ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಂಗಳೂರು ಅವರ ಕವಿತೆ “ವಿಕೋಪ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಂಗಳೂರು “ವಿಕೋಪ” ಮಾನವೀಯತೆಯೇಮಾನವನ ನಿಜ ಧರ್ಮವಯ್ಯ,!ಅಶಾಂತಿ ಅನೀತಿ ಅಸಹಿಷ್ಣುತೆಯಾವ ರೀತಿಯ ಧರ್ಮವಯ್ಯ,!      ದೇವಾಲಯ ಮಸ್ಜಿದ್     ಕೆಡವುದೇ ಅಧರ್ಮವಯ್ಯ,?!     ಧರ್ಮ ಧರ್ಮಗಳ ಮಧ್ಯೆ     ಕಂದಕ ಸೃಷ್ಟಿಸುವುದು ಕೆಡುಕಯ್ಯ,! ಕೆಡುಕೇ ಅಧರ್ಮ ಹಾದಿಯುಸಮಾಜಕ್ಕೆ ಮಾರಕ ಕಳಂಕವಯ್ಯ!,ದುರಾಡಳಿತೆಯ ತಂತ್ರವುಲೋಕ ಅವಸಾನದ ಲಕ್ಷಣವಯ್ಯ,! ಕಣ್ಣಾರೆ ಕಂಡ ಸತ್ಯವಿದುಮುಂದೆ ಎಚ್ಚರಿಕೆಯಿಂದ ಬಾಳಯ್ಯ,!ಪ್ರಕೃತಿ ವಿಕೋಪವು ಇದಲ್ಲಪರಮಾತ್ಮನ ತಾಳ್ಮೆಯ ಲೋಪವಯ್ಯ.!       ಹಮೀದ್ ಹಸನ್ ಮಂಗಳೂರು.

ಹಮೀದ್ ಹಸನ್ ಮಂಗಳೂರು ಅವರ ಕವಿತೆ “ವಿಕೋಪ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿ ಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿ ಮಠ ಗಜಲ್ ನಿನ್ನ ಸಂತೈಕೆಗಾಗಿ ಹಲುಬಿ, ಹಂಬಲಿಸಿ ಸೋತು ಹೋದೆಸಿಗದ ಆದರವನ್ನು ಅರಸಿ , ಆಗ್ರಹಿಸಿ ಸೋತು ಹೋದೆ ನಿನ್ನ ಹೆಗಲಾಗಲು,ನನ್ನ ಹಗಲಿರುಳು ನೀಡಿದೆ ನಗುತನಿನ್ನ ನಜರಿಗೆ ನಾ ಬರಲು ಆಶಿಸಿ, ಆಕರ್ಷಿಸಿ ಸೋತು ಹೋದೆ ಒಂದಲ್ಲ,ಎರಡಲ್ಲ,ಎಷ್ಟೋ ವಸಂತ ಕಳೆದೆವು ಜೊತೆಗೆನಿನ್ನ ಕಣ್ಣುಗಳಲಿ ನನ್ನನು ಕನಸಿಸಿ ಸೋತು ಹೋದೆ ನೀ ಅನ್ಯರಿಗೆ ತೋರುವ ಕಾಳಜಿ ದಿನವೂ ನೋಡುವೆ ನಲ್ಲಹುಸಿ ಮಾತಲ್ಲಾದರೂ ಹಸಿಯಾಗಲು ತವಕಿಸಿ ಸೋತು ಹೋದೆ ಬಲು ಕಷ್ಟವೇ ಇದ್ದಿರಬೇಕು ವಾಣಿ,ಪ್ರೀತಿಯನು ಪ್ರೀತಿಸುವುದುನಾನಿಲ್ಲದ ನಿನ್ನ ಜಗದಲಿ ನನ್ನನು ಅಂದಾಜಿಸಿ ಸೋತು ಹೋದೆಗಜಲ್ನಿನ್ನ ಸಂತೈಕೆಗಾಗಿ ಹಲುಬಿ, ಹಂಬಲಿಸಿ ಸೋತು ಹೋದೆಸಿಗದ ಆದರವನ್ನು ಅರಸಿ , ಆಗ್ರಹಿಸಿ ಸೋತು ಹೋದೆ ನಿನ್ನ ಹೆಗಲಾಗಲು,ನನ್ನ ಹಗಲಿರುಳು