ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ

ಪುಸ್ತಕ ಸಂಗಾತಿ ಸುನೀತ ಕುಶಾಲನಗರ ಜಯಲಕ್ಷ್ಮಿ ಕೆ, ಮಡಿಕೇರಿ “ನಡೆದಷ್ಟೂ ದಾರಿ” ಕೃತಿಯ ಹೆಸರು : ನಡೆದಷ್ಟೂ ದಾರಿಲೇಖಕಿ : ಜಯಲಕ್ಷ್ಮಿ ಕೆ ಮಡಿಕೇರಿಪುಟಗಳು : 188ಬೆಲೆ : 230.ಪ್ರಕಾಶಕರು : ಅಂಬಾರಿ ಪ್ರಕಾಶನಕುವೆಂಪುನಗರ, ಮೈಸೂರು ವೃತ್ತಿಯಲ್ಲಿ ಒಬ್ಬ ಅಧ್ಯಾಪಕಿಯಾಗಿ ಜಯಲಕ್ಷ್ಮಿ ಯವರು ಚಿರಪರಿಚಿತರು. ಪ್ರವೃತ್ತಿಯಿಂದ ಬರೆಹಗಾರ್ತಿಯಾಗಿ ಕೊಡಗು ಜಿಲ್ಲೆಯಲ್ಲಿ ಗುರುತ್ತಿಸಿಕೊಂಡವರು. “ನಡೆದಷ್ಟೂ ದಾರಿ” ಇವರ ಮೂರನೆಯ ಕೃತಿ. ಮೊದಲನೆಯದು ಚಪ್ಪಾಳೆಗೂ ಬೆಲೆಯಿದೆ.ಎರಡನೆಯದು ಮತ್ತೆ ವಸಂತ ಆಗಿದ್ದು ಈ ಕೃತಿ ರಾಜ್ಯ ಮಟ್ಟದ ಆಜೂರ ಪ್ರಶಸ್ತಿ, ಮುನಿ ಗಂಗಮ್ಮ ಪ್ರಶಸ್ತಿ ಮತ್ತು ಉಮಾ ಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಳನ್ನು  ಗಿಟ್ಟಿಸಿಕೊಂಡಿದೆ.     ‘ ನಡೆದಷ್ಟೂ ದಾರಿ’ ಪುಸ್ತಕವನ್ನು ಓದುತ್ತಾ ಹೋದಂತೆ ಪುಸ್ತಕ ಮುಗಿಯುವವರೆಗೂ ಮುಚ್ಚಿಡಲಾಗಷ್ಟು ಕುತೂಹಲ ತಂದುಕೊಟ್ಟಿತು.ಲೇಖಕಿ ಬಳಸಿದ ಭಾಷೆ, ಭಾಷೆಯ ಮೇಲಿನ ಹಿಡಿತ, ಗಟ್ಟಿತನ ನಿಜಕ್ಕೂ ಆಶ್ಚರ್ಯ ಮೂಡಿಸಿತು. ಇವರು  ಸಾಹಿತ್ಯ ಪರಂಪರೆಯನ್ನು ಓದಿಕೊಂಡು ವರ್ತಮಾನಕ್ಕೂ ಅಪ್ಡೇಟ್ ಆಗುತ್ತಿದ್ದಾರೆ  ಎಂದು  ಈ ಕೃತಿಯೇ ಸಾರಿ ಹೇಳಿದೆ. “ನಡೆದಷ್ಟೂ ದಾರಿ ಪಡೆದಷ್ಟೂ ಭಾಗ್ಯ” ಈ ಲೇಖನದಲ್ಲಿ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಕಲಿಕೆಯಲ್ಲಿ ಆಸಕ್ತಿ ಹೀನನಾಗುವುದಕ್ಕೆ  ಕಾರಣ ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸುವ ಅಧ್ಯಾಪಕಿ ಲೇಖನದ ಮೂಲಕ ಕಲಿಯಲು ವಿಷಯದ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ಪೋಷಕರು ಒತ್ತಡ ಹೇರಬಾರದು ಎಂದು ಹೇಳುತ್ತಾರೆ.  ‘ಬದುಕು ರೂಪಿಸುವ ಶಿಲ್ಪಿಗಳ ಬದುಕು’ ಎಂಬ ಲೇಖನದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಶ್ರಮ,ಪಡೆಯುತ್ತಿರುವ ಕಡಿಮೆ ವೇತನ, ಪವಿತ್ರ ವೃತ್ತಿ ಎಂದು ಅರ್ಪಿಸಿಕೊಳ್ಳುವ ಇವರು ಎಲ್ಲೋ ಅಲಕ್ಷಿತರಾಗುತ್ತಿದ್ದಾರೆ. ಇವರಿಗೆ ಕೆಲಸದ ಒತ್ತಡ ಹೇರಿದರೆ ಸರ್ಕಾರಿ ಶಿಕ್ಷಕರಿಗೆ ಬೋಧನೇತರ ಕಾರ್ಯಗಳ  ಹೊರೆ ಎಂದು ಮುಕ್ತವಾಗಿ ಈ ಲೇಖನದಲ್ಲಿ ಶಿಕ್ಷಕರ ಬವಣೆಯನ್ನು ಬಿಚ್ಚಿಡುತ್ತಾರೆ. ಇವರ ಒಂದೊಂದು ಲೇಖನದ ವಸ್ತು ಸಾಮಾನ್ಯ ಅನಿಸಿದರೂ ಓದುತ್ತಾ ಅದರ ಗಹನತೆ  ಆಳವಾದದ್ದು ಎಂದು ವೇದ್ಯವಾಗುತ್ತದೆ.  ಜಯಲಕ್ಷ್ಮಿಯವರ ಲೇಖನಗಳ ಶೀರ್ಷಿಕೆಗಳ ಆಕರ್ಷಣೆ ಮತ್ತೊಂದು ವಿಶಿಷ್ಟವೆಂಬುದನ್ನು ಹೇಳಲೇಬೇಕಾಗುತ್ತದೆ. ಉದಾಹರಣೆಗೆ “ಕರಿಹಲಗೆಯ ಹಿಂದೆ ಕರಗುತ್ತಿದೆ ಕಾಯಗಳು”, “ಮನ  ಮರುಭೂಮಿಯಾಗುವ ಮುನ್ನ “ಹೀಗೆ ವೈವಿಧ್ಯಮಯ ಶಿರೋನಾಮೆಗಳೇ ಲೇಖನಗಳನ್ನು ಓದುವಂತೆ ಕುತೂಹಲ ಮೂಡಿಸುತ್ತವೆ.‘ಮಕ್ಕಳ ಹದಿಹರೆಯ’ ಲೇಖನದಲ್ಲಿ ಅಮ್ಮ,ತಾಯಿ ಎನ್ನುವ ಪದಕ್ಕೊಂದು ಪರಿಪೂರ್ಣ ವ್ಯಾಖ್ಯಾನ, ಆಕೆಯ ಕೆಲಸ ಕಾರ್ಯಗಳಿಗೊಂದು ಸೀಮಿತ ರೇಖೆ ಇನ್ನೂ ಸೃಷ್ಟಿಯಾಗಿಲ್ಲ. ಆಗಲು ಸಾಧ್ಯವೂ ಇಲ್ಲ. ದೇವರ  ಈ ಅಪೂರ್ವ ಕೊಡುಗೆಯನ್ನು ಪದಪುಂಜಗಳಿಂದ ಬಿಂಬಿಸಲು ಸಾಧ್ಯವೇ?  ಎಂದು ಕೇಳಿರುವುದು  ಸದಾ ಕಾಡುವ ವಾಕ್ಯ ಮತ್ತು ಬದುಕಿನ ವಾಸ್ತವ. ‘ನಾನೂ ಕವಿಯಾಗಬೇಕು’ ಕವಿಯಾಗುವ ನಾನು ಮೊದಲು ಕಿವಿಯಾಗಬೇಕು ಮತ್ತು ಸಾಕಷ್ಟು ಓದಿಕೊಳ್ಳಬೇಕು.ಸಾಗರದಷ್ಟು ಓದಿದರೆ ಸಾಸಿವೆಯಷ್ಷು ಜ್ಞಾನ ವೃದ್ಧಿಗೆ ಸಾಧ್ಯ ಮತ್ತು ಆ ಮೂಲಕ ಭಾಷೆಯ ಹಿಡಿತ ಸಿದ್ಧಿಸುತ್ತದೆ ಎಂಬ ಇವರ ಅಭಿಪ್ರಾಯ ಬರೆಹಗಾರರೊಳಗೆ ಜಾಗ್ರತೆ ಮೂಡಿಸುವುದರ ಜೊತೆಗೆ ಮೆಲ್ಲಗೆ ತಿವಿದಂತೆ ಭಾಸವಾಗುತ್ತದೆ.   ಚಪ್ಪಾಳೆ ಗಿಟ್ಟಿಸಿಕೊಳ್ಳುವವರಿಗೆ ಇತರರಿಗೂ ಚಪ್ಪಾಳೆ ಕೊಡುವ, ಪ್ರಶಂಸಿಸುವ ಗುಣ ಇರಬೇಕು ‌ಎನ್ನುವ ಇವರು ಹತ್ತಾರು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕೆಲವೊಂದು ಉದಾಹರಣೆಗಳನ್ನು ಕೊಡುವುದರ ಮೂಲಕ ಈ ಲೇಖನದಲ್ಲಿ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.‘ ಪುಸ್ತಕಂ ಹಸ್ತ ಭೂಷಣಂ’. ಎಂಬ ಲೇಖನದಲ್ಲಿ ಒಳ್ಳೆಯ ಪುಸ್ತಕಗಳೆಂದರೆ “ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇದಾವಿಗಳ ಜೀವನ ಸರ್ವಸ್ವ ” ಆಂಗ್ಲಕವಿ ಮಿಲ್ಟನ್ ರವರ  ಅದ್ಭುತ ಮಾತನ್ನು ಉಲ್ಲೇಖಿಸುತ್ತಾ ಪುಸ್ತಕದ ಮಹತ್ವವನ್ನು ವೇದ್ಯವಾಗಿಸಿದ್ದಾರೆ.   ತುಟಿಯಂಚಿನಲ್ಲಿ ನಗು ತರಿಸಿದ ಲೇಖನ ‘ಗೋಳಿನ ದನಿಗೆ ಕಿವಿಗಳಿಲ್ಲ’. ಈ ಲೇಖನವನ್ನು ಓದುತ್ತಾ ಹೋದಂತೆ ಧನಾತ್ಮಕ ಚಿಂತನೆ ಮತ್ತು ಮಾತು ಕೊಡುವ ಆತ್ಮ ವಿಶ್ವಾಸ  ಇವುಗಳ ಕೆಲವು ನಿದರ್ಶನಗಳೊಂದಿಗೆ  ಹೇಗೆ ಬದುಕನ್ನು ಸುಖದ ಸುಗ್ಗಿಯಾಗಿಸಬಹುದು ಎಂಬುದರ ಬಗ್ಗೆ  ಇವರ ಅನಿಸಿಕೆ ನಿಜಕ್ಕೂ ವಾಸ್ತವ  ಅನಿಸಿತು.’ ನೋವಲ್ಲೂ ನಲಿಯುವವನ ಸುತ್ತಲೇ ಈ ಜಗವೆಲ್ಲಾ ‘ ಈ ಮಾತು ನಮ್ಮ ಆಸುಪಾಸಿನ ಸತ್ಯ ಎನಿಸುವಷ್ಟು ನಮ್ಮನ್ನು ಸೆಳೆಯುತ್ತಾ ಹೋಗುತ್ತದೆ ಮತ್ತು ಅಗತ್ಯ ಬರೆಹ ಕೂಡಾ.   “ಹೇಗೆ‌ ಬೇಕಾದರೂ ಅರ್ಥೈಸಿಕೊಳ್ಳಿ” ಎಂಬ ಲೇಖನದಲ್ಲಿ ನಾವು ದಿನ ನಿತ್ಯ ಮಾಡುವ ವ್ಯಾಕರಣ ದೋಷಗಳು ವ್ಯಾಕರಣದ ಮಹತ್ವ ಹಾಗೂ ಗಮನಿಸಬೇಕಾದ ಅಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.ಇಲ್ಲಿ ಇವರ ಭಾಷಾ ಪ್ರೇಮ ಧಾರಾಕಾರವಾಗಿ ಅನಾವರಣವಾಗಿದೆ. ಹಾಗೆ ಮುಂದುವರೆಯುತ್ತಾ ಹಬ್ಬಗಳು ಹೇಗೆ ನಮಗೆ ಉತ್ಸಾಹಕಾರಿ ಹಾಗೂ ಬದುಕಿಗೆ ಜೀವಂತಿಕೆ ತುಂಬುವ ಸೆಲೆ  ಎಂಬುದನ್ನು ತಮ್ಮ ಅನುಭವ ಮೂಸೆಯಲ್ಲಿ ‘ಜೀವನೋತ್ಸಾಹ ತುಂಬುವ ಹಬ್ಬಗಳು ‘ ಎಂಬ ಲೇಖನದ ಮೂಲಕ ಅನುಭಾವವಾಗಿಸಿದ್ದಾರೆ.        ಪುಸ್ತಕ ಸಂಸ್ಕೃತಿಯಿಂದ ಹೇಗೆ ಪ್ರಬುದ್ಧರಾಗಬಹುದು ಎಂದು ಹೇಳುತ್ತಾ ಹವ್ಯಾಸಗಳಲ್ಲಿ ಅತ್ತ್ಯುತ್ತಮ ಹವ್ಯಾಸ ಓದುಗಾರಿಕೆ ಎನ್ನುತ್ತಾರೆ. ಹೌದು! ಎಳೆವೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡರೆ ಭಾಷಾ ಗಟ್ಟಿತನ ,ಮಾತನಾಡುವ ಧೈರ್ಯ ಆವರಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬುದನ್ನು ಎಳೆವೆಯಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಕರಾಗಿ, ಹಿರಿಯರಾಗಿ ತುಂಬಬೇಕಿದೆ ಎನ್ನುತ್ತಾರೆ. “ಹಾಸ್ಯ ಕವಿ ಬೀಚಿ ಸವ್ಯಸಾಚಿ ”  ಎಂಬ ಚೆಂದದ ಶೀರ್ಷಿಕೆಯ ಲೇಖನದಲ್ಲಿ “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೆ ಸ್ವಾಗತ” ಹಾಸ್ಯ ಬ್ರಹ್ಮ ಬೀಚಿಯವರ ಆತ್ಮಕಥನದಿಂದ ಆಯ್ದ ಸಾಲುಗಳನ್ನು ಬಳಸಿ ಬೀಚಿಯವರ ಸಾಹಿತ್ಯ ಸಾಧನೆಯನ್ನು ಸ್ಮರಿಸಿರುವುದು ಇವರ  ಓದಿನ ವಿಸ್ತಾರ ಮತ್ತು ಅಧ್ಯಯನವನ್ನು ಎತ್ತಿ ಹಿಡಿಯುತ್ತದೆ. ಈ ಕೃತಿಯಲ್ಲಿ ಶಿಕ್ಷಣವಿದೆ. ಸಂಸ್ಕೃತಿ, ಶಿಸ್ತು, ಸಂಸ್ಕಾರ, ಸಂಪ್ರದಾಯ ಎಲ್ಲವನ್ನು ಒಳಗೊಂಡ ಲೇಖನಗಳಿವೆ.ಮನಃಶಾಸ್ತ್ರಜ್ಞರ ಅಭಿಪ್ರಾಯಗಳು, ಶಿಕ್ಷಣ ತಜ್ಞರ ಸಲಹೆಗಳು, ಕವಿವಾಣಿಗಳು, ವಿಜ್ಞಾನಿಗಳ ಜ್ಞಾನ, ಲೋಕ ಜ್ಞಾನ ಇತ್ಯಾದಿ ವಿಚಾರಧಾರೆಗಳನ್ನು ಈ ಕೃತಿ ಕಟ್ಟಿಕೊಡುತ್ತದೆ.ಬಸವಣ್ಣನೆಂಬ ಸಾಧನೆಯ ಪ್ರತಿರೂಪದಿಂದ ಹಿಡಿದು ವೈವಿಧ್ಯಮಯ ವಸ್ತುಗಳನ್ನು  ಇಲ್ಲಿನ ಲೇಖನಗಳು ಹೊಂದಿವೆ.  ಶ್ರೀ ಸುಬ್ರಾಯ ಸಂಪಾಜೆಯವರು ಮುನ್ನುಡಿಯ ಮೂಲಕ  “ಈ ಕೃತಿ  ಒಂದು ಶಿಕ್ಷಣ ಸಂಹಿತೆಯೇ ಸರಿ ” ಎಂದು ಉಲ್ಲೇಖಿಸಿರುವುದು ಕೃತಿಯ ತೂಕವನ್ನು ಹೆಚ್ಚಿಸಿದೆ..  ಖ್ಯಾತ ಬರೆಹಗಾರ್ತಿ ಸ್ಮಿತಾ ಅಮೃತರಾಜ್ ಬೆನ್ನುಡಿಯ ಮೂಲಕ  ಓದಿದ ನಂತರ ಬಹಳ ಕಾಡುವ ಬರೆಹ  ಎಂದು ಹೇಳಿರುವುದು  ಇವರೊಬ್ಬರು  ಸಮರ್ಥ ಬರೆಹಗಾರ್ತಿ ಎಂಬುದಕ್ಕೆ  ಸಾಕ್ಷಿ ಎನ್ನುವಂತಿದೆ .  ಜಯಲಕ್ಷ್ಮಿ.ಕೆ. ಇವರ “ನಡೆದಷ್ಟೂ ದಾರಿ” ಕೃತಿಯು  ಸುಂದರ ಮುಖಪುಟ ಹೊಂದಿದ್ದು ಇದರಲ್ಲಿ ಸುಮಾರು 43 ಲೇಖನಗಳಿದ್ದು,184 ಪುಟಗಳಿರುವ ಈ ಕೃತಿಯ ಬೆಲೆ ರೂಪಾಯಿ 230 ಆಗಿರುತ್ತದೆ.    ಈ ಪುಸ್ತಕವೂ  ಪ್ರಶಸ್ತಿ  , ಗೌರವಕ್ಕೆ ಅರ್ಹವಾಗಿದ್ದು ಇವರು ಜಿಲ್ಲೆಯ ಭರವಸೆಯ ಲೇಖಕಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜಯಲಕ್ಷ್ಮಿಯರಿಗೆ ಶುಭಹಾರೈಕೆಗಳು.   ಸುನೀತ ಕುಶಾಲನಗರ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ Read Post »

