ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ನೀವು..ಮತ್ತೂ… ಈ..ಪ್ರೇಮ” ಈ ಪ್ರೇಮವೆಂಬುದುಮಹಾಕವಿಯೊಬ್ಬ ಬರೆದಅನವಶ್ಯಕವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..! ಅದು..!ಎಲ್ಲೋ..ದೂರದಲ್ಲಿ..!ಅಜ್ಞಾತವಾಗಿ ಕೂತಅನಾಮಿಕನೊಬ್ಬನ ಎದೆಯಲ್ಲಿತಣ್ಣಗೆ ಹುಟ್ಟಿಕೊಂಡಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳಆತ್ಮಸಂವೇದನೆಯಗಂಭೀರ ದನಿಯ ಹಿನ್ನೆಲೆಯಲ್ಲಿಹೃದಯದಲ್ಲೊಂದುಸಣ್ಣಗೆ ಕಂಪನ ಉಂಟು ಮಾಡಬಲ್ಲಎರಡೇ ಎರಡು ಸಾಲಿನಬಂಡಾಯದ ಬೆಂಕಿಯಂತಹಕಾವ್ಯ ರೂಪಕ..! ಒಮ್ಮೆಲೇ ಸುಡುವುದಿಲ್ಲನಿಮ್ಮನ್ನು ಅದುನಿಧಾನವಾಗಿ ಹೆಜ್ಜೆಯೂರುತ್ತದೆಸಮ್ಮೋಹನಗೊಳಿಸುತ್ತದೆ..!ಎಷ್ಟೇ ಎಚ್ಚರಿಕೆ ವಹಿಸಿದರೂಕ್ಷಣಾರ್ಧದಲ್ಲಿ ಕಣ್ಮುಂದಿನಹಾದಿಯನ್ನು ಮರೆಸಿ ಬಿಡುತ್ತದೆ..! ಸರಿಯಾದಒಂದೇ ಒಂದು ವಿಳಾಸವಿಲ್ಲಅದರ ತೆಕ್ಕೆಯೊಳಗೆಗೂಡು ಮರೆತ ಹಕ್ಕಿಯಂತೆಬಯಲ ತುಂಬಾಎಲ್ಲೆಲ್ಲೂ ಹಾರಿ ವಿಹರಿಸುತ್ತಾಆನಂದದಲ್ಲಿತೇಲಿಸುತ್ತದೆನೀವು ಕಾಣದಿರುವಹೊಸ ಭ್ರಮಾ ಲೋಕಗಳಲ್ಲಿಮಿಂಚಿನ ಸಂಚಲನ ಸೃಷ್ಟಿಸಿಕಣ್ಣನ್ನು ಕುರುಡಾಗಿಸುತ್ತದೆ..! ಅಚ್ಚರಿಯೇನಿಸುವುದಿಲ್ಲಯಾರೊಬ್ಬರಿಗೂಎದೆಗೂಡಿನಲ್ಲಿನೂರಾರು ಕನಸುಗಳಿಗೆಮೊಟ್ಟೆಯಿಟ್ಟು ಮರಿ ಮಾಡುವಾಗಆದರೆಎಷ್ಟು ಕಾಲಹೀಗೆ ಕನಸಿನಲ್ಲಿ ಹಾರುವಿರಿ?ಹಾರುವ ರೆಕ್ಕೆಗಂಟಿಕೊಂಡೇಬೆನ್ನೇರಿರುತ್ತದೆಒಂದು ಸಣ್ಣ ಆತಂಕಅಥವಾಬಿರುಕು ಮೂಡಿಸುವನಿಮ್ಮದೇ ನೆರಳುಗಳ ಛಾಯೆ..! ತತ್ ಕ್ಷಣಪ್ರೇಮದ ಕನಸುಗಳಿಂದನಿಜಕ್ಕೂ ಎಚ್ಚರವಾಗುತ್ತೀರಿ..!ಆರಂಭದಲ್ಲಿಕಣ್ಣೀರು ಹಾಕುತ್ತಾಕೂಗಾಡುತ್ತೀರಿವಾಗ್ವಾದಗಳಲ್ಲಿಗುದ್ದಾಡುತ್ತಾ ಜಿದ್ದಿಗೆ ಬಿದ್ದಂತೆವರ್ತಿಸುತ್ತೀರಿದನಿಯೆತ್ತುವುದನ್ನು ಕಲಿಯುತ್ತೀರಿಪ್ರತಿಭಟಿಸುತ್ತೀರಿ..! ಆದರೆ ವಿಪರ್ಯಾಸ..!ಕಾಲ ಸರಿದಂತೆಲ್ಲಾತಣ್ಣಾಗುಗುತ್ತೀರಿತುಂಬಾ ಆಳದಲ್ಲಿ ಬಿದ್ದಿರುತ್ತೀರಿಮೌನವಾಗುತ್ತೀರಿಕೊನೆಗೊಮ್ಮೆಗಂಭೀರವಾಗಿಏಕಾಂತದ ಸಂಜೆಗಳಲ್ಲಿಸುಖಾಸುಮ್ಮನೆತಾವೊಬ್ಬರೇ ತಮ್ಮಷ್ಟಕ್ಕೆ ತಾವೇಕಳೆದು ಹೋಗುತ್ತೀರಿ…! ಧಾವಂತವಿಲ್ಲನಿಮಗೆ ಬದುಕಿನಲ್ಲಿಗುನುಗುತ್ತದೆ ಕಿವಿಗಳಿಗೆಶೋಕದಲ್ಲೂ ನೆಮ್ಮದಿ ತರಬಲ್ಲಮಹಮ್ಮದ್ ರಫಿಕಿಶೋರ್ ಕುಮಾರ್ , ಮುಖೇಶ್ ಮನ್ನಾಡೇಯಯಾವೊದಾದರೊಂದುಹಳೆಯ ಹಾಡು..! ಕೂತುಬಿಡುತ್ತೀರಿಪ್ರೇಮದ ಹರಿವಿನಲ್ಲಿಮುಗುಳ್ನಗುವ ಬುಧ್ಧನಂತೆಆಗ ನಿಜಕ್ಕೂ ಕೇಳಿಸುತ್ತದೆಪ್ರೇಮದ ಒಳದನಿಪಿಸುಗುಡುತ್ತೀರಿನೀವು ಕೂಡ ಅದರೊಟ್ಟಿಗೆಬೆಂಕಿಯನ್ನು ಬೆಳಕಾಗಿಸಿಕೊಂಡಕಲಾತ್ಮಕಕವಿತೆಯೊಂದರ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಮನದ ಮಗು ಹಠ ಮಾಡುವ ಮುನ್ನ ಬಂದುಬಿಡುನೊಂದು ಬಿಕ್ಕಿ ಅಳುವ ಮುನ್ನ ಬಂದುಬಿಡು ಇರಲಿ ಮೈಲುಗಟ್ಟಲೇ ಅಂತರ  ಇಬ್ಬರ ನಡುವೆ ನೆನಪು ನರಳುತ ಮಾಸುವ ಮುನ್ನ ಬಂದುಬಿಡು  ನನಗೂ ಇದೆ ಹಗಲು ದುಡಿಯುವ ಜವಾಬ್ದಾರಿಇರುಳ ಕನಸು ಸಾಯುವ ಮುನ್ನ ಬಂದುಬಿಡು ಜೊತೆ ಬಾಳುವ ಅವಕಾಶವೇ ಇಲ್ಲ ನಮಗೆಪ್ರೀತಿಯ ಎದೆಬಡಿತ ನಿಲ್ಲುವ ಮುನ್ನ ಬಂದುಬಿಡು ವಾಣಿಯ ಈ ಜನ್ಮವೆನೋ ಕಳೆಯುವುದು ವಿರಹದಿಮರುಜನ್ಮದಿ ಮತ್ಯಾರೋ ಕೈ ಹಿಡಿವ ಮುನ್ನ ಬಂದುಬಿಡು ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ  ಬುದ್ಧನಂತೆ ಸುಮ್ಮನಿದ್ದುಬಿಡುಹೊರಟು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾ ನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರುಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುನೂರೆಂಟು ಮಂದಿ ಇರಬಹುದುಬಿಟ್ಟು ಬಿಡು ಮಂದಿಯ ಸಹವಾಸಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೂ ಕರುಗುವರಿಲ್ಲಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ ಹೇಗೆ?!ತಳ್ಳಿಕೊಂಡೆ ಹೋಗಿಬಿಡುವುದು ಕಾಲಜೊತೆಗೆ ನಿಲ್ಲುವರಿಲ್ಲನಿಲ್ಲಬೇಡ  ನೀನು ಓಡು ಓಡುಯಾರಿಗೂ ಕಾಯಬೇಡಯಾರೂ ಕಾದಿಲ್ಲ ನಿನಗಾಗಿ ಒಂಟಿ ಪಯಣವೆಂದು ಬೇಸರಸದಿರುದೂರದ  ದಡ ಸೇರಲುಒಂಟಿಯಾಗಿಯೇ ನಡೆಯಬೇಕುನಿನ್ನ ಪಾಪ ಪುಣ್ಯಗಳ ಮೂಟೆ ಹೆಗಲಿಗೆರಿಸಿಕೊಂಡುನಡೆದು ಬಿಡು ಮೋಹ ಮಮಕಾರಗಳ ತೊರೆದುಬುದ್ಧ ಬಸವ ನಡೆಯಲಿಲ್ಲವೇಅವರ ದಾರಿಯೇನು ಸಲೀಸಾಗಿತ್ತೆ?! ಬೆಳಕಿನ ಅರಮನೆಗೆನೂರಾರು ದಾರಿಗಳಿವೆಯಂತೆನಡೆದು ಬಿಡು ಬೆಳಕಿನೆಡೆಗೆಸವಿ ಸಗ್ಗ ಪಡೆಯಲುಇಹದ ಕಗ್ಗ ಬಿಡಿಸಿಕೊಳ್ಳಬೇಕುಬಿಡಿಸಿಕೊಂಡು ಬಿಡುಅಲ್ಲಮ ನಡೆದ ದಾರಿಅಕ್ಕ ನಡೆದ ದಾರಿನಿನ್ನೆದುರಿಗಿದೆಆ ದಾರಿಗುಂಟ ನಡೆದು ಬಿಡುಸಿಗಬಹುದು ನಿನಗೆಅರಿವಿನ ಮನೆಬೆಳಕಿನ ಅರಮನೆ ತೊರೆದು ಬಿಡು ಸಾವಿರ ಚಿಂತೆಇದ್ದು ಬಿಡು ಬುದ್ಧನಂತೆಹೊರಟು ಬಿಡು ಹೊರಟು ಬಿಡುಬಿಟ್ಟು ಅವರಿವರ ಚಿಂತೆಅರಿವ ದಾರಿ ಹುಡುಕುತಕನಕ ಶರೀಫರು ಮೀಟಿದತಂಬೂರಿ ಮೀಟತ…..  ಡಾ. ಪುಷ್ಪಾವತಿ ಶಲವದಿಮಠ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ” Read Post »

ಇತರೆ

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ.

