ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ”
ಕಾವ್ಯ ಸಂಗಾತಿ ವಾಣಿ ಶಿವಕುಮಾರ್ “ಮನದ ಮಿಡಿತ” ಅಂದು ನೀನು ನನಗೆ ಆಗಂತುಕ..ಆದರಿಂದು ನೀನೇ ನನ್ನ ಸಖ..ಮನ ಬಯಸಿತು ನಿನ್ನ ಸನಿಹ..ಯಾರನ್ನೂ ನೋಡಿಲ್ಲ ನಿನ್ನ ವಿನಃ.. ಪ್ರೀತಿಯ ಜೇನು ಜಿನುಗುತಿದೆ ನನ್ನಲ್ಲಿ,.ನಿನ್ನ ರೂಪವೇ ಅಚ್ಚತ್ತಿದೆ ಹೃದಯದಲ್ಲಿ..ಸೋನೆ ಹನಿ ನಿನ್ನನ್ನು ನೆನಪಿಸಿದೆ..ಮನದ ಅಂತಪುರ ನಿನಗಾಗಿ ಕಾದಿದೆ.. ಗರಿ ತೆರೆದ ನವಿಲಿನಂತೆ ನರ್ತಿಸುತ್ತಿರುವೆ..ಒಂದಾಗಿ ಪ್ರೀತಿಯ ತಾಳವನ್ನು ಹಾಕಲು..ನಾಲ್ಕು ಕೈಗಳು ಒಂದಾಗಿ ಶ್ರುತಿ ಮೀಟಿದರೆ..ನಾದವಾಗಿ ಹೊಮ್ಮುತ್ತದೆರಸಧಾರೆ ಹರಿಯುತ್ತಿರೆ.. ಒಲವಿನ ಬೆಳಕು ಅನುರಾಗವನ್ನು ಚೆಲ್ಲಿದೆ..ಮನದಲಿ ಮೈನ ಹಾಡಿ ಬಾವವ ತುಂಬಿದೆ..ಚೂಪಾದ ನಯನಗಳು ಸಲ್ಲಾಪಕ್ಕೆ ಕರೆದಿದೆ..ಸದ್ದಿಲ್ಲದೆ ಬಂದು ನನ್ನನ್ನು ಆವರಿಸಿದೆ.. ವಾಣಿ ಶಿವಕುಮಾರ್
ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ” Read Post »









