ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಎನ್.ಜಯಚಂದ್ರನ್ ಅವರ ಕವಿತೆ “ಧರೆಯ ದಿವ್ಯಾಭಿಷೇಕ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ಧರೆಯ ದಿವ್ಯಾಭಿಷೇಕ” ನೀಲಗಗನದ ನುಣುಪಿನ ಹಾಳೆಯಲಿಕರಿಮೋಡಗಳ ಕಲಾಸಂಗಮ;ಮಿಂಚಿನ ಬೆರಳಲಿ ಬರೆದ ಕವಿತೆಗೆಗುಡುಗಿನ ನಾದವೇ ಮಂಗಳಗಾನ. ಮಳೆ ಬಂದರೆ—ಭೂಮಿಯ ಮಸ್ತಕದಲಿ ಮುತ್ತಿನ ತಿಲಕ,ಮಣ್ಣಿನ ಮಡಿಲಲಿ ಪರಿಮಳದ ಪರಿಮಳ,ಒಣಗಿದ ಜೀವದ ಎದೆಯೊಳಗೆಆಶೆಯ ಅಂಕುರದ ನವಚೇತನ. ಪ್ರತಿ ಹನಿಯೂಸ್ವರ್ಗದ ಕಲಶದಿಂದ ಜಾರಿದ ಅಮೃತಬಿಂದು;ಪ್ರತಿ ತುಂತುರುವೂಪ್ರಕೃತಿಯ ವೀಣೆಯ ತಂತಿಯಲಿ ಮೂಡಿದ ರಾಗ. ಗುಡ್ಡಗಳು ಹಸಿರಿನ ಶಾಲು ಆವರಿಸಿದರೆ,ಕಣಿವೆಗಳು ನಗುವಿನ ಹಾರ ತೊಟ್ಟವು;ಜಲಪಾತಗಳು ಬೆಳ್ಳಿಯ ಜಡೆಯಾಗಿಬಂಡೆಗಳ ಭುಜದ ಮೇಲೆ ಹರಿದವು. ನದಿಯು ನಾಚಿದ ನವವಧುವಾಗಿತಿರುವು ತಿರುವಿನಲ್ಲಿ ತಾಳ ಹಾಕಿದಳು;ಗಾಳಿಯು ಕೊಳಲಾಗಿ ನುಡಿದಾಗಮರಗಳು ಭಕ್ತರಂತೆ ತಲೆದೂಗಿದವು. ನವಿಲು ನೀಲಾಂಬರದ ನರ್ತಕನಾಗಿಮೋಡಗಳ ರಂಗಮಂದಿರದಲ್ಲಿ ಕುಣಿದಿತು;ಕೋಗಿಲೆಯ ಕಂಠದ ಕಾವ್ಯಗಾನಕ್ಕೆವನದ ಹೃದಯವೇ ತಾಳವಾಯಿತು. ರೈತನ ಕಣ್ಣಲಿ ಮಳೆಯೊಂದುಸಂಪತ್ತಿನ ಕನಸಾಗಿ ಅರಳಿತು;ಹೊಲದ ಪ್ರತಿಯೊಂದು ಮಣ್ಣುಕಣವೂಸುವರ್ಣ ಧಾನ್ಯಗಳ ಭವಿಷ್ಯ ಬಿತ್ತಿತು. ಮಳೆಯೇ…ನೀ ಕೇವಲ ಜಲಧಾರೆಯಲ್ಲ,ಕರುಣೆಯ ಕಡಲು;ನೀ ಕೇವಲ ಋತುವಲ್ಲ,ಸೃಷ್ಟಿಯ ಪುನರ್ಜನ್ಮ. ನೀ ಸುರಿದರೆಒಣಗಿದ ಬದುಕು ಹಸಿರಾಗುತ್ತದೆ,ಬತ್ತಿದ ಹೃದಯ ಗೀತವಾಗುತ್ತದೆ,ಬರಿದ ಭೂಮಿ ಭರವಸೆಯಾಗುತ್ತದೆ,ಮಾನವನ ಮನವು ಮಾನವೀಯತೆಯಿಂದ ತೇವವಾಗುತ್ತದೆ. ಬಾ ಮಳೆಯೇ,ನಿನ್ನ ಅಮೃತಧಾರೆಯ ಆಲಿಂಗನದಲ್ಲಿಈ ಧರೆ ಸದಾ ನಲಿಯಲಿ;ನಿನ್ನ ವೈಭವದ ವಂದನೆಯಲ್ಲಿಪ್ರಕೃತಿಯ ಪ್ರತಿಯೊಂದು ಉಸಿರೂಅನಂತ ಕಾವ್ಯವಾಗಿ ಅರಳಲಿ! ಎನ್.ಜಯಚಂದ್ರನ್

