ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅದೆಷ್ಟು ಮುದ್ದಿಸಿ ಹಿಡಿದರೂ,ಮೂಷ್ಟಿಯಲ್ಲಿನ ಮರಳು ಸೋರಿದಾಗ ನೀ ನೆನಪಾದೆರಾತ್ರಿಯಿಡೀ ನಿಟ್ಟಿಸುತ ಕೂತರೂ,ಬೆಳಕಾದಂತೆ ಚಂದ್ರ ಮರೆಯಾದಾಗ ನೀ ನೆನಪಾದೆ ಹೊರೆಯೆನಿಸಿದರೂ ಎಂದೂ ಹೊರಗೆಲ್ಲೂ ಹೇಳಿಕೊಳ್ಳಲಿಲ್ಲಹಗಲನು ಹೊಂಗನಸಿನಂತೆ ಬದುಕಿದರೂ ,ಕತ್ತಲಾದಂತೆ ರವಿಯು  ಕರಗಿದಾಗ ನೀ ನೆನಪಾದೆ ಪ್ರತಿದಿನವೂ ಮಮತೆಯಿಂದ, ನಗು ನಗುತಾ ನೋಡಿಕೊಂಡೆಅಡಿಗಡಿಗೆ ನೀರುಣಿಸಿ ಪೋಷಿಸಿದರೂ, ಗಿಡವು ಹೂ ಬಿಡದಾದಾಗ ನೀ ನೆನಪಾದೆ ನನ್ನದೆನ್ನುವ ಮೋಹದಲಿ ಪ್ರತಿ ಹೊಡೆತವನೂ ಅಪ್ಪಿಕೊಳ್ಳುತಾ ಹೋದೆಸುನಾಮಿಯಿಂದ ಭೋರ್ಗರೆದು ಸಾಗರ ಅತ್ತರೂ, ಆ ಬಂಡೆ ಅನುನಯಿಸದಾಗ ನೀ ನೆನಪಾದೆ ತನ್ನ ಶಾಂತ ಕಂಗಳನೇ ತಂಗುದಾಣದಂತೆ  ನೀಡಿದಳು ವಾಣಿ,ಬೇಡೆಂದರೂ ಕೃತಘ್ನನಂತೆ ಅನ್ಯರೆದುರು ಕಂಬನಿ ಸುರಿದಾಗ ನೀ ನೆನಪಾದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ರೇಖಾ ಉದಯ ಗಜಲ್ ಹರಿಯುವ ನದಿಗೆ ತಡೆಗೋಡೆ ಕಟ್ಟುವವರು ಯಾರು?ಕಷ್ಟಗಳಿಗೆ ಹೆದರಿದರೆ ಗುರಿ ಮುಟ್ಟುವವರು ಯಾರು? ಬಂದದ್ದು ಬರಲಿ ಶಿವನ ದಯೆಯೊಂದಿರಲಿ ಗೆಳೆಯಬೆನ್ನಹಿಂದೆ ನಡೆಸುವ ಹುನ್ನಾರಗಳ ಮೆಟ್ಟುವವರು ಯಾರು? ಮಾನವೀಯತೆ ಬಂಧ ಕಳಚಿ ಬಿದ್ದದ್ದು ಕಂಡಿಲ್ಲವೇ?ಹೆದರಿ ಮೆಟ್ಟಿದರೆ ಧೈರ್ಯದ ಬಾಗಿಲು ತಟ್ಟುವವರು ಯಾರು? ಮಾತಿನ ಗಾಳದಲ್ಲಿ ಮೀನು ಹಿಡಿಯುವವರ ನೆಚ್ಚದಿರು.ಸ್ವಾರ್ಥದ ಮಹಲಿನಲ್ಲಿ ಪ್ರೇಮದೊಲವನ್ನು ಒಟ್ಟುವವರು ಯಾರು? ರೇಖೂ ಹೆದ್ದಾರಿಯ ನಡವಲ್ಲೂ ಅಪಘಾತಗಳು ಸಹಜವಲ್ಲವೇ?ನೀನು ಹಿಂಜರಿದರೆ ಕೆಟ್ಟ ಕ್ರಿಮಿಗಳನ್ನು ಅಟ್ಟುವವರು ಯಾರು? ರೇಖಾಂಕಿ 

ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ “ಮೃಗಶಿರಾ ಮಳೆ” ಬಿಸಿಲ ಬೇಗೆಗೆ ಬಸವಳಿದಭೂರಮೆಯ ತಂಪುಗೊಳಿಸಲುಇಳೆಗೆ ಸುರಿಯಿತಿಂದುಮೃಗಶಿರಾ ಮಳೆಧರಣಿದೇವಿಯತಾಪ ನೀಗಿಸಲು ಕಣ್ಣೋಟ ಹರಿಸಿದೆಡೆಹಸಿರಿನ ವೈಭವಮುನ್ನೋಟ ವಿಹರಿಸಿದೊಡೆಆಹ್ಲಾದದ ಸೂರಭನಿಸರ್ಗ ಚೆಲುವಿನಅಮೃತಪಾವನಈ ಮೃಗಶಿರಾ ಮಳೆ ಕಾದ ನೆಲವ ತಂಪಾಗಿಸಿದಆ ವರುಣದೇವಹಸಿದೊಡಲ ಬರ ನೀಗಿಸಿದಈ ಅನ್ನದೇವಭಾವ ಸಮಾಧಿಯಸಿಂಧೂರಈ ಮೃಗಶಿರಾ ಮಳೆ ಕಪ್ಪೆಗಳ ವಟವಟ ನಿನಾದಚಿಟ್ಟೆಗಳ ಚಿಲಿಪಿಲಿ ನಾದಗುಂಯ್ ಗುಡುವ ಸೊಳ್ಳೆಗಳಮಧುರಾಯನ ಮೈಳೈಸಿತೇಳ್ಈ ಮಳೆಯ ಆರ್ಭಟದಿಂ ಮಳೆಯಿಂದ ಇಳೆಕಾಣುತಿದೆ ಬೆಳೆಮನದಿಂದ ಕಲ್ಮಶವ ಕಳೆಇದೇ ಬಾಳಿಗೆ ಚಿತ್ಕಳೆಬೆಳಗುತಿದೆ ಬಾಳುಸುಖದ ಕುರುಹು ಕೇಳು ಶಿವಕುಮಾರ ಕೋಡಿಹಾಳ      

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಕೊಳ್ಳುವವರಿಲ್ಲ…….” ಜೀವನ ನಾವು ಅಂದುಕೊಂಡತಲ್ಲಅಂದುಕೊಂಡಿದ್ದೆಲ್ಲ ಜೀವನವಲ್ಲಮೇಲೊಬ್ಬನ ಹಣೆಬರಹ ತಿಳಿಯಲ್ಲಬದುಕಿನ ಏರಿಳಿತ ಎಂದೂ ಅರಿವಿಲ್ಲ ಜಗವೇ ಒಂದು ನಾಟಕ ರಂಗಬಾಳಲ್ಲಿ ಇರಲಿ ಒಳ್ಳೆಯವರ ಸಂಗಅರಿಯದೆ ಬಾಳಿದರೆ ಬದುಕು ಭಂಗತಿಳಿಯದಿದ್ದರೆ ಇಂಗು ತಿಂದ ಮಂಗ ಬದುಕಿನ ಸಂತೆಯಲಿ ಬಿಕರಿಗಿದೆ ಕನಸು ಮತ್ತು ಚಿಂತೆಕೊಳ್ಳುವವರಿಲ್ಲ ನೋವುಗಳ ಸಾಲಿನ ಕಂತೆತುಂಬಿಹುದು ಬಾಳಲಿ ಸುಖ ದುಃಖದ ಬೊಂತೆಎಲ್ಲರು ನನ್ನವರೆಂಬ ಸುಳ್ಳು ಭ್ರಮೆಯಂತೆ ಜಗದಿ  ಅರಿಯಬೇಕು ಬಂದ ಕಾರಣಮಾಡಬೇಕು ಏಳಿಗೆಗೆ ಶ್ರಮಿಸಿದವರ ಸ್ಮರಣಸವಿಯುತ್ತಿರು ಸುಂದರ ನೆನಪುಗಳ ತೋರಣಬರೆದಿಹನು ಎಲ್ಲರಿಗೂ ಒಂದು ದಿನ ಮರಣ.  ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನನ್ನೊಳಗೆ“ ನನ್ನೊಳಗೆ ಬೆಳಕೊಂದುಮೌನವಾಗಿ ಹೊಳೆಯಿತು,ಮೋಡದಾಚೆ ಹುಡುಕಿದ ಕಣ್ಣುಮನದೊಳಗೆ ಮರಳಿತು. ನದಿಯಂತೆ ದಿನ ಹರಿದು,ಗಾಳಿಯಂತೆ ಸುಖ ಸರಿದು;ಜಿಂಕೆಯ ಭಯ, ಸಿಂಹದ ಉರಿಒಂದೇ ಎದೆಯಲಿ ಬೆರೆತು. ಹುಟ್ಟಿನ ಕಂಬನಿ ಹನಿಯಲಿ,ತಾಯಿ ನಗುವಿನ ಹೊನಲಲಿ;ದುಃಖದ ಕಾವು, ಸುಖದ ತಂಪುಒಂದೇ ಮನದ ನೆರಳಲಿ. ಕಲ್ಲಿನ ಗುಡಿ ದಾಟಿದರೂಕಾಣದ ಸತ್ಯ ಉಳಿಯಿತು,ಕಣ್ಣು ಮುಚ್ಚಿದ ಮೌನದಲಿಆತ್ಮದೀಪ ಹೊತ್ತಿತು. ಬಂಧದ ಬೇರು ಮನದಲಿ,ಮುಕ್ತಿಯ ಹೂವು ಮನದಲಿ;ಮನ ಹಸಿರಾದ ಕ್ಷಣದಲಿಬದುಕು ಹೂವಾಯಿತು. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ” Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಸಿಡಿಲು ಅಬ್ಬರಿಸಿದರೂ ಮಳೆಯು ಭರವಸೆಹುಟ್ಟಿಸಿದೆ ಗೆಳೆಯಾಮಿಡಿದು ಅಂತರಂಗದಲಿ ಮೂಡಿದ ಭಾವಗಳಮುಟ್ಟಿಸಿದೆ ಗೆಳೆಯಾ ಸುರಿದ ಧಾರೆಯೊಳಗೆ ಮಿಂದ  ಇಳೆಯಲಿತಂಪಿನ ಸಿಂಚನವಲ್ಲವೇಹರಿದು ಧಾರಾಕಾರವಾಗಿ ನದಿಯ ಸೇರುವಾಸೆಮೆಟ್ಟಿಸಿದೆ ಗೆಳೆಯಾ ವಸಂತ ತರುಲತೆಗಳಲಿ ಹಸಿರು ರಂಗವಲಿಎರಚುತ ಬಂದನುಹೊಸತು ಕನಸುಗಳ ಬಿತ್ತಲು ಆಸೆಗಳಕಟ್ಟಿಸಿದೆ ಗೆಳೆಯಾ ಕುಣಿದ ವಸುಂಧರೆಯ ಒಡಲು ಹರುಷದತೋರಣ ಬಿಡಿಸಿದೆತಣಿದ ರೈತಾಪಿವರ್ಗಕೆ ಮೂಡಿದ ಭಯವನುಅಟ್ಟಿಸಿದೆ ಗೆಳೆಯಾ ರಾಧೆಯ ಮನದಂಗಳದ ತೋಟದಿ ನಲಿದಿವೆಬಣ್ಣಬಣ್ಣದ ಹೂವುಗಳುಮಧುರ ಅನುಭೂತಿಯಲಿ ಬದುಕ ಮೌಲ್ಯವಗಿಟ್ಟಿಸಿದೆ ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ”

ಕಾವ್ಯ ಸಂಗಾತಿ ಶ್ರೀದೇವಿ .ಮ.ಗುಮ್ಮಗೋಳ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” ಅಪ್ಪನಿಲ್ಲದ ಮನೆಯೊಳಗೆನೋವು ನುಂಗಿ ಕಷ್ಟಸಹಿಸಿದೈರ್ಯ ವಹಿಸಿ…..ಮಕ್ಕಳನ್ನು ಸಾಕಿಬೆಳಸಿದಳಮ್ಮಮಕ್ಕಳೆಲ್ಲ ಬೆಳದು ಹೆಮ್ಮರವಾಗಿದ್ದಾರೆಮಕ್ಕಳೆಲ್ಲ ತಮ್ಮದೆಂಬ ನೆಲೆಯಲ್ಲಿಅಮ್ಮನಿಗ ಜೇಡರಬಲೆಯಲ್ಲಿ… ಹೆಗಲ ಮೇಲೆ ಹೊತ್ತು ಅಪ್ಪ ತಿರುಗುವಾಗನನ್ನ ಕೂಗು ಮುಗಿಲು ಮುಟ್ಟುತ್ತಿತ್ತುಅಪ್ಪಿನಿಲ್ಲದೇ ತಬ್ಬಲಿಗಳಾಗಿ….