ಆತ್ಮ ಸಾಂಗತ್ಯದಿಂದ ಬದುಕು ಸುಂದರ:

ಅನಿಸಿಕೆ

ಆತ್ಮ ಸಾಂಗತ್ಯದಿಂದ ಬದುಕು ಸುಂದರ

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಕವಿತೆಯ

ವಿಶ್ಲೇಷಣೆ

ಆತ್ಮಸಾಂಗತ್ಯದ ನಿರ್ಭಯತೆ


ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಆತ್ಮಸಾಂಗತ್ಯದ ನಿರ್ಭಯತೆ

ಅಕ್ಕನ ಭಾವಬಸಿರಿನ ಕೂಸಾದ ಚನ್ನಮಲ್ಲ, ದಿಗಂಬರೆಯಾದರೂ ಅಂಬರವನೇ ಹೊದ್ದ ಮಲ್ಲಿ.
ಸಖನ ಅರಸುವ ಪರಿ ಕತ್ತಲೆಯಲ್ಲೂ ಕಾಂತಿ, ಬೆತ್ತಲೆ ಜಗದ ಕಣ್ಣು ತೆರೆಸುವ ಪರಿ ಹಣ್ಣಾದ ಅರಿವು.
ಹೆಣ್ಣಾದ ರೂಪಕೆ ಬೆಳಂದಿಗಳ ಬೆಳಕು, ಕಾನನದ ತುಂಬೆಲ್ಲಾ ಪಣತಿಯ ಸಾಲುದೀಪ.
ಕಲ್ಯಾಣದ ಬೀದಿಬೀದಿಗಳಲಿ ಅಕ್ಕನೆಂಬ ಮಹತಿ, ಮಹಾದೇವಿ ಉಸಿರಿದ ಮಾತೆಲ್ಲಾ ವಚನ.
ಸಾವಿರದ ರೂಹಿರದ ರೂಪಿರದ ದೈವಕ್ಕೆ, ಅಳವಟ್ಟ ಪರಿಯೊಂದೇ ಪರದೈವವೇ ಪತಿ.
ಶಯನಕ್ಕೆ ಹಾಳು ದೇಗುಲಗಳುಂಟೆಂಬುದು, ಬಯಲಿನಲ್ಲಿ ಬದುಕು ಕಟ್ಟಿಕೊಡುವ ಅಕ್ಕ, ನಮ್ಮೊಳಗೆ ಚೇತನವಾಗಿಹ ನಿತ್ಯ ಚೈತನ್ಯ .

ಹಂಗಿನರಮನೆ ತೊರೆದು ಹೊರಟವಳು. ದಿಗಂಬರೆ, ದಿವ್ಯಾಂಬರೆ, ಕೇಶಾಂಬರೆ.
ತನ್ನೊಳಗೆ ಕಿವಿಗೊಟ್ಟು ಸಾಗಿದವಳು,ಯಾರೂ ನಡೆಯದ ಹಾದಿಗೆ.ಆತ್ಮಸಂಗಾತಿಯನ್ನರಸುತ್ತ ಸವೆಸಿದ್ದು , ಹೆಜ್ಜೆಮೂಡಿರದ ಹಾದಿ.ಅರಮನೆಯ, ಲೋಕದ ಹಂಗುತೊರೆದು ಚಲಿಸಿದ್ದು ಅರುವಿನ ಮಹಾಮನೆಯತ್ತ.
ಒಂಟಿ ನಿರ್ಭಿತೆ ಯಾರೂ ಇಲ್ಲದವಳೆಂಬುದಕೆ ಕಿವಿಗೊಡದೆ ದಾಟಿದ್ದು, ಜಗದ ಕಟ್ಟು ಪಾಡುಗಳ ಚೌಕಟ್ಟು . ಪತಿತ್ವ ಪ್ರಭುತ್ವವೆರೆಡರ ಸೂತಕದ ಹಂಗು ಹರಿದು, ಕಾಮನ ಚಿನ್ಹೆಗಳಿಗೊಂದು ಅತೀತವಾದ ಅರ್ಥ ನೀಡಿ, ಒಳಗೆ ಸುಳಿವಾತ್ಮದ ಸಾಕ್ಷಾತ್ಕಾರಕ್ಕಾಗಿ.

