ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅಳುವವರನು ನೋಡಿಯೂ ನಗುವವರಿದ್ದಾರಿಲ್ಲಿ ಅದ್ಯಾಕೆ ಹೀಗೆನೋಯುವರೆಂದು ತಿಳಿದೂ ಸತಾಯಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವರುಅನ್ಯರ ಅಳಲು ಕೇಳಲು ಒಲ್ಲೆನ್ನುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ನೀ ಬಯಸುವ ಪ್ರೀತಿ, ಗೌರವ ಬೇರೆಯವರಿಗೂ ನೀಡಬೇಕಲ್ಲವೇಕೊಡದದ್ದನ್ನು ಪಡೆಯುವ ಮನಸು ಹೊಂದಿರುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಎಲ್ಲರಿಗೂ ಅವರವರ ಅಭಿಮಾನ ಎಲ್ಲದಕ್ಕಿಂತಲೂ ಮಿಗಿಲು ನಿಜನಾ ಸ್ವಾಭಿಮಾನದ ಮಾತಾಡಿದರೇ ಮುನಿಯುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ ಜಗದ ರೀತಿ, ರಿವಾಜುಗಳು ಅದೇಕೋ ವಾಣಿಗೆ ತಿಳಿಯಲಾಗಲೇ ಇಲ್ಲನನ್ನೀ ಮನಸ್ಥಿತಿ ನೋಡಿ ನಿಂದಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ… ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” ಆ ದಿನಗಳ ಸುತ್ತಓಡಾಡಿ ಕಳೆದುಹೋದ ಹಗಲಿಂದುಮುಕ್ತಾಯದ ಸಂಜೆಗೆಬಂದು ನಿಂತಂತಿದೆಬೆಳಕಿನ ಅರಿವಿಗೆಬಿಸಿಲಿನ ಕಿರಣಹರಡಿ ನಿಂತರವಿಗೊಂದು ಸತ್ಯಗೊತ್ತಿರುವಂತಿದೆಮೇಲಿಂದ ಕಾಣುವಸತ್ಯದ ನೆರಿಗೆಯಲ್ಲಿಕಾಣದ ನೋಟಗಳಸುಳ್ಳುಗಳು ಅಡಗಿದಂತಿದೆಹೊಸ ಹಾವ ಭಾವಮುಕ್ತಾಯದ ಸಂಜೆಗೆಇಂದು ಕಳೆಯಿತು ಹೀಗೆಉಳಿಯಬೇಕುನಾಳೆಯೆಂಬ ದುಂದುಭಿಸಂಜೆಗೆ ಬರುವಕನಸುಗಳಲ್ಲಿಭಾವ ಭವಿತದಚಿತ್ರ ಭಿತ್ತಿಯಲ್ಲಿಸುಪ್ತವಾದರೂ.  ನಾಗರಾಜ ಬಿ. ನಾಯ್ಕ 

