೊಸ ಚಿಗುರೊಂದು ನಗುತ್ತಿತ್ತು. ಮಳೆ ಸುರಿಯಿತು, ಮಣ್ಣು ಘಮಿಸಿತು;ಆಲದ ನೆರಳಿಗೆ ಕೇರಿ ಬಂತು,ಕೇರಿಯ ಬೆನ್ನಿಗೆ ಊರೂ ಬಂತು;ಒಂದೇ ಚಾಪೆಯ ಮೇಲೆ ಕೂತುಅಕ್ಷರದ ದೀಪ ಹಚ್ಚಿದರು. ಅತ್ತಿಯ ಕೆಳಗೆ ದುರ್ಯೋಧನರಾತ್ರಿಯಿಡೀ ನಿದ್ದೆಗೆಟ್ಟ“ಎಲ್ಲರೂ ನೆಟ್ಟಗೆ ನಿಂತರೆನನ್ನ ಸಿಂಹಾಸನದ ಎತ್ತರಇನ್ನು ಯಾರಿಗೆ ಕಾಣುವುದು?” ಬೆಳಕು ಹರಿಯಿತುಭೀಮನ ಗದೆ ಮಣ್ಣಲ್ಲೇ ಉಳಿಯಿತು;ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತಹೊಸ ಪುಸ್ತಕ ತೆರೆದುಕೊಂಡಿತುಅತ್ತಿಯ ನೆರಳು ಕಿರಿದಾಗುತ್ತಿತ್ತು. ಎಚ್ಚರವಾದಾಗಕಿಟಕಿಯಾಚೆ ಎರಡೂ ಮರಗಳಿದ್ದವು;ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತುನಿನ್ನೆ ಎಳೆದ ಗೆರೆಇಂದು ಮಣ್ಣಾಗುತ್ತಿತ್ತು. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು” Read Post »

ಕಾವ್ಯಯಾನ

ಶಿವರಾಜ ಅರಳಿ ಅವರ ಕವಿತೆ “ಸೆರಗು”

ಕಾವ್ಯ ಸಂಗಾತಿ ಶಿವರಾಜ ಅರಳಿ ಸೆರಗು ೧ಕಪ್ಪುಗಟ್ಟಿದ ಮೋಡದ ಎದೆಬಹುವಾಗಿ ಬಿಗಿದಿದೆ;ಕಳೆಯ ಕಳೆದು.ಸಹಜ ಸ್ಥಿತಿಗೆ ಮರಳದಸವಿತೃವಿನ ಗಂಟಲಲಿಉಸಿರು ಸಿಕ್ಕು ರೋಧಿಸುತಿದೆಹೆಜ್ಜೆ ಮೂಡದ ಕಾಡಲ್ಲಿಆಕ್ರಂದನ;ಆತ೯ನಾದಬೆಂದು ಬಾಡಿದ ಆತ್ಮನಿವಾ೯ತಕ್ಕೆ ನೇಣು ಬಿಗಿದುಕೊಂಡಿದೆಅಂತೆ-ಕಂತೆಗಳ ಕಟ್ಟಲ್ಲ ಇದುನುರಿತು ಪಾಕವಾದ ಎಸಳನ್ನು ಕೇಳಿಬಾಗಿ ದಾಟಿದ ಕಥೆಯನೂಲು ಬಿಡಿಸುತ್ತದೆ ಎಳೆಯಾಗಿ ೨ಆತ್ಮಕ್ಕೂ ಗೊತ್ತಿದೆ;ಅಂಚಿನ ಅಲೌಕಿಕತೆನಾಲಿಗೆಯ ತುಂಡು ದೇಹಕೆ ಕಣ್ಣಿಲ್ಲತುದಿಯಲಿ ಸಿಕ್ಕುಮಾಯವಾಗುವ ನೆರಳಿಗೆಬೆಳಕಿನ ಮೊರೆತ ಎಂದೂ ಕೇಳಿಸದುಬಹುಶಃ ಹುದುಗಿರಬಹುದುಅನುಭೂತಿ, ಅನುಭಾವದ ಕನ್ನಡಿ.ಅನುಗಾಲದ ತುಂತುರು ಹನಿಗಳಲಿಮೊಳೆತ ಚಿಗುರುಗಳುಮಾಯೆಯ ಸರಳಿನ ಉಸಿರುಗಳು.ನಿತ್ಯ ನೆಗೆವ ಜೀವತಂತುವಿನತೆವಲನು ಕಟ್ಟಿ ಹಾಕಲು ಸಾಧ್ಯವೇ.?ಆಳದ ಕೂಪದಲಿ  ಸಿಲುಕಿವಿಹಗನಂತೆ ಕಾಣುವುದು ವಿರಳ..!! ಶಿವರಾಜ ಅರಳಿ