ತರಗಲೆಯ ಮೇಲಿದು ತಾನಿಹೆನು ಎನ್ನುವ, ಅಸದೃಶ ಮನೋಬಲದ ಯೋಗಾಂಗಿ.
ಸ್ತುತಿ ನಿಂದೆಗಳೆಣಿಸದೆ ಸಮಾಧಾನಿಯಾಗಿರಬೇಕೆಂದು, ಸಜ್ಜನಳಾಗಿ ಮಜ್ಜನಗೈದ ಲಿಂಗಾಂಗಿ.
ಪಯಣದ ಗಮ್ಯತೆಗೆ ಹೆಣ್ತನದ ಶೃಂಕಲೆ ಏಕೆ ?
ವೇದನೆ ರೋಧನೆಗಳಿಲ್ಲದ ಬೋಧನೆ ಸಾಧನೆಯ ರೂಹಾದ ಅಕ್ಕ.
ಪರದೈವದ ಪತಿಯನ್ನರಸುತ್ತ ಪ್ರೇಮದ ಮೊಗ್ಗು ಅರಳಿನಿಂತ ಪರಿಗೆ, ಲಿಂಗ ಭೇದದಿ ನಿರ್ಮಾಣಗೊಂಡ ಗೋಡೆಯ ಸವಳಿ ಮಣ್ಣು ಉದುರುತಿತ್ತು.
ಆತ್ಮ ಸಾಂಗತ್ಯದ ನಿರ್ಭಯತೆಗೆ ಬಯಲಲ್ಲೆ, ಅಕ್ಕ ಚನ್ನಮಲ್ಲರ ಜ್ಞಾನದ ಭ್ರೂಣ ಅಂಕುರಿಸಿತ್ತು ಲೋಕದ ಅರಿವು ಪಕ್ವಗೊಂಡಿತ್ತು.

********

ಆತ್ಮಸಾಂಗತ್ಯದಿಂದಬದುಕುಸುಂದರ

ಸುರೇಶಮುದ್ದಾರ ಬರದಿದ್ದಾರೆ

ಭಯವಿಲ್ಲ ,ಭವವಿಲ್ಲದ ರೂಹಿಲ್ಲದ ಕೇಡಿಲ್ಲದ ಅಭವಂಗೆ ಒಲಿದ ಅಕ್ಕ ಅಲೌಕಿಕ ನಿಚ್ಚಳ ಬದುಕಿನ ಶ್ರೇಷ್ಟತೆಯನ್ನು ಮತ್ತು ಅರ್ಥವಿಲ್ಲದ ಭವದ ಬದುಕಿನ ನಿಸ್ಸತ್ವವನ್ನು ಸುಂದರ ಪ್ರತಿಮೆಗಳ ಮೂಲಕ ತೋರ್ಪಡಿಸುತ್ತ ಆತ್ಮ ಸಾಂಗತ್ಯಕ್ಕಿಂತ ಪರಿಶುದ್ಧವಾದ ಸಾಂಗತ್ಯ ಮತ್ತೊಂದಿಲ್ಲ ಎಂಬುದನ್ನು ಅಕ್ಕನ ಬದುಕಿನ ಮೂಲಕ ಅರಿತಿಕೊಳ್ಳಬಹುದು ಎಂಬುದನ್ನು “ಆತ್ಮ ಸಾಂಗತ್ಯದ ನಿರ್ಭಯತೆ ” ಎಂಬ ಕವಿತೆ ಧ್ವನಿಸುತ್ತದೆ. 

      ‘ ಅಕ್ಕನ ಭಾವಬಸಿರಿನ ಕೂಸಾದ ಚನ್ನಮಲ್ಲ’ ಎಂಬ ಪಂಕ್ತಿಯೊಂದಿಗೆ ಆರಂಭವಾಗುವ ಕವಿತೆ, ಅಕ್ಕನ ಬದುಕಿನ ಪರಿಯನ್ನು ಲೌಕಿಕ ಪ್ರತಿಮೆಗಳೊಂದಿಗೆ ಅವಳ ಅಲೌಕಿಕ ಬದುಕಿನ ಸಾಧನೆಯನ್ನು ಹೇಳುತ್ತ ಸಾಗುತ್ತದೆ.