ಪುಸ್ತಕ ಸಂಗಾತಿ

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ

ಪುರಸ್ಕಾರ ಸಂಗಾತಿ “ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ” ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ . ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ. 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು. ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎ.ಎಸ್.ಮಕಾನದಾರ್

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ Read Post »

ಪುಸ್ತಕ ಸಂಗಾತಿ

ಪ್ರೊ.ಶಕುಂತಲಾ ಸಿಂಧೂರ ಗದಗ ಅವರ “ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಕೃತಿ ಅವಲೋಕನ ಡಾ.ನಿಷ್ಟಿ ರುದ್ರಪ್ಪ

ಪುಸ್ತಕ ಸಂಗಾತಿ ಡಾ.ನಿಷ್ಟಿ ರುದ್ರಪ್ಪ ಪ್ರೊ.ಶಕುಂತಲಾ ಸಿಂಧೂರ ಗದಗ “ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಗದಗ ಎಂದರೆ ಮೈ ರೋಮಾಂಚನವಾಗುತ್ತದೆ. ಪಂಪನ ತಾಯಿಯ ತವರು ಮನೆ ಅಣ್ಣಿಗೆರೆ, ಅತ್ತಿಮಬ್ಬೆಯ ಕಾರ್ಯಕ್ಷೇತ್ರ ಲಕ್ಕುಂಡಿ, ಕರ್ನಾಟಕ ಭಾರತ ಕಥಾಮಂಜರಿಯ ರೂಪಕ ಚಕ್ರವರ್ತಿ ಗದುಗಿನ ನಾರಣಪ್ಪ, ಭಾವೈಕ್ಯತೆಯ ತಾವು ನಿಧಿ, ಲಿಂ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಶಿರಹಟ್ಟಿಯ ಫಕೀರಶ್ವರ ಮಠ, ಮುಳಗುಂದದ ಬಾಲ ಲೀಲಾ ಮಹಾಂತ ಶಿವಯೋಗಿಗಳು, ಅಂದ ಅನಾಥರಿಗೆ ಬಾಳಿಗೆ ಬೆಳಕಾದ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಮತ್ತು ಪಂಡಿತ ಪುಟ್ಟರಾಜ ಗವಾಯಿಗಳು, ಅಂಕಲಿಪಿಯಿಂದ ಹಿಡಿದು ಬೃಹತ್ ಗ್ರಂಥಗಳವರೆಗೆ ಅಕ್ಷರ ಸಂಸ್ಕೃತಿಯ ಮುದ್ರಣ ಕಾಶಿ ಎಂದೆ ಖ್ಯಾತಿ ಗಳಿಸಿರುವ ಗದಗ ಜಿಲ್ಲೆ, ಸಹಕಾರ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದೆ. ಜಗದ್ಗುರು ತೋಂಟದಾರ್ಯ ಕಾಲೇಜಿನ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಪ್ರೊ. ಶಕುಂತಲಾ ಸಿಂಧೂರ ಅವರು “ಗದಗ  ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಎನ್ನುವ ಸಂಶೋಧನಾತ್ಮಕ ಕೃತಿಯನ್ನು ಡಾ. ಎಂ ಎಂ ಕಲಬುರ್ಗಿ ಅಧ್ಯಯನ ಸಂಸ್ಥೆ ಜಗದ್ಗುರು ತೋಂಟದಾರ್ಯ ಮಠ ಗದಗ ವತಿಯಿಂದ ಪ್ರಕಟಿಸಿದ್ದಾರೆ. ಗದಗ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸವನ್ನು  ಸುಲಭವಾಗಿ ಅರ್ಥವಾಗುವಂತೆ ಪ್ರೊ. ಶಕುಂತಲಾ ಅವರು ಈ ಕೃತಿಯನ್ನು ರಚಿಸಿದ್ದಾರೆ.ಈ ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯದಲ್ಲಿಯೂ ಗದಗ ಚಾರಿತ್ರಿಕ ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅರ್ಥಪೂರ್ಣವಾಗಿ ವಿವೇಚಿಸಲಾಗಿದೆ. ಗದಗ ಜಿಲ್ಲೆಯ ಶಾಸನಗಳು ವಾಸ್ತುಶಿಲ್ಪ ಕಲೆ ಮತ್ತು ಧಾರ್ಮಿಕ ಪರಂಪರೆ, ಕೋಟೆ ಕೊತ್ತಲಗಳು, ಕೆರೆಗಳು ಮತ್ತು ಜನಸಾಮಾನ್ಯರ ಕೃಷಿ ಜೀವನದಿಂದ ಹಿಡಿದು ಕವಿಗಳು,‌ಕಲಾವಿದರು,  ಹಾಗೂ ಗದುಗಿನ ತೋಂಟದಾರ್ಯ ಮಠದ ಭಾವೈಕ್ಯತೆಯ ಪರಂಪರೆಯನ್ನು, ಜಿಲ್ಲೆಯ ಎಲ್ಲ ತಾಲೂಕುಗಳ ವಿಶೇಷತೆ ಮತ್ತು ಮಹತ್ವವನ್ನು, ದೇವಾಲಯಗಳು ಬಸದಿಗಳು ಹಾಗೂ ಭಾವೈಕ್ಯತೆಯ ನೆಲೆಗಳನ್ನು ಗುರುತಿಸಲಾಗಿದೆ. ಗದಗ  ಕೇವಲ ಊರಲ್ಲ ಅದು ಕನ್ನಡ ನಾಡಿನ ಸಾಂಸ್ಕೃತಿಕ ಜೀವ ಚೈತನ್ಯದ ಶಕ್ತಿ ಪೀಠ ಇಲ್ಲಿನ ಜನ ಜೀವನ ಇಡೀ ನಾಡಿಗೆ ಮಾದರಿಯಾಗಿದೆ. ಈ ನೆಲವನ್ನು ಆಳಿದ ರಾಜಮನೆತನಗಳು,  ರಂಗಭೂಮಿ, ಸಂಗೀತ, ಶಿಲ್ಪಕಲಾ ವೈಭವ,  ಚಿತ್ರಕಲೆ, ಪತ್ರಿಕೋದ್ಯಮ ಮತ್ತು ಮುದ್ರಣ ಸಂಸ್ಕೃತಿಯ ತವರೂರಾಗಿರುವ ಗದಗ ನಾಡಿಗೆ ಉತ್ತಮವಾದ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದೆ ಎಂದು ಕೃತಿಕಾರರು ಗದುಗಿನ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿಪಾದಿಸಿದ್ದಾರೆ. ಗದಗ ಜಿಲ್ಲೆಯ ಪ್ರಾಕೃತಿಕ ಸಂಪತ್ತನ್ನು, ಆ ನೆಲದಲ್ಲಿನ ಕಪ್ಪತ್ತ ಗುಡ್ಡದ ಅರಣ್ಯ ಅಲ್ಲಿ ದೊರಕುವ ಔಷಧೀಯ ಸಸ್ಯಗಳ ವಿವರಣೆ, ಚಿನ್ನದ ನಿಕ್ಷೇಪದ ಬಗ್ಗೆ ಮತ್ತು ಆಧುನಿಕವಾಗಿ ಪವನ ಯಂತ್ರದ ಮೂಲಕ ವಿದ್ಯುತ್ತಿನ ಉತ್ಪಾದನೆ ಇವೆಲ್ಲವುಗಳ ಮಾಹಿತಿಯು ಈ ಕೃತಿಯಲ್ಲಿ ಅಡಕವಾಗಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಏಕೀಕರಣ ಚಳುವಳಿಯಲ್ಲಿ ಗದಗ ಜಿಲ್ಲೆ ಮಹತ್ವದ ಪಾತ್ರವಹಿಸಿದೆ.‌ ಅದರ ವಿವರಗಳನ್ನು ಸಹ ಕೊಡಲಾಗಿದೆ. ಪ್ರೊ. ಶಕುಂತಲಾ ಸಿಂಧೂರ ಅವರಈ ಸಂಶೋಧನಾತ್ಮಕ ಕೃತಿಯು ಮುಂದಿನ ಅಧ್ಯಯನಕಾರರಿಗೆ ಆಕರ ಗ್ರಂಥವಾಗಲಿದೆ. ಇದೊಂದು ಸಂಗ್ರಹ ಯೋಗ್ಯ ಕೃತಿಯಾಗಿದೆ. ನಾಡಿನ ಜನತೆ ಈ ಕೃತಿಯನ್ನು ಸ್ವೀಕರಿಸಿ ಸಂಶೋಧಕಿಯನ್ನು ಪ್ರೋತ್ಸಾಹಿಸಬೇಕು. ಡಾ. ನಿಷ್ಠಿ ರುದ್ರಪ್ಪ,  ಅಧ್ಯಕ್ಷರು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಅಖಂಡ ಬಳ್ಳಾರಿ ಜಿಲ್ಲೆ.

ಪ್ರೊ.ಶಕುಂತಲಾ ಸಿಂಧೂರ ಗದಗ ಅವರ “ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಕೃತಿ ಅವಲೋಕನ ಡಾ.ನಿಷ್ಟಿ ರುದ್ರಪ್ಪ Read Post »