ಎನ್.ಜಯಚಂದ್ರನ್ ಅವರ ಕವಿತೆ “ಧರೆಯ ದಿವ್ಯಾಭಿಷೇಕ” Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ತಪ್ಪು ಯಾರದೇ ಆಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆಸರಿ ನಿಮ್ಮದೇ ಇದ್ದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾ ನೀ ಅವರಿವರು ಮೇಲು ಕೀಳು ಬಿಟ್ಟುಹಾಕಿಹಿಂದೆ ಏನೇ ನಡೆದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಸೇಡಿನಿಂದೇ ಕೇಡು ಕೋಪ ತಾಪ ಸುಟ್ಟು ಹಾಕಿಅರಿಯದ ಪ್ರಮಾದವಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ತಪ್ಪಿ ಆಡಿದ ಮಾತು ಕೊಟ್ಟ ಭಾಷೆ ಬದಲಾಗದುಸರಿ ತಪ್ಪುಗಳು ತೆಪ್ಪಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಕಲಹಗಳು ಇಂದಿನವಲ್ಲ ಬಾಳು ಕಟ್ಟಿದಂದಿನವುತೆರವು ಕೊಡುವುದಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾಗರೀಕನೆನಿಸಿದ್ದೆ ಈ ನಾಲಿಗೆಯ ನಲಿವಿನಿಂದಅವರೇ ದೊಡ್ಡವರಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಅನುಳ ಅಂತರಂಗದಿ ಪ್ರಶಾಂತತೆ ಮನೆ ಮಾಡಲಿಆತುರದ ಎಡರುತೊಡರಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ”

ಕಾವ್ಯ ಸಂಗಾತಿ ಕಾರ್ತಿಕ್ ಭಟ್ ಬಳಗುಳಿ “ನನ್ನೆದೆಯ ಗೂಡಿನಲ್ಲಿ”‌ ನನ್ನೆದೆಯ ಗೂಡಲ್ಲಿ ಧಗಧಗಿಸುತಿದೆಬೆಂಕಿಯ ಜ್ವಾಲೆಹೊತ್ತಿ ಉರಿಯುತ್ತಿದೆಕೆನ್ನಾಲಿಗೆಆರಿಸಬೇಕಿದೆಜ್ವಾಲಾಮುಖಿಯಾಗುವ ಮುನ್ನ….ದಡಕ್ಕೆ ಬಂದು ಅಪ್ಪಳಿಸಿ ಬರುವ ಅಲೆದಡವನ್ನು ಸ್ವಚ್ಚಗೊಳಿಸುವಂತೆ……. ನನ್ನೆದೆಯ ಗೂಡನ್ನ ಆರಿಸಬೇಕಿದೆಆಹುತಿಯಾಗುವ ಮುನ್ನಹೊಗೆಯಾಡುತ್ತಿದೆಸುಟ್ಟುಹೋಗಿರಬಹುದೇ ಸುಡುತ್ತಿರುವ ಬೆಂಕಿಗೆಮಳೆ ಹನಿಯ ಸಿಂಚನಹರಿಸಬೇಕಿದೆ….ಆರಿಸಬೇಕಿದೆನನ್ನೊಡಲ ಕಾವನ್ನ…. ದೂರದಲ್ಲೆಲ್ಲೋ ಬರುತಲಿದೆಸುಟ್ಟ ವಾಸನೆತಂಪಾಗಿಸಬೇಕಿದೆಬಿಸಿಯಾದ ಒಡಲ ಕಾವನ್ನಆರಿಸಬೇಕಿದೆದೀಪ ಆರುವ ಮುನ್ನ…….ಹದಗೊಳಿಸಿ ಬಿತ್ತಬೇಕಿದೆಪ್ರೀತಿಯೆಂಬ ಬೀಜವನ್ನ …..ಮತ್ತೇ ನಳನಳಿಸಿ ಕುಣಿಯುವಂತೆಮಾಡಬೇಕಿದೆ ನನ್ನೆದೆಯ ಗೂಡನ್ನ….. ಕಾರ್ತಿಕ್ ಭಟ್ ಬಳಗುಳಿ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ” Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ“ ನೆಲದಿಂದ ಮೇಲಕ್ಕೆಹಾರಿತು ವಿಮಾನ,ಹಕ್ಕಿಯಂತೆ ನಲಿದಿದೆ ನನ್ನಯ ಮನ.ಮೋಡಗಳ ನಡುವೆ ಸಾಗುವ ಈ ಪಯಣ,ಕಾಣದ ಲೋಕದ ಒಡನಾಟದ ನಯನ. ಕೆಳಗೆ ನೋಡಿದರೆ ಕಾಣದು ಗಡಿಗಳು,ಚಿಕ್ಕದಾಗಿ ಕಾಣುವವು ದೊಡ್ಡ ನದಿಗಳು.ಮನುಷ್ಯರ ಸೃಷ್ಟಿಯ ಈ ಅದ್ಭುತ ಯಾನ,ಬಾನಿನಂಚಿಗೆ ಮುಟ್ಟುವ ಸುಂದರ ಪಯಣ. ಬಿಳಿ ಮೋಡಗಳ ಹಾಸಿಗೆ ಮೈಯನ್ನು ತುಂಬಿ,ಕನಸಿನ ಲೋಕಕ್ಕೆ ಕರೆದೊಯ್ಯುವ ಹಾದಿ.ಗಾಳಿಯ ರಭಸದಲಿ ತೇಲುತ್ತಾ ಮುಂದೆ,ಮರೆಯಾಯಿತು ಎಲ್ಲ ಚಿಂತೆಯೂ ಒಂದೊಂದೇ  ಉಷಾರಾಣಿ ಗುರುಪ್ರಸಾದ್ ಕೊಡಗು