ಪ್ರಭಲ ಶಕ್ತಿಗಳ ಬಲಿಗಳಾಗಿ….ನಮ್ಮ ಕೂಗು ಕೇಳುವರಿರಲಿಲ್ಲತುತ್ತು ಕೂಳಿಗಾಗಿ ಅಮ್ಮಮುಸುರಿ ತಿಕ್ಕುತ ಅಲೆದಿದ್ದಳಲ್ಲ….. ಅಪ್ಪನಿಲ್ಲದ ಮನೆ ಈಗಉಪ್ಪರಗಿಯಲ್ಲಿದ್ದೂ ಅನಾಥಭಾವ….ಅಮ್ಮ ಕೇವಲ ಅಣ್ಣ-ಅತ್ತಿಗೆಯರ ಕೈಗೊಂಬೆಮರದಿಂದ ಬೇರ್ಪಟ್ಟ ರಂಬೆಕೊಂಬೆಜೀವವಿದ್ದು ನಿರ್ಜಿವದ ತೊಗುಲುಗೊಂಬೆ ಮನೆಗೆ ಬಂದಾಗಲೆಲ್ಲನೀ ಕುಳಿತ ಕುರ್ಚಿ, ಚಸ್ಮ, ಪೆನ್ನು, ಪುಸ್ತಕ ಬಣಗುಡುತ್ತಿವೆಕಣ್ಣಂಚಿನಲ್ಲಿ ಆರ್ದತೆ ತುಂಬಿಕೊಂಡುಮರೆಮಾಚುತ್ತೇನೆ ನೋವ….ಮಾತಿಗಿಳಿಯುತ್ತೇನೆ ಮಾತು ಒಣಗುತ್ತದೆನನ್ನ ಅಂತಾರಾಳದಲ್ಲಿ ಕುಳಿತುಅಪ್ಪ ಬಂದು ಗುಣಗಣಸಿದ ಭಾವ….. ಅಪ್ಪನಿದ್ದಾಗ ಅಮ್ಮನ‌ ಮಾತು ವಟವಟ…ಅಪ್ಪನ ಮೌನದಲ್ಲೂ ಇತ್ತು ಒಂದು ದಿಟ….ಈಗ ಅಮ್ಮನ ಮಾತುಗಳಿಗೆ ಭಾವವಿಲ್ಲಬರಿ ಮೌನ….ಅವಳ ಶಬ್ಧಗಳಿಗೆ ಕಿವಿಗಳಿಲ್ಲ…ರಕ್ಷಣೆಯೇ ಗೌಣ…. ಯಾವ ಆಸರೆಯಿಲ್ಲದ ಅಮ್ಮಗೋಡೆಯಾದರೂ ಆಸರೆಯಾದಿತೆಂದುಗೋಡೆಯ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಾಳೆ….ಈಗ ಗೋಡೆಯೂ ಅಭದ್ರಅದಕ್ಕೂ ಕಾಡುತ್ತದೆ ನಿನ್ನ ನೆನಪು…. ಶ್ರೀದೇವಿ .ಮ.ಗುಮ್ಮಗೋಳ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ”

ಕಾವ್ಯ ಸಂಗಾತಿ ಎಮ್ಮಾರ್ಕೆ “ನಾವಿರೋದೇ ಹೀಗೆ” ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮಮನೆಗೆ ತಗುಲುವುದೆಂಬ ಪ್ರಜ್ಞೆಯಿಲ್ಲ,ನಮ್ಮ ಮನೆಗೆ ಬೆಂಕಿ ಬಿದ್ದಾಗಲಷ್ಟೇನಾವು ಆರಿಸಲು ಅಣಿಯಾಗುವೆವು ಕಣ್ಣ ಮುಂದೆ ವಂಚನೆ,ಮೋಸನಡೆದರೂ ತಡೆಯುವ ತುಡಿತವಿಲ್ಲ,ನಮ್ಮ ಹತ್ತಿರಕ್ಕೆ ಬಂದಾಗಲಷ್ಟೇನಾವು ಬಿಡದೇ ಹರಿಹಾಯುವೆವು ನಮಗ್ಯಾಕೆ ಇಲ್ಲದ ಉಸಾಬರಿನಮಗೂ ಅದಕೂ ಸಂಬಂಧವಿಲ್ಲ,ನಮಗೆ ಸಂಬಂಧ ಪಟ್ಟಾಗಲಷ್ಟೇಎದೆಯನ್ನುಬ್ಬಿಸಿ ಎದುರಾಡುವೆವು ಬಿಟ್ಟಿ ಉಪದೇಶ ನೀಡುವವರಸಂಖ್ಯೆಗಂತೂ ಕೊರತೆಯೇ ಇಲ್ಲ,ಸ್ವಾರ್ಥದ ಸದುದ್ದೇಶವಿದ್ದರಷ್ಟೇಉದ್ದ ಉಪದೇಶವ ನೀಡುವೆವು ಬಹುತೇಕ ಪ್ರಭು,ಪ್ರಜೆಗಳಲ್ಲಿನಅಹಂಕಾರಕ್ಕ್ಯಾವ ಅಳತೆಗೋಲಿಲ್ಲ,ಕಾಗೆಯ ಬಣ್ಣ ಬಿಳುಪೆಂದರೂಹೂಂ ಎಂದು ಗೋನು ಹಾಕುವೆವು ಒಬ್ಬನೇ ಸೂರ್ಯ ನಿತ್ಯ ಜಗವಬೆಳಗುವುದರ ಪರಿವೇ ನಮಗಿಲ್ಲ,ನಮ್ಮೊಬ್ಬರಿಂದಲೇ ಏನಾದೀತು!ಎಂದು ಮನದಲ್ಲೇ ಮರುಗುವೆವು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ” Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ‌ ಗಜಲ್ ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ ಹಮೀದಾಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅವರ ಕವಿತೆ ಕಾಗದದ ಮೇಲೆಬರೆಯಬೇಕೆಂದ ಸಾಲುಗಳುಇದ್ದಲ್ಲೇ ಕರಗಿಹೋದವು ಸುಮ್ಮನೇಗೆರೆಗಳ ಹಾಕಿಚಿತ್ರವಾಗಬೇಕಾದ ಚಿತ್ರಗಳೂರಸ್ತೆಗಳಾದವುಮರದ ನೆರಳಾಗಿಉಳಿಯಬೇಕಾದ ಹೂವುಗಳುಹಣ್ಣಿಗಾಗಿ ಇಳೆ ಸೇರಿತುಕಾಲದ ಸಹಜಓಟದ ಹರಿವಿಗೆಬಯಲು ನದಿಯಾಯಿತುಕಡಲು ಬದುಕಾಗಿಜೀವದ ಓಟ ಸಾಗಿತು ಮರದ ಮೇಲೊಂದು ಹಕ್ಕಿಕುಳಿತು ಗೂಡು ಕಟ್ಟುವುದುಹೇಗೆ ಎಂದು ನೋಡುತ್ತಿತ್ತುಹಾರಿ ಸಾಗಿ ಬದುಕಿನಉಸಿರಿಗೆ ಉಸಿರಾಗಿಕಣ್ಣೊಳಗೆ ಜಗವತುಂಬುತ್ತಿತ್ತು ಸುಮ್ಮನೇಗದ್ದೆಯ ಹಸಿರಿಗೆಚಿಗುರು ಮೂಡಿತ್ತುಮತ್ತೆ ಮೋಡದಿಮಳೆ ಹನಿಯ ಚಿತ್ರತಾನಾಗಿ ಮೂಡಿಜಗದಗಲದ ನೆಲಕೆತಂಪು ಹರಡಿತ್ತುಕಾಗದದ ಮೇಲೆಮೂಡಿದ ಬಣ್ಣಗಳೆಲ್ಲಾಗಾಳಿಯಲ್ಲಿ ತೇಲಿನೆಲಕೆ ಇಳಿದಿತ್ತುಮತ್ತೆ ಚಿತ್ರವಾಗುತ್ತನೆಲದೊಳಗೆ ಸೇರಿತ್ತು……. ನಾಗರಾಜ ಬಿ.ನಾಯ್ಕ

ನಾಗರಾಜ ಬಿ.ನಾಯ್ಕ ಅವರ ಕವಿತೆ Read Post »

You cannot copy content of this page

Scroll to Top