ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ

ತಂಗಾಳಿಯ ತಂಪಿನಲಿ
ಮುಂಗಾರಿನ ಇಂಪಿನಲಿ
ಅರಳಿರುವ ಆ ಮಲ್ಲಿಗೆ
ನಿನಗಾಗಿ ತಂದಿರುವೆ ಓ ಒಲವೇ
ನೀ ಓಡಿ ಬಾ ಇಲ್ಲಿಗೆ..!!

ತಂಪಾದ ಗಾಳಿ ಬಿಸುತಿರಲು
ಇಂಪಾದ ರಾಗ ನಿನಗಾಗಿ ನಾನಿಲ್ಲಿ
ಮೈ ಮರೆತು ಹಾಡುತಿರಲು
ನಮ್ಮಿಬ್ಬರ ನಡುವೆ ಪ್ರೇಮವೆಂಬ
ಕವಿತೆ ಅರಳಿ ತಂಗಾಳಿಯ ಮನ ಸೇರಿತು..!!

ರಂಗೇರಿದ ಈ ಸಾಲುಗಳು
ತಂಗಾಳಿಯ ಮನದೋಳಗೆ
ಬಂಗಾರದ ಮನೆ ಮಾಡಿರಲು
ಓ ಒಲವೇ ನಾ ನಿನಗೆ ನೀಡುವೆ
ಉಡುಗೊರೆಯಾಗಿ ಈ ಒಂದು
ಕವಿತೆಯನು..!!


Leave a Reply

Back To Top