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಯಾನ ಹೊರಟಾಗ…..” ಮುಸ್ಸಂಜೆಗೊಂದುಬೆಳಗಿನ ಅವಸರಕ್ಕೊಂದುಹೊರಡುವ ಹಕ್ಕಿಗಳಸಾಲೊಂದು ಎಲ್ಲೋಹೊರಟಂತಿದೆಕಾಲದ ಅಳತೆಯೊಳಗೆಕಳೆದ ಸಮಯವಹುಡುಕಿ ಉಸಿರಿನಸಂಭ್ರಮಕ್ಕೆ ಚಿತ್ರ ಬರೆಯಲುದಾರಿಯಿರದ ದಾರಿಕಾಣದ ಹೆಜ್ಜೆಯ ಪಯಣನಭಕೆ ನಂಬಿಕೆ ಅಂಟಿಸಿಇಳೆಗೆ ಇಳಿವ ಕಾತರಮತ್ತೆ ಬದುಕಿನ ಸುತ್ತಅವಸರದ ಇಡುಗಂಟುಹಸಿವಿಗೆ ಅನ್ನದ ನಗುಮಣ್ಣೊಳಗೆ ಬೇರು ಬಿಟ್ಟಿದೆಭತ್ತವಾಗಲುಉಸಿರು ಉಳಿಸಲುನೆಲದ ಮಾತುಹಕ್ಕಿಗೆ ಗೊತ್ತುಗೂಡಿನ ಒಳಗೆಸಾಲು ಕಟ್ಟಿದ ಕನಸಿನಮೆರವಣಿಗೆಯ ಯಾನತಲುಪಿದ ಮೇಲೆತಿರುಗುವ ಗಡುವುಒಂದು ಪಯಣದ ಬದುಕುಸುಪ್ತ ನದಿಯಂತೆಹರಿದಷ್ಟು ಪರಿಶುದ್ಧತೆಮನದ ಬಿಂಬದ ಚಿತ್ರದಾರಿಯ ಹುಡುಕಬೇಕುಯಾನ ಹೊರಡಬೇಕು ನಾಗರಾಜ ಬಿ. ನಾಯ್ಕಹುಬ್ಬಣಗೇರಿ.ಕುಮಟಾ.

