ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಹೆಚ್.ನಟರಾಜ್‌ ಅರ್ಯ ಅವರ ಕವಿತೆ “ಬೆಳದಿಂಗಳ ರಾತ್ರಿ ಕಂಡ ಕನಸು”

ಕಾವ್ಯ ಸಂಗಾತಿ ಡಾ.ಹೆಚ್.ನಟರಾಜ್‌ ಅರ್ಯ “ಬೆಳದಿಂಗಳ ರಾತ್ರಿ ಕಂಡ ಕನಸು” ಬೆಳದಿಂಗಳ ಬೆಳ್ಳಿ ಹಾದಿಯಲ್ಲಿ,ಮನಸು ಮೌನವಾಗಿ ತೇಲಿತು;ನೆರಳಿನ ಮಧ್ಯೆ ನಿಂತ ಕನಸು,ನನ್ನ ಕೈ ಹಿಡಿದು ನಡೆಯಿತು. ಕತ್ತಲ ಕಾಡು ದಟ್ಟವಾದರೂ,ಚಂದ್ರ ಕಣ್ಣು ಮಿಟುಕಿಸಿತು;ದಿಕ್ಕಿಲ್ಲದ ಹೆಜ್ಜೆ ಮುಂದೆ,ಕನಸೇ ದಾರಿಯಾಗಿ ನಿಂತಿತು. ಒಣ ಮಣ್ಣಿನ ನಿಶ್ಶಬ್ದದಲ್ಲಿ,ಒಂದು ಮೊಳೆ ತಲೆ ಎತ್ತಿತು;“ದಯೆ ಬಿದ್ದ ಬೀಜವಾದರೆ,ಬಾಳೇ ಮರವಾಗಿ ಬೆಳೆಯಿತು.” ಹಸಿದ ಕಣ್ಣಿನ ತೇವದಲ್ಲಿ,ದೇವರ ಮೌನ ಕಾಣಿಸಿತು;ಒರೆಸಿದ ಒಂದು ಕಣ್ಣೀರಲ್ಲಿ,ಒಂದು ದೀಪವೇ ಹೊತ್ತಿತು. ಸುಲಭ ಸಿಹಿಯ ಮೃದುವಾದ ಧ್ವನಿ,ದೂರದಿಂದ ಕರೆಯಿತು;ಬೆವರಿನ ಉಪ್ಪು ಬಿದ್ದ ಜಾಗದಲ್ಲಿ,ಸತ್ಯದ ಬೆಳೆ ಮೊಳೆಯಿತು. ಕಲ್ಲಿನ ಹೃದಯದೊಳಗೂ,ಒಂದು ಹನಿ ದಯೆ ಬೀಳಿತು;ಹಿಮಾಲಯದ ಅಹಂಕಾರವೂ,ಮೌನವಾಗಿ ನೀರಾಯಿತು. ಬೀಜವಾಗಿ ಬಿದ್ದ ಸಣ್ಣ ಕೈಹಿಡಿತ,ಕಾಲದಲ್ಲಿ ಮರವಾಗಿ ನಿಂತಿತು;ಆ ಮರದ ನೆರಳಲ್ಲಿ ಒಂದು ದಿನ,ಕೊಟ್ಟ ಕೈಯೂ ಮರೆತು ಹೋಯಿತು. ಬೆಳದಿಂಗಳ ಮೌನ ರಾತ್ರಿ,ಕನಸು ಬಂದು ಮಾತಾಡಿತು“ಒಂದು ಮನದಲ್ಲಿ ಬೆಳಕು ಹತ್ತಿದರೆ,ಲೋಕವೆಲ್ಲ ಪ್ರಭಾತವಾಯಿತು.” ಡಾ.ಹೆಚ್.ನಟರಾಜ್‌ ಅರ್ಯ

