ಧಾರಾವಾಹಿ ಸಂಗಾತಿ-15 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ. ಲೇ:ಸವಿತಾ ದೇಶಮುಖ ೧೯೪೭ರ ಸಮಯ… ದೇಶಕ್ಕೆ ಸ್ವಾತಂತ್ರ್ಯದ ಸುಳಿವು ಸಿಗುತ್ತಿದ್ದಂತೆಯೇ, ಜಯದೇವಿ ತಾಯಿಯವರು ಸ್ತ್ರೀಯರನ್ನು ಒಗ್ಗೂಡಿಸಿ ಸಭೆಗಳನ್ನು ನಡೆಸಲಾರಂಭಿಸಿದರು.ಸ್ವಾಭಿಮಾನಿ ಸಮಾಜ, ಸ್ತ್ರೀಯರ ಕರ್ತವ್ಯ ಮತ್ತು ಸ್ವಾತಂತ್ರ ಭಾರತದ ಬದುಕಿನ ಬಗ್ಗೆ ಊರು-ಊರುಗಳಲ್ಲಿ ಜಾಗೃತಿ ಮೂಡಿಸಿದರು. ಮನೆಯಲ್ಲಿ ಗಂಡನ ಆರೋಗ್ಯ ಸರಿಯಿಲ್ಲದಿದ್ದರೂ, ಕುಟುಂಬದ ಬೆಂಬಲದೊಂದಿಗೆ ಅವರು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡರು. ಕೊನೆಗೂ… ಆ ಮಹಾನ್ ಕ್ಷಣ ಬಂತು ಭಾರತ ಮಾತೆ ಬಿಡುಗಡೆ ಹೊಂದುವ ದಿನ ಬಂದೇಬಿಟ್ಟಿತು… ಭಾರತದ ಕೊನೆಯ ಬ್ರಿಟನ್ ವೈಸರಾಯ ಲೂಯಿಸ್ ಲಾರ್ಡ್ ಮೌಂಟ್ ಬೆಂಟನ್ ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿದ…… ೧೪-೮-೧೯೪೭ ರಂದು ದೇಶ ಸ್ವಾತಂತ್ರ್ಯವಾಗುವ ಸಂತಸದ ಮುನ್ನಾ ದಿನ…. ಅಂದು ಸಂಜೆ ತಾಯಿ ಸಂಗವ್ವನವರು, ಅಜ್ಜಿಯಂದಿರಾದ ಬಸವ್ವಬಾಯಿ ವಾರದ ಮತ್ತು ಗೌರವ್ವ ಬಾಯಿ ವಾರದ ಮುಂತಾದ ಹಿರಿಯರೊಡನೆ ಜಯದೇವಿ ತಾಯಿಯವರು ಶಿವಯೋಗಿ ಸಿದ್ದರಾಮೇಶ್ವರನ ಮಂದಿರದಲ್ಲಿ ಅವನ ಸನ್ನಿಧಿಗೆ ಬಂದರು …ಮೊಟ್ಟಮೊದಲ ಬಾರಿಗೆ ಸಿದ್ದರಾಮನ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದರು .ಇಡೀ ರಾತ್ರಿ ಅಲ್ಲಿಯೇ ಉಳಿದರು…. ಆ ಕಡೆ ದೇಶ ಸ್ವಾತಂತ್ರವಾಗುತ್ತಿದ್ದರೆ ಈಕಡೆ ಎಲ್ಲ ತಾಯಿಯಂದಿರು ಮಂದಿರದಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು. ಧ್ಯಾನ ಭಜನೆ ಜಾಗರಣೆಯು ಪ್ರಾರಂಭವಾಗಿತ್ತು. ೧೫-೮-೧೯೪೭ ರ ಸುಪ್ರಭಾತದಲ್ಲಿ ಗೌರವ್ವಬಾಯಿ ವಾರದ ಧ್ವಜಾರೋಹಣ ಮಾಡಿದರು. ಎಲ್ಲರೂ ಕೂಡಿ ಇಡೀ ಊರಿಗೆ ಊಟ ಕೊಟ್ಟರು .ಸ್ವಾತಂತ್ರದ ಸಂಭ್ರಮಾಚರಣೆ ಮಾಡಿದರು. ಸ್ವಾತಂತ್ರ್ಯ ಸಿಗುವ ಹಿಂದಿನ ದಿನದಿಂದ ಅಂದರೆ ೧೪ ರಿಂದ ೧೮ ತಾರೀಖಿನ ಮುಂಜಾನೆಯವರೆಗೂ ಮೂರು ದಿನ ಮತ್ತು ನಾಲ್ಕು ರಾತ್ರಿಗಳು ಸತತವಾಗಿ ಎಲ್ಲ ತಾಯಂದಿರು ದೇವಾಲಯದ ಆವರಣದಲ್ಲಿಯೇ ಹಗಲು ಹೊತ್ತು ಚರಕದ ಮೂಲಕ ನೂಲ ತೆಗೆಯುವ ನೇಯ್ಗಗೆ ಕಾಯಕ ಮತ್ತು ಅನ್ನದಾಸೋಹ ಮಾಡಿದರು….ರಾತ್ರಿ ಹೊತ್ತು ಸಿದ್ದರಾಮನ ಸನ್ನಿಧಿಯಲ್ಲಿ ಕಾಲ ಕಳೆದರು.ಊರಿನ ಎಲ್ಲರಿಗೂ ಅನ್ನದಾಸೋಹ ನಡೆಯಿತು.ಮೂರು ದಿನಗಳ ಕಾಲ ಸೇವೆ, ಭಕ್ತಿ ಮತ್ತು ಕಾಯಕ ಒಂದಾಗಿ ಬೆಸೆದವು. ಭಾರತಾಂಬೆಯ ಬಿಡುಗಡೆಯ ಸಂದರ್ಭವನ್ನು ಜಯದೇವಿ ತಾಯಿಯವರು ನಮ್ಮೆದುರಿಗೆ ಈ ರೀತಿಯಾಗಿ ವಿವರಿಸಿ ಹೇಳುತ್ತಿದ್ದರು……. ಭಾರತಭೂಮಿಯ ಇತಿಹಾಸದಲ್ಲಿ ಒಂದು ಹೊಸ ಬೆಳಗಿನ ಉದಯವಾಗಿತ್ತು. ಶತಮಾನಗಳ ದಾಸ್ಯದಿಂದ ಬಳಲಿದ ಜನರ ಹೃದಯಗಳಲ್ಲಿ, ಆ ದಿನ ಉದಯಿಸಿದ ಸೂರ್ಯ ಕೇವಲ ಬೆಳಕನ್ನ ಅಲ್ಲಸ್ವಾತಂತ್ರ್ಯದ ಉಸಿರಾಟಕ್ಕೆ ಉಸಿರು ತಂದನು. “ಭಾರತ ದೇಶಕ್ಕೆ ಸ್ವಾತಂತ್ರ್ಯ”……ಘೋಷಣೆ ಆಗುತ್ತಿದ್ದಂತೆ, ದೇಶದಾದ್ಯಂತ ಒಂದು ಅದ್ಭುತ ಭಾವನಾತ್ಮಕ ಅಲೆ ಹರಡಿತು.ಗ್ರಾಮದಿಂದ ನಗರವರೆಗೆ, ಶ್ರೀಮಂತರಿಂದ ಬಡವರವರೆಗೆ ಪ್ರತಿ ಹೃದಯದಲ್ಲೂ ಒಂದೇ ಮಾತು……“ನಾವು ಸ್ವತಂತ್ರರು!”ರಾತ್ರಿಯ ಮಧ್ಯದಲ್ಲಿ ರೇಡಿಯೋಗಳ ಮುಂದೆ ಕುಳಿತು ಜನರ ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಂಡವು……ಆ ಕಣ್ಣೀರು… ಅನೇಕ ಶೂರರು ವೀರರ ತ್ಯಾಗ ಬಲಿದಾನದ ಕನಸು ನೆರವೇರಿದ ಸಂತಸದ ಕಣ್ಣೀರು……!!!ಎಲ್ಲಿ ನೋಡಿದರಲ್ಲಿ ಹಬ್ಬದ ಸಂಭ್ರಮದ ವಾತಾವರಣಮಕ್ಕಳು ಯುವಕರು ಹಿರಿಯರು ಓಡಾಡುತ್ತಾ “ವಂದೇ ಮಾತರಂ” ಎಂದು ಕೂಗುತ್ತಿದ್ದರು, ಮಹಿಳೆಯರು ಮನೆ ಮುಂಭಾಗ ರಂಗೋಲಿ ಹಾಕಿ, ದೀಪ ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು, ಎಲ್ಲಹಳೆಯ ಕಷ್ಟಗಳನ್ನು ಮರೆತು ಎಲ್ಲರೂ ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದರು. ರಸ್ತೆಗಳು ಜನಸಾಗರದಿಂದ ತುಂಬಿ ಹೋಗಿದ್ದವು.ತ್ರಿವರ್ಣ ಧ್ವಜವು ಗಾಳಿಯಲ್ಲಿ ಹಾರಾಡುತ್ತಿತ್ತು…… *ಜನರ ಹೃದಯದಲಿ ಗರ್ವದ ಬಾವುಟ ಹಾರಾಡುತಿತ್ತು..*ಜನರು ನೃತ್ಯ ಮಾಡಿ, ಹಾಡಿ, ಸಿಹಿ ಹಂಚಿಕೊಂಡು ಉಲ್ಲಾಸದಲ್ಲಿ ಮುಳುಗಿದ್ದರು. ಅಂದು ಕೆಲವರು ತಮ್ಮ ಜೀವವನ್ನು ತ್ಯಾಗ ಮಾಡಿದವರನ್ನು ನೆನೆದು ಮೌನವಾಗಿ ಕಣ್ಣೀರಿಟ್ಟರು.ಸುಭಾಷ್ ಚಂದ್ರ ಬೋಸ್- ಭಗತ್ ಸಿಂಗ್ ಹೀಗೆ ಅನೇಕ ವೀರರ ಬಲಿದಾನವೇ ಈ ಸ್ವಾತಂತ್ರ್ಯದ ಬೆಲೆ ಎಂಬ ಅರಿವು ಜನರಲ್ಲಿ ಗಾಢವಾಗಿತ್ತು.ಹೃದಯಗಳಲ್ಲಿ ಒಂದೇ ಭಾವನೆ….“ಇದು ನಮ್ಮ ದೇಶ… ನಮ್ಮ ಸ್ವಾತಂತ್ರ್ಯ… ನಮ್ಮ ಭವಿಷ್ಯ!”ಆ ದಿನದ ಹರುಷವನ್ನು ಪದಗಳಲ್ಲಿ ಸಂಪೂರ್ಣವಾಗಿ ಹಿಡಿಯಲು ಸಾಧ್ಯವಿಲ್ಲ.ಅದು ನಮ್ಮ ದೇಶದ ಪುನರ್ಜನ್ಮ ಸಂದರ್ಭ….ದೇಶದ ಆತ್ಮ ಪುನಃ ಹುಟ್ಟಿದ ಕ್ಷಣ…….ಆ ಕ್ಷಣದಲ್ಲೇ ಜನರು ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡರು….ನಮ್ಮ ಭಾರತ ದೇಶವು ಅಂದಿನಿಂದಬಡತನವಿಲ್ಲದ ದೇಶ, ಸಮಾನತೆಯ ಸಮಾಜ, ಶಾಂತಿಯ ಭಾರತ ಕಟ್ಟವ ಕನಸು ಕಂಡುಕೊಳ್ಳಲಾರಂಭಿಸಿದ್ದೇವು…ಆದರೆ…ಆ ಹರುಷದ ನಡುವೆಯೇ ವಿಭಜನೆಯ ನೋವು ಕೂಡ ಎಲ್ಲ ಹೃದಯಗಳನ್ನು ಕಾಡುತ್ತಿತ್ತು. ಆದರೂ, ಆ ದಿನದ ಸಂತೋಷದ ಹೊಳೆಯು ಆ ನೋವನ್ನು ಸಹ ಮಸುಕಾಗಿಸಿತು.೧೯೪೭ ರ ಆ ದಿನ…ಭಾರತದ ಪ್ರತಿಯೊಂದು ಹೃದಯವೂ ಒಂದೇ ಲಯದಲ್ಲಿ ಹಾಡುತಿತ್ತು…….*ಜೈ ಹಿಂದ*.. ಜೈ ಹಿಂದ್… ಭಾರತ ಮಾತೆಗೆ ಜಯವಾಗಲಿ…. ಭಾರತ ಮಾತಾ ಕಿ ಜೈ ಎನ್ನುವ ಕೂಗು ಎಲ್ಲಡೇಗೂ ಕೇಳುತ್ತಿತ್ತು…….!!!! ಭಾರತೀಯರು ಸ್ವಾತಂತ್ರ್ಯದ ದಿನಗಳನ್ನು ಅನುಭವಿಸುವದ್ರಲ್ಲಿಯೇ ದೇಶಕ್ಕೆ ಒಂದು ದೊಡ್ಡ ಅಘಾತ ಕಾದಿತ್ತು ….ಸ್ವಾತಂತ್ರ ಲಭಿಸಿದ ಕೆಲವು ತಿಂಗಳೊಳಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ತೆ ಆಗಿತ್ತು……..ಈ ದುರಂತ ಜಯದೇವಿ ತಾಯಿಯವರನ್ನು ಬಹಳ ದುಃಖಕ್ಕೆ ಇಡುಮಾಡಿತ್ತು… ತಾಯಿಯವರು ಹೇಳುತ್ತಿದ್ದಂತೆ ಗಾಂಧೀಜಿಯವರು ತೀರಿಕೊಂಡಾಗ ಇಡೀ ದೇಶವೇ ಸ್ಮಶಾಣದ ಮೌನದಲಿ ಮುಳಗಿತ್ತು.. ಅಘಾತಕ್ಕೆ ಒಳಗಾಗಿತ್ತು…ಗಾಂಧೀಜಿಯವರ ಹತ್ಯೆ (೧೯೪೮ ಜನವರಿ ೩0) ದೇಶದ ಇತಿಹಾಸದಲ್ಲಿ ಅತಿ ದುಃಖಭರಿತ ಕ್ಷಣವಾಗಿತ್ತು….. ಜನ- ಮನಗಳನ್ನು ತಲ್ಲಣಗೊಳಿಸಿತು. ಜಯದೇವಿ ತಾಯಿಯವರು ಈ ಸುದ್ದಿಯನ್ನು ಕೇಳಿದಾಗ ಅವರ ಮನ ಕುಸಿದುಹೋಯಿತು. ….“ದೇಶಕ್ಕೆ ಅಹಿಂಸೆಯ ದೀಪ ಹಚ್ಚಿದ ಮಹಾತ್ಮನನ್ನು ಕತ್ತಲೆಯು ನುಂಗಿದೆ. ಅಹಿಂಸೆಯ ಪಾಠ ಹೇಳಿಕೊಟ್ಟ ಮಹಾತ್ಮರು ಹಿಂಸೆಯ ಅಟ್ಟಹಾಸಕ್ಕೆಬಲಿಯಾದರು….ಅವರು ಬದುಕಿದ್ದರೆ ನಮ್ಮ ಹಾದಿ ಬೆಳಗುತ್ತಿತ್ತು… ಈಗ ನಮ್ಮೊಳಗೆ ನಾವು ಬೆಳಕಾಗಬೇಕು.ಗಾಂಧೀಜಿಯವರ ದೇಹ ಹೋಗಿರಬಹುದು, ಆದರೆ ಅವರ ತತ್ತ್ವಗಳು ಸಾಯುವುದಿಲ್ಲ” ಎಂದು ಜನರಿಗೆ ಧೈರ್ಯ ತುಂಬಿದರು.ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು.. ಜೊತೆಗೆ ಹೃದಯದಲ್ಲಿ ಒಂದು ದಿಟ್ಟ ಸಂಕಲ್ಪ ಹುಟ್ಟಿತು….. ಗಾಂಧೀಜಿಯ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗುವ ಪಣತೊಟ್ಟರು. ದೇಶದಾದ್ಯಂತ .. ಜನರ ನೋವು ಆಕ್ರೋಶದಲಿ ಮೂಳಗಿರುವುದನ್ನು ನೋಡಿದಾಗ….. ಗಾಂಧೀಜಿಯವರು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದು ತೋರುತ್ತಿತ್ತು….“ಇನ್ನು ಮುಂದೆ ದೇಶಕ್ಕೆ ದಾರಿ ತೋರುವರು ಯಾರು?! ಎಂಬ ಪ್ರಶ್ನೆ ಜನರನ್ನು ಕಾಡಿತು.ಹೊಸತಾಗಿ ಸಿಕ್ಕ ಸ್ವಾತಂತ್ರ್ಯದ ಸ್ಥಿರತೆಗೆ ಬಗ್ಗೆ ಯೋಚಿಸಿ ಜನರಲ್ಲಿ ಭಯ ಉಂಟಾಯಿತು. ಜೊತೆ ಜೊತೆಗೆ ಧರ್ಮ, ಜಾತಿ ಭೇದಗಳಿಂದ ದೂರ ಇರಬೇಕು ಎಂಬ ಅರಿವು ಮೂಡಿಸುವ ಸಲುವಾಗಿಗ್ರಾಮಗಳಲ್ಲಿ, ನಗರಗಳಲ್ಲಿ ಶೋಕ ಸಭೆಗಳು ನಡೆದಸಿದರು….. ಗಾಂಧೀಜಿಯವರು ಬೋಧಿಸಿದ ಅಹಿಂಸೆ, ಸತ್ಯದ ಮಾರ್ಗವನ್ನು ಮತ್ತೆ ನೆನಪಿಸಿಕೊಟ್ಟರು .ಜನರು ತಮ್ಮೊಳಗಿನ ನಾಯಕತ್ವವನ್ನು ಹುಡುಕಲು ಪ್ರೇರೇಪಿಸಿದರು.“ನಾವು ಗಾಂಧೀಜಿಯವರಂತೆ ಬದುಕಬೇಕು” ಎಂಬ ಮನೋಭಾವನ್ನು ಬೆಳೆಸಲು ಸತತವಾಗಿ ಪ್ರಯತ್ನಿಸಿದರು .ಜಯದೇವಿ ತಾಯಿಯವರು ಜನರನ್ನು ಉದ್ದೇಶಿಸಿ“ಗಾಂಧೀಜಿಯವರ ರಕ್ತದ ಪ್ರತಿಯೊಂದು ಹನಿ ನಮ್ಮ ಹೃದಯದಲ್ಲಿ ದೇಶಭಕ್ತಿಯ ಬೀಜವಾಗಬೇಕು.ಕೋಪದಿಂದ ಅಲ್ಲ, ಪ್ರೀತಿಯಿಂದ ಈ ದೇಶವನ್ನು ಕಟ್ಟೋಣ…..ಗಾಂಧೀಜಿಯವರ ಹತ್ಯೆ ಕೇವಲ ಒಬ್ಬ ಮಹಾನ್ ವ್ಯಕ್ತಿಯ ಮರಣವಲ್ಲ,ಅದು ಒಂದು ಯುಗದ ಅಂತ ಆದರೆ ಮತ್ತೊಂದು ಯುಗದ ಆರಂಭವೂ ಹೌದು …. ಜನರು ಅವರ ಮಾರ್ಗವನ್ನು ಅನುಸರಿಸಲು ಪ್ರೇರೇಪಿತವಾಗು ಕ್ಷಣ ಬಂದೋದಗಿದೆ .ನಾವೆಲ್ಲರೂ ಸೇರಿ ಭಾರತ ಮಾತೆಯ ಸೇವೆ ಗ್ಯ್ಯೋಣ ಎಂದು ಸಾರಿದರು. ಗಾಂಧೀಜಿಯವರ ಹತ್ಯೆಯಾದ ಸಮಯದಲ್ಲಿ ಜಾತಿ ಮತಗಳ ಮಧ್ಯೆ ಕಲಹ ಪ್ರಾರಂಭವಾಗಿತ್ತು ಸಾಮರಸ್ಯ ಕಳೆದು ಹೋಗಿದ್ದು ಬಹುತೇಕ ಜನರು ಜಾತಿಗಲಭೆ ನಡೆಯುತ್ತಿದ್ದವು ಅಲ್ಲಲ್ಲಿ ಭಾವಿಸಿ ತಾಯಿಯವರು ಸಹನೆ ಸಾಮರಸ್ಯದಂತ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಕೊಳ್ಳುವಲ್ಲಿ ಪ್ರಯತ್ನ ಪಟ್ಟರು. ಗಾಢ ದುಃಖ, ಆತಂಕ ಮತ್ತು ಜಾಗೃತಿ ತುಂಬಿದ ಒಂದು ಭಾಷಣವನ್ನು ಜತದೇವಿ ತಾಯಿಯವರು“ಸಹೋದರ ಸಹೋದರಿಯರೇ…”ಇಂದು ನಮ್ಮ ಹೃದಯಗಳು ಒಡೆದಿವೆ…ನಮ್ಮ ದೇಶದ ಆತ್ಮವೇ ಆಗಿದ್ದ ಮಹಾತ್ಮ ಗಾಂಧೀಜಿ ಅವರು ನಮ್ಮನ್ನೆ ಬಿಟ್ಟು ಹೋಗಿದ್ದಾರೆ.ಅವರ ದೇಹ ಕೊನೆಗೊಂಡಿರಬಹುದು… ಆದರೆ ಅವರ ಚಿಂತನೆ, ಅವರ ಅಹಿಂಸೆಯ ಮಾರ್ಗ ಯಾವತ್ತೂ ಸಾಯುವುದಿಲ್ಲ.ಇಂತಹ ಸಮಯದಲ್ಲಿ, ಕೆಲವರು ಜಾತಿ-ಧರ್ಮದ ಹೆಸರಿನಲ್ಲಿ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.ಆದರೆ ನಾನು ಒಂದು ಪ್ರಶ್ನೆ ಕೇಳುತ್ತೇನೆಗಾಂಧೀಜಿ ಅವರು ತಮ್ಮ ಪ್ರಾಣವನ್ನೇ ಕೊಟ್ಟದ್ದು ಏಕೆ?ಅವರು ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣ… ಎನ್ನದೇ“ನಾವು ಎಲ್ಲರೂ ಭಾರತೀಯರು” ಎಂದು ಬದುಕಿದರು…ಅದೇ ಮಾತನ್ನು ಅವರು ಕೊನೆಯ ಉಸಿರಿನಲ್ಲೂ ಹೇಳಿ ಹೋಗಿದ್ದಾರೆ.ಇಂದು ನಾವು ಜಗಳ ಮಾಡಿದರೆ…ಅದು ಗಾಂಧೀಜಿಯವರ ಆತ್ಮಕ್ಕೆ ನೋವು ಕೊಡುತ್ತದೆ.ಅವರು ನಮಗೆ ತೋರಿಸಿದ ದಾರಿ — ಪ್ರೀತಿ, ಸಹನೆ, ಸೌಹಾರ್ದ — ಅದನ್ನೇ ನಾವು ಅನುಸರಿಸಬೇಕು.ಜಾತಿ ಎನ್ನುವುದು ನಮ್ಮ ನಡುವೆ ಗೋಡೆ ಕಟ್ಟಲು ಅಲ್ಲ…ಅದು ವೈವಿಧ್ಯದ ಸುಂದರತೆಯನ್ನು ಅರಿಯಲು.ಇಂದು ನಾನು ನಿಮಗೆ ವಿನಂತಿ ಮಾಡುತ್ತೇನೆ ಕೋಪ ದ್ವೇಷ ಕಲಹವನ್ನು ಬಿಡಿ…ಹೃದಯವನ್ನು ತೆರೆದುಕೊಳ್ಳಿ…ಒಬ್ಬರನ್ನೊಬ್ಬರು ಅಪ್ಪಿಕೊಳ್ಳಿ…ಗಾಂಧೀಜಿ ಜೀವಂತವಾಗಿರುವುದು ನಮ್ಮ ನಡೆ-ನುಡಿಯಲ್ಲಿ…ನಮ್ಮ ಒಗ್ಗಟ್ಟಿನಲ್ಲಿ… ನಮ್ಮ ಮಾನವೀಯತೆಯಲ್ಲಿ…ನಾವು ಒಟ್ಟಿಗೆ ನಿಂತರೆ… ಭಾರತ ಸದಾ ಶಕ್ತಿಶಾಲಿಯಾಗಿರುತ್ತದೆ. “ಸಿದ್ದರಾಮ ಬಸವ| ಬುದ್ಧ ಗಾಂಧೀಜಿಯುತಿದ್ದಲು ಜನ ಮನ ದುಡದಾರ- ಲೋಕವೂಶುದ್ಧ ಸದಾಚಾರಿ ಮಾಡಲು!!”
ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಬಸವೋತ್ತರ ಕಾಲದ ಶರಣರು ಮತ್ತು ಶಿವಯೋಗ ಸಾಧಕರಲ್ಲಿ ಪರಮ ಪೂಜ್ಯ ಶ್ರೀ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಕಾರ್ಯ ಅವಿಸ್ಮರಣೀಯ.ಇವರ ಕರ ಸಂಜಾತ ಹಾಗೂ ಅವರ ಪಡಿನೆರಳಿನಂತೆ ಬದುಕಿ ಬಸವ ಜಯಂತಿ ಆಚರಣೆ ಆರಂಭಿಸಿದ ಧೀಮಂತ ಶಿವಯೋಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು. ಕಾಶಿ ಬಿಟ್ಟು ಅಥಣಿಗೆ ಬಂದ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು. ಅವತ್ತಿನ ಶ್ರೇಷ್ಠ ಲಿಂಗಾಯತ ಧರ್ಮದ ಹಿರಿಯ ಸ್ವಾಮಿಗಳು ನಾಯಕನೂರಿನ ಕಾಶಿನಾಥ ಶಾಸ್ತ್ರಿಗಳು ಅವರಿಗೆ ಭೇಟಿ ಮಾಡಿ ತಾವು ಕಾಶಿಗೆ ಹೋಗ ಬೇಕೆನ್ನುವ ಪ್ರಬಲ ಇಚ್ಛೆಯನ್ನು ಮೃತ್ಯುಂಜಯ ಸ್ವಾಮಿಗಳು ವ್ಯಕ್ತ ಪಡಿಸುತ್ತ ಕಾಶಿಗೆ ಹೋಗುವ ತಯಾರಿ ಬಗ್ಗೆ ಕಾಶಿನಾಥ ಶಾಸ್ತ್ರಿಗಳನ್ನು ಕೇಳಿದರು. ಆಗ ಶ್ರೀ ಕಾಶಿನಾಥ ಶಾಸ್ತ್ರಿಗಳು ದೂರದ ಊರಿಗೆ ಹೋಗಿ ತಿಳಿಯದ ಸಂಸ್ಕೃತ ಭಾಷೆ ಕಲಿಯುವಕ್ಕಿಂತ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಹತ್ತಿರ ವಚನ ಸಾಹಿತ್ಯ ಮತ್ತು ಶಿವಯೋಗ ಸಾಧನೆ ಮಾಡು ಎಂದು ಸಲಹೆ ನೀಡಿದರಂತೆ. ಅವರ ಸಲಹೆ ಮತ್ತು ವಿಚಾರದಂತೆ ಶ್ರೀ ಮೃತ್ಯುಂಜಯ ಸ್ವಾಮಿಗಳು ನೇರವಾಗಿ ಅಥಣಿಗೆ ಬಂದು ತಮ್ಮ ಅಧ್ಯಯನ ವಿದ್ಯಾಭ್ಯಾಸದ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಆಗ ಅಥಣಿ ಶ್ರೀ ಗಳು ಇವರನ್ನು ಪರೀಕ್ಷಿಸಲೆಂದು ಬಾಲಕನತ್ತ ಹೆಚ್ಚು ಗಮನ ನೀಡದೆ ಸುಮ್ಮನಾದರು. ಏಕೋ ಬೇಸರಗೊಂಡ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಲ್ಲಿರುವ ಮಠದ ಸೇವಕರನ್ನು ವಿಚಾರಿಸುತ್ತಾ, ಯಾವ ಕೆಲಸ ಮಾಡಿದರೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಕೇಳಿದರು. ಆಗ ಮಠದ ಸ್ಥಳೀಯರು ಶಿವಯೋಗಿಗಳಿಗೆ ಬೆಳಿಗ್ಗೆ ಐದಕ್ಕೆದ್ದು ಮಠದ ಅಂಗಳ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವುದು ಅವರಿಗೆ ಪ್ರೀತಿಯ ಕೆಲಸ. ನೀನು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಈ ಕೆಲಸ ಮಾಡಿದರೆ, ನಿನ್ನನ್ನು ಶಿವಯೋಗಿಗಳು ಶಿಷ್ಯನನ್ನಾಗಿ ಸ್ವೀಕರಿಸುವರು ಎಂದು ಸಲಹೆ ನೀಡಿದರಂತೆ. ಇದರಿಂದ ಪುಳುಕಿತನಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸಿ ಮತ್ತೆ ತಮ್ಮ ಕೋಣೆಗೆ ಹೋಗಿ ಮಲಗಿದರು. ಬೆಳಿಗ್ಗೆ ಎಂದಿನಂತೆ ಎದ್ದು ಮಠದ ಕಸ ಹೊಡೆಯಲು ಪೂಜ್ಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಇದ್ದಾಗ ಮಠವು ಸಂಪೂರ್ಣ ಸ್ವಚ್ಛವಾಗಿತ್ತು. ಹಿತ್ತಲದಲ್ಲಿ ನೀರು ಕಾಯಿಸಲು ಹೋದಾಗ ಅಲ್ಲಿ ಹಂಡೆಯಲ್ಲಿ ನೀರು ಬೆಂಕಿಯಾಗಿದ್ದವು. ಯಾರೋ ಈ ಕಾರ್ಯ ಮಾಡಿರ ಬಹುದೆಂದು ಶಿವಯೋಗಿಗಳು ಅಂದು ತಾವು ಕಾಯಕ ಮಾಡದ ಕಾರಣ ಎರಡೂ ಹೊತ್ತು ಪ್ರಸಾದ ಸೇವಿಸದೆ ಮಲಗುತ್ತಾರೆ. ಮತ್ತೆ ಬೆಳಿಗ್ಗೆ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಬೆಳಗಿನ ಜಾವದ ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವ ಕಾರ್ಯ ಮುಂದುವರೆಸುತ್ತಾರೆ. ಮತ್ತೆ ಎಂದಿನಂತೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ನಿರಾಸೆಯಾಗುತ್ತಾರೆ. ಮತ್ತೆ ಪ್ರಸಾದ ಸೇವಿಸದೆ ಮಠದ ಇತರ ಕಾರ್ಯ ಮಾಡುತ್ತಾ ಇಷ್ಟ ಲಿಂಗ ಪೂಜೆ ಸಲ್ಲಿಸಿ ಮಲಗುತ್ತಾರೆ. ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಉಪವಾಸದ ಕೆಲಸ ಮಠದ ಯಾರಿಗೂ ಗೊತ್ತಾಗುವುದಿಲ್ಲ. ಒಂದು ದಿನ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಈ ಕೆಲಸ ಮಾಡುತ್ತಾರೆ ಎಂದು ನೋಡ ಬೇಕೆಂದು ರಾತ್ರಿಯಿಡಿ ಎಚ್ಚರವಿದ್ದು ಯಾರು ಈ ಕಾರ್ಯವನ್ನು ಮಾಡುತ್ತಾರೆ ಎಂದು ನೋಡುತ್ತಾ ಕುಳಿತು ಕೊಳ್ಳುತ್ತಾರೆ. ಬೆಳಿಗ್ಗೆ ಬಾಲಕ ಮತ್ತೆ ಮಠದ ಕಸವ ಹೊಡೆಯಲು ಮುಂದಾದಾಗ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕನ ಕೈಯನ್ನು ಗಟ್ಟಿಯಾಗಿ ಹಿಡಿದು ಏಕೆ ಹೀಗೆ ಅಪರಾತ್ರಿಯಲ್ಲಿ ನೀನು ಕಸವನ್ನು ಹೊಡೆಯುತ್ತಿ ಎಂದು ಗದರಿಸಿದಾಗ ಬಾಲಕ ಭಯ ಪಟ್ಟು ಜೋರಾಗಿ ಅಳತೊಡಗಿದನು. ಆಗ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳನ್ನು ಅಪ್ಪಿ ಮುದ್ದಾಡಿ ಅವರಿಗೆ ಲಿಂಗ ದೀಕ್ಷೆ ನೀಡಿ ಅಪ್ಪಟ ಬಸವ ತತ್ವ ಅಧ್ಯಯನ ಮಾಡಲು ಅವಕಾಶ ಮಾಡಿ ಕೊಡುವುದಲ್ಲದೆ. ಧಾರವಾಡದ ಡಬಗಳ್ಳಿ ಮಠದ ಉಸ್ತುವಾರಿ ನೋಡಿಕೊಳ್ಳಲು ಹೇಳುತ್ತಾರೆ. ಮುರುಘಾ ಪರಂಪರೆಯ ಶ್ರೇಷ್ಠ ಶಿವಯೋಗ ಸಾಧಕರನ್ನಾಗಿ ಮಾಡಿ ಧಾರವಾಡ ಮುಳುಗುಂದ ಮುಂತಾದ ಅನೇಕ ಮಠಗಳಲ್ಲಿ ಪೂಜ್ಯರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಗುರು ಲಿಂಗ ಜಂಗಮ ಸೇವೆ ಸಲ್ಲಿಸಿದ ಅಪ್ರತಿಮ ಶರಣ ಸಂಸ್ಕೃತಿ ಪ್ರಚಾರಕರಾಗಿ ಪ್ರತಿಯೊಬ್ಬರಿಗೂ ಆದರಣೀಯರಾಗಿದ್ದಾರೆ. ಧಾರವಾಡದ ಶ್ರೀ ಮುರುಘಾ ಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳವರು (ಮೃತ್ಯುಂಜಯ ಅಪ್ಪಗಳು) ಕರ್ನಾಟಕದ ಶರಣ ಪರಂಪರೆಯ ಉಜ್ವಲ ಚೇತನಗಳಲ್ಲೊಬ್ಬರು. ಅವರ ಜೀವನ ಚರಿತ್ರೆಯ ಅರಿತುಕೊಳ್ಳುವುದು ನಮ್ಮ ಪುಣ್ಯದ ಕೆಲಸ. 1. *ಜನನ ಮತ್ತು ಬಾಲ್ಯ* ಜನನ: ಇವರು 1888ರ ಏಪ್ರಿಲ್ 9 ರಂದು ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಾಯಿ: ಇವರ ತಂದೆ ಕಂತಯ್ಯ ಸ್ವಾಮಿ ಮತ್ತು ತಾಯಿ ಚೆನ್ನವೀರಮ್ಮ. ಬಾಲ್ಯ: ಇವರ ಪೂರ್ವಾಶ್ರಮದ ಹೆಸರು ಮೃತ್ಯುಂಜಯ. ಬಾಲ್ಯದಲ್ಲೇ ಸಂಗೀತ ಮತ್ತು ಆಧ್ಯಾತ್ಮಿಕತೆಯತ್ತ ವಿಶೇಷ ಒಲವು ಹೊಂದಿದ್ದರು. 2. *ಶಿಕ್ಷಣ ಮತ್ತು ಸನ್ಯಾಸ* ಪ್ರಾಥಮಿಕ ಶಿಕ್ಷಣದ ನಂತರ, ಇವರು ಗದಗದ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಪ್ರಭಾವಕ್ಕೆ ಒಳಗಾದ ಇವರು, ಅವರಿಂದ ಲಿಂಗದೀಕ್ಷೆ ಮತ್ತು ಸನ್ಯಾಸ ಸ್ವೀಕರಿಸಿದರು. 3. ಧಾರವಾಡದ ಮುರುಘಾ ಮಠಕ್ಕೆ ಆಗಮನ (1916) ಮೃತ್ಯುಂಜಯ ಸ್ವಾಮಿಗಳು 1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಬಂದಾಗ, ಮಠವು ಕೇವಲ ಒಂದು ಸಣ್ಣ ಕೊಠಡಿಯಂತಿದ್ದು, ಸುತ್ತಲೂ ಮುಳ್ಳಿನ ಕಂಟಿಗಳಿಂದ ಕೂಡಿತ್ತು. ತಮ್ಮ ಸಂಕಲ್ಪಶಕ್ತಿಯಿಂದ ಪಾಳುಬಿದ್ದಿದ್ದ ಮಠವನ್ನು ಇಂದು ನಾವು ನೋಡುತ್ತಿರುವ ಭವ್ಯ ದಾಸೋಹ ಕೇಂದ್ರವಾಗಿ ಪರಿವರ್ತಿಸಿದರು. 4. ಪ್ರಮುಖ ಕಾರ್ಯಗಳು ಮತ್ತು ಸಾಧನೆಗಳು ತ್ರಿವಿಧ ದಾಸೋಹ: ಅನ್ನ, ಜ್ಞಾನ ಮತ್ತು ಅಧ್ಯಾತ್ಮ – ಈ ಮೂರೂ ದಾಸೋಹಗಳನ್ನು ಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದರು. ಉಚಿತ ಪ್ರಸಾದ ನಿಲಯ (1917): ಬಡ ವಿದ್ಯಾರ್ಥಿಗಳಿಗಾಗಿ 1917ರಲ್ಲಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಇಂದು ಈ ನಿಲಯಕ್ಕೆ 100 ವರ್ಷಗಳ ಇತಿಹಾಸವಿದ್ದು, ಸಾವಿರಾರು ಬಡ ಮಕ್ಕಳು ಇಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿದ್ದಾರೆ. 63 ಪುರಾತನರ ವಸತಿ ನಿಲಯ: ಶಿವಶರಣರ ನೆನಪಿಗಾಗಿ 63 ಕೊಠಡಿಗಳ ವಸತಿ ನಿಲಯವನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದರು. ಅಖಿಲ ಭಾರತ ಶಿವಾನುಭವ ಸಂಸ್ಥೆ: ಶರಣ ತತ್ವಗಳ ಪ್ರಸಾರಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಿ, ನಾಡಿನಾದ್ಯಂತ ಧಾರ್ಮಿಕ ಜಾಗೃತಿ ಮೂಡಿಸಿದರು. 5. ವ್ಯಕ್ತಿತ್ವ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೃತ್ಯುಂಜಯ ಅಪ್ಪಗಳು, ಯಾರೇ ಮಠಕ್ಕೆ ಬಂದರೂ ಪ್ರಸಾದ ಮಾಡದೆ ಕಳುಹಿಸುತ್ತಿರಲಿಲ್ಲ. ಇವರು ಕೇವಲ ಧಾರ್ಮಿಕ ಗುರುವಾಗಿರದೆ, ಶಿಕ್ಷಣ ತಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ನಾಡಿನ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಬಯಲಲ್ಲಿ ಬಯಲಾದರು 1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಆಗಮಿಸಿದ ಅವರು, ಸುಮಾರು 48 ವರ್ಷಗಳ ಕಾಲ ಮಠದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಮಠವನ್ನು ನಾಡಿನ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದರು. ಧಾರವಾಡದ ಮುರುಘಾ ಮಠದ ಕೀರ್ತಿಶೇಷರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು (ಮೃತ್ಯುಂಜಯ ಅಪ್ಪಗಳು) 1964ರ ಜೂನ್ 16 ರಂದು ಲಿಂಗೈಕ್ಯರಾದರು. ಡಾ ಡಿ ಸಿ ಪಾವಟೆ ಅವರು ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪಿಸಿ ಜ್ಞಾನ ದಾಸೋಹ ಮಾಡಿದ್ದಾರೆ. ಅವರಿಗೆ ಪೂರಕವಾಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು ಅನ್ನ ದಾಸೋಹ ನೀಡಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಬಡ ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ ಸಂಕಷ್ಟ ನಿವಾರಿಸಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಅವರ ಉಜ್ವಲ ಭವಿಷ್ಯದ ರೂವಾರಿಯಾದರು. ಇವರ ನಂತರ ಪೀಠವನ್ನಲಂಕರಿಸಿದ ಶ್ರೀ ಮಹಾಂತ ಅಪ್ಪಗಳು ಮೃತ್ಯುಂಜಯ ಅಪ್ಪಗಳ ಹಾದಿಯಲ್ಲೇ ನಡೆದು ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು __________________________ ಡಾಶಶಿಕಾಂತ ಪಟ್ಟಣ ರಾಮದುರ್ಗ
ಧಾರಾವಾಹಿ ಸಂಗಾತಿ-21 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆ ಕಟ್ಟೆ ಬಿಸಿಯೆಣ್ಣೆಯದು ಭಕ್ತಿರಸದಲಿ ತೋಯ್ದು ಸಿರಿಗಂಧವಾಯ್ತು! ಮಡದಿಯೊಂದಿಗಿನ ಮದನಕೇಳಿಯಿಂದ ಸಂತೃಪ್ತನಾಗಿದ್ದ ಸುಧನ್ವ ನಗುನಗುತ್ತಾ ಯುದ್ಧರಂಗದೆಡೆಗೆ ಹೊರಟಿದ್ದ. ಆಗಲೇ ಬಳಿಗೆ ಬಂದ ಸೇವಕರು ಅವನನ್ನು ಗಟ್ಟಿಯಾಗಿ ಹಿಡಿದು, ಎರಡೂ ಕೈಗಳನ್ನು ಜೊತೆಸೇರಿಸಿ ಹಗ್ಗದಿಂದ ಕಟ್ಟಿ, ಕಳ್ಳನನ್ನು ಎಳೆದುಕೊಂಡು ಬರುವಂತೆ ಭರದಿಂದ ತಂದುನಿಲ್ಲಿಸಿದರು ಹಂಸಧ್ವಜನ ಮುಂದೆ. ಸೇವಕರಿಗೆ ಆ ಬಗೆಯ ಆದೇಶವನ್ನು ಕೊಟ್ಟದ್ದು ಹಂಸಧ್ವಜನೇ. ಸೇನೆಯಲ್ಲಿ ಮಗ ಸುಧನ್ವನನ್ನು ಕಾಣದೆ ತವಕಿಸುತ್ತಿದ್ದ ಅವನು ಮಗ ಎಲ್ಲಿದ್ದರೂ ಎಳೆದುಕೊಂಡು ಬರಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದ್ದ. ಅವರು ಅದೇ ರೀತಿಯಲ್ಲಿ ಎಳೆದುಕೊಂಡು ಹೋಗಿದ್ದರು ಸುಧನ್ವನನ್ನು. ಯುದ್ಧರಂಗಕ್ಕೆ ಬರಲು ವಿಳಂಬವಾದುದಕ್ಕೆ ಕಾರಣವೇನೆಂದು ಅಬ್ಬರಿಸಿ ಮಗನಲ್ಲಿ ಕೇಳಿದ ಹಂಸಧ್ವಜ. ಉತ್ತಮ ರಾಜನಿಗಿರಬೇಕಾದ ಲಕ್ಷಣವದು. ತನ್ನ ಮಗನನ್ನೂ ಪ್ರಜೆಯಾಗಿ ನೋಡುವ ಭಾವ ಅವನದ್ದು. ಸುಧನ್ವ ನಿಜ ವಿಚಾರವನ್ನೇ ಅರುಹಿದ. “ಸಂತಾನವನ್ನು ಬಯಸಿದ ಸತಿಯ ಸತತ ಇಚ್ಛೆಗಳನ್ನು ಪೂರೈಸುವ ಕಾರಣದಿಂದಾಗಿ ತಡವಾಯಿತು” ಎಂದ. ಹಂಸಧ್ವಜ ಕೋಪೋದ್ರಿಕ್ತನಾದ. ಕೃಷ್ಣದರ್ಶನದ ಪುಣ್ಯಕಾಲವದು ಪ್ರಾಪ್ತವಾಗಿರಲು ಅನ್ಯವಿಷಯಗಳಿಗೆ ಮನಗೊಟ್ಟ ಸುಧನ್ವನದ್ದು ತಪ್ಪು ಎಂದು ಜರಿದ. ಶಂಖ ಲಿಖಿತರನ್ನು ಬರಹೇಳಿದ. ಅಲ್ಲಿಗೆ ಬಂದರು ಶಂಖ ಲಿಖಿತರು. ಸಮರದ ಸಮಯದಲ್ಲಿ ವಿಳಂಬಗೈದವರನ್ನು ಕಾದ ಎಣ್ಣೆ ಕೊಪ್ಪರಿಗೆಗೆ ಎಸೆಯಬೇಕು ಎಂಬ ಕಟ್ಟಳೆಯನ್ನು ಈಗಾಗಲೇ ಅಳವಡಿಸಿಕೊಂಡಿದ್ದರು ಈ ಪುರೋಹಿತ ಸಹೋದರರು. ಅದೇ ನಿರ್ಧಾರವನ್ನು ತಿಳಿಸಿದರು ಅರಸ ಹಂಸಧ್ವಜನಲ್ಲಿ. “ಕಾದ ಎಣ್ಣೆ ಕೊಪ್ಪರಿಗೆಗೆ ಈ ಸುಧನ್ವನನ್ನು ಎಸೆಯದಿದ್ದರೆ ನಾವು ಈ ಚಂಪಕಾಪುರದಲ್ಲಿ ಇರುವವರಲ್ಲ” ಎಂಬ ನಿಷ್ಠುರದ ನುಡಿಯನ್ನಾಡಿದರು. ಅರಸ ತಡಮಾಡಲಿಲ್ಲ. ಆಪ್ತಸಚಿವ ಎನಿಸಿಕೊಂಡ ಸುಮತಿಯನ್ನು ಕರೆದ. “ಸುಧನ್ವನ ಕೈಗಳನ್ನು ಕಟ್ಟಿ ಕುದಿವ ಎಣ್ಣೆಯಲ್ಲಿ ಎಸೆಯಬೇಕು” ಎಂಬ ಆಜ್ಞೆಯನ್ನು ನೀಡಿದ. ಅದನ್ನು ಪೂರೈಸುವ ಹೊಣೆಯನ್ನು ಸುಮತಿಗೆ ನೀಡಿದ. ರಾಜ ಘೋಷಿಸಿದ ಶಿಕ್ಷೆಯನ್ನು ರಾಜಗುವರನಿಗೆ ನೀಡುವುದಕ್ಕಾಗಿ ಸುಧನ್ವನನ್ನು ಸೆಳೆದೊಯ್ದ ಸುಮತಿ. ಕೊಪ್ಪರಿಗೆಯನ್ನು ಇರಿಸಿದ. ತೈಲವನ್ನದಕೆ ಸುರಿಸಿದ. ಒಣಕಟ್ಟಿಗೆಗಳನ್ನು ತರಿಸಿದ. ಬೆಂಕಿಯನ್ನು ಉರಿಸಿದ. ಪ್ರಿಯ ರಾಜಗುವರನಿಗೆದುರಾದ ಕಡುಗತಿಗೆ ಮರುಗಿ ಕಣ್ಣೀರ ಹರಿಸಿದ. ಸುಧನ್ವ ಸ್ವಭಾವ ಅದಾವ ಬಗೆಯದು ಎನ್ನುವುದರ ಸಂಪೂರ್ಣ ಅರಿವಿತ್ತು ಸುಮತಿಗೆ. “ಪ್ರಿಯ ರಾಜಕುಮಾರ, ನಿನಗೆ ಇಂತಹ ಗತಿ ಒದಗಿತೇ! ಅಯ್ಯೋ! ಕೃಷ್ಣನ ಭಕ್ತ ನೀನು. ಚೆಲುವ ಎನಿಸಿರುವೆ. ತಂದೆ ತಾಯಿಯರ ಬಗೆಗೆ ಅಕ್ಕರೆಯ ಭಾವವನ್ನು ಇಟ್ಟುಕೊಂಡವನು. ನೀತಿ ಅನೀತಿಗಳನ್ನು ತಿಳಿದುಕೊಂಡವನು. ಎಲ್ಲವನ್ನೂ ಅರಿತ ಜ್ಞಾನಿ. ದೈನ್ಯತೆಯಿಂದ ಬಳಿ ಬಂದವರಿಗೆ ದಾನವಿತ್ತು ಸಂತೋಷಿಸುವವನು. ಕೋಮಲ ಕಾಯದವನು. ಸುಖವನ್ನೇ ಬದುಕಿನಲ್ಲಿ ಉಂಡವನು. ಕಷ್ಟವನ್ನು ಕಾಣದವನು. ನಿನ್ನನ್ನು ಈ ಬಿಸಿಬಿಸಿಯಾದ ಎಣ್ಣೆಗೆ ನಾನು ಎಸೆಯುವುದಾದರೂ ಹೇಗೆ! ಇದಾವ ಉಭಯಸಂಕಟ ಒದಗಿತಿಂದು ಎನಗೆ!” ಎಂದು ತಾನೇ ಬಿಸಿಯೆಣ್ಣೆಯ ಕೊಪ್ಪರಿಗೆಯಲ್ಲಿ ಬಿದ್ದಂತೆ ಪ್ರಲಾಪಿಸಿದ ಆ ಆಪ್ತಸಚಿವ ಸುಮತಿ. ಸಂಕಟಪಡಬೇಕಾದ ಸುಧನ್ವ ಸಂಪೂರ್ಣ ಸೋತ ಸುಮತಿಯನ್ನು ಸಂತೈಸಿದ. “ನಾನು ಇದುವರೆಗೂ ಧರ್ಮಮಾರ್ಗವನ್ನು ತೊರೆದು ನಡೆದವನಲ್ಲ. ಯುದ್ಧದಲ್ಲಿ ಶತ್ರುಗಳೊಡನೆ ಹೋರಾಡಿ ಮಡಿಯಬೇಕಾಗಿದ್ದ ನನ್ನ ಈ ಶರೀರ ಈ ಎಣ್ಣೆ ಕೊಪ್ಪರಿಗೆಯಲ್ಲಿ ಕೊನೆಗಾಣುವಂತಾಯಿತು ಎನ್ನುವುದಕ್ಕೆ ದುಃಖವಿದೆ ನಿಜ. ಆದರೆ ಕೃಷ್ಣನ ನಾಮಸ್ಮರಣೆಗೆ ಶರಣು ಹೋಗುವೆ. ಅವನು ನನ್ನನ್ನು ಕಾಯುತ್ತಾನೆ ಎಂಬ ಭರವಸೆಯಿದೆ ನನ್ನೊಳಗೆ. ನೀನು ಅಂಜದೆ ಅರಸನ ಆಜ್ಞೆಯನ್ನು ಪೂರ್ಣಗೊಳಿಸು” ಎಂದ ಸುಧನ್ವ. ಮಾತನ್ನು ಮನ್ನಿಸಿದ ಸುಮತಿ. ಸುಧನ್ವನನ್ನು ಎತ್ತಿದ ಆತ ಕುದಿಯುತ್ತಿರುವ ಎಣ್ಣೆಯೊಳಗೆ ಅವನನ್ನು ಎಸೆದ. ರಾಜ ಪರಿವಾರದವರೆಲ್ಲಾ ಅಲ್ಲೇ ನೆರೆದಿದ್ದರು. ತಮ್ಮ ದೇಹವೇ ಕುದಿಯಿತೇನೋ ಎನ್ನುವಂತೆ ಮರುಗಿದರು. ಈ ಬಗೆಯ ಸಾವು ಒದಗಿಬಂತೇ ಸುಧನ್ವನಿಗೆ! ಎಂದು ಅಳುಮಳೆಯನ್ನು ಕರೆದರು. ಅದೆಂತು ಈ ಬಗೆಯ ಆಜ್ಞೆ ಕೊಟ್ಟನೋ ಆ ಅರಸ ಎನ್ನುತ್ತಾ ದೊರೆಯ ಕಠಿಣತೆಯ ನೆನೆದು ಕರಗಿದರು. ಕುದಿವ ಎಣ್ಣೆಯೊಳಗೆ ಬಿದ್ದ ಸುಧನ್ವ ಅಪ್ಪಿಕೊಂಡದ್ದು ಹರಿನಾಮ ಸ್ಮರಣೆಯನ್ನು. “ಹಿಂದೆ ರಕ್ಷಿಸಿದೆ ಅಸುರಸುತ ಪ್ರಹ್ಮಾದನನ್ನು ನೀ ಅಸುರಾರಿಯೇ. ಅಂದು ಧಾರ್ತರಾಷ್ಟçನ ದುಷ್ಟತೆಯ ಸಹಿಸದೆಯೇ ಸಭಾಪಮಾನದಲ್ಲಿ, ದ್ರುಪದಸುತೆಯ ಮಾನವನ್ನು ಕಾಯ್ದೆ ದುಷ್ಟಸಂಹಾರಕನೇ. ಇಂದು ನನಗೆ ನೀನಲ್ಲದೆ ಬೇರೆ ಇನ್ನಾರೂ ದಿಕ್ಕಿಲ್ಲ. ಕಾಪಾಡಬೇಕು ಎನ್ನನು ಓ ಕರುಣಾಳು ಕೃಷ್ಣಾ!” ಎಂದು ಮನದಲ್ಲಿಯೇ ಕೃಷ್ಣನನ್ನು ಕರೆಯುತ್ತಾ ಶ್ರೀಹರಿಯ ಧ್ಯಾನದಲ್ಲಿದ್ದನು ಸುಧನ್ವ. ಕೃಷ್ಣಕೃತ ವಿಸ್ಮಯ ಸಂಭವಿಸಿತು ಆ ಕ್ಷಣದಲ್ಲಿ! ಕೊತಕೊತನೆ ಕುದಿಯುತ್ತಿದ್ದ ಎಣ್ಣೆಯದು ಮೈಗೆ ಸೊಗಸನ್ನಿಕ್ಕುವ, ತನುವಿಗೆ ಸೊಗವನ್ನೀಯುವ ಸಿರಿಗಂಧವಾಯ್ತು ಅವನ ಪಾಲಿಗೆ. ಹೊರಗೆ ನೋಡುತ್ತಿದ್ದವರ ಕಣ್ಣಿಗದು ಕುದಿಕುದಿವ ಎಣ್ಣೆ. ಒಳಗಿದ್ದ ಸುಧನ್ವನ ಪಾಲಿಗದು ತಂಪನ್ನೀಯುವ ಬೆಣ್ಣೆ. ಅವನ ತನುವಿನ ರೋಮಗಳು ಕರಟಿಹೋಗಲಿಲ್ಲ. ಮೊಗದ ಚೆಲುವದು ಮುರುಟಿಹೋಗಲಿಲ್ಲ. ಕೊರಳಲ್ಲಿದ್ದ ತುಳಸಿ ಮಾಲೆಯದು ಬಾಡಲಿಲ್ಲ. ಅದರಲ್ಲಿದ್ದ ಕುಸುಮಗಳು ಮುದುಡಲಿಲ್ಲ. ಒಂದಿಷ್ಟೂ ಕುಂದದ ಅವನ ಮುಖ ನೆನಪಿಸುತ್ತಿತ್ತು ಪೂರ್ಣ ಅರಳಿದ ಅಂಬುಜವನ್ನು. ಹರಿನಾಮವೆಂಬ ಹರಿಗೋಲು ಅವನನ್ನು ಬಿಸಿಯೆಣ್ಣೆಯೆಂಬ ಕಷ್ಟತೊರೆಯಿಂದ ನಿರಾಳತೆಯೆಂಬ ನದಿತಟಕ್ಕೆ ತಲುಪಿಸಿತು. ನೋಡುತ್ತಿದ್ದ ಸರ್ವ ಸಜ್ಜನರ ಮೊಗದಲ್ಲಿ ಅಚ್ಚರಿಯ ಭಾವ. ಎಲ್ಲಾ ಜನರು ಬೆರಗಾದರು ಕೃಷ್ಣಮಹಿಮೆಯ ಕಣ್ಣಾರೆ ಕಂಡು. ಅಲ್ಲಿಯೇ ಇದ್ದ ಲಿಖಿತನಿಗೆ ಸಂಶಯ ಮೂಡಿತು. ಸುಧನ್ವ ಅಗ್ನಿಸ್ತಂಭನ ವಿದ್ಯೆಯಲ್ಲಿ ಪರಿಣತನಿರಬೇಕು ಎಂಬ ಸಂದೇಹ ಅವನನ್ನು ಕಾಡಿತು. ಎಳನೀರನ್ನು ಎಣ್ಣೆಗೆ ಸುರಿದರೆ ಉರಿ ಇನ್ನಷ್ಟು ಹೆಚ್ಚಾಗುತ್ತದೆ. ಇದವನಿಗೆ ತಿಳಿದಿತ್ತು. ಎಳನೀರನ್ನು ತರಿಸಿದ ಲಿಖಿತ. ಎಣ್ಣೆ ಕೊಪ್ಪರಿಗೆಗೆ ಸುರಿದ. ನಭೋಮಂಡಲವನ್ನೇ ವ್ಯಾಪಿಸುವಂತೆ ಉರಿಯೆದ್ದಿತು. ಆದರೂ ಸುಧನ್ವ ಏನೂ ಆಗದ ರೀತಿಯಲ್ಲಿ ನಗುತ್ತಲೇ ಇದ್ದ… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-35 ಮೈಸೂರು ಶಾಖೆ ಎರಡಕ್ಕೆ ಬಂದು ರಿಪೋರ್ಟ್ ಮಾಡಿಕೊಂಡಿದ್ದು ಆಯಿತು. ಮಾಮೂಲಿನಂತೆ ಇಲ್ಲಿಯೂ ಒಂದು ಕೈಯಲ್ಲಿ ಕರ್ತವ್ಯ ಹಾಜರಾಗುವ ಪತ್ರ ಇದ್ದರೆ ಮತ್ತೊಂದು ಕೈಯಲ್ಲಿ ವರ್ಗಾವಣೆ ಅರ್ಜಿ. ಈ ಬಾರಿ ಮನೆಗೆ ಹತ್ತಿರದ ಶಾಖೆ ೫ ಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದೆ. ಇಲ್ಲಿ ನನಗೆ ಮತ್ತೆ ನನ್ನ ಮೆಚ್ಚಿನ ಪಾಲಿಸಿ ಸೇವಾ ವಿಭಾಗ ಕೊಟ್ಟರು. ಪಾಲಿಸಿಯ ಪುನರುಜ್ಜೀವನ, ಅಸೈನ್ಮೆಂಟ್ ಮತ್ತು ನಾಮನಿರ್ದೇಶನ ಹಾಗೂ ಪಾಲಿಸಿಗಳ ಅಲ್ಟ್ರೇಶನ್ ಇಷ್ಟು ವಿಭಾಗಗಳ ಮೇಲ್ವಿಚಾರಣೆ ನನ್ನದು. ಈ ಮೂರು ವಿಭಾಗಗಳಿಗೂ ಒಬ್ಬೊಬ್ಬರು ಸಹಾಯಕರು ಇದ್ದರು. ನನ್ನದೇ ಬ್ಯಾಚ್ ನ ಶ್ರೀಹರಿ ಸುಬ್ರಹ್ಮಣ್ಯ ಶೋಭಾ ಮತ್ತು ಪುಟ್ಟ ಲಕ್ಷ್ಮಿ ಈ ವಿಭಾಗದ ಸಹಾಯಕರು. ಈ ಹಿಂದೆ ನಂಜನಗೂಡಿನಲ್ಲಿ ನನ್ನ ಜೊತೆ ಉನ್ನತ ಶ್ರೇಣಿ ಸಹಾಯಕರಾಗಿದ್ದ ಜಗದೀಶ್ ಅವರು ಈಗ ಆಡಳಿತ ಅಧಿಕಾರಿಯಾಗಿ ಶಾಖೆಯಲ್ಲಿ ಇದ್ದರು. ಬಹುತೇಕ ಬಹುತೇಕ ಎಲ್ಲರೂ ಮೊದಲಿನಿಂದ ಪರಿಚಯದವರೇ ಆಗಿದ್ದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸ್ವಲ್ಪವೂ ಕಷ್ಟವಾಗಲಿಲ್ಲ. ಬೇರೆ ವಿಭಾಗಗಳಿಂದ ವರ್ಗವಾಗಿ ಬಂದಿದ್ದ ಹೇಮಗೋಮತಿ ಮತ್ತು ರೇಖಾ ಮಾತ್ರ ಹೊಸ ಪರಿಚಯ ಆದರೂ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆ ಆತ್ಮೀಯತೆ ಬೆಳೆದುಬಿಟ್ಟಿತ್ತು. ನನ್ನದೇ ಬ್ಯಾಚ್ನ ಅನಿತ ಗಾಯಿತ್ರಿ ಹಾಗೂ ಶೋಭಾ ಈ ಮುಂಚೆ ಮಂಡ್ಯದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಗಾಯಿತ್ರಿ ದೇವಿ ಸಹಪಾಠಿ ಸುಮಾ ಇವರೆಲ್ಲರೂ ಇದೇ ಬ್ರಾಂಚ್ ನಲ್ಲಿ ಇದ್ದರು. ಪ್ರಸೂತಿ ರಜೆಗೆ ಹೋಗಿದ್ದ ಮಂಜುಳಾ ಸಹ ವಾಪಸ್ ಆಗಿದ್ದು ಅವಳು ಸಹ ತುಂಬಾ ಕ್ಲೋಸ್ ಆದಳು. ಈ ಮುಂಚೆ ನಾನು ಪ್ರಸ್ತಾಪಿಸಿದ ಮಂಡ್ಯ ಬ್ರಾಂಚ್ ನಲ್ಲಿದ್ದ ಪ್ರೈಮರಿ ಶಾಲೆಯ ಸಹಪಾಠಿ ಮಂಜುನಾಥ್ ಸಹ ಇಲ್ಲಿಯೇ ಇದ್ದಿದ್ದು .ಬಹಳ ವರ್ಷಗಳಿಂದ ಅವರೆಲ್ಲ ಒಟ್ಟಿಗೆ ಅದೇ ಶಾಖೆಯಲ್ಲಿ ಕೆಲಸ ಮಾಡಿದ್ದರಿಂದ ಏಕವಚನದಲ್ಲಿಯೇ ಮಾತನಾಡಿಸಿಕೊಳ್ಳುವಷ್ಟು ಆತ್ಮೀಯತೆ ಇತ್ತು ಒಂದು ರೀತಿಯ ಕೋಝೀ ವಾತಾವರಣ. ಆ ಬ್ರಾಂಚ್ ನಲ್ಲಿ ಮನೆಯ ಸದಸ್ಯರ ಹಾಗೆ ಎಲ್ಲರೂ ಹೊಂದಿಕೊಂಡು ಇದ್ದದ್ದು ತುಂಬಾ ಖುಷಿ ಕೊಟ್ಟಿತ್ತು ಇದುವರೆಗೆ ನಾನು ಕೆಲಸ ಮಾಡಿದ ಯಾವುದೇ ಶಾಖೆ ಗಿಂತ ಇಲ್ಲಿ ತುಂಬಾ ಆತ್ಮೀಯತೆಯ ಅನುಬಂಧ ಇದ್ದದ್ದು ಕಾಣಿಸುತ್ತಿತ್ತು. ಹಾಗಾಗಿ ಕೆಲಸಗಳನ್ನು ಸಹ ಹಂಚಿಕೊಂಡಿದೆ ಮಾಡಿಬಿಡುತ್ತಿದ್ದರಿಂದ ತುಂಬಾ ಸುಗಮವಾಗಿ ನಡೆಯುತ್ತಿತ್ತು. ನಂಜನಗೂಡು ಶಾಖೆ ಬಿಡುವ ಸ್ವಲ್ಪ ಮೊದಲು ನಾವು ಮಾರುತಿ ಒಮ್ಮೆ ಗಾಡಿಯನ್ನು ಖರೀದಿಸಿದವು ನಮ್ಮ ಮನೆಯವರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗಲು ಈ ವ್ಯವಸ್ಥೆ. ಆ ಸಮಯದಲ್ಲಿ ಮೊಬೈಲ್ ಗಳು ಹೆಚ್ಚು ಜನಪ್ರಿಯ ವಾಗುತ್ತಿತ್ತು ಅದೇ ಬಿಲ್ಡಿಂಗ್ನ ಒಂದು ಕಡೆ ಬಿ ಎಸ್ ಎನ್ ಎಲ್ ಸಿಮ್ ಗಳನ್ನು ಕೊಡುತ್ತಿದ್ದರು. ಸುಲಭವಾಗಿಯೇ ಸಿಮ್ ಸಿಕ್ಕಿತು .ಮೊದಲ ನೋಕಿಯಾ ಮೊಬೈಲ್ ರವೀಶ್ ಖರೀದಿಸಿದರು ಆಗ ಅದರ ಬೆಲೆ ಹತ್ತು ಸಾವಿರ ರೂಪಾಯಿಗಳು ಆಗ ಮೊಬೈಲ್ ದರಗಳು ಸ್ವಲ್ಪ ಹೆಚ್ಚೇ ಇದ್ದವು. ನನ್ನ ತಂಗಿಯ ಪತಿ ಪ್ರಸನ್ನ ಅವರಿಗೆ ಪದೋನ್ನತಿ ಆಗಿ ಉಪ ಶಾಖಾಧಿಕಾರಿಗಳಾಗಿ ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್ ಶಾಖೆಗೆ ವರ್ಗಾವಣೆ ಆಯಿತು. ಛಾಯಾ ಸಹ ಬೆಂಗಳೂರಿಗೆ ಅರ್ಜಿ ಕೋರಿದಳು ಬಹಳ ಬೇಗನೆ ಅವಳಿಗೂ ಬೆಂಗಳೂರಿನ ಸಿಎ ಬ್ರಾಂಚ್ ಗೆ ವರ್ಗ ಸಿಕ್ಕಿತು ಈಗ ಅವರು ಬೆಂಗಳೂರಿನ ಹಲಸೂರಿನಲ್ಲಿ ಮೊದಲು ನಂತರ ಸಂಜಯ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ನನಗೆ ಓಡಾಡಲು ಸಹ ಅನುಕೂಲವಾಗಿತ್ತು. ಆಫೀಸಿನ ಎದುರಿಗೆ ಬಸ್ ಸ್ಟ್ಯಾಂಡ್. ಯಾವಾಗಲಾದರೂ ಬೆಂಗಳೂರಿಗೆ ಹೋದಾಗ ಬೆಳಿಗ್ಗೆ ಎದ್ದು ಹೊರಟು ನೇರ ಆಫೀಸಿಗೆ ವಾಪಸ್ ಬರುತ್ತಿದ್ದೆ. ಹಾಗೆ ಒಮ್ಮೆ ವಾಪಸ್ ಬರುವಾಗ ಎಸ್ ಎಲ್ ಭೈರಪ್ಪನವರ ಸಹಪಾಠಿ ವೃದ್ಧರೊಬ್ಬರು ನನ್ನ ಪಕ್ಕದ ಸೀಟ್ ನಲ್ಲಿಯೇ ಕುಳಿತಿದ್ದು ದಾರಿಯುದ್ದಕ್ಕೂ ಭೈರಪ್ಪನವರ ಬಗ್ಗೆ, ಅವರ ಕೃತಿಗಳ ಬಗ್ಗೆ ಚರ್ಚೆ ಮಾಡುತ್ತಾ ಬಂದಿದ್ದು ಒಂದು ಸುಂದರ ಸವಿ ನೆನಪು. ಅವರು ಅಕ್ಕಿಹೆಬ್ಬಾಳದವರಾಗಿದ್ದು ಅಲ್ಲಿನ ಜಾತ್ರೆಗೆ ಬನ್ನಿ ಎಂದು ಆಮಂತ್ರಣವನ್ನು ಸಹ ಕೊಟ್ಟಿದ್ದರು. ನನ್ನ ಸಹಪಾಠಿ ಮಂಜುವಿನ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು ಮೊದಲಿನಿಂದ ನಮ್ಮ ಮನೆಗೆ ಬರುತ್ತಿದ್ದು ಅಮ್ಮನ ಕೈ ರುಚಿ ನೋಡುತ್ತಿದ್ದವನಿಗೆ ಆಗಲಿಂದ ಅಕ್ಕಿ ಮಸಾಲೆ ರೊಟ್ಟಿ ಎಂದರೆ ತುಂಬಾ ಇಷ್ಟ ನಾನು ಡಬ್ಬಿಗೆ ಅದನ್ನು ತಂದ ದಿನಗಳಲ್ಲೆಲ್ಲ ನನ್ನ ಡಬ್ಬಿಯನ್ನು ಅವನೇ ತೆಗೆದುಕೊಂಡು ಬಿಟ್ಟು ನನಗೆ ಕೆಳಗಿನ ಹೋಟೆಲ್ ನಿಂದ ಮಸಾಲೆ ದೋಸೆ ತರಿಸಿ ಕೊಟ್ಟುಬಿಡುತ್ತಿದ್ದ ಅದರಲ್ಲೂ ಅವರೇ ಕಾಳು ರೊಟ್ಟಿ ಮಾಡಿದಾಗಲಂತೂ ನಾನು ಅವನಿಗಾಗಿಯೇ ಪ್ರತ್ಯೇಕ ಎರಡು ರೊಟ್ಟಿ ಮಾಡಿ ಡಬ್ಬಿಯಲ್ಲಿ ತಂದುಕೊಡುತ್ತಿದೆ ಅಷ್ಟು ಖುಷಿಯಾಗಿ ತಿನ್ನುತ್ತಿದ್ದ ಜೀವನದಲ್ಲಿ ಅಷ್ಟೊಂದು ಉತ್ಸಾಹ ತುಂಬಿಕೊಂಡಿದ್ದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಂತೂ ನನಗೆ ಇಂದಿಗೂ ಅರಗಿಸಿಕೊಳ್ಳಲಾಗದ ಆಘಾತ. ಫೆಬ್ರವರಿ ತಿಂಗಳ ಮೊದಲ ಭಾಗದಲ್ಲಿ ಒಂದು ಹೊಸ ಬೆಳವಣಿಗೆ ಆರಂಭವಾಯಿತು. ಚುನಾವಣಾ ಕಚೇರಿಯಿಂದ ನಮ್ಮ ಸಿಬ್ಬಂದಿಗಳ ಪಟ್ಟಿಯನ್ನು ತೆಗೆದುಕೊಂಡು ಹೋಗಲು ಆರಂಭಿಸಿದ್ದರು. ಇದುವರೆಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಉಪಾಧ್ಯಾಯರು ಶಿಕ್ಷಕರುಗಳನ್ನು ಮಾತ್ರ ಈ ಡ್ಯೂಟಿಗೆ ತೆಗೆದುಕೊಳ್ಳುತ್ತಿದ್ದದ್ದು ಈ ಬಾರಿ ರಾಜ್ಯ ಹಾಗೂ ಕೇಂದ್ರ ಎರಡು ಕಡೆಯ ಚುನಾವಣೆಗಳು ನಡೆಯುತ್ತಿದ್ದರಿಂದ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯತೆ ಉಂಟಾಗಿದ್ದು ಬ್ಯಾಂಕುಗಳು ಹಾಗೂ ಭಾರತೀಯ ಮತ್ತು ಸಾಮಾನ್ಯ ವಿಮೆ ನೌಕರರನ್ನು ಚುನಾವಣಾ ಡ್ಯೂಟಿಗೆ ಕರೆಯುವ ಪರಿಪಾಠ ಆರಂಭವಾಯಿತು ಇಲ್ಲಿಂದ ಮೊದಲುಗೊಂಡು ಚುನಾವಣೆ ಘೋಷಣೆ ಎಂದ ತಕ್ಷಣ ನಮಗೆಲ್ಲ ದುಃಸ್ವಪ್ನಗಳು ಕಾಡಲು ಆರಂಭವಾಗಿತ್ತು. ಚುನಾವಣೆ ಹೆಸರು ಕೇಳಿದರೆ ಬೆಚ್ಚಿ ಬೀಳುವಷ್ಟು ಚುನಾವಣೆ ಕರ್ತವ್ಯಗಳ ಕಾಟ. ನಿವೃತ್ತಿಯ ಕಡೆಯ ವರ್ಷದಲ್ಲಿಯೂ ಸಹ ಈ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಬೇಕಾಯಿತು. ಏಪ್ರಿಲ್ 26 2004 ರಂದು ಚುನಾವಣೆಗಳು ನಿಗದಿಯಾಗಿತ್ತು. ಅದಕ್ಕೆ ಮುಂಚೆ ಒಂದು ವಾರದಲ್ಲಿ ತರಬೇತಿಗೆಂದು ಕರೆದಿದ್ದರು ಮೈಸೂರಿನ ಟೌನ್ ಹಾಲ್ ನಲ್ಲಿ ತರಬೇತಿ ಒಂದು ರೀತಿಯ ದೊಂಬಿಯೇ ಅದು. ಯಾವ ವಿಷಯಗಳು ನಮಗೆ ಸರಿಯಾಗಿ ಅರ್ಥವಾಗಲಿಲ್ಲ ಅವರು ಹೇಳಿಕೊಟ್ಟಿದ್ದು ಸರಿಯಾಗಿರಲಿಲ್ಲ ಎಂಬುದು ಒಂದು ಕಾರಣವಾದರೆ ಅವೆಲ್ಲವೂ ನಮಗೆ ಮೊಟ್ಟಮೊದಲಿಗೆ ಬಾರಿ ಆದ್ದರಿಂದ ಎಲ್ಲಾ ಹೊಸದು ಎನಿಸತೊಡಗಿತ್ತು. ಶಾಖೆಯ ಎಲ್ಲಾ ಬಹುತೇಕ ಮಂದಿ ಚುನಾವಣಾ ಕರ್ತವ್ಯಕ್ಕೆ ಕರೆ ಬಂದಿತ್ತು. ನನಗೆ ಎ ಪಿ ಆರ್ ಒ ಅಂದರೆ ಉಪಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಕಾರ್ಯ ಇತ್ತು .ಅಕಸ್ಮಾತ್ ಪಿ ಆರ್ ಓ ಬರಲಿಲ್ಲ ಎಂದರೆ ನಾನೇ ಆ ಕರ್ತವ್ಯವನ್ನು ನಿರ್ವಹಿಸಬೇಕಿತ್ತು, ಮೊದಲೇ ಹೆದರುವವರ ಮೇಲೆ ಕಪ್ಪೆ ಎಸೆದಂತಾಗಿತ್ತು ನನ್ನ ಪರಿಸ್ಥಿತಿ. ನಾವು ಕಾರ್ಯನಿರ್ವಹಿಸಬೇಕಾಗಿದ್ದು ಹುಣಸೂರು ತಾಲೂಕು. ಚುನಾವಣೆಯ ಹಿಂದಿನ ದಿನವೇ ಮಹಾರಾಜ ಕಾಲೇಜು ಮೈದಾನಕ್ಕೆ ಬೆಳಿಗ್ಗೆ 7 ಗಂಟೆಗೆ ಹೋಗಿದ್ದು ಅಲ್ಲಿಂದ ಏರ್ಪಾಡು ಮಾಡಿದ್ದ ಬಸ್ಗಳಲ್ಲಿ ಹೋಗಿದ್ದಾಯಿತು. ಅಲ್ಲಿ ಬೂತ್ ನಂಬರ್ ಹಾಗೂ ಕಾರ್ಯನಿರ್ವಹಿಸಬೇಕಾಗಿದ್ದ ಶಾಖೆ ಹಾಗೂ ನಾವು ಹತ್ತಬೇಕಿದ್ದ ಬಸ್ ನಂಬರ್ ತಿಳಿಸಿದರು. 