ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಪ್ರಿಯತಮ” ದೈವದ ಅನುಗ್ರಹ ನಮ್ಮಿಬ್ಬರ ಪರಿಚಯಬರೆಯಲು ಸಾಲದು ಕಳೆದಿರುವ ಸಮಯಪದಗಳಿಲ್ಲ ಹೇಳಲು ಹೃದಯದ ವಿಷಯನೆನೆಯಲು ನಿನ್ನಾ ನೋವೆಲ್ಲಾ ಮಾಯಾ. ಆಲಿಸಲಾರೆಯ ನನ್ನ ಪ್ರೀತಿಯ ಕರೆಯನೋಡಲು ಬಯಸಿದೆ ಮನ ಮೋರೆಯತವಕಿಸುತ್ತಿದೆ ಕಾಣಲು ಹೃದಯದ ದೊರೆಯನೋಡಲೆಂದು ನನ್ನೆಡೆ ನೀ ಬರುವೆಯಾ ಹೇಗೆ ತಿಳಿಸಲಿ ಹೃದಯದ ಪರಿಯಜೀವನದ ಹಸಿರು ಮರೆಯದಿರು ಗೆಳೆಯಬಯಸಿರುವೆ ಬಾಳಲಿ ನೀನೆ ಇನಿಯಬಯಸಿದೆ ನಿನ್ನನೇ ಪುಟ್ಟ ಹೃದಯ ಬರುವಿಕೆಯ ಹಾದಿ ಕಾದು ಬಳಲಿರುವೆಸವಿ ನುಡಿಯ ಪ್ರೇಮಕೆ ಸೋತಿರುವೆನೀನೇಕೆ ಸವಿ ನೆನಪಿನ ಪ್ರೀತಿ ಮರೆತಿರುವೆನನ್ನೊಳಗೆ ನೀನೆಂದೋ ಮನೆ ಮಾಡಿರುವೆ ಜೀವನದ ಕೊನೆ ಅಂಚಿನಲಿ ನಿಂತಿರುವೆಕಣ್ ತುಂಬಾ ಕಾಣಲು ಕಾದಿರುವೆನೀನೇಕೆ ನಿನ್ನ ಶಬರಿಯ ಮರೆತಿರುವೆಬಂದೆ ಬರುವ ದಾರಿಯ ನೋಡುತ್ತಿರುವೆ. ಡಾ. ಲತಾ ಎ ಆರ್ ಬಾಳೆಹೊನ್ನೂರು