       ‘ಸಖನ ಅರಸುವ ಪರಿ ಕತ್ತಲೆಯಲ್ಲೂ ಕಾಂತಿ, ಬೆತ್ತಲೆ ಜಗದ ಕಣ್ಣು ತೆರೆಸುವ ಪರಿ ಹಣ್ಣಾದ ಅರಿವು’ ಈ ಸಾಲುಗಳು ಅಕ್ಕ ಜಗದ ಕಣ್ಣಲ್ಲಿ ಲೌಕಿಕ ಗಂಡನನ್ನು ಮದುವೆಯಾಗಿದ್ದರೂ ಅವಳ ವರಿಸುವ ಸಖನೆ ಬೇರೆ. ಭವದ ಜಂಜಡದಲ್ಲೂ ಅಭವನನ್ನು ಹುಡುಕುವ, ಕತ್ತಲೆಯಲ್ಲೂ ಕಾಂತಿಯನ್ನು ಅರಸುವ, ವಿಷಯಾಸಕ್ತಿಗಳಲ್ಲಿ ಮುಳುಗಿರುವ ಜಗತ್ತಿಗೆ ಜ್ಞಾನದ ಬೆಳಕನ್ನು ತೋರಿಸುವ ಅಕ್ಕನ ಬದುಕೆ ಒಂದು ರವಿತೇಜದ ಪ್ರಜ್ವಲಿಪ ನಂದಾದೀಪವಿದ್ದಂತೆ.

      ರೂಪದಲ್ಲಿ ಹೆಣ್ಣಾದರೂ ಅದರಲ್ಲಿ ಕಾಮಾದಿ ಬಯಕೆಗಳಿಗೆ ಅವಕಾಶವಿಲ್ಲ.  ಅದು ಬೆಳದಿಂಗಳ ಬೆಳಕು ಅದನ್ನು ಪ್ರಾಂಜಲ ಮನಸ್ಸಿನಿಂದ ಸವಿಯಬೇಕಷ್ಟೆ. ಅವಳ ಅನುಭಾವದ ಕಾಂತಿಯ ತೇಜ  ಕಾನನದ ಕತ್ತಲೆಗೆ ಸಾಲು ದೀಪದಂತೆ ಪ್ರಜ್ವಲಿಸಿ ಕಲ್ಯಾಣದ ಹಾದಿಬಿದಿಗಳಲ್ಲಿ ಅವಳ ಮಹತಿ ಅವಳ ವಚನಗಳ ಉಸಿರು ಅವಳ  ಪಾವನ ಬದುಕಿನ ಶ್ರೆಷ್ಠತೆಗೆ ಉದಾಹರಣೆಯಾಗಿದೆ.

      ಅಕ್ಕನ ಬದುಕೆ ಒಂದು ಆಗಸ. ಅವಳು ಬಯಸಿದ್ದು ಚನ್ನಮಲ್ಲಿಕಾರ್ಜುನನ್ನು ಶಯನಕ್ಕೆ ಹಾಳು ದೇಗುಲವನ್ನು, ಬಯಲನ್ನು ತನ್ನ ಬದುಕನ್ನು ನಿಚ್ಚಳತೆಯ ಪ್ರತೀಕಗಳನ್ನಾಗಿ ಮಾಡಿಕೊಂಡು ಬಯಲಿನಲ್ಲೆ ಬದುಕನ್ನು ಕಟ್ಟಿಕೊಳ್ಳುವವಳು. ಅಂದರೆ ಬಯಲು ಎಂದರೆ ತಾತ್ವಿಕದ ಪ್ರಕಾರ ಎಲ್ಲವನ್ನು ತುಂಬಿಕೊಂಡಿರುವಂತದ್ದು. ಅದರಲ್ಲೇ ಬದುಕನ್ನು ಕಟ್ಟಿಕೊಡುವ ಆ ಮೂಲಕ ತನ್ನ ಅಂತರಂಗವನ್ನು ಅರಿತುಕೊಂಡು ಸದಾ ಚೈತನ್ಯ ದಿಂದ ಬದುಕಬೇಕಿದೆ.