12 ಗಂಟೆಗೆ ಬಸ್ ಹೊರಡುವುದು ಎಂದು ತಿಳಿಯಿತು ಅಲ್ಲಿಯೇ ಕ್ಯಾಂಪ್ ಹಾಕಿದ್ದ ಹೋಟೆಲ್ ನಲ್ಲಿ ತಿಂಡಿ ತಿಂದು ನಮ್ಮ ನಮ್ಮ ಬೂತ್ ನವರ ಪರಿಚಯ ಮಾಡಿಕೊಂಡು ಅವರಿಂದ ಸಾಮಗ್ರಿಗಳನ್ನು ಪಡೆದೆವು ವಿದ್ಯಾವರ್ಧಕ ಕಾಲೇಜಿನ ಲೆಕ್ಚರರ್ ಒಬ್ಬರು ಖಾಸಗಿ ಶಾಲೆಗೆ ಶಿಕ್ಷಕಿ ಗೀತಾ ಇನ್ನೊಬ್ಬರು ಹಾಗೂ ಉಳಿದಿದ್ದರು ಸರ್ಕಾರಿ ರಾಜ್ಯ ಸರ್ಕಾರಿ ನೌಕರರು ನಮ್ಮ ತಂಡದಲ್ಲಿ ಇದ್ದರು. ಅಂತೂ ಇಂತೂ ಹನ್ನೆರಡುವರೆಗೆ ಬಸ್ ಹೊರಟಿದ್ದು ದಾರಿಯ ಮದ್ಯ ಹುಣಸೂರಿನ ಹೋಟೆಲ್ ನಲ್ಲಿ ನಿಲ್ಲಿಸಿ ಊಟ ಮಾಡಿದೆವು. ನಮ್ಮ ಪಿ ಆರ್ ಓ ಅವರಿಗೂ ಇದೆ ಮೊದಲ ಚುನಾವಣಾ ಅನುಭವ ತುಂಬಾ ಜಾಗರೂಕತೆಯಿಂದ ವರ್ತಿಸುತ್ತಿದ್ದರು. ನಾಲ್ಕು ಗಂಟೆಯ ವೇಳೆಗೆ ನಮ್ಮನ್ನು ಬಳಿ ಬಿಟ್ಟರು ಅಲ್ಲಿ ಇಲ್ಲ ವ್ಯವಸ್ಥೆಗಳನ್ನು ಮಾಡಿ ಕೊಂಡೆವು. ರಾತ್ರಿ ಅಲ್ಲಿ ಹಳ್ಳಿಯವರೆ ಅಡುಗೆಯ ವ್ಯವಸ್ಥೆ ಮಾಡಿದ್ದರು. ನಾನು ಮತ್ತು ಗೀತಾ ಅವರು ನಾನು ತೆಗೆದುಕೊಂಡು ಹೋಗಿದ್ದ ಚಪಾತಿ ಹಾಗೂ ಹಾಗಲಕಾಯಿ ಗೊಜ್ಜುಗಳಲ್ಲಿ ರಾತ್ರಿಯ ಊಟ ಮುಗಿಸಿದೆವು .ಹಳ್ಳಿಯ ಶಾಲೆ, ಸದ್ಯ ನಮಗೆ ಶಿಕ್ಷಕರು ಉಪಯೋಗಿಸುವ ಶೌಚಾಲಯವನ್ನು ಸ್ವಚ್ಛಗೊಳಿಸಿ ಬಿಟ್ಟು ಕೊಟ್ಟಿದ್ದರು. ಆದರೆ ಸ್ನಾನಕ್ಕೆ ಮಾತ್ರ ವ್ಯವಸ್ಥೆ ಇರಲಿಲ್ಲ ಬೆಳಗಾಗುವ ಮೊದಲೇ ಸ್ನಾನ ಮಾಡಿಕೊಂಡಿದ್ದರಂತೆ .ನಮಗೆ ಮಾತ್ರ ಅಂದು ಸ್ನಾನ ಭಾಗ್ಯ ಸಿಗಲಿಲ್ಲ.ಬೆಳಿಗ್ಗೆ 7.30ಗೆ ಚುನಾವಣೆ ಆರಂಭವಾಯಿತು ಎರಡೆರಡು ಸ್ಥಾನಗಳಿಗೆ ಆದ್ದರಿಂದ ಸ್ವಲ್ಪ ಸಮಯ ಹಿಡಿಯುತ್ತಲು ಇತ್ತು ಬೆಳಿಗ್ಗೆ 7.30 ಇಂದ ಸಂಜೆ ಆರು ಗಂಟೆಯ ತನಕ ಚುನಾವಣೆಗಳು ತಿಂಡಿ ತಿನ್ನಲು ಸಹ ಬಿಡುವಾಗಲಿಲ್ಲ ನಮಗೆಲ್ಲ ಕೈ ತುಂಬಾ ಕೆಲಸ ಇದ್ದುದರಲ್ಲಿ ಪಿ ಆರ್ ಓ ಅವರೇ ಮೇಲ್ವಿಚಾರಣೆ ಮಾಡಿಕೊಳ್ಳುತ್ತ ನಾವು ಕೆಲಸ ಮಾಡುತ್ತಲೇ ತಿನ್ನುವ ಹಾಗೆ ಬ್ರೆಡ್ ಚಾ ಬಾಳೆಹಣ್ಣು ಬಿಸ್ಕತ್ತು ಇವುಗಳನ್ನು ಸರಬರಾಜು ಮಾಡಿದರು ಒಂದು ಗಂಟೆಯ ವೇಳೆಗೆ ಸ್ವಲ್ಪ ಜನಸಂದಣಿ ಕಡಿಮೆಯಾಗಿದ್ದರಿಂದ ಒಬ್ಬೊಬ್ಬರಾಗಿ ಹೋಗಿ ಊಟ ಮಾಡಿಕೊಂಡು ಬಂದೆವು .ನನಗೆ ಅಲ್ಲಿಯ ಅಡಿಗೆ ಹೇಗಪ್ಪಾ ತಿನ್ನುವುದು ಎಂದು ಚಿಂತೆ .ಆದರೆ ಬೆಳಿಗ್ಗೆ ತಂದಿಟ್ಟಿದ್ದ ಉಪ್ಪಿಟ್ಟು ಹಾಗೆ ಇತ್ತು ಅದನ್ನ ತಿಂದು ಮೊಸರನ್ನ ತಿಂದು ಹೇಗೋ ಕಥೆ ಮುಗಿಸಿದ್ದಾಯಿತು. ಸಂಜೆ ಆರು ಗಂಟೆಗೆ ಮುಕ್ತಾಯ ಎಂದಿದ್ದರು ಆ ವೇಳೆಗೆ ಇದ್ದವರನ್ನೆಲ್ಲ ಮತದಾನ ಮಾಡಲು ಅವಕಾಶ ಮಾಡಿಕೊಡಲೇಬೇಕಿತ್ತು, ಆರು ಗಂಟೆಯ ನಂತರವೂ 60 70 ಜನ ಇದ್ದರು ನಮ್ಮ ಬೂತ್ ನಲ್ಲಿ 95% ಮತದಾನ ಆಗಿತ್ತು, ಅದು ಏಳು ಗಂಟೆಯ ವೇಳೆಗೆ ಮುಗಿದು ನಾವು ಎಲ್ಲಾ ಸ್ಟೇಟ್ಮೆಂಟ್ ಗಳನ್ನು ತಯಾರಿಸಿಕೊಳ್ಳುವ ವೇಳೆಗೆ 8.30 ಆಗಿತ್ತು ಬಸ್ ಆಗ ಬಂತು ಸಣ್ಣಪುಟ್ಟ ಉಳಿದದ್ದನ್ನು ಅಲ್ಲಿಗೆ ಮುಗಿಸಿಕೊಂಡು ಎಂದು ಹೊರಟುಬಿಟ್ಟವು ಮತ್ತೆ ಹುಣಸೂರು ತಾಲೂಕು ಕಚೇರಿಯಲ್ಲಿ ತುಂಬಾ ಜನ ಸಂದಣಿ. ಏನೊಂದು ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಹೇಗೋ ನುಗ್ಗಿ ಅಂತೂ ಎಲ್ಲವನ್ನು ಸಲ್ಲಿಸುವ ವೇಳೆಗೆ ರಾತ್ರಿ 10:30 ಆಗಿ ಹೋಗಿತ್ತು. ನಂತರ ಮೈಸೂರಿಗೆ ಹೊರಡುವ ಬಸ್ನಲ್ಲಿ ಕುಳಿತು ಹೊರಟೆವು. ನಮ್ಮ ಪಿ ಆರ್ ಓ ಬಳಿ ಇದ್ದ ಮೊಬೈಲಿನಿಂದ ನನ್ನ ತಾಯಿಯ ಮನೆಯ ಲ್ಯಾಂಡ್ಲೈನ್ ಗೆ ಫೋನ್ ಮಾಡಿ ನಮ್ಮ ಪತಿಗೆ ವಿಷಯ ತಿಳಿಸಿ ಅವರು ಬಂದು ಬಸಪ್ಪ ಹಾಸ್ಪಿಟಲ್ ಬಳಿ ನನಗಾಗಿ ಕಾಯುತ್ತಿದ್ದರು. ಅಂತೂ ಇಂತೂ ನಾಳೆ ಮುಗಿಸಿ ಮನೆಗೆ ಬಂದಾಗ ಆ ದಿನ ದಾಟಿ ಹೋಗಿತ್ತು. ಈ ಶಾಖೆಯಲ್ಲಿ ಇದ್ದಾಗಲೇ ಮತ್ತೊಮ್ಮೆ ಹೈದರಾಬಾದ್ ತರಬೇತಿಗೆ ಕರೆ ಬಂತು ಅದು ಮತ್ತೆ ನಾನು ಹಾಗೂ ನಂದಶ್ರೀ ಕುಲಕರ್ಣಿ ಕಟ್ಟಿ ಜೊತೆಯಾಗಿ ಹೈದರಾಬಾದಿಗೆ ಹೋಗಿದ್ದೆವು. ಮಕ್ಕಳನ್ನು ಅವರ ತಾಯಿ ಮನೆಗೆ ಬಿಟ್ಟು ಹೋಗಬೇಕಾಗಿತ್ತು. ಮೊದಲು ಬೆಂಗಳೂರಿಗೆ ಹೋಗಿ ಅವರ ಮನೆಯಲ್ಲಿ ಬಿಟ್ಟು ನಂತರ ಹೈದರಾಬಾದ್ ಟ್ರೈನ್ ಹಿಡಿದದ್ದು ಇಂದಿನಂತೆ ಹೈದರಾಬಾದ್ ತರಬೇತಿ ತುಂಬಾ ಆಸಕ್ತಿದಾಯಕವಾಗಿ ಚೆನ್ನಾಗಿಯೂ ಇತ್ತು. ಈ ಬಾರಿ ಬರಿ ಬಿರ್ಲಾ ಮಂದಿರ ಮಾತ್ರ ನೋಡಿದ್ದು ಖರೀದಿಯೇ ಹೆಚ್ಚು. ನನ್ನ ತಂಗಿಯರಿಗೆ ಹಾಗೂ ಈಗಾಗಲೇ ನನ್ನ ಮೈದುನನಿಗೆ ಮದುವೆಯಾಗಿ ನಾನು ಓರಗಿತ್ತಿಗೆ ಸೀರೆ ತೆಗೆದುಕೊಂಡಿದ್ದೆ ನನ್ನ ನಾದಿನಿ ಮೂರು ಜನರಿಗೂ ಹೈದರಾಬಾದ್ ಸರಗಳು. ತುಂಬಾ ಖುಶಿ ಕೊಟ್ಟ ಪ್ರವಾಸ ಅದು.(ಮುಂದುವರೆಯುವುದು) ಸುಜಾತಾ ರವೀಶ್ಮೈಸೂರು
ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಕರ್ನಾಟಕವು ಹಲವು ಶರಣರ ಸಂತರ ದಾರ್ಶನಿಕರ ನೆಲೆಬೀಡು. ಸಂಪ್ರದಾಯಸ್ಥ ವಿಶ್ವ ಕರ್ಮರ ಕುಟುಂಬದಲ್ಲಿ ಜನಿಸಿ ಅತ್ಯಂತ ವೈಚಾರಿಕತೆಯ ವಚನಗಳನ್ನು ರಚಿಸಿ ಸಾಮಾಜಿಕ ಧಾರ್ಮಿಕ ಅಂಕು ಡೊಂಕುಗಳನ್ನು ತಿದ್ದಿ ಟೀಕಿಸುವ ವಿಡಂಬಿಸುವ ತನ್ನ ಹುಟ್ಟು ಕುಲದ ಜನರನ್ನೇ ಟೀಕಿಸಿ ಎಚ್ಚರಿಸುವ ದಿಟ್ಟ ಶರಣ ಸಂಸ್ಕೃತಿಯ ವಾರಸುದಾರ ತಿಂಥಣಿ ಮೌನೇಶ್ವರ ಅಥವಾ ಮೌನಪ್ಪ ಮೌನೋದ್ದಿನ ಎಂಬ ಬೇರೆ ಬೇರೆ ಸಮುದಾಯದ ಪ್ರೀತಿಗೆ ಭಕ್ತಿಗೆ ಪಾತ್ರರಾದವರು ಮೌನೇಶ್ವರರು. ಪೌರಾಣಿಕ ಹಿನ್ನೆಲೆ ಅಂದಿನ ಗುಲಬರ್ಗಾ ಜಿಲ್ಲೆಯ ಇವತ್ತಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ (ಇವರಿಗೆ ಹಾವಪ್ಪ ಮತ್ತು ಹಾವಕ್ಕ ಎಂದು ಕರೆಯಲಾಗುತ್ತಿತ್ತು) ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೀಲೆ ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಗಂಡನಿಗೆ ಸಂಶಯ ಬಂದು ಅವಳನ್ನು ಹಿಂಬಾಲಿಸಿದಾಗ ಅವನಿಗೆ ದೃಗ್ಗೋಚರವೇ ಎದುರಾಯಿತು. ಏನೆಂದರೆ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು ‘ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ’ ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ “ಮಗಳೇ ಶೇಷಮ್ಮ ನೀನು ನನ್ನ ಪನ್ನಂಗಾಭರಣವಾದ್ದರಿಂದ ಆ ಬ್ರಹ್ಮನು ನಿನ್ನ ದೈವದಲ್ಲಿ ಸೃಷ್ಟಿ ಬೆಳೆಸುವ ಸಂತಾನ ಭಾಗ್ಯ ಫಲವನ್ನಿಡುವ ಸಾಹಸ ಮಾಡಲಿಲ್ಲ. ಆದಕಾರಣ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ” ಎಂದು ಹೇಳಿ ಪರಮಾತ್ಮನು ಅಂತರ್ಗತನಾಗುತ್ತಾನೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದೇಗುಲದ ಒಂದು ಕಂಬದ ಮರೆಯಲ್ಲಿ ನಿಂತು ನೋಡುತ್ತಿದ್ದ ಶೇಷಮ್ಮಳ ಗಂಡ ಶೇಷಪ್ಪನ ಸಂಶಯವೆಲ್ಲವೂ ದೂರವಾಗಿ ಭಕ್ತಿಯ ಮಹಾಪೂರವು ಅವನ ಮನದಲ್ಲಿ ನೆಲೆಯಾಗುತ್ತದೆ ಎಂಬ ಐತಿಹ್ಯ ಪೌರಾಣಿಕ ಕಥೆಗಳಿಂದ ಮೌನೇಶ್ವರನ ಚಿತ್ರಣ ವ್ಯಕ್ತವಾಗಿದೆ. ನಂತರ ಪರಶಿವನೇ ಅಯೋನಿಜನಾಗಿ ಮೌನೇಶ್ವರರ ಅವತಾರದಿ ಚೆಲುವಿನ, ಚೆಂದದ, ಮುದ್ದಾದ ಮಗುವಿನ ರೂಪದಲ್ಲಿ ವರಪ್ರಸಾದವಾಗಿ ಧರೆಗಿಳಿದು ಬರುತ್ತಾನೆ ಎನ್ನುವ ಐತಿಹ್ಯವೂ ಇದೆ. ಜಗದ್ಗುರು ಶ್ರೀ ಮೌನೇಶ್ವರರು ಬರೀ ಮಹಿಮಾಪುರುಷರಲ್ಲದೆ ಕಾಲಜ್ಞಾನಿಗಳು, ವಚನಕಾರರು, ಸಮನ್ವತಾವಾದಿಗಳು, ಮಹಾನ್ ಮಾನವತಾವಾದಿಗಳೂ ಆಗಿದ್ದಾರೆ. 16ನೇ ಶತಮಾನದಲ್ಲಿ ಬರುವ ಶರಣರ, ವಚನಕಾರರ, ಸಂತರ ಸಾಲಿನಲ್ಲಿ ಮೌನೇಶ್ವರರು ಪ್ರಮುಖ ವಚನಕಾರರಾಗಿ ಕಂಡುಬರುತ್ತಾರೆ. ಮೌನೇಶ್ವರರು ಒಟ್ಟು 796ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಮೌನೇಶ್ವರರು ತಮ್ಮ ಎಲ್ಲ ವಚನಗಳಲ್ಲಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಹೆಸರನ್ನು ಅಂಕಿತನಾಮವಾಗಿ ಬರೆದಿರುವುದನ್ನು ಕಾಣಬಹುದು. *ಭಾವೈಕ್ಯತೆಯ ಸಂತ* ಮೌನೇಶ್ವರರು ಹಿಂದೂ ಮುಸಲ್ಮಾನ ಧರ್ಮದ ಭಾವೈಕ್ಯತಾ ಸೂಚಕವಾಗಿ ಹೀಗೆ ಹೇಳಿದ್ದಾರೆ: “ಹಿಂದೂ ತುರುಕರಿಗೆ ಚಂದ್ರಮನೊಬ್ಬನೆ ನಿಂದಿಸಿದವನೇ ಅಧಮನು” ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಸರಳ ಸಜ್ಜನಿಕೆಯ ಆಚಾರ ವಿಚಾರಗಳಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ, ಸುರಪುರ, ದೇವದುರ್ಗ, ಲಿಂಗನಬಂಡಿ, ವರವಿ, ಛಬ್ಬಿ, ರಾಚೋಟಿ, ಶಿರಸಂಗಿ, ತಿರುಪತಿ, ಕಾಶಿ, ಮುಂತಾದೆಡೆ ತಿರುಗಾಡಿ, ಸಾಮಾಜಿಕ ಸುಧಾರಣೆಯನ್ನು ಮೆರೆದವರೆಂಬುದು ಇತಿಹಾಸ. ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಅವರ ಒಂದು ಪದ್ಯ ಹೀಗಿದೆ- ‘|| ಓಂ ಏಕಲಾಖ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನಾಧೀನ್ ಜಿತಾಪೀರ್ ಪೈಗಂಬರ್ ಮಾಧೀದೀ ಕಾಶೀಶೀಪತಿ ಗಂಗಾಧರ ಹರ ಹರ ಮಹಾದೇವ||’ ಮಹಮ್ಮದ್ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರರು ಇದರಲ್ಲಿ ಸಾರಿದ್ದಾರೆ. ಈ ಮಾತಿನ ಅಖಂಡಾರ್ಥ ಮೌನೇಶ್ವರರ ಪದ್ಯದಲ್ಲಿದೆ. ಓಂ ಮತ್ತು ಅಲ್ಲಾ ಒಂದೇ ಎಂಬ ಅದ್ವಯಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯ! ಜನನ ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಎಮ್ಮೆ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ! *ಜೀವನ ಮತ್ತು ಬಾಲ್ಯ ಮೌನೇಶ್ವರರ ತಂದೆ-ತಾಯಿ ಶೇಷಪ್ಪ (ಹಾವಪ್ಪ), ಶೇಷಕ್ಕ (ಹಾವಕ್ಕ) ಎಂಬ ಉಲ್ಲೇಖ ಐತಿಹ್ಯವಾಗಿ ದೊರಕುತ್ತದೆ. ಜಾನಪದದಲ್ಲೂ ಮೌನೇಶ್ವರರ ಬಾಲ್ಯದ ವಿವರಗಳು ತುಂಬಾ ಕಡಿಮೆ. ಅವರ ಬಗ್ಗೆ ಕಥೆ ಐತಿಹ್ಯ ಏನೇ ಇದ್ದರೂ ಮೌನೇಶ್ವರರು- ‘ಇಂದ್ರಿ ಸೂತಕದಿಂದ ಅಂದೆ ನಾನು ಜನಿಸಿದೆನು /ಇಂದು ನಾನು ಕೊಳೆಯಲೆ ಪ್ರಭುದೇವ ನಾ/ ಬಂದಂಥ ಭವಕೆ ಮಿತಿಯಿಲ್ಲ ಪ್ರಭುದೇವರ ನಾ/ ಹಿಂದಿಗಿಂತ ಕಡಿಮೆಯಯ್ಯ ಬಸವಣ್ಣ’/ -ಎಂದು ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ. ಜಾನಪದ-ಪುರಾಣ ಮುಂತಾದುವು ಅಯೋನಿಜರೆಂದರೆ, ಮೌನೇಶ್ವರರ ವಚನವು ‘ಯೋನಿಜ’ರೆಂದು ಸಾರುತ್ತದೆ. ಎಲ್ಲ ಶರಣರು ಹೊಲೆಯೊಳಗಿಂದಲೇ ಜನ್ಮಿಸಿದರೆಂದು ಹೇಳುವ ಮೌನೇಶ್ವರರು ‘ಕುಲವನೆಲ್ಲಿ ಅರಸುವುದು?’ ಎಂಬ ಪ್ರಶ್ನೆಯನ್ನು ನಮಗೆ ಹಾಕುತ್ತಾರೆ ಶರಣರೇ ನಿಜವಾದ ತಾಯ್ತಂದೆಗಳೆಂಬುದು ಇಲ್ಲಿ ಪ್ರಸಿದ್ಧಾರ್ಥ. ಸಾಹಿತ್ಯ ಸಂಪದ ಮೌನೇಶ್ವರರು ವಚನವೊಂದರಲ್ಲಿ ತನ್ನ ಗುರುಮನೆ ಗೋಗಿನ ಎಂದೂ, ಗುಂಡಿ ಬಸವಯ್ಯ ತಮ್ಮ ಗುರುವೆಂದೂ ಹೇಳಿಕೊಂಡಿದ್ದಾರೆ. ಇಲ್ಲಿಯ ಸೂಚಿತಾರ್ಥಗಳನ್ನು ಗ್ರಹಿಸಿದರೆ ಮೌನೇಶ್ವರರು ಕೆಲವು ಗುರುಗಳ ಬಳಿ ಸಾಧನೆ ಮಾಡಿರಬೇಕು. ಗುರುವಿನ ಮಾರ್ಗದರ್ಶನ ಇಲ್ಲದೆ, ಯಾವೊಬ್ಬ ಶಿಷ್ಯನೂ ಸಾಧಕನಾಗಲಾರನಷ್ಟೆ. ಆದರೆ, ಅಲ್ಲಮಪ್ರಭುದೇವ ಮಾತ್ರ ಇದಕ್ಕೆ ಅಪವಾದ. ಮೌನೇಶ್ವರರು ಅನೇಕ ವಚನಗಳಲ್ಲಿ ಅಲ್ಲಮಪ್ರಭುವಿನ ಹೆಸರನ್ನು ಪದೇಪದೆ ಬಳಸುತ್ತಾರೆ. ಅಲ್ಲಮನು ಯಾವ ಮಾಯೆಗೂ ಸಿಗದೆ, ಎಲ್ಲರೊಳಗಿನ ಮಾಯೆಯನ್ನು ಕಿತ್ತೆಸೆದವನು. ಮೌನೇಶ್ವರರು ಇಂಥ ಅಲ್ಲಮನ ದಾರಿಯಲ್ಲಿ ನಡೆದಿದ್ದಾರೆ. ಒಂದಂತೂ ನಿಜ. ಮೌನೇಶ್ವರರು ಕಠೋರ ತಪಸ್ಸಾಧನೆ ಮಾಡಿ ಅಪೂರ್ವ ಸಿದ್ಧಿಗಳನ್ನು ಪಡೆದಿರಬೇಕು. ಅವುಗಳ ಮೂಲಕ ಪವಾಡಗಳನ್ನೂ ಮಾಡಿರಬೇಕು. ಈಗಲೂ ಜನರ ಬಾಯಲ್ಲಿ ಅವರ ಪವಾಡ, ಮಹಿಮೆಗಳು ರೂಢಿಯಲ್ಲಿವೆ. ಆ ಕಾಲದ ಜನರನ್ನೋ ಸುಲ್ತಾನರನ್ನೋ ಸುಬೇದಾರರನ್ನೋ ಪ್ರಭಾವ ಗೊಳಿಸಬೇಕಾದರೆ ಇಂಥ ಪವಾಡಗಳನ್ನು ಮಾಡಿಯೇ ಸೆಳೆಯಬೇಕಿತ್ತು. ಜನಹಿತಕಾರ್ಯಕ್ಕೆ ಇದೊಂದು ಪೂರ್ವ ಮೀಮಾಂಸೆಯೇ. ಮೌನೇಶ್ವರರಿಗೆ ಅಲೌಕಿಕ ಸಿದ್ಧಿಗಳಿದ್ದಂತೆ ಅಸಾಮಾನ್ಯ ಅನುಭಾವೀ ಜೀವನವೂ ಇತ್ತು. ಅವೆರಡು ಇವರಲ್ಲಿ ಹಾಳತವಾಗಿ ಸೇರಿದ್ದಕ್ಕೆ ಅವರ ಬರಹಗಳೇ ಸಾಕ್ಷಿ. *ಉಪನಯನ ವೈದಿಕ ಸಂಸ್ಕಾರ ಬಾಲ್ಯಾವಸ್ತೆಯಲ್ಲಿ ಜಗದ್ಗುರು ಮೌನೇಶ್ವರರಿಗೆ 8 ವರ್ಷ ತುಂಬಿದಾಗ ವಿಶ್ವಕರ್ಮ ಧರ್ಮದ ವೈದಿಕ ಪರಂಪರೆಯ ಅನುಸಾರ ಗಾಯತ್ರಿ ಮಂತ್ರೋಪದೇಶದೊಂದಿಗೆ ಉಪನಯನವಾಯಿತು. ಗಾಯತ್ರಿ ಮಂತ್ರೋಪದೇಶವಾಗಿ ಅದರ ರಹಸ್ಯಾರ್ಥಗಳು ದೃಗ್ಗೋಚರವಾದುವು. ನಂತರ ಮೌನೇಶ್ವರರು ಸುರಪುರದ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ 4 ವರ್ಷ, ಸಂಸ್ಕೃತ, ಉರ್ದು, ಕನ್ನಡ ಕಲಿತು ಹಲವಾರು ಶಾಸ್ತ್ರಗಳ ಪರಿಚಯ ಮಾಡಿಕೊಂಡರು. ಜತೆಗೆ ಸದಾನಂದ ಗುರುಗಳ ಸಂಪೂರ್ಣ ಅನುಗ್ರಹವೂ ಮೌನೇಶ್ವರರ ಮೇಲಿತ್ತು. ಈ ನಡುವೆ ಕಾಶೀಯಾತ್ರೆ ಮುಗಿಸಿಬಂದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ಹೋಗಿ ವೀರಭದ್ರದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳನ್ನು ಮಾಡಿದರೆಂದು ಪುರಾಣಗಳು ನಿರೂಪಿಸುತ್ತವೆ. ತಂದೆ-ತಾಯಿ ವೃದ್ಧರಾಗಿ ತೀರಿಕೊಂಡ ಮೇಲೆ ಮೌನೇಶ್ವರರು ದೇಶಸಂಚಾರ ಮಾಡುತ್ತ, ಎಲ್ಲ ಸಮುದಾಯದವರ ಕಷ್ಟ-ಕಾರ್ಪಣ್ಯ ನೀಗಿಸುತ್ತ ಸಮಾಜದ ಕೀಲಕಸ್ಥಾನದಲ್ಲಿ ಉಳಿದುಬಿಟ್ಟರು. *ಸಾಹಿತ್ಯ ಮೌನೇಶ್ವರರು ಶತಕಗಳನ್ನೂ ಕಾಲಜ್ಞಾನವನ್ನೂ ಬರೆದಿದ್ದಾರೆ. ದಂಡಕ, ಸುವ್ವಿಹಾಡು, ಜೋಗುಳಪದ, ಆರತಿಪದ, ಮೊಹರಂಗೀತೆ, ಕೋಲುಪದ, ಭಜನೆಹಾಡುಗಳನ್ನ್ನೂ ರಚಿಸಿದ್ದಾರೆ. ಇವರ ಪದಗಳಲ್ಲಿ ಉರ್ದು, ಪರ್ಷಿಯನ್ ಪದಗಳು ವಿಪುಲವಾಗಿವೆ. ಕನ್ನಡ, ಉರ್ದು ಕೂಡುನುಡಿಗಳಂತೂ ಬಹಳಷ್ಟಿವೆ- ಮೌನದೀನ ಪೀರ | ಸದ್ಗುರು ಜಿತಾ ಪೈಗಂಬರ ||ಪ|| ಹಿಂದೂ ಮುಸಲ್ಮೆ ಮನದ ಪ್ರಕಾರ/ ಬಲ್ಲಂಥ ಜ್ಞಾನಿಗೆ ನೀನೊಬ್ಬ ದೇವರ ಆಕಾರ ನಿರಾಕಾರ ಎರಡಕ್ಕೆ ನೀನೆ ಗಂಭೀರ/ ಶೇಕ್ ಸಯ್ಯದ ಮೊಗಲ ಪಠಾಣ ನಾಲ್ಕು ಅವತಾರ ತಾಳಿ ಮಾಡಿದಿ ಉದ್ಧಾರ ||2|| ಈ ಪದ್ಯವು ಮೌನೇಶ್ವರರ ರಚನೆಯ ಬಗೆಯನ್ನು ತಿಳಿಸುತ್ತದೆ. ಅವರು ಹಿಂದೂ-ಮುಸ್ಲಿಂ ಬಂಧುತ್ವವನ್ನು ಒಂದೆಡೆ ಸೇರಿಸಿದವರಷ್ಟೆ. ಹೀಗೆ ಭಾವೈಕ್ಯತೆ ಮತ್ತು ಮತೈಕ್ಯತೆಗಳ ಸಂಕೇತವಾಗಿ ಇವರು ಕಾಣಿಸಿಕೊಂಡರೆಂಬುದು ವಿಶೇಷ. ಮೌನೇಶ್ವರರು 17ನೇ ಶತಮಾನದ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಇವರ ಪದ್ಯಗಳಲ್ಲಿ ಉರ್ದುಭಾಷೆ, ಅಭಿವ್ಯಕ್ತಿಗೆ ಅನುಗುಣವಾಗಿ ಕಾಣಿಸಿಕೊಂಡಿದೆ. ಆಡುಮಾತಿನ ಪಲುಕು ಉದ್ದಕ್ಕೂ ಕಾಣಿಸುತ್ತದೆ. ಭಾಷೆಯ ದೃಷ್ಟಿಯಿಂದ ನೋಡಿದರೆ, ಎಷ್ಟೋ ಅಪಪ್ರಯೋಗಗಳು ಇವೆ. ಆದರೆ, ಮೌನೇಶ್ವರರು ಜನಸಾಮಾನ್ಯರಂತೆ ವಚನಗಳನ್ನು ಕಟ್ಟಿದ್ದಾರೆ. ಹಳ್ಳಿಗರು ಬಳಸುತ್ತಿದ್ದ ಹಾಡಿನ ಮಟ್ಟುಗಳ ಜಾಡುಹಿಡಿದು ಅನುಭವಗಳನ್ನು ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹುತೇಕವಾಗಿ ಕನ್ನಡದ ಅಂಶಗಣಕ್ಕೆ ಹೆಚ್ಚು ಹೊಂದುತ್ತವೆ. ಇವು ಬರಹರೂಪದ ವಚನಗಳಲ್ಲ; ಅವರು ಹಾಡುತ್ತ, ಹೇಳುತ್ತ ಹೋದಂತೆ ಶಿಷ್ಯರು ಸಂಗ್ರಹಿಸಿ ಬರೆದಿಟ್ಟದ್ದೆಂದು ತೋರುತ್ತದೆ! ಮೌನೇಶ್ವರರು ತಮ್ಮ ಬಗೆಗೆ ಹೆಚ್ಚಿಗೇನೂ ಹೇಳಿಕೊಂಡಿಲ್ಲ. ತಾನು ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನ ಅವತಾರವೆಂದು ಮಾತ್ರ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜನ್ಮ ಯಾವುದೋ ಮುಖ್ಯ ಉದ್ದೇಶಕ್ಕಾಗಿ ಆಗಿದೆಯೆಂದು ಅವರು ತಿಳಿದುಕೊಂಡಿದ್ದರು. ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ. ಅವರ ಮಾತಿದು. ಅಕ್ಕ ನಾಗಲಿಯ ಮಗ ಚಿಕ್ಕ ಚನ್ನಬಸವಣ್ಣ/ ಅಕ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು/ ರೆಕ್ಕ ಲೆಕ್ಕಕ್ಕೆ ಝುಡತಿಯ ಕೇಳಬೇಕೆಂದು/ ತಕ್ಕಡಿಯ ತ್ರಾಸು ಪಿಡಿದುಕೊಂಡು ನಿಂತಾತನ ಕೂಡ -ಈ ವಚನದಲ್ಲಿ ತಾನು ‘ಅಕ್ಕಸಾಲಿಗ’ ಎಂಬುದನ್ನು ಖಚಿತಪಡಿಸಿದ್ದಾರೆ. ‘ವಿಶ್ವಕರ್ಮ’ ಎಂದು ಪ್ರಸಿದ್ಧಿ ಪಡೆದ ಇವರು ಸಮಾಜದ ಕೀಲಕ ಸ್ಥಾನದಲ್ಲಿದ್ದವರೇ. ಮರದ ಕೆಲಸ ಮಾಡುವವರು ‘ಬಡಗಿ’ಯಾದರೆ ಕಬ್ಬಿಣದ ಕೆಲಸ ಮಾಡುವವರು ‘ಕಮ್ಮಾರ’ರು; ಕಂಚಿನ ಕೆಲಸ ಮಾಡುವವರು ‘ಕಂಚುಗಾರ’ರಾದರೆ, ಶಿಲೆಯ ಕೆಲಸ ಮಾಡುವವರು ‘ಶಿಲ್ಪಿಗರು’. ಇಷ್ಟು ಜನರನ್ನು ವಿಶ್ವಕರ್ಮರೆಂದೇ ಗ್ರಾಮ ಸಮುದಾಯ ಕರೆಯುತ್ತಿತ್ತು. ಸಮುದಾಯದಲ್ಲಿ ಇವರ ಸ್ಥಾನ ಮೇಲ್ಮಟ್ಟದ್ದಾಗಿತ್ತೆಂಬುದನ್ನು ಸಮಸ್ತರೂ ಗುರುತಿಸಿದ್ದಾರೆ. ಇವರ ವೃತ್ತಿಯು ಕೌಶಲಪ್ರಧಾನವಾದುದು. ಪಟ್ಟಣ, ಖೇಡ, ಖರ್ವಡ, ದ್ರೋಣಾಮುಖ ಎಂಬ ವಿವಿಧ ಬಗೆಯ ನಗರ ನಿರ್ವಣದಲ್ಲಿ ಇವರದು ಎತ್ತಿದ ಕೈ. ಅದಕ್ಕನುಗುಣವಾಗಿ ಬಡಿಗೇರ, ಕಮ್ಮಾರರು ಬಳಸುವ ಉಪಕರಣಗಳನ್ನು ವಚನದಲ್ಲಿ ಅಧ್ಯಾತ್ಮದ ಸಂಕೇತವಾಗಿಯೂ ಬಳಸಿ ಕೊಂಡಿದ್ದಾರೆ. ಗ್ರಾಮಜೀವನದ ಕಾಯಕವರ್ಗಕ್ಕೆ ಅನುಗುಣವಾದ ಅಡಿಗಲ್ಲು, ತ್ರಾಸು, ಮೂಸೆ, ಸುತ್ತಿಗೆಯಂಥ ಪರಿಕರಗಳನ್ನು ವಚನಗಳಲ್ಲಿ ಬಳಸಿದ್ದಾರೆ. ‘ಬಡಿಗ, ಕಮ್ಮಾರರು ಪೊಡವಿಗಕರ್ತರು’ ಎಂಬ ಮಾತು ಇದಕ್ಕೆ ಸಾಕ್ಷಿ. ಗುರು ಮೌನೇಶ್ವರ *ಬದುಕೆ ಅನುಭವ ಪಾಠ ಶಾಲೆ* ________________________ ನಮ್ಮ ಬಾಳು ಹೇಗಿರಬೇಕೆಂಬುದನ್ನು ಹಲವಾರು ವಚನಗಳಲ್ಲಿ ಮೌನೇಶ್ವರರು ಹೇಳುತ್ತಾರೆ. ಅವರ ವಚನಗಳು ಶರಣರ ಮಾರ್ಗವನ್ನು ಮುಂದುವರಿಸುತ್ತವೆ. ಅವರು ಹೆಜ್ಜೆಹೆಜ್ಜೆಗೂ ಹಿಂದಿನ ಶರಣರ ನುಡಿಗಡಣವನ್ನು ಮುಂದಿರಿಸಿಕೊಂಡು ಮಾತಾಡುತ್ತಾರೆ. ಅರಿವಿಲ್ಲದೆ ಬಾಳುವೆ ಮಾಡುವುದು ವ್ಯರ್ಥ. ಅಂಥವರಿಗೆ ಎಲ್ಲಿಯ ಗುರು, ಎಲ್ಲಿಯ ದೈವ? ಎಂದು ಒಂದೆಡೆ ಪ್ರಶ್ನಿಸುತ್ತಾರೆ. ಮೌನೇಶ್ವರರಿಗೆ ಹಳ್ಳಿಯ
ಧಾರಾವಾಹಿ ಸಂಗಾತಿ-14 ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಲೇ: ಸವಿತಾ ದೇಶಮುಖ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ ವಚನವನ್ನು ನೆನಪಿಸಿ ಕೊಡುತ್ತಿದ್ದರಂತೆ.“ಇವನಾರವ ಇವನಾರವ ಇವನಾರವ ಎಂದೇನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆಎನಿಸಯ್ಯ…..” ಅನ್ನುವ ವಚನ ತಾಯಿಗೆ ಮೇಲಿಂದ ಮೇಲೆ ಹೇಳಿ ಅವರ ಮನವನ್ನು ಬದಲಾಯಿಸಿದರು ಅಂತ ತಾಯಿಯವರೇ ಸ್ವಂತ ಹೇಳುತ್ತಿದ್ದರು. ಜಾತಿ ಮೀರಿದ ವಿವಾಹಗಳಿಗೆ ಬೆಂಬಲ ನೀಡುತ್ತಿದ್ದರು.ಜಾತಿ ಭೇದವನ್ನು ಕಡಿಮೆ ಮಾಡಲು ಅವರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು.“ಪ್ರೇಮಕ್ಕೆ ಜಾತಿ ಬೇಧವಿಲ್ಲ” ಎಂಬುದನ್ನು ಅವರು ಸಮರ್ಥಿಸಿದರು. ಇಂತಹ ವಿವಾಹಗಳಿಗೆ ಸಾಮಾಜಿಕ ಒಪ್ಪಿಗೆ ಸಿಗುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. “ಮಾನವೀಯತೆ ಧರ್ಮಕ್ಕಿಂತ ದೊಡ್ಡ ಧರ್ಮ ಇನ್ನಾಆವುದು ಇರಲಾರದು” ಎಂಬುದು ಅವರ ಸಂದೇಶ. ವೈಯಕ್ತಿಕ ಜೀವನದಲ್ಲಿಯೂ ಅನುಸರಿಸಿದ್ದರು .ತಮ್ಮ ಮನೆ ಬಾಗಿಲು ಎಲ್ಲರಿಗೂ ತೆರೆಯಲ್ಪಟ್ಟಿತ್ತು.ಯಾರೇ ಬಂದರೂ ಅವರ ಜಾತಿ-ಮತ ಕೇಳದೆ ಸಹಾಯ ಮಾಡುತ್ತಿದ್ದರು. ಆದರಾತಿಥ್ಯವನ್ನು ಕೊಟ್ಟು ಕಳಿಸುತ್ತಿದ್ದರು. ಸಜೀವ ಘಟನೆಗಳನ್ನು ಉಲ್ಲೇಖ ಮಾಡಬೇಕೆಂದರೆಆ ಕಾಲದಲ್ಲಿ ಸಮಾಜದ ಮನಸ್ಸುಗಳಲ್ಲಿ ಇನ್ನೂ ಕೀಳರಿಮೆ ಮತ ಭೇದದ ನೆರಳಿನಲ್ಲಿ ನರಳುತ್ತಿತ್ತು… ಜಯದೇವಿ ತಾಯಿಯವರು … ನೂರಾರು ಎಕರೆ ಭೂಮಿಯ ಒಡೆಯರಾಗಿದ್ದರೂ, ಅವರ ಹೃದಯ ಮಾತ್ರ ಮಣ್ಣಿನಂತೇ ಮೃದು….ಆ ಪ್ರದೇಶದಲ್ಲಿ “ಪಾರದೇರು” ಎನ್ನುವ ಒಂದು ಜಾತಿಯ ಜನರ ಬಗ್ಗೆ ಜನರಲ್ಲಿ ಭಯ ಇತ್ತು.“ಅವರು ಕಳ್ಳರು… ಮೋಸಗಾರರು…” ಎಂದು ಸಮಾಜದಿಂದ ಅವರಿಗೆ ದೂರ ಇಡಲ್ಪಟ್ಟಿತು.ಯಾರೂ ಕೆಲಸ ಕೊಡುತ್ತಿರಲಿಲ್ಲ. ಅವರು ತಪ್ಪು ದಾರಿಗೆ ಹೋಗುವುದೇ ಅವರ ಬದುಕಿನ ಮಾರ್ಗವಾಗಿಬಿಟ್ಟಿತ್ತು….. ಒಂದು ದಿನ, ಆ ಸಮುದಾಯದ ಒಬ್ಬ ಮುಖಂಡನು ಜಯದೇವಿ ತಾಯಿಯವರ ಸಮಾಜಮುಖಿ ಕೆಲಸಗಳನ್ನು ನೋಡಿ ಭೇಟಿ ಮಾಡಲು ಬಂದನು.ಅವನ ಕಣ್ಣುಗಳಲ್ಲಿ ಹತಾಶೆ… ಮನಸ್ಸಿನಲ್ಲಿ ನೋವು ಹೊತ್ತು ಬಂದಿದ್ದಾ…“ತಾಯಿ… ನಾವು ತಪ್ಪು ಮಾಡಿದ್ದೇವೆ… ಆದರೆ ನಮಗೆ ಯಾರು ಕೆಲಸ ಕೊಡಲ್ಲ… ನಾವು ಸುಳ್ಳು ತನ ಕಳ್ಳತನ ಮಾಡದೆ ಇದ್ದರೆ ನಮ್ಮ ಜನಾಂಗದವರು ಬದುಕೋದು ಹೇಗೆ?” ಎಂದು ಕೇಳಿದನು.ಆ ಮಾತು ಕೇಳಿ ತಾಯಿಯವರ ಹೃದಯ ಕದಲಿತು. ತಾಯಿಯವರ ನಂತರ ನಿಧಾನವಾಗಿ ಹೇಳಿದರು…“ನೀವು ತಪ್ಪು ಮಾಡುವುದನ್ನು ಒಪ್ಪಿಕೊಳ್ಳುತ್ತಾ ಇದ್ದೀರಿ… ತಪ್ಪುಗಳನ್ನು ಮಾಡುತ್ತಾ ಬರುತ್ತಲೇ ಇದ್ದೀರಿ..ಆದರೆ ನೀವು ಮನುಷ್ಯರು…ನಿಮಗೆ ಅವಕಾಶ ಕೊಟ್ಟರೆ ಬದಲಾಗ ಬಹುದೇನೋ…ನೋಡೋಣ ಹಾಗಿದ್ದರೆ“ನೀವು ನನ್ನ ಹೊಲಕ್ಕೆ ಬನ್ನಿ… ಕೆಲಸ ಮಾಡಿ…” ಎಂದು ಆಹ್ವಾನಿಸಿದರು.ಹೀಗೆ ಹೊಸ ಜೀವನದ ಆರಂಭ ಪಾರದೇರು ಜನಾಂಗಕ್ಕೆ ಆಯಿತು. ಅನೇಕ ಜನರಿಗೆ ಅವರು ಕೇವಲ ಕೆಲಸ ಕೊಟ್ಟರಲ್ಲದೇ… ವಾಸಿಸಲು ಹೊಲಗಳಲ್ಲಿ ಜಾಗ ಕೊಟ್ಟರು…ನಿನ್ನೆಯವರೆಗೆ ಕಳ್ಳತನ ಮಾಡುತ್ತಿದ್ದ ಕೈಗಳು,ಇಂದು ಮಣ್ಣನ್ನು ಅಗೆದು ಬೆಳೆ ಬೆಳೆಸತೊಡಗಿದವು. ಇದನ್ನು ನೋಡಿದ ಅನೇಕ ಜನರು ಆಶ್ಚರ್ಯದಿಂದ“ಇವರು ಬದಲಾಗ್ತಾರಾ?” ಎಂಬ ಸಂಶಯಪಟ್ಟರು.ಆದರೆ ತಾಯಿಯವರ ನಂಬಿಕೆ ಗೆದ್ದಿತು.ಆ ಜನರು ತಮ್ಮ ಜೀವನವನ್ನು ಸತ್ಯದ ದಾರಿಯಲ್ಲಿ ಸಾಗಿಸಲು ಆರಂಭಿಸಿದರು. ಮುಂದೆ ಭಾರತದಲ್ಲಿ ಲ್ಯಾಂಡ್ ರಿಫಾರ್ಮ್ ಕಾಯಿದೆ ಜಾರಿಯಾದಾಗ, ಹಲವಾರು ಜಮೀನುಗಳು ರೈತರ ಹೆಸರಿಗೆ ಬರೆಯ ಆರಂಭವಾಯಿತು.ಆ ಸಮಯದಲ್ಲಿ ಜಯದೇವಿ ತಾಯಿಯವರು ದೊಡ್ಡ ನಿರ್ಧಾರ ಕೈಗೊಂಡರು.“ಈ ಭೂಮಿಯನ್ನು ಯಾರು ನಿಜವಾಗಿ ಬೆಳೆದಿದ್ದಾರೆ…ಅವರಿಗೆ ಒಪ್ಪಿಸುವಂತೆ…ಪಾದರೆಯ ಜನರು ಕೆಳ ಜಾತಿಯ ಜನರ ಹೆಸರನ್ನು ನೋಂದಾಯಿಸಿದರು.ಹೀಗೆ,ಒಮ್ಮೆ ಸಮಾಜದಿಂದ ತಳ್ಳಲ್ಪಟ್ಟ “ಪಾರದೆರು” ಜನರು,ತಾಯಿಯವರ ಕೃಪೆಯಿಂದ ತಮ್ಮದೇ ಭೂಮಿಯ ಒಡೆಯರಾಗಿದರು. ಶತಶತಮಾನಗಳಿಂದ ಆಳಾಗಿ ದುಡಿಯುತ ಬಂದವರಿಗೆ ಆ ದಿನ ಕಣ್ಣುಗಳಲ್ಲಿ ಕಣ್ಣೀರು…ಹರಿದವುಆದರೆ ಅದು ನೋವಿನಲ್ಲ ಕಣ್ಣಿರಲ್ಲ… ಗೌರವದಿಂದ ಕೂಡಿತ್ತು…“ನಮಗೆ ಜೀವನ ಕೊಟ್ಟವರು ತಾಯಿ…” ಎಂದು ಇನ್ನು ಆದರೂ ನೆನೆಯುತ್ತಾರೆ.“ಜಯದೇವಿ ತಾಯಿಯವರು ಕೇವಲ ಭೂಮಿಯನ್ನು ಕೊಡಲಿಲ್ಲ ಅವರ ಜೀವನಕ್ಕೆ ದಿಕ್ಕು ತೋರಿಸಿದ ತಾಯಿಯಾದರು…” ಮುಂದೆ….ಸಮಾಜ ಏಕತೆ, ಸಮಾನತೆ ಮತ್ತು ಚೇತನ ಶಕ್ತಿಯನ್ನು ಸಜೀವವಾಗಿ ಕಟ್ಟಲು…*ಶರಣ ಸಮಾಜ* ಸಂಘವನ್ನು ಕಟ್ಟಿದರು. ಗಾಂಧೀಜಿಯವರು ಕೀಳ ಜಾತಿಯವರಿಗೆ ಹರಿಜನರೆಂದು ಹೆಸರು ಕೊಟ್ಟಸಮಯ .. ಗಾಂಧೀಜಿಯವರ ಧ್ಯೇಯ- ಸದುದ್ದೇಶಕ್ಕಾಗಿ ಸ್ಪೂರ್ತಿದಾಯಕವಾಗಿ *ಶರಣ ಸಮಾಜ* ನಿರ್ಮಾಣಗೊಂಡಿತ್ತು. *ದೀನ ದಲಿತರಿಗೆ | ಹೀನ ಪಾಮರರಿಗೆತನ್ನ ಬಳಿ ಸೆಳೆದುಕೊಂಡ- ಪುಣ್ಯಜೀವಿಹರಿಜನರೆಂಬ ಹೆಸರ ಕೊಟ್ಟಗಾಂಧೀಜಿ * ಎಂದು ಗಾಂಧೀಜಿಯವರ ಬಗ್ಗೆ ತಾಯಿಯವರು ಹಾಡಿ ಹೊಗಳಿದರು.ಎಲ್ಲರೂ ಒಂದೇ ಕುಟುಂಬದವರಂತೆ ಬದುಕಬೇಕು ಜಾತಿ-ಮತ ಭೇದಗಳು ಗಟ್ಟಿಗಳ ಬೇರುಸಹಿತ ಕಿತ್ತೆಸೆಯಲು.ಭೇದಗಳ ಒಡೆಯಬೇಕೆಂದು ಜಯದೇವಿ ತಾಯಿಯವರ ಒಂದು ದೊಡ್ಡ ಕನಸು .ಈ ಆಲೋಚನೆಯಿಂದಲೇ ಅವರು “ಶರಣ ಸಮಾಜ” ಎನ್ನುವ ಸಂಘವನ್ನು ಸ್ಥಾಪಿಸಿದರು. ಈ ಸಂಘ ಕೇವಲ ಒಂದು ಸಂಸ್ಥೆಯಂತಲ್ಲ…ಇದು ಒಂದು ಚಳವಳಿ…ಸಂಘದ ಉದ್ದೇಶವೆಂದರೆಜಾತಿ, ಮತ, ವರ್ಗ ಎಂಬ ಗೋಡೆಗಳನ್ನು ಒಡೆಯುವ ಪ್ರಯತ್ನ.ಇಲ್ಲಿ ಎಲ್ಲ ಸಮಾಜದ ಜನರು…ಬಡವರು, ಶ್ರೀಮಂತರು, ದಲಿತರು, ಮೇಲ್ಜಾತಿಯವರುಎಲ್ಲರೂ ಒಂದೇ ವೇದಿಕೆಯಲ್ಲಿ ಕೂತುಕೊಳ್ಳುತ್ತಿದ್ದರು. ಇಂಥ ಮಹತ್ವದ ಕಾರ್ಯಕ್ಕೆ ಗೌರವ ನೀಡಲು, ಮುಂದಿನ ದಿನಗಳಲ್ಲಿ ತಾಯಿಯವರು ದೇಶದ ಪ್ರಮುಖ ನಾಯಕನಾದ*ಬಾಬು ಜಗಜೀವನ್ ರಾಮರನ್ನು *ಮನೆಗೆ ಆಹ್ವಾನಿಸಿ ಬೆಳ್ಳಿಯ ತಟ್ಟೆಯಲ್ಲಿ ಊಟಕ್ಕೆ ಇರಿಸಿದ್ದರು.ಆ ದಿನದ ವಾತಾವರಣ ಕಂಡು ಅತ್ಯಂತ ಉತ್ಸಾಹಭರಿತರಾದ ಜನರು, ವಿವಿಧ ಸಮುದಾಯದವರೆಲ್ಲರೂ ಒಂದೇ ಸ್ಥಳದಲ್ಲಿ ಸೇರಿ ಒಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾದರು. ಜಯದೇವಿ ತಾಯಿಯವರನ್ನು ಉದ್ದೇಶಿಸಿಬಾಬು ಜಗಜೀವನ್ ರಾಮ್ ಅವರು ಮಾತನಾಡುತ್ತಾ ಹೇಳಿದರು:“ಸಮಾನತೆ ಎನ್ನುವುದು ಕೇವಲ ಮಾತಲ್ಲ…ಅದನ್ನು ಜೀವನದಲ್ಲಿ ಅನುಸರಿಸುವವರೇ ನಿಜವಾದ ನಾಯಕರಾಗಲು ಸಾಧ್ಯ… ಜಯದೇವಿ ತಾಯಿಯವರೊಂದು ಆಧ್ಯಾತ್ಮಿಕ ಜೀವಿಯು ಕೂಡಾ ಇಂಥವರು ನಿಮ್ಮ ಮಧ್ಯದಲ್ಲಿ ಇದ್ದಿದ್ದು ನಿಮ್ಮಲ್ಲರ ಪುಣ್ಯವೇ ಸರಿ”ಎನ್ನುತಅವರು ತಾಯಿಯವರ ಕಾರ್ಯವನ್ನು ಹೊಗಳಿದರು.ಆ ಮಾತುಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದವು . “ಶರಣ ಸಮಾಜ”ದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು..ಎಲ್ಲ ಜಾತಿಯವರಿಗೂ ಸಹಭೋಜನಶಿಕ್ಷಣ ಮತ್ತು ಜಾಗೃತಿ ಶಿಬಿರಗಳುಮಹಿಳಾ ಸಬಲೀಕರಣ ಕಾರ್ಯಕ್ರಮಗಳುದಲಿತ ಮತ್ತು ಹಿಂದುಳಿದ ವರ್ಗಗಳಿಗೆ ನೆರವು… ಇಲ್ಲಿ “ನಾನು–ನೀನು” ಎನ್ನುವ ಭೇದವಿಲ್ಲ…“ನಾವು” ಎನ್ನುವ ಭಾವನೆ ಮಾತ್ರ ಇತ್ತು. ಇಂಥ ಸಂಘಗಳ ಸಂಘಟನೆಗಳಿಂದಾಗಿ ನಿಧಾನವಾಗಿ ಬದಲಾವಣೆ ಆರಂಭವಾಯಿತು ಅಂತ ಹೇಳಬಹುದುಜನರು ಪರಸ್ಪರ ಗೌರವದಿಂದ ನೋಡಲು ಆರಂಭಿಸಿದರು.ಒಮ್ಮೆ ದೂರ ದೂರ ಇದ್ದ ಹೃದಯಗಳು,ಸ್ವಲ್ಪಮಟ್ಟಿಗಾದರೂ ಹತ್ತಿರವಾಗತೊಡಗಿದವು.ಈ ಚಳುವಳಿಯಲ್ಲಿ ಶರಣ “ಕಂಬಳಿ ಬಾಬ” ಅವರ ಕಾರ್ಯ ಮಹತ್ವದ್ದು ಎಂದು ನೆನೆಯಬೇಕಾಗುತ್ತದೆ. ಜಯದೇವಿ ತಾಯಿಯವರು ಹೇಳ್ತಾರೆ ….*ಎಲ್ಲರೂ ತೋರಿರುವ| ಹೆದ್ದಾರಿ ಒಂದಿರಲುತಿದ್ದದಲೇ ಮನ ಬುದ್ಧಿಗಳು- ಲೋಕದಿಒದ್ದಾಡುವರು ಕೀಳು ಮೇಲೆಂದು* ಶರಣ ಸಮಾಜವು ಸಮಾನತೆಯ ಬೀಜ ಬಿತ್ತಿದ ಸಾಹಸದ ಚಳುವಳಿಯಾಗಿತ್ತು. ಹುಟ್ಟಿಗೆ ಕುಲವಿಲ್ಲ | ಬಟ್ಟೆಗೆ ಬೆಲೆ ಇಲ್ಲಮಟ್ಟ ಅರಿಬೇಕು ಆಚಾರದ- ಶಿವನಲ್ಲಿದಿಟ್ಟಿ ಇಡಬೇಕ ನಿಶ್ಚಯದಿ!! ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ವ್ಯಕ್ತಿ ಇರಲಿ ಅವನು ಹುಟ್ಟಿ ಬರುವಾಗ ಆ ಜಾತಿ ಈ ಜಾತಿ ಸೇರಿದವನಲ್ಲ …. ಹಣೆಗೆ ಪಟ್ಟಿ ಹಂಚಿಕೊಂಡು ಹುಟ್ಟಿದವನಲ್ಲ ಜನ್ಮ ತಾಳಿದ ಶಿಶುವಿಗೆ ಯಾವ ಜಾತಿ ಇದೆ ಹೇಳಿ ಯಾವ ಕುಲವಿದೆ ಗೋತ್ರವಿದೆ ?!