‘ಪ್ರೀತಿ ಸಾಗರ’ ಗಾಯತ್ರಿ ಎಸ್ ಕೆ ಅವರ ಕವಿತೆ

ಎಂಥಹದೋ ಮಾತು
ಅದು ನಿನಗೆ ಗೊತ್ತು
ಅದರಲ್ಲಿ ಪ್ರೀತಿಯ
ಹೂಬಾಣವಿತ್ತು

ಬಿಂಬ ದಂತೆ
ಅವತರಿಸಿದೆ
ಸವಿಮಾತಲ್ಲಿಯೇ
ಮೈಮರೆಸಿದೆ..

ಬೇರೇನೂ
ಯೋಚಿಸದೇ
ಸಿಹಿ ನುಡಿಗಳ
ಆಲಂಗಿಸಿದೆ..

ಕಾಣದಾ ನಿನ್ನನ್ನು
ಕಂಡಂತೆ
ಕನವರಿಸಿದೆ
ಒಲವ ಮೂಡಿಸಿದೆ

ಪ್ರೀತಿ ಸಾಗರ
ಮನವೂ ಆಗರ
ಒಲವೇ ಜೀವನ
ಮಧುರ ಬಂಧನ..


Leave a Reply

Back To Top