      ಕಾರಣಾಂತರಗಳಿಂದ ಭವದ ಬದುಕಿಗೆ ಒಲ್ಲದ ಮನಸ್ಸಿನಿಂದ ಬಂದ ಅಕ್ಕ ತನ್ನ ಪ್ರಖರ ಸಾತ್ವಿಕ ಕಾಂತಿಯಿಂದ ಕೆಡುವ, ಸಾಯುವ ಗಂಡನನ್ನು ಬಿಟ್ಟು ದಿಗಂಬರೆಯಾಗಿ, ದಿವ್ಯಾಂಬರೆಯಾಗಿ, ಕೇಶಾಂಬರೆಯಾಗಿ, ತನ್ನೊಳಗಿನ ವಚನಕ್ಕೆ ತಾ ಕಿವಿಯಾಗಿ ಯಾರೂ ನಡೆಯದ ಭವದ ದಾರಿಯಲ್ಲದ , ಅಭವದ ದಾರಿ ಹಿಡಿದು ಸಾಗುವ ಪರಿ ಆತ್ಮಸಂಗಾತಿಯನ್ನು ಹುಡುಕಿ ಸಾಗಿದ ಹಾದಿ ಅರಮನೆಯ ಲೌಕಿಕದ ಹಂಗು ತೊರೆದು ಮಹಾಮನೆಯೆಂಬ ಅರಿವಿನರಮನೆಯನ್ನು ಸೇರಿದ್ದು ಅವಳು ವೀರ ವೀರಾಗಿಣಿ ಎಂಬುದಕ್ಕೆ ಸಾಕ್ಷಿಯೊದಗಿಸಿದೆ. ಸ್ತ್ರೀ ಅಬಲೆ ಅವಳು ಸದಾಕಾಲ ಪುರುಷನ ಅಧೀನದಲ್ಲೆ ಇರಬೇಕಾದವಳು ಎಂಬ ಕಟ್ಟುಪಾಡನ್ನು ಧೈರ್ಯದಿಂದ ವಿರೋಧಿಸಿ ಪತಿತ್ವ ಮತ್ತು ಪ್ರಭುತ್ವಗಳೆರಡನ್ನು ತೊಡೆದುಹಾಕಿ ಕಾಮಾದಿ ಬಯಕೆಗಳಿಗೊಂದು ಪಾರಮಾರ್ಥಿಕ ಅರ್ಥ ನೀಡಿ ಒಳಗೆ ಸುಳಿವಾತ್ಮ ಗಂಡು ಅಲ್ಲ ಹೆಣ್ಣು ಅಲ್ಲ ಎಂಬ ಮಾತನ್ನು ಸಾಬೀತು ಪಡಿಸಿದವಳು ಅಕ್ಕ ಎಂಬುದನ್ನು ಕವಿತೆ ತುಂಬಾ ತಾತ್ವಿಕವಾಗಿ ನಿರೂಪಿಸುತ್ತ ಸಾಗುತ್ತದೆ.