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಅನುರಾಗ” ಗೆಳತಿ…ನಾನೇಗೆ ನಿನ್ನ ಮರೆಯಲಿಮರೆಯಾಗಿ ನಿಂತರೂ ದೂರದಲಿಅದೇಕೋ ಮೋಹ ಅಂತರಾಳದಲಿ,!! ನೆನಪುಗಳು ಸುಳಿಯಾಗಿಆಸೆಗಳೆಲ್ಲ ಸವಿ ಸವಿ ಮಾತಾಗಿಬಯಕೆಗಳೆಲ್ಲ ಮನಸ್ಸಿನಲ್ಲಿ ಕನಸಾಗಿ,!! ನನ್ನೊಳಗೆ ನಿನ್ನದೇಪ್ರತಿಕ್ಷಣ ಮಧುರ ಚಿತ್ರಣನೆನೆಪಿನಾಂಗಳ ಅನುದಿನವು,!! ಮನವು ಕುಣಿಯಿತುಆಸೆಯ ಮುಗಿಲೇರಿಸಿ ಅನುಕ್ಷಣಭರವಸೆ ಮೂಡಿಸಿತು ಅನುರಾಗದಲಿ.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಇಂದೇಕೊ!” ಇಂದೇಕೊ ಈ ಅಕ್ಷರಗಳುಪದಗಳಾಗದೆ ಕಾಡುತಿವೆಲೇಖನಿಗೂ ಸಿಗದಂತೆ ದೂರಸಾಗುತಿವೆಗೀಚಿದರೂ ಮತ್ತಷ್ಟುಗೀಚುಗಾಚು ಹಾಕಿಸಿಕೊಳ್ಳುತಿವೆಹಾಳೆಯ ಹರಿಯಲು ಹೊರಟರೂಅದಕ್ಕೂ ಹಠವ ಮಾಡುತಿವೆಸಾಲೊಂದ ಮುಂದೆ ಹೋಗದಂತೆರಚ್ಚೆ ಹಿಡಿದಿವೆಪುಟ್ಟ ಕಂದನಂತೆ ಬಿಡದೆ ಆಗಾಗಬಡಿಸಿಕೊಂಡವರಂತೆ ಮಿಡುಕಿಅಳುತಿವೆಸಾಕು ನಿಮ್ಮ ಸಹವಾಸ ಎಂದರೂಬಿಡದೆ ಬೆನ್ನ ಹತ್ತಿವೆಬೇಕೆಂದಾಗ ಬರೆಯಲು ಕುಳಿತರೆಮರೆವಿನೂರಿಗೆ ಪ್ರಯಾಣ ಬೆಳೆಸಿವೆಅಂದುಕೊಂಡಿದ್ದನೆಲ್ಲ ಅದಲುಬದಲಾಗಿಸಿವೆತಿಪ್ಪರಲಾಗ ಹಾಕಿದರೂ ಅದೇಕೋಮೊದಲು ನೆನಪಾದಂತೆ ನೆನಪಿಗೆಬರದೆ ಪ್ರೇಮಿಯಂತೆ ಸತಾಯಿಸಿವೆಇಂದೇಕೊ ಈ ಅಕ್ಷರಗಳು ಕಾಡಿವೆಕಾಡಿಸುತಿವೆ,ಕಾಲೆಳೆಯುತಿವೆಶಬ್ಧ ಭಂಡಾರ ಖಾಲಿಯಾದಂತಭಾವವ ಭಾಸವಾಗುವಂತೆ ಮಾಡಿವೆಹಠ ನಿಮಗಷ್ಟೇ ಇದೆಯೋ ನನ್ನಲ್ಲೂಹಠ ಇದೆ ಏನೋನೋಡಿಯೇ ಬಿಡುವಾ ನೀವಾ!? ನಾವಾ?ನಾನು ಮತ್ತು ನನ್ನ ಲೇಖನಿ…! ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!” Read Post »

ಕಾವ್ಯಯಾನ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ”