ಭಾಷಾ ಸಂಗಾತಿ ಜಯಲಕ್ಷ್ಮಿ ಮಡಿಕೇರಿ. ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು ಮನುಷ್ಯನ ಅತಿ ದೊಡ್ಡ ಸಂಶೋಧನೆಗಳಲ್ಲಿ ಭಾಷೆ ಕೂಡಾ ಒಂದು. ಹಾಗಾಗಿ ಭಾಷೆಯನ್ನು ಬೆಳಕಿಗೆ ಹೋಲಿಸಲಾಗಿದೆ, ಅದಕ್ಕೆ ಬೆಳಕಿನ ಪಟ್ಟವನ್ನು ನೀಡಲಾಗಿದೆ. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿದ್ದರೂ ಕನ್ನಡಕ್ಕೆ ಒಂದು ವಿಶೇಷ ಸ್ಥಾನಮಾನವಿದೆ. ಕವಿರತ್ನತ್ರಯರಿಂದ ಬೆಳೆದು ಬಂದು ಅದ್ವಿತೀಯ ಸಾಹಿತ್ಯ ರಚನೆಗಳನ್ನು ಸಾರಸ್ಕೃತ ಲೋಕಕ್ಕೆ ನೀಡಿದ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ನಮ್ಮ ಭಾಷೆಗಿದೆ.  ಇದು ಮಾಧ್ಯಮಗಳ ಯುಗ.  ಪುಲಿಗೆರೆಯ ಸೋಮನಾಥ ಹೇಳುವಂತೆ ” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ  ಕೆಲವಂ ಮಾಳ್ಪವರಿಂದ ಕೆಲವಂ  ಸುಜ್ಞಾನದಿಂದ,   ಅರಿತುಕೊಂಡು ಬೆಳೆಯಲು  ಯಾರಿಗೂ ಸಮಯವಾಗಲಿ ವ್ಯವಧಾನವಾಗಲಿ ಇಲ್ಲ.  ಮುದ್ರಣ ಮಾಧ್ಯಮದಲ್ಲಿ ಪ್ರಧಾನ ಪಾತ್ರವಹಿಸಿರುವ ಪುಸ್ತಕಗಳ ಓದು ಬದಿಗೆ ಸರಿದ ಕಾಲವಿದು. ಸ್ವಚ್ಛ ಶುದ್ಧ ಭಾಷೆಯ ಬೆಳವಣಿಗೆಗೆ  ಪೂರಕವಾಗಿರುವ ರೇಡಿಯೋ, ಸೃಜನಶೀಲ ಬರಹಗಳು, ಪತ್ರಿಕೆಗಳು ನಿಯತಕಾಲಿಕೆಗಳು ಇವೆಲ್ಲವುಗಳನ್ನು ಮೀರಿ ಟಿವಿ ಸಿನಿಮಾ ಇಂಟರ್ನೆಟ್ ವಾಟ್ಸಪ್ ಫೇಸ್ಬುಕ್ ಇತ್ಯಾದಿಗಳಿಗೆ ಜನ ಮುಗಿ ಬೀಳುವ ಕಾಲಘಟ್ಟವಿದು.  ಒಂದೆಡೆ ಇಂಗ್ಲಿಷ್ ಭಾಷೆಯನ್ನು ಬಳಸಿ ಮಾತನಾಡುವುದೇ ಒಂದು ಹೆಗ್ಗಳಿಕೆ  ಎಂಬ ಭ್ರಮೆಯಲ್ಲಿರುವ ಕನ್ನಡಿಗರು, ಇನ್ನೊಂದೆಡೆ ತಾವು ಬಳಸಿದ್ದೇ ಭಾಷೆ ಎನ್ನುವಂತೆ ಕನ್ನಡ ಭಾಷೆ ಗೌರವಕ್ಕೆ ಚ್ಯುತಿ  ತರುವಂತೆ ಪ್ರತಿ ದಿನ  ತಪ್ಪುಗಳನ್ನೇ ತೋರುವ ಹೇಳುವ ಕೆಲ ದೃಶ್ಯ ಮಾಧ್ಯಮಗಳು. ಇವುಗಳಿಂದ ಕನ್ನಡ ಭಾಷೆ ತನ್ನ  ಅಂದ ಚಂದವನ್ನು, ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದ್ದು  ನಮ್ಮ ಭಾಷಾ ಸಹಜತೆಯನ್ನು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೃಶ್ಯ ಮಾಧ್ಯಮಗಳಲ್ಲಿ ಅತಿ ದೊಡ್ಡದಾಗಿ ಬಿತ್ತರ ವಾಗುವ ತಪ್ಪು ತಪ್ಪಾದ ಪದಗಳನ್ನು ಚಿತ್ತಬಿತ್ತಿಯಲ್ಲಿ ಮುದ್ರಿಸಿಕೊಳ್ಳುವ ಮಕ್ಕಳು ಅದುವೇ ಸರಿಯಾದ ಕನ್ನಡ ಎಂದು ತಿಳಿದು ಅದನ್ನೇ ಕಲಿಯುತ್ತಾರೆ. ಭಾಷಾ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸ ತಕ್ಕಂತಹ ಪಾ.ವೆಂ. ಆಚಾರ್ಯರ   ‘ಪದಾರ್ಥ ಚಿಂತಾಮಣಿ ‘ , ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ” ಇಗೋ ಕನ್ನಡ “, ಕೊಕ್ಕಡ ವೆಂಕಟರಮಣ ಭಟ್ಟರ ” ಸರಿಗನ್ನಡ ಸರಿಕನ್ನಡ ” ಶುದ್ಧ ಕನ್ನಡದ ಬಗ್ಗೆ ನಮಗೆ ಅರಿವಾಗುತ್ತದೆ ಮತ್ತು ಮುದ್ರಣ ಮಾಧ್ಯಮ ಭಾಷ ಕ್ಷೇತ್ರದಲ್ಲಿ ಮೂಡಿಸಿದ ಜಾಗೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಹಿರಿಯರು ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಿದೆ. ಅಧಿಕಾರ ಸ್ಥಾನದಲ್ಲಿ ಇರುವವರು, ಶಿಕ್ಷಕರು, ಪೋಷಕರು ಮಾಧ್ಯಮ ಬಂಧುಗಳು ಕನ್ನಡ ಭಾಷಾ ಶುದ್ಧಿಯನ್ನು ಕಾಪಾಡಿಕೊಂಡು ಬರಬೇಕಿದೆ ಹೊಂಬೆಳಕು ಮಾಸಿಕ ಕಾರ್ಯಕ್ರಮದ ಮೂಲಕ ಹಲವಾರು ತತ್ವ ಚಿಂತನೆಗಳು ಮಠದಲ್ಲಿ ನಡೆಯುತ್ತಿದ್ದು ಹಲವಾರು ಪುಸ್ತಕಗಳು ಕೂಡ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಬಗ್ಗೆ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಂತಸ ವ್ಯಕ್ತಪಡಿಸಿದರು. ತಮ್ಮ ಅಮೃತ ಹಸ್ತದಿಂದ  ಕೆ ಜಯಲಕ್ಷ್ಮಿ ಅವರ  ‘ ನಡೆದಷ್ಟೂ ದಾರಿ ‘ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರಲ್ಲದೆ ಶರಣ ಶರಣೆಯರ ಜೀವನ ಆದರ್ಶಗಳ ಬಗ್ಗೆ ಹೇಳುತ್ತಾ  ವಚನಗಳ ಸಾರ್ವಕಾಲಿಕ ಮೌಲ್ಯಗಳ  ಬಗ್ಗೆ ವಿವರಿಸಿದರು. ನೆರೆದಿರುವ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದರು .  ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ  ಸಲಹಾ ಸಂಪಾದಕರಾದ ಬಿಜಿ ಅನಂತಶಯನ ರವರು ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ಅರಮೇರಿ ಮಠದ ಪರಮಪೂಜ್ಯ ಗುರುಗಳು ನೀಡುತ್ತಾ ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶಿಕ್ಷಕಿ ಸಾಹಿತಿ ಸುನಿತಾ ಕುಶಾಲನಗರ ಅವರು ಜಯಲಕ್ಷ್ಮಿ ಕೆ ಯವರ” ನಡೆದಷ್ಟೂ ದಾರಿ  ” ತೃತೀಯ ಬಗ್ಗೆ ಮಾತನಾಡುತ್ತಾ ಓದುವ ಕುತೂಹಲವನ್ನು ಕೆರಳಿಸುವ , ವಿಚಾರಧಾರೆಗಳ ಸ್ಪಷ್ಟ ನಿರೂಪಣೆಯ ಪುಸ್ತಕವಿದು. ಲೇಖಕಿ ಬಳಸಿದ ಭಾಷೆ ಸರಳ ಸ್ವಚ್ಛ ಸುಂದರ ಎಂದರು.ಉದಾತ್ತ  ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿವರಿಸಿತ್ತ  ವಾಸ್ತವದಲ್ಲಿ ಬದುಕುವ ಚಿಂತನೆ ಉತ್ತಮ ಎಂದರು. ಪೊನ್ನಂಪೇಟೆ ಸಿ ಐ ಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತಾ ರವರು  ಜಯಲಕ್ಷ್ಮಿ ಅವರ ಕೆಲವು ಲೇಖನಗಳ ಬಗ್ಗೆ ಮಾತನಾಡಿದರು.ಕುಮಾರಿ ಮಿನುಗು  ಪ್ರಾರ್ಥಿಸಿದಳು. ಕಿಗ್ಗಾಲ್ ಹರೀಶ್  ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್, ಸಾಹಿತಿ ಕಿಗ್ಗಾಲ್ ಗಿರೀಶ್, ಡಾಕ್ಟರ್ ಸತೀಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ. Read Post »