      ಬದುಕು ಅನಿಶ್ಚಿತವಾದುದು ಅದರ ಬಗೆಗೆ ಯೋಚಿಸದೆ ಆತ್ಮಬಲವನ್ನು ಹೆಚ್ಚಿಸಿಕೊಳ್ಳಲುಬೇಕೆಂದು ಅವಳು ತನ್ನ ಸಾಕಷ್ಟು ವಚನಗಳ ಮೂಲಕ ಹೇಳಿದ್ದಾಳೆ. ಬದುಕು ನಾವು ಬಯಸಿದಂತೆ ಎಂದಿಗೂ ಇರುವುದಿಲ್ಲ. ಆದ್ದರಿಂದ ಬದುಕಿನಲ್ಲಿ ಬರುವ ಸ್ತುತಿ ಚಿಂತನೆಗಳನ್ನು ಲೆಕ್ಕಿಸದೆ ಸಮಾಧಾನಿಯಾಗಿರಬೇಕು. ಸದಾಕಾಲ ಲಿಂಗಾಂಗ ಪೂಜೆಯಲ್ಲಿ ತೊಡಗಿ ಸಜ್ಜನಳಾಗಿ ವೇದನೆ, ರೋಧನೆಗಳಿಲ್ಲದೆ ಬದುಕು ಸಾಗಬೇಕು. ಅದಕ್ಕೆ ಸದಾಕಾಲ ಚನ್ನಮಲ್ಲಿಕಾರ್ಜುನನಲ್ಲಿ ಲೀನವಾಗಬೇಕು. ಆಗ ಮಾತ್ರ ಪರಿಶುದ್ಧ ಹೃದಯಿಯಾಗಬಲ್ಲ.  ಅಂಗದಲ್ಲಿನ ವಾಂಛೆಗಳು ದೂರವಾಗಬಲ್ಲವು. ಆಗ ಅಂಗ ಲಿಂಗ( ಅಕ್ಕ ಮತ್ತು ಚನ್ನಮಲ್ಲಿಕಾರ್ಜುನ) ಸಾಮರಸ್ಯ ಹೊಂದಿ ಜ್ಞಾನದ ಜ್ಯೋತಿ ಅಂಕುರಿಸಿತ್ತು. ಲೋಕ ಕಲ್ಮಷ ಕರಗಿ ಶುದ್ದವಾಗಿತ್ತು.

        ಅಂಗಲಿಂಗ ಸಾಮರಸ್ಯ, ಭವದ ಗಂಡನನ್ನು ತೊಡೆದು. ಅಭವನಲ್ಲಿ(ಚನ್ನಮಲ್ಲಿಕಾರ್ಜುನನಲ್ಲಿ) ಒಂದಾಗುವ ಮಹಾದೇವಿಯಕ್ಕನ ಬದುಕಿನ ದಾರಿ ನಿಜಕ್ಕೂ ಸಾಹಸಮಯವಾದುದು.  ಪವಿತ್ರವಾದುದು , ಪಾರಮಾರ್ಥಿಕವಾದುದು ಅದನ್ನು ಭವಿಗಳಾದವರು ಅರಿತುಕೊಂಡಾಗ ಈ ಲೋಕ ಪಕ್ವಗೊಳ್ಳುತ್ತದೆ. ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂಬ ಭಾವವನ್ನು ಸ್ಪುರಿಸುವ ಅಕ್ಕನ ಕುರಿತಾದ “ಆತ್ಮ ಸಾಂಗತ್ಯದ ನಿರ್ಭಯತೆ” ಎಂಬ ಅತ್ಯಂತ ಅರ್ಥಪೂರ್ಣ ಮತ್ತು ಭಾವಪೂರ್ಣ ಕವಿತೆಯನ್ನು ರಚಿಸಿರುವ  ಕವಯಿತ್ರಿ ಡಾ. ಮೈತ್ರಾಯಿನಿ ಗದಿಗೆಪ್ಪಗೌಡರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು  ಶ್ರೀ ಸುರೇಶ ಮುದ್ದಾರ.


ಸುರೇಶ ಮುದ್ದಾರ ಅರಭಾವಿಮಠ

ಭಯವಿಲ್ಲ ,ಭವವಿಲ್ಲದ ರೂಹಿಲ್ಲದ ಕೇಡಿಲ್ಲದ ಅಭವಂಗೆ ಒಲಿದ ಅಕ್ಕ ಅಲೌಕಿಕ ನಿಚ್ಚಳ ಬದುಕಿನ ಶ್ರೇಷ್ಟತೆಯನ್ನು ಮತ್ತು ಅರ್ಥವಿಲ್ಲದ ಭವದ ಬದುಕಿನ ನಿಸ್ಸತ್ವವನ್ನು ಸುಂದರ ಪ್ರತಿಮೆಗಳ ಮೂಲಕ ತೋರ್ಪಡಿಸುತ್ತ ಆತ್ಮ ಸಾಂಗತ್ಯಕ್ಕಿಂತ ಪರಿಶುದ್ಧವಾದ ಸಾಂಗತ್ಯ ಮತ್ತೊಂದಿಲ್ಲ ಎಂಬುದನ್ನು ಅಕ್ಕನ ಬದುಕಿನ ಮೂಲಕ ಅರಿತಿಕೊಳ್ಳಬಹುದು ಎಂಬುದನ್ನು “ಆತ್ಮ ಸಾಂಗತ್ಯದ ನಿರ್ಭಯತೆ ” ಎಂಬ ಕವಿತೆ ಧ್ವನಿಸುತ್ತದೆ. 