ಪುಸ್ತಕ ಸಂಗಾತಿ

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ

ಪುಸ್ತಕ ಸಂಗಾತಿ ಡಾ. ಸಂಗಮೇಶ ಎಸ್. ಗಣಿ ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಮೌನ ಧ್ಯಾನಗಳ ಫಲ ಮೌನೇಶ್ ರ ‘ಬಿಸಿಲೇ ಬೆಳದಿಂಗಳು’        ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ ‘ಬಿಸಿಲೇ ಬೆಳದಿಂಗಳು’ ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ ಬಾಳಿನಲ್ಲಿ ಬೆಳದಿಂಗಳಾಗುವ ಹಂಬಲವನ್ನು ಪ್ರಕಟಿಸುತ್ತದೆ.       ಬಿಸಿಲೇ ಬೆಳದಿಂಗಳಲ್ಲಿ ಒಟ್ಟು 36 ಕವಿತೆಗಳಿವೆ. ಇಲ್ಲಿ ಪ್ರೀತಿ, ಪ್ರೇಮ, ವಿರಹ, ಸ್ನೇಹ, ಅಪ್ಪ-ಅಮ್ಮ ಮಗಳು,ಮನುಷ್ಯ ಸಂಬಂಧಗಳು, ಮನುಷ್ಯನ ಮುಖವಾಡ, ಮನಸ್ಸಿನ ಸಂಕಟ, ತಲ್ಲಣ, ತಳಮಳ, ಕನಸು ಕನವರಿಕೆ, ಪರಿಸರ,  ನಾಡು ನುಡಿ ಅಭಿಮಾನ, ಯುದ್ಧ, ಬುದ್ಧ,  ಅಂಬೇಡ್ಕರ್, ಸ್ತ್ರೀ ಸಂವೇದನೆ, ಮನಸ್ಸಿನ ವೇದನೆ, ಸಂಕಟ, ಸಂಭ್ರಮ, ಸಂಘರ್ಷ, ಬದುಕು, ಬೆಳಕು ಎಲ್ಲವೂ ಇವರ ಕಾವ್ಯಕ್ಕೆ ವಸ್ತುಗಳಾಗಿ ಒದಗಿ ಬಂದಿವೆ.         ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮುಖ್ಯ ಅವಸ್ಥೆಗಳಲ್ಲಿ ತಾರುಣ್ಯವೂ ಒಂದು ಹೊಸ ಹುರುಪು ಮತ್ತು ಕನಸು, ಕನವರಿಕೆ, ಉನ್ಮಾದ ಉದ್ವೇಗಗಳೆಲ್ಲವೂ ಇರುವ ಈ ಹಂತದಲ್ಲಿ ಜಾಗರೂಕತೆ ಅಗತ್ಯ ಎಂಬುದನ್ನು ಅರಿತ ಕವಿತಾರುಣ್ಯಸಪ್ತಸಾಗರಗಳ ದಾಟಿಮುಗಿಲ ನಕ್ಷತ್ರಗಳ ತರುವವ್ಯರ್ಥ ಕನಸಲ್ಲಅವಕಾಶ ಸಿಕ್ಕರೆಆಕಾಶಕ್ಕೆ ಏಣಿ ಹಾಕುವಸಾರ್ಥಕ ಹೊಂಗನಸು  (ತಾರುಣ್ಯ) ಎಂದು ಹೇಳುತ್ತಲೇ ‘ಅದು ದೇಹ ಸಂಬಂಧಿಯಲ್ಲ ಆತ್ಮ ಮನಸುಗಳ ಬಂಧಿ, ಅಸಾಧ್ಯವ ಸಾಧ್ಯವಾಗಿಸುವ ಭಾವಾಂಬುಧಿ’ ಎನ್ನುತ್ತಾನೆ. ಅವಳಿಲ್ಲದೆ ಅವನಿಲ್ಲ. ಅವನಿಗೆ ಅವಳೇ ಎಲ್ಲ. ಅವಳೆಂದರೆ ಅವನ ಪಾಲಿಗೆ ಕವಿತೆ. ಕವಿತೆ ವ್ಯಾಖ್ಯಾನಕ್ಕೆ ಒಗ್ಗದ್ದು, ಹಾಗೆಯೇ ಅವಳೂ ಸಹ ಅರಿತಷ್ಟು ಆಳ, ಅರಿವಿಗೆ ನಿಲುಕದ ಅವಳು ನಿಗೂಢ. ಮೊದಲಲ್ಲಿ;   ಅವಳೆಂದರೆಎಂದೋ ಬರೆದು ಮುಚ್ಚಿಟ್ಟ ಅನಂತ ನೆನಪುಗಳು ತುಂಬಿದ್ದ ಆತ್ಮಕಥೆಯಂತೆಸನಿಹವಿದ್ದರೂ ಕೈಗೆಟುಕದ ಕೊನೆಯಾಗದ ಖುಷಿಯಂತೆ (ಅವಳೆಂದರೆ)     ಎನ್ನುವ ಕವಿಗೆ ಸನಿಹವಿದ್ದದ್ದೆಲ್ಲ ಸವಿಯಾದುದು, ಸಹ್ಯವಾದುದು. ಆತ್ಮಕಥೆಯಲ್ಲಿ ಎಲ್ಲ ವಿವರಗಳು ಆಪ್ತ, ನಿಚ್ಚಳ. ಅದೇ ರೀತಿಯಲ್ಲಿ ಆರಂಭದಲ್ಲಿ ಅವಳ ಸಾಮೀಪ್ಯ, ಸಖ್ಯ ಹಿತವಾದುದು. ಕ್ರಮೇಣ ಅವಳೆಂದರೆ ಬದುಕಿನ ಮರುಭೂಮಿಯ ಮರೀಚಿಕೆ, ಹಿಂಬಾಲಿಸುವ ನೆರಳು ಎಂಬಂತಾಗುತ್ತದೆ. ಕೊನೆಗೆ; ಅವಳೆಂದರೆಎಷ್ಟು ಬಾರಿ ಓದಿದರೂಅರಿವಿಗೆ ನಿಲುಕದಅರ್ಥವಾಗದ ಕವಿತೆಯಂತೆ (ಅದೇ)   ಎಂಬುದಾಗಿ ಶರಾ ಬರೆಯುವನು. ಆತ್ಮಕಥೆ ಮತ್ತು ಕಾವ್ಯ  ಪರಿಭಾಷೆಗಳಲ್ಲಿ ಪ್ರೇಮದ ಸ್ವರೂಪವನ್ನು ನಿರೂಪಿಸುವುದು ಇಲ್ಲಿ ವಿಶೇಷ. ಬದುಕಿನಲ್ಲಿ ಅವಳ ಇರುವಿಕೆ ಶ್ರಾವಣ ಮಾಸದಂತೆ ಸಂತಸ ಸಂಭ್ರಮವನ್ನು ಹೊತ್ತು ತರುತ್ತದೆ.   ಧನ್ಯನಾದೆ ಮಾನ್ಯನಾದೆ   ಗೆಳತಿ ನಿನ್ನ ಸನಿಹಕೆ    ಇಷ್ಟು ದಿನದ ವಿರಹ ಬೇಗೆ    ಎಲ್ಲ ಮರೆತೆ ಇಂದಿಗೆ (ಮತ್ತೆ ಬಂತು ಶ್ರಾವಣ) ಎನ್ನುವ ಕವಿಗೆ ಅವಳ ಸಾಮೀಪ್ಯದ ಸುಖದೊಳಗೆ ವಿರಹದ ಬೇಗೆಯಲ್ಲ ಆರಿ ತಣ್ಣಗಾಗುತ್ತದೆ. ಅವಳಿಗಾಗಿ ಪಟ್ಟ ಪಾಡು, ವೇದನೆಗಳೆಲ್ಲ ಈಗ ಮಾಯವಾಗಿದೆ. ಹಿಂದಿನದನ್ನೆಲ್ಲ ಮತ್ತೆ ಮರು ನೆನಪಿಸಿಕೊಳ್ಳುವುದು ಬೇಡ ಎಂದು ತಿಳಿದು ;ಕಳೆದ ಕಾಲದ ಮಾತದೇಕೆ ಲೆಕ್ಕವಿಲ್ಲದ ವೇದನಎಲ್ಲ ಮರೆಸಿ ಚಿಗುರಿ ನಿಂತುಮತ್ತೆ ಬಂತು ಶ್ರಾವಣ (ಅದೇ) ಎಂಬುದಾಗಿ ಹೇಳುತ್ತಾ, ಕಳೆದ ಕಾಲದ ನೆನಪುಗಳ ಗೊಡವೆಗೆ ಹೋಗದೆ ನೋವು ನಲಿವುಗಳನ್ನು ಸಮವಾಗಿ ಸ್ವೀಕರಿಸುವ ಸಮತೋಲನ ಭಾವ ಮುಖ್ಯ ಎಂಬುದನ್ನು ಅರುಹುತ್ತಾನೆ.  ನೀನು ಒಲವಿನೂರಿನ ಸಿರಿಯ ತೋರಲುಕೈಹಿಡಿದು ಹೊರಟೆನಾನು ಹಿಂಬಾಲಿಸಿದೆ (ಒಲವಿನ ಹಾದಿ) ಎನ್ನುವ ಕವಿಗೆ ‘ನನ್ನ ಮೌನಕ್ಕೆ ಮಾತಾಗಿ, ಮಾತುಗಳಿಗೆ ದನಿಯಾಗಿ ಸುಂದರ ಹಾಡಾದ ಪರಿ’ ಅನನ್ಯ. ಪ್ರೇಮದ ದಾರಿಯಲ್ಲಿ ನಡೆಯುವುದೇ ಸಿಹಿಯಾದ ಅನುಭೂತಿ. ‘ಒಲವು ನಡೆಸಿದ ಈ ಹಾದಿ ಖಂಡಿತ ಕಹಿಯಲ್ಲ ಹಿತವಾಗಿ ಕಾಡುವ ಇಂಪಾದ ಹಾಡು’ ಎನಿಸುತ್ತದೆ. ಹೀಗೆ ಪ್ರೇಮದ ಪರಿಯನ್ನು ಪರಿಚಯಿಸುವ ಕವಿಗೆ ಅದೊಂದು ಸುಂದರ ಅನುಭೂತಿ. ಕಾವ್ಯದ ಸಾಮಾಜಿಕ ಪ್ರಜ್ಞೆ   ಸಾಮಾಜಿಕ ಸನ್ನಿವೇಶಗಳೊಂದಿಗೆ ಸಂವಹಿಸದ ಸಾಹಿತ್ಯ ಸಾಯುತ್ತದೆ. ಈ ಹಿನ್ನೆಲೆಯಲ್ಲಿ ಕವಿ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾನೆ. ದೇಶಕ್ಕಾಗಿ ದುಡಿಯುವ ಪ್ರಾಮಾಣಿಕ ಸೈನಿಕರ ಅಗತ್ಯತೆಯನ್ನು  ಪ್ರತಿಪಾದಿಸುವುದರ ಜೊತೆಗೆ ‘ಕದನ ಬಯಸುವ ಕೇಡಿಗಳಲ್ಲ ನಾವು ದೇಶದ ಏಳ್ಗೆಗೆ ನಿಷ್ಠೆಯಿಂದ ದುಡಿವ ಶ್ರಮ ಜೀವಿಗಳು’ (ನಾವು) ಎನ್ನುವುದು ವಿಶೇಷ. ಶಾಂತಿ ಕದಡುವ ಕಿಡಿಗೇಡಿಗಳೆಲ್ಲ ನಾವುಬಂಜರೆದೆಗಳ ಮೇಲೆಶಾಂತಿಯ ಹೂ ಗಿಡಗಳ ಬೆಳೆಸುವ ಕುಶಾಗ್ರಮತಿಗಳುಜಗಕೆ ಶಾಂತಿ ಸಾರುವ ಭಾರತೀಯರು ನಾವು (ಅದೇ)     ದೇಶಭಕ್ತಿ,  ಅಭಿಮಾನ, ರಾಷ್ಟ್ರಪ್ರೇಮ ಎನ್ನುವುದು ಬರೀ ಮಾತು ಭಾಷಣಗಳಿಗೆ ಸೀಮಿತವಾಗದೆ ಅದು ಬದುಕಿನ ಭಾಗವಾಗಬೇಕೆಂಬ ಅದಮ್ಯ ಬಯಕೆ ಕವಿಯದು. ಸೈನಿಕರ ತ್ಯಾಗ, ಬಲಿದಾನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಬದಲಾಗಿ ಸಾರ್ಥಕ ಭಾವವಾಗಿ ಜೀವ ಚೈತನ್ಯವಾಗಿ ಮನಸ್ಸಿನಾಳದಲ್ಲಿ ಜೀವಂತವಾಗಿರುತ್ತವೆ . ಹೀಗಾಗಿ ಕವಿವ್ಯರ್ಥವಾಗದು ಬಲಿದಾನ ಸಾರ್ಥಕವು ಪ್ರಾಣಾರ್ಪಣ (ಅಮರ ನಿಮ್ಮ ಜೀವನ)  ಎಂದು ಹೆಮ್ಮೆ,  ಅಭಿಮಾನದಿಂದ ಹೇಳುತ್ತಾನೆ. ಬಂಜರಾದ ಎದೆಗಳಲ್ಲಿ ಶಾಂತಿಯ ಹೂಗಳನ್ನು ಅರಳಿಸುವ ಮಹತ್ವಾಕಾಂಕ್ಷೆ ಪ್ರಕಟಿಸುವ ಕವಿತೆ ಹೃದಯದಲ್ಲಿ ವಿಕೃತಿ ವಿಕಾರ ವಿಲಕ್ಷಣಗಳಿಗೆ ಜಾಗವಿಲ್ಲ. ಯುದ್ಧದ ಭೀತಿಯಲ್ಲಿ ಕರಾಳ ಕತ್ತಲೆಯಲ್ಲಿ ಅಮಾಯಕರ ನೋವು, ನರಳಾಟಕ್ಕೆ ಕೊನೆ ಇರುವುದಿಲ್ಲ. ಇಂತಹ ವಿಷಮ ಗಳಿಗೆಯಲ್ಲಿಯೇ ಕವಿ ಮಾನವೀಯತೆಗಾಗಿ ಹಂಬಲಿಸುವುದು;  ಅಮಾನುಷ ಹಿಂಸೆಗೆ ಸಿಕ್ಕ ಅಮಾಯಕ ಗಾಯಾಳುಗಳ ಕಂಡು ಮರುಗಿದ ಮಮತಾಮಯಿ….ಜೀವ ಕಾರುಣ್ಯದ ಮಡುವು.. (ಆರದ ದೀಪ) ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ನೆನಪಿಸುವ ಕವಿ ಈ ಕರಾಳ ಕತ್ತಲಮಯ ಜಗತ್ತಿಗೆ ಆರದ ದೀಪವಾಗಿ ಒದಗಿ ಬರಬೇಕು ಎಂದು ಆಶಿಸುತ್ತಾನೆ.    ಜಾತಿ ಮತ ಪಂಗಡ ಇವೆಲ್ಲವೂ ಈ ಸಮಾಜಕ್ಕೆ ಅಂಟಿದ ರೋಗಗಳು. ಇವು ಎಂದಿಗೂ ಮನುಷ್ಯ ಬದುಕನ್ನು ನುಂಗಿ ನೀರು ಕುಡಿಯುತ್ತಿವೆ.   ಆಪೋಷಣೆ ಮಾಡುತ್ತಿವೆ. ಇಡೀ ವಿಶ್ವವೇಒಂದು ಗೂಡಾದರೆ ಎಷ್ಟು ಚೆಂದ! ಕೂಡಿ ಬದುಕಿದರೆ ಅದರೊಳಗೆ ಜಗದ ಜನರಲ್ಲ ಭೇದ ವಿರದ ಹಕ್ಕಿಗಳ ಹಾಗೆ ಎಷ್ಟು ಚಂದ! (ಎಷ್ಟು ಚಂದ!) ಎಂಬುದಾಗಿ ಸೌಹಾರ್ದ, ಸಹಬಾಳ್ವೆಗೆ ಹಂಬಲಿಸುವ ಕವಿ ಸಮಾಜ, ದೇಶ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುವುದು ಹೀಗೆ;  ಶೋಷಣೆ ವರ್ಣದ್ವೇಷಗಳ ಪೊರೆ ಕಳಚಿಯುದ್ಧ, ಭಯೋತ್ಪಾದನೆಗಳ ಭಯ ಬಿಡಿಸಿಧರ್ಮಾoಧತೆ, ಕೋಮುದಳ್ಳುರಿಯ ದಹಿಸಿ ಅಸಮಾನತೆಯ ತೆರೆಸರಿಸಿ ಸಮಾನತೆಯ ರೆಕ್ಕೆಗಳ ಚಾಚಿ ಸ್ವೇಚ್ಛೆಯಲಿ ಹಾರಿದರೆ ಸ್ವಚ್ಛoದ ಮುಗಿಲೆತ್ತರ ನಾವೆಲ್ಲ (ಅದೇ)   ಎನ್ನುವುದು ವಿವೇಚನಾರ್ಹ. ಸಮಾಜದ ಅನೇಕ ಸಮಸ್ಯೆಗಳಿಗೆ ಬುದ್ಧ, ಬಸವ, ಪಂಪ, ಗಾಂಧೀಜಿ, ಅಂಬೇಡ್ಕರ್, ಮದ್ದಾಗಿ ಒದಗುತ್ತಾರೆ. ಈ ಬಗ್ಗೆ ಕವಿ ದಮನಿತರಿಗೆ, ದಲಿತರಿಗೆ ದನಿಯ ನೀಡಿದ ದ್ರಷ್ಟಾರಜಾತಿ ಗೋಡೆಯ ಕುಟ್ಟಿ ಕೆಡವಲು ಕರೆಯಕೊಟ್ಟ ದಿಟ್ಟ ಧೀರ  ‘ತುಳಿಯುವವರ ನೆತ್ತಿಯ ಮೇಲೆ ಕಾಲಿಟ್ಟು ಬೆಳೆದೆ ಬಲು ಎತ್ತರ’ (ದಮನಿತರ ನೇಸರ) ಎಂಬುದಾಗಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವನು. ಅಲ್ಲದೆ ಅವರನ್ನು ‘ನೊಂದು ಬೆಂದವರೆದೆಗೆ ಭರವಸೆಯ ಬಿತ್ತಿದ ಮಾನವತೆಯ ಆಗರ..’ ಎಂಬುದಾಗಿ ಬಣ್ಣಿಸುವನು. ದೇವರನ್ನೇ ದೂರುವ ಧೈರ್ಯದಿಂದ ಪ್ರಶ್ನೆ ಮಾಡುವ ಕವಿ ಅವತರಿಸಿ ಬರುವುದಾದರೆ, ಚಳಿಗಾಳಿಗೆ ಮೈಯೊಡ್ಡಿ ದುಡಿಯುವ ಬಡವರ ಗೋಳು ನೋಡಲು ಬಾ ಎಂದು (ಅವತರಿಸಿ ಬಾ) ಕರೆಯುವುದು ಕವಿಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ. ಗಾಂಧೀಜಿ ಅಪಮೌಲ್ಯಕ್ಕೆ ಒಳಗಾಗುತ್ತಿರುವ ಈ ಹೊತ್ತಿನಲ್ಲಿ ಕವಿ ಪ್ರಿಯ ಗಾಂಧಿ!ನೀನು ಹುಟ್ಟಿದ ದಿನ ಮಾತ್ರ ನೆನೆಯುತ್ತೇವೆ ನಿನ್ನ, ತತ್ವಸಾರವನನುಪತ್ರಿಕೆಯ ಲೇಖನಗಳಲಿ ವೇದಿಕೆಯ ಭಾಷಣಗಳಲಿ.. (ಪ್ರಿಯ ಗಾಂಧಿ) ತತ್ವಾನುಷ್ಠಾನದ ಅಗತ್ಯತೆಯನ್ನು ಮನಗಾಣಿಸುತ್ತಾರೆ. ಧರ್ಮ ಒಂದು ಬಗೆಯ ಅಫೀಮು. ಅದು ಎಲ್ಲರನ್ನೂ ಮಂಪರು ಮಾಡುತ್ತಿದೆ. ಧರ್ಮ ಮಾನವ ಒಳಿತಿಗಿರಬೇಕೆ ಹೊರತು ಕೇಡಿಗಲ್ಲ. ನಮಗೆ ಎಂಥ ಮನುಷ್ಯರ ಅಗತ್ಯವಿದೆ ಎಂಬುದನ್ನುಧರ್ಮದ ಅಫೀಮನ್ನು ತಲೆಗೇರಿಸಿಕೊಡುದ್ವೇಷದ ಕಿಡಿ ಉಗುಳುವವ್ಯಗ್ರ ಮನುಷ್ಯರಲ್ಲ ನಮಗೆ ಬೇಕಿರುವುದು…. (ನಮಗೆ ಬೇಕಿರುವುದು) ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನುಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬುದ್ಧನಂಥ ಕರುಣಾಮಯಿಗಳ ಅವಶ್ಯಕತೆ ಇದೆ. ಎಂಬುದನ್ನು ಸಾರಿದ್ದಾನೆ. ಸಾಮರಸ್ಯದ ಬಾಳಿಗೆ ಸಹನೆ, ಸೌಹಾರ್ದತೆ ಅತ್ಯಗತ್ಯ.  ಸಹನೆ, ಸೌಹಾರ್ದತೆಗಳಿಲ್ಲದ ಬರಡು ಹೃದಯದೊಳಗೆ ಹರಿದಾಡಿಹಸಿರು ಚಿಗುರಿ ಜೀವ ತುಂಬಿ ಸಮೃದ್ಧವಾಗಿ ತೊನೆಯಲು ಮನಸ್ಸು ನದಿಯಾಗಬೇಕು (ಮನಸ್ಸು ನದಿಯಾಗಬೇಕು) ತನ್ನೆಲ್ಲಾ ಮಿತಿಗಳನ್ನು ಮೀರಿಕೊಳ್ಳಲು ಮನುಷ್ಯ ನದಿಯಾಗಬೇಕು ಎಂದು ಆಶಿಸುವುದು ಬಹಳ ದೊಡ್ಡ ಮೌಲ್ಯ.  ಕಾವ್ಯದಲ್ಲಿ ಜೀವನ ಜಿಜ್ಞಾಸೆ      ಈ ಜೀವನವೇ ಸೋಜಿಗ ಅರ್ಥಮಾಡಿಕೊಳ್ಳಲು ಹೋದಷ್ಟು ನಿಗೂಢ. ಆದ್ದರಿಂದ ಕವಿಗೂ ಈ ಜಿಜ್ಞಾಸೆ ತೀವ್ರವಾಗಿ ಕಾಡಿದೆ.ಓ ಬದುಕೇ!ಎಷ್ಟೊಂದು ವಿಸ್ಮಯ ನಿನ್ನೊಡಲು ಆಳ ವಿಸ್ತಾರಗಳರಿಯದ ಕಡಲು! (ಓ ಬದುಕೇ! ) ಅನೇಕ ದಾರ್ಶನಿಕರು, ಸಾಧು ಸಂತರು, ಶರಣರು ಎಲ್ಲರೂ ಈ ಬದುಕಿನ ಬಗೆಯನ್ನು ಬೆದಕಿದವರೇ. ಆದರೆ ಅರ್ಥ ಮಾತ್ರ ಸಿಕ್ಕಿಲ್ಲ. ಈ ಬದುಕೇ ಅಚ್ಚರಿಯ ಆಗರ. ಮನುಷ್ಯ ಮುಖವಾಡಗಳನ್ನೇ ಹಾಕಿಕೊಂಡಿರುವುದರ  ಕುರಿತು ಕಳವಳಿಸುವ ಕವಿ, ಅದನ್ನು ಕಾಳಜಿ, ಪ್ರಾಮಾಣಿಕ, ಪರಿಶುದ್ಧ ಹೃದಯದಿಂದ,  ಮಾನವೀಯ ಅಂತಃಕರಣದಿಂದ ಬಾಳಬೇಕೆಂಬ ನಿಲುವನ್ನು ತಾಳುತ್ತಾನೆ. ಕರುಣೆಗಳೆಲ್ಲ ಕಕ್ಕುಲತೆಗಳೆಲ್ಲ ಮುಖವಾಡಗಳ ಗೋಸಂಬಿ ತನಕೆ ಮೋಸ ಹೋಗಿವೆನಿಷ್ಠೆ, ಪ್ರಾಮಾಣಿಕತೆಗಳು ದೆಸೆಗಟ್ಟು ಓಡುತಿವೆ ನಿಜ ಬದುಕಿಗೆಲ್ಲಿ ಬೆಲೆ (ಮುಖವಾಡದ ಬದುಕು) , ನ್ಯಾಯ, ನಿಷ್ಠೆ,  ಪ್ರಾಮಾಣಿಕತೆಗಳಿಂದಲೇ ಈ ಬದುಕಿಗೆ ಬೆಲೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ ಎಂಬುದನ್ನು ಕವಿ ಸ್ಪಷ್ಟಪಡಿಸಿದ್ದಾನೆ. ಈ ಜೀವನ ಅನಿಶ್ಚಿತತೆ,  ಅಸ್ಥಿರತೆಗಳಿಂದ ಕೂಡಿದ್ದು, ಮನುಷ್ಯನನ್ನು ಕಂಗೆಡಿಸುತ್ತದೆ. ಆದರೆ ಧೃತಿಗೆಡದಂತೆ ಬಾಳಲು ಎಚ್ಚರಿಸುವ ಕವಿ ‘ಸೋತಷ್ಟು ಸತಾಯಿಸುವ ಬದುಕಿದು ಅತ್ತಷ್ಟು ಅಳಿಸುವ ಜಗವಿದು ಬೆದರದೆ ಬೆಚ್ಚಗೆ ಕಲ್ಲಾಗಿಸು ಎದೆಯ ತಿಳಿ ಈ ಸಮಯ ಸ್ಥಿರವಲ್ಲವೆಂಬ ನೀತಿಯ’ (ನೀರ ಮೇಲಣ ಗುಳ್ಳೆ) ಸಾರ್ವಕಾಲಿಕ ಸತ್ಯವನ್ನು ನುಡಿಯುತ್ತಾನೆ. ಬದುಕುವ ಛಲ ತುಂಬುತ್ತಾನೆ. ಅಲ್ಲದೆ ಈ ಜಗತ್ತಿನಲ್ಲಿ ವಿಚಿತ್ರ ಜನರು ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ.  ಕಾವ್ಯದಲ್ಲಿ ಸ್ತ್ರೀ ಚೇತನ      ಈ ಸಮಾಜದಲ್ಲಿ ವೇಶ್ಯೆಯರನ್ನು ಕಾಣುವ ದೃಷ್ಟಿಯೇ ಕೀಳಾದುದು. ಮೈಮಾರಿಕೊಂಡು ಬದುಕುವ ಹೆಣ್ಣಿನ ಬಗ್ಗೆ ಮರುಕ ಪಡುವ ಕವಿ ‘ಅವಳು ಬೀದಿಯಲ್ಲರಳಿ ಮಸಣಕೆ ಶೃಂಗಾರವಾದ ಮಸಣದ ಹೂ’ ಎಂಬುದಾಗಿ ಅವಳ ದಯನೀಯ ಸ್ಥಿತಿಯನ್ನು ಅನಾವರಣ ಮಾಡಿದ್ದಾನೆ.     ತಾಯಿಯು ತನ್ನ ಮಗುವನ್ನೇ ಬೆಳದಿಂಗಳು ಎಂದು ಭಾವಿಸುವ ಸಂಕಲನದ ಶೀರ್ಷಿಕೆಯುಳ್ಳ ಕವನ ‘ಬಿಸಿಲೇ ಬೆಳದಿಂಗಳು’ ಕವಿಯ ಸಂವೇದನಾಶೀಲತೆಗೆ ಸಾಕ್ಷಿ. ದುಡಿಮೆ ಮಾಡಿ ಮಗುವನ್ನು ಸಾಕುವ ಸಮಸ್ತ ತಾಯಂದಿರ ಕಷ್ಟ ಪರಂಪರೆಯನ್ನು ಕಣ್ಮುಂದೆ ತಂದು ನಿಲ್ಲಿಸುವ ಕವಿ ;ಸಿಕ್ಕತಂಗಳೆ ಮೃಷ್ಟಾನ್ನಬೀಸೋ ಗಾಳಿಯೇ ಸುವ್ವಾಲಿ ಹಕ್ಕಿಗಳುಲಿಯೇ ಗಿಲಗಿಂಚಿನಾದಬಿಸಿಲೇ ಬೆಳದಿಂಗಳವಗೆ… ( ಬಿಸಿಲೇ ಬೆಳದಿಂಗಳು ) ಪ್ರಕೃತಿಯ ಎಲ್ಲ ವ್ಯವಹಾರಗಳೂ  ಮನುಷ್ಯ ಬದುಕಿನ ಭರವಸೆಯಾಗಿ ಹಾಗೂ ಪ್ರಕೃತಿ ಮಾತೆಯೇ ಪುರುಷನ ಪೋಷಣೆಗೆ ನಿಂತಿರುವುದನ್ನು ತಿಳಿಸುವ ಕವಿ ಪುರುಷ ಮತ್ತು ಪ್ರಕೃತಿ ನಡುವಿನ ನಂಟನ್ನು ತಾಯಿ ಮಗುವಿನ ಸಂಬಂಧದೊಂದಿಗೆ ಸಮೀಕರಿಸಿ ಒಂದು ರೂಪಕದ ಮೂಲಕ ಕಟ್ಟಿಕೊಟ್ಟಿರುವುದು ಗಮನಾರ್ಹ.     ಮೌನ ಮತ್ತು ಧ್ಯಾನಗಳ ಮೂಲಕ ಕವಿತ್ವವನ್ನು ದಕ್ಕಿಸಿಕೊಳ್ಳುತ್ತಿರುವ ಮೌನೇಶ್ ಅವರು ಬಾಳಿನಲ್ಲಿರುವ ಬಿಸಿಲನ್ನೇ ಬೆಳದಿಂಗಳಾಗಿ ಭಾವಿಸುವ ಧನಾತ್ಮಕ ನಿಲುವು ಮತ್ತು ಆಶಯವನ್ನು ಪ್ರಕಟಿಸಿರುವುದು ವಿಶೇಷ. ಅವರಿಗೆ ಶುಭವಾಗಲಿ. ಡಾ. ಸಂಗಮೇಶ ಎಸ್. ಗಣಿಕನ್ನಡ ಪ್ರಾಧ್ಯಾಪಕರು, ಬೆಂಗಳೂರು.ಮೊಬೈಲ್ :9743171324

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ Read Post »

ಪುಸ್ತಕ ಸಂಗಾತಿ

ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ.

ಪುಸ್ತಕ ಸಂಗಾತಿ ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ ಯುವ ಜನತೆಯಲ್ಲಿ ಮೂಡಲಿ ರಾಷ್ಟ್ರೀಯತೆಯ ಭಾವನೆ*  -ಶರಣಬಸಪ್ಪಾ ದೇಶಮುಖ*ಔರಾದ* : ಪ್ರತಿಯೊಬ್ಬ ಯುವಕರಲ್ಲಿ ರಾಷ್ಟ್ರೀಯತೆಯ ಭಾವನೆ ಬೆಳೆಯಬೇಕಾಗಿದೆ. ದೇಶದ ಅಭಿವೃದ್ಧಿಯಾಗಬೇಕು ಎಂದರೆ ಅದು ಯುವ ಜನತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಯ ಜೀವನದಲ್ಲಿಯೇ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ *ರಾಷ್ಟ್ರೀಯ ಸೇವಾ ಯೋಜನೆ* ಜಾರಿಗೆ ತಂದರು. ನಾವು ಉಳಿಯಬೇಕು, ಬೆಳೆಯಬೇಕು ಅಂದರೆ ದೇಶದ ಅಭಿವೃಧ್ಧಿಯಲ್ಲಿ ನಾವೆಲ್ಲರೂ ಸಹಭಾಗಿತ್ವ ನೀಡಬೇಕೆಂದು ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಕಾರ್ಯದರ್ಶಿಗಳಾದ ಶರಣಬಸಪ್ಪಾ ದೇಶಮುಖ ಅವರು ನುಡಿದರು. ಇಂದು ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಸರಕಾರಿ ಪ್ರೌಢ ಶಾಲೆ ಯನಗುಂದಾದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ *ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ* ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ನಮ್ಮ ಯುವ ಜನತೆ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದುಷ್ಚಟಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ತಾವೆಲ್ಲರೂ ಹಾಗೆ ಆಗದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ಕರೆ ನೀಡಿದರು. ಶಿಬಿರವನ್ನು ಉದ್ಘಾಟಿಸಿ, ಸಾಹಿತಿ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಅವರು ರಚಿಸಿರುವ ಆಧುನಿಕ ಕಥನ ವಚನಗಳ “ಸ್ಮರಣಾಂಜಲಿ” ಕೃತಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಸದಸ್ಯರಾದ ರವೀಂದ್ರ ಮೀಸೆರವರು ಯುವಕರು ದೇಶ ಕಟ್ಟಬೇಕು ಎನ್ನುವ ಉದ್ದೇಶಕ್ಕಾಗಿಯೇ ಎನ್.ಎಸ್.ಎಸ್ ಸಂಘಟನೆ ಹುಟ್ಟಿಕೊಂಡಿದೆ. ಅದೇ ಉದ್ದೇಶದಿಂದ ಎನ್.ಎಸ್.ಎಸ್. ಘಟಕದ ಮೂಲಕ ಶ್ರಮದಾನ, ಸ್ವಚ್ಛತಾ ಅಭಿಯಾನ, ಜನಜಾಗೃತಿ ಜಾಥಗಳು, ವಿಶೇಷ ಉಪನ್ಯಾಸಗಳು, ಜಾಗೃತಿ ಶಿಬಿರಗಳು ಹೀಗೆ ಇನ್ನೂ ಅನೇಕ ರಚನಾತ್ಮ ಚಟುವಟಿಕೆಗಳ ಮೂಲಕ ಯುವಜನರನ್ನು ಜಾಗೃತಗೊಳಿಸುವ ಕಾರ್ಯ ಎನ್.ಎಸ್.ಎಸ್.ಘಟಕಗಳು ಮಾಡುತ್ತಿವೆ ಎಂದು ತಿಳಿಸಿದರು. ಯನಗುಂದಾ ಗ್ರಾಮದ ಗಣ್ಯರಾದ ಶಿವರಾಜ ದೇಶಮುಖರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಶಿಸ್ತು, ಶಾಂತಿ, ಸಹಬಾಳ್ವೆ, ಸಂಘಟನೆ, ಸಾಹಿತ್ಯದ ಅಭಿರುಚಿ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ನಿರುದ್ಯೋಗ, ಭ್ರಷ್ಟಾಚಾರ, ಅನ್ಯಾಯ ಅತ್ಯಾಚಾರಗಳು ನಿಲ್ಲಬೇಕಾದರೆ ನಮ್ಮ ಯುವಕರು ಜಾಗೃತರಾದಾಗ ಮಾತ್ರ ಸಾಧ್ಯ. ದೇಶಕ್ಕಾಗಿ ನಾವೇನು ಮಾಡಬೇಕು ಎನ್ನುವುದು ತುಂಬಾ ಮುಖ್ಯ, ನಾವೆಲ್ಲರೂ ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಯೋಚಿಸುತ್ತೇನೆ ಆದರೆ ನಾವು ನಮ್ಮ ಕರ್ತವ್ಯದ ಬಗ್ಗೆಯು ಆಲೋಚಿಸಬೇಕು ಅಂದಾಗಲೇ ಮಾತ್ರ ನಾವು ನಮ್ಮ ದೇಶವನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗಲು ಸಾಧ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ *ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ* ಜಂಟಿ ಕಾರ್ಯದರ್ಶಿ ಧನರಾಜ ತಾಂಡುರೆ, ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ, ಯನಗುಂದಾ ಗ್ರಾಮದ ಪ್ರಮುಖರಾದ ಗುರಯ್ಯ ಸ್ವಾಮಿ, ಗೋಪಾಲರಡ್ಡಿ ಬರ್ಯೆ, ಜಗದೀಶ ಪಾಟೀಲ್, ಬಸವರಾಜ ದೇಶಮುಖ, ಕೃಷ್ಣಾ, ಹಾಗೂ ಎನ್.ಎಸ್.ಎಸ್. ಅಧಿಕಾರಿ ಉತ್ತಮ ದಂಢೆ, ಶಿಕ್ಷಕರಾದ ಖುರಮ್ ಮರ್ತುಜಾ, ಮಲ್ಲಿಕಾರ್ಜುನ ಟಂಕಸಾಲೆ, ಮತ್ತು ಕಾಲೇಜಿನ ಪ್ರಾಧ್ಯಾಪಕರಾದ ಉತ್ತಮ ಜಾದವ, ಕಪೀಲ ಡೋಣಗಾವೆ, ತುಳಸಿರಾಮ ಮಾನೆ, ಮಲ್ಲಿಕಾರ್ಜುನ ಭಾಲ್ಕೆ, ಶಿವರಾಮ ರಾಠೋಡ, ಶೇಖ್ ಮುಜಿಬ್, ಪ್ರೀಯಾ ಸದಾಫುಲೆ, ಆರತಿ ನೌಬಾದೆ, ಸಿಕಂದರ ಚವ್ಹಾಣ, ನಿರ್ಮಲಾ ಶಿವಪೂಜೆ, ರಾಜಲಕ್ಷ್ಮಿಕಾಂತಹಾಗೂ  ಶಿಬಿರಾರ್ಥಿಗಳು  ಭಾಗವಹಿಸಿದರು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಟಂಕಸಾಲೆ ಸ್ವಾಗತಿಸಿದರು, ಪ್ರಾಧ್ಯಾಪಕರಾದ ಉತ್ತಮ ಜಾಧವ ನಿರೂಪಿಸಿದರು. ಎನ್. ಎಸ್.ಎಸ್. ಅಧಿಕಾರಿಗಳಾದ ಉತ್ತಮ ದಂಡೆ ಅವರು ವಂದಿಸಿದರು.

ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. Read Post »

ಪುಸ್ತಕ ಸಂಗಾತಿ

ಹೆಚ್‌ ಎಸ್ ಗೋವಿಂದಗೌಡ ಅವರ ಕೃತಿ “ಕಂಪನಿ ಕಲಾವಿದರು”ಅವಲೋಕನ ಗೊರೂರು ಅನಂತರಾಜು

ಪುಸ್ತಕ ಸಂಗಾತಿ ಗೊರೂರು ಅನಂತರಾಜು ಹೆಚ್‌ ಎಸ್ ಗೋವಿಂದಗೌಡ “ಕಂಪನಿ ಕಲಾವಿದರು”ಅವಲೋಕನ ಅರಕಲಗೊಡು ತಾ. ಹನ್ಯಾಳು ಗ್ರಾಮದ ಹೆಚ್.ಎಸ್.ಗೋವಿಂದಗೌಡರು ಸದ್ಯ ಮೈಸೂರು ವಾಸಿ. ಪೌರಾಣಿಕ ರಂಗನಟರಾದ ಇವರು ರಂಗಕೃತಿಗಳ ಪ್ರಕಟಣೆ ಕೂಡ ಮಾಡುತ್ತಾ ರಂಗಸೇವೆಯಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊನ್ನೆ ಇವರನ್ನು ಮನೆಯಲ್ಲಿ ಭೇಟಿಯಾದೆ. ಇತ್ತೀಚಿಗೆ ಮೈಸೂರಿನಲ್ಲಿ ಬಿಡುಗಡೆಯಾದ ಕೆಲವು ರಂಗಕೃತಿಗಳನ್ನು ನೀಡಿದರು. ಅದರಲ್ಲಿ ಕಂಪನಿ ಕಲಾವಿದರು ಒಂದು. ಇದರಲ್ಲಿ ನಾಟಕ ಕಂಪನಿಗಳ ಕಲಾವಿದರನ್ನು ಮಾತ್ರ ಪರಿಚಯ ಮಾಡಿದ್ದೇನೆ ಎಂದರು. ನಾನು (ಗೊರೂರು ಅನಂತರಾಜು) ೨೦೧೧ರಲ್ಲಿ ಪ್ರಕಟಿಸಿದ ಅಭಿನಯ ಅಭಿವ್ಯಕ್ತಿ ಕೃತಿಯಲ್ಲಿ ಸುಮಾರು ೧೫೦ ಮಂದಿ ರಂಗ ಕಲಾವಿದರನ್ನು ಪರಿಚಯಿಸಿದಂತೆಯೇ  ಲೇಖಕರು ನಾಟಕ ಕಂಪನಿ ಕಲಾವಿದರ ಕಿರು ಪರಿಚಯ ಮಾಡಿರುವರು. ಅರಮನೆಯಲ್ಲಿ ಪ್ರತಿವರ್ಷ ಗೌರಿ ಹಬ್ಬದಲ್ಲಿ ಗೌರಿಪೂಜೆ ಮಾಡುತ್ತಿದ್ದರಾದ್ದರಿಂದ ಗೌರಿ ನರಸಿಂಹಯ್ಯ ಎಂದೇ ಕರೆಯಲ್ಪಟ್ಟ ಗೌರಿ ನರಸಿಂಹಯ್ಯನವರು ಹರಿಶ್ಚಂದ್ರ, ಶೂರಸೇನ, ರತ್ನಾವಳಿ, ಮಂದಾರವಲ್ಲಿ, ದ್ರೌಪದಿ, ಚಂದ್ರಮತಿ ಪಾತ್ರಗಳನ್ನು ನಿರ್ವಹಿಸಿದವರು. ೧೮೭೮ರಲ್ಲಿ ಮುಂಬೈನ ಮರಾಠಿ ಹಾಗೂ ಪಾರ್ಸಿ ನಾಟಕಗಳಿಂದ ಪ್ರಭಾವಿತರಾಗಿ ಇಂದ್ರಸಭಾ ಬಾಣಾಸುರೋಪಾಖ್ಯಾನ ನಾಟಕ ೧೮೮೧ರಲ್ಲಿ ಅಂದಿನ ದಿವಾನರು ರಂಗಾಚರ‍್ಲು ಅವರ ಅಧ್ಯಕ್ಷತೆಯಲ್ಲಿ ನಾಯಕನ ಪಾತ್ರದಲ್ಲಿ ರಂಗಗೀತೆ ಗಾಯನದಿಂದ ಪ್ರೇಕ್ಷಕರ ಮನಸೂರೆಗೊಂಡವರು ಮಂಡ್ಯ ರಂಗಾಚರ‍್ಯರು. ಉಡುಪಿ ಬಳಿಯ ನಂದಳಿಕೆ ಗ್ರಾಮದಲ್ಲಿ ೧೮೬೬ರಲ್ಲಿ ಜನಿಸಿದ ಬಿಡಾರಂ ಕೃಷ್ಣಪ್ಪನವರು ಯಕ್ಷಗಾನ ಮಂಡಳಿಯವರು ಆಡುತ್ತಿದ್ದ ದಶಾವತಾರ ನಾಟಕದಲ್ಲಿ ಸ್ತಿçà ಪಾತ್ರ ಮಾಡುತ್ತಿದ್ದರು. ವಿರಾಟಪರ್ವ ಗಯಚರಿತ್ರೆ ನಾಟಕ ಬರೆದ ಗಿರಿಭಟ್ಟರ ತಮ್ಮಯ್ಯ ನವರು ಶಾಕುಂತಲ ನಾಟಕದಲ್ಲಿ ಕಣ್ವ ಋಷಿಯ ಪಾತ್ರಕ್ಕೆ ಖ್ಯಾತಿ ಪಡೆದಿದ್ದರು. ೩೩ ವರ್ಷ ಕಲಾವಿದರಾಗಿದ್ದ ಲಕ್ಷಿö್ಮÃಪತಿಶಾಸ್ತಿç ಆಲ್ ರೌಂಡ್ ಆಕ್ಟರ್. ಅರಮನೆಯಲ್ಲಿ ವಿದೂಷಕನಾಗಿ ತೆಳ್ಳಗೆ ಕುಳ್ಳಗೆ ಇದ್ದ ಪುಟ್ಟಾರಿಶಾಸ್ತಿç ಹಾಸ್ಯ ಪಾತ್ರದಾರಿ. ಬಸವಪ್ಪ ಶಾಸ್ತಿçಗಳು ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಮೇಲೆ ೧೮೮೧ರಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಅರಮನೆ  ಕಂಪನಿಯ ಗಿರಿಭಟ್ಟರ ತಮ್ಮಯ್ಯ, ಲಕ್ಷಿö್ಮÃಪತಿಶಾಸ್ತಿçಗಳ ಜೊತೆಗೆ  ದುಷ್ಯಂತನ ಪಾತ್ರದಲ್ಲಿ ಯಶಸ್ಸು ಗಳಿಸಿದ ನಟರು ನಟಶೇಖರ ಎಂ.ಡಿ.ಸುಬ್ಬಣ್ಣನವರು. ಅರಮನೆ ಕಂಪನಿ ೧೯೧೭ರಲ್ಲಿ ಕೊನೆಗೊಂಡು ೧೯೧೯ರಲ್ಲಿ ಶಾಕುಂತಲ ಕರ್ನಾಟಕ ನಾಟಕ ಸಭಾ ಎಂಬ ಹೆಸರಿನಿಂದ ಪ್ರಾರಂಭಗೊAಡು ಮದ್ರಾಸಿಗೆ ಪ್ರಯಾಣ ಮಾಡಿ ರಾಣಿ ಪಾತ್ರದಲ್ಲಿ ಟಿ.ನರಸೀಪುರದ ಎನ್.ಸುಬ್ಬಣ್ಣ ಮತ್ತು ರಾಜಪಾರ್ಟಿನ ವಿದ್ವಾನ್ ಬಿ.ರಾಚಪ್ಪನವರ ರಾಜನ ಪಾತ್ರದ ನಟನೆಗೆ ಜನ ಮೆಚ್ಚಿ  ಬಂಗಾರದ ಪದಕ ಕೊಟ್ಟರು.ರಂಗದಿAದ ಸಿನಿಮಾರಂಗಕ್ಕೆ ಬಂದ ಜಿ.ವಿ.ಅಯ್ಯರ್ ತಮ್ಮ ೮ನೇ ವಯಸ್ಸಿನಲ್ಲೇ ಗುಬ್ಬಿ ಕಂಪನಿ ಸೇರಿದವರು. ರಾಜವಿಕ್ರಮ ನಾಟಕದಲ್ಲಿ ಭಟ್ಟಿ ಎಂಬ ಮಂತ್ರಿ ಪಾತ್ರ ಮಾಡುತ್ತಿದ್ದ ಟಿ.ನರಸೀಪುರ ತಾ. ಮುಸುವಿನ ಕೊಪ್ಪಲು ಭಟ್ಟಿಮಹದೇವಪ್ಪ ಮತ್ತು ಮಳವಳ್ಳಿ ತಾ. ಬೆಳಕವಾಡಿಯ ಶನಿದೇವರ ಪಾತ್ರ ನಟನೆಯಿಂದ ಶನಿಮಹದೇವಪ್ಪ  ಎಂದು ಖ್ಯಾತರಾದ ಇವರು ಸಿನಿಮಾ ರಂಗದಲ್ಲಿ ಬೆಳಗಿದವರು. ಹಾಸನ ಜಿಲ್ಲೆಯ ರಾಜಾನಂದ್ ೩೦ಕ್ಕೂ ಹೆಚ್ಚು ವರ್ಷ ನಾಟಕ ರಂಗದಲ್ಲಿದ್ದು ನಾಟಕಗಳನ್ನು ಬರೆದವರು. ಚಕ್ರತೀರ್ಥ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ೩೦೦ ಚಿತ್ರಗಳಲ್ಲಿ ನಟಿಸಿದ ಇವರ ಶ್ರೀ ಶಿರಡಿ ಸಾಯಿಬಾಬಾ ಮಹಾತ್ಮೆ, ಮಕರಜ್ಯೋತಿ ಮಣಿಕಂಠ ನಾಟಕಗಳನ್ನು  ಗೋವಿಂದಗೌಡರು  ಪ್ರಕಟಿಸಿದ್ದಾರೆ. ವಿಶೇಷ ಧ್ವನಿಯ ಚಿತ್ರನಟ ಕೆ.ಎಂ.ರತ್ನಾಕರ್, ಹೊ.ನ.ಪುರ ತಾ. ಜೋಡಿಗುಬ್ಬಿಯ ಕಂಚಿನ ಕಂಠದ ಚಿತ್ರನಟ ಧೀರೇಂದ್ರ ಗೋಪಾಲ್, ನಂಜನಗೂಡು ಚಿತ್ರರಂಗದ ಖಳನಟ ನಾಗಪ್ಪ, ಪೋಷಕ ಪಾತ್ರದ ಚಿತ್ರನಟ ದ.ಕ.ದ  ಸದಾಶಿವ ಬ್ರಹ್ಮಾವರ್, ಚಿಂತಾಮಣಿಯ ಚಿತ್ರನಟಿ ಎಂ.ಎನ್.ಲಕ್ಷಿö್ಮÃದೇವಿ, ಚೋಮನದುಡಿ ಖ್ಯಾತಿಯ ಸ್ವರ್ಣಕಮಲ ಪ್ರಶಸ್ತಿ ವಿಜೇತ ಮೂಡುಬಿದರೆಯ ಎಂ.ವಿ.ವಾಸುದೇವರಾವ್, ಪರಸಂಗ ಗೆಂಡೆತಿಮ್ಮ ಚಿತ್ರದಿಂದ ಪ್ರಸಿದ್ಧಿಯಾದ ಡಿಂಗ್ರಿ ನಾಗರಾಜ್, ೪ನೇ ವಯಸ್ಸಿಗೆ ಬಣ್ಣ ಹಚ್ಚಿದ ಚಿತ್ರನಟ ಎಂ.ಎಸ್.ಉಮೇಶ್. ವಿಲನ್ ಆಗಿ ಚಿತ್ರರಂಗಕ್ಕೆ ಬಂದು ಹಾಸ್ಯನಟರಾದ ಮೈಸೂರಿನ ದಿನೇಶ್, ೭೫ ಚಿತ್ರಗಳಲ್ಲಿ ನಟಿಸಿ ೩ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮಂಗಳೂರಿನ ಕಲ್ಪನಾ, ಭೂತಯ್ಯನ ಮಗ ಅಯ್ಯು ಚಿತ್ರದ ನಟನೆಗೆ ಪ್ರಶಸ್ತಿ ವಿಜೇತ ಲೋಕೇಶ್, ದೆಹಲಿಯ ರಂಗಶಾಲೆಯಲ್ಲಿ ತರಬೇತಿ ಪಡೆದ ಗುಬ್ಬಿ ವೀರಣ್ಣನವರ ಮೊಮ್ಮಗಳು ಜಯಶ್ರೀ ಬಿ. ಕಂಠದಾನ ಕಲಾವಿದೆ ಸರ್ವಮಂಗಳ, ಸುಬ್ಬಾಶಾಸ್ತಿç, ಸಂಸ್ಕಾರ, ಕಾಡು ಚಿತ್ರಗಳಲ್ಲಿ ನಟಿಸಿರುವ ಜಿ.ವಿ.ಶಿವಾನಂದ, ಚಿತ್ರರಂಗದಲ್ಲಿ ಮಿಂಚಿರುವ  ಶರಣ್ ಹಾಗೂ ಶೃತಿ ಅವರ ತಂದೆ ಜಿ.ವಿ.ಕೃಷ್ಣ ಇವರ ನಾಟಕ ಕಂಪನಿಯ ಪಾತ್ರದ ಕಿರು ಪರಿಚಯ ಮಾಡಿದ್ದಾರೆ. ೧೯೭೦ರ ದಶಕದಲ್ಲಿ ಕುರುಕ್ಷೇತ್ರ ನಾಟಕವೆಂದರೆ ಪಿ.ವಜ್ರಪ್ಪ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಇವರು ನೂರಾರು ರಂಗಗೀತೆಗಳನ್ನು ಬರೆದಿರುವರು. ಐದು ದಶಕ ವೃತ್ತಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಮಾಲತಿಶ್ರೀ ಮೈಸೂರು ಇವರ ಪರಿಚಯ ಒಳಗೊಂಡು ಎಲೆಮರೆಕಾಯಿ ಯಂತೆ ಇದ್ದು ಮರೆಯಾಗಿ ಹೋದ ಅನೇಕ  ಕಲಾವಿದರನ್ನು ಪರಿಚಯಿಸಿದ್ದಾರೆ. ಅರಮನೆ ಕಂಪನಿ ಸಮಕಾಲೀನರು ಬೋಧರಾಯ, ಸಂಗೀತಗಾರ ಸದಾಶಿವರಾಯರ ಮೊಮ್ಮಗ ಸರ್ಟನ್ ರಾಮರಾವ್, ಹರ‍್ಮೋನಿಯಂ ವಾದ್ಯದ ಬೆಂಗಳೂರಿನ ಅರುಣಾ ಚಲಪ್ಪ, ಶಿವಮೊಗ್ಗದ ಸಿ.ಬಿ.ಜಯರಾಮ್, ಸದಾರಮೆ ನಾಟಕದ ಕಾಲಾಪಿಲ್ಲಯ್ಯ, ಮೈಸೂರು  ಬೆಳಕವಾಡಿಯ ಶ್ರೀನಿವಾಸ ಅಯ್ಯಂಗಾರ್, ಕೋಲಾರ ಕುರುಡಿ ಗ್ರಾಮದ  ಸಂಗೀತರತ್ನ ಚಿಕ್ಕರಾಮರಾಯ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ಬುಜಭಲದಂತಿದ್ದ ಕೃಷ್ಣಮೂರ್ತಿರಾಯ, ತುಮಕೂರು ದ್ಯಾವರಾಯಪಟ್ಟಣದ ಡಿ.ಆರ್.ಕೃಷ್ಣಮೂತಿಥ,  ಗುಂಡ್ಲುಪೇಟೆಯ ಕಲಿಯುಗ ಭೀಮ   ಜಿ.ವಿ.ಕೃಷ್ಣಮೂರ್ತಿ, ಚಿತ್ರಕಲೆಯ ಅಚಾರ್ ಕೆ.ವಿ, ಸೊರಬ ತಾ. ಮೂಡಿಯ ಅಣ್ಣಪ್ಪ ಎಂ.ಎಸ್, ಮೈಸೂರು ಹಳೇ ಬಂಡಿಕೇರಿಯ ಹಾರ್ಮೋನಿಯಂ ಎಂ.ಶಿವಪ್ಪ, ಚಿಕ್ಕನಾಯಕನಹಳ್ಳಿಯ ಸಿ.ಎಲ್.ರಾಮರಾಜೇ ಅರಸ್, ಗುಬ್ಬಿ ಕಂಪನಿಯ ಜಿ.ವಿ. ಸುಂದರಮ್ಮ, ಪ್ರಾಕ್ಟೀಸ್ ಮೇನೇಜರ್ ಮುನಿಯಪ್ಪ, ಟಿಪ್ಪುಸುಲ್ತಾನ್ ನಾಟಕದ ಮೀರ್ ಸಾದಿಕ್ ಪಾತ್ರ ಖ್ಯಾತಿಯ ಸಾಗರ ತಾ. ಮುಡಗೋಡು ಗ್ರಾಮದ ಎಂ.ಶಾAತ ಕುಮಾರ್, ಕನ್ನಡ ರಂಗಭೂಮಿ ಚಾಣಕ್ಯ ಎಂ.ಸಿ.ಮಹದೇವಸ್ವಾಮಿ, ಹರಿಕಥೆ ಮಾಡುತ್ತಾ ಹರಿಕಥಮ್ಮ ಎಂದೇ ಕರೆಯಲ್ಪಟ್ಟ ವೆಂಕಟೇಶಮ್ಮ, ಗುಬ್ಬಿ ಕಂಪನಿ ಸ್ತಿçà ಪಾತ್ರದಾರಿ ತ್ರಿಪುರಾಂಬ, ೭೬ ವರ್ಷ ಸುಧೀಘ  ರಂಗಸೇವೆಯ ಮೈಸೂರು ಆರ್. ಮಂಜುಳಮ್ಮ, ಕೆ.ಆರ್.ಪೇಟೆ ಹೊಸಹೊಳಲು ಗ್ರಾಮದ ಎಚ್.ಆರ್.ನಂಜಶೆಟ್ಟರು,  ಆಂಜನೇಯ ಪಾತ್ರ ಖ್ಯಾತಿಯ ಬೆಳ್ಳೂರು ನಂಜುAಡಯ್ಯ ಉತ್ತರ ಕರ್ನಾಟಕದವರು.  ಬಿ.ಎಂ.ಸೀತರಾಮರಾಜು ಜನಪ್ರಿಯ ಸಂಗೀತ ನಿರ್ದೇಶಕರು. ಗುಬ್ಬಿ ವೀರಣ್ಣರ ಮಗ ಚನ್ನಬಸವಣ್ಣ, ಪೇಂಟರ್ ಎಲ್.ನಾರಾಯಣಯ್ಯಂಗಾರ್, ಬೆಂಗಳೂರು ಪದ್ಮ ವೇಣುಗೋಪಾಲ್, ಮಾವನ ಮನೆ ನಾಟಕದ ಭಾಗೀರಥಿ ಪಾತ್ರದಾರಿಣಿ ಪ್ರಭಾ ಜಿ.ಸಿ.ಬಸವರಾಜು, ಮೇಲುಕೋಟೆ ಎಂ.ಎನ್.ಪ್ರೇಮಕುಮಾರಿ ಕೂಡಿ ಬಾಳೋಣ ಚಲನಚಿತ್ರದಲ್ಲಿ ನಟಿಸಿರುವರು.  ೯೮ ವಯಸ್ಸಿನ  ಕುಪ್ಯ ಎಂ.ಎಸ್.ವೆAಕಟರಾA ಲೇಖಕರಿಗೆ ತಾವು ಕಂಡ ಇಲ್ಲಿಯ ಕೆಲವು ನಟರ ಪಾತ್ರಾಭಿನಯ ಮಾಹಿತಿ ನೀಡಿರುವರು. ಇವರ ಪರಿಚಯವನ್ನು ನಾನು ನಿಂತು ಹೋದ ರಂಗವೈಭವ ಪುಸ್ತಕದಲ್ಲಿ ಮಾಡಿರುವೆನು. ಉಡುಪಿ ಕಡೆಯ ಬಂಗೇರ ಐತಪ್ಪ, ಮೇಕಪ್ ಮಾಡುವ ತರೀಕೆರೆ ಕೃಷ್ಣಮೂರ್ತಿ, ಸ್ತಿçà ನಾಟಕ ಮಂಡಳಿ ನರ್ತಕಿ ಎಂ.ಕೆ.ಸುಜಾತ, ಚನ್ನರಾಯಪಟ್ಟಣ ತಾ. ಚಿಕ್ಕೋನಹಳ್ಳಿಯ ಸಿ.ವಿ.ವೀರಭದ್ರಾಚಾರ್, ಶೃಂಗೇರಿಯ ಪ್ರಸಿದ್ಧ ನಟಿ ಬಿ.ಎಸ್.ಮಂಜುಳಾ ಅವರ ಸಹೋದರಿ ಬಿ.ಎಸ್.ಪೂರ್ಣಿಮ, ಗುಬ್ಬಿ ತಾ. ಒಡೆಯರ್ ಮಟಿಘಟ್ಟ ಗ್ರಾಮದ ಚನ್ನಬಸವಯ್ಯ, ಮೈಸೂರು ಟಿ.ಎಸ್. ದೊರೆಸ್ವಾಮಿ, ಅರಸೀಕೆರೆ ತಾ. ಯೆರಗೇನಹಳ್ಳಿಯ ರಂಗಸAಗೀತ ಶಿಕ್ಷಕರು ವೈ.ಎಂ.ಪುಟ್ಟಣ್ಣಯ್ಯ, ೨ನೇ ಮಳವಳ್ಳಿ ಸುಂದರಮ್ಮ ಎಂದು ರಂಗದಿಗ್ಗಜ ಹೊನ್ನಪ್ಪ ಭಾಗವತರಿಂದ ಕರೆಸಿಕೊಂಡಿದ್ದ ಮೈಸೂರಿನ ಕಲಾವತಿ, ಶ್ರೀಕೃಷ್ಣಲೀಲೆ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ರಂಗನಾಯಕಿ ಎಂದು ಮರುನಾಮಕರಣಗೊಂಡ ಬೆಂಗಳೂರಿನ ನಿರ್ಮಲ, ಕೋಲಾರದ ಕಲಾರತ್ನ ಕೆ.ಎನ್.ಬಸವರಾಜು, ಮಂಡ್ಯದ ಎನ್.ಶಾಂತಮ್ಮ, ಇಂದಿಗೂ ನಟಿಸುತ್ತಿರುವ ಮೈಸೂರಿನ ಎಸ್.ಸರೋಜಿನಿ, ಆಲನಹಳ್ಳಿಯ  ಎ.ಪಿ.ರಾಜಪ್ಪ, ನಂಜನಗೂಡು ತಾ. ಬಿಳಗಲಿ ಗ್ರಾಮದ ಸುಲೋಚನ ಇವರಿಗೆೆ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇತ್ತೀಚಿಗೆ ೨೭-೧-೨೦೨೬ರಂದು ನಿಧನರಾದ ಮಂಡ್ಯ ನಾಗರಾಜಾಚಾರ್ ಇವರು ಹಾಸನದಲ್ಲಿ ರಾಮಾಯಣ ನಾಟಕ ಕಲಿಸಿ ಅವರನ್ನು ಮಾತನಾಡಿಸಿದ್ದೆನು.  ಚಿಕ್ಕನಾಯಕನಹಳ್ಳಿಯ ಹಾಸ್ಯ ಕಲಾನಿಪುಣ ಬಿ.ಕೆ. ಪಂಚಲಿAಗಯ್ಯ ಇವರ ಚಿಕ್ಕಪ್ಪ ರಂಗದಿಗ್ಗಜ ಸಿ.ಬಿ.ಮಲ್ಲಪ್ಪನವರು. ಕಲಾತಪಸ್ವಿ ಬಿ.ಕೆ.ಈಶ್ವರಪ್ಪ  ಇವರ ರಂಗಪರಿಚಯವನ್ನು ನಾನು  ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ ಕೃತಿಯಲ್ಲಿ    ಮಾಡಿರುವೆನು. ತುಮಕೂರು ಮಲ್ಲಸಂದ್ರದ ಡಾ.ಲಕ್ಷö್ಮಣದಾಸ್ ಇದೇ ಕೃತಿಗೆ ಆಶಯನುಡಿ ಬರೆದಿರುವರು. ಚಾಮರಾಜನಗರ ಆಲೂರು ಗ್ರಾಮದ ನಾಗರಾಜು, ತಬಲವಾದಕ ವಿ.ಎಂ.ಧನಪಾಲ್, ಕೊಪ್ಪಳ  ಕುಕನೂರಿನ ಸರಸ್ವತಿ ಜುಲೇಖಾ ಬೇಗಂ, ತಿಪಟೂರಿನ ಟಿ.ಎಚ್.ಹೇಮಲತ, ಈಗಲೂ ರಂಗದಲ್ಲಿರುವ ಅರಳಗುಪ್ಪೆಯ ಎನ್.ಸುಮಿತ್ರಮ್ಮ, ಇದೇ ಊರಿನ ನೀಲಕಂಠಾಚಾರ್, ಕಾಮಿಡಿ ಪಾತ್ರದಾರಿ ಎಂ.ನಾಗರಾಜ್ ಇವರ ದೊಡ್ಡಪ್ಪ ಚಿತ್ರನಟ ಡಿಕ್ಕಿಮಾಧವರಾವ್. ಮೈಸೂರಿನ ಕಲಾವಿದೆಯರು ಕಮಲಮ್ಮ, ಇಂದ್ರಾಣಿ, ಹೇಮಲತಾ,  ವಸಂತಕುಮಾರಿ. ಸುವರ್ಣಮ್ಮ, ಮಂಜುಳಾರಾಜ್, ಎಸ್.ಭಾರತಿ, ಶಕುಂತಲಾ ವಾಸುದೇವನ್ ಇವರುಗಳ ಪರಿಚಯವಿದೆ.  ತಿಪಟೂರು ತಾ. ಕೋಟನಾಯಕನಹಳ್ಳಿಯ ಪರಪ್ಪ, ಇದೇ ತಾ. ಹೊನ್ನವಳ್ಳಿಯ ಲಕ್ಷö್ಮಮ್ಮ ಇವರ ಸೋದರಮಾವ ಚಿತ್ರನಟ ನರಸಿಂಹರಾಜು.   ಅರಸೀಕೆರೆ ತಾ. ಬಾಣಾವರದ ಬಿ.ಲೀಲಾವತಿ, ಸೊಲ್ಲಪುರ ಗ್ರಾಮದ ಎಸ್.ಎಸ್.ಗಾಯಿತ್ರಿ, ಬೆಂಗಳೂರು ಬಿ.ಎ. ಶಾಂತಮ್ಮ,  ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹೆಚ್.ಕೆ.ಯೋಗಾನರಸಿಂಹ ಅವರ ಪುತ್ರ ಮೈಸೂರು ಎಚ್.ವೈ.ರಾಜೇಶ್ವರ್, ಸೋಮವಾರಪೇಟೆಯ ಮೇರಿ ವಸಂತ ಮತ್ತು ಇವರ ಯಜಮಾನರು ವಸಂತಕುಮಾರ್, ಇಂದಿಗೂ ರಂಗಸೇವೆ ಮುಂದುವರೆಸಿರುವ  ಜಯಂತಿ ಇವರ  ಯಜಮಾನರು ಕಳಲೆ ದೊರೆಯವರು. ಹರಿಹರದ ರಾಜೇಶ್ವರಿ, ನಂಜನಗೂಡು ತಾ. ಹುರ ಗ್ರಾಮದ ಎಚ್.ಎನ್.ಶೇಷಾಚಲ, ಮಂಡ್ಯ  ಗಂಜಾAನವರಾದ ಮಂಗಳಗೌರಿ, ಮೈಸೂರು ಶ್ರೀಕಂಠು, ಐದು ದಶಕಗಳ ಕಾಲ ರಂಗ ಸೇವೆ ಮಾಡಿದ ಲಕ್ಷö್ಮಮ್ಮ, ಸರಗೂರು ಶ್ರೀಪತಿರಾವ್, ಗುಬ್ಬಿ ಮುರಳೀಧರ್, ತುರುವೇಕೆರೆ ತಾ. ಸಂಪಿಗೆ ಗ್ರಾಮದ ಶಂಕರ್, ಹೊಸದುರ್ಗ ತಾ. ಕಾಮಸಂದ್ರದ ನರಸಿಂಹಮೂರ್ತಿ, ಸೋದರ ಸಂಬAಧಿ ಬಂಧುಗಳಾಗಿದ್ದ ಅಡಗೂರು ಬಸವರಾಜು, ಶಿವಲಿಂಗಯ್ಯ, ಸಿದ್ಧಲಿಂಗಮರಿಗಳು, ತುಮಕೂರು  ಸೀತಕಲ್ ಕೃಷ್ಣಮೂರ್ತಿ, ನಂಜನಗೂಡು ತಾ. ಮೂಲದ ಎನ್.ಎಸ್.ಮೂರ್ತಿ, ಗುಬ್ಬಿ ಕಂಪನಿಯ ಬ್ರಾಂಚ್ ಕಂಪನಿ ಬಾಲ ಕಲಾವರ್ಧನಿ ಕಲಾವಿದರು ಶ್ರೀಕಂಠಾಚಾರ್, ಹರ‍್ಮೋನಿಯಂ ಮಾಸ್ಟರ್ ಸಕ್ಕರೆ ಪಟ್ಟಣದ ಶಾಮಣ್ಣಿ, ಟಿ.ನರಸೀಪುರ ಚಿದರಹಳ್ಳಿ ಗ್ರಾಮದ ಸಿ.ಎನ್.ಶ್ರೀಕಂಠಮೂರ್ತಿ, ನಾಟಕ ಕಂಪನಿಗಳಲ್ಲಿ ಜೋಡಿ ನೃತ್ಯಗಾರ್ತಿ ಸಹೋದರಿಯರು ರಾಧಾ ಮತ್ತು ಶಾಂತ ಹಾಗೂ ಕಡೆಗೆ ಹರ‍್ಮೋನಿಯಂ ಜಾದುಗಾರ ಮೇಲುಕೋಟೆ ಎಂ.ಶ್ರೀಕAಠಶೆಟ್ಟರ ಪರಿಚಯ ಸೇರಿದಂತೆ ೧೨೫ ರಂಗ ಕಲಾವಿದರ ಪರಿಚಯ ಒಳಗೊಂಡ ಕಂಪನಿ ಕಲಾವಿದರು ಕೃತಿ ಗತಿಸಿಹೋದ ನಾಟಕ ಕಂಪನಿಗಳನ್ನು ಜೊತೆಗೆ ಪರಿಚಯಿಸುತ್ತದೆ. ಗೊರೂರು ಅನಂತರಾಜು, ಹಾಸನ. ಪ

