ಸಾವಿಲ್ಲದ ಶರಣರು ಮಾಲಿಕೆಯಲ್ಲಿ-ಜಾನಪದ ವಿದ್ವಾಂಸ ಡಾ ಗುರುಲಿಂಗ ಕಾಪಸೆ

ಡಾ ಗುರುಲಿಂಗ ಕಾಪಸೆಯವರು ಜಾನಪದ ವಿದ್ವಾಂಸರು, ಲೇಖಕರು ಹಾಗೂ ಸಾಹಿತಿಗಳು.  ಮುಲ್ಕಿ ಶಿಕ್ಷಣ ಮುಗಿಸಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಂದೆ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ್ ಶ್ರೀಗಳ ಸಹಾಯದೊಂದಿಗೆ ಬಿ ಏ ಎಂ ಏ ಮುಗಿಸಿ ಮುಂದೆ ಬಾಗಲಕೋಟೆ  ಬಸವೇಶ್ವರ  ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೊನೆಗೆ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಅವಿಶ್ರಾಂತ ಬದುಕಿನ ಪಯಣ ಇವರದ್ದು .
 ಡಾ ಡಾ ರಾ ಬೇಂದ್ರೆ ಮಧುರ ಚೆನ್ನರು ತಪೋವನದ ಶಿವಕುಮಾರ ಸ್ವಾಮಿಗಳ ಸಾಮಿಪ್ಯ ಇವರನ್ನು ಶ್ರೇಷ್ಠ ಸಾಹಿತಿ ಕವಿ ಸಂಶೋದಕನನ್ನಾಗಿ ರೂಪಿಸಿತು. ವಿಜಯಪೂರದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಒಡನಾಟ ಇವರನ್ನು ಮತ್ತೆ ಮತ್ತೆ ಆಧ್ಯಾತ್ಮಕ್ಕೆ ವಾಲುವ ಹಾಗೆ ಮಾಡಿತು. ಸರಳ  ಸಾತ್ವಿಕ ಬದುಕು  ಸಜ್ಜನಿಕೆಯ ಸಾಕಾರ ಮೂರ್ತಿ ಡಾ ಗುರುಲಿಂಗ ಕಾಪಸೆ  

ಜನನ
ಗುರುಲಿಂಗ ಕಾಪಸೆ ಇವರು 1928 ಎಪ್ರಿಲ್ 2ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಬಿ.ಕೆ.ಯಲ್ಲಿ ಜನಿಸಿದರು. ಬಡತನ ಕೃಷಿ ವ್ಯಾಪಾರ ಮನೆತನದಲ್ಲಿ ಜನಿಸಿದ ಕುಗ್ರಾಮದ ಈ ಹುಡುಗ ಮುಂದೆ ಒಂದು ದಿನ ಸಾಹಿತ್ಯ ಲೋಕದ ದಿಗ್ಗಜ ಆಗುತ್ತಾನೆಂದು ಯಾರೂ ಊಹಿಸಿರಲಿಲ್ಲ

ಸಾಹಿತ್ಯ
ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (1998 ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದರಲ್ಲಿ ಎತ್ತಿ ಹೇಳಬೇಕೆಂದರೆ ಒಂದು, ಎರಡು ದಿವಸದಿಂದ ಮೂರು ದಿನಗಳವರೆಗೆ ಜನ ಲಾವಣಿಗಳ ಬಗ್ಗೆ ಲಾವಣಿಗಳ ಮೇಲಾಟ ಮತ್ತು ಇನ್ನೂ ಅನೇಕ ಸಂಗತಿಗಳಾಗಿವೆ, ಇದೊಂದು ರೀತಿಯಿಂದ ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆ ಎಂದು ಹೇಳಬಹುದು.

ಅನೇಕ ಸಮ್ಮೇಳನಗಳಲ್ಲಿಯೂ ಪಾಲ್ಗೊಂಡು ವಿದ್ವತ್ ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಇತ್ತೀಚಿನ ಕೃತಿ ಹಲಸಂಗಿ ಗೆಳೆಯರು, ಉಪಯುಕ್ತವಾದ ಕೃತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.