ಡಾ.ಹೆಚ್.ನಟರಾಜ್‌ ಅರ್ಯ ಅವರ ಕವಿತೆ “ಬೆಳದಿಂಗಳ ರಾತ್ರಿ ಕಂಡ ಕನಸು” Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಅದಾವ ಮೋಹದ ಮಾಯೆ ಸೆಳೆದಿದೆ ನಿನ್ನೆಡೆಕಣ್ಣೊಳಗಿನ ಒಲವಿನ ನೋಟ ಕರೆದಿದೆ ನಿನ್ನೆಡೆ ಗಾಳದಲ್ಲಿ ಸಿಕ್ಕ ಮೀನಂತಾಗಿದೆ ನನ್ನೀ ಜೀವನನಂಬಿಕೆಯೇ ಒಲವೆಂಬ ಜಾಡು ಹಿಡಿದಿದೆ ನಿನ್ನೆಡೆ ನಯವಾದ ಮಾತುಗಳೇ ಮುದ ನೀಡಿದವು ಎನಗೆಶರದಿ ಸೇರುವ ತವಕದಿ ಮನ ನಡೆದಿದೆ ನಿನ್ನೆಡೆ ತಿಳಿಯದಂತಿರಬೇಕು ಮಾಡಿದ ತಪ್ಪುಗಳಿಗೆ ಅಲ್ಲವೇಭ್ರಮೆಯ  ತೊರೆದು ನಂಬಿಕೆಯ ಪಡೆದಿದೆ ನಿನ್ನೆಡೆ ರೇಖೂ ಸೋಕಿಸಿಕೊಳ್ಳದಿರು ಕರಿ ನೆರಳ ಛಾಯೆಯಸೋಲಿನ ಭೀತಿಯ ಬಿಟ್ಟು ಭರವಸೆ ಬೆಳೆದಿದೆ ನಿನ್ನೆಡೆ ಡಾ.ರೇಖಾ ಉದಯ

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಮಾಲಾ ಚಲುವನಹಳ್ಳಿ ಅವರ‌ ಗಜಲ್

ಕಾವ್ಯ ಸಂಗಾತಿ ಮಾಲಾ ಚಲುವನಹಳ್ಳಿ ಗಜಲ್ ನಡೆಯುವ ಹಾದಿಯಲ್ಲಿ ಹೂವು ಚೆಲ್ಲಿ ಕೈ ಹಿಡಿದು ನಡೆಸುವೆನು ಸಖತಡೆಯುತ ಅಡೆತಡೆಯ ಸಹಬಾಳ್ವೆಗೆಹೂ ಮಳೆಯ ಸುರಿಸುವೆನು ಸಖ ಸಮ್ಮತಿ,ಅಸಮ್ಮತಿಗಳ ಅಸಮತೋಲನಸಂಸಾರದಲ್ಲಿ ಸಹಜವಲ್ಲವೇನುನಮ್ಮದೇ ನಿಸ್ವಾರ್ಥದ ಚೌಕಟ್ಟಿನಲ್ಲಿನಿನ್ನ ಮೈ ಮರೆಸುವೆನು ಸಖ ಹರೆಯವೆಂದರೆ ಬಣ್ಣದ ಚಿತ್ತಾಕರ್ಷಕಅರಿಯದ ಮೂಢನಲ್ಲ ನೀಕರೆಯುವ ಕಾಮನೆಗಳ ಜೊತೆ ಪ್ರೇಮ ಸೌಧದಿ ನಿನ್ನ ಇರಿಸುವೆನು ಸಖ ಶಬ್ದವಾಗಲಾರದ ಭಾವಗಳು ಅದೆಷ್ಟೋಎದೆಯೊಳಗೆ ನಗಾರಿಯಾಗಿವೆಸ್ಥಬ್ಧವಾದ ಮಾತುಗಳೂ ತಾಕಲಾಟವನಡೆಸುವುದ ಅರ್ಥೈಸುವೆನು ಸಖ ಭವಿಷ್ಯದ ಹಾದಿ ತೆರೆದುಕೊಂಡಿರುವಈ ಘಳಿಗೆ ತವಕ ನೂರಾಗಿದೆನವಿರಾದ ಕನಸುಗಳು ಮಾಲಾಳ ಎದೆಯಹಾಡಾಗಿರುವುದ ತಿಳಿಸುವೆನು ಸಖ ಮಾಲಾ ಚೆಲುವನಹಳ್ಳಿ

ಮಾಲಾ ಚಲುವನಹಳ್ಳಿ ಅವರ‌ ಗಜಲ್ Read Post »

ಕಾವ್ಯಯಾನ

ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?”