ಇತರೆ

“ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ವೀಣಾ ಹೇಮಂತ ಗೌಡಪಾಟೀಲ್

ವಿಶೇಷ ಸಂಗಾತಿ ವೀಣಾ ಹೇಮಂತ ಗೌಡಪಾಟೀಲ್ “ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿದ್ದು ‘ಮಹಾರ್’ ಎಂಬ ಜನಾಂಗದಲ್ಲಿ. ಅತ್ಯಂತ ಹಿಂದುಳಿದ ಆ ಜನಾಂಗದವರನ್ನು ಮೇಲ್ವರ್ಗದ ಜನರು ಪಶುವಿಗಿಂತ ಕೀಳಾಗಿ ನೋಡುವುದನ್ನು, ವ್ಯವಹರಿಸುವುದನ್ನು ಕಂಡು ನೊಂದುಕೊಂಡು ವಿದ್ಯೆ ಎಂಬ ಬ್ರಹ್ಮಾಸ್ತ್ರದ ಮೂಲಕ ಜ್ಞಾನವನ್ನು ಸಂಪಾದಿಸಿ ನಮ್ಮ ದೇಶದ ವಿವಿಧ ಧರ್ಮಶಾಸ್ತ್ರಗಳ ಅಧ್ಯಯನವನ್ನು ವಿದೇಶದಲ್ಲಿ ಕೈಗೊಂಡು ಅದರ ಜೊತೆಗೆ ಹಲವಾರು ವಿಷಯಗಳಲ್ಲಿ ಪರಿಣತಿಯನ್ನು ಪಡೆದು ಮರಳಿ ಭಾರತಕ್ಕೆ ಬಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ಕಾನೂನು ತಜ್ಞರಾಗಿ ಮುಂದೆ ಭಾರತದ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿದವರು….. ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಡಾ. ಬಿ.ಆರ್. ಅಂಬೇಡ್ಕರ್. ಅಸ್ಪೃಶ್ಯರು ಎಂದೇ ಕರೆಯಲ್ಪಡುವ ಮಹಾರ್ ಎಂಬ ಜನಾಂಗದಲ್ಲಿ 14ನೆಯ ಮಗನಾಗಿ ಹುಟ್ಟಿದ ಅಂಬೇಡ್ಕರ್ ಅವರಿಗೆ ಬಾಲ್ಯದಿಂದಲೂ ಸಿಕ್ಕ ಒಳ್ಳೆಯ ಸಂಸ್ಕಾರ ಆತನ ತಂದೆ ತಾಯಿಗಳ ಬಳುವಳಿ. ಮಾರುಕಟ್ಟೆಯ ಮಧ್ಯದಲ್ಲಿಯೇ ಪುಟ್ಟ ಗುಡಿಸಲನ್ನು ಹೊಂದಿದ್ದ ಸದಾ ಗೌಜಿ ಗದ್ದಲಗಳಿಂದ ತುಂಬಿದ್ದ ಕೊಳೆತು ನಾರುವ ಮಾರುಕಟ್ಟೆಯ ಪರಿಸರದಲ್ಲಿ ಬೆಳೆದರೂ ಚಿಕ್ಕಂದಿನಲ್ಲಿಯೇ ಅದ್ಭುತ ಪ್ರತಿಭೆ ತೋರುತ್ತಿದ್ದ ಮಗನನ್ನು ತಂದೆ ಕಷ್ಟಪಟ್ಟು ಓದಿಸುತ್ತಿದ್ದರು. ಮಧ್ಯರಾತ್ರಿವರೆಗೂ ಎಚ್ಚರವಿರುತ್ತಿದ್ದ ತಂದೆ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಮಗನನ್ನು ಎಬ್ಬಿಸಿ ಓದಲು ಕೂಡಿಸುತ್ತಿದ್ದರು.ಮುಂಜಾನೆಯ ನೀರವ ವಾತಾವರಣದಲ್ಲಿ ಬಾಲಕ ಭೀಮನ ಓದು ಸಾಗುತ್ತಿತ್ತು. ಶಾಲೆಯಲ್ಲಿ ಯಾವುದೇ ಮಕ್ಕಳು ಇವರೊಂದಿಗೆ ಸೇರುತ್ತಿರಲಿಲ್ಲ. ಕುಡಿಯಲು ನೀರನ್ನು ಕೂಡ ಮೇಲಿನಿಂದ ಹಣಿಸುತ್ತಿದ್ದರು. ಭೀಮ ಮತ್ತವನ ಸಹೋದರ ತರಗತಿ ಕೋಣೆಯ ಕಪ್ಪು ಹಲಗೆಯ ಹಿಂಭಾಗದ ಮೂಲೆಯಲ್ಲಿ ಕುಳಿತು ಪಾಠವನ್ನು ಕೇಳುತ್ತಿದ್ದರು. ದೇವಸ್ಥಾನಗಳಲ್ಲಿ ಕೂಡ ಇವರಿಗೆ ಪ್ರವೇಶವಿಲ್ಲ. ಬಾವಿ,ಕೆರೆ ಹಳ್ಳಗಳ ನೀರನ್ನು ಕೂಡ ಇವರ ಜನಾಂಗಕ್ಕೆ ನಿರ್ಬಂಧಿಸಿದ್ದುದು ಭೀಮನಿಗೆ ಯಕ್ಷ ಪ್ರಶ್ನೆಯಂತೆ ತೋರುತ್ತಿತ್ತು. ಈ ಎಲ್ಲಾ ಪ್ರಶ್ನೆಗಳನ್ನು ತಾಯಿಯ ಮುಂದೆ ಒಡ್ಡಿದಾಗ ತಾಯಿ ಇದೆಲ್ಲಕ್ಕೂ ಪರಿಹಾರ ನಿನ್ನ ಓದಿನಲ್ಲಿ ಅಡಗಿದೆ ಎಂದು ಸುಮ್ಮನೆ ಹೇಳಿದ್ದಳಾದರೂ ಅದನ್ನೇ ಗಂಭೀರವಾಗಿ ಪರಿಗಣಿಸಿದ ಭೀಮನು ಉತ್ತಮವಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದನು. ಇಷ್ಟರಲ್ಲಾಗಲೇ ಅವರ ಜನಾಂಗದ ಪದ್ಧತಿಯಂತೆ ಅಂಬೇಡ್ಕರ್ ಅವರ ಬಾಲ್ಯ ವಿವಾಹವನ್ನು ರಮ ಎಂಬ ಹೆಣ್ಣು ಮಗುವಿನೊಂದಿಗೆ ಮಾಡಿ ಮುಗಿಸಿದ್ದರು. ಮುಂದೆ ಕಾಲೇಜಿಗೆ ಸೇರಲು ಆತನಿಗೆ ಸಹಾಯ ಮಾಡಿದ ಶಿಕ್ಷಕರೊಬ್ಬರು ಆತನಿಗೆ ಅಂಬೇಡ್ಕರ್ ಎಂಬ ತಮ್ಮದೇ ಅಡ್ಡನಾಮವನ್ನು ಸೇರಿಸಿದರು. ಪದವಿ ವ್ಯಾಸಂಗದ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಮತ್ತು ದೊಡ್ಡ ಮೊತ್ತದ ನೌಕರಿಯ ಅವಕಾಶ ಎರಡೂ ಒಟ್ಟೊಟ್ಟಿಗೆ ಬಂದಾಗ ಅಂದಿನ ಬರೋಡದ ಮಹಾರಾಜರಾದ ಗಾಯಕವಾಡರ ಸಹಾಯದಿಂದ ಅಂಬೇಡ್ಕರ್ ಅವರು ವಿದೇಶ ವ್ಯಾಸಂಗಕ್ಕೆ ಹೊರಟರು. ಅಸ್ಪೃಶ್ಯತೆಯ ಗಂಧ ಗಾಳಿಯನ್ನು ಅರಿಯದ ವಿದೇಶಿ ಜನರ ಮಧ್ಯ ಒಳ್ಳೆಯ ಆಹಾರ, ವಿಚಾರ ಮತ್ತು ಶಿಕ್ಷಣದ ಸಮ್ಮಿಶ್ರ ಪಾಕವನ್ನು ಸವಿದ ಅಂಬೇಡ್ಕರ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಪಕ್ವವಾದರು. ವಾಚನಾಲಯದಲ್ಲಿ ದೊರೆತ ಹಲವಾರು ಪುಸ್ತಕಗಳನ್ನು ಓದಿ ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಂಡ ಅಂಬೇಡ್ಕರ್ ಅವರು ಎಲ್ಲಾ ಧರ್ಮಗಳ ಸಾರವನ್ನು ಅರೆದು ಕುಡಿದರು. ಅಸ್ಪೃಶ್ಯರು ಸಂಸ್ಕೃತವನ್ನು ಕೇಳಿದರೆ ಅವರ ಕಿವಿಗಳಿಗೆ ಎಣ್ಣೆ ಕಾಸಿ ಹಾಕಬೇಕೆಂಬ ಭಾರತ ದೇಶದ ಮೇಲ್ವರ್ಗದ ಜನರ ಮಧ್ಯದಲ್ಲಿ ಬೆಳೆದ ಅಂಬೇಡ್ಕರ್ ವಿದೇಶದಲ್ಲಿ ನಮ್ಮ ಧರ್ಮ ಗ್ರಂಥಗಳನ್ನು ಓದಿದರು. ಚಿಕ್ಕಂದಿನಲ್ಲಿ ಮನಸ್ಸನ್ನು ಕದಡಿದ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಸಮಾನತೆ ಎಂಬ ಅಮಾನವೀಯ ಕೃತ್ಯದ ಆಘಾತವನ್ನು ಅನುಭವಿಸಿದ್ದ ಅಂಬೇಡ್ಕರ್ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಮಧ್ಯದ ತುಲನಾತ್ಮಕ ಅಧ್ಯಯನವನ್ನು ಕೈಗೊಂಡರು. ಅಸ್ಪೃಶ್ಯತೆಯ, ಅನಾದರದ ಗಂಧ ಗಾಳಿ ಇಲ್ಲದ ವಿದೇಶಿ ಪರಿಸರ ಅಂಬೇಡ್ಕರ್ ಅವರ ಮನಸ್ಸನ್ನು ಅರಳಿಸಿತು. ವಿದೇಶದಲ್ಲಿ ಅಧ್ಯಯನ ಪೂರೈಸಿ ಭಾರತಕ್ಕೆ ಮರಳಿದ ಅಂಬೇಡ್ಕರ್ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಅಲ್ಲೂ ಕೂಡ ಅವರಿಗೆ ಅವಮಾನ ಕಟ್ಟಿಟ್ಟ ಬುತ್ತಿ ಎಂದು ಅರಿವಾದಾಗ ಎಲ್ಲ ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ ತಾನು ಕಾರ್ಯನಿರ್ವಹಿಸಿದರೆ ಮಾತ್ರ ಅವರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಅರಿತ ಅಂಬೇಡ್ಕರ್ ರಾಜಕೀಯ ಪ್ರವೇಶಿಸಿದರು.