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..” Read Post »

ಕಾವ್ಯಯಾನ

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು”

ಕಾವ್ಯ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಕಾಡಿಸದಿರು” ಕೊಳಲನೂದಿ ಕರೆವಾಗಕರಗಿ ಹೋದೆ ಮಾಧವಪ್ರೀತಿಯ ಕರೆಯ ತಿರಸ್ಕರಿಸಿಬಾಳಲು ಸಾಧ್ಯವ ನವಿಲು ಗರಿಯ ಹಿಡಿದು ಬಂದೆನಲ್ಮೆಯ ಗೋಪಾಲನಿಗಾಗಿಬೆಣ್ಣೆಯ ಮಡಿಕೆ ಹೊತ್ತು ತಂದೆಕಳ್ಳನಾದ ಆ ಕೃಷ್ಣನಿಗಾಗಿ ಬೃಂದಾವನದೊಳಗೆ ಅವಿತಅವನ ಹುಡುಕತ ಬಂದೆರಂಗಿನೋಕುಳಿ ಎರಚಿಮರೆಯಾದವನ ಒಲವಲಿ ನೆನೆದೆ ಎದೆಯ ಬಯಕೆಯ ಅರಿತವನಾದರೂಎಲ್ಲರೆದುರು ಮಗ್ಧನ ರೀತಿ ನಿಂತು ಸತಾಯಿಸಿಗೋಪಿಕೆಯರ ಜೊತೆ ಕಳೆದು ಹೋದಗೋವರ್ಧನನ ಗುರುತು ಹಿಡಿದೆ ಭ್ರಮಿಸಿ ಇನ್ನು ಕಾಡಿಸ ಬೇಡ ಮಾಧವವಿರಹದಲಿ ಬೆಂದು ಸೋತಿದೆ ಜೀವಆನಂದದ ಯಮುನೆಯಲಿ ಮೀಯಿಸುಜೀವಚೇತನವಾಗಿ ಕೈಹಿಡಿದು ಮುನ್ನಡೆಸು ಅಮು ಭಾವಜೀವಿ ಮುಸ್ಟೂರು

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು” Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹುಟ್ಟಿ ಬಂದಿಹೆ ನೀನು ಈ ಭುವಿಯಲಿಅನುಭವಿಸಲೆಲ್ಲವನು ಈ ಬದುಕಲಿ.. ಸುಖದ ಜೊತೆಗೆ ಸ್ವಲ್ಪ ದುಃಖವಿರಲಿಬೆಲ್ಲದ ಜೊತೆ ತುಸು ಬೇವು ಇರಲಿ.. ನೋವುನಲಿವುಗಳು ಕೂಡಿ ಬರಲಿಮೊಗದಿಎಂದೆಂದೂ ನಗುತುಂಬಿರಲಿ.. ಹಗಲು ಬರುವುದು ಇರುಳಸರಿಸುತಲಿದೀಪಬೆಳಗುವುದುತಿಮಿರದೂಡುತಲಿ.. ಸ್ನೇಹಪ್ರೀತಿಗಳು ಹೃದಯದೊಳಿರಲಿಕೋಪ ಅಸೂಯೆಎಲ್ಲ ಭಸ್ಮವಾಗಲಿ.. ಒಲವಝರಿಯೊಂದುಜಿನುಗುತಿರಲಿಮನದೊಳೆಂದೂ ಅದು ಚಿಮ್ಮುತಿರಲಿ..  *ಇರುವಂತೆ ಇರಬೇಕು* ದೇವನೊಲುಮೆಯಲಿಬಾಳಿಗದು ಭದ್ರತೆ ನಿನಗೆ ನೆನಪಿರಲಿ.. ಜಗದ ಟೀಕೆಗಳ ನೀ  ಮರೆಯುತಿರಲಿಏನೇ ಆದರೂ ಎಂದೂ  ಹೂ ಮನವಿರಲಿ…! ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು”

