ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
“ಮೌನದ ಆಲಾಪನೆ”

ಒಲವು ಬಾಡಿತೇಕೆ ಹೇಳು ಮನವೇ
ಬತ್ತಿ ಹೋದವೇ ಭಾವಗಳು
ನಲಿವ ಹೃದಯದ ಬಡಿತ ನಿಂತಿತೇ
ಸೋತು ಸೊರಗಿದೆ ಬಂಧಗಳು
ಕಣ್ಣು ಕಣ್ಣಲಿ ಬೆಸೆದು ನೋಟವು
ಹೊಸತು ಲೋಕವ ಕಟ್ಟಿದೆ
ಮಣ್ಣು ಮಾಡಿದೆ ಎದೆಯ ಕನಸನು
ಪ್ರೇಮದರಮನೆ ಕುಸಿದಿದೆ
ಮಾತು ಬಾರದ ಮೂಕ ಹಕ್ಕಿಯ
ತೆರದಿ ಜೀವನವಾಗಿದೆ
ತಂತಿ ಹರಿದ ಜೀವ ನಾದದಲಿ
ಮೌನದ ಆಲಾಪನೆ ಕೇಳಿದೆ
ಬಾಳ ಪಯಣದಿ ಆಸರೆ ಇಲ್ಲದೆ
ಬಾಡಿ ಹೋಗಿದೆ ಬಯಕೆಯು
ಓಡಿ ಬರುವೆಯಾ ಒಮ್ಮೆಯಾದರೂ
ಕೊನೆಗೆ ನೋಡುವಾಸೆಯು
ಅನುರಾಧಾ ರಾಜೀವ್ ಸುರತ್ಕಲ್