ಹೆಚ್‌ ಎಸ್ ಗೋವಿಂದಗೌಡ ಅವರ ಕೃತಿ “ಕಂಪನಿ ಕಲಾವಿದರು”ಅವಲೋಕನ ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ

ಪುಸ್ತಕ ಸಂಗಾತಿ ತಿಲಕಾ ನಾಗರಾಜ್ ಹಿರಿಯಡಕ ಡಾ| ಶ್ರುತಿ ಮಧುಸೂದನ್ “ಪೇರಳೆ ಕಾಕು” ಜೀವನದಲ್ಲಿ ಸದಾ ಜೊತೆಗಿದ್ದು, ನಿಸ್ವಾರ್ಥದಿಂದ, ಮುನ್ನಡೆಸೋ ಗೆಳೆಯ ಅಥವಾ ಗೆಳತಿ ಯಾರಾದರೂ ಇದ್ದಾರೆ ಅಂದ್ರೆ ಅದು ಪುಸ್ತಕ ಮಾತ್ರ. ಪುಸ್ತಕ ಯಾವತ್ತೂ ನಮಗೆ ಮೋಸ ಮಾಡೋದಿಲ್ಲ. ಬದಲಾಗಿ, ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ನಮ್ಮನ್ನು ಪ್ರಬುದ್ಧರನ್ನಾಗಿಸುತ್ತದೆ. ನಾನಿಂದು ನಿಮಗೆಲ್ಲ ಪರಿಚಯಿಸ ಹೊರಟಿರುವ ಪುಸ್ತಕದ ಹೆಸರು “ಪೇರಳೆ ಕಾಕು”.           ಪೇರಳೆ ಕಾಕು ರುದ್ರಾಗ್ನಿ ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ. ಇಲ್ಲಿ ಒಟ್ಟು 13 ಕಥೆಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ.  ಪುಟಗಳನ್ನು ತೆರೆಯುತ್ತಾ ಹೋದಂತೆ ಎಲ್ಲಾ ಕತೆಗಳು ನಿಮ್ಮನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಓದಿಸಿಕೊಂಡು ಹೋಗುತ್ತವೆ. ನೀವೇನಾದ್ರು ಈ ಪುಸ್ತಕ ಹಿಡಿದಿರೋ ಅದ್ಭುತವಾದ ಕಥಾಲೋಕದಲ್ಲಿ ಸಂಚರಿಸುತ್ತಿರುವ  ಅನುಭವ ನಿಮ್ಮದಾಗುತ್ತದೆ. ಅಷ್ಟರಮಟ್ಟಿಗೆ ರುದ್ರಾಗ್ನಿ ತಮ್ಮ ಪದಗಳ ಮೂಲಕ ಜಾದು ಮಾಡಿದ್ದಾರೆ.ಪೇರಳೆ ಕಾಕು, ರಾಸತಿ,  ಸಾರ, ತಾರಾ, ರಾವತಿ, ಪಾಂಡು, ಧಾತ್ರಿ ಹೀಗೆ ಹಲವು ಪಾತ್ರಗಳು ಕಥೆ ಓದಿ ಮುಗಿದ ಮೇಲೂ ಮತ್ತೆ ಮತ್ತೆ ಕಾಡುತ್ತವೆ. ಛೆ! ಎಂದು ನೀಡುಸುಯ್ಯುವಂತೆ ಮಾಡುತ್ತವೆ. ಹಾಗಾದ್ರೆ ಎಲ್ಲವೂ ದುಖಾಂತ್ಯ ಕಥೆಗಳೇನು? ಅಂದ್ಕೊಂಡ್ರ ಅಲ್ಲ ಇಲ್ಲಿ ಸುಖಂತ್ಯ ಕಥೆಗಳು ಇವೆ. ಗಂಡ ತರುವ ಸಂಭಳವನ್ನು ಹೊಟ್ಟೆ ಬಟ್ಟೆ ಕಟ್ಟಿ ಜತನದಿಂದ ಖರ್ಚು ಮಾಡೋ ಸೌರಭ, ಗಂಡ ಮಕ್ಕಳಿಗಾಗಿ ತನ್ನ ಕನಸನ್ನೆ ಮರೆತು ಬದುಕುವ ಆರತಿ ಅಂತ ಪಾತ್ರಗಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಅನ್ನಿಸುತ್ತದೆ.       ಹಾಂ ಎಲ್ಲವನ್ನೂ ನಾನೇ ಹೇಳ್ತಾ ಹೋದ್ರೆ ಏನಿದೆ… ನಿಮಗೂ ರುದ್ರಗ್ನಿಯ ಪದಗಳ ಲೋಕದಲ್ಲಿ ಸಂಚರಿಸಬೇಕೆ? ಹಾಗಾದ್ರೆ ಯಾಕೆ ತಡ? 9591889261ಈ ಸಂಖ್ಯೆಯನ್ನು ಸಂಪರ್ಕಿಸಿ ಒಂದೊಳ್ಳೆ ಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಿ. ತಿಲಕಾ ನಾಗರಾಜ್ ಹಿರಿಯಡಕ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ Read Post »

