ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕೋಗಿಲೆ ಕರಗಿತು” ಕೋಗಿಲೆ ಕರಗಿತುಕಾಡು ಮೌನವಾಗಲಿಲ್ಲ;ಅವಳ ಕಂಠದಿಂದ ಹರಿದರಾಗಗಳುಇನ್ನೂ ಗಾಳಿಯ ಎದೆಯಲಿ ತೇಲುತ್ತಿವೆ. ಸ್ವರವೆಂಬ ಗಂಗೆಯಲ್ಲಿಭಾವದ ದೀಪ ಹಚ್ಚಿದವಳುನೀನು;ನಗುವಿಗೂ ನಾದ ಕೊಟ್ಟೆ,ಅಳುವಿಗೂ ಆಲಾಪನೆಯರೂಪ ಕೊಟ್ಟೆ. ನಿನ್ನ ಕಂಠದ ಜೇನಿನಹನಿಗಳುಕೋಟಿ ಹೃದಯಗಳದಾಹ ನೀಗಿಸಿದವು;ಮುಗ್ಧ ಮಗುವಿನಲಾಲಿಯಾಗಿ,ತಾಯಿಯ ಮಮತೆಯತೊಟ್ಟಿಲಾಗಿ,ಪ್ರೇಮಿಗಳ ಕನಸಿನ ಭಾವವಾಗಿಭಕ್ತರ ಪ್ರಾರ್ಥನೆಯದೀಪವಾಗಿಅಮರಳಾದೆ ನೀನು. ನೀ ಹಾಡಿದಾಗಚಂದ್ರನು ಬೆಳದಿಂಗಳ ಹರಡಿದಮಲ್ಲಿಗೆ ತನ್ನ ಪರಿಮಳ ಸೂಸಿತು;ಗಾಳಿ ನಿಂತು ನಿನ್ನಆಲಾಪನೆಯನ್ನು ಆಲಿಸಿತು;ನದಿಯ ಅಲೆಗಳೂನಿನ್ನ ತಾಳಕ್ಕೆ ತಲೆದೂಗಿದವು. ನಿನ್ನ ರಾಗದ ಅಲೆಗಳಲ್ಲಿವಿರಹವು ಕಣ್ಣೀರಮುತ್ತಾಯಿತು;ಸಂತೋಷವು ನಗುವಿನ ಹೂವಾಯಿತು;ವೇದನೆಯೂ ಸಂಗೀತವಾಗಿ ಅರಳಿತು;ಮೌನವೂ ಮಧುರಗೀತೆಯಾಗಿ ಮೊಳಗಿತುಕಲ್ಲಿನ ಮೇಲೆ ಹೆಸರುಬರೆದವಳಲ್ಲಹೃದಯಗಳ ಮೇಲೆಸ್ವರಗಳಿಂದ ಶಾಶ್ವತ ಅಚ್ಚು ಹಾಕಿದವಳು ಕೋಗಿಲೆ ಕರಗಿತುಎನ್ನುವುದುಕಾಲದ ಮಾತು ಮಾತ್ರ;ಆದರೆ ನಿನ್ನ ಗಾನ ಬೆಳಗಿನ ಮೊದಲಹಕ್ಕಿಯ ಕೂಗಿನಂತೆ,ಸಂಜೆಯ ಮೃದುವಾದಗಾಳಿಯಂತೆ,ಮಳೆಹನಿಯ ಸಂಗೀತದಂತೆ,ಭಕ್ತಿಯ ದೀಪದಜ್ಯೋತಿಯಂತೆಯುಗಯುಗಕೂ     ಮೊಳಗುತ್ತಲೇ ಇರುವುದು. ಓ ಗಾನಸರಸ್ವತಿಯೇ!ನಿನ್ನ ಕಂಠ ಮೌನವಾದರೂನಿನ್ನ ಸ್ವರ ಅಮರವಾಗಿದೆ;ನಿನ್ನ ದೇಹ ದೂರವಾದರೂನಿನ್ನ ಸಂಗೀತನಮ್ಮ ಉಸಿರಾಗಿದೆ. ಕೋಗಿಲೆ ಕರಗಲಿಲ್ಲ…ಜಾನಕಿ ರಾಗವಾಗಿಆಕಾಶದಲ್ಲಿ ಬೆರೆತಳು;ಭಾವವಾಗಿ ಮನಗಳಲ್ಲಿನೆಲೆಸಿದಳು;ಸಂಗೀತವಾಗಿ ಕಾಲಾತೀತಳಾದಳು. ನಿನ್ನ ಅಮರ ಗಾನಕ್ಕೆಶತಶತ ನಮನಗಳು. ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು” Read Post »

ಇತರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಪ್ರೇಮ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಒಲವಿನ ಸ್ನೇಹದ ಪ್ರೀತಿ” ಒಲವಿನ ಸ್ನೇಹದ ಪ್ರೀತಿ ಅಂದ್ರೆ  ಬೆಳಗ್ಗೆ ಎದ್ದು “ಚಹ ಕುಡಿದೆಯಾ?”ಅಂತ ಕೇಳೋ ಸ್ನೇಹಿತ/ತೆನೀನು ಸುಮ್ನೆ ಇದ್ದಾಗ “ಏನಾಯ್ತು?”ಅಂತ ಅರ್ಥ ಮಾಡ್ಕೊಳ್ಳೊ ಮೌನ.   ಒಲವಿನ ಪ್ರೀತಿ ಸ್ನೇಹ ಅಂದ್ರೆ  ನೀನು ಸೋತಾಗ “ಪರವಾಗಿಲ್ಲ,ಮತ್ತೆ ಪ್ರಯತ್ನಿಸು” ಅಂತ ಹೇಳೋ ಧೈರ್ಯನೀನು ಗೆದ್ದಾಗ ಮೊದಲು ಚಪ್ಪಾಳೆ ತಟ್ಟುವ ಕೈ.   ಅದು ಹೂವಿನ ಹಾಗೆ ಗೊತ್ತಾ ನಿನಗೆ ಜೋರಾಗಿ ಕೂಗಲ್ಲ, ಆದ್ರೆ ಅದರ ವಾಸನೆಗೆ ಮನಸ್ಸು ಹಗುರ ಆಗುತ್ತೆಅದು ದೇವರ ಮುಂದೆ ಹಚ್ಚಿದ ದೀಪದ ಹಾಗೆ,ಜೋರಾಗಿ ಉರಿಯಲ್ಲ,ಆದ್ರೆ ಕತ್ತಲಲ್ಲಿ ದಾರಿ ತೋರಿಸುತ್ತೆ.   ಒಲವಿನ ಪ್ರೀತಿ ಕೇಳಲ್ಲ ಏನೂ,  ಸ್ನೇಹಕ್ಕೆ ಕೊಡೋದಷ್ಟೇ ಗೊತ್ತುಮನಸ್ಸು ತುಂಬಾ ಇದ್ದಾಗ ಹಂಚಿಕೊಳ್ಳೋಕೆ ಭುಜ, ಮನಸ್ಸು.ಖಾಲಿ ಇದ್ದಾಗ ತುಂಬೋಕೆ ಮಾತು.   ಆ ಪ್ರೀತಿ ಇದ್ದರೆ ಸಾಕು ಸಖಿ/ಖ ಬದುಕು ಎಷ್ಟೇ ಕಷ್ಟ ಆದ್ರೂ ಎದೆಯ ಒಂದು ಬೆಚ್ಚಗಿನ ಮೂಲೆಯಲ್ಲಿ  ನಾನು ಸುರಕ್ಷಿತವಾಗಿರುತ್ತೇನೆಎಂಬ ಭಾವ ಸ್ನೇಹಿತ/ತೆ ಎನಿಸಿಕೊಂಡ ಎಲ್ಲರಿಂದಲೂ ಪಡೆಯಲು ಸಾಧ್ಯವಿಲ್ಲ. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ  ಅವರ ಕವಿತೆ “ಕಣ್ಣ ನೋಟ”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ  “ಕಣ್ಣ ನೋಟ” ರಾತ್ರಿ ನೀಲ ಗಗನದಲ್ಲೂ ಬಿಸೋ ಗಾಳಿ ಮಳೆಯಲ್ಲೂಚಂದಿರನು ಹೊಳೆಯುತಾನ.ನಿನ್ನ ಕಣ್ಣ ನೋಟದಾಂಗ ನನ್ನ ಹೃದಯ ಮಾತಿನಾಂಗಮನಸು ಸೇರಿ ಕನಸು ನೀಡುತಾವಾ… ಚುಕ್ಕಿ ಬೆಳಕ ಹೊಳಪಿನಲ್ಲೂ ಕಡಲ ತಟದ ತೀರದಲ್ಲೂಮನುಜ ಪ್ರೀತಿ ಕಾಣುತಾನಾ..ಒಲವ ಕಾಣೋ ಹೃದಯದಲ್ಲಿ ಮುತ್ತಿನಂತ ಮಾತಿನಲ್ಲಿನಗುವು ತಾನೇ ಮೂಡುತಾವ. ಬಳ್ಳಿ ಹೂವ ಕಾಣುವಾಗ ಮುಡಿಗೆ ತಾನೇ ಇರಿಸುವಾಗತನ್ನ ಚೆಲುವ ಬೀರುತಾವ…ಗೆಜ್ಜೆ ಶಬ್ದ ಮಾಡಿಕೊಂಡು ನೀಲ ಜಡೆಯ ಬೀಸಿಕೊಂಡುಬಿಂಕದಲ್ಲಿ ನಡೆಯುತಾವ… ಪಚ್ಚಾ ಪೈರು ಹುಲ್ಲಿನಲ್ಲೂ ಅರಳುತ್ತಿರುವ ಹೂವಿನಂತೆತನ್ನ ಸೊಗಸ ಚೆಲ್ಲುತಾವ..ಅವಳ ನಡೆಯ ನುಡಿಯಲ್ಲಿಸುಗಂಧ ಪರಿಮಳ ಬೀರುತಾವ… ಮನ್ಸೂರ್ ಮುಲ್ಕಿ 

ಮನ್ಸೂರ್ ಮುಲ್ಕಿ  ಅವರ ಕವಿತೆ “ಕಣ್ಣ ನೋಟ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಅವರ “ಕಥೆಗೆ ಒಂದು ಚಿತ್ರ……”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಕಥೆಗೆ ಒಂದು ಚಿತ್ರ……” ಚಿತ್ರ ಗೆರೆ ಬದುಕುಮೂರು ಒಂದು ಕಥೆಯ ದಾರಿಯಾರೋ ನಡೆದು ಹೋದಂತೆಇನ್ನಾರೋ ಹಿಂಬಾಲಿಸಿದಂತೆಕೆಲವು ಚಿತ್ರಗಳು ಮುಂದೆಓಡಿದಂತೆ ಕಾಲದ ಓಟಕ್ಕೆತೆಗೆವ ತರತರದ ಚಿತ್ರಗಳುಬಣ್ಣದ ಎಳೆಗಳ ಹೊದಿಕೆಕಾಣದ ಮುಖ ಪುಟಅಂದುಕೊಳ್ಳುವ ಸಲಿಗೆದೂರ ನಿಂತ ನಿಲುವುಹಸಿರಿನಿಂದ ಹುಟ್ಟಿದಸಸಿಯೊಂದು ಹಸಿರು ಹರಡಿಹಗೆರೆಗಳ ಚಿತ್ರಮೋಡದ ಮೇಲೊಂದು ಕುಳಿತಹನಿ ಮೋಡದ ಸನಿಹಚಿಟ್ಟೆ ಹೆಜ್ಜೆಯ ಗುರುತುಹಕ್ಕಿ ಗೂಡಿನ ಹಾಡುಮುಳುಗುವ ದಿಗಂತದಿಸಾಗುವ ಪುಟ್ಟ ದೋಣಿಹುಲ್ಲು ಹೊರೆಯ ನಡುವೆಮಗುವಿಗೆ ಕಟ್ಟಿಟ್ಟಅಮ್ಮನ ಹಸಿವೆಯ ರೊಟ್ಟಿಅಪ್ಪನ ಕಿಸೆಯಂಚಿನಲ್ಲಿಕುಳಿತ ಸೊಪ್ಪು ಕಟ್ಟಿನ ಬಾಕಿಯಾರಿಗೂ ಕಾಯದೇಹೊರಡುವ ಬಸ್ಸಿನ ಪಯಣದೂರ ದಾರಿಯ ನಡುವೆಇಳಿವ ಗುರುತಿಗೆಕಾಣುವ ಸಣ್ಣ ದಣಪೆಯಕೇಳದ ಕಥೆಗಳುಎಲ್ಲವೂ ವಾಸ್ತವದಚಿತ್ರದ ಕವಿತೆಗಳು ನಾಗರಾಜ ಬಿ. ನಾಯ್ಕ

ನಾಗರಾಜ ಬಿ. ನಾಯ್ಕ ಅವರ “ಕಥೆಗೆ ಒಂದು ಚಿತ್ರ……” Read Post »

ಕಾವ್ಯಯಾನ

ವನಜ ಮಹಾಲಿಂಗಯ್ಯ  ಅವರ ಕವಿತೆ “ಉದುರಿದ ಹೂವಿನ ಕಥೆ”

ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ  “ಉದುರಿದ ಹೂವಿನ ಕಥೆ” ಮರಳಿನ ದೇಶ ರಾಜಸ್ಥಾನದಲ್ಲಿಒಂದು ಚಿಕ್ಕ ಚಿಲುಮೆ ಹೂವು ಅರಳಿತ್ತುಹೆಸರು ಹೇಳುವ ಮೊದಲೇಅಮಾನುಷತೆಯ ಕತ್ತಿ ಅದನ್ನು ಕತ್ತರಿಸಿತು ಅವಳ ಕೈಯಲ್ಲಿ ಬಳೆ ಇರಬೇಕಿತ್ತುಕಾಲಲ್ಲಿ ಗೆಜ್ಜೆ ಸದ್ದು ಇರಬೇಕಿತ್ತುಬದಲಾಗಿ ಮೌನ ಮತ್ತು ಕಣ್ಣೀರು ಮಾತ್ರ ಉಳಿದವು ಯಾರ ಮಗಳೋ, ಯಾರ ಅಕ್ಕನೋಯಾರ ತಂಗಿಯೋ ಅವಳುಕನಸು ಕಾಣುವ ವಯಸ್ಸಲ್ಲಿ  ಕತ್ತಲೆಗೆ ತಳ್ಳಲಾಯಿತು ಆಕಾಶವೂ ಇಂದು ಅಳುತ್ತಿದೆಗಾಳಿಯೂ ನಾಚುತ್ತಿದೆಏಕೆಂದರೆ ನಾವಿನ್ನೂ ಮನುಷ್ಯರಾಗಿಲ್ಲ ಆ ಹೂವು ಉದುರಿದ್ದು ವ್ಯರ್ಥವಾಗಬಾರದುಪ್ರತಿಯೊಂದು ಮನೆಯಲ್ಲಿ ಹೆಣ್ಣು ಸುರಕ್ಷಿತವಾಗುವವರೆಗೆನಮ್ಮ ಹೋರಾಟ ನಿಲ್ಲಬಾರದು ನ್ಯಾಯ ಬೇಕು..ಇನ್ನೊಂದು ಉದುರಿದ ಹೂವಿನ ಕಥೆ ಬೇಡ.. ವನಜ ಮಹಾಲಿಂಗಯ್ಯ 

ವನಜ ಮಹಾಲಿಂಗಯ್ಯ  ಅವರ ಕವಿತೆ “ಉದುರಿದ ಹೂವಿನ ಕಥೆ” Read Post »

ಕಾವ್ಯಯಾನ

ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ”

ಕಾವ್ಯ ಸಂಗಾತಿ ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ” ಸಾವಿನ ದಡದಾಚೆಯೂಬೆಳಕಾಗಿ ಉಳಿಯುವ ಹೆಜ್ಜೆಯೇ ಅಮರತ್ವ,ಕಾಲದ ಮರಳಿನ ಮೇಲೆಅಳಿಯದ ಗುರುತು ಬಿಡುವ ಬದುಕೇ ಅಮರತ್ವ. ಉಸಿರು ನಿಲ್ಲಬಹುದು,ದೇಹ ಮಣ್ಣಿನಲ್ಲಿ ಬೆರೆತು ಹೋಗಬಹುದು,ಆದರೆ ;ಸತ್ಕಾರ್ಯದ ಸುಗಂಧಯುಗಗಳವರೆಗೂ ಹರಡಬಹುದು. ಮರವು ಬಿದ್ದು ಹೋದರೂಅದರ ಬೀಜ ಕಾಡಾಗಿ ಬೆಳೆಯುವಂತೆ,ಮನುಜನ ದೇಹ ಮರೆಯಾದರೂ ;ಅವನ ಚಿಂತನೆಗಳು ಜೀವಂತವಾಗಿರುತ್ತವೆ. ಕವಿಯು ಬರೆದ ಸಾಲುಗಳಲ್ಲಿ,ವೀರನ ರಕ್ತದ ತ್ಯಾಗದಲ್ಲಿ,ತಾಯಿಯ ಮಮತೆಯ ಸ್ಪರ್ಶದಲ್ಲಿ,ಗುರುವಿನ ಜ್ಞಾನದ ಬೆಳಕಿನಲ್ಲಿಅಮರತ್ವ ಮೌನವಾಗಿ ಅರಳುತ್ತದೆ. ಅದು ದೇವರ ವರವಲ್ಲ,ಮಾನವನ ಕರ್ಮದ ಫಲವೂ ಅಲ್ಲ ,ಸ್ವಾರ್ಥದಾಚೆ ಬದುಕಿದಆತ್ಮದ ಹುಸಿ ಕಲ್ಪನೆಯೂ ಅಲ್ಲ ;ಅಮರತ್ವ ಎಂಬುದು ಕಾಯ ಕಾಯಕಗಳಶಾಶ್ವತ ಪ್ರತಿಫಲ ಕಾಲವು ಎಲ್ಲವನ್ನೂ ಕಸಿದುಕೊಳ್ಳಬಹುದು,ಆದರೆ ಪ್ರೀತಿಯಿಂದ ಕಟ್ಟಿದ ನೆನಪುಗಳನ್ನು ಅಲ್ಲ;ಸತ್ಯಕ್ಕಾಗಿ ಬದುಕಿದ ಜೀವವನ್ನು ಅಲ್ಲ,ಮಾನವೀಯತೆಯ ಜ್ಯೋತಿಯನ್ನು ಅಲ್ಲ ಈ ಕಾರಣ ಬದುಕುಕೇವಲ ಉಸಿರಿನ ಎಣಿಕೆಯಾಗಬಾರದು,ಹೃದಯಗಳಲ್ಲಿ ಬೆಳಗುವಒಂದು ದೀಪವಾಗಬೇಕು ಆ ದೀಪವೇ ಅಮರತ್ವ,ಆ ಬೆಳಕೇ ಶಾಶ್ವತತೆ,ಮರಣವನ್ನೂ ಮೀರಿ ಉಳಿಯುವಮನುಷ್ಯತ್ವದ ಮಹೋನ್ನತ ಗೀತೆ. ಎನ್. ಜಯಚಂದ್ರನ್ .ದಾಂಡೇಲಿ

ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ” Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ”ಪ್ರೀತಿಯ ದೀಪ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಪ್ರೀತಿಯ ದೀಪ” ಪ್ರಕೃತಿಯ ಮಡಿಲಲಿ ಮೂಡಿದ ರಂಗು,ಹೃದಯದ ಗೋಡೆಯ ಮೇಲೆ ಹೊಸ ತರಂಗು.ಮುಂಜಾವಿನ ಮಂಜಲಿ ಅರಳಿದ ಹೂವು,ಮರೆಸಿದೆ ಎದೆಯಲಿ ಮೂಡಿದ ನೋವು. ಕುಂಚದ ತುದಿಯಲಿ ಮೂಡಿದ ರೂಪ,ಮನದ ಕತ್ತಲಿಗೆಪ್ರೀತಿಯ ದೀಪ.ಕಣ್ಣಿನ ಭಾಷೆಗೆಸಿಗದ  ಅರ್ಥ,ಭಾವನೆಗಳೆಲ್ಲವೂ  ಪೂರ್ಣ ಸಮರ್ಥ. ಬಾನಿನ ಅಂಚಲಿ ಕಾಮನಬಿಲ್ಲು,ಹೃದಯ ಅಂಗಳದಿನಿನ್ನ ಹೆಜ್ಜೆಯ ಸದ್ದು.ಕನಸಿನ ಲೋಕದಸುಂದರ ಮದ್ದು,ಒಲುಮೆಯ ತೋಟದ ಸಿಹಿ ಸವಿ ಮುದ್ದು  ಉಷಾರಾಣಿ ಗುರುಪ್ರಸಾದ್,