ಅದೃಷ್ಟವಶಾತ್ ಮಹಾತ್ಮ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಅಂಬೇಡ್ಕರ್ ಅವರು ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ಶ್ರೇಷ್ಠ ಮಾನವತಾವಾದಿ ಮಹಾತ್ಮ ಗಾಂಧೀಜಿಯವರ ಒಡನಾಟ, ಚರ್ಚೆ, ಭಾರತದ ಸ್ವಾತಂತ್ರ್ಯದ ಕುರಿತಾದ ಅವರ ನಿಲುವು, ಗ್ರಾಮೀಣ ಭಾರತದ ಅವರ ಕನಸು, ಗುಡಿ ಕೈಗಾರಿಕೆಗಳ ಮೂಲಕ ಗ್ರಾಮಗಳ ಸಶಕ್ತಿಕರಣ, ನೈತಿಕ ಹೊಣೆಗಾರಿಕೆ ಎಲ್ಲವನ್ನು ನೋಡಿದ ಅಂಬೇಡ್ಕರ್ ಭಾರತ ದೇಶವು ಸ್ವಾತಂತ್ರ್ಪ ಪಡೆಯುವ ಸಮಯದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತಿದರು. ಸಂಘಟನೆ ಅಂಬೇಡ್ಕರ್ ಅವರ ದೈತ್ಯಶಕ್ತಿಯಾಗಿತ್ತು. ಇನ್ನೇನು ಭಾರತದ ಸ್ವಾತಂತ್ರ್ಯದ ಕ್ಷಣಗಣನೆ ಆರಂಭವಾಗಿದೆ ಎಂಬ ಹೊತ್ತಿನಲ್ಲಿ 1945-46 ರ ಸುಮಾರಿಗೆ ಅಂದಿನ ಕಾನೂನು ಮಂತ್ರಿಯಾಗಿ ಭಾರತ ದೇಶದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಅಂಬೇಡ್ಕರ್ ಅವರ ಜ್ಞಾನ ಮತ್ತು ವೈಯುಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ನೀಡಲಾಯಿತು. ಪುರುಷರಷ್ಟೇ ಹೆಣ್ಣು ಮಕ್ಕಳಿಗೂ ಎಲ್ಲಾ ರೀತಿಯ ಸಮಾನ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಿದ್ದಾರೆ ಡಾ. ಅಂಬೇಡ್ಕರ್. ಬಹುಶಃ ಜಗತ್ತಿನ ಯಾವುದೇ ದೇಶ ಮಾಡಿರದ ಮಹತ್ಸಾದನೆ ಇದು. ಮನುವಾದಿಗಳ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿದ್ದರು ನಿಜ ಆದರೆ ಸ್ವಾತಂತ್ರ್ಯ ಮತ್ತು ಸಮಾನತೆ ಎಂಬುದು ಕನಸಿನ ಮಾತಾಗಿದ್ದ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ, ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ರಚಿಸಲಾದ ಸಾಂವಿಧಾನಿಕ ಕಾನೂನು, ಮತದಾನದ ಹಕ್ಕು ಮತ್ತು ಸುವ್ಯವಸ್ಥೆಯ ನಿಯಮಗಳು ಹೆಣ್ಣು ಮಕ್ಕಳನ್ನು ಇನ್ನಿಲ್ಲದ ನೆಮ್ಮದಿಯಿಂದ ಜೀವಿಸುವಂತೆ ಮಾಡಿವೆ. ಮಾರ್ಕ್ಸ್ ವಾದವನ್ನು ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮೂಲಕ ಬಂಡವಾಳಶಾಹಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಎಲ್ಲಾ ವರ್ಗದ ಕಾರ್ಮಿಕರಿಗೂ ಕೆಲಸ, ಒಳ್ಳೆಯ ಸಂಬಳ, ಮೂಲಭೂತ ಅವಶ್ಯಕತೆಗಳ ಪೂರೈಕೆ, ಔದ್ಯೋಗಿಕ ಭದ್ರತೆ ಆರೋಗ್ಯ ವಿಮೆ ಮುಂತಾದವುಗಳನ್ನು ದೊರಕಿಸಿಕೊಟ್ಟರು. ಕಾರ್ಮಿಕ ಸಂಘಟನೆಗಳಿಗೆ ಶಕ್ತಿ ತುಂಬಿದ ಅಂಬೇಡ್ಕರ್ ಅವರು ಬಂಡವಾಳಶಾಹಿಗಳ ಮೇಲೆ ನಿಯಂತ್ರಣವನ್ನು ಹೇರುವ ಮೂಲಕ ಕಾರ್ಮಿಕ ವರ್ಗಕ್ಕೆ ಚೈತನ್ಯ ತುಂಬಿದರು. ವಾರದ ರಜಾ ದಿನಗಳನ್ನು ಮತ್ತು ದಿನದ ಮೂರನೇ ಒಂದು ಅವಧಿಯ ಕಾರ್ಯನಿರ್ವಹಣೆಯನ್ನು ಕೂಡ ನಿಶ್ಚಯಿಸಿದವರು ಡಾಕ್ಟರ್ ಅಂಬೇಡ್ಕರ್. ಹಿಂದುಳಿದ ವರ್ಗಗಳು ದೀನ ದಲಿತರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಮತ್ತು ಶೈಕ್ಷಣಿಕ ಕ್ರಾಂತಿಯ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಅಡಿಪಾಯ ಹಾಕಿದವರು ಅಂಬೇಡ್ಕರ್. ಸಮಾನ ನಾಗರಿಕ ಹಕ್ಕುಗಳು ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಎಲ್ಲ ದುರ್ಬಲ ವರ್ಗದವರಿಗೆ ಅವಕಾಶ ಕಲ್ಪಿಸಿದರು. ಹಿಂದುಳಿದ ವರ್ಗದವರಿಗಾಗಿ ವಿಶೇಷ ಮೀಸಲಾತಿಗಳನ್ನು, ಅನುದಾನಗಳನ್ನು ನೀಡಿದ ಅವರು ಮುಂದಿನ ಕೆಲವು ವರ್ಷಗಳು ಮಾತ್ರ ಇದನ್ನು ಅನುಷ್ಠಾನದಲ್ಲಿ ಇಡಬೇಕು ಎಂದು ಸೂಚಿಸಿದ್ದರು ಕೂಡ. ಸನಾತನ ಭಾರತದ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಿದ್ದ ಅವರು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದರು. ನಮ್ಮ ಭವ್ಯ ಧಾರ್ಮಿಕ ಪರಂಪರೆಯ ಇತಿಹಾಸಕ್ಕೆ ಯಾವುದೇ ರೀತಿಯ ಕುಂದುತರದಂತೆ ಆದರೆ ಅಸ್ಪೃಶ್ಯತೆ ಅಮಾನವೀಯ ಆಚರಣೆಗಳನ್ನು ನಿಯಂತ್ರಿಸಲು ತಿದ್ದುಪಡಿಗಳನ್ನು ಮಾಡಿದರು. ಬಾಬಾ ಸಾಹೇಬರ ಮತ್ತೊಂದು ಹೆಗ್ಗಳಿಕೆ ಭಾರತೀಯ ಸಮಾಜದ ಮೂಲ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಸನಾತನ ಧರ್ಮದ ಮೌಲ್ಯಗಳನ್ನು ಗೌರವಿಸುತ್ತಾ ಕೇವಲ ಅದರಲ್ಲಿ ಇರಬಹುದಾದ ಕೆಟ್ಟ ಅಂಶಗಳನ್ನು ಮಾತ್ರ ಗುರುತಿಸಿ ಅದಕ್ಕೆ ತಿದ್ದುಪಡಿ ತಂದು ಸಾಮಾಜಿಕ ಸಮಾನತೆಯನ್ನು ಉಳಿಸಿದ್ದು. ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆಯ ಬಗ್ಗೆ ಹೆಮ್ಮೆ ಮೂಡುವುದು 73 ವರ್ಷಗಳು ಕಳೆದರೂ ನಮ್ಮ ಸಂವಿಧಾನದ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ತರದೆ ಇರುವುದು. ಜಗತ್ತಿನ ಅತ್ಯಂತ ಪ್ರಾಚೀನ ಸಭ್ಯತೆಯಲ್ಲಿ ಸಂವಿಧಾನದ ಮೂಲ ಸ್ವರೂಪ ಯಾವುದೇ ತಿದ್ದುಪಡಿಗೊಳಗಾಗದೆ ಹಾಗೆಯೆ ಉಳಿದಿರುವುದು ಕೇವಲ ಭಾರತದಲ್ಲಿ ಮಾತ್ರ. ಅದಕ್ಕೆ ಕಾರಣ ಅಂಬೇಡ್ಕರ್ ಅವರ ಅಧ್ಯಯನಶೀಲ ಚಿಂತನೆ, ದೂರದೃಷ್ಟಿ ಮತ್ತು ಸರ್ವಧರ್ಮ ಸಮಾನ ದೃಷ್ಟಿ. ಹೀಗಾಗಿಯೇ ಅಂಬೇಡ್ಕರ್ ಎಲ್ಲಾ ಭಾರತೀಯರು ಗೌರವಿಸುವಂತಹ ವ್ಯಕ್ತಿತ್ವ ಹೊಂದಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು. ಅಂಬೇಡ್ಕರ್ ಕೇವಲ ದಲಿತ, ಹಿಂದುಳಿದ ವರ್ಗದ ನಾಯಕರು ಮಾತ್ರವಲ್ಲ…. ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕ, ತಂದೆ ತನ್ನ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ತನ್ನ ಜೀವಿತವನ್ನೇ ತ್ಯಾಗ ಮಾಡುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಇಡೀ ಜೀವಮಾನವನ್ನು ಭಾರತದ ಹಿಂದುಳಿದ ದುರ್ಬಲ ಅಸಹಾಯಕ ಜನರ ಏಳಿಗೆಗಾಗಿ, ಹೆಣ್ಣು ಮಕ್ಕಳಸಶಕ್ತೀಕರಣಕ್ಕಾಗಿ, ಕಾರ್ಮಿಕರಲ್ಲಿ ಬಲ ತುಂಬಲು ಮುಡಿಪಾಗಿಟ್ಟರು. ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಭಾರತದ ಹೆಮ್ಮೆಯ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ. ವೀಣಾಹೇಮಂತ್‌ ಗೌಡ ಪಾಟೀಲ್ ವೀಣಾ ಹೇಮಂತ್ ಗೌಡ ಪಾಟೀಲ್

“ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ವೀಣಾ ಹೇಮಂತ ಗೌಡಪಾಟೀಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-21 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ ಬಿಸಿಯೆಣ್ಣೆಯದು ಭಕ್ತಿರಸದಲಿ ತೋಯ್ದು ಸಿರಿಗಂಧವಾಯ್ತು!         ಮಡದಿಯೊಂದಿಗಿನ ಮದನಕೇಳಿಯಿಂದ ಸಂತೃಪ್ತನಾಗಿದ್ದ ಸುಧನ್ವ ನಗುನಗುತ್ತಾ ಯುದ್ಧರಂಗದೆಡೆಗೆ ಹೊರಟಿದ್ದ. ಆಗಲೇ ಬಳಿಗೆ ಬಂದ ಸೇವಕರು ಅವನನ್ನು ಗಟ್ಟಿಯಾಗಿ ಹಿಡಿದು, ಎರಡೂ ಕೈಗಳನ್ನು ಜೊತೆಸೇರಿಸಿ ಹಗ್ಗದಿಂದ ಕಟ್ಟಿ, ಕಳ್ಳನನ್ನು ಎಳೆದುಕೊಂಡು ಬರುವಂತೆ ಭರದಿಂದ ತಂದುನಿಲ್ಲಿಸಿದರು ಹಂಸಧ್ವಜನ ಮುಂದೆ. ಸೇವಕರಿಗೆ ಆ ಬಗೆಯ ಆದೇಶವನ್ನು ಕೊಟ್ಟದ್ದು ಹಂಸಧ್ವಜನೇ. ಸೇನೆಯಲ್ಲಿ ಮಗ ಸುಧನ್ವನನ್ನು ಕಾಣದೆ ತವಕಿಸುತ್ತಿದ್ದ ಅವನು ಮಗ ಎಲ್ಲಿದ್ದರೂ ಎಳೆದುಕೊಂಡು ಬರಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದ್ದ. ಅವರು ಅದೇ ರೀತಿಯಲ್ಲಿ ಎಳೆದುಕೊಂಡು ಹೋಗಿದ್ದರು ಸುಧನ್ವನನ್ನು.     ಯುದ್ಧರಂಗಕ್ಕೆ ಬರಲು ವಿಳಂಬವಾದುದಕ್ಕೆ ಕಾರಣವೇನೆಂದು ಅಬ್ಬರಿಸಿ ಮಗನಲ್ಲಿ ಕೇಳಿದ ಹಂಸಧ್ವಜ. ಉತ್ತಮ ರಾಜನಿಗಿರಬೇಕಾದ ಲಕ್ಷಣವದು. ತನ್ನ ಮಗನನ್ನೂ ಪ್ರಜೆಯಾಗಿ ನೋಡುವ ಭಾವ ಅವನದ್ದು.     ಸುಧನ್ವ ನಿಜ ವಿಚಾರವನ್ನೇ ಅರುಹಿದ. “ಸಂತಾನವನ್ನು ಬಯಸಿದ ಸತಿಯ ಸತತ ಇಚ್ಛೆಗಳನ್ನು ಪೂರೈಸುವ ಕಾರಣದಿಂದಾಗಿ ತಡವಾಯಿತು” ಎಂದ.     ಹಂಸಧ್ವಜ ಕೋಪೋದ್ರಿಕ್ತನಾದ. ಕೃಷ್ಣದರ್ಶನದ ಪುಣ್ಯಕಾಲವದು ಪ್ರಾಪ್ತವಾಗಿರಲು ಅನ್ಯವಿಷಯಗಳಿಗೆ ಮನಗೊಟ್ಟ ಸುಧನ್ವನದ್ದು ತಪ್ಪು ಎಂದು ಜರಿದ. ಶಂಖ ಲಿಖಿತರನ್ನು ಬರಹೇಳಿದ. ಅಲ್ಲಿಗೆ ಬಂದರು ಶಂಖ ಲಿಖಿತರು. ಸಮರದ ಸಮಯದಲ್ಲಿ ವಿಳಂಬಗೈದವರನ್ನು ಕಾದ ಎಣ್ಣೆ ಕೊಪ್ಪರಿಗೆಗೆ ಎಸೆಯಬೇಕು ಎಂಬ ಕಟ್ಟಳೆಯನ್ನು ಈಗಾಗಲೇ ಅಳವಡಿಸಿಕೊಂಡಿದ್ದರು ಈ ಪುರೋಹಿತ ಸಹೋದರರು. ಅದೇ ನಿರ್ಧಾರವನ್ನು ತಿಳಿಸಿದರು ಅರಸ ಹಂಸಧ್ವಜನಲ್ಲಿ. “ಕಾದ ಎಣ್ಣೆ ಕೊಪ್ಪರಿಗೆಗೆ ಈ ಸುಧನ್ವನನ್ನು ಎಸೆಯದಿದ್ದರೆ ನಾವು ಈ ಚಂಪಕಾಪುರದಲ್ಲಿ ಇರುವವರಲ್ಲ” ಎಂಬ ನಿಷ್ಠುರದ ನುಡಿಯನ್ನಾಡಿದರು.    ಅರಸ ತಡಮಾಡಲಿಲ್ಲ. ಆಪ್ತಸಚಿವ ಎನಿಸಿಕೊಂಡ ಸುಮತಿಯನ್ನು ಕರೆದ. “ಸುಧನ್ವನ ಕೈಗಳನ್ನು ಕಟ್ಟಿ ಕುದಿವ ಎಣ್ಣೆಯಲ್ಲಿ ಎಸೆಯಬೇಕು” ಎಂಬ ಆಜ್ಞೆಯನ್ನು ನೀಡಿದ. ಅದನ್ನು ಪೂರೈಸುವ ಹೊಣೆಯನ್ನು ಸುಮತಿಗೆ ನೀಡಿದ. ರಾಜ ಘೋಷಿಸಿದ ಶಿಕ್ಷೆಯನ್ನು ರಾಜಗುವರನಿಗೆ ನೀಡುವುದಕ್ಕಾಗಿ ಸುಧನ್ವನನ್ನು ಸೆಳೆದೊಯ್ದ ಸುಮತಿ.     ಕೊಪ್ಪರಿಗೆಯನ್ನು ಇರಿಸಿದ. ತೈಲವನ್ನದಕೆ ಸುರಿಸಿದ. ಒಣಕಟ್ಟಿಗೆಗಳನ್ನು ತರಿಸಿದ. ಬೆಂಕಿಯನ್ನು ಉರಿಸಿದ. ಪ್ರಿಯ ರಾಜಗುವರನಿಗೆದುರಾದ ಕಡುಗತಿಗೆ ಮರುಗಿ ಕಣ್ಣೀರ ಹರಿಸಿದ.     ಸುಧನ್ವ ಸ್ವಭಾವ ಅದಾವ ಬಗೆಯದು ಎನ್ನುವುದರ ಸಂಪೂರ್ಣ ಅರಿವಿತ್ತು ಸುಮತಿಗೆ. “ಪ್ರಿಯ ರಾಜಕುಮಾರ, ನಿನಗೆ ಇಂತಹ ಗತಿ ಒದಗಿತೇ! ಅಯ್ಯೋ! ಕೃಷ್ಣನ ಭಕ್ತ ನೀನು. ಚೆಲುವ ಎನಿಸಿರುವೆ. ತಂದೆ ತಾಯಿಯರ ಬಗೆಗೆ ಅಕ್ಕರೆಯ ಭಾವವನ್ನು ಇಟ್ಟುಕೊಂಡವನು. ನೀತಿ ಅನೀತಿಗಳನ್ನು ತಿಳಿದುಕೊಂಡವನು. ಎಲ್ಲವನ್ನೂ ಅರಿತ ಜ್ಞಾನಿ. ದೈನ್ಯತೆಯಿಂದ ಬಳಿ ಬಂದವರಿಗೆ ದಾನವಿತ್ತು ಸಂತೋಷಿಸುವವನು. ಕೋಮಲ ಕಾಯದವನು. ಸುಖವನ್ನೇ ಬದುಕಿನಲ್ಲಿ ಉಂಡವನು. ಕಷ್ಟವನ್ನು ಕಾಣದವನು. ನಿನ್ನನ್ನು ಈ ಬಿಸಿಬಿಸಿಯಾದ ಎಣ್ಣೆಗೆ ನಾನು ಎಸೆಯುವುದಾದರೂ ಹೇಗೆ! ಇದಾವ ಉಭಯಸಂಕಟ ಒದಗಿತಿಂದು ಎನಗೆ!” ಎಂದು ತಾನೇ ಬಿಸಿಯೆಣ್ಣೆಯ ಕೊಪ್ಪರಿಗೆಯಲ್ಲಿ ಬಿದ್ದಂತೆ ಪ್ರಲಾಪಿಸಿದ ಆ ಆಪ್ತಸಚಿವ ಸುಮತಿ.     ಸಂಕಟಪಡಬೇಕಾದ ಸುಧನ್ವ ಸಂಪೂರ್ಣ ಸೋತ ಸುಮತಿಯನ್ನು ಸಂತೈಸಿದ. “ನಾನು ಇದುವರೆಗೂ ಧರ್ಮಮಾರ್ಗವನ್ನು ತೊರೆದು ನಡೆದವನಲ್ಲ. ಯುದ್ಧದಲ್ಲಿ ಶತ್ರುಗಳೊಡನೆ ಹೋರಾಡಿ ಮಡಿಯಬೇಕಾಗಿದ್ದ ನನ್ನ ಈ ಶರೀರ ಈ ಎಣ್ಣೆ ಕೊಪ್ಪರಿಗೆಯಲ್ಲಿ ಕೊನೆಗಾಣುವಂತಾಯಿತು ಎನ್ನುವುದಕ್ಕೆ ದುಃಖವಿದೆ ನಿಜ. ಆದರೆ ಕೃಷ್ಣನ ನಾಮಸ್ಮರಣೆಗೆ ಶರಣು ಹೋಗುವೆ. ಅವನು ನನ್ನನ್ನು ಕಾಯುತ್ತಾನೆ ಎಂಬ ಭರವಸೆಯಿದೆ ನನ್ನೊಳಗೆ. ನೀನು ಅಂಜದೆ ಅರಸನ ಆಜ್ಞೆಯನ್ನು ಪೂರ್ಣಗೊಳಿಸು” ಎಂದ ಸುಧನ್ವ.     ಮಾತನ್ನು ಮನ್ನಿಸಿದ ಸುಮತಿ. ಸುಧನ್ವನನ್ನು ಎತ್ತಿದ ಆತ ಕುದಿಯುತ್ತಿರುವ ಎಣ್ಣೆಯೊಳಗೆ ಅವನನ್ನು ಎಸೆದ. ರಾಜ ಪರಿವಾರದವರೆಲ್ಲಾ ಅಲ್ಲೇ ನೆರೆದಿದ್ದರು. ತಮ್ಮ ದೇಹವೇ ಕುದಿಯಿತೇನೋ ಎನ್ನುವಂತೆ ಮರುಗಿದರು. ಈ ಬಗೆಯ ಸಾವು ಒದಗಿಬಂತೇ ಸುಧನ್ವನಿಗೆ! ಎಂದು ಅಳುಮಳೆಯನ್ನು ಕರೆದರು. ಅದೆಂತು ಈ ಬಗೆಯ ಆಜ್ಞೆ ಕೊಟ್ಟನೋ ಆ ಅರಸ ಎನ್ನುತ್ತಾ ದೊರೆಯ ಕಠಿಣತೆಯ ನೆನೆದು ಕರಗಿದರು.     ಕುದಿವ ಎಣ್ಣೆಯೊಳಗೆ ಬಿದ್ದ ಸುಧನ್ವ ಅಪ್ಪಿಕೊಂಡದ್ದು ಹರಿನಾಮ ಸ್ಮರಣೆಯನ್ನು. “ಹಿಂದೆ ರಕ್ಷಿಸಿದೆ ಅಸುರಸುತ ಪ್ರಹ್ಮಾದನನ್ನು ನೀ ಅಸುರಾರಿಯೇ. ಅಂದು ಧಾರ್ತರಾಷ್ಟçನ ದುಷ್ಟತೆಯ ಸಹಿಸದೆಯೇ ಸಭಾಪಮಾನದಲ್ಲಿ, ದ್ರುಪದಸುತೆಯ ಮಾನವನ್ನು ಕಾಯ್ದೆ ದುಷ್ಟಸಂಹಾರಕನೇ. ಇಂದು ನನಗೆ ನೀನಲ್ಲದೆ ಬೇರೆ ಇನ್ನಾರೂ ದಿಕ್ಕಿಲ್ಲ. ಕಾಪಾಡಬೇಕು ಎನ್ನನು ಓ ಕರುಣಾಳು ಕೃಷ್ಣಾ!” ಎಂದು ಮನದಲ್ಲಿಯೇ ಕೃಷ್ಣನನ್ನು ಕರೆಯುತ್ತಾ ಶ್ರೀಹರಿಯ ಧ್ಯಾನದಲ್ಲಿದ್ದನು ಸುಧನ್ವ.     ಕೃಷ್ಣಕೃತ ವಿಸ್ಮಯ ಸಂಭವಿಸಿತು ಆ ಕ್ಷಣದಲ್ಲಿ! ಕೊತಕೊತನೆ ಕುದಿಯುತ್ತಿದ್ದ ಎಣ್ಣೆಯದು ಮೈಗೆ ಸೊಗಸನ್ನಿಕ್ಕುವ, ತನುವಿಗೆ ಸೊಗವನ್ನೀಯುವ ಸಿರಿಗಂಧವಾಯ್ತು ಅವನ ಪಾಲಿಗೆ. ಹೊರಗೆ ನೋಡುತ್ತಿದ್ದವರ ಕಣ್ಣಿಗದು ಕುದಿಕುದಿವ ಎಣ್ಣೆ. ಒಳಗಿದ್ದ ಸುಧನ್ವನ ಪಾಲಿಗದು ತಂಪನ್ನೀಯುವ ಬೆಣ್ಣೆ. ಅವನ ತನುವಿನ ರೋಮಗಳು ಕರಟಿಹೋಗಲಿಲ್ಲ. ಮೊಗದ ಚೆಲುವದು ಮುರುಟಿಹೋಗಲಿಲ್ಲ. ಕೊರಳಲ್ಲಿದ್ದ ತುಳಸಿ ಮಾಲೆಯದು ಬಾಡಲಿಲ್ಲ. ಅದರಲ್ಲಿದ್ದ ಕುಸುಮಗಳು ಮುದುಡಲಿಲ್ಲ. ಒಂದಿಷ್ಟೂ ಕುಂದದ ಅವನ ಮುಖ ನೆನಪಿಸುತ್ತಿತ್ತು ಪೂರ್ಣ ಅರಳಿದ ಅಂಬುಜವನ್ನು. ಹರಿನಾಮವೆಂಬ ಹರಿಗೋಲು ಅವನನ್ನು ಬಿಸಿಯೆಣ್ಣೆಯೆಂಬ ಕಷ್ಟತೊರೆಯಿಂದ ನಿರಾಳತೆಯೆಂಬ ನದಿತಟಕ್ಕೆ ತಲುಪಿಸಿತು.     ನೋಡುತ್ತಿದ್ದ ಸರ್ವ ಸಜ್ಜನರ ಮೊಗದಲ್ಲಿ ಅಚ್ಚರಿಯ ಭಾವ. ಎಲ್ಲಾ ಜನರು ಬೆರಗಾದರು ಕೃಷ್ಣಮಹಿಮೆಯ ಕಣ್ಣಾರೆ ಕಂಡು.     ಅಲ್ಲಿಯೇ ಇದ್ದ ಲಿಖಿತನಿಗೆ ಸಂಶಯ ಮೂಡಿತು. ಸುಧನ್ವ ಅಗ್ನಿಸ್ತಂಭನ ವಿದ್ಯೆಯಲ್ಲಿ ಪರಿಣತನಿರಬೇಕು ಎಂಬ ಸಂದೇಹ ಅವನನ್ನು ಕಾಡಿತು. ಎಳನೀರನ್ನು ಎಣ್ಣೆಗೆ ಸುರಿದರೆ ಉರಿ ಇನ್ನಷ್ಟು ಹೆಚ್ಚಾಗುತ್ತದೆ. ಇದವನಿಗೆ ತಿಳಿದಿತ್ತು. ಎಳನೀರನ್ನು ತರಿಸಿದ ಲಿಖಿತ. ಎಣ್ಣೆ ಕೊಪ್ಪರಿಗೆಗೆ ಸುರಿದ. ನಭೋಮಂಡಲವನ್ನೇ ವ್ಯಾಪಿಸುವಂತೆ ಉರಿಯೆದ್ದಿತು. ಆದರೂ ಸುಧನ್ವ ಏನೂ ಆಗದ ರೀತಿಯಲ್ಲಿ ನಗುತ್ತಲೇ ಇದ್ದ…                                          ಡಾ. ವಿಶ್ವನಾಥ ಎನ್ ನೇರಳಕಟ್ಟೆ  

