ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂಭ್ರಮದ ಸಂಕ್ರಾಂತಿ

ಅಕ್ಷತಾ ಜಗದೀಶ.

ಮರೆಯಾಯಿತು ಕತ್ತಲು
ಹೊರಹೊಮ್ಮಿತು
ಹೊಸ ಬೆಳಕು…
ಉತ್ತರಾಯಣದೆಡೆಗೆ
ಭಾಸ್ಕರನ ಪಯಣ
ಎಲ್ಲೆಡೆ ಹರಡಿದೆ
ಸಂತಸದ ನವಚೇತನ..
ಹೊರ ಹೊಮ್ಮಿದೆ
ಹೊಸ ಕಾಂತಿ…
ಮರಳಿ ಬಂತು
ಸಂಕ್ರಾಂತಿ….

ಅನ್ನದಾತನಿಗಿದುವೆ
ಸುಗ್ಗಿಯ ಕಾಲ..
ಎಳ್ಳು ಬೆಲ್ಲದ
ಸವಿಯೋಣ ಬಾರ…
ಬದುಕಿನ ಸಂತಸ
ಮೆರೆಯೋಣ..
ಸಡಗರದಿ ದಿನವನು
ಕಳೆಯೋಣ….

ಎಳ್ಳು ಬೆಲ್ಲದ
ಸವಿಯಲಿ..
ಸವಿಮಾತಿನ
ಧ್ವನಿಯಲಿ..
ದೂರಾಗಲಿ ವಿಭ್ರಾಂತಿ
ಸಂಭ್ರಮ ತರಲಿ
ಸಂಕ್ರಾಂತಿ…..


About The Author

Leave a Reply

You cannot copy content of this page

Scroll to Top