ಶಿವರಾಜ ಅರಳಿ ಅವರ ಕವಿತೆ “ಸೆರಗು” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ -130 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮಗಳನ್ನು ಕಂಗೆಡಿಸಿದ ಅಮ್ಮನ ಡಯಾಲಿಸಿಸ್‌ ಖರ್ಚು ಮಾರನೇ ದಿನ ಸುಮತಿಯ ತಮ್ಮ ಕೆಲಸಕ್ಕೆ ಹೋಗುವ ಮುಂಚೆಯೇ ತನ್ನ ಅಕ್ಕ,ಅಳಿಯ ಮತ್ತು ಮಗಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ಬಳಿ ಬಿಟ್ಟನು. ಹೊರಡುವ ಮೊದಲು ಅಳಿಯನನ್ನು ಹತ್ತಿರ ಕರೆದು…. “ನೀನು ಅಕ್ಕನನ್ನು ವೈದ್ಯರಿಗೆ ತೋರಿಸಿ, ಅವರು ಏನು ಹೇಳುತ್ತಾರೆ ಎಂಬುದನ್ನು ನನಗೆ ತಿಳಿಸು…. ಕೆಲಸ ಮುಗಿಸಿಕೊಂಡು ಸಂಜೆ ನಾನು ಇಲ್ಲಿಗೆ ಬರುತ್ತೇನೆ”…. ಎಂದು ಹೇಳಿ, ಅಕ್ಕ ಮತ್ತು ಮಗಳಿಗೆ ಧೈರ್ಯ ಹೇಳಿ ಕೆಲಸಕ್ಕೆ ಹೊರಟನು.  ಮಾವ ಹೊರಟು ಹೋದ ನಂತರ ಸುಮತಿಯ ಮಗಳು ತಾಯಿಯನ್ನು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳ್ಳಿರಿಸಿ… “ಅಮ್ಮಾ… ನೀನು ಇಲ್ಲಿ ಕುಳಿತಿರು…. ನಾನು ಮತ್ತು ಬಾವ ಆಸ್ಪತ್ರೆಯ ರಿಸೆಪ್ಶನ್ ಗೆ ಹೋಗಿ ಇಲ್ಲಿಯ ಚಿಕಿತ್ಸೆಯ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ಬರುವೆವು”…. ಎಂದು ಹೇಳಿ ಬಾವನ ಜೊತೆ ನಾದಿನಿ ರಿಸೆಪ್ಷನಿಸ್ಟ್ ಬಳಿಗೆ ಹೋದಳು. ಅಲ್ಲಿ ರಿಸೆಪ್ಶನ್ ಬಳಿಗೆ ಹೋಗಿ ಸಕಲೇಶಪುರದ ವೈದ್ಯರು ಕೊಟ್ಟ ಶಿಫಾರಸ್ಸು ಪತ್ರವನ್ನು ಹಾಗೂ ಸುಮತಿಯ ಇತರೆ ಚಿಕಿತ್ಸೆಗಳ ವಿವರಗಳು ಇರುವ ಕಡತವನ್ನು ತೋರಿಸಿ ವಿಚಾರಿಸಿದಳು. ರಿಸೆಪ್ಶನ್ ನಲ್ಲಿ ಕುಳಿತಿದ್ದ ಸ್ವಾಗತಗಾರ್ತಿ…. “ಮೊದಲು ನಿಮ್ಮ ತಾಯಿಯನ್ನು ಒಳಗಡೆ ಇರುವ ತುರ್ತು ಚಿಕಿತ್ಸಾ ವಿಭಾಗದ ವಾರ್ಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿ ವರ್ಗಕ್ಕೆ ನಿಮ್ಮ ತಾಯಿಯನ್ನು ಇಲ್ಲಿ ಅಡ್ಮಿಟ್ ಮಾಡುವ ಬಗ್ಗೆ ತಿಳಿಸಿ ಮತ್ತು ಈ ಚೀಟಿಯನ್ನು ಅವರಿಗೆ ತೋರಿಸಿ…. ನಿಮ್ಮ ತಾಯಿಯನ್ನು ಅಲ್ಲಿ ಅಡ್ಮಿಟ್ ಮಾಡಿದ ಬಳಿಕ ಪುನಃ ಇಲ್ಲಿಗೆ ಬನ್ನಿ…. ನಂತರ ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತೇನೆ”…. ಎಂದರು.  ಸ್ವಾಗತಗಾರ್ತಿಗೆ ಧನ್ಯವಾದವನ್ನು ತಿಳಿಸಿ ನೂರು ರೂಪಾಯಿಯನ್ನು ಕೊಟ್ಟು ನೋಂದಣಿ ಮಾಡಿಸಿ, ತಾಯಿಯ ಬಳಿಗೆ ಬಂದಳು…. “ಅಮ್ಮಾ…. ನಿನ್ನನ್ನು ಇಲ್ಲಿನ ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲು ಮಾಡಲು ತಿಳಿಸಿದ್ದಾರೆ…. ಬಾ ಹೋಗೋಣ…. ನಿನ್ನನ್ನು ಅಲ್ಲಿ ದಾಖಲಿಸಿದ ನಂತರ ನಾನು ಮತ್ತು ಬಾವ ಹೋಗಿ ಇನ್ನಿತರೆ ಕಾರ್ಯವಿಧಾನಗಳ ಬಗ್ಗೆ ವಿಚಾರಿಸಿಕೊಂಡು ಮತ್ತೆ ಬರುತ್ತೇವೆ”…. ಎಂದಳು. ಸುಮತಿಗೆ ಆಸ್ಪತ್ರೆ ಮತ್ತು ಅಲ್ಲಿನ ಸಿಬ್ಬಂದಿ ವರ್ಗ ಹಾಗೂ ಅವರ ಶಿಸ್ತಿನ ನಡವಳಿಕೆಯನ್ನು ಕಂಡು ಬಹಳ ಮೆಚ್ಚುಗೆಯಾಯಿತು. ವಾರ್ಡಿನ ಹಾಸಿಗೆಯ ಮೇಲೆ ಮಲಗಿದಾಗ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಳು. ಇನ್ನು ಇಲ್ಲಿ ತನಗೆ ಉತ್ತಮ ಚಿಕಿತ್ಸೆ ಖಂಡಿತ ದೊರಕುತ್ತದೆ ಎಂಬುದು ಅವಳಿಗೆ ಖಾತ್ರಿಯಾಯಿತು. ನರ್ಸ್ ಒಬ್ಬರು ಬಳಿ ಬಂದು ಒಂದು ಚೀಟಿಯಲ್ಲಿ ಕೆಲವು ಔಷಧಿಗಳನ್ನು ಬರೆದು ನೀವು ವಾರ್ಡಿಗೆ ಬರುವಾಗ ಇದನ್ನು ಖರೀದಿಸಿಕೊಂಡು ಬನ್ನಿ ಎಂದು ಹೇಳಿದಳು…. “ಅಮ್ಮಾ …ನೀನು ಇಲ್ಲೇ ಮಲಗಿರು… ನಾವು ಈಗಲೇ ಬರುತ್ತೇವೆ”…. ಎಂದು ಸುಮತಿಗೆ ಹೇಳಿ ನರ್ಸ್ ಕೊಟ್ಟ ಚೀಟಿಯನ್ನು ಪಡೆದು ಬಾವನೊಂದಿಗೆ ಪುನಃ ರಿಸೆಪ್ಶನ್ ಬಳಿಗೆ ನಡೆದಳು. ಅಲ್ಲಿ ಹೋದಾಗ ಚಿಕಿತ್ಸೆಯ ಪೂರ್ಣ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರವನ್ನು ಬರೆದಿರುವ ಪ್ರತಿಯೊಂದು ಅವಳ ಕೈಗಿಟ್ಟರು. ನೀವು ಇದರಲ್ಲಿ ನಮೂದಿಸಿರುವ ಪ್ರಕಾರ ಈಗಲೇ ನಮ್ಮ ಕೌನ್ಸಿಲಿಂಗ್ ವಿಭಾಗಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತಾಡಿ ಹಣವನ್ನು ಕಟ್ಟಿ ಬನ್ನಿ. ಅದರ ರಸೀದಿಯನ್ನು ತಂದು ಇಲ್ಲಿ ನಮಗೆ ತೋರಿಸಿ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡಿಸುವ ಎಲ್ಲಾ ಏರ್ಪಾಡುಗಳನ್ನು ನಾವು ಮಾಡುತ್ತೇವೆ ಎಂದರು.  ಅವರು ಕೊಟ್ಟ ಪ್ರತಿಯನ್ನು ಪಡೆದು ಕೌನ್ಸಿಲಿಂಗ್ ವಿಭಾಗದೆಡೆಗೆ ಇಬ್ಬರೂ ಹೊರಟರು. ಅಲ್ಲಿ ಹೋದಾಗ ಸಿಬ್ಬಂದಿಯು ಇಬ್ಬರನ್ನೂ ಕುಳಿತುಕೊಳ್ಳಲು ಸೂಚಿಸಿ ಇಂತಿಂಥ ಚಿಕಿತ್ಸೆಗೆ ಇಂತಿಷ್ಟು ವೆಚ್ಚವಾಗುತ್ತದೆ ಎಂಬ ವಿವರವನ್ನು ನೀಡಿ, ಅಲ್ಲಿ ನಮೂದಿಸಿದ ಮೊತ್ತದ ಹಣವನ್ನು ಪಾವತಿಸುವಂತೆ ತಿಳಿಸಿದರು. ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕಾದರೆ ತಾವು ಭರಿಸಬೇಕಾದ ಹಣದ ಮೊತ್ತವನ್ನು ಕಂಡು ಇಬ್ಬರೂ ದಂಗಾದರು. ಏಕೆಂದರೆ ಅಲ್ಲಿ ನಮೂದಿಸಿದಂತೆ ವೈದ್ಯರ, ದಾದಿಯರ, ವಾರ್ಡಿನ ಮತ್ತು ಇತರೆ ಖರ್ಚುಗಳ ಮೊತ್ತವನ್ನು ಭರಿಸುವಷ್ಟು ಹಣ ಅವರ ಕೈಲಿರಲಿಲ್ಲ. ಗೆಳತಿ ಕೊಟ್ಟಿದ್ದ ಹಣ ಸಾಲುತ್ತಿರಲಿಲ್ಲ. ಬಾವನ ಬಳಿಯೂ ಹೆಚ್ಚು ಹಣವಿಲ್ಲ ಎಂಬುದನ್ನು ಆ ಹುಡುಗಿ ಅರಿತಿದ್ದಳು. ತನಗೆ ಹಾಗೂ ಹಾಗೂ ತಂಗಿಗೆ ಬರುತ್ತಿದ್ದ ಸಂಬಳ ಮನೆಯ ಖರ್ಚು ಮತ್ತು ಆಸ್ಪತ್ರೆಯ ಸಣ್ಣ ಪುಟ್ಟ ಖರ್ಚುಗಳಿಗೆ ಆಗುತ್ತಿತ್ತು. ಮಾವನ ಬಳಿ ಕೇಳೋಣವೆಂದರೆ, ಅವರಿಂದಲೂ ಇದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿತ್ತು. ಏಕೆಂದರೆ ಮಾವನ ಹಣಕಾಸಿನ ಸ್ಥಿತಿಯನ್ನು ಸುಮತಿಯ ಮಗಳು ಬಲ್ಲವಳಾಗಿದ್ದಳು. ಅದೂ ಅಲ್ಲದೇ ಡಯಾಲಿಸಿಸ್ ಚಿಕಿತ್ಸೆಯನ್ನು ತಿಂಗಳಿಗೆ ನಾಲ್ಕು ಬಾರಿಯಾದರೂ ತಾಯಿಗೆ ಕೊಡಿಸಬೇಕು ಎಂಬ ಸತ್ಯದ ಅರಿವೂ ಆಯಿತು. ಪ್ರತೀ ಬಾರಿಯೂ ಡಯಾಲಿಸಿಸ್ ಮಾಡಿಸುವಾಗಲೂ ಹೆಚ್ಚು ಹಣದ ಅಗತ್ಯ ಇರುತ್ತದೆ. ನಮಗೆ ಆಶ್ರಯ ನೀಡಿದ ಎಷ್ಟೇಟಿನ ಸಾಹುಕಾರರಲ್ಲೂ ಈ ರೀತಿಯ ದುಬಾರಿ ಚಿಕಿತ್ಸೆಗಾಗಿ ಹಣ ಪಡೆಯುವುದು ಕೂಡ ಸರಿಯಲ್ಲ. ಯಾರೂ ದಿಕ್ಕಿಲ್ಲದ ನಮಗೆ ಆಶ್ರಯ ನೀಡಿದ್ದಲ್ಲದೇ ತಾಯಿಯ ಹಲವು ಚಿಕಿತ್ಸೆಗಳಿಗಾಗಿ ಅವರು ಈವರೆಗೂ ಯಥೇಚ್ಛವಾಗಿ ಹಣವನ್ನು ಖರ್ಚು ಮಾಡಿದ್ದಾರೆ.  ಕೂಲಂಕುಶವಾಗಿ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ತಾಯಿ ಜೀವಂತವಿರುವವರೆಗೂ ಈ ಚಿಕಿತ್ಸೆಯನ್ನು ಆಗಾಗ ಕೊಡಿಸುತ್ತದೆ ಇರಬೇಕು. ಡಯಾಲಿಸಿಸ್ ಮಾಡಿಸುತ್ತಿದ್ದರೆ ತಾಯಿಯು ಇನ್ನೂ ಹೆಚ್ಚು ಕಾಲ ನಮ್ಮ ಜೊತೆ ಬದುಕುಳಿಯುತ್ತಾಳೆ. ಆದರೆ ಅದಕ್ಕಾಗಿ ಹಣವನ್ನು ಎಲ್ಲಿಂದ ಹೊಂದಿಸುವುದು? ಈ ಎಲ್ಲ ಚಿಂತೆಗಳು ಒಮ್ಮೆಲೇ ಆ ಹುಡುಗಿಯ ಆಲೋಚನೆಯಲ್ಲಿ ಮೂಡಿ ಅವಳನ್ನು ಗೊಂದಲಕ್ಕೀಡು ಮಾಡಿತು. ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತು ದೀರ್ಘವಾಗಿ ಆಲೋಚನೆಯಲ್ಲಿ ಮಗ್ನಳಾದಳು….”ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲಾದಾಗ ತನ್ನ ತಾಯಿಯ ಮುಖದಲ್ಲಿ ಮೂಡಿದ್ದ ಭರವಸೆ ಮತ್ತು ನೆಮ್ಮದಿಯ ಭಾವ ಈಗಲೂ ನಮ್ಮ ಮನವನ್ನು ತಲ್ಲಣಗೊಳಿಸುತ್ತಿದೆ…. ಏನು ಮಾಡಲಿ ದೇವರೇ!? ತಾಯಿಯ ಚಿಕಿತ್ಸೆಗಾಗಿ ಹಣವನ್ನು ಎಲ್ಲಿಂದ ಹೊಂದಿಸಲಿ?… ಚಿಕಿತ್ಸೆಯ ದುಬಾರಿ ಖರ್ಚಿಲ್ಲದೇ ಇಲ್ಲಿ ಬೆಂಗಳೂರಿನಲ್ಲಿ ದಿನವೂ ಓಡಾಡಲು, ಊಟದ ಖರ್ಚು ಮತ್ತು ಇನ್ನಿತರೆ ವೆಚ್ಚಕ್ಕೆ ಹಣದ ಅಗತ್ಯ ಇರುತ್ತದೆ….ನಾನು ಏನೇ ಪ್ರಯತ್ನ ಮಾಡಿದರೂ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಿಲ್ಲ”…. ಎಂದು ಸ್ವಗತ ಹೇಳಿಕೊಂಡ ಹುಡುಗಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಳು. ಒಂದೊಂದೇ ಆಲೋಚನೆಗಳು ಮನದಲ್ಲಿ ಹಾದು ಹೋದಾಗ ಅವಳಿಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಮಂಡಿ ಮೇಲೆ ತಲೆಯೂರಿ ತಮ್ಮೆಲ್ಲರ ಹತಾಶ ಸ್ಥಿತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಳು. ಅಳುವುದಲ್ಲದೆ ಅನ್ಯಮಾರ್ಗ ಅವಳಿಗೆ ಆ ನಿಮಿಷ ತೋಚಲಿಲ್ಲ. ನಾದಿನಿ ಅಳುತ್ತಿರುವುದನ್ನು ಕಂಡು ಬಾವನಿಗೆ ಕಸಿವಿಸಿಯಾಯಿತು. ಏನು ಹೇಳಿ ಆಕೆಯನ್ನು ಸಮಾಧಾನ ಪಡಿಸುವುದು ಎಂದು ಆತನಿಗೆ ತಿಳಿಯಲಿಲ್ಲ. ಅತ್ತು ಸಾಕಾಗಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಂತೆ ಸೀರೆಯ ಸೆರಗಿನಿಂದ ಕಣ್ಣುಗಳು ಹಾಗೂ ಮುಖವನ್ನು ಒರೆಸಿ ಕುಳಿತಲ್ಲಿಂದ ಎದ್ದಳು.

Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಪ್ರಪಂಚ ಪ್ರಾಮಾಣಿಕರನ್ನೇ ಪರೀಕ್ಷಿಸುತ್ತದೆಯಂತೆ ನಿಜವೇಆ ದೇವರು ಒಳ್ಳೆಯವರನ್ನೇ ಒರೆಗೆ ಹಚ್ಚುತ್ತಾನಂತೆ ನಿಜವೇ ಕೆಡುಕಿನ ಕೋಣಕ್ಕೆ ಮೂಗುದಾನವೇ ಇಲ್ಲವೇನೊ ಅನಸ್ತದವಿಧಿ ದುಡಿವವರನ್ನೇ ದಾರಿದ್ರ್ಯಕ್ಕೆ ದೂಡುತ್ತದೆಯಂತೆ ನಿಜವೇ ಅರ್ಧಕ್ಕಿಂತ ಹೆಚ್ಚು ಜನರಿಲ್ಲಿ ಅಡ್ಡದಾರಿಯನ್ನೇ ಹಿಡಿದಿದ್ದಾರೆಸರಿ ದಾರೀಲಿ ನಡೆವವರೇ ದಿಕ್ಕುತಪ್ಪಿ ಬಂದವರಂತೆ ನಿಜವೇ ಆಗುಹೋಗುಗಳೆಲ್ಲವೂ ಸೋಗು ಧರಿಸಿಯೇ ಜರುಗುತ್ತಲಿವೆಮುಖವ ತೋರಿಸಿದವರ ಮೇಲೆ ಮೊಕದ್ದಮೆಯಂತೆ ನಿಜವೇ ಮನುಷ್ಯತ್ವ ಹುಡುಕುವುದರಲ್ಲೇ ಮಹಾಂತ ಕಾಲಕಳೆದನಂತೆವ್ಯರ್ಥ ಹುಡುಕಾಟ ಅರ್ಥ ಕಳೆದುಕೊಂಡಿದೆಯಂತೆ ನಿಜವೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” ಸತ್ಯ ಸಮತೆಶಾಂತಿ ಪ್ರೀತಿಬಸವ ಸಾರಿದರಾಷ್ಟ್ರ ಪ್ರೀತಿ ರಾಜ ಬೀದಿಶರಣ ನಿಧಿರಾಜತೇಜಬಸವ ಬೀಜ ದುಡಿದು ತಂದುಹಂಚಿ ತಿಂದರುನನ್ನ ಶರಣರುದಿಟ್ಟ ಯೋಧರು ನ್ಯಾಯ ನಿಷ್ಟುರಲೋಕ ರಕ್ಷಕಜನ ತಾಂತ್ರಿಕಮಹಾ ಮಾಂತ್ರಿಕ ಬಸವ ಭಕ್ತಿದೇಶ ಶಕ್ತಿಲಿಂಗ ಜಂಗಮಬಸವ ನೀತಿಯು ಬಸವ ಭಾನುಭಕ್ತ ನಾನುಭರತ ನೆಲದಲಿಆನು ತಾನು ಡಾ. ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” Read Post »