      ‘ ಅಕ್ಕನ ಭಾವಬಸಿರಿನ ಕೂಸಾದ ಚನ್ನಮಲ್ಲ’ ಎಂಬ ಪಂಕ್ತಿಯೊಂದಿಗೆ ಆರಂಭವಾಗುವ ಕವಿತೆ, ಅಕ್ಕನ ಬದುಕಿನ ಪರಿಯನ್ನು ಲೌಕಿಕ ಪ್ರತಿಮೆಗಳೊಂದಿಗೆ ಅವಳ ಅಲೌಕಿಕ ಬದುಕಿನ ಸಾಧನೆಯನ್ನು ಹೇಳುತ್ತ ಸಾಗುತ್ತದೆ.

       ‘ಸಖನ ಅರಸುವ ಪರಿ ಕತ್ತಲೆಯಲ್ಲೂ ಕಾಂತಿ, ಬೆತ್ತಲೆ ಜಗದ ಕಣ್ಣು ತೆರೆಸುವ ಪರಿ ಹಣ್ಣಾದ ಅರಿವು’ ಈ ಸಾಲುಗಳು ಅಕ್ಕ ಜಗದ ಕಣ್ಣಲ್ಲಿ ಲೌಕಿಕ ಗಂಡನನ್ನು ಮದುವೆಯಾಗಿದ್ದರೂ ಅವಳ ವರಿಸುವ ಸಖನೆ ಬೇರೆ. ಭವದ ಜಂಜಡದಲ್ಲೂ ಅಭವನನ್ನು ಹುಡುಕುವ, ಕತ್ತಲೆಯಲ್ಲೂ ಕಾಂತಿಯನ್ನು ಅರಸುವ, ವಿಷಯಾಸಕ್ತಿಗಳಲ್ಲಿ ಮುಳುಗಿರುವ ಜಗತ್ತಿಗೆ ಜ್ಞಾನದ ಬೆಳಕನ್ನು ತೋರಿಸುವ ಅಕ್ಕನ ಬದುಕೆ ಒಂದು ರವಿತೇಜದ ಪ್ರಜ್ವಲಿಪ ನಂದಾದೀಪವಿದ್ದಂತೆ.

      ರೂಪದಲ್ಲಿ ಹೆಣ್ಣಾದರೂ ಅದರಲ್ಲಿ ಕಾಮಾದಿ ಬಯಕೆಗಳಿಗೆ ಅವಕಾಶವಿಲ್ಲ.  ಅದು ಬೆಳದಿಂಗಳ ಬೆಳಕು ಅದನ್ನು ಪ್ರಾಂಜಲ ಮನಸ್ಸಿನಿಂದ ಸವಿಯಬೇಕಷ್ಟೆ. ಅವಳ ಅನುಭಾವದ ಕಾಂತಿಯ ತೇಜ  ಕಾನನದ ಕತ್ತಲೆಗೆ ಸಾಲು ದೀಪದಂತೆ ಪ್ರಜ್ವಲಿಸಿ ಕಲ್ಯಾಣದ ಹಾದಿಬಿದಿಗಳಲ್ಲಿ ಅವಳ ಮಹತಿ ಅವಳ ವಚನಗಳ ಉಸಿರು ಅವಳ  ಪಾವನ ಬದುಕಿನ ಶ್ರೆಷ್ಠತೆಗೆ ಉದಾಹರಣೆಯಾಗಿದೆ.

