ಸಂಭ್ರಮದ ಸಂಕ್ರಾಂತಿ

ಕಾವ್ಯ ಸಂಗಾತಿ

ಸಂಭ್ರಮದ ಸಂಕ್ರಾಂತಿ

ಅಕ್ಷತಾ ಜಗದೀಶ.

ಮರೆಯಾಯಿತು ಕತ್ತಲು
ಹೊರಹೊಮ್ಮಿತು
ಹೊಸ ಬೆಳಕು…
ಉತ್ತರಾಯಣದೆಡೆಗೆ
ಭಾಸ್ಕರನ ಪಯಣ
ಎಲ್ಲೆಡೆ ಹರಡಿದೆ
ಸಂತಸದ ನವಚೇತನ..
ಹೊರ ಹೊಮ್ಮಿದೆ
ಹೊಸ ಕಾಂತಿ…
ಮರಳಿ ಬಂತು
ಸಂಕ್ರಾಂತಿ….

ಅನ್ನದಾತನಿಗಿದುವೆ
ಸುಗ್ಗಿಯ ಕಾಲ..
ಎಳ್ಳು ಬೆಲ್ಲದ
ಸವಿಯೋಣ ಬಾರ…
ಬದುಕಿನ ಸಂತಸ
ಮೆರೆಯೋಣ..
ಸಡಗರದಿ ದಿನವನು
ಕಳೆಯೋಣ….

ಎಳ್ಳು ಬೆಲ್ಲದ
ಸವಿಯಲಿ..
ಸವಿಮಾತಿನ
ಧ್ವನಿಯಲಿ..
ದೂರಾಗಲಿ ವಿಭ್ರಾಂತಿ
ಸಂಭ್ರಮ ತರಲಿ
ಸಂಕ್ರಾಂತಿ…..


Leave a Reply

Back To Top