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ತಾಯ್ತನ” ಜೀವಸಂಕುಲದ ತಾಯ್ತನದವಿಶ್ವದ ತತ್ವವೇ ಅವ್ವಮಾನವ ಜನ್ಮದ ಜೀವನದಸಾರದ ಸತ್ವವೇ ಅವ್ವ|| ಸೃಷ್ಟಿಕರ್ತನ ಲೀಲೆ ಭುವಿಯಅತ್ಯದ್ಭುತ ಸೃಷ್ಟಿದೇವ ತಾ ಇಳೆಗಿಳಿದುಬಾರದಮಮತೆಯ ವೃಷ್ಟಿ|| ಬಡವಳಿರಲಿ ಬಲ್ಲಿದಳೇ ಇರಲಿಮಕ್ಕಳಿಗೆ ಮಾತೆ ಶ್ರೇಷ್ಠಭಿಕ್ಷುಕಿ ಇರಲಿ ರಾಣಿ ಆಗಿರಲಿಮಕ್ಕಳಿಗೆ ತಾಯಿ ನಿಷ್ಠ || ಇರುವೆಯಿಂದ ಆನೆಯವರೆಗೆಅವುಗಳ ತಾಯಿ ಆಧಾರದೇವಾನುದೇವತೆಗಳಿಗೂ ಸಹಆದಿಶಕ್ತಿಯೇ ಆಶ್ರಯ|| ಮಾನವ ಜನ್ಮದ ಸಾರ್ಥಕತೆಜನ್ಮ ಕೊಟ್ಟ ಹೆತ್ತತಾಯಿಜೀವನದಲ್ಲಿ ಬದುಕಿ ಇರಲುಅನ್ನ ನೀಡಿದ ಭೂತಾಯಿ || ನೀರು ಕೊಟ್ಟ ಕಾವೇರಿ ತಾಯಿನುಡಿ ಕಲಿಸಿದ ಕನ್ನಡ ತಾಯಿನನ್ನ ಜೀವದಾತೆ ಭಾರತಮಾತೆತಮಗೆಲ್ಲರಿಗೂ ಚಿರಋಣಿ ನಾ|| ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಒಂದು ಗೆರೆ ಕಡಿಮೆಯಿದೆ..ನಿನ್ನ ಪಡೆಯುವ ನಸೀಬಿಗೆಒಂದು ಹನಿ ಕಡಿಮೆಯಿದೆ..ನಿನ್ನ ಮರೆಸುವ ಮಧುಬಟ್ಟಲಿಗೆ..!! ನೋವಿಗೆ ಹಳೆಯ ಗಿರಾಕಿಯ ಹುಸಿನಗುವ ಮನಕೆ…ಒಂದು ಉನ್ಮಾದ ಬೇಕಿದೆ,ಪುನಃ: ನಿನ್ನ ಪ್ರೀತಿಸುವ ಚಾಳಿಗೆ!! ದಿನದ ಲೆಕ್ಕಹಚ್ಚಿಟ್ಟೆನಗೆ ಹೋದೆ ದೂರಯಾನಕೆ..ಒಂದು ಶರಧಿ ಬಾಕಿಯಿದೆ,ನಿನ್ನ ಸೇರುವ ಪರಿಧಿಗೆ..!! ಸಿಕ್ಕ ಘಳಿಗೆಯನ್ನು ಸಂಭ್ರಮಿಸಲು ಬಿಡಲಿಲ್ಲ ಬದುಕು..ಒಂದು ಏಕಾಂತ ಬೇಕಿದೆ,ನಿನ್ನ ಸ್ಮರಿಸುವ ಮನಸ್ಸಿಗೆ..!! ಸೀತಾ,ರಾಮ,ಲಕ್ಷ್ಮಣರ ವನವಾಸಕ್ಕಿಂತ ದೀರ್ಘವಾಯ್ತು ನೋವುಒಂದು ವಿರಾಮ ಬೇಕಿದೆ,ನಿನ್ನ ಕಾಡುವ ಮೌನಪಾಳಿಗೆ..!! ಬಂಧನಕ್ಕೆ ಬೆನ್ನು ಮಾಡಿ ತುದಿನಗುವ ಕದ್ದವನೇ,,ಒಂದು ನೂಲಿನ ಅಂತರವಿದೆ…ನಿನ್ನ ಕೂಡುವ ಹಾದಿಗೆ..!! ಕಂಬನಿ ಕುಡಿದು ಸಾಕಾಯ್ತು ಜಯಾ,ಕೇಳಿಲ್ಲಿ ಗೆಳೆಯಾ..ಒಂದು ಕಿಡಿ ಕಡಿಮೆಯಿದೆ,ನನ್ನ ನಿನ್ನ ಒಂದಾಗಿಸುವಅಗ್ನಿಸಾಕ್ಷಿಗೆ…!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು”

ಅಮ್ಮನ ಸಂಗಾತಿ ಡಾ.ದಾನಮ್ಮ ಝಳಕಿ “ಅವ್ವ ಆಲದ ನೆರಳು” ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…!*ಅವ್ವ ಆಲದ ನೆರಳು* ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…! ಡಾ.‌ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು” Read Post »

ಕಾವ್ಯಯಾನ

ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ”

