ರುದ್ರಾಗ್ನಿ ಅವರ ಕಾವ್ಯೋತ್ಸವ

ಕಡಲಳಾದ
ಕಾವ್ಯ
ಕಾಡುವ ಗೋಜಿಗೆ,
ನಾ ಸದಾ
ಹಂಬಲದ
ಹರಿಣಿ…

ಧರಣಿಯೊಳಗಿನ
ಭಾವ ದಾಹಕ್ಕೆ
ನನ್ನೊಳಗಿನ
ಪೂಜಾ
ಪದಗಳೇ
ಪರಿಶುದ್ಧ
ಪುಷ್ಕರಣಿ.

ಕರ್ಮ
ಕಾರ್ಪಣ್ಯಗಳ
ಕಾಪಿಟ್ಟು
ಪುಣ್ಯ
ಪವಿತ್ರತೆಗಳ
ಸಾಲುಗಳೇ
ಸಾಕಿನ್ನು…

ಕವಿತೆ ಹುಟ್ಟುವ
ಸಮಯಕ್ಕೆ
ನಾ ಪಡೆಯುವ
ಮರುಹುಟ್ಟ
ಬಣ್ಣಿಸುವ
ಬರವಣಿಗೆ
ಬೇಕಿನ್ನು…

——————————————-

2 thoughts on “ರುದ್ರಾಗ್ನಿ ಅವರ ಕಾವ್ಯೋತ್ಸವ

Leave a Reply

Back To Top