ಪುಸ್ತಕ ಸಂಗಾತಿ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ

ಪುಸ್ತಕ ಸಂಗಾತಿ ಡಾ. ಅಶೋಕ ನರೋಡೆ ಡಿ.ನಳಿನಾ “ಮನೋಮಂಥನ” ಕೃತಿಯ ಅವಲೋಕನ “ಮನೋಮಂಥನ ” ಡಿ.ನಳಿನಾ ಅವರ ವ್ಯಕ್ತಿತ್ವದ ವಿಕಸನದ ಕೃತಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಮಕ್ಕಳ ಮನೋ ವೈಜ್ಞಾನಿಕ ಅಂಕಣಗಳ ಸಂಕಲನ ಮೈಸೂರು ಆನಂದಿ ಪ್ರಕಾಶನವು ೨೦೨೫ ರಲ್ಲಿ ಪ್ರಕಟಿಸಿದೆ.” ಇಂದೀನ ಮಕ್ಕಳೆ ನಾಳಿನ ಪ್ರಜೆಗಳು. ಆರೋಗ್ಯವಂತ ಸಮಾಜ ರೂಪು ಗೊಳ್ಳಲು ಆರೋಗ್ಯವಂತ ಸಮಾಜ ತತ್ಪರವಾಗಿರಬೇಕು. ಅದಕ್ಕಾಗಿಯೇ ವೇದಗಳಾದಿಯಾಗಿ ಯೋಗಿಗಳು, ಋಷಿಮುನಿಗಳು, ಪ್ರಾಜ್ಞರು, ಪಂಡಿತರು, ಸಂಶೋಧಕರು, ವಿಜ್ಞಾನಿಗಳು, ಸಮಾಜಸುಧಾರಕರು, ಶಿಕ್ಷಕರು ನಿರಂತರ ದುಡಿಯುತ್ತಿದ್ದಾರೆ ಭಾರತೀಯ ಯೋಗ ಪರಂಪರೆಯ ಯಮ ನಿಯಮ  ಜನರ ಅಂತರಂಗ ಬಹಿರಂಗ ಶುದ್ಧಿಗೆ ಸಹಕರಿಸುತ್ತದೆ.” ಎಂಬುದು ಗಮನಾರ್ಹವಾಗಿದೆ. ಸುವಿಖ್ಯಾತ  ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರರ ಮೌಲಿಕ ಮುನ್ನುಡಿ  ಪುಸ್ತಕ ಕನ್ನಡಿಯಾಗಿದೆ. ಪ್ರಸ್ತುತ ಮನೋಮಂಥನ ಗ್ರಂಥದಲ್ಲಿ -ಜವಾಬ್ದಾರಿಯ ಮಕ್ಕಳು, ಕುಟುಂಬ ಮೌಲ್ಯಗಳು ಬೆಳೆಯಲಿ, ಮಕ್ಕಳ ಜಾಹೀರಾತು, ಮಕ್ಕಳನ್ನು ಬಯಲಿಗೆ ಒಡ್ಡಿ, ಮಕ್ಕಳಿಗೆ ಅವಮಾನ ಅನಿಸಿದರೆ ನಿಲ್ಲಿಸಿ, ಮಕ್ಕಳಿಗೆ ಕೋಟು ಹಾಕಿಸುವ ಪರಿಣಾಮ, ಮಕ್ಕಳಿಗೆ ವರ್ತನೆ ಕಲಿಸಿ, ಪಿರಿಯಡ್ಸ್ ಬಗ್ಗೆ ಅರಿವು ಮೂಡಿಸಿ, ಶಿಕ್ಷಕರು ಗೇಲಿ ಮಾಡಬಾರದು, ತಂದೆಗೆ ಇದು ಗೊತ್ತಿರಲಿ, ವಿವೇಚನೆಯೇ ಮದ್ದು, ಆರೋಗ್ಯಕರ ಸಂಬಂಧ ಬೆಳೆಸಿ, ಮಕ್ಕಳ ಸ್ನೇಹಿ ಪಾಲಕರಾಗಿ, ಮಕ್ಕಳಲ್ಲಿ ಮೌಲ್ಯ ಬೆಳೆಸೋಣ,ಮಕ್ಕಳ ಮನಸ್ಸು ಅರಿಯೋಣ, ಬೆಳೆವ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ, ಮಕ್ಕಳ ಮನೋಬಲ ವೃದ್ಧಿಸಿ, ಮಕ್ಕಳ ನ್ನು ಮುಕ್ತವಾಗಿ ಬೆಳೆಯಲು ಬಿಡಿ, ಮಕ್ಕಳೇ ಮನೆ ಬೆಳಕು, ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿ, ಮಕ್ಕಳಿಗೆ ಬೇಕಿದೆ ಆಸರೆ, ಕುಟುಂಬದ ಸಾಮರ್ಥ್ಯವೇ ಸದಸ್ಯರ ನೈತಿಕ ಶಕ್ತಿ, ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು, ಮಕ್ಕಳ ಶ್ರಮ ಗೌರವಿಸಿ, ಮಕ್ಕಳ ಮನಸ್ಸನ್ನು ಗೆಲ್ಲಿ, ಮಕ್ಕಳಲ್ಲಿ ದ್ವೇಷ ಬಿತ್ತ ಬಾರದು, ಏಕಾಗ್ರತೆ ವಿದ್ಯಾರ್ಥಿ ಹಂತ ದಲ್ಲಿ ಬೆಳಕು, ಮಕ್ಕಳಲ್ಲಿನ ಕುತೂಹಲ ತಣಿಸಬೇಕು, ಮಕ್ಕಳಲ್ಲಿ ಎದೆಗಾರಿಕೆ ಬೆಳೆಸುವುದು ಹೇಗೆ?, ಪರೀಕ್ಷೆ ಬರೆಸೋಣ ಧೈರ್ಯವಾಗಿ, ಮಕ್ಕಳ ಮೇಲೆ ನಿಗಾ ಇರಲಿ, ಮಕ್ಕಳನ್ನು ಥಳಿಸದೇ ಕಲಿಸುವ ಜಾಣ್ಮೆ, ಮಕ್ಕಳ ಮೇಲೆ ಕರುಣೆ ಉಕ್ಕಲಿ, ಮಕ್ಕಳು ನಿರೀಕ್ಷಿಸುವ ಗುಣಗಳು ನಮ್ಮಲ್ಲಿ ಇರಲಿ,ಮಕ್ಕಳಿಗೆ ಸಾಹಿತ್ಯದ ಪುಸ್ತಕ ಓದಲು ಕಲಿಸಿ, ಆನಲೈನ್ ವಂಚನೆ ಮಕ್ಕಳನ್ನು ಬಾಧಿಸದಿರಲಿ, ಮಕ್ಕಳಲ್ಲಿ ಸಭಾಕಂಪನ ತೊಲಗಿಸಲು ಶ್ರಮಿಸಿ, ಮಕ್ಕಳನ್ನು ನೀರಿನೊಂದಿಗೆ ಚೆಲ್ಲಾಟಕೆ ಬಿಡಬೇಡಿ, ಮಕ್ಕಳು ಜೀವನ್ಮಖತೆ ಮೈಗೂಡಿಸಿಕೊಳ್ಳಲು ಸಹಕರಿಸಿ, ಶಾರ್ಟ್ ಕಟ್ – ಕಟ್ ಕಟ್, ಮಕ್ಕಳನ್ನು ಟಾರ್ಗೆಟ್ ಮಾಡಬಾರದು, ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿ, ಮಕ್ಕಳಲ್ಲಿ ಪರೀಕ್ಷಾ ಭೀತಿ ತೊಲಗಿ ಸುವುದು ಹೇಗೆ ?, ಮಕ್ಕಳಿಗೆ ಶಾಲೆಯ ಸಾಮಾಜಿಕ ಜೀವನ ಅಗತ್ಯ, ಶಿಸ್ತು ಶಿಕ್ಷೆ ಆಗಬಾರದು,ಹಾರ್ಮೋನ್ಸ್ ಬದಲಾ ವಣೆ- ಬೇಕು ತಿಳುವಳಿಕೆ, ಮಕ್ಕಳಿಗೆ ಪಾಲಕರೆ ಆದರ್ಶ, ವಿಶೇಷ ಚೇತನರ ಮೇಲೆ ಗೌರವ- ಪ್ರೀತಿ ಅಚ್ಚಳಿಯ ದಂತಿರಲಿ,ಮಕ್ಕಳಿಗೆ ಸಂಸ್ಕೃತಿ ಕಲಿಸ ಲೇಬೇಕಾದ ಅನಿವಾರ್ಯತೆ, ಮಕ್ಕಳೆದುರು ಪಾಲಕರು ಮೋಬೈಲ್ ದೂರವಿರಿಸಿ,ಹುಡುಗಾಟದಿಂದ ಭವಿಷ್ಯ ಬಡಿದಾಟ,ಹರೆಯದ ವಿದ್ಯಾರ್ಥಿಗಳ ನಡುವೆ ಸಲುಗೆ ಸಲ್ಲ, ಮಕ್ಕಳಲ್ಲಿ ಕಲಾಭಿರುಚಿ, ಮಕ್ಕಳಿಗೆ ಕಣ್ಣೀರು ಹಾಕಿಸಬಾರದು, ಬೇಸಿಗೆ ರಜೆ ಹಾಯಾಗಿರಲಿ, ಬಿಸಿಲು ಜಾಗ್ರತೆ ಅವಶ್ಯ, ದೇಹ ರಕ್ಷಣಾ ಕೌಶಲ್ಯ ತರಬೇತಿ  ಅಗತ್ಯ, ಡ್ರಗ್ಸ್ ವಿಷವುಣಿಸುವ ವರಿದ್ದಾರೆ ಎಚ್ಚರ!, ಪರೀಕ್ಷೆ ದಿಟ್ಟತನ ದಿಂದ ಎದುರಿಸೋಣ, ಪರೀಕ್ಷಾ ಫೋಬೀಯಾ ಓಡಿಸಿ,ಮಕ್ಕಳ ಆದ್ಯತೆಗೆ ಗಮನವಿರಲಿ, ಮಕ್ಕಳನ್ನು ಗ್ರಾಮದ ಅನುಭವಗಳಿಗೆ ಒಡ್ಡಿ, ಮಕ್ಕಳಿಗೆ ವಿವೇಚನೆಯಿಂದ ತಿನ್ನಿಸಿ, ಮಕ್ಕಳು  ಫೇಲಾದರೆ ಅವರ ತಪ್ಪೇ ?, ಪಾಲಕರೆ ಅಪ್ರಾಪ್ತರಿಗೆ ವಾಹನ ನೀಡದಿರಿ, ಶಿಕ್ಷಣ ಉದ್ಯಮದೊಳಗೆ ಪಾಲಕರು ಕಂಗಾಲು ಮುಂತಾದ ಎಪ್ಪತ್ತೊಂದು ಸೊಗಸಾದ ಬರಹಗಳಿವೆ.”ಶ್ರೀಮತಿ ನಳಿನಾ ಅವರು ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳಂತೆ; ಪುಟ್ಟ ಪುಟ್ಟ ಲೇಖನಗಳ ಸರಮಾಲೆ ಯನ್ನು ಸಿದ್ದಪಡಿಸಿ, ಮನೋಮಂಥನ ಸುಂದರ  ಪುಸ್ತಕವನ್ನು ಕೈಗಿತ್ತಿದ್ದಾರೆ.” ಓದುವುದೇ ಚೇತೋಹಾರಿ ಅನುಭವ. ಬರವಣಿಗೆ ಸರಳ ಸಹಜ ಸುಂದರ ವಾಗಿ ಬಂದಿದೆ.ಮಕ್ಕಳು ಮಾತ್ರವಲ್ಲ, ಪಾಲಕರು, ಶಿಕ್ಷಕರು, ಅಧಿಕಾರಿ ವರ್ಗ, ಆಡಳಿತ‌ ಮಂಡಳಿಯವರು ಓದ ಲೇಬೇಕಾದ ಮಹತ್ವದ ಲೇಖನಗಳ ಗೊಂಚಲಿದು. ನಳಿನ ರಸವತ್ತಾಗಿ ಬರೆದಿದ್ದಾರೆ. ಘಟನೆಗಳು ಹೃದಯ ತಟ್ಟುತ್ತ್ತವೆ. ನಿರೂಪಣಾ ಶೈಲಿಯು ಚಿತ್ತಾಕರ್ಷಕವಾಗಿದೆ. ಪಾಲಕರ ಜವಾಬ್ದಾರಿ, ಶಿಕ್ಷಕರ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸಕ್ಕೆ ರಹದಾರಿಯಾಗು ವಂತಹ ಕೃತಿ. “ಮನೋಮಂಥನ ಇಂದಿನ ಕಾಲದ ಪಾಲಕರ ಕೈಪಿಡಿಯಾಗಿ ರೂಪುಗೊಂಡಿದೆ. ವರ್ತಮಾನದಲ್ಲಿ ಪಾಲಕರು ವಿದ್ಯಾರ್ಥಿಗಳು, ಶಿಕ್ಷಕರು ತ್ರೀಕೋನೀ ಯ ಸಂಬಂಧಿತ ಸವಾಲುಗಳನ್ನು ಸಮಸ್ಯೆಗಳನ್ನು ಪರಿಹಾರಗಳನ್ನು ಬಹಳ ಆಪ್ತತೆಯ ದೃಷ್ಟಿಯಿಂದ ಮಾತೃ ವಾತ್ಸಲ್ಯದ ಕಕ್ಕುಲಾತಿಯಿಂದ ನೀಡ ಲಾಗಿದೆ.” ಎಂಬ ಯೋಗಿ ದೇವರಾಜ ಅವರ ಅಭಿಪ್ರಾಯವು ಪ್ರಸ್ತುತ ಪುಸ್ತಕದ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ.” ಕಳೆದ ಹದಿನೈದು ವರ್ಷಗಳ ಹಿಂದಿನಿಂದಲೂ ನಳಿನಾ ಅವರ ಬರಹಗಳು ಮಾನವೀಯ ಮೊರೆತವನ್ನು ಹೊಂದಿದ್ದು ಸಮಾಜದ ಒಳಿತಿಗಾಗಿ ತುಡಿಯುತ್ತಿವೆ.ಇಂತಹ ಸಕಾರಾತ್ಮಕ ಕೃತಿಗಳು ನಾಡಿನ ಪಾಲಕರ ಕೈಗೆ ತಲುಪಿ, ಮಕ್ಕಳ ಬದುಕು ಹಸನಾಗಲಿ” ಎಂದು ಹಾರೈಸಿದ್ದು ಸಮಂಜಸವಾಗಿದೆ.ಸದಾ ಲೋಕಕಲ್ಯಾಣದ ಚಿಂತನೆಗಳಿಂದ ಕೆಲಸ ಮಾಡುವ ಲೇಖಕಿ, ನಳಿನಾ ಅವರ ಮನೋಮಂಥನ ಮಕ್ಕಳ ಮನೋವಿಕಾಸಕೆ ರಹದಾರಿಯಾಗಲಿ.  ಡಾ. ಅಶೋಕ ನರೋಡೆ   ಡಾ. ಅಶೋಕ ನರೋಡೆ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ Read Post »