ನಾಗರಾಜ ಬಿ. ನಾಯ್ಕ “ಮುಕ್ತಾಯದ ಸಂಜೆಗೆ” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಇಲ್ಲಿ ಮನುಷ್ಯತ್ವವನ್ನೂ ಮಣ್ಣು ಮಾಡಲಾಗಿದೆ ಮರುಳೇಕರುಣೆ ಕನಿಕರಾದಿಗಳನು ದೂರ ದೂಡಲಾಗಿದೆ ಮರುಳೇ ರಾತ್ರಿಗೆ ಸಿಮೀತವಾದ ಹೇಯಕೃತ್ಯಗಳೀಗ ಹಗಲಿಗಿಳಿದಿವೆಬದುಕಿದ್ದಾಗಲೇ ಚರಮಗೀತೆಯ ಹಾಡಲಾಗಿದೆ ಮರುಳೇ ಬಹುತೇಕರು ಹಡೆದವರ ಕಡೆಗಣಿಸಿ ಬದುಕುವವರೇ ಇಲ್ಲಿಸಂಬಂಧಗಳಿಗೆ ತಣ್ಣಗಿದ್ದೇ ತರ್ಪಣ ಬಿಡಲಾಗಿದೆ ಮರುಳೇ ಒಳಿತಿಗಿಂತ ಕೆಡುಕೇ ಕಿವಿಗೆ ಬೀಳುತಿಹ ಜಾಯಮಾನವಿದುಶಕುನಿಯನ್ನೇ ಮೀರಿಸುವ ದಾಳವ ಹೂಡಲಾಗಿದೆ ಮರುಳೇ ಮಾನವ ಧರ್ಮ ಊನಗೊಂಡ ಶ್ವಾನದಂತೆ ಬೊಗಳುತಿದೆಕಾಲನ ಬೇತಾಳ ಕುಂಬಾರನ ಹೆಗಲ ಏರಲಾಗಿದೆ ಮರುಳೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ “ನಿನ್ನ ಕಣ್ಣುಗಳ ಮೌನ ನಗು”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ನಿನ್ನ ಕಣ್ಣುಗಳ ಮೌನ ನಗು” ಮಾತುಗಳೆಲ್ಲಸೋತು ಸುಮ್ಮನಾದಾಗನಿನ್ನ ಕಣ್ಣುಗಳ ಮೌನ ನಗುವೇನನ್ನ ಜೊತೆ ಮಾತನಾಡುತ್ತಿರುತ್ತದೆ! ಹೊರಗೆ ಸಂಜೆನಿಧಾನವಾಗಿ ಕತ್ತಲಾಗುತ್ತಿರಲುಒಳಗೆ ಮಾತ್ರನಿನ್ನ ನಗು ಬೆಳಕಾಗಿ ಉಳಿಯುತ್ತದೆ! ಕೈಯಲ್ಲಿದ್ದ ಪುಸ್ತಕತೆರೆದ ಹಾಗೆಯೇ ಇರುತ್ತದೆನಾವು ಮಾತ್ರಒಬ್ಬರ ಮನಸ್ಸನ್ನೊಬ್ಬರು ಓದುತ್ತಿರುತ್ತೇವೆ! ಹೋಗಬೇಕು ಎಂದುನೀನು ಎಷ್ಟೇ ಹೇಳಿದರೂನಿನ್ನ ಹೆಜ್ಜೆಗಳು ಮಾತ್ರನನ್ನ ಹತ್ತಿರವೇ ನಿಲ್ಲಲು ಬಯಸುತ್ತವೆ! ಕಿಟಕಿಯಾಚೆ ಗಾಳಿಪರದೆಗಳ ಜೊತೆ ಆಟವಾಡಿದಂತೆಅವಳ ಬೆರಳುಗಳುನನ್ನ ಕನಸುಗಳನ್ನು ನೇವರಿಸುತ್ತಿರುತ್ತವೆ! ಈ ಕ್ಷಣಕ್ಕೂಒಂದು ಜೀವ ಇದ್ದರೆಅದು ಖಂಡಿತನಮ್ಮಿಬ್ಬರ ನಡುವೆ ಉಸಿರಾಡುತ್ತಿರುತ್ತಿತ್ತು! ನನಗೆ ಗೊತ್ತುನಾಳೆ ದಿನ ಮತ್ತೆತಳುಕಿನ ಜಗತ್ತು ನಿನ್ನನ್ನು ಕದಿಯಬಹುದು!