ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಒಡನಿದ್ದವಳೊಂದು ದಿನ……..

ಬೆಂಶ್ರೀ ರವೀಂದ್ರ

ಒಡನಿದ್ದವಳೊಂದು ದಿನ …………..
………………………………ಕರಗಿಹೋದೆ

ಕಾಲದಲಿರುವೆಯೆಂದು
ಕಾದೆ ಚೈತ್ರದ ಯುಗಾದಿಗಾಗಿ

ರವಿರಶ್ಮಿಯಲಿರುವೆಯೆಂದು
ಕಾದೆ ವೈಶಾಖದ ಬಿಸಿಲಿಗಾಗಿ

ಬುವಿಯಲಿರುವೆಯೆಂದು
ಕಾದೆ ಜೇಷ್ಠದ ಕಾರಹುಣ್ಣಿಮೆಗಾಗಿ

ಗಾಳಿಯಲಿರುವೆಯೆಂದು
ಕಾದೆ ಆಷಾಢದ ಸುಳಿಗಾಗಿ

ಮೋಡದಲಿರುವೆಯೆಂದು
ಕಾದೆ ಶ್ರಾವಣ ಮಳೆಗಾಗಿ

ಬುದ್ದಿಶಕ್ತಿಲಿರುವೆಯೆಂದು
ಕಾದೆ ಭಾದ್ರಪದದ ಚೌತಿಗಾಗಿ

ಗೊಂಬೆಯಲಿರುವೆಯೆಂದು
ಕಾದೆ ಆಶ್ವಯುಜದ ದಸರೆಗಾಗಿ

ದೀಪದಲಿರುವೆಯೆಂದು
ಕಾದೆ ಕಾರ್ತಿಕದ ದೀಪಾವಳಿಗಾಗಿ

ಕೃಷ್ಣನುಡಿಯಲಿರುವೆಯೆಂದು
ಕಾದೆ ಮಾರ್ಗಶಿರದ ಗೀತಾಹಬ್ಬಕಾಗಿ

ಸುಗ್ಗಿಯಲಿರುವೆಯೆಂದು
ಕಾದೆ ಪುಷ್ಯದ ಸಂಕ್ರಾಂತಿಗಾಗಿ

ವಿರಾಗದಲಿರುವೆಯೆಂದು
ಕಾದೆ ಮಾಘದ ಶಿವರಾತ್ರಿಗಾಗಿ

ಬಣ್ಣಗಳಲಿರುವೆಯೆಂದು
ಕಾದೆ ಫಾಲ್ಗುಣದ ಹೋಳಿಗಾಗಿ

ವಸಂತನ ರಮ್ಯತೆಯಲಿ
ಗ್ರೀಷ್ಮನ ಬಿಸಿ ಗಾಳಿಯಲಿ
ವರ್ಷನ ಮರುಹುಟ್ಟಿನಲಿ
ಶರದನ ಸಡಗರದಲಿ
ಹೇಮಂತನ ಹಿಮದಲಿ
ಶಿಶಿರನ ವಿರಕ್ತಿ ರಕ್ತಿಯಲಿ
ಹುಡುಕಿದೆ ಹುಡುಗಿ
ಈಗ
ಅರಿವಾಯ್ತು ನೀ ಕರಗಿ
ನನ್ನೊಳಗೇ ಇರುವೆಯೆಂದು.

***********************

About The Author

1 thought on “ಒಡನಿದ್ದವಳೊಂದು ದಿನ……..”

Leave a Reply

You cannot copy content of this page

Scroll to Top