      ಅಕ್ಕನ ಬದುಕೆ ಒಂದು ಆಗಸ. ಅವಳು ಬಯಸಿದ್ದು ಚನ್ನಮಲ್ಲಿಕಾರ್ಜುನನ್ನು ಶಯನಕ್ಕೆ ಹಾಳು ದೇಗುಲವನ್ನು, ಬಯಲನ್ನು ತನ್ನ ಬದುಕನ್ನು ನಿಚ್ಚಳತೆಯ ಪ್ರತೀಕಗಳನ್ನಾಗಿ ಮಾಡಿಕೊಂಡು ಬಯಲಿನಲ್ಲೆ ಬದುಕನ್ನು ಕಟ್ಟಿಕೊಳ್ಳುವವಳು. ಅಂದರೆ ಬಯಲು ಎಂದರೆ ತಾತ್ವಿಕದ ಪ್ರಕಾರ ಎಲ್ಲವನ್ನು ತುಂಬಿಕೊಂಡಿರುವಂತದ್ದು. ಅದರಲ್ಲೇ ಬದುಕನ್ನು ಕಟ್ಟಿಕೊಡುವ ಆ ಮೂಲಕ ತನ್ನ ಅಂತರಂಗವನ್ನು ಅರಿತುಕೊಂಡು ಸದಾ ಚೈತನ್ಯ ದಿಂದ ಬದುಕಬೇಕಿದೆ.

      ಕಾರಣಾಂತರಗಳಿಂದ ಭವದ ಬದುಕಿಗೆ ಒಲ್ಲದ ಮನಸ್ಸಿನಿಂದ ಬಂದ ಅಕ್ಕ ತನ್ನ ಪ್ರಖರ ಸಾತ್ವಿಕ ಕಾಂತಿಯಿಂದ ಕೆಡುವ, ಸಾಯುವ ಗಂಡನನ್ನು ಬಿಟ್ಟು ದಿಗಂಬರೆಯಾಗಿ, ದಿವ್ಯಾಂಬರೆಯಾಗಿ, ಕೇಶಾಂಬರೆಯಾಗಿ, ತನ್ನೊಳಗಿನ ವಚನಕ್ಕೆ ತಾ ಕಿವಿಯಾಗಿ ಯಾರೂ ನಡೆಯದ ಭವದ ದಾರಿಯಲ್ಲದ , ಅಭವದ ದಾರಿ ಹಿಡಿದು ಸಾಗುವ ಪರಿ ಆತ್ಮಸಂಗಾತಿಯನ್ನು ಹುಡುಕಿ ಸಾಗಿದ ಹಾದಿ ಅರಮನೆಯ ಲೌಕಿಕದ ಹಂಗು ತೊರೆದು ಮಹಾಮನೆಯೆಂಬ ಅರಿವಿನರಮನೆಯನ್ನು ಸೇರಿದ್ದು ಅವಳು ವೀರ ವೀರಾಗಿಣಿ ಎಂಬುದಕ್ಕೆ ಸಾಕ್ಷಿಯೊದಗಿಸಿದೆ. ಸ್ತ್ರೀ ಅಬಲೆ ಅವಳು ಸದಾಕಾಲ ಪುರುಷನ ಅಧೀನದಲ್ಲೆ ಇರಬೇಕಾದವಳು ಎಂಬ ಕಟ್ಟುಪಾಡನ್ನು ಧೈರ್ಯದಿಂದ ವಿರೋಧಿಸಿ ಪತಿತ್ವ ಮತ್ತು ಪ್ರಭುತ್ವಗಳೆರಡನ್ನು ತೊಡೆದುಹಾಕಿ ಕಾಮಾದಿ ಬಯಕೆಗಳಿಗೊಂದು ಪಾರಮಾರ್ಥಿಕ ಅರ್ಥ ನೀಡಿ ಒಳಗೆ ಸುಳಿವಾತ್ಮ ಗಂಡು ಅಲ್ಲ ಹೆಣ್ಣು ಅಲ್ಲ ಎಂಬ ಮಾತನ್ನು ಸಾಬೀತು ಪಡಿಸಿದವಳು ಅಕ್ಕ ಎಂಬುದನ್ನು ಕವಿತೆ ತುಂಬಾ ತಾತ್ವಿಕವಾಗಿ ನಿರೂಪಿಸುತ್ತ ಸಾಗುತ್ತದೆ.