ಇತರೆ

“ಭಾಷೆ ಉಳಿದರೆ ಬದುಕಿನ ಬೇರು ಉಳಿಯುತ್ತದೆ” ಲೇಖನ ಕೆ.ಎಂ. ಕಾವ್ಯ ಪ್ರಸಾದ್

ಭಾಷಾ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ಭಾಷೆ ಉಳಿದರೆಬದುಕಿನ ಬೇರುಉಳಿಯುತ್ತದೆ” ಕೆಲವೊಮ್ಮೆ ನಾವು ಕಳೆದುಕೊಳ್ಳುತ್ತಿರುವುದು ಕಣ್ಣಿಗೆ ಕಾಣಿಸುವುದಿಲ್ಲ. ಮನೆಯ ಹಳೆಯ ವಸ್ತುವೊಂದು ಕಳೆದುಹೋದರೆ ಅದರ ಜಾಗ ಖಾಲಿಯಾಗಿರುವುದು ಕಾಣುತ್ತದೆ. ಮರದ ನೆರಳು ಕಡಿಮೆಯಾದರೆ ಅದರ ಕೊರತೆ ಗೊತ್ತಾಗುತ್ತದೆ. ಆದರೆ ಮನೆಯೊಳಗೆ ನಿಧಾನವಾಗಿ ಒಂದು ಭಾಷೆ ಕಡಿಮೆಯಾಗುತ್ತಿದ್ದರೆ, ಅದರ ನೋವು ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ಒಂದು ದಿನ ಅಜ್ಜಿ ಹೇಳುತ್ತಿದ್ದ ಗಾದೆ ಅರ್ಥವಾಗುವುದಿಲ್ಲ. ಮತ್ತೊಂದು ದಿನ ಹಳೆಯ ಜನಪದ ಹಾಡಿನ ಪದಗಳು ಅಪರಿಚಿತವಾಗುತ್ತವೆ. ಇನ್ನೊಂದು ದಿನ ಮನೆಯಲ್ಲೇ ಮಕ್ಕಳಿಗೆ ಕೆಲವು ಕನ್ನಡ ಪದಗಳನ್ನು ಹೇಳಿದರೆ ಅವರು ಅದರ ಬದಲಿಗೆ ಬೇರೆ ಭಾಷೆಯ ಪದವನ್ನು ಹುಡುಕುತ್ತಾರೆ. ಹೀಗೆ ಭಾಷೆ ನಮ್ಮ ಬದುಕಿನಿಂದ ಒಂದೇ ದಿನದಲ್ಲಿ ಹೊರಗೆ ಹೋಗುವುದಿಲ್ಲ; ಮೊದಲು ಅದು ನಮ್ಮ ಬಳಕೆಯಿಂದ ದೂರವಾಗುತ್ತದೆ. ನಂತರ ನಮ್ಮ ನೆನಪಿನಿಂದ. ಇಲ್ಲಿಯೇ ನಾವು ಒಮ್ಮೆ ನಿಂತು ಯೋಚಿಸಬೇಕಾಗಿದೆ. ಭಾಷೆ ಎಂದರೆ ನಿಜವಾಗಿ ಏನು? ಅದು ಅಕ್ಷರಗಳ ಜೋಡಣೆಯೇ? ವ್ಯಾಕರಣದ ನಿಯಮಗಳೇ? ಪರೀಕ್ಷೆಯಲ್ಲಿ ಬರೆಯುವ ವಿಷಯವೇ? ನನ್ನ ದೃಷ್ಟಿಯಲ್ಲಿ ಭಾಷೆ ಅದಕ್ಕಿಂತ ದೊಡ್ಡದು. ಒಬ್ಬ ತಾಯಿ ಮಗುವನ್ನು ಕರೆಯುವ ರೀತಿ ಭಾಷೆ. ಒಬ್ಬ ರೈತ ಮಣ್ಣನ್ನು ಕರೆಯುವ ಪದ ಭಾಷೆ. ಮಳೆ ಬಂದಾಗ ಹಳ್ಳಿಯ ಹಿರಿಯನ ಬಾಯಿಂದ ಹೊರಬರುವ ಮಾತು ಭಾಷೆ. ಅಜ್ಜಿ ಹೇಳುವ ಕಥೆಯಲ್ಲಿ ಉಳಿದಿರುವ ಕಾಲ ಭಾಷೆ. ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಭಾಷೆ. ಸಂತೋಷದಲ್ಲಿ ನಗುವಾಗಲೂ, ದುಃಖದಲ್ಲಿ ಮೌನವಾಗುವಾಗಲೂ ನಮ್ಮೊಳಗೆ ನಡೆಯುವ ಮಾತುಕತೆ ಭಾಷೆಯೇ. ಅದಕ್ಕಾಗಿಯೇ ಮಾತೃಭಾಷೆಯನ್ನು ಕಳೆದುಕೊಳ್ಳುವುದು ಎಂದರೆ ಒಂದು ವಿಷಯವನ್ನು ಮರೆತುಬಿಡುವುದು ಮಾತ್ರವಲ್ಲ; ನಮ್ಮ ಬದುಕನ್ನು ಅರ್ಥಮಾಡಿಕೊಳ್ಳಲು ಬಳಸುತ್ತಿದ್ದ ಒಂದು ಕಿಟಕಿಯನ್ನು ಮುಚ್ಚಿಕೊಳ್ಳುವುದು. ಇಂದು ಜಗತ್ತು ನಮ್ಮ ಮುಂದೆ ದೊಡ್ಡದಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು. ಅವರಿಗೆ ಇಂಗ್ಲಿಷ್ ಬರಬೇಕು. ಬೇರೆ ರಾಜ್ಯಗಳ ಜನರೊಂದಿಗೆ ಮಾತನಾಡಲು ಬೇರೆ ಭಾಷೆಗಳು ಬೇಕು. ಉದ್ಯೋಗದ ಜಗತ್ತಿನಲ್ಲಿ ಹಲವು ಭಾಷೆಗಳ ಜ್ಞಾನ ಅವಕಾಶಗಳನ್ನು ಹೆಚ್ಚಿಸಬಹುದು. ಇವೆಲ್ಲವೂ ಸತ್ಯ. ಆದರೆ ಇನ್ನೊಂದು ಸತ್ಯವನ್ನೂ ನಾವು ಒಪ್ಪಿಕೊಳ್ಳಬೇಕು. ಹೊಸ ಭಾಷೆ ಕಲಿಯಲು ಹಳೆಯ ಭಾಷೆಯನ್ನು ಬಿಟ್ಟುಬಿಡಬೇಕಿಲ್ಲ. ಮನೆಯ ಬಾಗಿಲು ತೆರೆದಿದ್ದರೆ ಹೊರಗಿನ ಜಗತ್ತನ್ನು ನೋಡಬಹುದು. ಆದರೆ ಹೊರಗೆ ಹೋಗಿ ಎಷ್ಟೇ ದೂರ ನಡೆದರೂ ಮರಳಿ ಬರುವ ಮನೆ ಇರಬೇಕು. ಮಾತೃಭಾಷೆ ಆ ಮನೆಯಂತದ್ದು. ಮಗುವಿಗೆ ಇಂಗ್ಲಿಷ್ ಕಲಿಸಬೇಡಿ ಎನ್ನುವುದು ಪರಿಹಾರವಲ್ಲ. ಬದಲಾಗಿ, ಇಂಗ್ಲಿಷ್ ಕಲಿಸುತ್ತಲೇ ಕನ್ನಡದಲ್ಲಿ ಯೋಚಿಸುವ, ಓದುವ, ಬರೆಯುವ ಮತ್ತು ತನ್ನ ಭಾವನೆಗಳನ್ನು ಹೇಳುವ ಸಾಮರ್ಥ್ಯವನ್ನು ಬೆಳೆಸಬೇಕು. ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಶತ್ರುವನ್ನಾಗಿ ಮಾಡುವುದು ನಮ್ಮದೇ ಸೃಷ್ಟಿಸಿದ ಸಮಸ್ಯೆ. ನಮ್ಮ ಶಿಕ್ಷಣದ ದೊಡ್ಡ ಪ್ರಶ್ನೆಯೂ ಇದೇ. ಮಗುವಿಗೆ ಪಾಠ ಅರ್ಥವಾಗಬೇಕೇ, ಅಥವಾ ಪಾಠದ ಭಾಷೆ ಮಾತ್ರ ಸರಿಯಾಗಿ ಕಾಣಬೇಕೇ? ಮಗುವಿಗೆ ಒಂದು ವಿಷಯವನ್ನು ತನ್ನ ಪರಿಚಿತ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಅದರ ಪ್ರಶ್ನೆಗಳು ಇನ್ನಷ್ಟು ಆಳವಾಗಬಹುದು. ಅದು ಅನುಮಾನ ಕೇಳಬಹುದು. ತನ್ನದೇ ಉದಾಹರಣೆ ಕೊಡಬಹುದು. ಕಲಿತ ವಿಷಯವನ್ನು ತನ್ನ ಬದುಕಿನೊಂದಿಗೆ ಜೋಡಿಸಬಹುದು. ಮಾತೃಭಾಷೆ ಆಲೋಚನೆಗೆ ಒಂದು ನೆಲ ಒದಗಿಸುತ್ತದೆ ಎಂಬುದನ್ನು ಇತ್ತೀಚಿನ ಶಿಕ್ಷಣ ಚರ್ಚೆಗಳೂ ಗುರುತಿಸಿವೆ. ಆದರೆ ನಮ್ಮಲ್ಲಿ ಕೆಲವೊಮ್ಮೆ ಭಾಷೆಯೇ ಬುದ್ಧಿವಂತಿಕೆಯ ಅಳತೆಯಾಗಿಬಿಡುತ್ತದೆ. ಮಗುವಿಗೆ ಇಂಗ್ಲಿಷ್ ಚೆನ್ನಾಗಿ ಬಂದರೆ ಅದು ಬುದ್ಧಿವಂತ ಮಗು ಎಂದುಕೊಳ್ಳುತ್ತೇವೆ. ಕನ್ನಡದಲ್ಲಿ ಸರಳವಾಗಿ ಮಾತನಾಡಿದರೆ ಅದರ ಸಾಮರ್ಥ್ಯವನ್ನು ಅಷ್ಟಾಗಿ ಗಮನಿಸುವುದಿಲ್ಲ. ಇದು ಭಾಷೆಯ ಬಗ್ಗೆ ಇರುವ ನಮ್ಮ ಮನೋಭಾವದ ಸಮಸ್ಯೆ. ಭಾಷೆ ಒಂದು ಸಾಧನ. ಬುದ್ಧಿವಂತಿಕೆ ಅದಕ್ಕಿಂತ ವಿಶಾಲವಾದುದು. ಒಂದು ಮಗು ತನ್ನ ತಾಯಿಯೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾ ಜಗತ್ತಿನ ಬಗ್ಗೆ ದೊಡ್ಡ ಪ್ರಶ್ನೆ ಕೇಳಬಹುದು. ಮತ್ತೊಬ್ಬ ಮಗು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಅದೇ ಪ್ರಶ್ನೆ ಕೇಳಬಹುದು. ಪ್ರಶ್ನೆಯ ಮೌಲ್ಯವನ್ನು ಭಾಷೆ ನಿರ್ಧರಿಸುವುದಿಲ್ಲ. ಆದ್ದರಿಂದ ಮಕ್ಕಳನ್ನು ಭಾಷೆಯ ಹೆಸರಿನಲ್ಲಿ ಅಳೆಯುವುದನ್ನು ನಿಲ್ಲಿಸಬೇಕು. ಇನ್ನೊಂದು ಕಡೆ, ಕನ್ನಡವನ್ನು ಉಳಿಸುವ ಜವಾಬ್ದಾರಿಯನ್ನು ಕೇವಲ ಶಾಲೆಗಳ ಮೇಲೆ ಹಾಕಿದರೂ ಸಾಲದು. ಮೊದಲ ಶಾಲೆ ಮನೆ. ಮನೆಯಲ್ಲೇ ಕನ್ನಡ ಪುಸ್ತಕ ಓದದಿದ್ದರೆ, ಮಕ್ಕಳೊಂದಿಗೆ ಕನ್ನಡದಲ್ಲಿ ವಿಚಾರಗಳನ್ನು ಹಂಚಿಕೊಳ್ಳದಿದ್ದರೆ, ಹಿರಿಯರ ಮಾತನ್ನು ಕೇಳಿಸದಿದ್ದರೆ, ನಂತರ ಶಾಲೆಯಲ್ಲಿ ಭಾಷಾಭಿಮಾನವನ್ನು ಪಾಠವಾಗಿ ಕಲಿಸುವುದರಿಂದ ಮಾತ್ರ ಭಾಷೆ ಉಳಿಯುವುದಿಲ್ಲ. ಮಗುವಿಗೆ ಕನ್ನಡವನ್ನು ಪ್ರೀತಿಸು ಎಂದು ಹೇಳುವುದಕ್ಕಿಂತ, ಕನ್ನಡದಲ್ಲಿ ಒಂದು ಕಥೆ ಹೇಳಿ. ಕನ್ನಡ ಓದು ಎಂದು ಹೇಳುವುದಕ್ಕಿಂತ, ಒಳ್ಳೆಯ ಕನ್ನಡ ಪುಸ್ತಕವನ್ನು ಅದರ ಕೈಗೆ ಕೊಡಿ. ಕನ್ನಡ ಮಾತನಾಡು ಎಂದು ಒತ್ತಾಯಿಸುವುದಕ್ಕಿಂತ, ಮನೆಯಲ್ಲೇ ಕನ್ನಡದಲ್ಲಿ ಮಾತನಾಡಲು ಒಂದು ಸುಂದರ ವಾತಾವರಣ ನಿರ್ಮಿಸಿ. ಭಾಷೆ ಆದೇಶದಿಂದ ಬೆಳೆಯುವುದಿಲ್ಲ; ಬಳಕೆಯಿಂದ ಬೆಳೆಯುತ್ತದೆ. ಇದೇ ವಿಚಾರವನ್ನು ಆಡಳಿತಕ್ಕೂ ಅನ್ವಯಿಸಬಹುದು. ಸರ್ಕಾರದ ಯೋಜನೆಗಳು, ಕಾನೂನುಗಳು, ಸಾರ್ವಜನಿಕ ಸೇವೆಗಳು, ಜನರ ಹಕ್ಕುಗಳು—ಇವು ಸಾಮಾನ್ಯ ಜನರಿಗೆ ಅರ್ಥವಾಗಬೇಕಾದರೆ ಅವರ ಪರಿಚಿತ ಭಾಷೆಯಲ್ಲಿ ಸರಳವಾಗಿ ತಲುಪಬೇಕು. ಜನರ ಬದುಕನ್ನು ನಿರ್ಧರಿಸುವ ವಿಷಯಗಳು ಜನರಿಗೆ ಅರ್ಥವಾಗದ ಭಾಷೆಯ ಗೋಡೆಯ ಹಿಂದೆ ಉಳಿದರೆ, ಜ್ಞಾನ ಎಲ್ಲರಿಗೂ ಸಮಾನವಾಗಿ ತಲುಪುವುದಿಲ್ಲ. ಭಾಷೆಯ ಪ್ರಶ್ನೆ ಇಲ್ಲಿ ಭಾವನೆಯಷ್ಟೇ ಅಲ್ಲ; ಅದು ಅರ್ಥಮಾಡಿಕೊಳ್ಳುವ ಹಕ್ಕಿನ ಪ್ರಶ್ನೆಯೂ ಹೌದು. ಇಂದು ಮತ್ತೊಂದು ಹೊಸ ಕ್ಷೇತ್ರ ನಮ್ಮ ಮುಂದೆ ಬಂದಿದೆ—ತಂತ್ರಜ್ಞಾನ. ಮೊಬೈಲ್‌ನಲ್ಲಿ ಕನ್ನಡ ಇದೆಯೇ? ಕನ್ನಡದಲ್ಲಿ ಉತ್ತಮ ಡಿಜಿಟಲ್ ಪುಸ್ತಕಗಳಿವೆಯೇ? ಮಕ್ಕಳಿಗೆ ಕನ್ನಡದಲ್ಲಿ ವಿಜ್ಞಾನ, ಗಣಿತ, ಕಾನೂನು, ತಂತ್ರಜ್ಞಾನ ಕಲಿಯಲು ಗುಣಮಟ್ಟದ ವಿಷಯ ಸಿಗುತ್ತಿದೆಯೇ? ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳಲ್ಲಿ ಕನ್ನಡದ ಬಳಕೆ ಎಷ್ಟು ಸುಲಭವಾಗಲಿದೆ? ಈ ಪ್ರಶ್ನೆಗಳನ್ನು ಕೇಳದೇ ಭಾಷೆಯನ್ನು ಉಳಿಸುವ ಮಾತು ಅಪೂರ್ಣ. ಇಂದಿನ ಮಗು ಪುಸ್ತಕದ ಜೊತೆಗೆ ಪರದೆಯಲ್ಲೂ ಕಲಿಯುತ್ತಿದೆ. ಅದು ಜ್ಞಾನವನ್ನು ಮೊಬೈಲ್‌ನಲ್ಲಿ ಹುಡುಕುತ್ತದೆ, ವಿಡಿಯೋದಲ್ಲಿ ನೋಡುತ್ತದೆ, ಧ್ವನಿಯಲ್ಲಿ ಕೇಳುತ್ತದೆ. ನಾಳೆ ಕೃತಕ ಬುದ್ಧಿಮತ್ತೆಯೊಂದಿಗೆ ಮಾತನಾಡುತ್ತದೆ. ಹೀಗಿರುವಾಗ ಕನ್ನಡವನ್ನು ಕೇವಲ ಹಳೆಯ ಪುಸ್ತಕಗಳ ಭಾಷೆಯನ್ನಾಗಿ ಉಳಿಸಬಾರದು. ಕನ್ನಡಕ್ಕೆ ಭವಿಷ್ಯ ಬೇಕು. ಅದು ಪ್ರಯೋಗಾಲಯದಲ್ಲೂ ಇರಬೇಕು, ಕಂಪ್ಯೂಟರ್‌ನಲ್ಲೂ ಇರಬೇಕು, ಮೊಬೈಲ್‌ನಲ್ಲೂ ಇರಬೇಕು, ವಿಜ್ಞಾನದಲ್ಲೂ ಇರಬೇಕು, ಕಾನೂನಿನಲ್ಲೂ ಇರಬೇಕು, ಹೊಸ ಉದ್ಯೋಗಗಳಲ್ಲೂ ಇರಬೇಕು, ಮಕ್ಕಳ ಕನಸುಗಳಲ್ಲೂ ಇರಬೇಕು. ಒಂದು ಭಾಷೆ ಕೇವಲ ಹಳೆಯ ನೆನಪುಗಳನ್ನು ಹೊತ್ತುಕೊಂಡು ಬದುಕುವುದಿಲ್ಲ. ಹೊಸ ಕಾಲವನ್ನು ತನ್ನೊಳಗೆ ಸ್ವೀಕರಿಸಿದಾಗ ಮಾತ್ರ ಅದು ಜೀವಂತವಾಗಿರುತ್ತದೆ. ನಮ್ಮ ಹಿರಿಯರು ಬಳಸುತ್ತಿದ್ದ ಅನೇಕ ಕನ್ನಡ ಪದಗಳು ಇಂದು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳ ಜಾಗದಲ್ಲಿ ಬೇರೆ ಭಾಷೆಯ ಪದಗಳು ಬರುವುದು ತಪ್ಪೇನಲ್ಲ. ಭಾಷೆಗಳು ಯಾವಾಗಲೂ ಪರಸ್ಪರದಿಂದ ಪದಗಳನ್ನು ಸ್ವೀಕರಿಸುತ್ತವೆ. ಆದರೆ ಒಂದು ಪೀಳಿಗೆ ತನ್ನದೇ ಭಾಷೆಯ ಪದಗಳನ್ನು ಬಳಸುವುದೇ ನಾಚಿಕೆಯ ವಿಷಯ ಎಂದುಕೊಳ್ಳಲು ಪ್ರಾರಂಭಿಸಿದಾಗ ಸಮಸ್ಯೆ ಆರಂಭವಾಗುತ್ತದೆ. ಭಾಷಾಭಿಮಾನ ಎಂದರೆ ಬೇರೆ ಭಾಷೆಯನ್ನು ತಿರಸ್ಕರಿಸುವುದು ಅಲ್ಲ. “ನನ್ನ ಭಾಷೆಯನ್ನು ಪ್ರೀತಿಸುತ್ತೇನೆ; ಆದ್ದರಿಂದ ನಿನ್ನ ಭಾಷೆಯನ್ನೂ ಗೌರವಿಸುತ್ತೇನೆ” ಎನ್ನುವಷ್ಟು ವಿಶಾಲವಾದ ಮನಸ್ಸು ಬೇಕು. ಭಾರತದ ಸೌಂದರ್ಯವೇ ಅದರ ಬಹುಭಾಷಿಕತೆಯಲ್ಲಿ ಇದೆ. ಒಂದೊಂದು ಭಾಷೆಯ ಹಿಂದೆ ಒಂದೊಂದು ಜನಜೀವನ, ಒಂದೊಂದು ಇತಿಹಾಸ, ಒಂದೊಂದು ಸಂಸ್ಕೃತಿ, ಒಂದೊಂದು ಜ್ಞಾನಪರಂಪರೆ ಇದೆ. ಹೀಗಾಗಿ ಮಕ್ಕಳನ್ನು ಒಂದೇ ಭಾಷೆಯೊಳಗೆ ಬಂಧಿಸುವುದೂ ಸರಿಯಲ್ಲ; ಅವರ ಮಾತೃಭಾಷೆಯನ್ನು ಅವರಿಂದ ಕಸಿದುಕೊಳ್ಳುವುದೂ ಸರಿಯಲ್ಲ. ಅವರಿಗೆ ಹಲವು ಭಾಷೆಗಳ ಬಾಗಿಲುಗಳನ್ನು ತೆರೆಯಬೇಕು. ಆದರೆ ಆ ಬಾಗಿಲುಗಳನ್ನು ತೆರೆಯುವಾಗ ತಮ್ಮ ಮನೆಯ ಹೆಸರನ್ನು ಮರೆಯದಂತೆ ನೋಡಿಕೊಳ್ಳಬೇಕು. ನನ್ನಿಗೆ ಭಾಷೆಯ ಬಗ್ಗೆ ಇರುವ ದೊಡ್ಡ ಭಯ ಕನ್ನಡವನ್ನು ಮಕ್ಕಳು ಅರ್ಥಮಾಡಿಕೊಳ್ಳದಿರುವುದಷ್ಟೇ ಅಲ್ಲ; ಕನ್ನಡದಲ್ಲಿ ತಮ್ಮದೇ ಭಾವನೆಯನ್ನು ಹೇಳಿಕೊಳ್ಳಲು ಸಾಧ್ಯವಾಗದಿರುವುದು. ಅಮ್ಮನನ್ನು ಕರೆಯಲು ಬೇರೆ ಪದ ಹುಡುಕಬಹುದು. ಅಪ್ಪನನ್ನು ಕರೆಯಲು ಬೇರೆ ಪದ ಹುಡುಕಬಹುದು. ಆದರೆ ಆ ಕರೆಯೊಳಗಿನ ಭಾವನೆ ಬದಲಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಒಂದು ಭಾಷೆಯ ಜೀವ ಅದರ ನಿಘಂಟಿನಲ್ಲಿ ಇರುವ ಪದಗಳ ಸಂಖ್ಯೆಯಿಂದ ಮಾತ್ರ ಅಳೆಯಲಾಗುವುದಿಲ್ಲ. ಅದು ಎಷ್ಟು ಮನೆಗಳಲ್ಲಿ ಕೇಳಿಸುತ್ತದೆ ಎಂಬುದರಿಂದ ಅಳೆಯಬೇಕು. ಎಷ್ಟು ಮಕ್ಕಳು ಅದರಲ್ಲಿ ಕನಸು ಕಾಣುತ್ತಾರೆ ಎಂಬುದರಿಂದ ಅಳೆಯಬೇಕು. ಎಷ್ಟು ಜನ ಅದರಲ್ಲಿ ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ ಎಂಬುದರಿಂದ ಅಳೆಯಬೇಕು. ಎಷ್ಟು ಹೊಸ ಪುಸ್ತಕಗಳು ಅದರಲ್ಲಿ ಹುಟ್ಟುತ್ತವೆ ಎಂಬುದರಿಂದ ಅಳೆಯಬೇಕು. ಎಷ್ಟು ಹೊಸ ಆಲೋಚನೆಗಳು ಅದರಲ್ಲಿ ಮೊಳಕೆಯೊಡೆಯುತ್ತವೆ ಎಂಬುದರಿಂದ ಅಳೆಯಬೇಕು. ಆದ್ದರಿಂದ ಕನ್ನಡವನ್ನು ಉಳಿಸುವ ಕೆಲಸವನ್ನು ಯಾರಾದರೂ ಬಂದು ಮಾಡುತ್ತಾರೆ ಎಂದು ಕಾಯಬೇಕಾಗಿಲ್ಲ. ಒಂದು ದಿನಕ್ಕೆ ಒಂದು ಕನ್ನಡ ಪುಸ್ತಕ ಓದಲಾಗದಿದ್ದರೂ ಒಂದು ಪುಟ ಓದಬಹುದು. ಮಗುವಿನೊಂದಿಗೆ ಪ್ರತಿದಿನ ಕೆಲವು ನಿಮಿಷ ಕನ್ನಡದಲ್ಲಿ ಮಾತನಾಡಬಹುದು. ಹಳೆಯ ಪದವೊಂದನ್ನು ಹಿರಿಯರಿಂದ ಕೇಳಿ ಅದರ ಅರ್ಥವನ್ನು ದಾಖಲಿಸಬಹುದು. ಒಳ್ಳೆಯ ಕನ್ನಡ ಬರಹವನ್ನು ಮತ್ತೊಬ್ಬರಿಗೆ ಪರಿಚಯಿಸಬಹುದು. ಹೊಸ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಬಹುದು. ಅದರಲ್ಲೇ ಭಾಷೆಯ ಭವಿಷ್ಯ ಅಡಗಿದೆ. ಭಾಷೆಯನ್ನು ಉಳಿಸುವುದು ಎಂದರೆ ಭಾಷೆಯ ಸ್ಮಾರಕ ಕಟ್ಟುವುದು ಅಲ್ಲ; ಅದನ್ನು ಬದುಕುವುದು. ನಮ್ಮ ನಂತರ ಬರುವ ಮಗುವೊಂದು ತನ್ನ ಅಜ್ಜಿಯ ಹಳೆಯ ಕಥೆಯನ್ನು ಅರ್ಥಮಾಡಿಕೊಳ್ಳುವಂತಿದ್ದರೆ, ನಾವು ಒಂದು ಸೇತುವೆಯನ್ನು ಉಳಿಸಿದ್ದೇವೆ. ಒಬ್ಬ ಮಗು ತನ್ನ ತಾಯಿಯೊಂದಿಗೆ ತನ್ನ ಮನದ ಮಾತನ್ನು ತನ್ನದೇ ಭಾಷೆಯಲ್ಲಿ ಹೇಳಬಲ್ಲದಾದರೆ, ನಾವು ಒಂದು ಸಂಬಂಧವನ್ನು ಉಳಿಸಿದ್ದೇವೆ. ಒಬ್ಬ ವಿದ್ಯಾರ್ಥಿ ಜಗತ್ತಿನ ಹಲವು ಭಾಷೆಗಳನ್ನು ಕಲಿತರೂ ತನ್ನ ನೆಲದ ಭಾಷೆಯಲ್ಲಿ ಯೋಚಿಸುವ ಸಾಮರ್ಥ್ಯ ಕಳೆದುಕೊಳ್ಳದಿದ್ದರೆ, ನಾವು ಒಂದು ಬೇರು ಉಳಿಸಿದ್ದೇವೆ. ಮತ್ತು ಒಂದು ಪೀಳಿಗೆ ತನ್ನ ಬೇರುಗಳನ್ನು ಉಳಿಸಿಕೊಂಡೇ ಜಗತ್ತಿನತ್ತ ಹೆಜ್ಜೆ ಇಟ್ಟರೆ—ಅದೇ ನಿಜವಾದ ಪ್ರಗತಿ. ಜಗತ್ತನ್ನು ಕಲಿಯೋಣ. ಹೊಸ ಭಾಷೆಗಳನ್ನು ಅಪ್ಪಿಕೊಳ್ಳೋಣ. ಹೊಸ ಜ್ಞಾನವನ್ನು ಸ್ವೀಕರಿಸೋಣ. ಆದರೆ ನಮ್ಮೊಳಗೆ ಮೊದಲು ಮಾತಾಡಿದ ಆ ಭಾಷೆಗೆ ನಮ್ಮ ಬದುಕಿನಲ್ಲಿ ಒಂದು ಜಾಗವನ್ನು ಸದಾ ಉಳಿಸೋಣ. ಏಕೆಂದರೆ ಮನುಷ್ಯ ಎಷ್ಟು ದೂರ ಹೋದರೂ, ತನ್ನ ಮೊದಲ ಮಾತಿನ ಬಳಿಗೆ ಮರಳುವ ದಾರಿ ಅವನೊಳಗೇ ಎಲ್ಲೋ ಉಳಿದಿರುತ್ತದೆ. ಕೆ.ಎಂ. ಕಾವ್ಯ ಪ್ರಸಾದ್

