ಶ್ರೀನಿವಾಸ್ ಕೆ ಎಂ ಕವಿತೆ-ಸಂಕ್ರಮಣ
ಕಾವ್ಯ ಸಂಗಾತಿ ಶ್ರೀನಿವಾಸ್ ಕೆ ಎಂ ಸಂಕ್ರಮಣ ಬುವಿ ಬಾನ ನಡುವೆಯೂಅವಿನಾಭಾವದ ಬಿಡಿಸಲಾರದ ನಂಟುದಕ್ಷಿಣದ ಪಂಥದಿಂದ ಉತ್ತರದ ಕಡೆಪಥ ಬದಲಿಸುವ ರವಿಯ ಸಂಕ್ರಮಣ. ಕತ್ತಲೆ ಜಗತ್ತು;ಬೆಳದಿಂಗಳ ಒನಪುತಾರೆಗಳ ನಡುವೆ;ಚಂದಿರನ ಸಖ್ಯಪಿಸುಗುಡುವ ಗಾಳಿ;ಮೈ ಕೊರೆವ ಚಳಿ ನಿನ್ನದೆ ಒಲವ ಬೆಳದಿಂಗಳು; ಸಂಕ್ರಮಣದ ಸುಗ್ಗಿಮಾಗುವುದು ಎಂದರೆ;ಅನುಭವದ ಹದ ಬೆರೆತಹಬೆಯಾಡುವ ಮುದ್ದೆ,ಕಾಳು-ಕಡ್ಡಿ, ಭತ್ತ-ರಾಗಿಒಪ್ಪ ಓರಣ; ರಾಶಿಯ ನಡುವೆ ನಗುವಮಾಮರದ ಚಿಗುರು. ಮಾಗಿ ಕಳೆಯೆ,ನವುರಾದ ಭಾವಗಳ;ಉಣ ಬಡಿಸುವ ಬುತ್ತಿತೆರೆದಷ್ಟು ಸವಿಯಲು; ಅನುಭವದ ಸ್ವಾದ!ನಿಸರ್ಗದ ಅದ್ಭುತ ಚಣ; ಅದೇ ಸುಗ್ಗಿ ಸಂಕ್ರಮಣ ಶ್ರೀನಿವಾಸ ಕೆ ಎಂ
ಶ್ರೀನಿವಾಸ್ ಕೆ ಎಂ ಕವಿತೆ-ಸಂಕ್ರಮಣ Read Post »