      ಬದುಕು ಅನಿಶ್ಚಿತವಾದುದು ಅದರ ಬಗೆಗೆ ಯೋಚಿಸದೆ ಆತ್ಮಬಲವನ್ನು ಹೆಚ್ಚಿಸಿಕೊಳ್ಳಲುಬೇಕೆಂದು ಅವಳು ತನ್ನ ಸಾಕಷ್ಟು ವಚನಗಳ ಮೂಲಕ ಹೇಳಿದ್ದಾಳೆ. ಬದುಕು ನಾವು ಬಯಸಿದಂತೆ ಎಂದಿಗೂ ಇರುವುದಿಲ್ಲ. ಆದ್ದರಿಂದ ಬದುಕಿನಲ್ಲಿ ಬರುವ ಸ್ತುತಿ ಚಿಂತನೆಗಳನ್ನು ಲೆಕ್ಕಿಸದೆ ಸಮಾಧಾನಿಯಾಗಿರಬೇಕು. ಸದಾಕಾಲ ಲಿಂಗಾಂಗ ಪೂಜೆಯಲ್ಲಿ ತೊಡಗಿ ಸಜ್ಜನಳಾಗಿ ವೇದನೆ, ರೋಧನೆಗಳಿಲ್ಲದೆ ಬದುಕು ಸಾಗಬೇಕು. ಅದಕ್ಕೆ ಸದಾಕಾಲ ಚನ್ನಮಲ್ಲಿಕಾರ್ಜುನನಲ್ಲಿ ಲೀನವಾಗಬೇಕು. ಆಗ ಮಾತ್ರ ಪರಿಶುದ್ಧ ಹೃದಯಿಯಾಗಬಲ್ಲ.  ಅಂಗದಲ್ಲಿನ ವಾಂಛೆಗಳು ದೂರವಾಗಬಲ್ಲವು. ಆಗ ಅಂಗ ಲಿಂಗ( ಅಕ್ಕ ಮತ್ತು ಚನ್ನಮಲ್ಲಿಕಾರ್ಜುನ) ಸಾಮರಸ್ಯ ಹೊಂದಿ ಜ್ಞಾನದ ಜ್ಯೋತಿ ಅಂಕುರಿಸಿತ್ತು. ಲೋಕ ಕಲ್ಮಷ ಕರಗಿ ಶುದ್ದವಾಗಿತ್ತು.

        ಅಂಗಲಿಂಗ ಸಾಮರಸ್ಯ, ಭವದ ಗಂಡನನ್ನು ತೊಡೆದು. ಅಭವನಲ್ಲಿ(ಚನ್ನಮಲ್ಲಿಕಾರ್ಜುನನಲ್ಲಿ) ಒಂದಾಗುವ ಮಹಾದೇವಿಯಕ್ಕನ ಬದುಕಿನ ದಾರಿ ನಿಜಕ್ಕೂ ಸಾಹಸಮಯವಾದುದು.  ಪವಿತ್ರವಾದುದು , ಪಾರಮಾರ್ಥಿಕವಾದುದು ಅದನ್ನು ಭವಿಗಳಾದವರು ಅರಿತುಕೊಂಡಾಗ ಈ ಲೋಕ ಪಕ್ವಗೊಳ್ಳುತ್ತದೆ. ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂಬ ಭಾವವನ್ನು ಸ್ಪುರಿಸುವ ಅಕ್ಕನ ಕುರಿತಾದ “ಆತ್ಮ ಸಾಂಗತ್ಯದ ನಿರ್ಭಯತೆ” ಎಂಬ ಅತ್ಯಂತ ಅರ್ಥಪೂರ್ಣ ಮತ್ತು ಭಾವಪೂರ್ಣ ಕವಿತೆಯನ್ನು ರಚಿಸಿರುವ  ಕವಯಿತ್ರಿ ಡಾ. ಮೈತ್ರಾಯಿನಿ ಗದಿಗೆಪ್ಪಗೌಡರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು  ಶ್ರೀ ಸುರೇಶ ಮುದ್ದಾರ.


Leave a Reply

Back To Top