“ಭಾಷೆ ಉಳಿದರೆ ಬದುಕಿನ ಬೇರು ಉಳಿಯುತ್ತದೆ” ಲೇಖನ ಕೆ.ಎಂ. ಕಾವ್ಯ ಪ್ರಸಾದ್ Read Post »

ಕಾವ್ಯಯಾನ

ರೋಹಿಣಿ ಜೆ ಅವರ ಕವಿತೆ “ಫ್ರಿಜ್ – ಫ್ಲವರ್”

ಕಾವ್ಯ ಸಂಗಾತಿ ರೋಹಿಣಿ ಜೆ “ಫ್ರಿಜ್ – ಫ್ಲವರ್” ಚೆಲುವಿತ್ತು ಎಲೆಯನಲವಿತ್ತುಮೊಗ್ಗಾದುದಕ್ಕೆ ಹಿರಿಹಿರಿಹಿಗ್ಗಿತ್ತುಗಿಡದಲ್ಲೇ ಅರಳುವ ಕನಸೊಂದ ಕಟ್ಟಿತ್ತು!ಯಾವುದೋ ಕಾಣದ ಕೈ ಬಂತುಹಾಗೆಯೇ ಚಿವುಟಿ ಗೋಣ ಮುರಿದಿತ್ತು!ಆಸೆಯ ಹೊಸಕಿ ಪರವಶವಾಗಿ ಹೊರಟಿತ್ತು!? ದಾರಿಯುದ್ದಕ್ಕೂ ಸಂಭ್ರಮಎಲ್ಲೋ ಎತ್ತರಕ್ಕೇರುವೆನೆಂದು!ಸ್ವಲ್ಪವೇ ಸ್ವಲ್ಪ ಮೈಯರಳಿಸತೊಡಗಿತ್ತುಬಂದು ಬಿದ್ದದ್ದು ಮಾರುಕಟ್ಟೆಗೆತನ್ನಂತಿರುವ ಸುತ್ತಲವರ ಕಂಡುಚೂರು ಚೂರೇ ಚೂರು ಧೈರ್ಯ ದೊರೆಯಿತು ನೂರು, ಇನ್ನೂರು, ಐನೂರು,“ಅಬ್ಬಬ್ಬಾ ಎಷ್ಟು ಏರಿದೆ ಬೆಲೆ”ಮಂದಿಯೊಳಗೆ ನಡೆದಿತ್ತು ಗೊಣಗು ಗುಸುಗುಸುಏನಾಗ್ತಿದೆ ತನ್ನ ಮಾರಾಟವೇ?ನೀರು ಚಿಮುಕಿಸಿದ್ದು ಅಕ್ಕರೆಗಲ್ಲ!ನೆರಳೊಳಗೂ ಸುಡುವಕಾವಿಗೆ ಅಳುತ್ತಿತ್ತು ಮುಸುಮುಸು! ಯಾರೋ ಮಹನೀಯರ ಫೋಟೋಗೆಸಂಭಾಷಣೆ ಕೇಳಿಬಂದಿತ್ತು ಮೊಬೈಲಲ್ಲಿಹೀಗಾದರೂ ಪಾವನ ಜನುಮ ಪರಿಮಳ ಬೀರಿತುಸಂದಣಿಯಲಿ ನಜ್ಜುಗುಜ್ಜು ಬಜ್ಜಿಯಾಗಿಬಂದರೆ ಇಲ್ಲೂ ದೊರೆಯಲಿಲ್ಲ ಪ್ರೀತಿಯ ಸ್ಪರ್ಶಎಂದೂ ಕಾಣದ ನಂ(ಮಂ)ಜಿನ ಕೋಣೆಯ ಸೇರಿತು ಮಾರನೆಯ ದಿನ ಬಂದರು ಮನುಷ್ಯರುಹೊರತೆಗೆದು ಖುಷಿಯಲ್ಲಿ ನೋಡಲುಹೃದಯಕ್ಕೆ ಆಘಾತ ಕಾದಿತ್ತು ಹೂ ಹಣ್ಣಾಗಿತ್ತು!ನೋಟಿನ ರಾಣಿ ಪರ್ಸನು ತೆರೆದುಇತ್ತಳು ಹೊಸತೊಂದು ತಾ ಎನುತಕಣ್ಮುಂದೆ ಕನಸಕೊಂದವರ ಶಪಿಸಿ ಅದು ತಾ ಮಣ್ಣಾಗಿತ್ತು! ರೋಹಿಣಿ ಜೆ

ರೋಹಿಣಿ ಜೆ ಅವರ ಕವಿತೆ “ಫ್ರಿಜ್ – ಫ್ಲವರ್” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ ಇಂದೇಕೋ ಮನಸ್ಸು ಭಾರವಾಗಿದೆ. ಇಂದೇಕೋ ಮನಸ್ಸು ಭಾರವಾಗಿದೆ…  ಮೋಡ ಕವಿದ ಆಗಸದ ಹಾಗೆ.  ಕಾರಣ ಕೇಳಿದರೆ ಉತ್ತರವಿಲ್ಲ,  ಆದ್ರೂ ಎದೆಯೊಳಗೆ ಎದ್ದಿಹಬಿರುಗಾಳಿಯ ಸಾವಿರ ಸುಳಿಯೊಳಗೆ ಸಿಲುಕಿದೆ… ನಗುತ್ತಾ ಎಲ್ಲರೊಂದಿಗೂ ಮಾತಾಡ್ತೀನಿ,  ಆದ್ರೆ ಒಳಗೆ ಎಲ್ಲೋ ಒಂದು ಮೂಲೆಯಲ್ಲಿ  ಸಣ್ಣ ಮಗುವಿನ ಹಾಗೆ ಗೋಳಾಡ್ತಿದೆ ಮನಸ್ಸು.  ಯಾರಿಗೂ ಹೇಳಿಕೊಳ್ಳದ ಸಂಕಟ ನೋವುಗಳು  ಗುಂಡಿಗೆ ಗೂಡಲ್ಲಿ ಕಲ್ಲಿನಂತೆ ಕೂತಿವೆ. ಸಮಯ ನಿಂತಂತಿದೆ,  ಗಡಿಯಾರದ ಮುಳ್ಳುಗಳುಕೂಡ ನಿಧಾನಗತಿಯಲ್ಲಿ ಚಲಿಸುತ್ತಿವೆಪ್ರಪಂಚ ಜೋರಾಗಿ ಓಡ್ತಿದೆ,  ನಾನು ಮಾತ್ರ ನನ್ನ ಯೋಚನೆಗಳಲ್ಲೇ ಸಿಕ್ಕಿಹಾಕಿಕೊಂಡಿದ್ದೀನೇನೋ.. ಕಣ್ಣಲ್ಲಿ ನೀರಿದ್ದರೆ ಹರಿಯಲಿ.  ಮಳೆ ಬಿದ್ದ ಬಳಿಕ ಭೂಮಿಯಮಣ್ಣು ಪರಿಮಳ ಬೀರುತ್ತೋ,  ಅತ್ತಮೇಲೆ ಮನಸ್ಸೂ ಹಾಗೆಹಗುರಾಗುತ್ತದೆಂಬ ಭರವಸೆ. ಈ ಕತ್ತಲು ಶಾಶ್ವತವಲ್ಲ.  ದೀಪ ಆರಿಸಿದ ಕೂಡಲೇ ಬೆಳಕು ಬರುತ್ತೆ.  ನೋವು ಇರುವ ಜಾಗದಲ್ಲೇಗುಣವಾಗೋ ಶಕ್ತಿನೂ ಇರುತ್ತೆ.ಆದರೂ ಇಂದೇಕೋ ಈ ಮನಸ್ಸುಭಾರವಾಗಿದೆ…. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.” Read Post »