ಕಾವ್ಯಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” ಪ್ರತಿಷ್ಠೆಗಾಗಿ ಪಣಬಲಾಬಲಕ್ಕಾಗಿ ಬಣ;ಹೊಡೆದಾಡಿ ಬಡಿದಾಡಿಒಂದಿವಸ ರಣಾಂಗಣದಲ್ಲಿಹೆಂಗೆಂಗೋ ಬಿದ್ದ ಹೆಣ ಗೆಲ್ಲಲೇಬೇಕು ಎಂದವನಿಗೆ ಸೋಲುಸೋತು ಸುಣ್ಣವಾಗಿ ನೆಲಕ್ಕೆಬೀಳುವಾಗ ಅದೃಷ್ಟವಶಾತ್ ಗೆಲುವು;ಇವೆರಡೂ ನಾಣ್ಯದ ಎರಡು ಮುಖಗಳುಕಂಡೂ ಕಾಣದಂತೆ ಕಳಚಿಬೀಳುತ್ತಿವೆ ಮುಖವಾಡಗಳು ಇತಿಹಾಸದ ಹಾಸುಗಲ್ಲಿನ ಮೇಲೆಬಿದ್ದ ರಕ್ತದ ಕಲೆ ಇನ್ನೂ ಒಣಗಿಲ್ಲ ಭೂಮಿಯನ್ನು ಹತ್ತಾರುಪಟ್ಟು ಸುಡುವಷ್ಟುಮದ್ದು ಗುಂಡು ಬಾಂಬುಗಳಸುಧಾರಿತ ಹೊಸ ತಳಿಗಳು;ವಿಜ್ಞಾನದ ಬಳುವಳಿಗಳು ಆರಂಭದ ಹೊರತು ಅಂತ್ಯಅರಿಯದು ಯುದ್ಧೋನ್ಮಾದ ಸೂರ್ಯೋದಯ, ಚಂದ್ರೋದಯಕ್ಕೆಪರಮಾಶ್ಚರ್ಯ; ನಿನ್ನೆ ಕಂಡ ಬೃಹತ್ಕಟ್ಟಡಗಳು ಇಂದು ನೆಲಸಮಕಾಡು, ಪ್ರಾಣಿ, ಪಕ್ಷಿ ಸಂಕುಲ ಸುಟ್ಟು ಭಸ್ಮ ಸರ್ವನಾಶದ ಕಿಚ್ಚು ಹೊತ್ತಿನರಕದ ಹೆಬ್ಬಾಗಿಲು ತೆರೆಯುತ್ತಿರುವಾಗನಾಳೆ ಮತ್ತೇನೋ…ಮತ್ತಿನ್ನೇನೋ… ಯುದ್ಧ ಅಂದ್ರೆ ಸುಮ್ನೆ ಏನು!? ಮಹಾಂತೇಶ್.ಬಿ.ನಿಟ್ಟೂರು,        

ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ” ಕಾವ್ಯ ದಿನ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕಾವ್ಯ ದಿನ” ಕಾವ್ಯ ಬರೆಯಲುಸ್ಪೂರ್ತಿಯಾದ ನಿಮಗೆಅಭಿನಂದನೆಗಳುಶುಭಾಶಯ ನನ್ನಅನಂತ ನಮನಗಳು // ನನ್ನ ಕಾವ್ಯಬರೆಯಲುಹುರಿದುಂಬಿಸಿಓದುವ ಕವಿಮನಗಳಿಗೆಲ್ಲಶುಭಾಶಯಶುಭಕಾಮನೆಗಳು // ಕಾವ್ಯ ಬರೆದಕವನ ಸಂಕಲನಪುಸ್ತಕ ಬಿಡುಗಡೆಮಾಡಿದ ಗಣ್ಯರಿಗೆಶುಭಾಶಯಶುಭ ನಮನಗಳು // ಕಾವ್ಯ ಬರೆಯುತ್ತಿರುವಕನ್ನಡ ನಾಡಿನಎಲ್ಲ ಕವಿಗಳಿಗೆಶುಭಾಶಯ ನಿಮಗೆಶುಭ ಹಾರೈಕೆಗಳು // ಮನದ ಭಾವನೆಗಳನ್ನುಕವನದ ರೂಪದಲ್ಲಿಹೊರ ತರುವಎಲ್ಲ ಹೃದಯಗಳಿಗೆಅನಂತ ಧನ್ಯವಾದಗಳು// ಇಂದು ವಿಶ್ವ ಕಾವ್ಯದಿನ ವರುಷವೆಲ್ಲವಿಶ್ವದ ತುಂಬೆಲ್ಲಪ್ರಜ್ವಲಿಸಿ ಪಸರಿಸಲಿಕಾವ್ಯ ಸುಧೆ  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ” ಕಾವ್ಯ ದಿನ” Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್ ಪಾಟೀಲ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ ಗಜಲ್ ಜಗಕೆಲ್ಲ ತಿಳಿಸಿ ಹೇಳಲೆಬೇಕಿಲ್ಲ ಸಖಈ ಬದುಕು ನಮಗಾಗಿಯೇ ನಲ್ಲ ಜಗದಗೊಡವೆ ಏತಕೆ ಹೇಳು ನಲ್ಲಆಗದಿರಲಿ ನಿನ್ನಮನ ಗೊಂದಲದ ಗೂಡು ಕೊರಳ ಬಳಸಿ ಕಿವಿಯಲುಸಿರಿಲು ನೀನಾ ಎದೆಗೆ ಒರಗಿ ನಾಚಿದ ಆ ದಿನಗಳು ಆಣೆಯನೊಂದು ನೀ ಮಾಡಿದೆ ನಲ್ಲಹಕ್ಕಿಗೂಡು ಸಾಕ್ಷಿಯಾಗಿದೆ ಸಾಕಲ್ಲ ಕಾವ್ಯಧರೆ ಪ್ರಮಾಣಗಳನೆಂದು ನಂಬಿಲ್ಲನಿನ್ನನೇ ನಂಬಿಹಳು ನಿನಗೇಕೆ ತಿಳಿದಿಲ್ಲ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಹೊಸ ಗಜಲ್‌

