Category: ಕಾವ್ಯಯಾನ

ಕಾವ್ಯಯಾನ

ಕವಿತೆ ಹೀಗಿರಬೇಕು

ಧರೆತುಂಬಿ ಹರಿವ ಝರಿ ತೊರೆ
ಹಳ್ಳಗಳಂತೆ ಕಣ್ಮನ ಸೆಳೆದು
ವಿಹಂಗಮ ನೋಟ ಸೃಷ್ಟಿಸುವ
ಹರೆಯದ ತರುಣಿಯಂತೆ
ನೀ ಸಂಪದ್ಭರಿತವಾಗಿರಬೇಕು…

ಗೆಳತಿ

ಕವಿತೆ ಗೆಳತಿ ಪ್ರೊ.ರಾಜನಂದಾ ಘಾರ್ಗಿ ಹಾಗೇ ಒಬ್ಬಳು ಸುಮ್ಮನೇಚಿಕ್ಕ ಪುಟ್ಟ ಗೆಳತಿದಾರಿಯಲಿ ಸಿಕ್ಕವಳುನಾಲ್ಕು ಹೆಜ್ಜೆ ನಡೆದವಳುಸುಮ್ಮನೇ ಮಾತಿಗೆ ಎಳೆದುಮನ ಸೆಳೆದವಳುಮಾತಿಗೆ ವೀಷಯವೇನಿಲ್ಲಸಮಯದ ಪರಿವೆಯಿಲ್ಲದಾರಿ ಸರಿದು ಹೋಗಿಕವಲುಗಳೊಡೆದಾಗಕಣ್ಮರೆಯಾದವಳುಮನದ ಮೂಲೆಯಲ್ಲಿಮನೆಮಾಡಿದ ಚದುರೆಇರುವಿಕೆಗೆ ಗುರುತಿಲ್ಲಭೇಟಿಯಾಗುವ ಬಯಕೆಯಿಲ್ಲಆದರೂ ಮರಿಚಿಕೆಯಂತೆಕನಸಲಿ ಕಾಡುವಳುಕಣ್ಣಿನ ನೀರಾಗುವಳು ***********************

ನೀನೆಂದೂ ಬಂಧಿಸಲಿಲ್ಲ

ಬಂಧನದಿಂದ ಬಿಡುಗಡೆಯೆಡೆಗೆ ನಡೆಸಿದೆ
ಮುಕ್ತಿ ಪಥವ ಪ್ರೀತಿಯಿಂದಲಿ ತೋರಿದೆ
ಪ್ರೀತಿ ಹೆಸರಲಿ ನೀನೆಂದೂ ಬಂಧಿಸಲಿಲ್ಲ…..

ದೊಂದಿ….

ಕವಿತೆ ದೊಂದಿ…. ಕಗ್ಗಲ್ಲನ್ನೂ ಮೃದುವಾಗಿಕೊರೆದು ಬೇರೂರಿ ನಿಂತುತೀಡುವ ತಂಗಾಳಿಯ ಸೆಳೆತಕೆಬಾಗಿ ಬಳುಕುವಬಳ್ಳಿಯ ಕುಡಿಯಲ್ಲಿನಿನ್ನ ನಡಿಗೆಯ ಸೆಳಕು ಕಂಡುನನ್ನ ಕಣ್ಣುಗಳು ಮಿನುಗುತ್ತವೆ…. ಬೆಳದಿಂಗಳಿಗೆ ಬೇಡವಾದಕಾಡಿಗೆ ಕಪ್ಪಿನ ರಾತ್ರಿಯಲಿದೂರದಿ ಮಿನುಗುವಕೋಟಿ ನಕ್ಷತ್ರಗಳ ವದನದಲಿನಿನ್ನ ನಗೆಯ ಬೆಳಕು ಚೆಲ್ಲಿದಂತಾಗಿನನ್ನ ಮನಸ್ಸು ಮುದಗೊಳ್ಳುತ್ತದೆ…. ಬಿಸಿಲ ಬೇಗೆಯಲಿಬಸವಳಿದವನಿಗೆ ಬಯಲಿನಲಿ ನಿಂತಒಂಟಿ ಮರದ ತಣ್ಣನೆಯ ನೆರಳಿನಂತೆಬಾಳ ಬೇಗೆಯಲಿ ಬಸವಳಿದವನಿಗೆನಿನ್ನ ಮಡಿಲು ನೆನಪಾಗಿನನ್ನ ಹೃದಯ ಪುಳಕಗೊಳ್ಳುತ್ತದೆ… ಹೀಗೇ….. ನೀ ಧಿಕ್ಕರಿಸಿಚೆಲ್ಲಿ ಹೋದ ಸುಡುಸುಡುವನೆನಪಿನ ಕಿಡಿಗಳನುಹೆಕ್ಕಿ ದೊಂದಿ ಮಾಡಿಕೊಳ್ಳುತ್ತಿದ್ದೇನೆಬದುಕಿನ ಕತ್ತಲೆಗಿರಲೆಂದು…! ಮತ್ತೆ ಕನಸು ಕಾಣುತ್ತಿರುವೆನಾವು ಅಪರಿಚಿತರಾಗಿದ್ದತಿರುವಿನಿಂದ ಯಾನ ಶುರುವಾದರೆಸುಂದರವಾಗಬಹುದು […]

ನಾನೆಂದರೆ…

ಗೊಂದಲಗಳ ಗೂಡು ಒಮ್ಮೊಮ್ಮೆ
ಭಾವನೆಗಳ ಪರಿಧಿಯಲ್ಲಿ
ಮತ್ತೊಮ್ಮೆ ಗೆದ್ದು ಬೀಗುತ್ತೇನೆ, ಭೌದ್ಧಿಕತೆಯ ಪ್ರಶಾಂತತೆಯಲಿ

Back To Top