ಕಾವ್ಯ ಸಂಗಾತಿ ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ” ಜೀವ ತಂತು ದಾಟಿ ಬಂತುಹತ್ತು ಮೈಲಿಗಲ್ಲನುಗಟ್ಟಿಯಾಗಿ‌ ಸಾಗಿಸುತ್ತಬಾಳ ಸುಖದ ತೇರನು ಎರಡು ಮುತ್ತು ಮುದದಿ ಹೆತ್ತುಮಧುರ ಪ್ರೇಮ ಕಾಣ್ಕೆಗೆನೀಡಿ ನೀನೆ ಸಾಕ್ಷಿಯಾದೆಸಹಯೋಗದ ಬಾಳ್ವೆಗೆ ಕ್ಷುದ್ರ ಮೂಲದಿಂದಗಾಧಸೃಷ್ಟಿಗರ್ಭ ವಿಸ್ಮಯಎನಿತು ಬಾಳೊ ಏಸು ಒಡಲೊತನಗೆ ತಾನೆ ತನ್ಮಯ ಉದಧಿ ತಲದಿ ನಭದ ತುದಿಗೆಸಚೇತನದ ಸರಿಗಮಫಲ ಹೇತುಕ ಪರಿಣಾಮದಗೌಣ ಭಾವ ಸಂಭ್ರಮ ನಿತ್ಯ ನಲಿವ ಅಪ್ರಮೇಯಜೀವಕೋಟಿಯಂತೆಯೇನಮ್ಮದೊಂದು ಪಾಲು ಇರಲಿಜಗದ ಸಂತೆಯಂತೆಯೇ  ಸಂತೋಷಕುಮಾರ ಅತ್ತಿವೇರಿ

ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ” Read Post »

ಕಾವ್ಯಯಾನ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ”

ಕಾವ್ಯ ಸಂಗಾತಿ ನಿಂಗಮ್ಮ ಭಾವಿಕಟ್ಟಿ “ವಿಚಿತ್ರ ಅಮ್ಮ” ತಿಂಗಳೆಚ್ಚರವಿದ್ದುಬೆಳದಿಂಗಳ ಸ್ನಾನಮಾಡುವ ಅಮ್ಮ ನಕ್ಷತ್ರಗಳೊಂದಿಗೆಆಡುವ ಅಮ್ಮ ಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ  ಒಬ್ಬಳೇ ನಗುತಯಾವುದೋ ಮಂತ್ರಗುನುಗುಣಿಸುತ ಓಡಾಡುವ ಎಲ್ಲಾ ಕಾಯಿಲೆಗೂಮದ್ದು ಹೇಳುವ ಅಮ್ಮಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ ಎಲ್ಲ ಮಕ್ಕಳನ್ನುಮುಟ್ಟಿ ನಗಿಸುವಪಕ್ಕದ ಮನೆ ಗಿಡಕುನೀರು ಹನಿಸುವ ಅಮ್ಮವ್ಯಕ್ತಿ ವಸ್ತುಗಳ ಭೇದವರಿಯದೆ ಧನ್ಯವಾದ ಹೇಳುವಅಮ್ಮ ಒಮ್ಮೊಮ್ಮೆಹುಚ್ಚಿ ಎನಿಸಿ ಬಿಡುತ್ತಾಳೆ  ಹಸಿವೆಯ ಹಾಸಿಹೊದ್ದು ಎದ್ದು ಬಂದ ಆಕೆಗೆಲ್ಲರ ಹಸಿವೆಯ ಸದ್ದು ಗೊತ್ತು ಮುತ್ತಿನೊಂದಿಗೆ ಪ್ರೀತಿಬಡಿಸುವ  ವಿಚಿತ್ರ ಅಮ್ಮ ಅಲ್ಲ ಆಕೆ ಹುಚ್ಚಿ ಅಲ್ಲಮಕ್ಕಳು ನೆರೆಯವರಿಗೆಲ್ಲ ಪ್ರೀತಿ ಸಹಾಯ ಕರುಣೆಗಳಹುಚ್ಚು ಹಿಡಿಸಿದವಳು ಹೊಳೆಯುವ ಮೊದಲೇ ಹೋಗಿ ಹೊಳೆಯತೊಡಗಿದಳು ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ” Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ”

