ರಮೇಶ್ ಅಂಬಳಿ ಅವರ ಕವಿತೆ “ನಾನು”
ಕಾವ್ಯ ಸಂಗಾತಿ ರಮೇಶ್ ಅಂಬಳಿ ನಾನು ನಾನು, ಯಾರು ಈ ನಾನು?..ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಅಡಗಿಕುಳಿತಿರುವನು ಈ ನಾನು,ಇವನಿಂದ ಎಲ್ಲಿಯೂ ಶಾಂತಿ ಇಲ್ಲ, ಎಲ್ಲಿಯೂ ಸಮಾಧಾನವಿಲ್ಲ,ಶಾಂತಿಗೆ ಭಂಗ ತರುವುದೇ ಈ ನಾನು ಕೆಲಸ,ಯಾರು ಈ ನಾನು?.. ಇವನಿದ್ದ ಕಡೆಯಲ್ಲಾ ಬರೀ ಹೊಡೆದಾಟ ಬಡಿದಾಟ,ಇವನಿದ್ದ ಕಡೆಯಲ್ಲಾ ನಾನು ಹೆಚ್ಚು, ನೀನು ಕೀಳು,ಇವನಿದ್ದಕಡೆಯಲ್ಲಾ ಬೇಧಾ ಬಾವ,ಇವನಿದ್ದಕಡೆಯಲ್ಲಾ ಜಾತಿ ಮತಗಳ ಗಲಭೆಇವನಿದ್ದಕಡೆಯಲ್ಲಾ ಹಿಂಸೆ, ಶಾಂತಿಗೆ ಇವನ ಬಳಿ ಸ್ಥಳವೇ ಇಲ್ಲ, ಯಾರು ಈ ನಾನು ?.. ಪ್ರೀತಿ ಎಂದರೆ ಇವನಿಗೆ ವಾಕರಿಕೆ, ಸ್ನೇಹಕ್ಕೆ ಇವನಲ್ಲಿ ಬೆಲೆಯೇ ಇಲ್ಲಾ, ಇವನದು ಯಾವಾಗಲೂ ತರ್ಲೆ,ಇವನು ವಾಸಿಸುವ ಕುಟುಂಬದಲ್ಲಿ ಕಲಹಾ,ಇವನಿರುವ ಸಂಘ ಸಂಸ್ಥೆಗಳಲ್ಲಿ ಕಲಹಾ,ಇವನು ನಡೆದಾಡುವ ಸ್ಥಳದಲ್ಲೆಲ್ಲಾ ಕಲಹಾ,ಇವನೇ ಯಾಕೆ ಹೀಗೆ ?.. ಯಾರು ಈ ನಾನು?.. ಈ ನಾನು, ಲೋಕವನ್ನು ಬಿಟ್ಟು ತೊಲಗಲಿ,ಈ ನಾನು ಕುಟುಂಬವನ್ನು ಬಿಟ್ಟು ತೊಲಗಲಿ,ಈ ನಾನು ಸಮಾಜವನ್ನು ಬಿಟ್ಟು ತೊಲಗಲಿ,ಈ ನಾನು ನನ್ನನ್ನು ಬಿಟ್ಟು ತೊಲಗಲಿ,ಈ ನಾನು ನಿನ್ನನ್ನು ಬಿಟ್ಟು ತೊಲಗಲಿ,ಆಗ ಸಮಾಜದಲ್ಲಿ ಶಾಂತಿ, ಕುಟುಂಬದಲ್ಲಿ ಶಾಂತಿ,ನಿನ್ನಲ್ಲಿ ಶಾಂತಿ, ನನ್ನಲ್ಲಿ ಶಾಂತಿ, ಲೋಕವೆಲ್ಲಾ ಶಾಂತಿ ಯಿಂದ ತುಂಬುವುದು ನೋಡಾ ಮನುಜಾ..!! ರಮೇಶ್ ಅಂಬಳಿ
ರಮೇಶ್ ಅಂಬಳಿ ಅವರ ಕವಿತೆ “ನಾನು” Read Post »