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ”ಪ್ರೀತಿಯ ದೀಪ” Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ–27 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ *ನಿಜಾಂ ಪ್ರಾಂತಿಕ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡವಚನ ಸಾಹಿತ್ಯದ ಜಾಗೃತಿ* ಹನ್ನೆರಡನೇ ಶತಮಾನದ ಶರಣರ ವಚನಗಳು  ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದವು. ಈ ವಚನಗಳ ಪ್ರಭಾವವು ಇಂದಿನ ಕಲ್ಯಾಣ ಕರ್ನಾಟಕ ಹೈದರಾಬಾದ ಕರ್ನಾಟಕ ಪ್ರದೇಶದ ಗಡಿಭಾಗಗಳಲ್ಲಿಯೂ ಆಳವಾಗಿ ಬೇರೂರಿತ್ತು.ನಿಜಾಂ ಆಡಳಿತದ ಕಾಲದಲ್ಲಿ ಕನ್ನಡ ಭಾಷೆ ಮತ್ತು ವಚನ ಸಾಹಿತ್ಯಕ್ಕೆ ಸೂಕ್ತ ಪ್ರೋತ್ಸಾಹ ದೊರೆಯದಿದ್ದರೂ, ಕನ್ನಡಾಭಿಮಾನಿಗಳು ಮತ್ತು ಶರಣ ತತ್ವದ ಅನುಯಾಯಿಗಳು ಈ ಪರಂಪರೆಯನ್ನು ಜೀವಂತವಾಗಿಡಲು ನಿರಂತರವಾಗಿ ಶ್ರಮಿಸಿದರು. ಅದೇ ಸಮಯದಲ್ಲಿ ೧೯೩೪ ರಲ್ಲಿ ಹರಡೇಕರ್ ಮಂಜಪ್ಪನವರು ವಚನ ಧರ್ಮ ಗ್ರಂಥವೆಂದು ವಚನ ಸಪ್ತಾಹವನ್ನು ಪ್ರಾರಂಭಿಸಿದ್ದರು.ಬೀದರ ಜಿಲ್ಲೆಯಲ್ಲಿ ಬಸವ ತತ್ವ ಪ್ರಚಾರ ತುಂಬಾ ವ್ಯಾಪಕವಾಗಿತ್ತು.ಪ್ರಭುರಾಜ ಕಂಬಳಿ ಬಾಬಾ, ಸಂಗ್ರಾಮಪ್ಪ ವಕೀಲ ಹಾಗೂ ಜಯದೇವಿ ತಾಯಿಯವರು ಒಂದಾಗಿ “ನಿಜಾಂ ಪ್ರಾಂತಿಕ ಪರಿಷತ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. *ಕತ್ತಲೆಯೆಂಬ ಅಜ್ಞಾನ |ಭ್ರಾಂತಿಎಂಬೋ ಭೂತರಾತರಿ ಹಗಲು ಕುಣಿದಿತ್ತು- ಲೋಕದಪ್ರೇತಗಳೆಲ್ಲ ಭೂತಾಗಿ ಕೂಣಿದಿತ||* ಎನ್ನುವಂತೆ….  ಜಗದಿ ಅಜ್ಞಾನವೆಂಬುವುದು ಭೂತ ಪ್ರೇತವಾಗಿ ಕುಣಿಯುವ ಸಮಯದಲ್ಲಿ ವಚನಗಳನ್ನು ಶರಣರು ನಮ್ಮ ಕೈಯಲ್ಲಿ ಇಟ್ಟರು. ಇಂಥ ಅಮೂಲ್ಯವಾದ ಜ್ಞಾನವನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವದುಕ್ಕೆ ಕರೆ ನೀಡಿದರು….ಜಯದೇವಿತಾಯಿಯವರು .  ಪರಿಷತ್ತಿನ ಪ್ರಮುಖ ಧ್ಯೇಯ ಕನ್ನಡ ಭಾಷೆ, ಶರಣರ ವಚನ ಸಾಹಿತ್ಯ ಮತ್ತು ಬಸವ ತತ್ವಗಳನ್ನು ಜನಸಾಮಾನ್ಯರಲ್ಲಿ ಹರಡುವುದಾಗಿತ್ತು.ಪರಿಷತ್ತಿನ ಆಶ್ರಯದಲ್ಲಿ ಒಂದು ವಾಚನಾಲಯ  ಸ್ಥಾಪಿಸಲಾಯಿತು. ಅಲ್ಲಿ ಬಸವ ಸಾಹಿತ್ಯ, ವಚನ ಸಂಕಲನಗಳು ಹಾಗೂ ಕನ್ನಡದ ಅಮೂಲ್ಯ ಕೃತಿಗಳನ್ನು ಸಾರ್ವಜನಿಕರ ಓದಿಗಾಗಿ ಲಭ್ಯವಾಗುವಂತೆ ಮಾಡಲಾಯಿತು. ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ವಾಚನಾಲಯ ಪ್ರಮುಖ ಕೇಂದ್ರವಾಯಿತು.ಅಷ್ಟೇ ಅಲ್ಲದೆ, ಜಗಜ್ಯೋತಿ ಬಸವೇಶ್ವರ, ಅಕ್ಕ ಮಹಾದೇವಿ, ಚೆನ್ನಬಸವಣ್ಣ ಮೊದಲಾದ ಶರಣ ಮಹಾತ್ಮರ ಜಯಂತಿಗಳನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.ಜಯಂತಿ ಕಾರ್ಯಕ್ರಮಗಳಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶರಣರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು.ಈ ರೀತಿಯಾಗಿ ನಿಜಾಂ ಪ್ರಾಂತಿಕ  ಪರಿಷತ್ತು ಕನ್ನಡ ಭಾಷೆಯ ಉಳಿವು, ವಚನ ಸಾಹಿತ್ಯದ ಪ್ರಸಾರ ಮತ್ತು ಶರಣ ಸಂಸ್ಕೃತಿಯ ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. *ಅಪರೂಪವಾದ |ಅಪರಮಿತ ಜ್ಞಾನವಿಪರೀತ  ಅಜ್ಞಾನದ ಮಾಯೆ ನುಂಗಿದವುವಚನಗಳು, ರೂಪಿಸಿ ಶರಣರ ಲೋಕವ || *ಎಂದು ಸಾರುತ….. ಜಯದೇವಿ ತಾಯಿಯವರ ನೇತೃತ್ವ ಮತ್ತು ಸಹೋದ್ಯೋಗಿಗಳ ಸೇವಾಭಾವದಿಂದ ಈ ಸಂಸ್ಥೆ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಮತ್ತು ವಚನ ಚಳವಳಿಗೆ ಹೊಸ ಚೈತನ್ಯವನ್ನು ನೀಡಿತು. ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಬಸವತತ್ವದ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸಿತು…..ಇಂಥ ಉದ್ದೇಶಕ್ಕಾಗಿ ಮೈಸೂರು ಮತ್ತು ಬೆಂಗಳೂರಿನಂತಹ ಕನ್ನಡದ ಸಾಂಸ್ಕೃತಿಕ ಕೇಂದ್ರಗಳಿಂದ ಖ್ಯಾತ ಸಾಹಿತಿಗಳು, ಚಿಂತಕರು ಮತ್ತು ಉಪನ್ಯಾಸಕರನ್ನು ಆಹ್ವಾನಿಸಿ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು.ಅಂತಹ ಪ್ರಮುಖ ಅತಿಥಿಗಳಲ್ಲಿ…. ತಾ.ರಾ.ಸು. ಮತ್ತು ಅ.ನಾ.ಕೃ ಮೊದಲಾದ ಪ್ರಸಿದ್ಧ ಸಾಹಿತಿಗಳೂ ಭಾಗವಹಿಸಿ, ಕನ್ನಡ ಸಾಹಿತ್ಯ, ಶರಣರ ವಚನಗಳು ಮತ್ತು ಬಸವ ತತ್ವಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಈ ಸಂಘಟನೆಯ ಕಾರ್ಯಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಜನಪರ ಚಳವಳಿಯಾಗಿದ್ದವು.  ಕಾರ್ಯಕರ್ತರು ಹಳ್ಳಿಹಳ್ಳಿಗೆ ತೆರಳಿ ಬಸವತತ್ವದ ಸಮಾನತೆ, ಕಾಯಕ, ದಾಸೋಹ, ಜಾತ್ಯಾತೀತತೆ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದರು. ಸಮಾಜದಲ್ಲಿ ಅಸಮಾನತೆ, ಅಜ್ಞಾನ ಮತ್ತು ಸಾಮಾಜಿಕ ಬೇಧಭಾವವನ್ನು ನಿವಾರಿಸಿ, ಸಮಾನತೆಯ ಸಮಾಜ ನಿರ್ಮಾಣವೇ ಅವರ ಪ್ರಮುಖ ಧ್ಯೇಯವಾಗಿತ್ತು. *ನೆಲದ ಸತ್ವದ ಮೇಲೆ |ಹೊಲ ಬೆಳೆಯುವಂತೆಮೂಲ ತನ್ನ ಅರುವಿನ ಬೀಜ- ಬೆಳೆದಿತ್ತುಸಕಲ  ಶರಣ ತತ್ವ ಪ್ರಪಂಚ ವಿಸ್ತಾರ||* ತನ್ನರಿವನ್ನೇ ಗುರುವನ್ನಾಗಿಸಿ ದೇಹವನ್ನೇ  ದೇಗುಲುಮಾಡಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಕರೆ ಕೊಡುವ ವಚನಗಳನ್ನು ಪ್ರಚಾರಗೊಳಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ರೀತಿಯ ಕಾರ್ಯಕ್ರಮಗಳಿಗೆ ನಿಜಾಂ ಸರ್ಕಾರದಿಂದ ಹಲವು ರೀತಿಯ ಪ್ರತಿರೋಧ ಮತ್ತು ನಿರ್ಬಂಧಗಳು ಎದುರಾದರೂ, ಪರಿಷತ್ತಿನ ಕಾರ್ಯಕರ್ತರು ಹಿಂದೆ ಸರಿಯಲಿಲ್ಲ.ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಚನ ಸಪ್ತಾಹವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುತ್ತಿದ್ದರು. ಈ ಸಪ್ತಾಹದಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶರಣರ ಆದರ್ಶಗಳ ಕುರಿತು ವಿಶೇಷ ಪ್ರವಚನಗಳನ್ನು ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮಗಳ ಮೂಲಕ ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆದು, ಕನ್ನಡ ಭಾಷೆ, ಶರಣ ಸಂಸ್ಕೃತಿ ಮತ್ತು ಶರಣ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೂ ಯಶಸ್ವಿಯಾಗಿ ತಲುಪಿಸಲಾಯಿತು. ವಚನ ಸಪ್ತಾಹ ಮತ್ತು ಕನ್ನಡ ಜಾಗೃತಿಯ ಕಾರ್ಯಕ್ರಮಗಳು ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ವಚನ ಸಪ್ತಾಹವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಯ ಮಹೋತ್ಸವವಾಗಿತ್ತು. *ನಿಮ್ಮಅಡಿಗಳು ದೊರೆತು|ಹಮ್ಮು ಜರಿದು ಹೋಯ್ತು ನೆಮ್ಮದಿಯಿತು ಎನ ಮನಕ್ಕೆ -ಬಸವಣ್ಣ ಒಮ್ಮನವಾಯಿತು ನಿಮ್ಮಲ್ಲಿ||*ಎಂದು ಬಸವಣ್ಣನನು ಹಾಡಿ ಹೊಗಳುತ್ತಾ ತತ್ವಗಳನ್ನು ಪ್ರಚಾರ ಮಾಡಲಾರಂಭಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಖ್ಯಾತ ವಿದ್ವಾಂಸರು, ಧಾರ್ಮಿಕ ಮುಖಂಡರು, ಸಾಹಿತಿಗಳು ಹಾಗೂ ಸಮಾಜ ಸುಧಾರಕರು ಆಗಮಿಸಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.ಈ ಕಾರ್ಯಕ್ರಮಗಳಲ್ಲಿ ತರಳಬಾಳು ಸ್ವಾಮಿಗಳು, ಎಸ್ ನಿಜಲಿಂಗಪ್ಪ, ಎಂ.ಆರ್ ಶ್ರೀನಿವಾಸ್ ಮೂರ್ತಿ, ಸ್ವಾಮಿ ರಮಾನಂದ ತೀರ್ಥರು, ಮಾನ್ವಿ ನರಸಿಂಹರಾಯರು, ಸಿದ್ದಯ್ಯ ಪುರಾಣಕ, ಬಾಮಣಗಾವ್ಕರ್ ಅಮರಾವತಿ ,ಬಸಪ್ಪ ಮಂಡಗಿ ವಕೀಲರು ,ಚನ್ನಬಸವ ಪಟ್ಟದೇವರು, ವಿಶ್ವನಾಥ್ ರೆಡ್ಡಿ ಮುದನ್ನಾಳ, ವಿದ್ಯಾಧರ್ ಗುರೂಜಿ, ಬಿ. ಮಹದೇವಪ್ಪ, ಭೀಮಣ್ಣ ಖಂಡ್ರೆ  ಮೊದಲಾದ ದಿಗ್ಗಜರನ್ನು  ಕರೆಯಿಸಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು ಹಾಗೂ ಸಮಾಜದ ಗಣ್ಯರು ಭಾಗವಹಿಸುತಿದ್ದರು. ಶರಣರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿತ್ತು. ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಾಮ ವಾಚನಾಲಯಗಳ ಸ್ಥಾಪನೆ, ಕನ್ನಡ ಶಾಲೆಗಳ ಆರಂಭ ಹಾಗೂ ಕನ್ನಡ ಶಿಕ್ಷಣದ ವಿಸ್ತರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿತ್ತು.ಈ ಎಲ್ಲಾ ಚಟುವಟಿಕೆಗಳ ಮೂಲ ಉದ್ದೇಶ ಕನ್ನಡ ಭಾಷೆಯನ್ನು ಬೆಳೆಸುವುದು, ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆಯುವುದು ಮತ್ತು ಬಸವಣ್ಣನವರ ಸಮಾನತೆ, ಕಾಯಕ ಹಾಗೂ ದಾಸೋಹದ ತತ್ವಗಳ ಆಧಾರದ ಮೇಲೆ ಜಾತಿ–ಧರ್ಮ ಭೇದವಿಲ್ಲದ, ಪ್ರಗತಿಪರ ಸಮಾಜವನ್ನು ನಿರ್ಮಿಸುವುದಾಗಿತ್ತು.ನಿಜಾಂ ಆಡಳಿತದ ಪರಿಸ್ಥಿತಿಯಲ್ಲಿಯೂ ಈ ಕಾರ್ಯಗಳು ಕನ್ನಡದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮಹತ್ತರ ಕೊಡುಗೆಯನ್ನು ನೀಡಿದವು. ಸೋಲಾಪುರ ಗಡಿಭಾಗ, ಕನ್ನಡಿಗರ ಆಶಯ ಮತ್ತು ಕರ್ನಾಟಕ ಸೇರ್ಪಡೆಗೆ ನಡೆದ ಚಳವಳಿ ೧೯೪೯ರ ಸಮಯ….ಸೋಲಾಪುರ ಪ್ರದೇಶವು ಭಾಷೆ, ಸಂಸ್ಕೃತಿ ಮತ್ತು ಆಡಳಿತದ ದೃಷ್ಟಿಯಿಂದ ಪ್ರಮುಖ ಚರ್ಚೆಯ ಕೇಂದ್ರವಾಗಿತ್ತು.ಆ ಕಾಲದಲ್ಲಿ ಸೋಲಾಪುರ ತಾಲೂಕನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ದಕ್ಷಿಣ ಸೋಲಾಪುರ ಮತ್ತು ಉತ್ತರ ಸೋಲಾಪುರ ಎಂದು ವಿಭಜಿಸಲಾಯಿತು. ವಿಭಜನೆಯು ಆಡಳಿತಾತ್ಮಕವಾಗಿದ್ದರೂ, ಆ ಭಾಗದಲ್ಲಿ ವಾಸಿಸುತ್ತಿದ್ದ ವಿವಿಧ ಭಾಷಿಕ ಸಮುದಾಯಗಳ ಆಶಯಗಳಿಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿತು.ಅದೇ ಅವಧಿಯಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸಂಘಟನೆಯನ್ನು ಯುವಜನರ ಮಟ್ಟದಲ್ಲಿ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿದ್ದವು.೧೯೪೯ರಲಿ ಜವಹರಲಾಲ್ ನೆಹರು  ಸೋಲಾಪುರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಯುವಜನರ ಪಾತ್ರ, ರಾಷ್ಟ್ರೀಯ ಏಕತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅವರು ಕರೆ ನೀಡಿದರು.  ಈ ಪ್ರದೇಶದ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಸೂಕ್ತ ಆಡಳಿತ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕನ್ನಡ ಭಾಷೆಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಮರ್ಪಕ ಸ್ಥಾನಮಾನ ದೊರೆಯಬೇಕೆಂಬ ಬೇಡಿಕೆಯನ್ನು ಅವರು ರಾಷ್ಟ್ರೀಯ ನಾಯಕರ ಮುಂದಿಟ್ಟರು. ಸೋಲಾಪುರ ಮತ್ತು ಅದರ ಸುತ್ತಮುತ್ತಲಿನ ಗಡಿಭಾಗಗಳಲ್ಲಿ ಕನ್ನಡಿಗರ ಜೊತೆಗೆ ಮರಾಠಿ ಭಾಷಿಕರೂ ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಕನ್ನಡ ಮಾತನಾಡುವ ಜನ ೪೮%  ಇದ್ದರೆ ೩೪% ಅಷ್ಟು ಜನ ಮರಾಠಿ ಮಾತನಾಡುವರು ಹಾಗೂವಿಜಯಪುರ ಅಂದಿನ ಬಿಜಾಪುರ ಮತ್ತು ಅಕ್ಕಲಕೋಟಿನ ಜನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ನಂಟು ಹೊಂದಿದ್ದ ಅನೇಕ ಗಡಿಭಾಗಗಳ ಜನರು ತಮ್ಮ ಪ್ರದೇಶವು ಕರ್ನಾಟಕದೊಂದಿಗೆ ಸೇರಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಭಾಷಾವಾರು ರಾಜ್ಯಗಳ ಪರಿಕಲ್ಪನೆ ಬಲವಾಗುತ್ತಿದ್ದ ಸಂದರ್ಭದಲ್ಲಿ, ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಬೇಕು ಎಂಬ ಅಭಿಪ್ರಾಯವೂ ಬೆಳೆಯತೊಡಗಿತು.ಇಂಥ ಚಳವಳಿಗಳು ನಂತರ ಭಾಷಾವಾರು ರಾಜ್ಯಗಳ ಪುನರ್ರಚನೆ ಕುರಿತ ರಾಷ್ಟ್ರೀಯ ಚರ್ಚೆಗೆ ಪೂರಕವಾದವು. ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಮತ್ತು ಆಡಳಿತಾತ್ಮಕ ನ್ಯಾಯಕ್ಕಾಗಿ ನಡೆದ ಈ ಪ್ರಯತ್ನಗಳು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಹಿನ್ನೆಲೆಯಾಗಿ ಪರಿಣಮಿಸಿದವು. (ಮುಂದುವರೆಯುವುದು) ಸವಿತಾ ದೇಶಮುಖ