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ “ನೀ ಹೀಗೇಕೆ ಮಾಡಿದೆ” ಈ ಭೂಮಿಯ ಮೇಲೆಒಳ್ಳೆಯ ಜನರನ್ನು ಹುಟ್ಟಿಸಿಅವರ ನಡುವೆ ಕೆಟ್ಟವರನ್ನು ಸೃಷ್ಟಿಸಿಕಾಡಿಸಲು ಪೀಡಿಸಲು ಬಿಟ್ಟೆನೀ ಹೀಗೇಕೆ ಮಾಡಿದೆ… ಕಾಡಿನಲ್ಲಿ ಮುಗ್ಧ ಪ್ರಾಣಿಗಳನ್ನುಸ್ವಚ್ಛಂದವಾಗಿ ಅಲೆಯಲು ಬಿಟ್ಟೆಅವನ್ನು ಹಿಂಸಿಸಿ ತಿನ್ನಲುಕ್ರೂರ ಪ್ರಾಣಿಗಳ ಚೂಬಿಟ್ಟೆನೀ ಹೀಗೇಕೆ ಮಾಡಿದೆ… ಕೂಡಿ ಬಾಳಲು ದುಡಿದು ತಿಂದುನಲಿಯಲು,ಹಗಲನು ಸೃಷ್ಟಿಸಿದೆಕಳ್ಳಾಟ-ಅಕ್ರಮಗಳ ಮಾಡಲುಕತ್ತಲು ಕರುಣಿಸಿದೆನೀ ಹೀಗೇಕೆ ಮಾಡಿದೆ… ಪ್ರೀತಿ ಅಂತ:ಕರಣ ಮಾನವನ ಎದೆಯಲ್ಲಿ ನೆಟ್ಟೆಮನದಲ್ಲಿ ವಿಷ ಬೀಜ ಬಿತ್ತಿಕ್ರೂರಿ ಅತ್ಯಾಚಾರಿಅನಾಚಾರಿಯಾಗುವ ಮನಸನಿಟ್ಟೆನೀ ಹೀಗೇಕೆ ಮಾಡಿದೆ.. ಡಾ. ಗೀತಾ ದಾನಶೆಟ್ಟಿ, ಬಾಗಲಕೋಟೆ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ” Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” ಯಾವ ಶಿಲ್ಪಿಯೂ ಕೆತ್ತಲಾಗದಕಲಾವಿದನ ಕೈ ಚಳಕಕೂ ನಿಲುಕದಪರಮಾನಂದದ ನಿಮ್ಮ ನಗುಬದುಕಿನ ಪಾಠ ಹೇಳುತಿವೆ ನಮ್ಮೊಡನಿರುವ ಜೀವಂತ ದೇವರುಗಳುಅವರೊಡನಾಟವೇದೇವನೊಲುಮೆಯ ನೋಟಸುಖ ದುಃಖಗಳಸಮ್ಮಿಲನದ ‌ಸ್ಪೂರ್ತಿಯ ಪಾಠ ಮುಖದ ತುಂಬಾಚೈತನ್ಯದ ಚಿಲುಮೆಹೊತ್ತುಹೇಳುತಿರುವಿರಿಬಾಳೆಂಬ ಹೋರಾಟದನಗುವಿನ ಮೌಲ್ಯಬಲ್ಲವನ ಬೆಲ್ಲದ ಸವಿಮಧುರ ಮಿಲನದ ಸಂತೃಪ್ತಿ ಏನಿದ್ದರೇನ್ ಬಾಳಲಿನೆಮ್ಮದಿಯೊಂದಿಲ್ಲದಿದ್ದರೆಮಕ್ಕಳಾಟದಿ ಮೈಮರೆತುನೋವ ಮರೆತು ನಲಿವ ಕಾಣಬೇಕುಆ ಸತ್ಯ ಕಾಣುವ ಮನಸುನಮದಾಗಲಿಹರಸಿ ಹಾರೈಸಿ ಮಕ್ಕಳೇ ಶಿವಕುಮಾರ ಕೋಡಿಹಾಳ ಮೂಡಲಗಿ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” Read Post »

You cannot copy content of this page

Scroll to Top