…ಎಂದು ತಾಯಿಯವರು ಕೇಳುತ್ತಿದ್ದರು. ಅದೇ ರೀತಿ ಬಟ್ಟೆಗೆ ಬೆಲೆ ಇಲ್ಲ ಅಂದ್ರೆ ಬದುಕು ಮಾಡಲು ಪ್ರತಿ ಜೀವಿಯು ಕಾಯಕವನ್ನು ಮಾಡಿ ಬದುಕಬೇಕಾಗುತ್ತದೆ.ಕಾಯಕಕ್ಕೆ ಮೇಲು ಕೀಳು ಎಂಬ ತಾರತಮ್ಯ ಸಲ್ಲದು ಯಾವ ಕಾಯಕವೂ ಮಾಡಿದರೂ ಅದು ಶ್ರೇಷ್ಠವಾದದ್ದೇ ಅಂತ ಅಂದರೆ “Dignity of Labour ” ಅನ್ನು ಎತ್ತಿ ಹೇಳುತ್ತದೆ. ಕಾಯಕ ಶ್ರೇಷ್ಠತೆಯಿಂದ ಮನುಷ್ಯ ಶ್ರೇಷ್ಠನಾಗಲು ಸಾಧ್ಯ ಎನ್ನುತ್ತಾ ಸಾಮಾಜಿಕ ಕ್ರಾಂತಿಯಗೆ ತಿರುವು ಕೊಟ್ಟ ಕೀರ್ತಿ ನಮ್ಮ ಶರಣ ಸಮಾಜಕ್ಕೆ ಸಲ್ಲುವುದು ಅನ್ನುತ್ತಿದ್ದರು. ವಿಶ್ವ ಇತಿಹಾಸದಲ್ಲಿ ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣನ ಹೆಸರು ಮೊದಲಾಗುವುದು…. ಸತ್ಯ ಶುದ್ಧ ಕಾಯಕದ ಅನುಷ್ಠಾನ ಮನುಜನ ಆದ್ಯ ಕರ್ತವ್ಯ … ಕೈಗೊತ್ತಿಕೊಂಡ ಕಾಯಕದಲ್ಲಿ ಭಕ್ತಿ ಶ್ರದ್ಧೆ ಇರಬೇಕು ಅದಕ್ಕೆ ಮೇಲು ಕೀಳ ಎಂಬ ಸೂತಕ ತಟ್ಟಬಾರದು ಅನ್ನುತ್ತಿದ್ದರು ತಾಯಿಯವರು… ವೈಚಾರಿಕ ಆಚಾರವೆಂದರೆ ದುಡಿಮೆ ದಾನ ಏನೇ ಇದ್ದರೂ ಎಷ್ಟೇ ಇದ್ದರು ಆಚಾರ ರಹಿತ ವರ್ತನೆಯಲ್ಲಿ ಅದು ಸಂಪೂರ್ಣ ನಿರರ್ಥಕ , ಆದ್ದರಿಂದ ಆಚಾರ ಸಂಪನ್ನನಾಗಿರಬೇಕು ಮನುಷ್ಯ ಅನ್ನುತ್ತಾರೆ ಇದು ಕಾಯದಿಂದ ಬಂದ ಹಣ ಯೋಗ್ಯವಾದ ಕರ್ಮ ಕ್ರಿಯೆಗಳಾದ ಜಂಗಮ ದಾಸೋಹಕ್ಕೆ ಗುರು ಸೇವೆಗೆ ಲಿಂಗದ ಆರಾಧನೆಯೇ ಅಂತಹ ಕೆಲಸಕ್ಕೆ ಸಲ್ಲಬೇಕು. ಸದಾಚಾರ ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತದೆ ಅನ್ನುತ್ತಿದ್ದರು . * ಪರಶಿವನ ಸೇವೆಯಲ್ಲಿ ಸದಾ ತೊಡಗುವುದೇ ಶಿವಾಚಾರ ನಡೆ-ನುಡಿಗಳಲ್ಲಿ ಮಡಿಯಾದವರು ಶಿವಾಚಾರ ಸಂಪನ್ನರು ಅಂತ ಹೇಳ್ತ… ಜಾತಿ ಮತ ರಹಿತಸಮಾಜ ನಿರ್ಮಿಸಲು ತಾಯಿಯವರು ಒತ್ತುಕೊಟ್ಟವರು.( ಮುಂದುವರೆಯುವುದು) ಸವಿತಾ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ ವಚನವನ್ನು
ಧಾರಾವಾಹಿ ಸಂಗಾತಿ-20 ಅರ್ಜುನ ಉವಾಚ ವಿಶ್ವನಾಥ ಎನ್ ನೇರಳೆಕಟ್ಟೆ ರಣರಂಗ ಪ್ರವೇಶಿಸದಂತೆ ರಾಜಕುವರನನ್ನು ತಡೆದಿತ್ತು ರತಿಕಾಮನೆ ಹಂಸಧ್ವಜ ಕಾಯುತ್ತಿದ್ದದ್ದು ಪ್ರೀತಿಯ ಮಗ ಸುಧನ್ವನ ಬರುವಿಕೆಗಾಗಿ. ಅವನು ವಿಳಂಬ ಮಾಡಿದ್ದಾನೆ ಎಂಬ ಕೋಪ ಹಂಸಧ್ವಜನಲ್ಲೀಗ ಮೂಡತೊಡಗಿತ್ತು. ರಣವೀರ ಸುಧನ್ವ ರಣರಂಗದೆಡೆಗೆ ಬರಲು ವಿಳಂಬವಾದುದಕ್ಕೆ ಸಕಾರಣವಿತ್ತು. ಸೈನಿಕರು ಯುದ್ಧಕ್ಕೆ ಸಿದ್ಧರಾಗಿ ಹೋಗುತ್ತಿದ್ದುದನ್ನು ಕಂಡ ಸುಧನ್ವ ತಾನೂ ತಯಾರಾದ. ವೇಷಭೂಷಣಗಳನ್ನು ಧರಿಸಿಕೊಂಡ. ಮನವನ್ನು ರಣಶೌರ್ಯಕ್ಕೆ ಸಿದ್ಧವಾಗಿಸಿಕೊಂಡ. ಹೋಗಿ ಸಾಷ್ಟಾಂಗ ವಂದಿಸಿದ್ದು ತಾಯಿಯ ಚರಣಕಮಲಗಳಿಗೆ. “ಕುದುರೆಯನ್ನು ಕಟ್ಟಿ ಕದನವನ್ನು ಮಾಡಹೊರಟಿರುವ ನನ್ನ ಮೇಲೆ ನಿನ್ನ ಪೂರ್ಣ ಆಶೀರ್ವಾದವಿರಲಿ ತಾಯೇ” ಎಂದು ಬೇಡಿದ. ಮಗನ ಮನವನ್ನು ವೀರತ್ವದಿಂದ ಹರಿದಾಸತ್ವದೆಡೆಗೆ ಸೆಳೆವ ಪರಮವಾಣಿ ಮೊಳಗಿತು ಆ ಕ್ಷಣದಲ್ಲಿ ಮಾತೆಯ ಮನದಾಳದಿಂದ. “ಅರ್ಜುನನ ಯಾಗದ ಕುದುರೆಯದು ನಾಲ್ಕಡಿಯ ದೇಹವನ್ನು ಹೊಂದಿದೆಯಷ್ಟೇ. ಅದರ ಗೊಡವೆಗಿಂತಲೂ ಆ ಪೊಡವೀಪತಿ ಶ್ರೀಕೃಷ್ಣನನ್ನು ಒಲಿಸುವ ಬುದ್ಧಿಯದು ನಿನಗೆ ಒಲಿಯಬೇಕಿದೆ. ನಿನ್ನ ಸಾಹಸವನ್ನು ಮೆಚ್ಚಿ ಆ ಅಸುರಾರಿ ಇಂದು ಪ್ರತ್ಯಕ್ಷನಾದರೆ ನಾವೆಲ್ಲರೂ ಸಾಕ್ಷಾತ್ ಕಾಣಬಹುದು ಅವನ” ಎಂದಳು ಸುಧನ್ವ ಮಾತೆ. ಮಾತೆ ಮಾತದು ಪ್ರೇರೇಪಿಸಿತು ಸುಧನ್ವನನು ಪ್ರತಿಜ್ಞಾಬದ್ಧತೆಯೊಂದರ ಕಡೆಗೆ. “ಅರ್ಜುನನಿಗೆ ನೋವಾದರೆ ಆ ಶ್ರೀಕೃಷ್ಣ ಬಾರದೇ ಇರುವನೇ! ಆಪ್ತರ ಆರ್ತನಾದವನ್ನು ಆ ಆಪದ್ಬಾಂಧವ ಸಹಿಸಿಯಾನೇ! ಇಂದ್ರಸುತನೊಡನೆ ಹೋರಾಡುವೆ ಶೌರ್ಯದಿಂದ. ತನ್ಮೂಲಕ ಆ ಹರಿಯನ್ನು ನಮ್ಮೀ ಧರಣಿಗೆ ಬರಗೊಡುವೆ. ನಂತರ ಆ ಕೃಷ್ಣನ ಮುಂದೆ ನನ್ನ ಪೌರುಷವನ್ನು ತೋರಿಸುವೆ” ಎಂದು ದಿಟ್ಟತನದಿಂದ ನುಡಿದನು ಸುಧನ್ವ. ಶ್ರೀಕೃಷ್ಣ ಬಂದಾಗ ಮಗನೆಲ್ಲಿ ಯುದ್ಧಕ್ಕೆ ವಿಮುಖನಾಗುವನೋ ಎಂಬ ಭಾವ ಆ ತಾಯಿಯನ್ನು ಕಾಡಿತು. ಅದನ್ನೇ ಹೇಳಿದಳು ಮಗನಲ್ಲಿ. “ಕೃಷ್ಣಾಗಮನದ ಗಳಿಗೆಯಲ್ಲಿ ನೀನು ಯುದ್ಧಕ್ಕೆ ವಿಮುಖನಾದರೆ ಜನರ ಮುಂದೆ ಮರ್ಯಾದೆ ನಾಶವದು ಖಚಿತ” ಎಂಬ ಎಚ್ಚರಿಕೆ ನೀಡಿದಳು. “ಕೃಷ್ಣನಿಗೆ ವಿಮುಖನಾಗಿ ಬಂದರೆ ನಿನ್ನ ಗರ್ಭದಲ್ಲಿ ಜನಿಸಿದವನೇ ನಾನಲ್ಲ” ಎಂಬ ಧೀರನುಡಿಯನಾಡಿದ ಸುಧನ್ವ, ಕದನದಲ್ಲಿ ಭರಪೂರ ಶೌರ್ಯವನ್ನು ತೋರಿಸುವ ಆಶ್ವಾಸನೆಯನ್ನು ಅವಳಿಗಿತ್ತನು. ಅಷ್ಟರಲ್ಲಿ ಬಳಿಗೆ ಬಂದ ಅವನ ಸಹೋದರಿ ಕುವಲೆಯೆನ್ನುವವಳು “ಕೃಷ್ಣನಿಗೆ ವಿಮುಖನಾಗಿ ನೀನು ಬಂದರೆ ನನ್ನ ಗಂಡನ ಮನೆಯಲ್ಲಿ ನಾನು ತಲೆಯೆತ್ತಿ ನಡೆಯಲಾರೆ” ಎಂದು ಹೇಳಿ, ಅಣ್ಣ ಅಸಹಾಯ ಶೌರ್ಯ ತೋರಲಿ ಎಂದು ಹಾರೈಸಿ, ಆರತಿಯನೆತ್ತಿ, ಚಂದನದ ತಿಲಕವನ್ನಿಟ್ಟು, ಕರ್ಪೂರ ವೀಳ್ಯವನ್ನು ಕೊಟ್ಟು, ಅಕ್ಷತೆಯನ್ನು ಎರಚಿ ಕಳುಹಿಸಿಕೊಟ್ಟಳು ಸುಧನ್ವನನ್ನು. ಹೀಗೆ ಯುದ್ಧಮುಖನಾಗಿ ಅರಮನೆಯಿಂದ ಹೊರಟುನಿಂತ ಸುಧನ್ವನಿಗೀಗ ಎದುರಾದವಳು ಪ್ರಭಾವತಿ. ಅವನ ಪ್ರಿಯ ರಾಣಿ. ಚಂದ್ರಮಂಡಲದಂತಿತ್ತು ಅವಳ ವದನ. ಹೊಸತು ಬೆಳದಿಂಗಳಂತೆ ಶೋಭಿಸುವ ಅವಳ ನಗು. ರೇಷ್ಮೆಯುಡುಗೆಯನ್ನು ತೊಟ್ಟು ಮೆರೆಯುತ್ತಿದ್ದಾಳೆ. ಅವಳ ಹಣೆಯ ಮೇಲಿನ ಕೆಂಬಣ್ಣದ ಸಿಂಧೂರ ತಿಲಕವದು ಅವಳ ಚಿತ್ತದ ಅನುರಾಗವನ್ನು ಸೂಚಿಸುವಂತಿದೆ. ಸೌಂದರ್ಯವನ್ನೇ ಹೊತ್ತುನಿಂತಿದ್ದಳು ಪ್ರಭಾವತಿ. ಮಡದಿಯ ಬೆಡಗು ಬಿನ್ನಾಣಗಳನ್ನು ನೋಡಿ ಮುಗುಳುನಗುತ ಸುಧನ್ವ “ಇಂದು ಯುದ್ಧದಲ್ಲಿ ಅರ್ಜುನನ ಬಿಂಕವನ್ನು ಕೊನೆಗಾಣಿಸುತ್ತೇನೆ. ಕೃಷ್ಣ ಪ್ರತ್ಯಕ್ಷನಾದಾಗ ಅವನ ಮುಂದೆಯೂ ನನ್ನ ಪರಾಕ್ರಮದ ಪ್ರದರ್ಶನಗೈಯ್ಯುತ್ತೇನೆ. ಗೆಲುವನ್ನು ಪಡೆಯುತ್ತೇನೆ. ಅದಾಗದಿದ್ದರೆ ವೀರಮರಣವನ್ನು ಪಡೆದು ಮುಕ್ತಿಯನ್ನು ಗಳಿಸುತ್ತೇನೆ. ನನ್ನನ್ನು ಒಲವಿನಿಂದ ಕಳಿಸಿಕೊಡು ನೀನು” ಎಂದನು. ರಾಣಿ ಪ್ರಭಾವತಿಯ ಆಕಾಂಕ್ಷೆಯದು ಬೇರೆಯದೇ ತೆರದಲ್ಲಿತ್ತು. ಕೃಷ್ಣನಿಗೆ ಯುದ್ಧದಲ್ಲಿ ಎದುರಾದ ಬಳಿಕ ಮೋಕ್ಷವಲ್ಲದೆ ಜಯ ದೊರೆಯಲು ಸಾಧ್ಯವಿಲ್ಲ ಎಂಬ ಅರಿವಿತ್ತು ಅವಳಿಗೆ. ಗಂಡ ಯುದ್ಧಕ್ಕೆ ಹೋಗುವುದಕ್ಕೂ ಮೊದಲು ತನ್ನನ್ನು ಕೂಡಿದರೆ ಆ ಬಳಿಕ ತಾನು ಸಂತಾನರಹಿತೆ ಎನಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವಳ ಯೋಚನೆ. ಕಾಮಾಸಕ್ತಿ ಅವಳಲ್ಲಿ ಗರಿಗೆದರಿತ್ತು. ತಾಯ್ತನದ ಹಂಬಲ ಅವಳನ್ನು ಕಾಡತೊಡಗಿತ್ತು. ತನ್ನನ್ನು ತೃಪ್ತಿಗೊಳಿಸಿ ಯುದ್ಧಕ್ಕೆ ತೆರಳು ಎಂದು ಕೇಳಿಕೊಂಡಳು ಸುಧನ್ವನನ್ನು. ಯುದ್ಧರಂಗದೆಡೆಗೆ ಮುಖಮಾಡಿದ್ದ ಹಂಸಧ್ವಜಸುತನಿಗೆ ಮಡದಿಯ ಮಾತು ಸರಿದೋರಲಿಲ್ಲ. “ಕಾಮದಾಟಕ್ಕೆ ಇದು ಸಮಯವಲ್ಲ. ಕದನಭೇರಿ ನನ್ನನ್ನು ಕರೆಯುತ್ತಿದೆ. ನನ್ನ ತಂದೆ ಈಗಾಗಲೇ ರಣಭೂಮಿಯನ್ನು ಸೇರಿಯಾಗಿದೆ. ಸರಿಯಾದ ಸಮಯದಲ್ಲಿ ನಾನಲ್ಲಿ ಇರದಿದ್ದರೆ ಕ್ರಮವನ್ನು ಮೀರಿದಂತಾಗುತ್ತದೆ. ನೀನು ನನ್ನನ್ನೀಗ ತಡೆಯುವುದು ಸರಿಯಲ್ಲ. ನನ್ನನ್ನು ಹೋಗಲು ಬಿಡು” ಎಂದು ಹೇಳುತ್ತಾ ಅವನು ಮುಂದುವರಿಯುವ ಮನಸ್ಸು ಮಾಡಿದ. ಆಗಲೇ ಅವಳು ಅವನ ಗಲ್ಲವನ್ನು ಹಿಡಿದು, ಮುದ್ದುಮಾಡಿ, ಅವನೆಡೆಗೆ ತನ್ನ ತನುವನ್ನು ನೂಕಿದಳು. ಮನ್ಮಥನ ರಣರಂಗವನ್ನು ಪ್ರವೇಶಿಸಬೇಕಾದ ನೀನು ಕುದುರೆಯನ್ನು ಗೆಲ್ಲಬೇಕಾದ ಯುದ್ಧರಂಗಕ್ಕೆ ಹೇಗೆ ಹೋಗುವೆಯೋ ನೋಡುತ್ತೇನೆ ಎಂಬಂತೆ ಅವಳು ತನ್ನೆರಡೂ ಮೊಲೆಗಳನ್ನು ಅವನ ದೇಹಕ್ಕೆ ಒತ್ತುತ್ತಾ, ಗಾಢವಾಗಿ ಆಲಿಂಗನಗೈದು ಶೃಂಗಾರ ಚೇಷ್ಟೆಗಳನ್ನು ತೋರಿದಳು. ಹಂಸಗಳ ತುಪ್ಪಳದಿಂದ ನಿರ್ಮಿಸಲಾದ ಹಾಸಿಗೆಯೆಡೆಗೆ ಅವನನ್ನು ಸೆಳೆದೊಯ್ದಳು. ಮಡದಿಯ ಮೋಹದಾಟಗಳು ಯುದ್ಧರಂಗದೆಡೆಗೆ ಮುಖಮಾಡಿದ್ದ ಸುಧನ್ವನ ಅಂತರಂಗವನ್ನು ಇನ್ನೊಂದು ದಿಕ್ಕಿಗೆ ಹಾಯಿಸಿದವು. ಮನದನ್ನೆಯ ಮನದ ಕಾಮನೆಯನ್ನು ತಣಿಸಿ, ರಮಿಸುವುದರಲ್ಲೇನೂ ತಪ್ಪಿಲ್ಲ ಎಂದು ತೋರಿತು ಅವನಿಗೆ. ಸರಸದ ಮಾತುಗಳನ್ನಾಡಿದ. ಚುಂಬಿಸಿದ. ಪ್ರೀತಿಯಿಂದ ಅವಳೆದೆಯಲ್ಲಿ ಒರಗಿದ. ಕಾಮಿನಿಯ ಕಾಮದ ಕಡಲಲ್ಲಿ ಮುಳುಗಿಹೋದ ಸುಧನ್ವ. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿಬದುಕಿನ ಹಿನ್ನೋಟ-34 ಮರಳಿ ಮೈಸೂರಿಗೆ ಮೈಸೂರಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನದು ಐದನೆಯ ಸಂಖ್ಯೆಯಾಗಿತ್ತು. ಖಂಡಿತ ಈ ಬಾರಿ ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂದು ಯೂನಿಯನ್ ನವರು ಸಹ ಹೇಳಿದ್ದರು. ಈ ನಡುವೆ ಶಾಖಾಧಿಕಾರಿಗಳ ಬದಲಾವಣೆ ಆಗಿ ಸಿ ಕೆ ರವಿ ಅವರು ವರ್ಗಾವಣೆ ಹೊಂದಿ ಮೈಸೂರು ಶಾಖೆ 5 ಕ್ಕೆ ಹೋದರು. ನಮ್ಮ ನಂಜನಗೂಡು ಶಾಖೆಗೆ ಶಿವಶರಣ್ ಎನ್ನುವವರು ಶಾಖಾಧಿಕಾರಿಗಳಾಗಿ ಬಂದರು. ಮುಂದೆ ಅವರು ನಮ್ಮ ವಿಭಾಗೀಯ ಕಚೇರಿಯ ಮಾರ್ಕೆಟಿಂಗ್ ಮ್ಯಾನೇಜರ್ ಸಹ ಆದರು. ನನಗೆ ಸಾಲ ವಿಭಾಗದಿಂದ ಪಿ ಎಸ್ ಜನರಲ್ ಅಂದರೆ ಪಾಲಿಸಿ ಸೇವಾ ಸಾಮಾನ್ಯ ವಿಭಾಗಕ್ಕೆ ಬದಲಾವಣೆ ದೊರಕಿತು. ಈ ವಿಭಾಗದ ಕೆಲಸಗಳೆಂದರೆ ಪಾಲಿಸಿಗಳನ್ನು ಬೇರೆ ಶಾಖೆಗಳಿಗೆ ವರ್ಗಾವಣೆ ಮಾಡುವುದು, ಪಾಲಿಸಿಗಳಿಗೆ ಸಂಬಂಧಿಸಿದ ಅಸೈನ್ ಮೆಂಟ್ ಮತ್ತು ನಾಮ ನಿರ್ದೇಶನಗಳನ್ನು ಮಾಡುವುದು, ಪಾಲಿಸಿಗಳನ್ನು ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ ಬದಲಾಯಿಸುವುದು, ಅಂದರೆ ಪ್ರೀಮಿಯಮ್ ಪಾವತಿಯ ವಿಧಾನ ಬದಲಾವಣೆ ಹಾಗೂ ಕಳೆದು ಹೋದ ಬಾಂಡ್ ಗಳ ಬದಲಾಗಿ ಡುಪ್ಲಿಕೇಟ್ ಬಾಂಡ್ ಗಳನ್ನು ಮಾಡಿಕೊಡುವುದು. ಇವೆಲ್ಲಾ ಸಹ ತುಂಬಾ ಆಸಕ್ತಿದಾಯಕ ಕೆಲಸಗಳೇ ಆಗಿದ್ದವು. ಇಲ್ಲಿ ಈ ಜಾಗಕ್ಕೆ ಸಹಾಯಕರು ಇರಲಿಲ್ಲ .ನಾನೇ ಮಾಡಿದ ಮೇಲೆ ಆಡಳಿತ ಅಧಿಕಾರಿಗಳು ಪಾಸ್ ಮಾಡುತ್ತಿದ್ದರು. ನೇರವಾಗಿ ಪಾಲಿಸಿ ದಾರರ ಜೊತೆಗೆ ವ್ಯವಹರಿಸುತ್ತಿದ್ದುದರಿಂದ ಒಂದು ರೀತಿ ಕೆಲಸದಲ್ಲಿ ಸಂತೃಪ್ತಿ ದೊರಕುತ್ತಿತ್ತು. ಬೇಕಾದ ಕೆಲಸವನ್ನು ಬೇಗನೆ ಮಾಡಿಕೊಟ್ಟಾಗ ಅವರುಗಳು ಧನ್ಯವಾದ ಹೇಳಿ ಖುಷಿಯಾಗುತ್ತಿದ್ದರೆ ಅದು ಸಾರ್ಥಕ ಭಾವನೆ ಮೂಡಿಸುತ್ತಿತ್ತು. ಈ ಮಧ್ಯೆ ಜೂನ್ ೨೦೦೩ ರಲ್ಲಿ ಒಂದು ಸಣ್ಣ ಅಪಘಾತ ಆಯಿತು. ದಿನ ಅಶೋಕಪುರಂ ರೈಲ್ವೆ ಸ್ಟೇಷನ್ಗೆ ಹೋಗಲು ರವೀಶ್ ಅವರ ಹಳೆಯ ಲೂನವನ್ನು ತೆಗೆದುಕೊಂಡು ಹೋಗುತ್ತಿದ್ದೆ. ಅಂದು ಬುಧವಾರ ಜೂನ್ ತಿಂಗಳ ಕಡೆಯ ವಾರ. ಆಗ ನಮಗೆ ಜುಲೈನಿಂದ ಹೊಸ ಸಾಂದರ್ಭಿಕ ರಜೆಗಳು ಹಾಗಾಗಿ ಎರಡು ಉಳಿದಿದ್ದನ್ನು ಗುರುವಾರ ಮತ್ತು ಶುಕ್ರವಾರ ಹಾಕಿಕೊಂಡು ಬಿಡೋಣ ಅಂದುಕೊಂಡಿದ್ದೆ. ಅಂದು ಮನೆ ಬಿಡುವಾಗಲೇ ಸ್ವಲ್ಪ ತಡವಾಗಿತ್ತು. ಒಂದು ಚೂರು ವೇಗವಾಗಿಯೇ ಹೋಗುತ್ತಿದ್ದೆ ಅಲ್ಲಿ ಶಿವನ ದೇವಸ್ಥಾನದ ಹಿಂದಿನ ರಸ್ತೆಯಿಂದ ಒಂದು ಹುಡುಗಿ ಇದ್ದಕ್ಕಿದ್ದಂತೆ ಸೈಕಲ್ ನಲ್ಲಿ ಮುಖ್ಯ ರಸ್ತೆಗೆ ನುಗ್ಗಿದಳು. ನಾನು ರಭಸವಾಗಿ ಹೋಗುತ್ತಿದ್ದರಿಂದ ಇಬ್ಬರೂ ವಾಹನ ಡಿಕ್ಕಿ ಹೊಡೆದು ಬಿದ್ದೆವು. ಆ ಹುಡುಗಿಗೆ ಸ್ವಲ್ಪ ಗಾಯಗಳಾಗಿದ್ದವು ನನಗೂ ಮಂಡಿ ಮುಖ ಎಲ್ಲಾ ಕೆತ್ತಿ ಹೋಗಿತ್ತು. ಪಕ್ಕದಲ್ಲಿ ಇದ್ದ ಆಸ್ಪತ್ರೆಗೆ ಆ ಹುಡುಗಿಯನ್ನು ಕರೆದುಕೊಂಡು ಹೋದರು. ನನ್ನ ಜೊತೆ ನಂಜನಗೂಡಿಗೆ ಹೋಗುತ್ತಿದ್ದ ಬ್ಯಾಂಕ್ ಉದ್ಯೋಗಿ ಸುಜಾತ ಎನ್ನುವವರು ಮತ್ತು ಅವರ ತಂದೆ ರೈಲು ಸಿಗದೇ ಅದೇ ದಾರಿಯಲ್ಲಿ ವಾಪಸ್ ಬಂದರು. ನನ್ನನ್ನು ಆಟೋ ಮಾಡಿ ಮನೆಗೆ ಕಳಿಸಿ ನನ್ನ ಗಾಡಿಯನ್ನು ಅಲ್ಲೇ ಹತ್ತಿರದಲ್ಲಿದ್ದ ಅವರ ಮನೆಯಲ್ಲಿ ಇಟ್ಟುಕೊಂಡರು. ಆ ಹುಡುಗಿಯ ಮನೆಯವರು ಅಲ್ಲೇ ಇದ್ದ ಮತ್ತೊಬ್ಬರು ನನ್ನ ಗಾಡಿ ನಂಬರ್ ಕೊಟ್ಟಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಆ ಹುಡುಗಿಯದೆ ತಪ್ಪು ಆಗಿದ್ದರು ಸಹ ದೊಡ್ಡ ವಾಹನದವರ ಮೇಲೆ ತಪ್ಪು ಹೊರಿಸುವುದು ಸಹಜ ಆಗಿದ್ದರಿಂದ ನಮ್ಮನ್ನೇ ದೋಷಿಗಳನ್ನಾಗಿ ಮಾಡಿದರು. ಪೋಲಿಸಿನವರ ಜೊತೆ ಸೇರಿ ನಮ್ಮಿಂದ ಹಣ ಕಿತ್ತುಕೊಳ್ಳುವ ಹುನ್ನಾರ ಅವರದು ಕಡೆಗೆ ಪೊಲೀಸಿನವರ ಮಧ್ಯಸ್ಥಿಕೆಯಿಂದ 5000 ಅವರಿಗೆ ತೆತ್ತಬೇಕಾಯಿತು . ಪಾಪ ರವೀಶ್ ಅಬರು ಈ ಸಂಬಂಧ ಪೋಲೀಸ್ ಠಾಣೆಗೆ ಓಡಾಡಿ ಎಲ್ಲಾ ಇತ್ಯರ್ಥ ಮಾಡಿಸಿದರು. ಆಗ ತಕ್ಷಣಕ್ಕೆ ನಮ್ಮ ತಂದೆಯೇ ಹಣದ ವ್ಯವಸ್ಥೆ ಮಾಡಿಕೊಟ್ಟರು. ಆನಂತರ ನಾನು ಮತ್ತೆ ಗಾಡಿ ಓಡಿಸಲೇ ಇಲ್ಲ.ವರ್ಗಾವಣೆ ಆದೇಶಗಳು ಬಂದು ಜನವರಿ 10ನೆಯ ತಾರೀಕು ನಾನು ನಂಜನಗೂಡಿನಿಂದ ರಿಲೀವ್ ಆಗಬೇಕಿತ್ತು ಆ ಬಾರಿ ನಾನೊಬ್ಬಳೇ ವರ್ಗಾವಣೆ ಹೊಂದುತ್ತಿದ್ದವಳು. ಹಾಗಾಗಿ ಇಡೀ ಶಾಖೆಗೆ ಸಿಹಿ ಮತ್ತು ಖಾರದ ವಿತರಣೆ ಮಾಡಿ ಆಪ್ತ ಗೆಳತಿಯರಿಗೆ ಹೋಟೆಲ್ ರಾಮ್ ಪ್ರಸಾದ್ ನಲ್ಲಿ ಸಂಜೆ ಮಸಾಲೆ ದೋಸೆಯ ಪಾರ್ಟಿ ಕೊಟ್ಟೆ. ಸುಲೋಚನ ಮತ್ತು ಶಶಿಕಲಾ ಇಬ್ಬರು ಪ್ರತ್ಯೇಕವಾಗಿ ಒಂದೊಂದು ಡ್ರೆಸ್ ಉಡುಗೊರೆ ಕೊಟ್ಟರು. ಮಿಕ್ಕ ಮಹಿಳಾ ಸಹೋದ್ಯೋಗಿಗಳೆಲ್ಲ ಸೇರಿ ಒಂದು ಚಿನ್ನದ ಓಲೆಯನ್ನು ಉಡುಗೊರೆ ಕೊಟ್ಟರು. ನಾನು ಅವರಿಗೆಲ್ಲ ಅಲಾರಾಂ ಗಡಿಯಾರವನ್ನು ಕಾಣಿಕೆಯಾಗಿ ಕೊಟ್ಟೆ. ಸುಲೋಚನ ಅವರ ಮನೆಗೆ ಅವರೇ ಸೂಚಿಸಿದಂತೆ ಒಂದು ಇಡ್ಲಿ ಕುಕ್ಕರ್ ಕೊಡಿಸಿದೆ. ಇನ್ನು ರೈಲಿನ ಗೆಳತಿಯರಿಗೆ ಅಂದು ಬೆಳಗಿನ ತಿಂಡಿ ನಾನು ಪಾರ್ಟಿ ರೂಪದಲ್ಲಿ ಕೊಡುತ್ತೇನೆ ಎಂದು ಹೇಳಿ ಅಮ್ಮನ ಸಹಾಯದಿಂದ ಬಿಸಿಬೇಳೆ ಬಾತ್ ಮೊಸರನ್ನ ಮಾಡಿಕೊಂಡು ಮೈಸೂರು ಪಾಕು ಹಾಗೂ ಚಿಪ್ಸ್ ಗಳೊಂದಿಗೆ ರೈಲಿನಲ್ಲಿ ನಮ್ಮ ಆಹಾರ ಪಾರ್ಟಿ ಮುಗಿಸಿದರು. ಅವರೆಲ್ಲ ಸೇರಿ ಒಂದು ಜೊತೆ ಬೆಳ್ಳಿಯ ದೀಪ ಹಾಗೂ ಊದುಬತ್ತಿ ಸ್ಟ್ಯಾಂಡನ್ನು ಉಡುಗೊರೆಯಾಗಿ ಕೊಟ್ಟರು. ಇಂದಿಗೂ ಅವುಗಳನ್ನು ಬಳಸುತ್ತಿದ್ದೇನೆ. ಅಂತೂ ಇಂತೂ ಮೈಸೂರು ಬಿಟ್ಟು 7 ವರ್ಷಗಳ ನಂತರ ಮತ್ತೆ ಮೈಸೂರಿಗೆ ವರ್ಗಾವಣೆ ಹೊಂದಿ ಸಮಾಧಾನದ ನಿಟ್ಟುಸಿರು ಬಿಟ್ಟ ಹಾಗೆ ಆಯಿತು. ಮೈಸೂರು ಶಾಖೆ 2ಕ್ಕೆ ನನ್ನ ಪೋಸ್ಟಿಂಗ್ ಆಗಿತ್ತು. ಆಗ ಅದು ಮೈಸೂರಿನ ಸಬರ್ಬ್ ಬಸ್ ಸ್ಟ್ಯಾಂಡ್ ಎದುರಿಮ ಸುಂದರ್ ಆರ್ಕೇಡ್ ಕಟ್ಟಡದಲ್ಲಿ ಇತ್ತು .೧೦ ಜನವರಿ ೨೦೦೪ ರಂದು ಶನಿವಾರ ಅಲ್ಲಿಂದ ರಿಲೀವ್ ಆಗಿದ್ದು. ಸೋಮವಾರ ಡ್ಯೂಟಿಗೆ ರಿಪೋರ್ಟ್ ಆಗಬೇಕಿತ್ತು(ಮುಂದುವರೆಯುವುದು) ಸುಜಾತಾ ರವೀಶ್