Read Post »

ಕಾವ್ಯಯಾನ

ಕಾವ್ಯ ಸುಧೆ ಅವರ ಕವಿತೆ “ಮಾಯಾಜಾಲ”

ಕಾವ್ಯ ಸಂಗಾತಿ ಕಾವ್ಯ ಸುಧೆ “ಮಾಯಾಜಾಲ” ನಿನ್ನೊಲುಮೆ ಭಾವದ ತೇರನು ಏರುತಾಹಾದಿಗುಂಟ ಹೂವ ಹಾಸಿ ಕಾದೆನುಇರುಳ ಒಂದು ಜಾವ ಕಳೆಯಲುನೆಟ್ಟ ನೋಟ ನಿನ್ನ ಜಾಡ ಅರಿಯದೆಮೂಕ ಮನದಿ ಮೌನ ರೋದನೆ ಯಾಕೋ ಬರದೆ ಹೋದೆ ನೀನುಅರಿಯದಾದೆ ಕಾರಣ, ಬೇಕು ಬೇಡಎನದೆ ಹೋದೆ ಕಾಣದಾಗೆ ತಲ್ಲಣನಿನ್ನ ಮಧುರ ನೆನಪು ಮರುಕಳಿಸಿಈಟಿಯಂಗಿರಿದು ಎದೆಗೆ ನೋವ ಬಿತ್ತರ ಭಾವಗೀತೆಯಂತೆ ನಲಿದ ಬಾಳಿನಲ್ಲಿತೊರೆದು ಹೋದೆ ಇರಿಸಿ ಬಾಧೆಮಾಯವಾದೆಯೇಕೆ ಮಾಯಾಮೃಗದಂತೆಕೈಗೆ ಸಿಗದೆ ಸುಳಿವು ಕೂಡ ನೀಡದೆ ಹೋದೆಕೆಣಕಿ ಶೋಧೆ ಸಿಲುಕಿಸೆನ್ನ ಜಾಲದಲಿ…..!! ಕಾವ್ಯ ಸುಧೆ.

ಕಾವ್ಯ ಸುಧೆ ಅವರ ಕವಿತೆ “ಮಾಯಾಜಾಲ” Read Post »