ನೀಡಿದೆ ನಗುತನಿನ್ನ ನಜರಿಗೆ ನಾ ಬರಲು ಆಶಿಸಿ, ಆಕರ್ಷಿಸಿ ಸೋತು ಹೋದೆ ಒಂದಲ್ಲ,ಎರಡಲ್ಲ,ಎಷ್ಟೋ ವಸಂತ ಕಳೆದೆವು ಜೊತೆಗೆನಿನ್ನ ಕಣ್ಣುಗಳಲಿ ನನ್ನನು ಕನಸಿಸಿ ಸೋತು ಹೋದೆ ನೀ ಅನ್ಯರಿಗೆ ತೋರುವ ಕಾಳಜಿ ದಿನವೂ ನೋಡುವೆ ನಲ್ಲಹುಸಿ ಮಾತಲ್ಲಾದರೂ ಹಸಿಯಾಗಲು ತವಕಿಸಿ ಸೋತು ಹೋದೆ ಬಲು ಕಷ್ಟವೇ ಇದ್ದಿರಬೇಕು ವಾಣಿ,ಪ್ರೀತಿಯನು ಪ್ರೀತಿಸುವುದುನಾನಿಲ್ಲದ ನಿನ್ನ ಜಗದಲಿ ನನ್ನನು ಅಂದಾಜಿಸಿ ಸೋತು ಹೋದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿ ಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ರತ್ನರಾಯ ಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯ ಮಲ್ಲ ಅವರ ಗಜಲ್ ನನ್ನೆದೆಯಲಿ ಅರಳಿದ ಚಿತ್ರವ ವರ್ಣಿಸಲು ಪದಗಳು ಸೋಲುತಿವೆಭಾವದ ಕುಲುಮೆಯಲಿ ಗಜಲ್ ರಚಿಸಲು ಪದಗಳು ಸೋಲುತಿವೆ ದಿನವೂ ನಿನ್ನ ಕಾಣುತಿರುವೆ ಅವನಿಗೆ ಬೆಳಕಾಗಿರುವ ನೇಸರನಲಿಹೃದಯದಲಿ ನಿನ್ನ ಇರುವಿಕೆ ತೋರಿಸಲು ಪದಗಳು ಸೋಲುತಿವೆ ಪ್ರೇಮದ ಹಸಿವು ನೀಗಿಸಲು ನಿನ್ನ ಅಂತರಂಗದ ಕದ ತಟ್ಟುತಿರುವೆನಿನ್ನಧರಗಳ ಸವಿ ಪುಟದಲಿ ಜೋಡಿಸಲು ಪದಗಳು ಸೋಲುತಿವೆ ಪ್ರೀತಿಸುತಿಲ್ಲ ಅಕ್ಷರಗಳಲಿ ನಿನ್ನನು ಉಸಿರಾಡುತಿರುವೆ ಬೇಬಿಮಾನನ್ನಾರುಮೆಯ ಆಳದ ಅಳತೆ ತಿಳಿಸಲು ಪದಗಳು ಸೋಲುತಿವೆ ಮಲ್ಲಿಗೆ ಸುಮದಂತೆ ನೆನಪು ದೂರವಿದ್ದರೂ ಕನಸಲಿ ಅರಳುವುದುಅಂತರದಲಿ ಜಿನುಗುವ ಕಂಬನಿ ರಮಿಸಲು ಪದಗಳು ಸೋಲುತಿವೆ ರತ್ನರಾಯಮಲ್ಲ

ರತ್ನರಾಯ ಮಲ್ಲ ಅವರ ಗಜಲ್ Read Post »

ಅನುವಾದ, ಕಾವ್ಯಯಾನ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ

ಅನುವಾದ ಸಂಗಾತಿ “ನಿನ್ನೆಯೊಳಗೆ” ತೆಲುಗು ಮೂಲ:ರಾಜಾಬಾಬು ಕಂಚರ್ಲಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ ಜೀವನವನ್ನು ದಾಟಿಕೊಂಡು ಹೊರಟಿದ್ದೇನೆಎಲ್ಲೋ, ಎಂದೋ…ನನ್ನ ಭವಿಷ್ಯವನ್ನೇಕಳೆದುಹೋಗುವಂತೆ ಬಿಟ್ಟು ಬಂದವನಂತೆ ಎದುರಾದವರುನಗುತ್ತಾ ಮಾತಾಡಿಸುವರುಕಾಲವು ಮಾತ್ರನನ್ನ ಕೈ ಹಿಡಿದುಮುಂದಕ್ಕೆ ಎಳೆದೊಯ್ಯುತ್ತಿದೆ ಆದರೂ…ನನ್ನೊಳಗಿನ ಒಂದು ಸಣ್ಣ ತುಣುಕುಇಂದಿಗೂ ಅಲ್ಲೇ ನಿಂತಿದೆನೀನು ಕೊನೆಯ ಸಲಕಂಡ ಆ ಹೊಸ್ತಿಲ ಬಳಿ ನೀನು…ಮೌನದೊಳಗೆ ಮುಳುಗಿಹೋದೆನಾನು ಮಾತ್ರನನಗಿಷ್ಟವಾದ ನಿನ್ನೆಯೊಳಗೆನಡೆಯುತ್ತಾ ಹೊರಟುಹೋದೆ ದಿನಗಳು ಕಳೆದವುಋತುಗಳು ಬದಲಾದವುಮನುಷ್ಯರು ಬದಲಾಗಿಬಿಟ್ಟರು ಆದರೆ… ನನ್ನೊಳಗೆಇನ್ನೂ ಒಂದು ಬಾಗಿಲು ಮಾತ್ರಇಂದಿಗೂ ತೆರೆದೇ ಇದೆನೀನು ಮರಳಿ ಬರಬಹುದೆಂಬ ನಿರೀಕ್ಷೆಯಿಂದಲ್ಲನಾನು ಕಳೆದುಕೊಂಡನನ್ನ ನಿನ್ನೆಯನ್ನುಎಂದಾದರೂ ಮತ್ತೆಪಡೆಯುವೆನೇನೋ ಎಂಬ ನಿರೀಕ್ಷೆಯಿಂದ!! ತೆಲುಗು ಮೂಲ : ರಾಜಾಬಾಬು ಕಂಚರ್ಲಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಒಡವೆ ತೊಡುವ ಆಸೆಯಲಿ  ಕಿವಿ ಚುಚ್ಚಿಸಿಕೊಳ್ಳುತಿರುವೆನುಮರೆಯಾಗಲೆಂದು ಮಣ್ಣಿನಲಿ ಮುಖ ಮುಚ್ಚಿಸಿಕೊಳ್ಳುತಿರುವೆನು ಇರುವ ಗಾಯಗಳ ಲೆಕ್ಕ ಸಾಲದಾಯಿತು ಈ ಜೀವನಕೆನಯವಂಚಕರ  ನಾಲಿಗೆಯಲಿ ಬಾಳ ಕೊಚ್ಚಿಸಿಕೊಳ್ಳುತಿರುವೆನು ಪುಟ ತಿರುವಿದಷ್ಟು ಪೂರ್ಣ ವಿರಾಮವಿರದ ಸಾಲುಗಳಿವೆಬೇಡವಾಗಿರುವ ಬದುಕಿನಲಿ ವಿಧಿ ಮೆಚ್ಚಿಸಿಕೊಳ್ಳುತಿರುವೆನು ಬೆವರು ಬಸಿದರೆ ಸಾಲದೇನು ಈ  ಹಾಳು ಜನುಮಕೆರಕುತ ಸುರಿಸಿ  ಭಕುತಿಯಲಿ ದೈವ ನೆಚ್ಚಿಸಿಕೊಳ್ಳುತಿರುವೆನು ನಡೆದ ದಾರಿಯಲಿ ನರಳುತಿವೆ  ಜ್ಯೋತಿ  ಹೆಜ್ಜೆ ಗುರುತುಗಳುಸುಮ್ಮನಿರದೆ  ಗದ್ದಲದಲಿ ಹಾವು ಕಚ್ಚಿಸಿಕೊಳ್ಳುತಿರುವೆನುಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಮತ್ತೆ ಹಾರಿತು ಹಕ್ಕಿ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಮತ್ತೆ ಹಾರಿತು ಹಕ್ಕಿ” ಮುರಿದ ರೆಕ್ಕೆಗಳ ನೋವನುಮರೆತಂತೆ ಕಂಡ ಆ ಹಕ್ಕಿ,ಗಾಳಿಯ ಕ್ರೂರ ಕೈಗಳಲ್ಲಿ ಸಿಲುಕಿನೆಲಕ್ಕೊಮ್ಮೆ ಬಿದ್ದಿತ್ತು. ಆಕಾಶವೆಂದರೆ ಕನಸು,ಹಾರಾಟವೆಂದರೆ ಬದುಕು,ಎಂದು ತಿಳಿದ ಅದರ ಕಣ್ಣಲ್ಲಿಅಂದು ಕತ್ತಲೆ ತುಂಬಿತ್ತು. ಗೂಡಿನ ಮೂಲೆಗೊಮ್ಮೆ ಕುಳಿತುಗಾಯಗಳನ್ನೇ ಎಣಿಸುತ್ತ,“ಇನ್ನು ಹಾರಲಾರೆನೋ?” ಎಂಬಮೌನದ ಪ್ರಶ್ನೆಯೊಂದಿತ್ತು. ಬೆಳಗಿನ ಮೊದಲ ಕಿರಣಅದರ ರೆಕ್ಕೆಗೆ ಮುತ್ತಿಟ್ಟಾಗ,ಒಣಗಿದ್ದ ಕನಸಿನೊಳಗೊಂದುಹೊಸ ವಸಂತ ಮೂಡಿತು. ಗಾಳಿಯೇ ಮತ್ತೆ ಕರೆದಿತು“ಬಾ, ಹೆದರಬೇಡ!” ಎಂದಿತು,ಬಿದ್ದ ನೆಲವನ್ನೇ ಮೆಟ್ಟಿಲಾಗಿಸಿಆ ಹಕ್ಕಿ ಮೇಲೇರಿತು. ಒಮ್ಮೆ… ಎರಡು ಬಾರಿ…ರೆಕ್ಕೆಗಳು ನಡುಗಿದವು,ಆದರೂ ಸೋಲಿನ ನೆನಪುಗಳ ಮೇಲೆಧೈರ್ಯದ ಗೀತೆ ಬರೆದವು. ಈ ಬಾರಿ ಕೇವಲ ಆಕಾಶಕ್ಕಲ್ಲ,ತನ್ನೊಳಗಿನ ಭಯದಾಚೆಗೆ;ಈ ಬಾರಿ ಕೇವಲ ಬದುಕಿಗಲ್ಲ,ಬದುಕಿನ ಅರ್ಥದಾಚೆಗೆ. ಬಿರುಗಾಳಿಗಳು ಬಂದರೂಇನ್ನು ಅದು ನಿಲ್ಲುವುದಿಲ್ಲ,ಮುರಿದ ರೆಕ್ಕೆಗಳ ಇತಿಹಾಸವನ್ನೇಸೋಲಿನ ಕಥೆ ಎನ್ನುವುದಿಲ್ಲ. ಬೀಳುವುದು ಅಂತ್ಯವಲ್ಲ,ಕಣ್ಣೀರು ದೌರ್ಬಲ್ಯವಲ್ಲ;ಮತ್ತೆ ಎದ್ದು ಹಾರುವ ಕ್ಷಣವೇಜೀವನದ ನಿಜವಾದ ಜಯಗಾಥೆ! ಆಕಾಶ ವಿಶಾಲವಾಗಿತ್ತು,ದಿಕ್ಕುಗಳು ಕೈಬೀಸಿ ಕರೆದವು,ಬಂಧನಗಳೆಲ್ಲ ಕೆಳಗಿಳಿದಾಗಸ್ವಾತಂತ್ರ್ಯ ಹಾಡಾಗಿ ಮೊಳಗಿತು. ಮತ್ತೆ ಹಾರಿತು ಹಕ್ಕಿ…ಮುರಿದ ರೆಕ್ಕೆಗಳನ್ನೇ ಬಲವಾಗಿಸಿಕೊಂಡು,ಸತ್ತ ಕನಸುಗಳನ್ನೇ ಜೀವವಾಗಿಸಿಕೊಂಡು,ತನ್ನ ಸೋಲನ್ನೇ ಮೆಟ್ಟಿಲಾಗಿಸಿಕೊಂಡು— ಮತ್ತೆ ಹಾರಿತು ಹಕ್ಕಿ…ಈ ಬಾರಿಆಕಾಶವನ್ನೇ ತನ್ನದಾಗಿಸಿಕೊಂಡುಕೇವಲ ಹಕ್ಕಿಯಾಗಿ ಅಲ್ಲ,ಸೋಲಿನ ಸಮಾಧಿಯ ಮೇಲೆಗೆಲುವಿನ ಗೀತೆ ಹಾಡುವಸ್ವಾತಂತ್ರ್ಯದ ಪ್ರತೀಕವಾಗಿ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಮತ್ತೆ ಹಾರಿತು ಹಕ್ಕಿ” Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಲೆಕ್ಕವೇ ಇಲ್ಲ” ಎದೆ ಗೂಡಲಿ ಬಚ್ಚಿಟ್ಟ ಕನಸುಗಳಿಗೆ ಲೆಕ್ಕವೇ ಇಲ್ಲಬಿರಿದ ಭಾವನೆಗಳ ನೋಟಗಳಿಗೆ ಲೆಕ್ಕವೇ ಇಲ್ಲ ಸುಳಿ ಗಾಳಿಯಲಿ ಒಮ್ಮೆಯೂ ಪಿಸುಗೂಡಬಾರದೆಹಿಡಿದಿಟ್ಟ ಬಯಕೆಗಳು ನೀಲ ನೀಲಿಯಲಿ ಸೇರುವ ಸಾಲಿಗೆ ಲೆಕ್ಕವೇ ಇಲ್ಲ ಮೋಹ ಮಧುವಿಗೆ ವಾಸ್ತವವೇ ಮರೆತು ಬಿಟ್ಟಿರುವೆತೀರದ ಬಯಕೆಗಳ ಹರಿವ ನೀರಿಗೆ ತೇಲುವ ದಾರಿಗೆ  ಲೆಕ್ಕವೇ ಇಲ್ಲ ಮಾಮರ ಕೋಗಿಲೆ ಮೂಕ ಮರ್ಮರ ತಾಳಿದೆಕಟ್ಟಿದ ಗೋಪುರಕೆ ಕಳಸ ಬಿದ್ದು ಶೋಕಗೀತೆಗೆ ಲೆಕ್ಕವೇ ಇಲ್ಲ ಒಲವ ಭಾವದ ವೀಣೆ ತಂತಿ ನುಡಿಸುವುದೇ ಮರೆತು ಬಿಟ್ಟಿದೆಕಹಿ ಬೇವು ಜಗಿಯುತ ರೇಶಿಮೆ ದೂಡುವ ದಿನಗಳಿಗೆ ಲೆಕ್ಕವೇ ಇಲ್ಲ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ” Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ‌ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಜ್ವಲಿಸುವ ಪ್ರೀತಿಯ ಸಹಿಸಿ ನುಂಗಲೆಂಗ ಹೇಳುಸುಡುವ ಕೆಂಡವ ಕಟ್ಟಿಕೊಂಡು ತಾಳಲೆಂಗ ಹೇಳು ಬಯಕೆ ಬಾಂದಳ ತೋಟ ನಳನಳಿಸುತಿದೆ ನೋಡುಒಲವಿನೊರತೆಯ ಒತ್ತರವ ತಡೆಯಲೆಂಗ ಹೇಳು ಮನಸು ಕಂಡ ಆಸೆಯೆಲ್ಲಾ ಫಲಿಸದೆಂದು ನಾ ಬಲ್ಲೆಪ್ರೇಮದುಯ್ಯಾಲೆಯ ಏರಿಳಿತ ತಾಳಲೆಂಗ ಹೇಳು ಜೀವ ಜೀವಕಂಟಿದ ನಂಟಿನ ಗಂಟು ಬಿಡಿಸಲುಂಟೆಪ್ರೇಮಾಮೃತವೇ ವಿಷವಾದರೆ ಬಾಳಲೆಂಗ ಹೇಳು ಒಡಲಾಳ ವಿರಹ ಭೋಗ೯ರೆತಕೆ ಸಿಕ್ಕು ತಪ್ತವಾಗಿದೆತುಟಿಯ ಮಧು ಹೆಪ್ಪುಗಟ್ಟಿದರೆ ಉಸುರಲೆಂಗ ಹೇಳು ಸರಸವಿಲ್ಲದ ಕೋಲಾಹಲ ಅವುಡುಗಚ್ಚಿಸಿ ಚುಚ್ಚುತಿದೆಹಾರಬೇಕೆನುವ ಬಯಕೆ ಪುಕ್ಕವ ಕತ್ತರಿಲೆಂಗ ಹೇಳು ಹುಚ್ಚೆದ್ದ ಆಸೆಗಳ ಸೊಕ್ಕನೆಲ್ಲ ಮುರಿಯಲಾಗುತಿಲ್ಲಕುದಿವ ಬೆಚ್ಚನೆಯ ಆ  ಭಾವ ಹೊಚ್ಚಲೆಂಗ ಹೇಳು ಅನುಳೆದೆಯಲ್ಲೆ ಅಚ್ಚಾದ  ಚಿತ್ರ ಕೊಚ್ಚಿ ಕತ್ತರಿಸಲುಂಟೆಚಿತ್ತ ಬಿತ್ತಿಯ ನೆನಪು ವಿಧಿ ಚೋರಗ ಒಪ್ಪಿಸಲೆಂಗ ಹೇಳು// ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ‌ ಗಜಲ್ Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” ​ತಲ್ಲಣಗಳೆಲ್ಲ ಮೀರಿದಮೇಲೆ—ಕದ ತಟ್ಟಿದೆ ನೀನು;ದೀಪ ಹಚ್ಚುವ ತವಕವೇ ಇರಲಿಲ್ಲ ನನಗೆ,ನೀನು ಹೊತ್ತಿಸಿದ ಬೆಳಕಿಗೆಕತ್ತಲೆ ಗೋಳಾಡಿ ಕರಗಿತು. ​ಒಡೆದು ಗಾಯಗೊಂಡಅಪರಾಹ್ನದ ಕನಸಿಗೆ,ಬಂದೆರಗಿದ ತಂಗಾಳಿತಲೆ ಸವರಿದಂತಿತ್ತು;ಇಂಗಿಹೋದ ಒಣ ಹಂಗುಕಂಬಳಿಯ ಮರೆಯಲ್ಲಿಮುತ್ತೈದೆಯಂತೆಪಿಸುಗುಟ್ಟಿತು. ​ನೆನಪು ಕೊಯ್ದ ಕಂಬನಿ,ಟಪಕ್ಕನೆ ಉದುರಿತೆರೆಯ ಮರೆಯಲ್ಲಿನೆಲ ಹಿಡಿಯಿತು;ಹಳಸಲು ಪ್ರೀತಿಯಹಿಲಾಲು ಒಗೆದುಇಸ್ತ್ರಿ ಹಾಕಿ ನೀನುಲೇಪನ ಹಚ್ಚಿದರೂ—ಲವಲವಿಕೆಯೇ ಲೇವಡಿ ಮಾಡಿತು! ​ನೀನು ಬಂದದ್ದುತುಸು ತಡವಾಯ್ತೇನೋ…?ಕತ್ತಲು ಮುಸುಕಿದ ತೇವದಲಿಒಣಗಿಹೋದ ಶಬ್ದಗಳುಗದ್ಗದಿಸಿ ಬಿಕ್ಕಳಿಸಿದವು;ಬಹು ಬಿರಿಯಾದ ಎದೆಯೊಳಗೆಉತ್ತರವಿಲ್ಲದ ಪ್ರಶ್ನೆಗಳುಮತ್ತೆ ನರಳಿಸಿದವು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ ಅವರ ಗಜಲ್ ಬಾಲರವಿಯು  ಕದ್ದನೇನು  ಅವಳ ಅಧರದ  ಕೆಂಪನು  ಸಾಕಿಗುಲಾಬಿ  ಹೂವು ಬೇಡಿತೇ ನಲ್ಲೆಯ  ಕೆನ್ನೆಯ  ರಂಗನು  ಸಾಕಿ ಅದೇಕೆ  ಬಾನು ನೀರಸಗೊಂಡಿದೆ  ಮೇಘ ಮುಸುಕಿನಲಿಚಂದ್ರಿಕೆಯು  ಸೆಳೆಯಿತೇ ನನ್ನವಳ  ಮೈಯ  ಬಿಳುಪನು  ಸಾಕಿ ಹೂದೋಟವೆಲ್ಲವೂ  ಘಮಘಮಿಸಿದೆ ಅರಳಿದರಳುಗಳ ಸೌಗಂಧದಿಂದಭ್ರಮರ  ಬೆರಗುಗೊಂಡಿತೇ ಕಂಡು ಚೆಲುವೆಯ ಕುರುಳನು  ಸಾಕಿ ಕಡಲ ಅಲೆಗಳು ನಗುತಿವೆ  ಒಯ್ಯಾರದಲಿ  ದಡವ ಚುಂಬಿಸುತಲಿಕಾರ್ಮೋಡ  ಚಕಿತಗೊಂಡಿತೇ ನೋಡಿ  ಕಂಗಳ  ಕಾಡಿಗೆಯನು  ಸಾಕಿ ಠೀವಿಯಲಿ  ಗರಿಗೆದರಿ ಕುಣಿಯುತಿದೆ  ನವಿಲೊಂದು  ದೂರದಲಿಹೃದಯ ಹಾಡುತಿಹುದೇ ರಾಗವಾಗಿ  ಬೇಗಂ ಳ ಒಲವನು ಸಾಕಿ ಹಮೀದಾಬೇಗಂ ದೇಸಾಯಿ.

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

You cannot copy content of this page

Scroll to Top