ಪುಸ್ತಕ ಸಂಗಾತಿ

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ

ರಂಗ ಸಂಗಾತಿ “ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ ರಚನೆ  : ಎಚ್ ಎಸ್ ಶಿವಪ್ರಕಾಶ್ಪ್ರಕಾಶಕರು  :  ಬಿ ಹೆಚ್  ಮಲ್ಲಿಕಾರ್ಜುನಆಡಳಿತಾಧಿಕಾರಿಕನ್ನಡ ಪುಸ್ತಕ ಪ್ರಾಧಿಕಾರಪ್ರಥಮ ಮುದ್ರಣ  : 2011ಪುಟಗಳು : 534 ಪ್ರತಿಯೊಂದು ದೇಶವು ಆಯಾ ಪ್ರದೇಶದ ಜನ ಜೀವನದ ಸ್ಥಳಿಯ ಸಂಪ್ರದಾಯಗಳು ಅಲ್ಲಿಯ ಕಲೆಗಳ ವಸ್ತುಗಳಾಗಿ ರೂಪುಗೊಂಡಿವೆ. ಭಾರತವೂ ವಿವಿಧ ಸಂಪ್ರದಾಯಗಳ ಜನ ಜೀವನವನ್ನು ಹೊಂದಿದ್ದು ಪ್ರತಿಯೊಂದು ಭಿನ್ನ ನಡಾವಳಿಗಳನ್ನು ಸೂಚಿಸುತ್ತವೆ. ಅದರಲ್ಲೂ ಬುಡಕಟ್ಟು ಸಮುದಾಯಗಳ ಕಟ್ಟು ನಿಟ್ಟಾದ ಸಂಪ್ರದಾಯಗಳು ಅಲ್ಲಿನ ಜೀವನ ಪದ್ದತಿಯನ್ನು ಬಿಂಬಿಸುತ್ತವೆ. ಅವು ಭಾರತದ ಜನಪದ ಸಂಸ್ಕೃತಿಯ ಅಡಿಗಲ್ಲಾಗಿ ಪರಿಣಮಿಸಿವೆ. ವೈವಿಧ್ಯಮಯ ಸಂಸ್ಕೃತಿˌ ಆಚಾರ ವಿಚಾರಗಳು ಆಯಾ ಪ್ರದೇಶಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.ನಾಟಕಕಾರರಾದ ಡಾ. ಎಚ್ ಎಸ್ ಶಿವಪ್ರಕಾಶ್ ಅವರ *ಮದುವೆ ಹೆಣ್ಣು* ನಾಟಕವು ಜನಪದ ಸಂಸ್ಕೃತಿಯ ಬುಡಕಟ್ಟು ಸಮುದಾಯದ ಜೀವನ ಪದ್ದತಿಯ ಕಥೆಯನ್ನಾಧರಿಸಿ ರಚನೆಯಾಗಿದೆ. ಆ ಸಮುದಾಯದಲ್ಲಿ ಮದುವೆಯಾಗಬೇಕಾದರೆ ಅನುಸರಿಸಬಹುದಾದ ನಿಯಮವನ್ನು ನಾಟಕ ವಿವರಿಸುತ್ತದೆ. ಹರೆಯಕ್ಕೆ ಬಂದ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಹುಡುಕಿ ಕೊಳ್ಳುವ ಅವಕಾಶವಿದ್ದು. ಆ ಸಮಯ ಬಂದಾಗ ಯುವಕನು ತಾನು ವರಿಸುವ ವಧುವನ್ನು ಮದುವೆಗೆ ಮುಂಚೆ ಯುವಕ ನಾನು ಮದುವೆಯಾಗುವ ಹೆಣ್ಣನ್ನು ಯಾವುದೇ ಸಂದರ್ಭದಲ್ಲೂ ಎಂಥವರಿಂದಲೂ ಸಂರಕ್ಷಣೆ ಮಾಡಬಲ್ಲವನು. ಅಂತಹ ಸಾಮರ್ಥ್ಯ ಉಳ್ಳವನು ಎಂಬು ಸಾಬೀತುಪಡಿಸಲು  ಕಾಡಿನೊಳಗೆ ಒಬ್ಬಂಟಿಯಾಗಿದ್ದು ಗಂಡಾಳು ಒಬ್ಬನನ್ನು ಕೊಂದುˌ ಆತನ ರುಂಡವನ್ನು ತಂದು ಹೆಣ್ಣು ಕೊಡುವ ಮಾನವನಿಗೆ ಬಲಿ ಕೊಡಬೇಕಾಗುತ್ತದೆ. ಒಂದು ವೇಳೆ ಅವನು ಈ ಕಾರ್ಯ ಮಾಡಲಾಗದಿದ್ದರೆ ಅವಿವಾಹಿತನಾಗಿಯೇ ಉಳಿಯಬೇಕಾಗುತ್ತದೆ.ಈ ನಿಯಮದಂತೆ ಒಮ್ಮೆ ಊರ ಒಡೆಯನ ಮಗ ತನ್ನ ತಂದೆಯಿಂದ ನಿಯಮಗಳನ್ನು ತಿಳಿದು ತಾನು ವರಿಸುವ ಹೆಣ್ಣಿಗಾಗಿ ಕಾಡಿಗೆ ಹೋಗುತ್ತಾನೆ. ಗಂಡಾಳುವಿನೊಂದಿಗೆ ಹೋರಾಡಲು ಕಾಡೆಲ್ಲಾ ಸುತ್ತಾಡುತ್ತಾನೆ. ಒಬ್ಬನನ್ನು ಕೊಂದು ಅವನ ತಲೆ ಬುರುಡೆಯನ್ನು ತರಲು ಹರಸಾಹಸ ಪಡುತ್ತಾನೆ. ವೀರಾವೇಷದಿಂದ ಹೋರಾಡಲು ಪ್ರತಿದಿನ ಗಂಡಾಳುವಿಗಾಗಿ ಹುಡುಕುತ್ತಿರುತ್ತಾನೆ. ಬಹಳ ದಿನಗಳಾದರೂ ಯಾರೊಬ್ಬರೂ ಸಿಗದಿದ್ದಾಗˌ ಇತ್ತ ಇವನು ಬರುವಿಕೆಯನ್ನೇ ಕಾಯುತ್ತಿದ್ದ ಮದುವೆಯಾಗಬೇಕಿದ್ದ ಹೆಣ್ಣು  ಮದುವೆಯಾಗುವವನ್ನು ಬಿಟ್ಟಿರಲಾರದೆ ಅವನ ಕಷ್ಟವನ್ನು ನೋಡಲಾಗದೆ. ಅವನನ್ನೇ ಹುಡುಕಿ ಕಾಡಿಗೆ ಹೊರಡುತ್ತಾಳೆ. ಆದರೆ ಬಲಿಗಾಗಿ ತಿರುಗಾಡುತ್ತಿದ್ದ ಯುವಕನಿಗೆ ಈ ವಿಷಯ ತಿಳಿಯದಾಗಿತ್ತು. ಹೇಗಾದರೂ ಮಾಡಿ ಒಬ್ಬನನ್ನು ಕೊಂದುˌ ಅವನ ರುಂಡದೊಂದಿಗೆ ಮರಳಿ ಮದುವೆಯಾಗಬೇಕು. ಎಂದು ಹಂಬಲಿಸುತ್ತಿದ್ದ ಯುವಕ ಪ್ರತಿ ದಿನ ಪ್ರತಿ ಕ್ಷಣ ಬಲಿಗಾಗಿ ಹುಡುಕುತ್ತಲೇ ಇದ್ದನು. ಕೆಲ ದಿನಗಳ ನಂತರ ಯಾರೋ ನನ್ನನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂತು. ಯಾರವರು ಎಂದು ಬೆನ್ನಟ್ಟಿ ಹೊರಟನು.  ಯಾವನೋ ಗಂಡಿರಬೇಕು ಎಂದು ಭಾವಿಸಿ ಮರದ ಕೆಳಗೆ ಮಲಗಿದ್ದ ಅವಳ ರುಂಡವನ್ನು ಕತ್ತರಿಸಿ ರುಂಡವನ್ನು ಹಿಡಿದು ಮಾನವನ ಮನೆ ತಲುಪಿದನು. ಈತನ ಬರುವಿಕೆಯನ್ನೇ ಕಾತುರದಿಂದ ಕಾಯುತ್ತಿದ್ದತಂದೆˌ ಮಾವ ಮತ್ತು ಪೂಜಾರಿ (ಧಾರ್ಮಿಕ ವಿಧಾನಗಳಿಂದ ಮದುವೆ ಮಾಡಿಸುವವನು) ಹಾಗೂ ಊರಿನ ಮಂದಿ. ತಲೆ ಬುರುಡೆ ಹಿಡಿದು ಬಂದ ಯುವಕನ ಉತ್ಸಾಹವನ್ನು ನೋಡಿ ಅತ್ಯಾನಂದ ಪಡುತ್ತಾರೆ. ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸುತ್ತಾರೆ. ಸಡಗರದಿಂದ ಮದುವೆಯ ಸಿದ್ದತೆ ನಡೆಯುತ್ತದೆ. ಆದರೆ… ಇದನ್ನೆಲ್ಲಾ ಸೂಕ್ಷ್ಮಮತಿಯಿಂದ ಗಮನಿಸುತ್ತಿದ್ದ ಹೆಣ್ಣೊಂದು ಓಡೋಡಿ ಬಂದುˌ  ನಿಲ್ಲಿಸಿ… ನಿಲ್ಲಿಸಿ…. ನಿಲ್ಲಿಸಿ. ನಿಮ್ಮ ಮದುವೆಯ ಸಂಭ್ರಮದ ಕಾರ್ಯಗಳನ್ನು ನಿಲ್ಲಿಸಿ. ಎನ್ನುತ್ತಾಳೆ.  ನೆರೆದಿದ್ದವರೆಲ್ಲಾ ಯಾಕೆ ?  ಕಾರಣವೇನು ? ಎಂದಾಗ.  