ಆದರೆ ಈ ಸಂಜೆಯಿರುಳು ಮಾತ್ರನೀನು ಸಂಪೂರ್ಣವಾಗಿ ನನ್ನವಳು! ಹುಚ್ಚ ನೀನು ಎಂದು ನಗುತ್ತಾತಲೆಯನ್ನ ನನ್ನ ಭುಜದ ಮೇಲೆ ಇಡುತ್ತೀಯನಾನು ಏನೂ ಹೇಳುವುದಿಲ್ಲಕೆಲವೊಮ್ಮೆ ಪ್ರೀತಿಗೆಬರೀ ಮಾತುಗಳಿಗಿಂತಮೌನದ ಆಲಿಂಗನವೇ ಅಗಾಧ ಭರವಸೆ! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ “ನಿನ್ನ ಕಣ್ಣುಗಳ ಮೌನ ನಗು” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರಕವಿತೆ “ಹೊನ್ನೆರಳು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಹೊನ್ನೆರಳು” ಹುಣ್ಣಿಮೆಯ ಹೊನ್ನೆರಳುಸಾಗರ ಮೈಮೇಲೆ ಹರಿದು,ಅಲೆಗಳ ಮೌನ ನಿದ್ರೆಯಲಿಚಂದ್ರ ಕನಸಾಗಿ ಕರಗಿತು. ನೀರಿನ ತುಟಿಯ ನಡುಕದಲಿಬೆಳ್ಳಿಯ ತೇವ ಮೊಳಗಿತು,ದೂರದ ವಿರಹ ಉಪ್ಪಾಗಿಎದೆಯ ಆಳದಲಿ ನೆಲಸಿತು. ನೀಲಿಯ ಶಂಖ ಊದಿದ ಗಾಳಿರಾತ್ರಿಯ ಕೂದಲು ಸವರಿತು,ಅಲೆಗಳ ರಕ್ತನಾಳದಲಿಮೌನ ಬೆಳಕು ಹರಿಯಿತು. ತೀರ ಮುಟ್ಟದ ಅಲೆಗಳಲಿಹಂಬಲ ಹಕ್ಕಿ ತೇಲಿತು,ನೀರೊಳ ಮುರಿದ ಚಂದ್ರಬಿಂಬಪ್ರೀತಿಯ ಗಾಯವಾಯಿತು. ಬೆಳದಿಂಗಳ ಮೃದುವೆರಳುಅಲೆಗಳ ಬೆನ್ನಲಿ ಜಾರಿತು,ಸಾಗರದ ಕತ್ತಲ ಗರ್ಭದಲಿಮೌನ ಕಮಲ ಅರಳಿತು. ನೀ ಇಲ್ಲದ ಕಪ್ಪು ರಾತ್ರಿಸಾಗರ ಶಿಲೆಯಾಗಿ ನಿಂತು,ನೀ ಬಂದ ಬೆಳ್ಳಿ ಹುಣ್ಣಿಮೆಉಪ್ಪಿನ ದೀಪವಾಗಿ ಹೊತ್ತು. ಮರಳ ತೀರದ ಮಡಿಲೊಳಗೆಹೆಜ್ಜೆಯ ದಾಹ ಮಲಗಿತ್ತು,ಅಲೆಗಳ ಮರುಳು ಕರೆಯೊಳಗೆ“ಬರುವೆಯಾ…” ತೇವ ಉಳಿಯಿತು. ಆಕಾಶ ತಗ್ಗಿ ಮುತ್ತಿಟ್ಟಸಾಗರದ ಉಪ್ಪು ನೆತ್ತಿಗೆ,ಪ್ರಕೃತಿ ಬೆಳ್ಳಿ ಮಸಿಯಲಿಪ್ರೀತಿ ಬರೆದು ಹೋಯ್ತು ರಾತ್ರಿಗೆ. ಹುಣ್ಣಿಮೆ ದೂರ ಸರಿದರೂಚಂದ್ರಗಂಧ ಉಸಿರಾಯಿತು,ಸಾಗರದ ನೀಲಿ ಎದೆಯೊಳಗೆಮೌನ ಬೆಳಕು ತೇಲಿತು. ಪ್ರೀತಿಒಮ್ಮೆ ತಾಕಿದ ಚಂದ್ರತಂಪು,ಜೀವಪೂರ್ತಿ ಅಲೆಯುವ ಉಪ್ಪು. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರಕವಿತೆ “ಹೊನ್ನೆರಳು” Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “

ಕಾವ್ಯ ಸಂಗಾತಿ ಸವಿತಾ ದೇಶಮುಖ “ಮನಸ್ಸೆಂಬ ಬೆಳಕೆಂಡಿ “ ಮನಸ್ಸೆಂಬ ಬೆಳಕಿಂಡಿಯ ಮುಚ್ಚಳವತೆರೆದು ನೋಡು ಇಡೀ ಬ್ರಹ್ಮಾಂಡವಪರಮ ಗೂಡು ನಿನ್ನೊಳಗೆ…. !!೧!! ಇಡಿ ಭೂಲೋಕ ಹುದುಗಿ ಇರುತಿರೆ ನಿನ್ನೊಳುನೀನೇ ದಾರಿ ದೀಪ ಕತ್ತಲೆಯ ಅಲೆಯೊಳುಹತ್ತಿದ ಉರಿಗೆ ತಣ್ಣೇ ಎಳಲು ನೀನು !!೨!! ಒಂದೆಡೆ ನಗಿಸುವ ಮತ್ತೆ ಅಳಿಸುವಕುಣಿಸುವ ಮೆರೆಸುವ ಮರಗಿಸುವಸೂತ್ರಧಾರಿ ತುಂಟ ನಡೆಯುವ ನಿನ್ನದು!!೩!! ಮನಸೆಂಬ ದೀಪದೊಲವಿನಲ್ಲಿಹೊಸ ಹೊಸ ಕನಸಿನಾಗರದಲ್ಲಿನೂರೊಂದು ಕಥೆಗಳ ಸರಣಿ ಕಂತು.. !!೪!! ಅರಿಯದ ಕಾರ್ಪಣ್ಯ ಸಂಕಟಗಳ ದಾಳಿಬೀಸಲಿ ,ಆರದು ನಿನ್ನೊಳಗಿನ -ಗಾಳಿನಂದಿಸದು ಸ್ತ್ರೈರ್ಯವನು …!!೫!! ನಿಟ್ಟುಸಿರಿನ ಕ್ಷಣದಲೂ ಧೈರ್ಯದಬೆಳಕಿನ ಹಂದರದ ಹಚ್ಚಡ ಹಾಸಿದನೀನೇ ಸಮಾಧಾನದ ಅದಿರು ….!!೬!! ದಣಿದ ನನ್ನ ಉಸಿರಿಗೆ- ನಿನ್ನ ಮೃದುತಡಕಾಟ ಶಾಂತವಾಗಿಸುವದುನನ್ನ ಮುಂದಲ ಹೃದಯ ತಂತಿ ಮಿಟಿ!!೭!!  ನನಗರಿವಿಲ್ಲದೆ ತಿಳಿದು ತಿಳಿಯದೇಸರಿ ಹೊಂದಿಸಿ ಹೃದಯ ರಾಗ ತಾಳಮೇಳಯಿಸುವೆ ನಿನ್ನ ಬೆಳಕಿನೊಳು!!೮!! ಮನದಾಳದಲ್ಲಿ ಉಕ್ಕುತ್ತಿರುವ ಭಾವಗಳಉದ್ವೇಗಕ್ಕೆ ನೀನಾಗುವೆ ಬೆಳಕಿಂಡಿಅಳಿವು  ಅಳಿಸಿ ಶಾಂತಿ ಅಜರಾಮರ.,!!೯!!  ಅಮರ ಜ್ಯೋತಿ ಮನಸ್ಸೇ ಪರಮ ಜ್ಯೋತಿ ಬೆಳಗುವ ಬೆಳಕಂಡಿ…. ನೀನೇ..!!!! ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “ Read Post »

ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಪ್ರಿಯತಮ” ದೈವದ ಅನುಗ್ರಹ ನಮ್ಮಿಬ್ಬರ ಪರಿಚಯಬರೆಯಲು ಸಾಲದು ಕಳೆದಿರುವ ಸಮಯಪದಗಳಿಲ್ಲ ಹೇಳಲು ಹೃದಯದ ವಿಷಯನೆನೆಯಲು ನಿನ್ನಾ ನೋವೆಲ್ಲಾ ಮಾಯಾ. ಆಲಿಸಲಾರೆಯ ನನ್ನ ಪ್ರೀತಿಯ ಕರೆಯನೋಡಲು ಬಯಸಿದೆ ಮನ ಮೋರೆಯತವಕಿಸುತ್ತಿದೆ ಕಾಣಲು ಹೃದಯದ ದೊರೆಯನೋಡಲೆಂದು ನನ್ನೆಡೆ ನೀ ಬರುವೆಯಾ ಹೇಗೆ ತಿಳಿಸಲಿ ಹೃದಯದ ಪರಿಯಜೀವನದ ಹಸಿರು ಮರೆಯದಿರು ಗೆಳೆಯಬಯಸಿರುವೆ ಬಾಳಲಿ ನೀನೆ ಇನಿಯಬಯಸಿದೆ ನಿನ್ನನೇ ಪುಟ್ಟ ಹೃದಯ ಬರುವಿಕೆಯ ಹಾದಿ ಕಾದು ಬಳಲಿರುವೆಸವಿ ನುಡಿಯ ಪ್ರೇಮಕೆ ಸೋತಿರುವೆನೀನೇಕೆ ಸವಿ ನೆನಪಿನ ಪ್ರೀತಿ ಮರೆತಿರುವೆನನ್ನೊಳಗೆ ನೀನೆಂದೋ ಮನೆ ಮಾಡಿರುವೆ ಜೀವನದ ಕೊನೆ ಅಂಚಿನಲಿ ನಿಂತಿರುವೆಕಣ್ ತುಂಬಾ ಕಾಣಲು ಕಾದಿರುವೆನೀನೇಕೆ ನಿನ್ನ ಶಬರಿಯ ಮರೆತಿರುವೆಬಂದೆ ಬರುವ ದಾರಿಯ ನೋಡುತ್ತಿರುವೆ. ಡಾ. ಲತಾ ಎ ಆರ್ ಬಾಳೆಹೊನ್ನೂರು

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಅನುರಾಗ” ಗೆಳತಿ…ನಾನೇಗೆ ನಿನ್ನ ಮರೆಯಲಿಮರೆಯಾಗಿ ನಿಂತರೂ ದೂರದಲಿಅದೇಕೋ ಮೋಹ ಅಂತರಾಳದಲಿ,!! ನೆನಪುಗಳು ಸುಳಿಯಾಗಿಆಸೆಗಳೆಲ್ಲ ಸವಿ ಸವಿ ಮಾತಾಗಿಬಯಕೆಗಳೆಲ್ಲ ಮನಸ್ಸಿನಲ್ಲಿ ಕನಸಾಗಿ,!! ನನ್ನೊಳಗೆ ನಿನ್ನದೇಪ್ರತಿಕ್ಷಣ ಮಧುರ ಚಿತ್ರಣನೆನೆಪಿನಾಂಗಳ ಅನುದಿನವು,!! ಮನವು ಕುಣಿಯಿತುಆಸೆಯ ಮುಗಿಲೇರಿಸಿ ಅನುಕ್ಷಣಭರವಸೆ ಮೂಡಿಸಿತು ಅನುರಾಗದಲಿ.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಇಂದೇಕೊ!” ಇಂದೇಕೊ ಈ ಅಕ್ಷರಗಳುಪದಗಳಾಗದೆ ಕಾಡುತಿವೆಲೇಖನಿಗೂ ಸಿಗದಂತೆ ದೂರಸಾಗುತಿವೆಗೀಚಿದರೂ ಮತ್ತಷ್ಟುಗೀಚುಗಾಚು ಹಾಕಿಸಿಕೊಳ್ಳುತಿವೆಹಾಳೆಯ ಹರಿಯಲು ಹೊರಟರೂಅದಕ್ಕೂ ಹಠವ ಮಾಡುತಿವೆಸಾಲೊಂದ ಮುಂದೆ ಹೋಗದಂತೆರಚ್ಚೆ ಹಿಡಿದಿವೆಪುಟ್ಟ ಕಂದನಂತೆ ಬಿಡದೆ ಆಗಾಗಬಡಿಸಿಕೊಂಡವರಂತೆ ಮಿಡುಕಿಅಳುತಿವೆಸಾಕು ನಿಮ್ಮ ಸಹವಾಸ ಎಂದರೂಬಿಡದೆ ಬೆನ್ನ ಹತ್ತಿವೆಬೇಕೆಂದಾಗ ಬರೆಯಲು ಕುಳಿತರೆಮರೆವಿನೂರಿಗೆ ಪ್ರಯಾಣ ಬೆಳೆಸಿವೆಅಂದುಕೊಂಡಿದ್ದನೆಲ್ಲ ಅದಲುಬದಲಾಗಿಸಿವೆತಿಪ್ಪರಲಾಗ ಹಾಕಿದರೂ ಅದೇಕೋಮೊದಲು ನೆನಪಾದಂತೆ ನೆನಪಿಗೆಬರದೆ ಪ್ರೇಮಿಯಂತೆ ಸತಾಯಿಸಿವೆಇಂದೇಕೊ ಈ ಅಕ್ಷರಗಳು ಕಾಡಿವೆಕಾಡಿಸುತಿವೆ,ಕಾಲೆಳೆಯುತಿವೆಶಬ್ಧ ಭಂಡಾರ ಖಾಲಿಯಾದಂತಭಾವವ ಭಾಸವಾಗುವಂತೆ ಮಾಡಿವೆಹಠ ನಿಮಗಷ್ಟೇ ಇದೆಯೋ ನನ್ನಲ್ಲೂಹಠ ಇದೆ ಏನೋನೋಡಿಯೇ ಬಿಡುವಾ ನೀವಾ!? ನಾವಾ?ನಾನು ಮತ್ತು ನನ್ನ ಲೇಖನಿ…! ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!” Read Post »

ಕಾವ್ಯಯಾನ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ”

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ತಾಯ್ತನ” ಜೀವಸಂಕುಲದ ತಾಯ್ತನದವಿಶ್ವದ ತತ್ವವೇ ಅವ್ವಮಾನವ ಜನ್ಮದ ಜೀವನದಸಾರದ ಸತ್ವವೇ ಅವ್ವ|| ಸೃಷ್ಟಿಕರ್ತನ ಲೀಲೆ ಭುವಿಯಅತ್ಯದ್ಭುತ ಸೃಷ್ಟಿದೇವ ತಾ ಇಳೆಗಿಳಿದುಬಾರದಮಮತೆಯ ವೃಷ್ಟಿ|| ಬಡವಳಿರಲಿ ಬಲ್ಲಿದಳೇ ಇರಲಿಮಕ್ಕಳಿಗೆ ಮಾತೆ ಶ್ರೇಷ್ಠಭಿಕ್ಷುಕಿ ಇರಲಿ ರಾಣಿ ಆಗಿರಲಿಮಕ್ಕಳಿಗೆ ತಾಯಿ ನಿಷ್ಠ || ಇರುವೆಯಿಂದ ಆನೆಯವರೆಗೆಅವುಗಳ ತಾಯಿ ಆಧಾರದೇವಾನುದೇವತೆಗಳಿಗೂ ಸಹಆದಿಶಕ್ತಿಯೇ ಆಶ್ರಯ|| ಮಾನವ ಜನ್ಮದ ಸಾರ್ಥಕತೆಜನ್ಮ ಕೊಟ್ಟ ಹೆತ್ತತಾಯಿಜೀವನದಲ್ಲಿ ಬದುಕಿ ಇರಲುಅನ್ನ ನೀಡಿದ ಭೂತಾಯಿ || ನೀರು ಕೊಟ್ಟ ಕಾವೇರಿ ತಾಯಿನುಡಿ ಕಲಿಸಿದ ಕನ್ನಡ ತಾಯಿನನ್ನ ಜೀವದಾತೆ ಭಾರತಮಾತೆತಮಗೆಲ್ಲರಿಗೂ ಚಿರಋಣಿ ನಾ|| ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ” Read Post »

You cannot copy content of this page

Scroll to Top