ಕೃತಿಗಳು

ಅಕ್ಕಮಹಾದೇವಿ
ಮಧುರಚೆನ್ನ
ಶ್ರೀ ಅರವಿಂದರು
ಬಸವೇಶ್ವರ
ಹಲಸಂಗಿ ಗೆಳೆಯರು
ಪ್ರವಾಸಕಥನ
ಶಾಲ್ಮಲೆಯಿಂದ ಗೋದಾವರಿಯವರೆಗೆ
ಮಕ್ಕಳ ಸಾಹಿತ್ಯ
ಕವಿ ರವಿಂದ್ರರು
ಶಿ.ಶಿ.ಬಸವನಾಳ
ವಿಮರ್ಶೆ
ಸಾಹಿತ್ಯ ಸಂಬಂಧ
ಬೇಂದ್ರೆ-ಮಧುರಚೆನ್ನ ಸಖ್ಯಯೋಗ
ಸಂಪಾದಿತ
ಕಾಲ-ಕವಿ (ಕಾವ್ಯ)
ಪಾರಮಾರ್ಥ ಗೀತಾ ಪ್ರವಚನ
ಹರಿಹರನ ಐದು ರಗಳೆಗಳು
ಅರವಿಂದ ಪರಿಮಳ
ಹೈಮವತಿ ಶೈಶವಲೀಲೆ(ಗಿರಿಜಾ ಕಲ್ಯಾಣ ಸಂಗ್ರಹ)
ಚೆಂಬೆಳಕು (ಕಣವಿ ಅಭಿನಂದನ ಗ್ರಂಥ)
ಬೆಳಗಲಿ (ದು.ನಿಂ.ಬೆಳಗಲಿ ಅಭಿನಂದನ ಗ್ರಂಥ)
ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ
ಭವ್ಯ ಮಾನವ ಕಾವ್ಯ ದರ್ಶನ
ಜ್ಞಾನಸಿಂಧು
ಪಿ.ಧೂಲಾಸಾಹೇಬ
ಮಧುರಚೆನ್ನರ ಲೇಖನಗಳು
ಕನ್ನಡ ಕಾವಲು
ಚಾಮರಸ
ಮುಗಿಯದ ಹಾಡು
ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ)

ಅನುವಾದ
ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ)
ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ)

5 thoughts on “ಸಾವಿಲ್ಲದ ಶರಣರು ಮಾಲಿಕೆಯಲ್ಲಿ-ಜಾನಪದ ವಿದ್ವಾಂಸ ಡಾ ಗುರುಲಿಂಗ ಕಾಪಸೆ

  1. ಡಾ.. ಗುರುಲಿಂಗ ಕಾಪಸೆ ಅವರ ಶಿಕ್ಷಣ.. ಕೃತಿಗಳು…ಸಾಹಿತ್ಯಧಾರೆ…ಪುರಸ್ಕಾರ
    ಪ್ರಶಸ್ತಿಗಳನ್ನು ಒಳಗೊಂಡಂತ ಅತ್ಯುತ್ತಮ ವಾದ ಲೇಖನ
    ನಮ್ಮಂಥವರಿಗೆ ಇಂಥ ಮಹಾನ್ ವ್ಯಕ್ತಿತ್ವದ ಬಗೆಗೆ ತಿಳಿಯಲು ಅನುಕೂಲವಾಯ್ತು… ಸರ್

    ಸುಶಿ

  2. ಸಾಹಿತ್ಯದ ಚಿನ್ನದ ಗಣಿಯ‌ನ್ನೇ ಬಿಟ್ಟು ಹೋದ
    ಗುರುಲಿಂಗ ಕಾಪಸೆ ಅವರ ಬಗ್ಗೆ ತಾವು ನೀಡಿದ ಮಾಹಿತಿಗೆ ಧನ್ಯವಾದಗಳು ಸರ್..ಬುಕ್ ಬ್ರಹ್ಮದಲ್ಲಿ ಪತ್ತಾರ್ ಅವರು ಗುರುಲಿಂಗ ಕಾಪಸೆ ಅವರ ಜೊತೆಗಿನ ಸಂದರ್ಶನ ನೋಡಿದೆ.ಎಲ್ರೂ ನನಗಿಂತ ದೊಡ್ಡವರು ಎನ್ನುವ ಅವರ ಭಾವ..ನಿಜವಾದ ಶರಣರು..

Leave a Reply

Back To Top