ಈಗ ಅವನು ತಂದಿರುವ ತಲೆ ಬುರುಡೆ ಬೇರೆ ಯಾರದೋ ವ್ಯಕ್ತಿಯದಲ್ಲ. ಅಂದಾಗ ಆಚ್ಚರಿಗೊಂಡ ಜನ ಮತ್ಯಾರದು ? ಎಂದು ಪ್ರಶ್ನಿಸುವರು. ಆಗ ಆ ಹೆಣ್ಣು ಆ ತಲೆ ಬುರುಡೆ ಬೇರೆ ಯಾರದೋ ಅಲ್ಲ. ಅವನು ಮದುವೆಯಾಗಬೇಕೆಂದಿದ್ದ ಹೆಣ್ಣಿನದು. ಎಂದಾಗ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಿಕ್ಕೇ ತೋಚದವರಂತಾಗುತ್ತಾರೆ. ಮಮ್ಮಲ ಮರುಗುತ್ತಾರೆ. ಇಂತಹ ನೀಚ ಕೆಲಸ ಮಾಡಿದ ಆ ಯುವಕನನ್ನು ಊರಿಂದ ಬಹಿಷ್ಕಾರ ಹಾಕಿ ಆಚೆ ಕಳುಹಿಸುತ್ತಾರೆ. ಊಟ ನೀರು ಕೊಡದೆ. ಯಾರೂ ಅವನನ್ನು ಮಾತನಾಡಿಸಕೂಡದು. ಒಂದು ವೇಳೆ ಯಾರಾದರೂ ಇಂತಹ ಕೆಲಸ ಮಾಡಿದರೆ ಅಂತವರನ್ನೂ ಬಹಿಷ್ಕರಿಸಬೇಕಾಗುತ್ತದೆ. ಎಂದು ಎಚ್ಚರಿಸುತ್ತಾರೆ.ಇಂತಹ ಅವಮಾನವನ್ನು ಮತ್ತು ತಾನು ಮದುವೆ ಆಗಬೇಕಿದ್ದವಳನ್ನು ಅರಿಯದೆ ಕೊಂದೆನಲ್ಲ ಕೊರಗಿನಿಂದ ಹತಾಶೆಯಿಂದ ತನ್ನ ಬರ್ಚಿಗೆ ಕೊರಳು ಕೊಟ್ಟು ಪ್ರಾಣ ಬಿಡುತ್ತಾನೆ.ಇದಿಷ್ಟು ನಾಟಕದ ಮುಖ್ಯ ಕಥಾ ವಸ್ತುವಾಗಿದೆ. ನಾಟಕದ ಪ್ರಾರಂಭದಲ್ಲಿಯೇ ಆತ್ಮಗಳು  ಮರು ಹುಟ್ಟಿನ ರೂಪದಲ್ಲಿ ಕಾಣುತ್ತಿವೆ.  ಬೌದ್ದ ಸನ್ಯಾಸಿಗಳು ಅಲ್ಲಲ್ಲಿ ತಿರುಗಾಡುತ್ತಿರುತ್ತಾರೆ. ತಾನು ಮದುವೆಯಾಗುವ ಯುವತಿಗೆ ಯುವಕ ರಕ್ತ ಪಿಪಾಸುವಿನಂತೆ ಗೋಳಾಡುತ್ತಾ ತನ್ನ ಪೂರ್ವ ಜನ್ಮದ ಕತೆಯನ್ನು ಹೇಳಲಾರಂಭಿಸುತ್ತಾನೆ. ಇದನ್ನೆಲ್ಲಾ ಆಲಿಸಿದ ಆ ಯುವತಿ ಇದು ತನ್ನದೇ ಕಥೆ. ಅವನೇ ಇವನು. ಎಂದು ಮರು ಜನ್ಮದಲ್ಲಿ ಮದುವೆಯಾಗಲು ನಿಶ್ಚಯಿಸುತ್ತಾಳೆ.ಪ್ರೇಕ್ಷಕನಾಗಿ ನಾಟಕ ನೋಡುವ ನನಗೆ ಅನಿಸುವುದೇನೆಂದರೆ ! ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲˌ ಎಂದು ಮನವರಿಕೆಯಾಗುತ್ತದೆ. ಷೇಕ್ಷ್ಸ್ ಫಿಯರ್ ನಾಟಕ ಮ್ಯಾಕ್ ಬೆತ್ ನ ಛಾಯೆ ಇಲ್ಲಿದೆ. ಗ್ರೀಕ್ ನಾಟಕಕಾರ ಸೋಫೋಕ್ಲಿಸ್ ನ ಈಡಿಪಸ್ ನಾಟಕದ ಛಾಯೇಯೂ ಇದೆ. ಭಾರತೀಯರ ನಂಬಿಕೆಯೂ ಇದೆ ಆಗಿದೆ.ಈಡಿಪಸ್ ನಾಟಕದಲ್ಲಿ ಮಗ ತಾಯಿಯನ್ನು ಮದುವೆಯಾದರೆˌ ಇಲ್ಲಿ ಯುವಕ ತಾನು ವರಿಸುವ ಹೆಣ್ಣನ್ನು ತನಗೆ ಅರಿವಿಲ್ಲದೆ ಆಕೆಯನ್ನೇ ಕೊಲ್ಲುತ್ತಾನೆ. ಷೇಕ್ಷ್ಸ್ ಫಿಯರ್ ನ ಮ್ಯಾಕ್ ಬೆತ್ ನಾಟಕದಲ್ಲಿ ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಸೇರಿ ತಮ್ಮ ರಾಜನನ್ನೇ ಕೊಲ್ಲುತ್ತಾರೆ. ಆತನ ರಕ್ತದ ಮಡುವನ್ನು ಕಂಡ ಇಬ್ಬರೂ ಅದೆ ಭ್ರಮೆಯಲ್ಲಿ ಯಾತನೆಯನ್ನು ಅನುಭವಿಸಿದರೆˌ ಇಲ್ಲಿ ಯುವಕ ಮರು ಜನ್ಮದಲ್ಲಿ ತಾನು ಮದುವೆಯಾಗಬೇಕಿದ್ದ ಯುವತಿಯನ್ನು ನೆನೆದು ಕೊರಗುತ್ತಾನೆ. ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥಾ ವಸ್ತು ಹೊಂದಿರುವ ಎಚ್ ಎಸ್ ಪ್ರಕಾಶ ಅವರ ನಾಟಕ *ಮದುವೆ ಹೆಣ್ಣು* ಬಂಧದಲ್ಲಿ ಅತ್ಯಂತ ಗಟ್ಟಿತನವನ್ನು ಹೊಂದಿದೆ. ಈ ನಾಟಕವನ್ನು ಬಲು ನಾಜೂಕಿನಿಂದ ನಿರ್ಧೇಶಿಸಿದ ಅಸ್ಸಾಂ ನ ಪವಿತ್ರಾ ರಾಬಾ ಅವರ ರಂಗಭೂಮಿಯ ಜ್ಞಾನ ಎದ್ದು ಕಾಣುತ್ತದೆ.ಸಂಗೀತ ಸಂಯೋಜನೆ ಸಂದರ್ಭಕ್ಕೆ ಅನುಸಾರವಾಗಿ  ಇನ್ನೂ ಸ್ವಲ್ಪ ಸುಧಾರಿಸಬೇಕಿತ್ತು ಅನಿಸುತ್ತದೆ. ದೃಶ್ಯ ಸಂಯೋಜನೆಯೂ ಗೊಂದಲದಲ್ಲಿತ್ತು. ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಬಹಳ ವಿರಾಮ ಇದ್ದಂತಿತ್ತು.  ಆದರೆ ನಟನೆˌ ವಸ್ತಾೃಲಂಕಾರ. ಬೆಳಕು ಹಾಗೂ ಪ್ರಸಾಧನಗಳು ನಾಟಕವನ್ನು ಗುರಿ ತಲುಪಿಸಿದವು. ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾದವು. ರಂಗ ತರಬೇತಿ ಪಡೆಯದ ಹವ್ಯಾಸಿ ಕಲಾವಿದರಾದರೂ  ನುರಿತವರಂತೆ ಅಭಿನಯ ಮಾಡಿ ಸೈ ಎನಿಸಿಕೊಂಡರು. ನಾಟಕದ ವಸ್ತುವನ್ನು ಪ್ರೇಕ್ಷಕರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು.ನಾಟಕ ಅಸ್ಸಾಂ ನ ಬುಡಕಟ್ಟು ಜನಾಂಗದಸಂಪ್ರದಾಯದ ಭಾಗವಾಗಿದ್ದರೂˌ ಭಾಷೆ ಬೇರೆಯಾದರೂ. ಪ್ರೇಕ್ಷಕರೆಲ್ಲರೂ ಇದು ನಮ್ಮ ಜೀವನದಲ್ಲಿ ನಡೆದ ಗಂಟೆ ಇದೆ. ಪ್ರೇಕ್ಷಕರೆಲ್ಲರೂ ಈ ಕತೆ ನಮ್ಮ ಜೀವನದಲ್ಲಿ ನಡೆಯಿತೇನೋ ಎಂಬ ಭಾವನೆಯಾಯಿತು. ಪಾತ್ರಧಾರಿಗಳಾದ ವಿಜಯಪುರದ ಶ್ರೀರಂಗ ವಡೇಕರ್ ˌ ಉಡುಪಿಯ ಪುನೀತ್ˌ ಧಾರವಾಡದ ಸಾವಿತ್ರಿ ಮತ್ತು ರಂಜಿತ. ಬಳ್ಳಾರಿಯ ನಂದಕುಮಾರ ಮತ್ತು ರಂಜಿತಾ ಕೊಪ್ಪಳದ ಹುಲ್ಲೇಶ್  ಚಿತ್ರದುರ್ಗದ ಅಮಿತ್ ಇವರ ಅಭಿನಯ ಚನ್ನಾಗಿತ್ತು. ಲವಣ ಕಿಶೋರ ಅವರ ಬೆಳಕಿನ ವಿನ್ಯಾಸ ಭಾವನೆಗಳನ್ನು ಉದ್ದೀಪನಗೊಳಿಸುವಂತಿತ್ತುಥೇಯೇಟರ್ ಸಮುರಾಯ್ ಕಲಾ ತಂಡವು ರಾಜ್ಯದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರಗಳಾದˌ ನೀನಾಸಂ. ರಂಗಾಯಣ. ಶಿವಸಂಚಾರ. ಜಮುರಾ ಮುಂತಾದ ರೆಪರ್ಟಿ ಕಲಾವಿದರಂತೆ ಪ್ರಬುದ್ದತೆಯಿಂದ ಅಭಿನಯಿಸಿತು. ವೆಂಕಟೇಶ ಈಡಿಗರ*ರಾಣೇಬೆನ್ನೂರು**9008698311*

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ Read Post »

You cannot copy content of this page

Scroll to Top