ಕಾವ್ಯ ಸಂಗಾತಿ
ಸುಧಾ ಪಾಟೀಲ
“ಬರೆಯಲೇಬೇಕು”

ಬರೆಯಲೇಬೇಕು
ಅನುದಿನ
ಭಾವಗಳ ಬಿಚ್ಚಿಡಲು
ಅಕ್ಷರದ ಘಮ
ಅನುಭವಿಸಲು
ಕಾವ್ಯದ ಹುರುಳು
ಅರಿಯಲು
ಗದ್ಯದ ತಿರುಳು
ಮನಗಾಣಲು
ಬರೆಯಲೇಬೇಕು
ಬೇರ್ಪಡಿಸಲಾರದ
ನನ್ನದೇ ಆದ
ವಿಚಾರಧಾರೆಗಳ
ಸತ್ಯ – ಅಸತ್ಯಗಳ ತಾಕಲಾಟಗಳ
ಶ್ರದ್ಧಾ -ಭಕ್ತಿಯ
ವಿಚಾರಧಾರೆಗಳ
ಬರೆಯಲೇಬೇಕು
ಕುಟುಕುವ ವಿಶೇಷ
ಟಿಪ್ಪಣಿಗಳ
ಅವಲೋಕಿಸಬೇಕು
ಮಾನದಂಡಗಳ ಅಡಿಯಲ್ಲಿ
ಬರುವ ವ್ಯಾಖ್ಯಾನಗಳ
ಬರೆಯಲೇಬೇಕು
ಸಹ್ಯವಾಗದ ವಿಷಯಗಳ
ನಂಬುವ ಅಭಿವ್ಯಕ್ತಿಗಳ
ಸಂಘರ್ಷದ ಹಾದಿಯಲ್ಲಿ
ತೊಡಕಾಗುವ ಮುಳ್ಳುಗಳ
ಮಂಥನವ
ಸುಧಾ ಪಾಟೀಲ

ತುಂಬಾ ಸೊಗಸಾಗಿದೆ ಮೇಡಂ ನಿಮ್ಮ ಕವನ. ಹೀಗೆ ಸಾಗಲಿ ನಿಮ್ಮ ಕಾವ್ಯ ಕೃಷಿ ಪಯಣ.
ಧನ್ಯವಾದಗಳು.
ಧನ್ಯವಾದಗಳು
ತುಂಬಾ ಸುಂದರ ಭಾವ ಮೇಡಂ…