ಪುಸ್ತಕ ಸಂಗಾತಿ

ಡಾ. ನೀ. ಗೂ ರಮೇಶ್ ಅವರ “ಗಾಂಧೀಮರ” ಕೃತಿಯ ಅವಲೋಕನ ಶೋಭಾ.ಬಿ ಅವರಿಂದ

ಪುಸ್ತಕ ಸಂಗಾತಿ ಶೋಭಾ.ಬಿ ಡಾ. ನೀ. ಗೂ ರಮೇಶ್ “ಗಾಂಧೀಮರ” ನಿರಾಶ್ರಿತ ಮನಗಳಿಗೆ ನೆರಳನ್ನು ನೀಡುವ ಗಾಂಧೀಮರ   ಡಾ. ನೀ. ಗೂ ರಮೇಶ್ ಅವರ ಗಾಂಧೀಮರ ಕವಿತೆಯು ಜಗತ್ತಿಗೆ ಗಾಂಧಿ ತತ್ವಗಳ ಅವಶ್ಯಕತೆಯನ್ನು ತನ್ನೊಳಗೆ ಬಹಳ ಗೌಣವಾಗಿಸಿಕೊಂಡು ಸಹೃದಯನ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ಒಂದು ಕವಿತೆ. ಶೀರ್ಷಿಕೆಯೇ ನಮ್ಮನ್ನು ಹಲವಾರು ಚಿಂತನೆಗಳಿಗೆ ಒಳಪಡುವಂತೆ ಮಾಡುತ್ತದೆ. ಹಾಗೆಯೇ ಗಾಂಧೀಮರ ಕೃತಿಯೂ ಕೂಡ ವಿವಿಧ ಶೀರ್ಷಿಕೆಗಳ ಕವಿತೆಗಳ ರಸದೌತಣವನ್ನು ಉಣಬಡಿಸುತ್ತದೆ. ಕಾವ್ಯ ಎನ್ನುವುದು ಕವಿಯ ಸುಪ್ತಭಾವಗಳ ಅಕ್ಷರ ರೂಪದ ಅಭಿವ್ಯಕ್ತಿ. ಭಾವಗಳು ಕೇವಲ ಭಾವನಾತ್ಮಕವಾದವುಗಳಲ್ಲ ಅಥವಾ ವೈಯಕ್ತಿಕ ಪ್ರೀತಿ ಪ್ರೇಮದ ಕಾವ್ಯಗಳಲ್ಲ. ಅವು ಸಮಾಜಮುಖಿಯೂ ಆಗಿರಬೇಕು. ಅಂತಹ ಅಮೂಲ್ಯವಾದ ಸಮಾಜದ ಓರೆಕೋರೆಗಳಿಗೆ ಕೈಗನ್ನಡಿಯಂತಿವೆ ಗಾಂಧೀಮರ ಕೃತಿಯಲ್ಲಿನ ಕವನಗಳು. ಇದರಲ್ಲಿರುವ ೭೭ ಕವಿತೆಗಳು ಒಂದಕ್ಕೊAದು ವಿಭಿನ್ನ ಚಿತ್ರಣವನ್ನು ನೀಡುತ್ತವೆ. ಇದರ ಮೂಲಕ ಡಾ. ನಿ ಗೂ ರಮೇಶ್ ಅವರ ಕಾವ್ಯ ಪ್ರತಿಭೆಯು ಉತ್ತುಂಗಕ್ಕೇರಿದೆ.  ಇವರ ಗಾಂಧೀಮರ ಕವಿತೆಯಲ್ಲಿಯೇ ಗುಲಾಮಗಿರಿಯಿಂದ ಭಾರತವನ್ನು ತಪ್ಪಿಸಲು ಮಹಾತ್ಮರ ಅವಶ್ಯಕತೆ ಎಷ್ಟಿತ್ತು , ಮಹಾತ್ಮರ ಹೆಮ್ಮರದ ನೆರಳು ದೇಶದಗಲ ಹರಡಿ ಶಾಂತಿ, ಅಹಿಂಸೆಗಳಿAದ ಹಾರಾಡುತ್ತಿದ್ದ ಸ್ವಾತಂತ್ರದ ಹಕ್ಕಿಯು ದೇಶಕ್ಕೆ ಬಿಡುಗಡೆಯ ಸನ್ಮಾನವನ್ನು ಸಲ್ಲಿಸಿದ ಗಾಂಧಿಯ ಅವಶ್ಯಕತೆ ಎಷ್ಟಿತ್ತು ಎನ್ನುವುದನ್ನು ಬಿಂಬಿಸುವ ಕವನವಾಗಿದೆ. ಅದೇ ರೀತಿ ಆ ಗಾಂಧಿಮರದ ಬುಡಕ್ಕೆ ಕೋವಿಯ ಕೊಡಲಿಯಿಟ್ಟು ಭಾವೈಕ್ಯತೆಯ ಭಾವ ಕೆರಳಿಸಿ ಜಗ ಮರುಗುವಂತೆ ಮಾಡಿದ್ದನ್ನು ಕಣ್ಣಿನ ಮುಂದೆ ಕಟ್ಟಿಡುತ್ತದೆ ಈ ಕವನ ಹಾಗೆಯೇ ಕೆಳಗುರುಳಿದರೂ ಅಂತಹ ಎಷ್ಟೋ ಗಾಂಧಿಮರಗಳು ಪಸರಿಸಿದರೂ ಮರಗಳನ್ನು ಉರುಳಿಸುವ ಪ್ರಯತ್ನ ಮಾತ್ರ ನಿಲ್ಲುತ್ತಿಲ್ಲ ಎನ್ನುವ ವಿಷಾದ ಕಾವ್ಯದಲ್ಲಿ ಅಡಗಿದೆ.ಹಾಗೆಯೇ ಸಹೃದಯನನ್ನು ಸೆಳೆಯುವ ಹಲವು ಕವನಗಳು ಇಲ್ಲಿವೆ. ಬೇಲಿ ಹಾಕಬೇಡಿಮಹಾಚೇತನಗಳಿಗೆಜಾತಿ, ಮತ, ಧರ್ಮಗಳೆಂಬಇದ್ದತೆಯೇ ಇರಲಿ ಬಿಡಿಹೇಗೆ ಇದ್ದರೂಅವು ದೀಪ ಸ್ತಂಭ ಇಂದು ಜಗತ್ತು ಎಷ್ಟೇ ಅಬಿವೃದ್ಧಿ ಹೊಂದುತ್ತಿದ್ದರೂ ಸಹ ಸಾಧಕನ ಸಾಧನೆಯನ್ನಷ್ಟೇ ಪುರಸ್ಕರಿಸದೆ ಅವನ ಜಾತಿ ಧರ್ಮವನ್ನು ಹಿಡಿದು ಜರಿಯುವುದರ ವಿರುದ್ಧ ಧ್ವನಿ ಇದಾಗಿದೆ. ಕಿಟಕಿ ಮತ್ತು ಕನ್ನಡಿ ಕವಿತೆಯಲ್ಲಿಈ ನಾಡಿಗೊಂದು ಕಿಟಕಿ ಇದೆಭಾಷೆ ಗಡಿ ಗೋಡೆಗಳ ಕಟ್ಟಿ ಬೀಗಲುಇರುವ ಕಿಟಕಿಯ ಮುಚ್ಚಿಧರ್ಮ ಜಾತಿಗಳ ಬೇರು ಹುಡುಕಲುಕತ್ತಲಲ್ಲಿ ಕಣ್ಣು ಕಟ್ಟಿಗೌಪ್ಯವಾಗಿ ಗುದ್ದಾಡಲು ಎನ್ನುವ ಸಾಲುಗಳಲ್ಲಿ ಮತ್ತೆ ಮತ್ತೆ ಜಾತಿಧರ್ಮಗಳ ಬಗೆಗೆ ಜಗತ್ತಿನ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇಂದು ಹಸುಳೆಗಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಹತ್ತಿಕ್ಕಲು,  ಅಲ್ಪ ಸುಖಕ್ಕಾಗಿ ಅಡ್ಡದಾರಿಗಳನ್ನು ಹುಡುಕುತ್ತಿರುವ ಜನರನ್ನು ಬದಲಿಸಲು ಹೊಸ ಕಿಟಕಿಯೊಂದು ಬೇಕಾಗಿದೆ. ಅದಕ್ಕಾಗಿ ನಾನೇಒಂದು ಕಿಟಕಿಯಾಗಬೇಕಾಗಿದೆ ಎನ್ನುವ ಕವಿಯ ಕಾಳಜಿ ನಿಜಕ್ಕೂ ಶ್ಲಾಘನೀಯವಾದದ್ದು.ಹಾಗೆಯೇ ಕ್ಷಮಿಸಿ ಬಿಡಿ ಬಸವಣ್ಣ ಕವಿತೆಯಲ್ಲಿ ಲೋಕದ ಡೊಂಕು ತಿದ್ದಿಸಮತೆಯ ಕನಸು ಬಿತ್ತಿಎಚ್ಚರಿಸಿದ ನುಡಿ ಕಿಡಿಗಳುಕಪಟಭಕ್ತನ ಸರಕಾದವು! ಎನ್ನುತ್ತಾ ಕವಿಯು ಬಸವ ತತ್ವವನ್ನು ಜನತೆ ತಪ್ಪಾಗಿ ಅರ್ಥೈಸಿಕೊಂಡಿರುವ ಜನತೆಯ ಪರವಾಗಿ ಬಸವಣ್ಣನಲ್ಲಿ  ಕ್ಷಮೆಯನ್ನು ಯಾಚಿಸಿದ್ದಾರೆ. ನಮಗೇನೂ ಅನಿಸುವುದೇ ಇಲ್ಲ ಕವಿತೆಯಲ್ಲಿ ದೇವರಿಗಿಂತ ಪೂಜಾರಿಯ ನಂಬಿಮಣ್ಣಿಗಿಂತ ಮಾರುಕಟ್ಟೆಯ ನಂಬಿಆಹಾರಕ್ಕಿಂತ ಔಷಧಿಯ ನಂಬಿನೆಮ್ಮದಿ ಕಳೆದುಕೊಳ್ಳುತ್ತೇನೆನಮಗೇನೂ ಅನಿಸುವುದೇ ಇಲ್ಲ! ಎನ್ನುತ್ತಾ ಇಂದಿನ ಜನರ ಮನಸ್ಥಿತಿಯನ್ನು ಇಡೀ ಕವಿತೆಯಲ್ಲಿ ಅರ್ಥಪೂರ್ಣವಾಗಿ ಹೆಣೆದಿದ್ದಾರೆ. ಜಗತ್ತಿನಲ್ಲಿ ಅಕ್ರಮ ಅತ್ಯಾಚಾರ, ಕೊಲೆ ಸುಲಿಗೆ ಮೋಸ ಮಾಡಿದವರನ್ನೇ ಮೆರೆಸುವವರಿಗೆ ಶಾಲು ಸುತ್ತಿ ಹೊಡೆದಂತೆ ಬಡಿದೆಚ್ಚರಿಸಿದ್ದಾರೆ. ಸಮಾಜದಲ್ಲಿ ಆಗುವ ಅಥವಾ ನಡೆಯುವ ಅದೆಷ್ಟೋ ಸಂಗತಿಗಳಿಗೆ, ಅಪಘಾತ ಅವಘಡಗಳಿಗೆ ತಲೆಕೆಡಿಸಿಕೊಳ್ಳದೇ ವ್ಯವಸ್ಥೆಯನ್ನೇ ಕಾನೂನನ್ನೇ ನಿಂದಿಸುವವರನ್ನು ಹೀಗಳೆದು ವಿಡಂಬಿಸಿದ್ದಾರೆ.ಇAತಹ ಅದೆಷ್ಟೋ ವಿಚಾರಗಳನ್ನು ಹೊತ್ತ ಗಾಂಧೀಮರ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೊಡುಗೆಯಾಗಿದೆ. ಈ ಕೃತಿಯನ್ನು ಕನ್ನಡಿಗರ ಚಿಂತನಾ ಲೋಕಕ್ಕೆ ಅರ್ಪಿಸಿದ್ದಕ್ಕಾಗಿ ಅಪ್ರತಿಮ ಕವಿಗಳಾದ ಡಾ. ನಿ.ಗೂ ರಮೇಶ್ ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶೋಭಾ ಬಿ

ಡಾ. ನೀ. ಗೂ ರಮೇಶ್ ಅವರ “ಗಾಂಧೀಮರ” ಕೃತಿಯ ಅವಲೋಕನ ಶೋಭಾ.ಬಿ ಅವರಿಂದ Read Post »

ಪುಸ್ತಕ ಸಂಗಾತಿ

ದಿ 29ರಂದು ಕವಿ ಮಕಾನದಾರರ ದರ್ವೇಶಿ ಪದ್ಯ ಜನಾರ್ಪಣೆ

ಪುಸ್ತಕ ಸಂಗಾತಿ ದಿ 29ರಂದು ಕವಿ ಮಕಾನದಾರರ ದರ್ವೇಶಿ ಪದ್ಯ ಜನಾರ್ಪಣೆ ಕನ್ನಡ ಪುಸ್ತಕ ಪ್ರಾಧಿಕಾರದ ಗ್ರಂಥಾಲಯ ಅನುಷ್ಠಾನ ಯೋಜನೆಯ ಜಿಲ್ಲಾ ಸಂಚಾಲಕ, ಹಿರಿಯ ಕವಿ ಎ.ಎಸ್.ಮಕಾನದಾರ ಅವರ ದರ್ವೇಶಿ ಪದ್ಯ  ಕವನ ಸಂಕಲನ ದಿ 29 ರ ರವಿವಾರ ದಂದು ಹೂವಿನಹಡಗಲಿಯ ಸರ್ಕಾರಿ ನೌಕರರ  ಭವನದಲ್ಲಿ ಜನಾರ್ಪಣೆ ಗೊಳ್ಳಲಿದೆ. ಹೂವಿನ ಹಡಗಲಿಯ ಸಿಂಚನ ಪ್ರಕಾಶನ ಮತ್ತು ಮೇ ಸಾಹಿತ್ಯ ಮೇಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆಕುವೆಂಪು ವಿಶ್ವ ವಿದ್ಯಾಲಯ ಮತ್ತು ವಿಜಯನಗರ ಜಿಲ್ಲೆಯ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿ  ಪಠ್ಯ ಪುಸ್ತಕಗಳಲ್ಲಿ  ಸೇರ್ಪಡೆ ಯಾದ ಕವಿತೆಗಳುಳ್ಳ ದರ್ವೇಶಿ ಪದ್ಯ ಕವನ ಸಂಕಲನವನ್ನು ಕವಿ ಇಸ್ಮಾಯಿಲ್ ಯಲಿಗಾರರವರು ಲೋಕಾರ್ಪಣೆಗೊಳಿಸುವರು.ಹಾವೇರಿ ಜಿಲ್ಲೆ ಹಾನಗಲ್ ನ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥೆ  ಡಾ. ಪುಷ್ಪ ವತಿ ಶೆಲವಡಿಮಠ ಅವರು ಕೃತಿ ಅವಲೋಕನ ಮಾಡುವರು.2023ನೇ ಸಾಲಿನ ಸಿಂಚನ ಕಾವ್ಯ ಪ್ರಶಸ್ತಿ ಬೀಳಗಿಯ ಸೋಮಲಿಂಗ ಬೇಡರ ಆಳೂರ ಅವರ ಗೋರಿ ಮತ್ತು ಧರ್ಮ, 2024ನೇ ಸಾಲಿನ ಕಾವ್ಯ ಪ್ರಶಸ್ತಿ ಗೆ ಬಾಚಿಗೊಂಡನ ಹಳ್ಳಿಯ ಹಿರಿಯ ಸಾಹಿತಿ ಹುರಕಡ್ಲಿ ಶಿವಕುಮಾರ್ ಅವರ ಕನ್ನಡ ಮಾನಿಪ್ಪಾ ನಾಡು ಕೃತಿಗಳು ಆಯ್ಕೆ ಆಗಿದ್ದು ಪ್ರತಿ ಪುರಸ್ಕಾರವೂ 5ಸಾವಿರ ನಗದು ಎರಡು ಸಾವಿರ ಮುಖ ಬೆಲೆಯ ಪುಸ್ತಕ, ಸ್ಮರಣಿಕೆ ನೀಡಿ ಸನ್ಮಾನಿಸಲಾಗುವದುಹಿರಿಯ ಸಾಹಿತಿ ರಾಮಪ್ಪ ಕೋಟಿಹಾಳ್  ಪುರಸ್ಕೃತ ಕೃತಿಗಳ ಪರಿಚಯ ಮಾಡಲಿದ್ದು  ತೊ ಮ ಶಂಕ್ರಯ್ಯ ಸಮಾರಂಭ ದ ಅಧ್ಯಕ್ಷ ತೆ ವಹಿಸುವರುಇದೆ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಲಗುವದೆಂದು ಪ್ರಕಾಶಕಿ ಸವಿತಾ ಅಂಗಡಿ, ಸಂಚಾಲಕ ಸುರೇಶ್ ಅಂಗಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ

ದಿ 29ರಂದು ಕವಿ ಮಕಾನದಾರರ ದರ್ವೇಶಿ ಪದ್ಯ ಜನಾರ್ಪಣೆ Read Post »

You cannot copy content of this page

Scroll to Top