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-35 ಮೈಸೂರು ಶಾಖೆ ಎರಡಕ್ಕೆ ಬಂದು ರಿಪೋರ್ಟ್ ಮಾಡಿಕೊಂಡಿದ್ದು ಆಯಿತು. ಮಾಮೂಲಿನಂತೆ ಇಲ್ಲಿಯೂ ಒಂದು ಕೈಯಲ್ಲಿ ಕರ್ತವ್ಯ ಹಾಜರಾಗುವ ಪತ್ರ ಇದ್ದರೆ ಮತ್ತೊಂದು ಕೈಯಲ್ಲಿ ವರ್ಗಾವಣೆ ಅರ್ಜಿ. ಈ ಬಾರಿ ಮನೆಗೆ ಹತ್ತಿರದ ಶಾಖೆ  ೫ ಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದೆ.  ಇಲ್ಲಿ ನನಗೆ ಮತ್ತೆ ನನ್ನ ಮೆಚ್ಚಿನ ಪಾಲಿಸಿ ಸೇವಾ ವಿಭಾಗ ಕೊಟ್ಟರು. ಪಾಲಿಸಿಯ ಪುನರುಜ್ಜೀವನ, ಅಸೈನ್ಮೆಂಟ್ ಮತ್ತು ನಾಮನಿರ್ದೇಶನ ಹಾಗೂ ಪಾಲಿಸಿಗಳ ಅಲ್ಟ್ರೇಶನ್ ಇಷ್ಟು ವಿಭಾಗಗಳ ಮೇಲ್ವಿಚಾರಣೆ ನನ್ನದು. ಈ ಮೂರು ವಿಭಾಗಗಳಿಗೂ ಒಬ್ಬೊಬ್ಬರು ಸಹಾಯಕರು ಇದ್ದರು. ನನ್ನದೇ ಬ್ಯಾಚ್ ನ  ಶ್ರೀಹರಿ ಸುಬ್ರಹ್ಮಣ್ಯ ಶೋಭಾ ಮತ್ತು ಪುಟ್ಟ ಲಕ್ಷ್ಮಿ ಈ ವಿಭಾಗದ ಸಹಾಯಕರು. ಈ ಹಿಂದೆ ನಂಜನಗೂಡಿನಲ್ಲಿ ನನ್ನ ಜೊತೆ ಉನ್ನತ ಶ್ರೇಣಿ ಸಹಾಯಕರಾಗಿದ್ದ ಜಗದೀಶ್ ಅವರು ಈಗ ಆಡಳಿತ ಅಧಿಕಾರಿಯಾಗಿ ಶಾಖೆಯಲ್ಲಿ ಇದ್ದರು. ಬಹುತೇಕ ಬಹುತೇಕ ಎಲ್ಲರೂ ಮೊದಲಿನಿಂದ ಪರಿಚಯದವರೇ ಆಗಿದ್ದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸ್ವಲ್ಪವೂ ಕಷ್ಟವಾಗಲಿಲ್ಲ. ಬೇರೆ ವಿಭಾಗಗಳಿಂದ ವರ್ಗವಾಗಿ ಬಂದಿದ್ದ ಹೇಮಗೋಮತಿ ಮತ್ತು ರೇಖಾ ಮಾತ್ರ ಹೊಸ ಪರಿಚಯ ಆದರೂ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆ ಆತ್ಮೀಯತೆ ಬೆಳೆದುಬಿಟ್ಟಿತ್ತು. ನನ್ನದೇ ಬ್ಯಾಚ್ನ  ಅನಿತ ಗಾಯಿತ್ರಿ ಹಾಗೂ ಶೋಭಾ ಈ ಮುಂಚೆ ಮಂಡ್ಯದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಗಾಯಿತ್ರಿ ದೇವಿ ಸಹಪಾಠಿ ಸುಮಾ ಇವರೆಲ್ಲರೂ ಇದೇ ಬ್ರಾಂಚ್ ನಲ್ಲಿ ಇದ್ದರು. ಪ್ರಸೂತಿ ರಜೆಗೆ ಹೋಗಿದ್ದ ಮಂಜುಳಾ ಸಹ ವಾಪಸ್ ಆಗಿದ್ದು ಅವಳು ಸಹ ತುಂಬಾ ಕ್ಲೋಸ್ ಆದಳು. ಈ ಮುಂಚೆ ನಾನು ಪ್ರಸ್ತಾಪಿಸಿದ ಮಂಡ್ಯ ಬ್ರಾಂಚ್ ನಲ್ಲಿದ್ದ  ಪ್ರೈಮರಿ ಶಾಲೆಯ ಸಹಪಾಠಿ ಮಂಜುನಾಥ್ ಸಹ ಇಲ್ಲಿಯೇ ಇದ್ದಿದ್ದು .ಬಹಳ ವರ್ಷಗಳಿಂದ ಅವರೆಲ್ಲ ಒಟ್ಟಿಗೆ ಅದೇ ಶಾಖೆಯಲ್ಲಿ ಕೆಲಸ ಮಾಡಿದ್ದರಿಂದ ಏಕವಚನದಲ್ಲಿಯೇ ಮಾತನಾಡಿಸಿಕೊಳ್ಳುವಷ್ಟು ಆತ್ಮೀಯತೆ ಇತ್ತು ಒಂದು ರೀತಿಯ ಕೋಝೀ ವಾತಾವರಣ. ಆ ಬ್ರಾಂಚ್ ನಲ್ಲಿ ಮನೆಯ ಸದಸ್ಯರ ಹಾಗೆ ಎಲ್ಲರೂ ಹೊಂದಿಕೊಂಡು ಇದ್ದದ್ದು ತುಂಬಾ ಖುಷಿ ಕೊಟ್ಟಿತ್ತು ಇದುವರೆಗೆ ನಾನು ಕೆಲಸ ಮಾಡಿದ ಯಾವುದೇ ಶಾಖೆ ಗಿಂತ ಇಲ್ಲಿ ತುಂಬಾ ಆತ್ಮೀಯತೆಯ ಅನುಬಂಧ ಇದ್ದದ್ದು ಕಾಣಿಸುತ್ತಿತ್ತು. ಹಾಗಾಗಿ ಕೆಲಸಗಳನ್ನು ಸಹ ಹಂಚಿಕೊಂಡಿದೆ ಮಾಡಿಬಿಡುತ್ತಿದ್ದರಿಂದ ತುಂಬಾ ಸುಗಮವಾಗಿ ನಡೆಯುತ್ತಿತ್ತು. ನಂಜನಗೂಡು ಶಾಖೆ ಬಿಡುವ ಸ್ವಲ್ಪ ಮೊದಲು ನಾವು ಮಾರುತಿ ಒಮ್ಮೆ ಗಾಡಿಯನ್ನು ಖರೀದಿಸಿದವು ನಮ್ಮ ಮನೆಯವರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗಲು ಈ ವ್ಯವಸ್ಥೆ. ಆ ಸಮಯದಲ್ಲಿ ಮೊಬೈಲ್ ಗಳು ಹೆಚ್ಚು ಜನಪ್ರಿಯ ವಾಗುತ್ತಿತ್ತು ಅದೇ ಬಿಲ್ಡಿಂಗ್ನ ಒಂದು ಕಡೆ ಬಿ ಎಸ್ ಎನ್ ಎಲ್ ಸಿಮ್ ಗಳನ್ನು ಕೊಡುತ್ತಿದ್ದರು. ಸುಲಭವಾಗಿಯೇ ಸಿಮ್ ಸಿಕ್ಕಿತು .ಮೊದಲ ನೋಕಿಯಾ ಮೊಬೈಲ್ ರವೀಶ್ ಖರೀದಿಸಿದರು ಆಗ ಅದರ ಬೆಲೆ ಹತ್ತು ಸಾವಿರ ರೂಪಾಯಿಗಳು ಆಗ ಮೊಬೈಲ್ ದರಗಳು ಸ್ವಲ್ಪ ಹೆಚ್ಚೇ ಇದ್ದವು. ನನ್ನ ತಂಗಿಯ ಪತಿ ಪ್ರಸನ್ನ ಅವರಿಗೆ ಪದೋನ್ನತಿ ಆಗಿ ಉಪ ಶಾಖಾಧಿಕಾರಿಗಳಾಗಿ ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್ ಶಾಖೆಗೆ ವರ್ಗಾವಣೆ ಆಯಿತು. ಛಾಯಾ ಸಹ ಬೆಂಗಳೂರಿಗೆ ಅರ್ಜಿ ಕೋರಿದಳು ಬಹಳ ಬೇಗನೆ ಅವಳಿಗೂ ಬೆಂಗಳೂರಿನ ಸಿಎ ಬ್ರಾಂಚ್ ಗೆ ವರ್ಗ ಸಿಕ್ಕಿತು ಈಗ ಅವರು ಬೆಂಗಳೂರಿನ ಹಲಸೂರಿನಲ್ಲಿ ಮೊದಲು ನಂತರ ಸಂಜಯ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ನನಗೆ ಓಡಾಡಲು ಸಹ ಅನುಕೂಲವಾಗಿತ್ತು.  ಆಫೀಸಿನ ಎದುರಿಗೆ ಬಸ್ ಸ್ಟ್ಯಾಂಡ್. ಯಾವಾಗಲಾದರೂ ಬೆಂಗಳೂರಿಗೆ ಹೋದಾಗ ಬೆಳಿಗ್ಗೆ ಎದ್ದು ಹೊರಟು ನೇರ ಆಫೀಸಿಗೆ ವಾಪಸ್ ಬರುತ್ತಿದ್ದೆ. ಹಾಗೆ ಒಮ್ಮೆ ವಾಪಸ್ ಬರುವಾಗ ಎಸ್ ಎಲ್ ಭೈರಪ್ಪನವರ ಸಹಪಾಠಿ ವೃದ್ಧರೊಬ್ಬರು ನನ್ನ ಪಕ್ಕದ ಸೀಟ್ ನಲ್ಲಿಯೇ ಕುಳಿತಿದ್ದು ದಾರಿಯುದ್ದಕ್ಕೂ ಭೈರಪ್ಪನವರ ಬಗ್ಗೆ, ಅವರ ಕೃತಿಗಳ ಬಗ್ಗೆ ಚರ್ಚೆ ಮಾಡುತ್ತಾ ಬಂದಿದ್ದು ಒಂದು ಸುಂದರ ಸವಿ ನೆನಪು. ಅವರು ಅಕ್ಕಿಹೆಬ್ಬಾಳದವರಾಗಿದ್ದು ಅಲ್ಲಿನ ಜಾತ್ರೆಗೆ ಬನ್ನಿ ಎಂದು ಆಮಂತ್ರಣವನ್ನು ಸಹ ಕೊಟ್ಟಿದ್ದರು. ನನ್ನ ಸಹಪಾಠಿ ಮಂಜುವಿನ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು ಮೊದಲಿನಿಂದ ನಮ್ಮ ಮನೆಗೆ ಬರುತ್ತಿದ್ದು ಅಮ್ಮನ ಕೈ ರುಚಿ ನೋಡುತ್ತಿದ್ದವನಿಗೆ ಆಗಲಿಂದ ಅಕ್ಕಿ ಮಸಾಲೆ ರೊಟ್ಟಿ ಎಂದರೆ ತುಂಬಾ ಇಷ್ಟ ನಾನು ಡಬ್ಬಿಗೆ ಅದನ್ನು ತಂದ ದಿನಗಳಲ್ಲೆಲ್ಲ ನನ್ನ ಡಬ್ಬಿಯನ್ನು ಅವನೇ ತೆಗೆದುಕೊಂಡು ಬಿಟ್ಟು ನನಗೆ ಕೆಳಗಿನ ಹೋಟೆಲ್ ನಿಂದ ಮಸಾಲೆ ದೋಸೆ ತರಿಸಿ ಕೊಟ್ಟುಬಿಡುತ್ತಿದ್ದ ಅದರಲ್ಲೂ ಅವರೇ ಕಾಳು ರೊಟ್ಟಿ ಮಾಡಿದಾಗಲಂತೂ ನಾನು ಅವನಿಗಾಗಿಯೇ ಪ್ರತ್ಯೇಕ ಎರಡು ರೊಟ್ಟಿ ಮಾಡಿ ಡಬ್ಬಿಯಲ್ಲಿ ತಂದುಕೊಡುತ್ತಿದೆ ಅಷ್ಟು ಖುಷಿಯಾಗಿ ತಿನ್ನುತ್ತಿದ್ದ ಜೀವನದಲ್ಲಿ ಅಷ್ಟೊಂದು ಉತ್ಸಾಹ ತುಂಬಿಕೊಂಡಿದ್ದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಂತೂ ನನಗೆ ಇಂದಿಗೂ ಅರಗಿಸಿಕೊಳ್ಳಲಾಗದ ಆಘಾತ. ಫೆಬ್ರವರಿ ತಿಂಗಳ ಮೊದಲ ಭಾಗದಲ್ಲಿ ಒಂದು ಹೊಸ ಬೆಳವಣಿಗೆ ಆರಂಭವಾಯಿತು. ಚುನಾವಣಾ ಕಚೇರಿಯಿಂದ ನಮ್ಮ ಸಿಬ್ಬಂದಿಗಳ ಪಟ್ಟಿಯನ್ನು ತೆಗೆದುಕೊಂಡು ಹೋಗಲು ಆರಂಭಿಸಿದ್ದರು. ಇದುವರೆಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಉಪಾಧ್ಯಾಯರು ಶಿಕ್ಷಕರುಗಳನ್ನು ಮಾತ್ರ ಈ ಡ್ಯೂಟಿಗೆ ತೆಗೆದುಕೊಳ್ಳುತ್ತಿದ್ದದ್ದು ಈ ಬಾರಿ ರಾಜ್ಯ ಹಾಗೂ ಕೇಂದ್ರ ಎರಡು ಕಡೆಯ ಚುನಾವಣೆಗಳು ನಡೆಯುತ್ತಿದ್ದರಿಂದ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯತೆ ಉಂಟಾಗಿದ್ದು ಬ್ಯಾಂಕುಗಳು ಹಾಗೂ ಭಾರತೀಯ ಮತ್ತು ಸಾಮಾನ್ಯ ವಿಮೆ ನೌಕರರನ್ನು ಚುನಾವಣಾ ಡ್ಯೂಟಿಗೆ ಕರೆಯುವ ಪರಿಪಾಠ ಆರಂಭವಾಯಿತು ಇಲ್ಲಿಂದ ಮೊದಲುಗೊಂಡು ಚುನಾವಣೆ ಘೋಷಣೆ ಎಂದ ತಕ್ಷಣ ನಮಗೆಲ್ಲ ದುಃಸ್ವಪ್ನಗಳು ಕಾಡಲು ಆರಂಭವಾಗಿತ್ತು. ಚುನಾವಣೆ ಹೆಸರು ಕೇಳಿದರೆ ಬೆಚ್ಚಿ ಬೀಳುವಷ್ಟು ಚುನಾವಣೆ ಕರ್ತವ್ಯಗಳ ಕಾಟ. ನಿವೃತ್ತಿಯ ಕಡೆಯ ವರ್ಷದಲ್ಲಿಯೂ ಸಹ ಈ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಬೇಕಾಯಿತು. ಏಪ್ರಿಲ್ 26 2004 ರಂದು ಚುನಾವಣೆಗಳು ನಿಗದಿಯಾಗಿತ್ತು. ಅದಕ್ಕೆ ಮುಂಚೆ ಒಂದು ವಾರದಲ್ಲಿ ತರಬೇತಿಗೆಂದು ಕರೆದಿದ್ದರು ಮೈಸೂರಿನ ಟೌನ್ ಹಾಲ್ ನಲ್ಲಿ ತರಬೇತಿ ಒಂದು ರೀತಿಯ ದೊಂಬಿಯೇ ಅದು. ಯಾವ ವಿಷಯಗಳು ನಮಗೆ ಸರಿಯಾಗಿ ಅರ್ಥವಾಗಲಿಲ್ಲ ಅವರು ಹೇಳಿಕೊಟ್ಟಿದ್ದು ಸರಿಯಾಗಿರಲಿಲ್ಲ ಎಂಬುದು ಒಂದು ಕಾರಣವಾದರೆ ಅವೆಲ್ಲವೂ ನಮಗೆ ಮೊಟ್ಟಮೊದಲಿಗೆ ಬಾರಿ ಆದ್ದರಿಂದ ಎಲ್ಲಾ ಹೊಸದು ಎನಿಸತೊಡಗಿತ್ತು. ಶಾಖೆಯ ಎಲ್ಲಾ ಬಹುತೇಕ ಮಂದಿ ಚುನಾವಣಾ ಕರ್ತವ್ಯಕ್ಕೆ ಕರೆ ಬಂದಿತ್ತು. ನನಗೆ ಎ ಪಿ ಆರ್ ಒ ಅಂದರೆ ಉಪಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಕಾರ್ಯ ಇತ್ತು .ಅಕಸ್ಮಾತ್ ಪಿ ಆರ್ ಓ ಬರಲಿಲ್ಲ ಎಂದರೆ ನಾನೇ ಆ ಕರ್ತವ್ಯವನ್ನು ನಿರ್ವಹಿಸಬೇಕಿತ್ತು, ಮೊದಲೇ ಹೆದರುವವರ ಮೇಲೆ ಕಪ್ಪೆ ಎಸೆದಂತಾಗಿತ್ತು ನನ್ನ ಪರಿಸ್ಥಿತಿ. ನಾವು ಕಾರ್ಯನಿರ್ವಹಿಸಬೇಕಾಗಿದ್ದು ಹುಣಸೂರು  ತಾಲೂಕು. ಚುನಾವಣೆಯ ಹಿಂದಿನ ದಿನವೇ ಮಹಾರಾಜ ಕಾಲೇಜು ಮೈದಾನಕ್ಕೆ ಬೆಳಿಗ್ಗೆ 7 ಗಂಟೆಗೆ ಹೋಗಿದ್ದು ಅಲ್ಲಿಂದ ಏರ್ಪಾಡು ಮಾಡಿದ್ದ ಬಸ್ಗಳಲ್ಲಿ ಹೋಗಿದ್ದಾಯಿತು. ಅಲ್ಲಿ ಬೂತ್ ನಂಬರ್ ಹಾಗೂ ಕಾರ್ಯನಿರ್ವಹಿಸಬೇಕಾಗಿದ್ದ ಶಾಖೆ ಹಾಗೂ ನಾವು ಹತ್ತಬೇಕಿದ್ದ ಬಸ್ ನಂಬರ್ ತಿಳಿಸಿದರು. 12 ಗಂಟೆಗೆ ಬಸ್ ಹೊರಡುವುದು ಎಂದು ತಿಳಿಯಿತು ಅಲ್ಲಿಯೇ ಕ್ಯಾಂಪ್ ಹಾಕಿದ್ದ ಹೋಟೆಲ್ ನಲ್ಲಿ ತಿಂಡಿ ತಿಂದು ನಮ್ಮ ನಮ್ಮ ಬೂತ್ ನವರ ಪರಿಚಯ ಮಾಡಿಕೊಂಡು ಅವರಿಂದ ಸಾಮಗ್ರಿಗಳನ್ನು ಪಡೆದೆವು ವಿದ್ಯಾವರ್ಧಕ ಕಾಲೇಜಿನ ಲೆಕ್ಚರರ್ ಒಬ್ಬರು ಖಾಸಗಿ ಶಾಲೆಗೆ ಶಿಕ್ಷಕಿ ಗೀತಾ ಇನ್ನೊಬ್ಬರು ಹಾಗೂ ಉಳಿದಿದ್ದರು ಸರ್ಕಾರಿ ರಾಜ್ಯ ಸರ್ಕಾರಿ ನೌಕರರು ನಮ್ಮ ತಂಡದಲ್ಲಿ ಇದ್ದರು.  ಅಂತೂ ಇಂತೂ ಹನ್ನೆರಡುವರೆಗೆ ಬಸ್ ಹೊರಟಿದ್ದು ದಾರಿಯ ಮದ್ಯ ಹುಣಸೂರಿನ ಹೋಟೆಲ್ ನಲ್ಲಿ ನಿಲ್ಲಿಸಿ ಊಟ ಮಾಡಿದೆವು. ನಮ್ಮ ಪಿ ಆರ್ ಓ ಅವರಿಗೂ ಇದೆ ಮೊದಲ ಚುನಾವಣಾ ಅನುಭವ ತುಂಬಾ ಜಾಗರೂಕತೆಯಿಂದ ವರ್ತಿಸುತ್ತಿದ್ದರು. ನಾಲ್ಕು ಗಂಟೆಯ ವೇಳೆಗೆ ನಮ್ಮನ್ನು ಬಳಿ ಬಿಟ್ಟರು ಅಲ್ಲಿ ಇಲ್ಲ ವ್ಯವಸ್ಥೆಗಳನ್ನು ಮಾಡಿ ಕೊಂಡೆವು. ರಾತ್ರಿ ಅಲ್ಲಿ ಹಳ್ಳಿಯವರೆ ಅಡುಗೆಯ ವ್ಯವಸ್ಥೆ ಮಾಡಿದ್ದರು. ನಾನು ಮತ್ತು ಗೀತಾ ಅವರು ನಾನು ತೆಗೆದುಕೊಂಡು ಹೋಗಿದ್ದ ಚಪಾತಿ ಹಾಗೂ ಹಾಗಲಕಾಯಿ ಗೊಜ್ಜುಗಳಲ್ಲಿ ರಾತ್ರಿಯ ಊಟ ಮುಗಿಸಿದೆವು .ಹಳ್ಳಿಯ ಶಾಲೆ, ಸದ್ಯ ನಮಗೆ  ಶಿಕ್ಷಕರು ಉಪಯೋಗಿಸುವ ಶೌಚಾಲಯವನ್ನು ಸ್ವಚ್ಛಗೊಳಿಸಿ ಬಿಟ್ಟು ಕೊಟ್ಟಿದ್ದರು. ಆದರೆ ಸ್ನಾನಕ್ಕೆ ಮಾತ್ರ ವ್ಯವಸ್ಥೆ ಇರಲಿಲ್ಲ ಬೆಳಗಾಗುವ ಮೊದಲೇ ಸ್ನಾನ ಮಾಡಿಕೊಂಡಿದ್ದರಂತೆ .ನಮಗೆ ಮಾತ್ರ ಅಂದು ಸ್ನಾನ ಭಾಗ್ಯ ಸಿಗಲಿಲ್ಲ.ಬೆಳಿಗ್ಗೆ 7.30ಗೆ ಚುನಾವಣೆ ಆರಂಭವಾಯಿತು ಎರಡೆರಡು ಸ್ಥಾನಗಳಿಗೆ ಆದ್ದರಿಂದ ಸ್ವಲ್ಪ ಸಮಯ ಹಿಡಿಯುತ್ತಲು ಇತ್ತು ಬೆಳಿಗ್ಗೆ 7.30 ಇಂದ ಸಂಜೆ ಆರು ಗಂಟೆಯ ತನಕ ಚುನಾವಣೆಗಳು ತಿಂಡಿ ತಿನ್ನಲು ಸಹ ಬಿಡುವಾಗಲಿಲ್ಲ ನಮಗೆಲ್ಲ ಕೈ ತುಂಬಾ ಕೆಲಸ ಇದ್ದುದರಲ್ಲಿ ಪಿ ಆರ್ ಓ ಅವರೇ ಮೇಲ್ವಿಚಾರಣೆ ಮಾಡಿಕೊಳ್ಳುತ್ತ ನಾವು ಕೆಲಸ ಮಾಡುತ್ತಲೇ ತಿನ್ನುವ ಹಾಗೆ ಬ್ರೆಡ್ ಚಾ ಬಾಳೆಹಣ್ಣು ಬಿಸ್ಕತ್ತು ಇವುಗಳನ್ನು ಸರಬರಾಜು ಮಾಡಿದರು ಒಂದು ಗಂಟೆಯ ವೇಳೆಗೆ ಸ್ವಲ್ಪ ಜನಸಂದಣಿ ಕಡಿಮೆಯಾಗಿದ್ದರಿಂದ ಒಬ್ಬೊಬ್ಬರಾಗಿ ಹೋಗಿ ಊಟ ಮಾಡಿಕೊಂಡು ಬಂದೆವು .ನನಗೆ ಅಲ್ಲಿಯ ಅಡಿಗೆ ಹೇಗಪ್ಪಾ ತಿನ್ನುವುದು ಎಂದು ಚಿಂತೆ .ಆದರೆ ಬೆಳಿಗ್ಗೆ ತಂದಿಟ್ಟಿದ್ದ ಉಪ್ಪಿಟ್ಟು ಹಾಗೆ ಇತ್ತು ಅದನ್ನ ತಿಂದು ಮೊಸರನ್ನ ತಿಂದು ಹೇಗೋ ಕಥೆ ಮುಗಿಸಿದ್ದಾಯಿತು. ಸಂಜೆ ಆರು ಗಂಟೆಗೆ ಮುಕ್ತಾಯ ಎಂದಿದ್ದರು ಆ ವೇಳೆಗೆ ಇದ್ದವರನ್ನೆಲ್ಲ ಮತದಾನ ಮಾಡಲು ಅವಕಾಶ ಮಾಡಿಕೊಡಲೇಬೇಕಿತ್ತು, ಆರು ಗಂಟೆಯ ನಂತರವೂ 60 70 ಜನ ಇದ್ದರು ನಮ್ಮ ಬೂತ್ ನಲ್ಲಿ 95% ಮತದಾನ ಆಗಿತ್ತು, ಅದು ಏಳು ಗಂಟೆಯ ವೇಳೆಗೆ ಮುಗಿದು ನಾವು ಎಲ್ಲಾ ಸ್ಟೇಟ್ಮೆಂಟ್ ಗಳನ್ನು ತಯಾರಿಸಿಕೊಳ್ಳುವ ವೇಳೆಗೆ 8.30 ಆಗಿತ್ತು ಬಸ್ ಆಗ ಬಂತು ಸಣ್ಣಪುಟ್ಟ ಉಳಿದದ್ದನ್ನು ಅಲ್ಲಿಗೆ ಮುಗಿಸಿಕೊಂಡು ಎಂದು ಹೊರಟುಬಿಟ್ಟವು ಮತ್ತೆ ಹುಣಸೂರು ತಾಲೂಕು ಕಚೇರಿಯಲ್ಲಿ ತುಂಬಾ ಜನ ಸಂದಣಿ. ಏನೊಂದು ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಹೇಗೋ ನುಗ್ಗಿ ಅಂತೂ ಎಲ್ಲವನ್ನು ಸಲ್ಲಿಸುವ ವೇಳೆಗೆ ರಾತ್ರಿ 10:30 ಆಗಿ ಹೋಗಿತ್ತು. ನಂತರ ಮೈಸೂರಿಗೆ ಹೊರಡುವ ಬಸ್ನಲ್ಲಿ ಕುಳಿತು ಹೊರಟೆವು. ನಮ್ಮ ಪಿ ಆರ್ ಓ ಬಳಿ ಇದ್ದ ಮೊಬೈಲಿನಿಂದ ನನ್ನ ತಾಯಿಯ ಮನೆಯ ಲ್ಯಾಂಡ್ಲೈನ್ ಗೆ ಫೋನ್ ಮಾಡಿ ನಮ್ಮ ಪತಿಗೆ ವಿಷಯ ತಿಳಿಸಿ ಅವರು ಬಂದು ಬಸಪ್ಪ ಹಾಸ್ಪಿಟಲ್ ಬಳಿ ನನಗಾಗಿ ಕಾಯುತ್ತಿದ್ದರು. ಅಂತೂ ಇಂತೂ ನಾಳೆ ಮುಗಿಸಿ ಮನೆಗೆ ಬಂದಾಗ ಆ ದಿನ ದಾಟಿ ಹೋಗಿತ್ತು. ಈ ಶಾಖೆಯಲ್ಲಿ ಇದ್ದಾಗಲೇ ಮತ್ತೊಮ್ಮೆ ಹೈದರಾಬಾದ್ ತರಬೇತಿಗೆ ಕರೆ ಬಂತು ಅದು ಮತ್ತೆ ನಾನು ಹಾಗೂ ನಂದಶ್ರೀ ಕುಲಕರ್ಣಿ ಕಟ್ಟಿ ಜೊತೆಯಾಗಿ ಹೈದರಾಬಾದಿಗೆ ಹೋಗಿದ್ದೆವು. ಮಕ್ಕಳನ್ನು ಅವರ ತಾಯಿ ಮನೆಗೆ ಬಿಟ್ಟು ಹೋಗಬೇಕಾಗಿತ್ತು. ಮೊದಲು ಬೆಂಗಳೂರಿಗೆ ಹೋಗಿ ಅವರ ಮನೆಯಲ್ಲಿ ಬಿಟ್ಟು ನಂತರ ಹೈದರಾಬಾದ್ ಟ್ರೈನ್ ಹಿಡಿದದ್ದು ಇಂದಿನಂತೆ ಹೈದರಾಬಾದ್ ತರಬೇತಿ ತುಂಬಾ ಆಸಕ್ತಿದಾಯಕವಾಗಿ ಚೆನ್ನಾಗಿಯೂ ಇತ್ತು. ಈ ಬಾರಿ ಬರಿ ಬಿರ್ಲಾ ಮಂದಿರ ಮಾತ್ರ ನೋಡಿದ್ದು ಖರೀದಿಯೇ ಹೆಚ್ಚು. ನನ್ನ ತಂಗಿಯರಿಗೆ ಹಾಗೂ ಈಗಾಗಲೇ ನನ್ನ ಮೈದುನನಿಗೆ ಮದುವೆಯಾಗಿ ನಾನು ಓರಗಿತ್ತಿಗೆ ಸೀರೆ ತೆಗೆದುಕೊಂಡಿದ್ದೆ ನನ್ನ ನಾದಿನಿ ಮೂರು ಜನರಿಗೂ ಹೈದರಾಬಾದ್ ಸರಗಳು. ತುಂಬಾ ಖುಶಿ ಕೊಟ್ಟ ಪ್ರವಾಸ ಅದು.(ಮುಂದುವರೆಯುವುದು) ಸುಜಾತಾ ರವೀಶ್ಮೈಸೂರು