ಕಾವ್ಯ ಸಂಗಾತಿ ನಿರಂಜನ ನಾಯಕ “ಅನುಭವಿ ಮೇಷ್ಟ್ರು” ಒಮ್ಮೆ ಕಣ್ಣೀರಿಟ್ಟಿದ್ದರುಆ ಒಳ್ಳೆಯ ಮೇಷ್ಟ್ರು—ಪಾಠಕ್ಕೆ ತಡೆಯೊಡ್ಡಿ,ಸದಾ ರಂಪ ಮಾಡುತ್ತಿದ್ದಮಕ್ಕಳ ರಗಳೆಗೆ ಬೇಸತ್ತು… ದಿನಗಳು ಉರುಳಿದವು,ಮಕ್ಕಳ ಪಡೆ ಬದಲಾಯಿತು;ಬಂದ ಹೊಸಬರಂತೂಹಳೆಯವರಿಗಿಂತ ಒಂದು ಕೈ ತಂಟೆಕೋರರೇ!ಆದರೂ ಈ ಬಾರಿಮೇಷ್ಟ್ರು ನಗುತ್ತಲೇ ಪಾಠ ಮಾಡಿದರು,ತಮ್ಮ ಮುಂದಿರುವುದುಮಹಾ ಪಟಿಂಗರೆಂಬಅರಿವೇ ಇಲ್ಲದೇ… ಯಾವ ಕಣ್ಣೀರು ಅಂದು ಅವರನ್ನು ಕುಗ್ಗಿಸಿತ್ತೋ,ಅದೇ ಇಂದು ಅವರ ಆತ್ಮಬಲವಾಗಿತ್ತು!ಅಂದು ಬೆಟ್ಟದಂತಿದ್ದ ಅಡಚಣೆ,ಇಂದು ಅವರ ಬೋಧನೆಯ ಸಹಜ ರಾಗವಾಗಿತ್ತು. ಗಲಿಬಿಲಿಯ ಪ್ರತಿ ತರಗತಿಯೂ,ಸಾಟಿಯಿಲ್ಲದ ಪ್ರತಿ ತುಂಟ ಮಗುವೂ—ಅವರ ಭಾವಗಳ ಹದಗೊಳಿಸಿದವು,ಕಾಲದ ಜೊತೆ ಬೆಳೆಸಿದವು.ಅವರು ಒಳಗೂ ಬೆಳೆದರು, ಹೊರಗೂ ಮಾಗಿದರು—ಏಕೆಂದರೆ,ಅವರು ಕಲಿಸಿದ ಪ್ರತಿ ಮಗುವೂಅವರಿಗೊಂದು ಹೊಸ ಪಾಠ ಕಲಿಸಿತ್ತು;‘ಬೋಧಿಸುವುದೆಂದರೆ ತಿದ್ದುವುದಲ್ಲ, ತಾಳ್ಮೆಯಿಂದ ಕಲಿಯುವುದು’ ಎಂದು. ನಿರಂಜನ ನಾಯಕ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು” Read Post »

ಕಾವ್ಯಯಾನ, ಗಝಲ್

 ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಕಾವ್ಯ ಸಂಗಾತಿ  ಡಾ. ಶ್ರೀಶೈಲ ಮಾದಣ್ಣವರ ಗಜಲ್ ಎತ್ತ ನೋಡಿದತ್ತ ಕತ್ತಲು ಬೀಗುತಿದೆ ಸಾಕಿಸೂರ್ಯೋದಯ ಯಾವಾಗಮತಿ ಭ್ರಮಣೆಗೆ ಚಿತ್ತ ವಿಕಾರವಾಗುತಿದೆ ಸಾಕಿನವೋದಯ ಯಾವಾಗ ಕದ್ದೂ ಕಾಣದಿರುವ ಮುದ್ದು ಮುಖಗಳನುಒದ್ದು ಹೊರ ತರುತಿಹರುಸಜ್ಜನರ ಮುಖವಾಡ ಬಯಲಾಗುತಿದೆ ಸಾಕಿ,ಶುದ್ಧೋದಯ ಯಾವಾಗ ಅತಂತ್ರ ಜೀವನದಲಿ ಯಾಂತ್ರಿಕ ಬದುಕಿನತ್ತನಡೆದಿದೆ ಜಗತ್ತುಮನದಿ ಬೆಳದಿಂಗಳು ಮರೆಯಾಗುತಿದೆ ಸಾಕಿಚಂದ್ರೋದಯ ಯಾವಾಗ ದುಶ್ಚಟಕೆ ದಾಸರಾಗಿ ದುರ್ಜನರ ಸಂಗಕೆಸಾಯುತಿವೆ ಎಳೆ ಮನಗಳುಹೂವಿನಂತ ಬದುಕು ಹಾಳಾಗುತಿದೆ ಸಾಕಿಶುಭೋದಯ ಯಾವಾಗ ಕನಸು ಹುಗಿದರು, ಮನಸು ಹುಗಿದರು, ಈಗಮನುಜತೆಯನೂ ಹುಗಿದರುಪ್ರೀತಿ ಸಿಗದೆ ಹೃದಯ ಘಾಸಿಯಾಗುತಿದೆ  ಸಾಕಿಭಾಗ್ಯೋದಯ ಯಾವಾಗ  ಡಾ. ಶ್ರೀಶೈಲ ಮಾದಣ್ಣವರ

 ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ “ಹಸಿರು ಮಂದಿರ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಹಸಿರು ಮಂದಿರ” ಹಸಿರಿನ ಹೊದಿಕೆ ಹೊದ್ದ ಪವಿತ್ರ ಮಂದಿರ,ಜ್ಞಾನದ ಜ್ಯೋತಿ ಬೆಳಗುವ ಸರಕಾರಿ ಶಾಲೆ;ಸುಣ್ಣದ ಬಿಳಿಯ ಗೋಡೆಗಳ ನಗು,ನೋಡುವ ಮನದಲಿ ಅರಳಿಸುವ ಹೂವಿನ ಮಾಲೆ// ಶಾಲೆಯ ಆವರಣ ಹಚ್ಚಹಸಿರಾಗಿ,ಗಿಡಮರಗಳು ಕೈಬೀಸಿ ಸ್ವಾಗತಿಸುತಿವೆ;ತಂಗಾಳಿಯ ತಂಪಿನಲಿ ಹಕ್ಕಿಗಳ ಗಾಯನ,ಕಲಿಕೆಯ ದಾರಿಯಲಿ ಕನಸು ಬಿತ್ತುತ್ತಿವೆ// ಎಡಬಲ ಹಸಿರಿನ ಸಾಲುಗಳ ನಡುವೆ,ಪ್ರಕೃತಿಯೇ ಪಾಠ ಹೇಳುವ ಗುರುವಾಗುತಿದೆ;ಸ್ವಚ್ಛತೆ, ಶಿಸ್ತು, ಸಮಯದ ಮೌಲ್ಯ,ಪ್ರತಿ ಹೆಜ್ಜೆಯಲಿ ಬದುಕಿನ ಬೆಳಕಾಗುತಿದೆ// ಮಕ್ಕಳ ದಾಹ ತಣಿಸುವ ಶುದ್ಧ ನೀರಿನ ತೊರೆ,ಆರೋಗ್ಯದ ಅರಿವು ಬೆಳೆಸುವ ಅಕ್ಕರೆಯ ಸ್ಪರ್ಶ;ಹಸಿ–ಒಣ ಕಸದ ವಿಂಗಡಣೆಯ ಪಾಠ,ಪರಿಸರ ಪ್ರೀತಿಯ ಬದುಕಿನ ಆದರ್ಶ// ಸಾವಿತ್ರಿಬಾಯಿ ಫುಲೆ ವೇದಿಕೆಯ ಸೊಬಗು,ಜ್ಞಾನದ ದೀಪವನು ಹೊತ್ತ ಮಹಿಮೆಯ ಸಂಕೇತ;ಅದನು ನೋಡುವ ಎರಡು ಕಣ್ಣು ಸಾಲದೆ,ಮನದಲಿ ಮೂಡುತ್ತದೆ ಭವಿಷ್ಯದ ಸುಂದರ ಚಿತ್ರ// ಶಿಕ್ಷಕಿಯ ಉದಾತ್ತ ಚಿಂತನೆ, ದೂರದೃಷ್ಟಿ,ಮಕ್ಕಳ ಏಳಿಗೆಗೆ ಅಕ್ಷಯ ತಪಸ್ಸಾಗಿದೆ;ತಾಯಿಯ ಮಮತೆಯಲಿ ಜ್ಞಾನವನುಣಿಸುವ,ಸೇವೆಯ ಬದುಕು ಸಾರ್ಥಕತೆಯಾಗಿದೆ//  ಇದು ಶಾಲೆಯಲ್ಲ ಹಸಿರು ದೇವಾಲಯ,ಇದು  ಕೋಣೆಗಳು  ಕನಸುಗಳ ನೆಲೆ;ಇಲ್ಲಿಂದ ಹೊರಡುವ ಪ್ರತಿಯೊಂದು ಮಗು,ನಾಡಿನ ಭವಿಷ್ಯವ ಬೆಳಗಿಸುವ ದಿವ್ಯ ಕಿರಣ// ಹಸಿರು ಉಳಿಯಲಿ, ಶಿಕ್ಷಣ ಅರಳಲಿ,ಸಾವಿತ್ರಿಯ ಕನಸು ಸದಾ ಚಿಗುರಲಿ;ಇಂತಹ ಹಸಿರು ಮಂದಿರಗಳು ಎಲ್ಲೆಡೆ ಬೆಳೆಯಲಿ,ಜ್ಞಾನ ಭಾರತವು ಹಸಿರಾಗಿ ನಗುತಿರಲಿ  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ “ಹಸಿರು ಮಂದಿರ” Read Post »

You cannot copy content of this page

Scroll to Top