ಇತರೆ

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಸ್ಟಿಸ್ ಸಂದೀಪ್ ಮೆಹತಾ ಅವರು ನಿಮ್ಮ ಪತ್ನಿ ನಿಮ್ಮ ಕೆಲಸದಾಕೆ ಖಂಡಿತವಾಗಿಯೂ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. 21ನೇ ಶತಮಾನದತ್ತ ಕಾಲಿಡುತ್ತಿರುವ ಭಾರತೀಯ ಕೌಟುಂಬಿಕ ಬದುಕಿನಲ್ಲಿ ಈ ಹೇಳಿಕೆಯು ಅತ್ಯಂತ ಮಹತ್ವದ್ದೆ೦ದು ದಾಖಲಿಸಬಹುದು.ಅವರ ಈ ಹೇಳಿಕೆಯು ಮದುವೆ ಎನ್ನುವುದು ಗಂಡ ಮತ್ತು ಹೆಂಡತಿ ಇಬ್ಬರ ಪರಸ್ಪರರ ಸಾಂಗತ್ಯದ ಬದುಕು… ಇದನ್ನು ಪರಸ್ಪರರಿಗೆ ಗೌರವ ನೀಡುವ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ದಂಪತಿಗಳು ನಿರ್ವಹಿಸಬೇಕೇ ಹೊರತು 21ನೇ ಶತಮಾನಕ್ಕೆ ಅಥವಾ ಪ್ರಸ್ತುತ ದಿನಮಾನಗಳಿಗೆ ಹೊಂದದ ಲಿಂಗ ಸಂಬಂಧಿ ಜವಾಬ್ದಾರಿಗಳಂತೆ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.ಅವರ ಈ ಹೇಳಿಕೆಯು ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಗಳು ಹಾಗೂ ಅದು ನಮ್ಮ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಕಾರಣ ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳದು ಎಂಬ ಪುರುಷ ಪಾರಮ್ಯದ ಭಾರತ ದೇಶದ ಲಿಖಿತ ನಿಯಮಗಳ ಕುರಿತು ಪ್ರಶ್ನೆ ಮಾಡುತ್ತಿದೆ. ಕಾನೂನಾತ್ಮಕ ಚೌಕಟ್ಟುಗಳು ಬದಲಾಗುತ್ತಿರುವ ಅಭಿವೃದ್ಧಿಪರ ಸಾಮಾಜಿಕ ಮೌಲ್ಯಗಳ ಜೊತೆಗೆ  ಹೊಂದಿಕೊಂಡು ನಡೆಯುತ್ತಿವೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನುಡಿಗಳು ಪ್ರತಿಪಾದಿಸುತ್ತಿದ್ದು ಪಿತೃ ಸತ್ತಾತ್ಮಕ ಯೋಚನೆಯ ಆಳವಾದ ಬೇರುಗಳನ್ನು ಬುಡ ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದು ಸಾಮಾಜಿಕ ಕಾರ್ಯಕರ್ತರು ಈ ವಿಷಯವನ್ನು ಎತ್ತಿ ಹಿಡಿದಿದ್ದಾರೆ.ಸಮಾಜದಲ್ಲಿ ನಿಜವಾದ ಲಿಂಗ ಸಮಾನತೆಯನ್ನು ತರಬೇಕು ಎಂದರೆ ಗೃಹ ಕೃತ್ಯದಲ್ಲಿ ಇರುವ ಘನತೆಯನ್ನುಉಳಿದವರೆಗೂ ಗೊತ್ತು ಮಾಡಿಕೊಡಬೇಕು ಹಾಗೂ ಗೃಹ ಕೃತ್ಯ ಎಂಬುದು ಕೇವಲ ಹೆಣ್ಣು ಮಕ್ಕಳ ಕರ್ತವ್ಯವಲ್ಲ ಬದಲಾಗಿ ಭೂಮಿಯ ಮೇಲೆ ಇರುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಇದಾಗಿದೆ ಹಾಗೂ ಇದನ್ನು ಪಾಲಿಸುವುದನ್ನು ನಾವು ಕಲಿಯಲೇಬೇಕು… ಅದೆಷ್ಟೇ ಆರ್ಥಿಕವಾಗಿ ಸಬಲರಾಗಿದ್ದರೂ ಕೂಡ ಕೌಟುಂಬಿಕವಾಗಿ ಗೃಹ ಕೃತ್ಯಗಳನ್ನು ಸಂಭಾಳಿಸಿಕೊಂಡು ನಡೆದರೆ ಮಾತ್ರ ಪುರುಷ ಈ ಜಗತ್ತಿನಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು.ಆಹಾರವನ್ನು ಸೇವಿಸುವ, ಬಟ್ಟೆ ಬರೆಗಳನ್ನು ಧರಿಸುವ, ಮನೆಯೆಂಬ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವ ಪ್ರತಿಯೊಬ್ಬರು ಕೂಡ ಈ ಮೂಲಭೂತ ಅವಶ್ಯಕತೆಯನ್ನು ಬದುಕಿನ ಭಾಗವಾಗಿ  ತಮ್ಮದಾಗಿಸಿಕೊಳ್ಳಲೇಬೇಕು.ಹೆಣ್ಣು ಮಕ್ಕಳ ಮೇಲೆ ಗೃಹಕೃತ್ಯದ ಭಾರವನ್ನು ಹೊರೆಸಿರುವ ಸಂಪ್ರದಾಯವಾದಿಗಳ ಮೇಲೆ ಸವಾಲೆಸೆಯುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದ್ದು ಗೃಹ ಕೃತ್ಯವನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಹೆಣ್ಣು ಮಕ್ಕಳ ಮೇಲಿನ ಅನಗತ್ಯ ಹೊರೆಯನ್ನು ನಿವಾರಿಸಲು ಪ್ರಯತ್ನಿಸಲೇಬೇಕು. ನೋಡಿದಿರಾ ಸ್ನೇಹಿತರೆ! ಅಜ್ಞರ ನೂರಾರು ಮಾತುಗಳಿಗಿಂತ ಪ್ರಾಜ್ಞರ ಒಂದು ಮಾತು, ಒಂದು ವಾಕ್ಯ ಬೀರುವ ಪರಿಣಾಮ ಬಹಳ ಮೌಲಿಕವಾದದ್ದು ಗುರುತರವಾದದ್ದು. ಇದೀಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಒಂದು ಪ್ರಶ್ನೆ ಸಾಮಾಜಿಕ ವಲಯದಲ್ಲಿ ಚಿಂತನೆಯ ಒಂದು ಕಿಡಿಯನ್ನು ಹಬ್ಬಿಸಿದ್ದು  ಹೆಣ್ಣು ಮಕ್ಕಳ ಹಿತರಕ್ಷಣೆಯ ಕಾನೂನುಗಳನ್ನು ರಕ್ಷಿಸುವಲ್ಲಿ  ಪರಸ್ಪರರ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಅತ್ಯಂತ ನ್ಯಾಯಯುತವಾದ, ಸೌಹಾರ್ದತೆಯಿಂದ ಕೂಡಿದ ಹಾಗೂ ಸಮತೋಲನದಿಂದ ಕೂಡಿದ ಸಾಂಗತ್ಯದ ವೈವಾಹಿಕ  ಬಂಧನಗಳು ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರಬಲ್ಲವು.ಹೊಸ ಬಗೆಯ ವಿವಾಹಗಳು ಲಿಂಗ ಸಮಾನತೆಯನ್ನು ಹೊಂದಿದ್ದು ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳನ್ನು ಹಂಚಲ್ಪಡುವ ನಿಟ್ಟಿನಲ್ಲಿ ಭಾರತ ದೇಶವು ಬದಲಾಗುತ್ತಿರುವುದು ಸ್ವಾಗತಾರ್ಹವಾಗಿದೆ.ಲಿಂಗ ಸಮಾನತೆಯ ಕೂಗು ಕಳೆದ ಎರಡು ಮೂರು ದಶಕಗಳಿಂದ ಕೇಳಿ ಬರುತ್ತಿದ್ದರು ಕೂಡ ಈ ಕುರಿತು ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ…. ಪ್ರಸ್ತುತ ದಿನಮಾನಗಳಲ್ಲಿ ಪುರುಷನಷ್ಟೇ ವಿದ್ಯಾರ್ಹತೆಯನ್ನು ಹೊಂದಿರುವ ಮಹಿಳೆ  ಆತನಷ್ಟೇ ಸಂಬಳ ಮತ್ತು ಸವಲತ್ತುಗಳನ್ನು ಪಡೆಯುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿ ತನ್ನ ಮೇಲೆ ಅಧಿಕಾರ ಚಲಾಯಿಸುವ ಗಂಡನಾಗದೆ, ಬದುಕನ್ನು ಹಂಚಿಕೊಳ್ಳುವ ಸಂಗಾತಿಯಾಗಲಿ ಎಂದು ಆಕೆ ಬಯಸುತ್ತಾಳೆ. ತನ್ನ ಹಕ್ಕುಗಳ ಕುರಿತು ಸಂಪೂರ್ಣ ಅರಿವನ್ನು ಹೊಂದಿರುವ ಆಕೆ ಪುರುಷ ಪ್ರಧಾನ ಸಮಾಜದ ಬಹುತೇಕ  ರೀತಿ ನೀತಿಗಳನ್ನು ಈಗಾಗಲೇ ಧಿಕ್ಕರಿಸುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಸಮಾನತೆಯ ಬದುಕನ್ನು ಹಂಚಿಕೊಂಡು ಬಾಳಲು ಇಚ್ಚಿಸುತ್ತಿದ್ದಾಳೆ. ಇದರ ನಿಜವಾದ ತತ್ವವನ್ನು ಅರಿತಿರುವ ಬುದ್ಧಿಜೀವಿಗಳು ಕೂಡ ಇದನ್ನು ಅನುಮೋದಿಸಿದ್ದು  ಇದೀಗ ಸುಪ್ರೀಂ ಕೋರ್ಟ್ ಇದಕ್ಕೆ  ತನ್ನದೇ ಆದ ರೀತಿಯಲ್ಲಿ ಒಪ್ಪಿಗೆಯ ಮುದ್ರೆಯನ್ನು ಒತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವೀಣಾ ಹೇಮಂತಗೌಡ ಪಾಟೀಲ್

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

You cannot copy content of this page

Scroll to Top