ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ”
ಕಾವ್ಯ ಸಂಗಾತಿ ಬನಶ್ರೀ ಹತ್ತಿ ವಿಜಯಪುರ “ಮರೆಯಾದ ನನ್ನಪ್ಪ” ಬೆನ್ನ ಹಿಂದೆ ಬೆಟ್ಟದಂತೆ ನಿಂತಿದ್ದೆ,ಕಣ್ಣ ಮುಂದೆ ದಾರಿದೀಪವಾಗಿದ್ದೆ.ನಿನ್ನ ಕೈ ಹಿಡಿದು ನಡೆದ ಹಾದಿಇಂದಿಗೂ ನನ್ನ ಬಾಳ ಹಸಿರು,ಇಂದು ನೀನಿಲ್ಲದೆ ಬದುಕುಬರೀ ಬಳಲಿಕೆಯ ಉಸಿರು. ನನ್ನ ಸಣ್ಣ ತಪ್ಪುಗಳ ತಿದ್ದಿ ಬುದ್ದಿ ಹೇಳುತ್ತಿದ್ದೆ,ಕಷ್ಟ ಬಂದಾಗ ಧೈರ್ಯ ತುಂಬಿನಗು ಬೀರುತ್ತಿದ್ದೆ.ನೀನು ಹಾಕಿಕೊಟ್ಟ ಹಾದಿಯೇ ನನ್ನಾಸ್ತಿನಿನ್ನ ನೆನಪುಗಳೇ ನನ್ನ ಜೀವನದ ಬುತ್ತಿ. ಅಪ್ಪ ಅಂದರೆ ಕೇವಲ ಎರಡಕ್ಷರವಲ್ಲ,ಒಂದು ದೊಡ್ಡ ಆಲದ ಮರ,ನೀನಿಲ್ಲದ ಈ ಬಾಳು ಈಗ ಮರುಭೂಮಿಮರೆಯಾದರೂ ನೀನು ನನ್ನಎದೆಯ ಗೂಡಿನಲ್ಲಿರುವೆ,ನನ್ನ ಪ್ರತಿ ಯಶಸ್ಸಿನಲ್ಲೂ ನಿನ್ನ ದಿವ್ಯ ಚೇತನ ನೀನು ಮರೆಯಾಗಿ ಹೋಗಿಲ್ಲಇಲ್ಲಿಯೇ ಭೂಮಿ ಬೆಳೆ ಮಳೆಯಲ್ಲಿರುವೆಆಗಾಗ ನಿನ್ನ ತುಂತರ ಹನಿನನ್ನ ಕಣ್ಣೀರು ಮರೆಸುವವು ಅಪ್ಪಅಪ್ಪ ಮತ್ತೊಮ್ಮೆ ಬಂದು ಪ್ರೀತಿ ತೋರು ಬನಶ್ರೀ ಹತ್ತಿ ವಿಜಯಪುರ
ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ” Read Post »