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್‌ ಹೆಣ್ಣಾಗಿ ಹುಟ್ಟಿಸು ಅಂತ ನಿನ್ನಲ್ಲೇನು ನಾನು ಮನ್ನತ್ ಮಾಡಿರಲಿಲ್ಲಎಲ್ಲರಂತೆ ಬದುಕಬಲ್ಲೆ, ಸುಖದಿಂದ ಬಾಳಲು ಜನ್ನತ್ ಬೇಡಿರಲಿಲ್ಲ ನಾನೇನು ಗುನಾ ಮಾಡಿದಿನೋ ಈ ದುರಾದೃಷ್ಟ ಸ್ಥಾನ ನೀಡಿರುವೆಪ್ರಾಣಿಯಾಗಿ ಹುಟ್ಟಿಸಬಹುದಿತ್ತು ಮನುಜನ ಶೌರತ್ ಅರಸಿರಲಿಲ್ಲ ಹೆಣ್ಣಿನ ಘನತೆ ಗೌರವ ಕಾಪಾಡುವ ಸುಂದರ ಸಮಾಜವಿರಬೇಕುಸಮಬಾಳು ನೀಡೆಂದೆನೇ ಹೊರತು ಸುಖದ ಸೌಲತ್ ಬಯಸಿರಲಿಲ್ಲ ಹೆಂಗರುಳಿನಲಿ ಪೋಣಿಸಿ ನಯ ನೆರಳಿನ ಸೂರಿನಡಿ ಇಡು ನನ್ನಮಾ ಬೆಹೆನ್ ಬಹು ಬೇಟಿಯಾಗಿ ನೋವಿರದ ನೌಲತ್ ನಡೆಸಿರಲಿಲ್ಲ ನೀ ಸೃಷ್ಟಿಸಿದ ಕರಾಮತ್ ನಲಿ ಜ್ಯೋತಿಗೆ ಔರತ್ ಸ್ಥಾನ ಸಿಕ್ಕಿದೆಸಾರ್ಥಕ ಸಾವೊಂದು ಸಾಕು ಇದಕ್ಕಿಂತ ದೊಡ್ಡ ದೌಲತ್ ಕೇಳಿರಲಿಲ್ಲ ಮನ್ನತ್ = ಹರಕೆಜನ್ನತ್ = ಸ್ವರ್ಗಶೌರತ್ = ಕೀರ್ತಿಸೌಲತ್ = ಸೌಲಭ್ಯನೌಲತ್ =ಶ್ರೇಷ್ಠ ಬದುಕುಔರತ್ = ಸ್ತ್ರೀದೌಲತ್ = ಶ್ರೀಮಂತಿಕೆಮಾ = ತಾಯಿಬಹೆನ್ = ಸಹೋದರಿಬೇಟಿ = ಮಗಳುಬಹು = ಸೊಸೆಕರಾಮತ್ = ಕೈಚಳಕಗಲತಿ = ತಪ್ಪುಗುನಾ= ಪಾಪ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಅವರ ಹೊಸ ಗಜಲ್‌ Read Post »

ಕಾವ್ಯಯಾನ

ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ”

ಕಾವ್ಯ ಸಂಗಾತಿ ವಾಣಿ ಶಿವಕುಮಾರ್ “ಮನದ ಮಿಡಿತ” ಅಂದು ನೀನು ನನಗೆ ಆಗಂತುಕ..ಆದರಿಂದು ನೀನೇ ನನ್ನ ಸಖ..ಮನ ಬಯಸಿತು ನಿನ್ನ ಸನಿಹ..ಯಾರನ್ನೂ ನೋಡಿಲ್ಲ ನಿನ್ನ ವಿನಃ.. ಪ್ರೀತಿಯ ಜೇನು ಜಿನುಗುತಿದೆ ನನ್ನಲ್ಲಿ,.ನಿನ್ನ ರೂಪವೇ ಅಚ್ಚತ್ತಿದೆ ಹೃದಯದಲ್ಲಿ..ಸೋನೆ ಹನಿ ನಿನ್ನನ್ನು ನೆನಪಿಸಿದೆ..ಮನದ ಅಂತಪುರ ನಿನಗಾಗಿ ಕಾದಿದೆ.. ಗರಿ ತೆರೆದ ನವಿಲಿನಂತೆ ನರ್ತಿಸುತ್ತಿರುವೆ..ಒಂದಾಗಿ ಪ್ರೀತಿಯ ತಾಳವನ್ನು ಹಾಕಲು..ನಾಲ್ಕು ಕೈಗಳು ಒಂದಾಗಿ ಶ್ರುತಿ ಮೀಟಿದರೆ..ನಾದವಾಗಿ ಹೊಮ್ಮುತ್ತದೆರಸಧಾರೆ ಹರಿಯುತ್ತಿರೆ.. ಒಲವಿನ ಬೆಳಕು ಅನುರಾಗವನ್ನು ಚೆಲ್ಲಿದೆ..ಮನದಲಿ ಮೈನ ಹಾಡಿ ಬಾವವ ತುಂಬಿದೆ..ಚೂಪಾದ ನಯನಗಳು ಸಲ್ಲಾಪಕ್ಕೆ ಕರೆದಿದೆ..ಸದ್ದಿಲ್ಲದೆ ಬಂದು ನನ್ನನ್ನು ಆವರಿಸಿದೆ.. ವಾಣಿ ಶಿವಕುಮಾರ್

ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರದೊಂದು ಯುದ್ದದ ಕವಿತೆ “ರಕ್ತದ ಮಳೆ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ರಕ್ತದ ಮಳೆ” ಮಳೆ ಸುರಿಯಬೇಕಾದಆಕಾಶದಿಂದ ಇಂದುಸುರಿಯುತ್ತದೆ ರಕ್ತದ ಹನಿ,ಮಕ್ಕಳ ನಗು ಕೇಳಬೇಕಾದಬೀದಿಯಲ್ಲಿ, ಗುಂಡಿನ ಸದ್ದು ಧ್ವನಿ. ಅಮ್ಮನ ಮಡಿಲು ಇರಬೇಕಾದಜಾಗದಲ್ಲಿ ಬೂದಿಯಾಗಿದೆಕನಸಿನ ಮನೆ,ಬಾಲಕನ ಕೈಯಲ್ಲಿ ಪುಸ್ತಕ   ಹಿಡಿದಿದೆ ಭಯದ ಕರಿ ನೆರಳು ಯಾವ ಧರ್ಮ? ಯಾವ ದೇಶ?ಯಾರಿಗಾಗಿ ಈ ಹೊತ್ತಿಉರಿಯುವ  ಉರಿ ಬೆಂಕಿ?ಹೆಸರಿಲ್ಲದ ಶವಗಳ ಸಾಲಿನಲ್ಲಿಮಾನವೀಯತೆ ನಿಂತಿದೆ ಮಂಕಾಗಿ ಇಲ್ಲಿ ಗಾಳಿಯೇ ಕೇಳುತ್ತದೆ ಮೌನವಾಗಿಸಹೋದರತೆ ಸತ್ತು ಹೋಗಿದೆಭೂಮಿಯೇ ಅಳುತ್ತದೆ ಕಣ್ಣೀರಾಗಿ,“ನಿನ್ನ ಹೆಜ್ಜೆಗೆ ಕೆಂಪಾದ ಗಾಯ ಇದು?” ನಕ್ಷತ್ರಗಳು ಕೂಡ  ಮಾಯವಾಗಿವೆ,ಅವುಗಳ ಹೊಳಪು ಕಣ್ಣೀರಿಗೆ ಕರಗಿದೆ,ಶಾಂತಿಯ ಹಕ್ಕಿ ಹಾರಲು ಹೆದರುತ್ತಿದೆಹಕ್ಕಿಯ ರೆಕ್ಕೆಗೂ ಹೊಗೆ ತಗಲಿದೆ. ಬೂದಿಯಿಂದ   ನೋವು  ಕೂಗುತ್ತಿದೆಕತ್ತಲಿನ ನಡುವೆ ಬೆಂಕಿ ಚಿಮ್ಮುತ್ತಿದೆರಕ್ತದ ಮಳೆಯನ್ನೇ ಹೊಳೆಯಂತೆ ಮಳೆಯಾಗಿ ಹರಿಯುತ್ತಿದೆ ಕೈ ಹಿಡಿದು ಕಣ್ಣೀರ  ಒರೆಸಲೂಯಾರಿಲ್ಲ ಇಲ್ಲಿಮಾನವೀಯತೆಯನ್ನು ಮತ್ತೊಮ್ಮೆ ಜೀವಂತಗೊಳಿಸಲು ಸಾಧ್ಯವೇ??????? ಮಮತೆ ಕರುಣೆ ಕರಗಿಸತ್ತುಹೋಗಿದೆ.ಅಮಾಯಕ ಜೀವಗಳಬಲಿ ಏರುತ್ತಿದೆಯುದ್ಧ ಬೇಕಿತ್ತಾ??ಪರಿಣಾಮ ಘನಘೋರ ,, ಮರಗುತ್ತದೆ ಮನಕೊರಗುತ್ತದೆ ಜೀವ…. ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರದೊಂದು ಯುದ್ದದ ಕವಿತೆ “ರಕ್ತದ ಮಳೆ” Read Post »

You cannot copy content of this page

Scroll to Top