Read Post »

ಪುಸ್ತಕ ಸಂಗಾತಿ

ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ.

ಪುಸ್ತಕ ಸಂಗಾತಿ ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ ಯುವ ಜನತೆಯಲ್ಲಿ ಮೂಡಲಿ ರಾಷ್ಟ್ರೀಯತೆಯ ಭಾವನೆ*  -ಶರಣಬಸಪ್ಪಾ ದೇಶಮುಖ*ಔರಾದ* : ಪ್ರತಿಯೊಬ್ಬ ಯುವಕರಲ್ಲಿ ರಾಷ್ಟ್ರೀಯತೆಯ ಭಾವನೆ ಬೆಳೆಯಬೇಕಾಗಿದೆ. ದೇಶದ ಅಭಿವೃದ್ಧಿಯಾಗಬೇಕು ಎಂದರೆ ಅದು ಯುವ ಜನತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಯ ಜೀವನದಲ್ಲಿಯೇ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ *ರಾಷ್ಟ್ರೀಯ ಸೇವಾ ಯೋಜನೆ* ಜಾರಿಗೆ ತಂದರು. ನಾವು ಉಳಿಯಬೇಕು, ಬೆಳೆಯಬೇಕು ಅಂದರೆ ದೇಶದ ಅಭಿವೃಧ್ಧಿಯಲ್ಲಿ ನಾವೆಲ್ಲರೂ ಸಹಭಾಗಿತ್ವ ನೀಡಬೇಕೆಂದು ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಕಾರ್ಯದರ್ಶಿಗಳಾದ ಶರಣಬಸಪ್ಪಾ ದೇಶಮುಖ ಅವರು ನುಡಿದರು. ಇಂದು ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಸರಕಾರಿ ಪ್ರೌಢ ಶಾಲೆ ಯನಗುಂದಾದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ *ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ* ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ನಮ್ಮ ಯುವ ಜನತೆ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದುಷ್ಚಟಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ತಾವೆಲ್ಲರೂ ಹಾಗೆ ಆಗದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ಕರೆ ನೀಡಿದರು. ಶಿಬಿರವನ್ನು ಉದ್ಘಾಟಿಸಿ, ಸಾಹಿತಿ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಅವರು ರಚಿಸಿರುವ ಆಧುನಿಕ ಕಥನ ವಚನಗಳ “ಸ್ಮರಣಾಂಜಲಿ” ಕೃತಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಸದಸ್ಯರಾದ ರವೀಂದ್ರ ಮೀಸೆರವರು ಯುವಕರು ದೇಶ ಕಟ್ಟಬೇಕು ಎನ್ನುವ ಉದ್ದೇಶಕ್ಕಾಗಿಯೇ ಎನ್.ಎಸ್.ಎಸ್ ಸಂಘಟನೆ ಹುಟ್ಟಿಕೊಂಡಿದೆ. ಅದೇ ಉದ್ದೇಶದಿಂದ ಎನ್.ಎಸ್.ಎಸ್. ಘಟಕದ ಮೂಲಕ ಶ್ರಮದಾನ, ಸ್ವಚ್ಛತಾ ಅಭಿಯಾನ, ಜನಜಾಗೃತಿ ಜಾಥಗಳು, ವಿಶೇಷ ಉಪನ್ಯಾಸಗಳು, ಜಾಗೃತಿ ಶಿಬಿರಗಳು ಹೀಗೆ ಇನ್ನೂ ಅನೇಕ ರಚನಾತ್ಮ ಚಟುವಟಿಕೆಗಳ ಮೂಲಕ ಯುವಜನರನ್ನು ಜಾಗೃತಗೊಳಿಸುವ ಕಾರ್ಯ ಎನ್.ಎಸ್.ಎಸ್.ಘಟಕಗಳು ಮಾಡುತ್ತಿವೆ ಎಂದು ತಿಳಿಸಿದರು. ಯನಗುಂದಾ ಗ್ರಾಮದ ಗಣ್ಯರಾದ ಶಿವರಾಜ ದೇಶಮುಖರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಶಿಸ್ತು, ಶಾಂತಿ, ಸಹಬಾಳ್ವೆ, ಸಂಘಟನೆ, ಸಾಹಿತ್ಯದ ಅಭಿರುಚಿ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ನಿರುದ್ಯೋಗ, ಭ್ರಷ್ಟಾಚಾರ, ಅನ್ಯಾಯ ಅತ್ಯಾಚಾರಗಳು ನಿಲ್ಲಬೇಕಾದರೆ ನಮ್ಮ ಯುವಕರು ಜಾಗೃತರಾದಾಗ ಮಾತ್ರ ಸಾಧ್ಯ. ದೇಶಕ್ಕಾಗಿ ನಾವೇನು ಮಾಡಬೇಕು ಎನ್ನುವುದು ತುಂಬಾ ಮುಖ್ಯ, ನಾವೆಲ್ಲರೂ ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಯೋಚಿಸುತ್ತೇನೆ ಆದರೆ ನಾವು ನಮ್ಮ ಕರ್ತವ್ಯದ ಬಗ್ಗೆಯು ಆಲೋಚಿಸಬೇಕು ಅಂದಾಗಲೇ ಮಾತ್ರ ನಾವು ನಮ್ಮ ದೇಶವನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗಲು ಸಾಧ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ *ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ* ಜಂಟಿ ಕಾರ್ಯದರ್ಶಿ ಧನರಾಜ ತಾಂಡುರೆ, ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ, ಯನಗುಂದಾ ಗ್ರಾಮದ ಪ್ರಮುಖರಾದ ಗುರಯ್ಯ ಸ್ವಾಮಿ, ಗೋಪಾಲರಡ್ಡಿ ಬರ್ಯೆ, ಜಗದೀಶ ಪಾಟೀಲ್, ಬಸವರಾಜ ದೇಶಮುಖ, ಕೃಷ್ಣಾ, ಹಾಗೂ ಎನ್.ಎಸ್.ಎಸ್. ಅಧಿಕಾರಿ ಉತ್ತಮ ದಂಢೆ, ಶಿಕ್ಷಕರಾದ ಖುರಮ್ ಮರ್ತುಜಾ, ಮಲ್ಲಿಕಾರ್ಜುನ ಟಂಕಸಾಲೆ, ಮತ್ತು ಕಾಲೇಜಿನ ಪ್ರಾಧ್ಯಾಪಕರಾದ ಉತ್ತಮ ಜಾದವ, ಕಪೀಲ ಡೋಣಗಾವೆ, ತುಳಸಿರಾಮ ಮಾನೆ, ಮಲ್ಲಿಕಾರ್ಜುನ ಭಾಲ್ಕೆ, ಶಿವರಾಮ ರಾಠೋಡ, ಶೇಖ್ ಮುಜಿಬ್, ಪ್ರೀಯಾ ಸದಾಫುಲೆ, ಆರತಿ ನೌಬಾದೆ, ಸಿಕಂದರ ಚವ್ಹಾಣ, ನಿರ್ಮಲಾ ಶಿವಪೂಜೆ, ರಾಜಲಕ್ಷ್ಮಿಕಾಂತಹಾಗೂ  ಶಿಬಿರಾರ್ಥಿಗಳು  ಭಾಗವಹಿಸಿದರು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಟಂಕಸಾಲೆ ಸ್ವಾಗತಿಸಿದರು, ಪ್ರಾಧ್ಯಾಪಕರಾದ ಉತ್ತಮ ಜಾಧವ ನಿರೂಪಿಸಿದರು. ಎನ್. ಎಸ್.ಎಸ್. ಅಧಿಕಾರಿಗಳಾದ ಉತ್ತಮ ದಂಡೆ ಅವರು ವಂದಿಸಿದರು.

ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಒಂಟಿತನಕೆ ಆಸರೆ” ಒಂಟಿ ಹೃದಯದ ಮೂಲೆಮೂಲೆಯಲಿ  ಕತ್ತಲು ಕವಿದಾಗ  ಯಾರೋ ಸಣ್ಣ ದೀಪ   ಹಚ್ಚಿದ ಭಾವ  ಆಸರೆಯಾಗಿ ಬರುವುದು ನೋಡಾಗ ಕಣ್ಣೀರ ಹನಿಯ ಜೊತೆ ಮಾತನಾಡುವ  ಗಾಳಿಯ ಸ್ಪರ್ಶವೇ ಸಾಂತ್ವನ  ಮೌನದ ನಡುವೆ ಬೆಳಕು ಹರಡುವ  ಭರವಸೆಯದೇ ಒಂದು ಬಂಧನ ನೀ ಒಂಟಿಯಲ್ಲ, ಜಗವೇ ಜೊತೆಯಿದೆ  ಚುಕ್ಕಿಗಳು ಸಾಕ್ಷಿ ನಮ್ಮ ಪಯಣಕೆ  ನಿನ್ನ ನೋವಿಗೂ ಒಂದು ಅರ್ಥವಿದೆ  ಬದುಕು ಚಿಗುರುವುದು ವಸಂತ ನಿನಗಾಗಿ ಕಾಲ ನೋವನ್ನು ಮಾಯಿಸುವ ಮಂತ್ರ  ನಾಳೆಯೆಂಬ ಕನಸೇ ಆಸರೆ  ಎದ್ದು ನಿಂತರೆ ಸಾಕು ಗೆಳತಿ  ಒಂಟಿತನವೂ ತಾನೆ ದೂರ ಸರಿವ ಕರೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಖುಷಿಯ ಆಸ್ತಿ” ಖುಷಿ ಮರೀಚಿಕೆಯಲ್ಲಮನಸು ಮರುಳುಗಾಡಲ್ಲ ಪುಟ್ಟಪುಟ್ಟ ಆಸೆಗಳುದೊಡ್ಡ ದೊಡ್ಡ ನಿರಾಸೆಗಳುಮಜಲುಗಳುಎಲ್ಲಾ ಗೋಜಲುಗಳ ಕುಸ್ತಿ ಈ ದಿನ ರವಿ ಪೂರ್ವದಲ್ಲಿರುವುದಕ್ಕೆ ಖುಷಿಯಾಗಿರು,ಈ ದಿನವೂ ಸಾಗರದಲ್ಲಿಉಬ್ಬರವಿಳಿತ ಕಂಡು ನಿಬ್ಬೆರಗಾಗು. ಇರುವ ಭಕ್ತಿ ಮೆರೆಸಲೂ ಖುಶಿಇಲ್ಲದಿರುವ ಆಸ್ತಿ ಮರೆಯಲೂ ಖುಶಿ ಖುಶಿ ಇರುವಷ್ಟಕ್ಕೆ ತೃಪ್ತಿಇಲ್ಲದಾಗಿದ್ದಷ್ಟಕ್ಕೆ ಖುಷಿಹುಟ್ಟಿದ್ದಕ್ಕೆ, ಇರುವಷ್ಟನ್ನೇ ಅನುಭವಿಸಿದ್ದಕ್ಕೆ,ಖುಷಿಯಾಗಿರು ಸದಾ. ಮುಷ್ಟಿಯಲ್ಲಿ, ಮನಸಲ್ಲಿಉಳಿದಷ್ಟಕ್ಕೆ ತೃಪ್ತಿಕನಸಲ್ಲಿ ಕಂಡದ್ದಕ್ಕೂ ತೃಪ್ತಿನನಸಲ್ಲಿಹೊಂದಿದ್ದಕ್ಕೂ ತೃಪ್ತಿ ತೃಪ್ತಿಯೇ ಖುಷಿಯ ಆಸ್ತಿ  ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ” Read Post »

You cannot copy content of this page

Scroll to Top