ಧಾರಾವಾಹಿ ಸಂಗಾತಿ-13 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಲೇ: ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ *ಭಯವನು ಗೆದ್ದವರು ಇತಿಹಾಸವನ್ನು ರಚಿಸುವರು* ಅನ್ನುವ ಮಾತು ಸುಳ್ಳಾಗಲಿಲ್ಲ……!!! ಜಯದೇವಿ ತಾಯಿಯವರ ನಿಜಾಮನಂಥ ಶಿಷ್ಟ ಆಳರಸನ ಆಜ್ಞೆಯನ್ನು ಉಲ್ಲಂಘಿಸಿ ಜಹೀರಾಬಾದಿನ ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನಲ್ಲಿ ಭಾಗವಹಿಸಿ ಜನಸ್ತೋಮದ ಸ್ಪೂರ್ತಿ ಉತ್ಸಾಹವನ್ನು ಉಲ್ಬಣಿಸಿದ್ದರು. ಇತಿಹಾಸವನ್ನು ರಚಿಸಿದರು. * ಶರಣರ ಭೂಮ್ಯಾಗ ಮರಣವೆ ಲೇಸಂದು ಹರಣದ ಹಂಗ ತೊರೆದೇನ, ಕಲ್ಯಾಣದಶರಣರಿಗೆ ನೆನೆದೇನ ಮನದಾಗ * ಅಂತ ಹೇಳುತ್ತಾ ಹೈದರಾಬಾದಿನ ಜಹೇರಾಬಾದಿನಲ್ಲಿ ಗರ್ಜಿಸಿದ ಜಯದೇವಿ ತಾಯಿಯವರು ಕಲ್ಯಾಣ ಶರಣರ ಗಣಾಚಾರ ನೆನೆಯುತ ಕೆಚ್ಚದೆಯ ಧೈರ್ಯ ಸಾಹಸ ಮೇರೆದರು. ನಿಜಾಮನ ಫರ್ಮಾನ್ನ್ನು ಧಿಕ್ಕರಿಸಿ ಹೈದರಾಬಾದ್ ಮಣ್ಣಿಗೆ ಕಾಲಿಟ್ಟ ಜಯದೇವಿ ತಾಯಿಯವರ ಧೈರ್ಯ….. ಬ್ರಿಟಿಷರ ಗಮನ ಸೆಳೆದಿತ್ತು. ಆ ಸಮಯದಲ್ಲಿ ಎರಡನೇ ಮಹಾಯುದ್ಧ ಉಗ್ರವಾಗಿ ನಡೆಯುತ್ತಿತ್ತು. ಯುದ್ಧದ ಹೊತ್ತಿನಲ್ಲಿ ತಮ್ಮ ಸೇನೆಗೆ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಲು ಬ್ರಿಟಿಷರು ವಿವಿಧ ಸಮಾಜಗಳ ನಾಯಕರನ್ನು ಸಂಪರ್ಕಿಸುತ್ತಿದ್ದರು.ಜಯದೇವಿ ತಾಯಿಯವರನ್ನು ಭೇಟಿ ಮಾಡಿ ವಿನಂತಿಯ ರೂಪದಲ್ಲಿ ಒಂದು ಮಾತು ಹೇಳಿದರು…. “ನೀವು ಲಿಂಗಾಯತ ಸಮಾಜದಲ್ಲಿ ಪ್ರಭಾವ ಹೊಂದಿದ್ದೀರಿ. ನಮ್ಮ ಸೈನ್ಯಕ್ಕಾಗಿ ಲಿಂಗಾಯತ ಯುವಕರನ್ನು ಕೂಡಿಸಿ, ಅವರನ್ನು ಸೇನೆಗೆ ಸೇರಲು ಪ್ರೇರೇಪಿಸಿ. ದೇಶ ಸೇವೆಯ ಹೆಸರಿನಲ್ಲಿ ಇದು ದೊಡ್ಡ ಕಾರ್ಯವಾಗುತ್ತದೆ. ನಿಮ್ಮ ಸೇವೆಗೆ ನಾವು ಗೌರವ ಮತ್ತು ಪ್ರಶಸ್ತಿಯನ್ನು ನೀಡುತ್ತೇವೆ.”ಎಂದರು ಆ ಮಾತು ಕೇಳಿದ ತಾಯಿಯವರು ಕ್ಷಣಕಾಲ ನಿಶ್ಶಬ್ದವಾಗಿ ನಿಂತರು.ಅವರು ನಿಧಾನವಾಗಿ ತಲೆಯನ್ನು ಎತ್ತಿ, ಕಣ್ಣಲ್ಲಿ ಸ್ಪಷ್ಟತೆ ಮತ್ತು ಧೈರ್ಯ ತುಂಬಿಸಿಕೊಂಡು ಹೇಳಿದರು….“ಇದು…. ದೇಶ ಸೇವೆಯೇ…..?? ನಮ್ಮ ಜನರನ್ನು ಪರರ ಯುದ್ಧಕ್ಕೆ ಒಪ್ಪಿಸುವ ದಾರಿ…..?”“ನನ್ನ ಜನರನ್ನು ನಿಮ್ಮ ಯುದ್ಧಕ್ಕಾಗಿ ಹುರಿದುಂಬಿಸಲಾದಿತ್ತೇ????……. ನಾವೇಲ್ಲ ಈ ಮಣ್ಣಿನ ಮಕ್ಕಳು… ನಮ್ಮ ಶಕ್ತಿ, ನಮ್ಮ ಜೀವ…. ದೇಶದ ಸ್ವಾತಂತ್ರ್ಯಕ್ಕಾಗಿ ಹೊರತು ವಿದೇಶಿಯರ ಯುದ್ಧಕ್ಕಾಗಿ ಅಲ್ಲ.” ಎಂದು ಸ್ಪಷ್ಟಪಡಿಸಿದರು. ಬ್ರಿಟಿಷರು ಮತ್ತೆ ಆಮಿಷಗಳನ್ನು ಮುಂದಿಟ್ಟರುಪ್ರಶಸ್ತಿ, ಕೀರ್ತಿ, ಸನ್ಮಾನ ಅಂತ……!!!ಆದರೆ ತಾಯಿಯವರ ಹೃದಯದಲ್ಲಿ ಅವುಗಳಿಗೆ ಯಾವುದೇ ಸ್ಥಳ ಇರಲಿಲ್ಲ.“ನನ್ನ ಜನರ ಭವಿಷ್ಯವನ್ನು ನಾನು ಮಾರುವುದಿಲ್ಲ,” ಎಂದು ಅವರು ದೃಢವಾಗಿ ಉತ್ತರಿಸಿದರು. ಜಯದೇವಿ ತಾಯಿಯವರು ಪ್ರಶಸ್ತಿಗಳನ್ನು ಕೇವಲ ನಿರಾಕರಿಸಿದವರಲ್ಲ….*ಅವರು ತಮ್ಮ ಸಮುದಾಯದ ಗೌರವವನ್ನು, ದೇಶದ ಆತ್ಮಸಮ್ಮಾನವನ್ನು ಕಾಪಾಡಿದ ಮಹಾನ್ ನಾಯಕಿ ಆಗಿದ್ದರು.*ಅವರು ಹೇಳುವಂತೆ …. ಮಹಾತ್ಮ ಗಾಂಧಿಯ ಅನುಯಾಯಿಯಾಗಿ ಸ್ವದೇಶಿ ವಸ್ತ್ರವನ್ನು ಧರಿಸಿ ವಿದೇಶರಿಗೆ ಸಹಾಯ ಮಾಡುವುದೆಂದರೆ ದೇಶದ್ರೋಹವೇ ಸರಿ ಎಂದರು.ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಪಿತಮಹಾನೊಂದಿಗೆ ದೇಶ ಸೇವೆಗೆ ಕಂಕಣ ಬದ್ಧರಾಗಿ ನಿಂತರು. ಆದರೆ ಮನೆಯಲ್ಲಿಯ ವಿರೋಧವನ್ನು ಎದುರಿಸಬೇಕಾಯಿತು ಏಕೆಂದರೆ ಬ್ರಿಟಿಷರು ಅವರ ಆಸ್ತಿಯ ಮೇಲೆ ತೆರಿಗೆಯ ಭಾರವನ್ನು ಹೇರಿದರು. ಹೆಚ್ಚಿನ ಮೊತ್ತದ “ವಾರ್ ಫಂಡ್” ಜಯದೇವಿ ತಾಯಿಯವರು ಮನೆಯವರು ಕಟ್ಟಬೇಕಾಗಿ ಬಂತು. ತಾಯಿಯವರು ಸ್ವದೇಶಿ ಅರಿವೇ ಉಡಲು ಪ್ರಾರಂಭಿಸಿದರು.ಇದೇ ಸಮಯದಲ್ಲಿ. ಹರಡೇಕರ್ ಮಂಜಪ್ಪನವರ ನೇತೃತ್ವದಲ್ಲಿ* ಹಿಂದೂಸ್ತಾನಿ ಸೇವಾದಳ *ಸ್ಥಾಪನೆಯ ಸಂಕಲ್ಪವು ಎಲ್ಲೇಲ್ಲೂ ನಡೆದಿತ್ತು. ಆಗಿನ ಕಾರಾಗ್ರಹ ವಾಸವು ನರಕ ಸದೃಶವಾಗಿತ್ತು. ಕೆಲವು ಹಸಿಬಿಸಿ ತರುಣರು ಕಾರಾಗೃಹದಲ್ಲಿ ಇದ್ದಾಗ ಬ್ರಿಟಿಷರು ಕೊಡುತ್ತಿದ್ದ ಹಿಂಸೆಯ ತಾಳಲಾರದೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು ಸೆರೆಮನೆಯಿಂದ ಹೊರ ಬಂದರೆಂಬ ವಿಷಯ ಕಿವಿಗೆ ಬಿದ್ದು ಹರಡೇಕರ ಮಂಜಪ್ಪನವರು ಹಾಗೂ ಇನ್ನು ಕೆಲವು ಮುಖಂಡರು ಬಲು ನೊಂದುರು ….ವಿವೇಚನೆಯಿಂದ ದೇಶದಲ್ಲಿ ತರುಣ ಸಂಘಟನೆ ಮಾಡಿ ಅವರಿಗೆ ದೇಶ ಪ್ರೇಮದ ಕೆಚ್ಚು, ದೇಶಾಭಿಮಾನ , ಸ್ವಾಭಿಮಾನ,ಶಿಸ್ತು, ಸಂಯಮ, ಕಷ್ಟ ಸಹಿಷ್ಣತೆ, ಶರೀರ ಬಲ ವರ್ಧನೆ, ಇವುಗಳೆಲ್ಲವನ್ನು ಮೇಳ್ಯಸಿ ವೀರ ಯುವಕರನ್ನು ನಿರ್ಮಾಣ ಮಾಡುವ ಸಂಘಟನೆಯನ್ನು ಕಟ್ಟಬೇಕೆಂದು ದೃಢ ನಿರ್ಧಾರವನ್ನು ಮಾಡಿ ಸೇವಾದಳ ಸ್ಥಾಪನೆಯನ್ನು ಅಲ್ಲಲ್ಲಿ ಮಾಡಲು ಪ್ರಾರಂಭಿಸಿದರು. ಈ ಹಿನ್ನೆಲೆಯಿಂದಲೇ ಕರ್ನಾಟಕದಲಿ ಅತ್ಯಂತ ಭರದಲಿ ರಾಷ್ಟ್ರೀಯ ಸೇವಾದಳ ಸ್ಥಾಪನೆಗೆ ಚಾಲನೆ ದೊರಕಿತು.. ಇಂಥ ಸಂಘಟನೆ ಪ್ರಾರಂಭವಾದಾಗ ಇದು ಪುರುಷರಷ್ಟೇ ಪಾಲುಕೊಳ್ಳುತ್ತಿದ್ದರು. ರಾಷ್ಟ್ರ ಹಿತಕ್ಕೆ ಹೋರಾಡಲು ಮಹಿಳೆಯರು ಪುರುಷರಿಗೆ ಹೆಗಲುಕೊಟ್ಟು ನಿಲ್ಲುವ ಸಂದರ್ಭಗಳು ಬಂದೊದಗಿತ್ತು. ಅದಕ್ಕಾಗಿ ಮಹಿಳೆಯರಿಗಾಗಿ ನಿರ್ದಿಷ್ಟವಾದಂಥ ಸಂಘಟನೆ ಯಾವುದು ಇರಲಿಲ್ಲ ….ಹೀಗಾಗಿ ಈ ಸಂಘಟನೆಯಲ್ಲಿ ಸೇರಿ ಕೊಳ್ಳುವ ಮೂಲಕ ರಾಷ್ಟ್ರೀಯ ಚಳುವಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು…. ಹಾಗೆ ಮಹಿಳೆಯರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ಪ್ರೇರೆಪಿಸುತ ರಾಷ್ಟ್ರದ ಆಗೂ ಹೋಗುಗಳ ಅರಿವು ಮೂಡಿಸಿ… ರಾಷ್ಟ್ರೀಯತೆಯನ್ನು ಉತ್ತೇಜಿಸುವ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ೧೯೪೭ರಲ್ಲಿ ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ *ಜಯದೇವಿ ತಾಯಿಯವರು ತಮ್ಮ ಮನೆಯಾದ *ಜಯನಿಕೇತನದಲ್ಲಿ *ರಾಷ್ಟ್ರೀಯ ಸೇವಾದಳ,*ಪ್ರೌಢ ಸ್ತ್ರೀ ಶಾಖೆ*ಯನ್ನು ಆರಂಭಿಸಿದರು. ಸೊಲ್ಲಾಪುರದಲ್ಲಿ ಪ್ರಾಂತೀಯ ಸಂಘಟಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಂಘವು ಅನುತಾಲಿಮಯೋ ಅವರಿಂದ ಉದ್ಘಾಟಿಸಲಾಯಿತು. ಇಲ್ಲಿ ಪ್ರತಿ ವಾರ ಸಭೆ ಸೇರಿ ರಾಷ್ಟ್ರೀಯ ಹಿತ ಚಿಂತನೆಗಾಗಿ ರಾಜಕೀಯ ಸಾಮಾಜಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಮಹಿಳೆಯರ ಭೌಧಿಕ-ಭೌತಿಕ ಆರೊಗ್ಯಕರ ವಿಕಾಸದೊಂದಿಗೆ ದೇಶಪ್ರೇಮ ಹಾಗೂ ಮಹಾನ್ ಆದರ್ಶ ಪುರುಷರು-ಸ್ತ್ರೀಯರ ಬಗ್ಗೆ ಅನೇಕ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು. ಜಯದೇವಿ ತಾಯಿ ಮತ್ತು *ರಾಮಕೃಷ್ಣ ಜಾಜುಜಿ* ಅಂಥವರ ಭಾಷಣದಿಂದ ಹೆಣ್ಣು ಮಕ್ಕಳು ಪ್ರೇರಿತರಾಗುತ್ತಿದ್ದರು. ಇವರೊಂದಿಗೆ ಮಹಿಳಾ ಜ್ಞಾನ ಮಂದಿರದಿಂದಲೂ ಜಯದೇವಿ ತಾಯಿಯವರು ಹೆಣ್ಣು ಮಕ್ಕಳನ್ನು ಸಂಘಟಿಸುತ್ತಿದ್ದರು. ಮಹಿಳೆಯರಲ್ಲಿ ದೇಶ ಪ್ರೇಮ ಮೂಡಿಸಿ ಸಹಕರಿಸುತ್ತಿದ್ದರು. ಸ್ವಾತಂತ್ರದ ಹೋರಾಟದಲ್ಲಿ ಪಾಲ್ಗೊಳ್ಳುವ ಮಹಿಳೆಯರಲ್ಲಿ ರಾಷ್ಟ್ರೀಯ ನಾಡ ನುಡಿಯ ಜಾಗೃತಿಯನ್ನು ಮೂಡಿಸುತ್ತಿದ್ದರು. ೧೯೪೭ ಅಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸೂಚನೆ ಸಿಗಲಾರಂಬಿಸಿತ್ತು. ಜಯದೇವಿ ತಾಯಿಯವರು ಅಕ್ಕನ ಬಳಗ ಹಾಗೂ ಸರಸ್ವತಿ ವಿದ್ಯಾ ಮಂದಿರ, ಶ್ರಾವಿಕಾಶ್ರಮ ,ಸ್ತ್ರೀ ಶಕ್ತಿ ಹೋರಾಟಗಳು ಜೋರಾಗಿ ನಡೆಯಿತು . ಸ್ವಾತಂತ್ರ್ಯ ದೇಶದಲ್ಲಿ ಸ್ತ್ರೀಯರ ಕರ್ತವ್ಯಗಳು, ಸ್ತ್ರೀ ಸ್ವಾವಲಂಬನೆ, ಸ್ತ್ರೀ ಆರ್ಥಿಕ ಸ್ಥಿರತೆ,ವರ್ತಮಾನ ಕಾಲದ ವೆಚ್ಚರಹಿತ ಸರಳ ವಿವಾಹಗಳ ಪದ್ಧತಿ, ಸಾಮಾಜಿಕವಾಗಿ ನಾರಿಯರು ಗೌರವದಿಂದ ಬದುಕುವ ವಿಧಾನವನ್ನು ಮುಂತಾದ ವಿಷಯಗಳ ಮೇಲೆ ವಿವಿಧ ಬಡಾವಣೆಗಳಲ್ಲಿ ಭಾಷಣ ವ್ಯಾಖ್ಯಾನ ಮಾಲೆಯನ್ನು ಏರ್ಪಡಿಸುತ್ತಿದ್ದರು . ಸಂಸ್ಕೃತಿಕ ವಿದ್ಯಾವಂತ ಮಹಿಳೆಯರಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಾಯಿಯವರ ನಿಲುವಾಗಿತ್ತು. ಸುಖ ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ ,ದುಃಖಕ್ಕೆ ಕಾರಣವಾಗುವ ಅಜ್ಞಾನ..ಬಡತನ ಮತ್ತು ವರ್ಗ ಕಲಹಗಳು ಕಾರಣವಾಗುತ್ತವೆಂದು…… ಈ ಅಜ್ಞಾನವನ್ನು ದೂರ ಮಾಡಬೇಕು ಕುಟುಂಬದ ಅನ್ಯಾಯವನ್ನು ದೂರ ಮಾಡಬೇಕಾದರೆ ಮುಖ್ಯವಾಗಿ ಮನೆಯ ಸ್ತ್ರೀ ತಾಯಿಯೂ ವಿದ್ಯಾವಂತಳು ಆಗಿರಲೇಬೇಕು ಸ್ತ್ರೀ ಶಿಕ್ಷಣ ಅದರೊಂದರಿಂದಲೇ ಶಾಂತಿಭರಿತವಾದ ಬದುಕು ಹಾಗೂ ಸಾಮಾಜಿಕೆ ಸಮಾನತೆಯ ಬೆಳವಣಿಗೆಗೆ ಮುಖ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು. *ಅಸ್ಪೃಶ್ಯ ನಿವಾರಣೆ* ಅದೇ ಸಮಯದಲ್ಲಿ ಅಸ್ಪೃಶ್ಯರು ಎಂದು ಕರೆದ ಒಂದು ಜನ ಸಮುಹವನು ಕಡೆಗಣಿಸುವ ಅತ್ಯಂತ ಹೀನ ರೀತಿಯಲ್ಲಿ ಅವರನ್ನು ನೋಡಿಕೊಳ್ಳುವ ಪದ್ಧತಿ ಸರಿ ಅಲ್ಲವೆಂದು ವಿರೋಧಿಸಿದ ಗಾಂಧೀಜಿಯವರ ಕರೆಕೊಟ್ಟಂತೆ ಅಸ್ಪೃಶ್ಯರನ್ನು ಹರೀಜನರು ಎಂದು ಕರೆಯಲು ಜಯದೇವಿತಾಯಿಯವರು ಮುಂದಾದರು.ಅದೇ ರೀತಿ 12ನೇ ಶತಮಾನದ ಶರಣರು ಎಲ್ಲರಲ್ಲಿ ಸಮಾನತೆಯ ಮನಸ್ಸನ್ನು ಹುಟ್ಟು ಹಾಕಿದ್ದರು ಕಾಯಕದಿಂದ ಹುಟ್ಟಿದ ಜಾತಿಯನ್ನು ವ್ಯಯಕ್ತಿಕವಾಗಿ ಸಂಭಧ ಆರಂಭಿಸುವುದು, ಅವಮಾನ ಗೊಳಿಸುವುದು ಅಪಚಾರವೆದುಂದು ಹೇಳುತ್ತಿದ್ದರು. ಶರಣ ಅಂಬಿಗರ ಚೌಡಯ್ಯ ಮಾದರ ಚೆನ್ನಯ್ಯರಂತೆ ಬದುಕನ್ನು ಅರಿತುಕೊಂಡ ಜಯದೇವಿ ತಾಯಿಯವರು ಶರಣರ ಆದರ್ಶವನ್ನು ಮನದಲ್ಲಿ ತುಂಬಿಕೊಂಡು ಗಾಂಧೀಜಿಯವರ ಹರೀಜನರ ಆಂದೋಲನಕೆ ಕೈಜೋಡಿಸಿದ್ದರು.ಪೂಜೆ ತೀರ್ಥ ಪ್ರಸಾದಗಳನ್ನು ಹರಿಜನರಿಗೆ ನಿರಾಕರಿಸಿದ್ದನ್ನು ಜಯದೇವಿ ತಾಯಿಯವರು ಗಾಢವಾಗಿ ವಿರೋಧಿಸುತ ಅನೇಕ ಕಡೆಭಾಷಣ ಮಾಡುತ್ತಿದ್ದರು. ಹಾಗೆ ಸ್ತ್ರೀಯರ ಆಧ್ಯ ಕರ್ತವ್ಯ ಅವರ ನಿಶ್ಚಲವಾದ ನಿರ್ಭಯತೆ ನಿರ್ಮಲತೆಯ…… ವಿಷಯಗಳ ಕುರಿತು ಕೇರಿಯ ಜನರಿಗೆ ತಿಳಿಹೇತ್ತಿದ್ದರು. ಸೊಲ್ಲಾಪುರ ಮತ್ತು ಬಾರ್ಷಿಗಳ ರಿಮೈಂಡ್ ಹೋಂ ಮತ್ತು ಹರಿಜನ ಸಂಘಗಳಿಗೆ, ಗಾಂಧಿ ಛತ್ರಾಲಯಗಳಿಗೆ ಜಯದೇವಿ ತಾಯಿಯವರು ಬೆಂಬಲ ಪ್ರೇರಣೆ ನೀಡಿದವರು. ಆಡಳಿತಗಾರರಿಗೆ ಭೇಟಿಯಾಗಿ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಧನ ಸಹಾಯವನ್ನು ತಕ್ಷಣವಾಗಿ ಒದಗಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟ ಹಾಗೂ ಮಹಾಪುರುಷರ ವಿಷಯಗಳು ಹಾಗೂ ಧೀರ ಮಹಿಳೆಯರು ಹೋರಾಟಗಾರರ ಬಗ್ಗೆ ವಿಸ್ತೃತಗೊಳಿಸಿ ಅವರ ಜೀವನ ಚರಿತ್ರೆಯ ಬಗ್ಗೆ ಹರಿ ಜನರಿಗೆ ತಿಳಿ ಹೇಳುತ್ತಿದ್ದರು . ಹೆಣ್ಣು ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತಿಳಿ ಹೇಳುತ್ತಿದ್ದರು.ಇವರು ಆಗಾಗ ಹರಿಜನ ಕೇರಿಗೆ ಬರುವರೆಂದು ತಿಳಿದ ಕೇರಿಯವರು ಎಲ್ಲವನ್ನು ಸ್ವಚ್ಛ ಮಾಡಿ ಚಳಿ ಹೊಡೆದು ತರಿಳು ತೋರಣವನ್ನು ಕಟ್ಟಿ, ಆರತಿ ತುಂಬಿಕೊಂಡು ಜನರು ಸ್ವಾಗತಿಸುತ್ತಿದ್ದರು. ಅಸ್ಪೃಶ್ಯ ಕೇರಿಗೆ ಇನ್ನಿತರ ಕಾರ್ಯಕ್ರಮದಲ್ಲಿ ಓಡಾಡುವ ಕಾರ್ಯಕರ್ತರು ಜಯದೇವಿ ತಾಯಿಯವರನ್ನು ಪರೀಕ್ಷಿಸಲು ಜಯದೇವಿ ತಾಯಿಯವರನ್ನು ಅಲ್ಲಿ ಬೋಜನೆ ಮಾಡಲು ಕೇಳಿಕೊಂಡರು …..ಅದಕ್ಕೆ ತಾಯಿಯವರು ಎಂದಿನಂತೆ ಅವರ ಪೂಜೆ ನಂತರವೇ ಪ್ರಸಾದ ತೆದುಕೊಳ್ಳುತ್ತಿದ್ದರು ಹೀಗಾಗಿ ಅವರು ತಮ್ಮ ಪೂಜೆಯನ್ನು ಮುಗಿಸಿ ಅಲ್ಲಿಗೆ ಬಂದು ಎಲ್ಲರೊಂದಿಗೆ ಪ್ರಸಾದವನ್ನು ತೆಗೆದುಕೊಂಡದ್ದು ಒಂದು ಇತಿಹಾಸವೇವಾಯಿತು. ಹಾಗೆ ತಮ್ಮ ಭಾಷಣ ಒಂದರಲ್ಲಿ ಹೀಗೆ ಹೇಳಿದ್ದರು ಇಂದು ನಮ್ಮಲ್ಲಿ ಬಹಳ ಜನರು ಸಾಮಾಜಿಕ ಕಾರ್ಯಗಳಲ್ಲಿ ಸಮಾಜದ ದುಡ್ಡು ದುಡಿಮೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ರೂಡಿ ಮಾಡಿಕೊಂಡಿದ್ದಾರೆ ನಮಗೆ ನಮ್ಮ ಅನ್ನವನ್ನು ತಿಂದು ಸಮಾಜ ಕಾರ್ಯ ಮಾಡುವ ಅಭ್ಯಾಸವಾಗಿದೆ ಅಂತ ಅಲ್ಲಿ ತಾಯಿಯವರನ್ನು ಸಂಘಟಿಕರಿಗೆ ಉತ್ತರ ನೀಡಿದ್ದರು. ಹೀಗೆ ತಾಯಿಯವರು ದೀನ,ದಲಿತ, ಶೋಷಿತ ಅಸ್ಪೃಶ್ಯರ ಸಲುವಾಗಿ ಅವರ ಜೀರ್ಣೋದ್ಧಾರದ ಸಲುವಾಗಿ ಶ್ರಮಿಸಿದರು. ಶರಣರು ತೋರಿದ ಸಮಾಜದ ಧಾರ್ಮಿಕ ಹಿನ್ನೆಲೆ ಅವರದಗಿತ್ತು. ಸೊಲ್ಲಾಪುರ ಬಾರ್ಸಿಗಳಲ್ಲಿದ್ದ ಹರಿಜನ ಕೇರಿಗಳಿಗೆ ಹರಿಜನ ಬೋರ್ಡಗಳಿಗೆ ಹೋಗಿ ಸಹಾಯ ಸಹಕಾರ ನೀಡುತ್ತಿದ್ದರು.ಹರಿಜನರಲ್ಲಿ ಸಾಕ್ಷರತೆ -ಸ್ವಾವಲಂಬನೆ- ಸ್ವಾಭಿಮಾನ ಮೂಡಿಬರುವಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಡಿದ ಘಟನೆಗಳನ್ನು ಜನರು ಇನ್ನೂ ಆದರೂ ನೆನೆಯುವಧನ್ನು ನೋಡಬಹುದು.ಜಯದೇವಿ ತಾಯಿಯವರಿಗೆ ಹರಿಜನರ ಬಗ್ಗೆ ಇದ್ದ ಕಳಕಳಿ ಅಪಾರವಾದದ್ದು ಎಂದು ಭಾಲ್ಕೀ ಹಿರೇಮಠ್ ಪೂಜ್ಯ.ಚನ್ನಬಸವ ಪಟ್ಟದೇವರು, ಇಳಕಲ ಚಿತ್ತಗರಿ ಸಂಸ್ಥಾನ ಮಠದ ಪೂಜ್ಯ ಮಹಾಂತ ಸ್ವಾಮಿಗಳು ಮೆಚ್ಚಿಕೊಂಡು ಹರ್ಷವನ್ನು ವ್ಯಕ್ತಪಡಿಸುತಿದ್ದರು. ಅದೇರೀತಿ ಬೆಲ್ಲದಾಳ ಸಿದ್ದರಾಮ ಶರಣರನ್ನು (ಹರಿಜನ ಬಾಲಕ ವಿಠಲರು )ಶರಣನಾದದ್ದನ್ನು ಕಂಡು ಗೌರವಿಸುತ್ತಿದ್ದರು.. ಜಯದೇವಿ ತಾಯಿಯವರು ದಲಿತೋದ್ಧಾರ ಅಸ್ಪೃಶ್ಯೋದ್ಧಾರ ಬಗ್ಗೆ ಕಳಕಳಿಯಿಂದ ಕೇವಲ ಭಾಷಣ ಮಾಡಿದರೆ ಸಾಲದು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ ಅವರ ಅನುಭವಿಸಿದ ನೋವನ್ನು ಕಡಿಮೆಗೊಳಿಸುವ ಪ್ರಯತ್ನದಲಿದ್ದ ತಾಯಿಯವರು ಬರಿತಾರೆ…. *ಕೀಳು ಮೇಲುಗಳೆಂಬ ಕುಲಾಚಾರವಳಿದುಕೊಳೆ ತೊಳೆಯಲು ಕೂಡಿದರು ಸಾರುವದಕೆ ಇಳೆಯೊಳು ಮಾನವ -ಕುಲ ಒಂದೇ * *ಜಗವು ಒಂದಾಗಲಿ ನಗುತ ಕೈಗೂಡಿಸಿರಿಬಗೆಯಲಿ ಅಣ್ಣ ತಮ್ಮಂದಿರಂತೆ, ಲೋಕದಿಹಗೆಯಂಬ ಭಾವ ಅಳಿಯಲಿ* ವಿಶ್ವವೇ ಒಂದುಗೂಡಿಸುವ ..ಸಾರ್ವತ್ರಿಕ ಸರ್ವಕಾಲಿಕ ವಿಶ್ವಮಾನವೀಯ ಮೌಲ್ಯಗಳ ಒಡ್ಡೋಲಗ ಎಲ್ಲೆಡೆಯೂ ಸ್ಥಾಪಿತವಾಗಲಿ ಎನ್ನುವ ಆಸೆಯ ಹೊತ್ತವರು. *ನಾನು ನೀನೆಂಬ ಭೇದ ನಮ್ಮವರಿಗಿಲ್ಲತನ್ನಂತೆ ಜಗವ ಕಂಡಾರ -ಶರಣರುಭಿನ್ನಲ್ಲ ಉನ್ನತಿ ಪಡೆದಾರ!!* ಎಂದರು ಜಯದೇವಿತಾಯಿಅವರು. ಸವಿತಾ ದೇಶಮುಖ
“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್
ಪ್ರೀತಿ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಹೇಳದೆ ಉಳಿದಿಹ ಮಾತು…. ನೂರಿವೆ” ಅಮ್ಮ ನಿಮ್ಮ ಕಾಲದ ಜನರು ಅದೆಷ್ಟು ಅನ್ ರೋಮ್ಯಾಂಟಿಕ್ ಅಲ್ಲವೇ ? ತಬ್ಬಿಕೊಳ್ಳುವುದು ದೂರ ಬಿಡು..ಐ ಲವ್ ಯು ಅಂತ ಹೇಳಿ ಪ್ರೀತಿಯನ್ನು ಅಭಿವ್ಯಕ್ತ ಪಡಿಸುವುದು ಅವರಿಗೆ ಗೊತ್ತೇ ಇಲ್ಲ ಎಂದು ಮಗಳು ಕೇಳಿದಾಗ ತಾಯಿ ಮೆಲ್ಲನೆ ನಸುನಕ್ಕು ಸುಮ್ಮನಾದಳು.ಕಣ್ಣರಿಯದ ಮಾತನ್ನು ಕರುಳರಿಯುತ್ತದೆ ಎಂದು ಹೇಳುತ್ತಾರೆ ಅಲ್ಲವೇ… ಹಾಗೆಯೇ ಮಾತುಗಳಲ್ಲಿ ಹೇಳಲಾಗದ ನೂರೆಂಟು ಭಾವಗಳನ್ನು ತಮ್ಮ ವರ್ತನೆಯಲ್ಲಿ ತೋರುವ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದು ನಮ್ಮ ಹಿರಿಯರಿಗೆ ಸಿದ್ಧಿಸಿದ ಕಲೆ. ಅಲ್ಲಿ ಯಾವುದೇ ನಾಟಕೀಯ ಪ್ರದರ್ಶನವಿಲ್ಲ ನೈಜತೆಯೇ ಎಲ್ಲ. ಮನೆಯ ಹಿರಿಯರಲ್ಲಿ ನಸು ಮುನಿಸಿನ ಜಗಳಗಳನ್ನು ನೋಡಿದಾಗ ಈ ಕುರಿತು ನಮಗೆ ಅರಿವಾಗುತ್ತದೆ. ಊಟದ ಸಮಯಕ್ಕೆ ಸರಿಯಾಗಿ ಅಜ್ಜ ಊಟ ಮಾಡದೆ ಹೋದಾಗ ಮುನಿಯುವ ಅಜ್ಜಿಯ ಮನಸ್ಸಿನಲ್ಲಿ ತನ್ನ ಪತಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳಲಿ ಎಂಬ ಆಶಯವಿರುತ್ತದೆ. ಆದರೆ ಅದೇ ಅಜ್ಜ ದಿನವಿಡೀ ಕೆಲಸ ಮಾಡಿದ್ದೀಯ! ಕೊಂಚ ಹೊತ್ತು ಕುಳಿತು ವಿಶ್ರಾಂತಿ ಮಾಡಲಿ. ತನ್ನ ವಯಸ್ಸಿನವರ ಜೊತೆ ಮನೆಯ ಕಟ್ಟೆಯ ಮೇಲೆ ಕುಳಿತು ಇಲ್ಲವೇ ದೇವಸ್ಥಾನದ ಆವರಣದಲ್ಲಿ ಕುಳಿತು ಹರಟೆ ಹೊಡೆದು ದಣಿವಾರಿಸಿಕೊಳ್ಳಲಿ ಎಂಬ ಕಾರಣಕ್ಕೆ ಆಕೆಯನ್ನು ದೂರದರ್ಶನದಲ್ಲಿ ಬರುವ ಯಾವುದೋ ಕಾರ್ಯಕ್ರಮವನ್ನು ನೋಡಲು ಕರೆಯುತ್ತಾರೆ ಇಲ್ಲವೇ ಸಾಯಂಕಾಲದ ಸಮಯದಲ್ಲಿ ಒಂದಷ್ಟು ವಾಕಿಂಗ್ ಮಾಡಿ ಬರೋಣ ಬಾ ಎಂದು ಕರೆದುಕೊಂಡು ಹೋಗಿ ಊರ ಹೊರಗಿನ ದೇವಸ್ಥಾನದ ಬಳಿಯೋ ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಮಾತನಾಡಿ ವಾಪಸ್ ಕರೆ ತರುತ್ತಾರೆ…. ಇದೆಲ್ಲದರ ಹಿಂದೆ ಇರುವುದು ಅವರ ಅನನ್ಯವಾದ ಕಾಳಜಿ. ಇಲ್ಲಿ ಅವರಿಬ್ಬರೂ ಪರಸ್ಪರರ ಕಾಳಜಿ ಮಾಡುವುದರ ಹಿಂದೆ ಇರುವುದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ರೂಪ.ಇನ್ನು ತನ್ನ ಪತ್ನಿಯ ಇಷ್ಟದ ಬಣ್ಣದ ಉಡುಪನ್ನು, ಸೀರೆಯನ್ನು ಆಗಾಗ ಪತಿ ತರುತ್ತಾನೆ. ಹೂವನ್ನು, ಸಿಹಿತಿಂಡಿಯನ್ನು ತಂದುಕೊಡುವ ಪತಿ ಮನೆಗೆ ಬಂದ ಕೂಡಲೇ ಅದನ್ನು ಆಕೆಯ ಕೈಗಿಟ್ಟು ಬೇಗ ತಟ್ಟೆಯಲ್ಲಿ ಹಾಕಿ ತಗೊಂಡು ಬಾ ನಾವೆಲ್ಲರೂ ಸೇರಿ ತಿನ್ನೋಣ ಎನ್ನುವ ಮೂಲಕ ಆಕೆಯ ಕುರಿತು ಕಾಳಜಿ ವಹಿಸುತ್ತಾನೆ. ಹೊರಗಿನಿಂದ ದುಡಿದು ದಣಿದು ಬರುವ ಪತಿ ತನ್ನಿಷ್ಟದ ತಿಂಡಿ ತಿನಿಸುಗಳನ್ನು ತಂದು ಕೊಟ್ಟಾಗ ಪತ್ನಿ ಆತನ ಅವಸರದ ಕರೆಗೆ ಓಗೊಟ್ಟು ಗಂಡ ಮಕ್ಕಳೊಡನೆ ತಾನೂ ಕುಳಿತು ತಿಂದು ನಂತರ ಕಾಫಿ ಮಾಡಿಕೊಡುತ್ತಾಳೆ. ಇದು ಕೂಡ ಪ್ರೀತಿಯೇ ಅಲ್ಲವೇ ? ನಾಲ್ಕು ಜನರ ನಡುವೆ ಹೊರಗೆ ಓಡಾಡುವ ತನ್ನ ಪತಿ ಯಾವಾಗಲೂ ಇಸ್ತ್ರಿಯಾದ ಗರಿ ಗರಿ ಬಟ್ಟೆಗಳನ್ನು ಧರಿಸಿ ಲವಲವಿಕೆಯಿಂದ ಓಡಾಡಲಿ ಎಂದು ಪತ್ನಿ ಆಶಿಸಿದರೆ, ತನ್ನ ಇಡೀ ಕುಟುಂಬದ ನಿರ್ವಹಣೆ ಮಾಡುವ ಪತ್ನಿ ಚೆನ್ನಾಗಿ ತಿಂದುಂಡು ಆರೋಗ್ಯವಾಗಿರಲಿ ಎಂದು ಪತಿ ಆಶಿಸುತ್ತಾನೆ.ಹರೆಯದಲ್ಲಿ ಪತಿಯ ಹಿಂದೆ ಮುಂದೆ ಓಡಾಡಿ ಆತನ ಕೆಲಸಗಳನ್ನು ಮಾಡಿಕೊಡುವ ಪತ್ನಿಗೆ ಮಧ್ಯ ವಯಸ್ಸಿನಲ್ಲಿ ವಯೋ ಸಹಜವಾಗಿ ಉಂಟಾಗುವ ತಲೆನೋವು, ಸೊಂಟ ನೋವುಗಳಿಗೆ ಝಂಡು ಬಾಮ್ ಹಚ್ಚಿ ಮಾಲೀಶು ಮಾಡುವ ಪತಿಗಳನ್ನು ನಾವು ಕಾಣಬಹುದು… ಮತ್ತೆ ಕೆಲವರು ಅಷ್ಟೆಲ್ಲವನ್ನು ಮಾಡದೆ ಹೋದರೂ ತಮ್ಮದೇ ಧೋರಣೆಯ ದಾಟಿಯಲ್ಲಿ ‘ವಿಶ್ರಾಂತಿ ತೆಗೆದುಕೊಳ್ಳದೆ ಮಾಡಿದರೆ ಇನ್ನೇನಾದೀತು ಊಟ ಮಾಡಿ ಮಾತ್ರೆ ನುಂಗಿ ಮಲಗಿಕೋ ‘ಎಂದು ಹೇಳುವ ಮೂಲಕ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.‘ ಋಣಾನು ಬಂಧ ರೂಪೇಣ, ಪಶು ಪತ್ನಿ ಸುತಾಲಯ’ ಎಂದು ನಮ್ಮ ಹಿರಿಯರು ಹೇಳಿರುವುದು ಬಹುಶಃ ಇದೇ ಕಾರಣಕ್ಕೆ ಇರಬಹುದು. ಯಾವುದೇ ರೀತಿಯ ರಕ್ತ ಸಂಬಂಧವಲ್ಲದ ಆದರೂ ಕೂಡ ಋಣ ಮತ್ತು ಅನುಬಂಧದ ಕಾರಣದಿಂದಾಗಿ ಸತಿಪತಿಗಳಾಗಿ ಬದುಕುವ ಅವರಿಬ್ಬರೂ ತಾರುಣ್ಯದಲ್ಲಿ ವಯೋಸಹಜ ಪ್ರೇಮ ಕಾಮಗಳಲ್ಲಿ ಒಂದಾದರೂ ಮಧ್ಯ ವಯಸ್ಸಿಗೆ ಬಂದಾಗಲೂ ಕೂಡ ಮಕ್ಕಳ ಪಾಲನೆ ಪೋಷಣೆಯನ್ನು ಜೊತೆಯಾಗಿ ಮಾಡುವ ಮೂಲಕ ಕೌಟುಂಬಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ. ಇನ್ನು ವೃದ್ಧಾಪ್ಯದಲ್ಲಂತೂ ಕೇಳಲೇಬೇಡಿ ಅದುವರೆಗೂ ಅತ್ಯಂತ ಕಠಿಣ ವ್ಯಕ್ತಿ ಎಂದು ಎನಿಸಿಕೊಂಡಿರುವಾತ ಕೂಡ ತನ್ನ ಕುಟುಂಬದ ಮೂಲ ಸೆಲೆಯಾದ ತನ್ನ ಪತ್ನಿಯನ್ನು ಕಾಳಜಿ ಮಾಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಈ ಹಿಂದೆ ಕೇಳಿದರೂ ತಂದುಕೊಡದ ತಾರುಣ್ಯದ ಮೈಮರೆವನ್ನು ಹೊತ್ತು ಮೆರೆಯುತ್ತಿದ್ದ ಆತ ಇದೀಗ ಆಕೆ ಕೇಳದೆಯೂ ಆಕೆಯ ಮನದ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ. ಇನ್ನು ಆಕೆ ಏನು ಕಡಿಮೆಯೇ! ಆಕೆ ಕೂಡ ಆತನ ಆರೋಗ್ಯದ ಕಾಳಜಿಯನ್ನು ಮಾಡುತ್ತಾ ಆತನ ಒಳಿತು ಕೆಡುಕುಗಳಿಗೆ ತನ್ನನ್ನು ತಾನು ಜವಾಬ್ದಾರಿಯನ್ನಾಗಿಸಿಕೊಂಡು ಎಲ್ಲ ರೀತಿಯಲ್ಲಿಯೂ ಆತನ ಕಾಳಜಿ ಮಾಡುತ್ತಾಳೆ. . ಇದೀಗ ಕೇವಲ ಆಕೆ ಆತನ ಪ್ರೇಮದ ಕಾಮದ ಸಿಟ್ಟು ಸೆಡವನ್ನು ಹೊರುವ ಪತ್ನಿ ಮಾತ್ರವಲ್ಲ ಬದಲಾಗಿ ಆತನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಹಾಮಾತೆ. ಆತನ ಪಾಲಕರನ್ನು ಆದರಿಸಿ ಸತ್ಕರಿಸುವ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವ ಮನೆ ಯಜಮಾನಿ. ಆತನ ಮಕ್ಕಳನ್ನು ಅತ್ಯುತ್ತಮ ಶಿಕ್ಷೆ ಮತ್ತು ರಕ್ಷೆಗಳ ಜೊತೆಯಲ್ಲಿ ಉತ್ತಮ ನಾಗರಿಕರನ್ನಾಗಿಸಿ ಬೆಳೆಸುವ ಮಮತಾಮಯಿ. ಹೀಗೆ ಅವರು ಪರಸ್ಪರರನ್ನು ದೂರುವ ಮೂಲಕ ಕಾಳಜಿ ಮಾಡಿಕೊಳ್ಳಲು ಹೇಳುವ ಮೂಲಕ ಖುದ್ದು ತಾವೇ ಕಾಳಜಿ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮಧ್ಯ ವಯಸ್ಸಿನಲ್ಲಿ ಮಕ್ಕಳ ಮುಂದೆ ಅವರ ಸಂಗಾತಿಯನ್ನು ತುಸು ದೂರುವುದು ಹೆಚ್ಚೇ ಆದರೂ ಅದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ಸ್ವರೂಪ.ಮಕ್ಕಳ ಮುಂದೆ ಪರಸ್ಪರರನ್ನು ದೂರಿದರು ಕೂಡ ಒಂದೊಮ್ಮೆ ಮಕ್ಕಳು ಅವರನ್ನು ತಮಾಷೆಯಾಗಿ ಅಂದು ಆಡಿದರೂ ಕೂಡ ಅದನ್ನು ಸಹಿಸದೆ ತಮ್ಮ ಸಂಗಾತಿಯನ್ನು ವಹಿಸಿಕೊಂಡು ಬರುವುದು ಹಾಗೂ ಅದಕ್ಕೂ ಮಿಗಿಲಾಗಿ ಮಕ್ಕಳು ತಮಾಷೆ ಮಾಡಿದರೆ ಅವರಿಬ್ಬರೂ ಒಂದು ಗುಂಪಾಗಿ ನಸು ಕೋಪವು ಉಗ್ರ ಕೋಪವಾಗಿ ಮಕ್ಕಳ ಮೇಲೆ ಹರಿಹಾಯುವುದು ಕೂಡ ಅವರ ಪ್ರೀತಿಯ ಮತ್ತೊಂದು ಸ್ವರೂಪ. ಆಗ ಮಕ್ಕಳು ಅಯ್ಯೋ! ಇವರಿಬ್ಬರ ಮಧ್ಯದಲ್ಲಿ ನಾವು ಸಿಲುಕಿ ಕೊಳ್ಳುವುದು ಬೇಡ ಎಂದು ತಮಾಷೆ ಮಾಡಿ ಹಿಂದೆ ಸರಿಯುವುದೂ ಉಂಟು. ಎಷ್ಟೋ ಬಾರಿ ದಂಪತಿಗಳು ಮದುವೆಯಾದ ಕೆಲ ವರ್ಷಗಳ ನಂತರ ಪರಸ್ಪರ ವಿಭಿನ್ನ ವ್ಯಕ್ತಿತ್ವಗಳು ಎಂಬಂತೆ ಕಂಡರೂ ಮುಂದಿನ ಕೆಲ ದಶಕಗಳ ಬದುಕಿನಲ್ಲಿ ಇವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಒಂದೇ ರೀತಿಯ ಮಾತುಕತೆ, ರೀತಿ ನೀತಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ….. ಅವರಿಬ್ಬರೂ ಒಬ್ಬರಾಗುವ ಈ ಪ್ರಕ್ರಿಯೆಗೆ ಕಾರಣ ಹಲವಾರು ವರ್ಷಗಳ ಜೊತೆಯಾಗಿರುವಿಕೆ. ದೇಹವೆರಡು ಪ್ರಾಣ ಒಂದು, ಕಣ್ಣೆರಡು ನೋಟ ಒಂದು ಎಂಬಂತಿರುವ ಅವರ ಬದುಕುಇದಕ್ಕೆ ವ್ಯತಿರಿಕ್ತವಾಗಿಯೂ ಸಾಕಷ್ಟು ಜನ ಬದುಕಬಹುದು. ತಮ್ಮ ತಮ್ಮ ವೈಯುಕ್ತಿಕ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು. ಪರಸ್ಪರ ಗೌರವದಿಂದ ದೂರ ಸರಿದಿರಬಹುದು. ಅಂತಹ ದೂರ ಸರಿದಿರುವ ದಂಪತಿಗಳು ಕೂಡ ತಮ್ಮ ಸಂಗಾತಿಯ ಮೇಲಿನ ನಿಜವಾದ ಪ್ರೀತಿ, ನಂಬಿಕೆ, ವಿಶ್ವಾಸದಿಂದ ಹಾಗೂ ತಾವು ಆ ರೀತಿ ದೂರವಾದರೂ ಕೂಡ ಒಂದೊಳ್ಳೆಯ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳುವ ಮೂಲಕ ಪರಸ್ಪರರನ್ನು ಗೌರವಿಸುತ್ತಾರೆ. ಇದು ಕೂಡ ಹೇಳದೆ ಉಳಿದಿಹ ಮಾತುಗಳಲ್ಲಿ ಒಂದಾಗಬಹುದು.ಇದಕ್ಕೆ ಉದಾಹರಣೆಯಾಗಿ ಕಿರಣ್ ಬೇಡಿ ಮತ್ತು ಆಕೆಯ ಪ್ರತಿ ಹಸ್ತ ಕಲೆಗಳ ಜನಕರು ಎಂದೆ ಹೆಸರಾದ ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ಆಕೆಯ ಪತಿ ಹರೀಂದ್ರನಾಥ ಚಟ್ಟೋಪಾಧ್ಯಾಯ, ಬಾಲಿವುಡ್ ಚಲನಚಿತ್ರರಂಗದ ಅಶೀಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ, ಖ್ಯಾತ ಹಿಂದಿ ಚಲನಚಿತ್ರ ತಾರೆ ಅಮೀರ್ ಖಾನ್ ಮತ್ತು ಅವರ ಪತ್ನಿ ರೀನಾ, ಹೃತಿಕ್ ರೋಷನ್ ಹಾಗೂ ಅವರ ಪತ್ನಿ ಸುಸಾನೆ ಹೀಗೆ ಹತ್ತು ಹಲವು ಜನರನ್ನು ನಾವು ಉದಾಹರಿಸಬಹುದು….. ಆದರೆ ಇಂಥವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಪ್ರತಿ ಮಾತಿಗೂ ಐ ಲವ್ ಯು ಎಂದು ಹೇಳುವ, ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುವ ಭಾವ ಮಾತ್ರ ಪ್ರೀತಿಯಲ್ಲ ಬದಲಾಗಿ ಮಾತುಗಳಲ್ಲಿ ಹೇಳದೆ ಹೋದರು ತಮ್ಮ ಕೃತಿಯಲ್ಲಿ ವ್ಯಕ್ತಪಡಿಸುವ, ವರ್ತನೆಯ ಮೂಲಕ ಅರಿವು ಮೂಡಿಸುವ ಪ್ರೀತಿ ಎಷ್ಟೋ ಮೇಲು ಅಲ್ಲವೇ ? ವೀಣಾ ಹೇಮಂತಗೌಡ ಪಾಟೀಲ್
“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ Read Post »





