ಗಾಯತ್ರಿ ಎಸ್ ಕೆ ಅವರ ಕವಿತೆ-ಚಿಲುಮೆ ಚೇತನ

ನೀ ಕೊಡುವ ಪ್ರೋತ್ಸಾಹ
ಉತ್ತೇಜನಗಳೇ ಬಾಳ ದಾರಿ
ಎಲ್ಲದಕ್ಕೂ ನೀನಿರಬೇಕು
ನೀನಿಲ್ಲದೆ ಯಾರೂ ಇಲ್ಲ..

ಕರೆಯಲ್ಲಿ ನೀ ಮಧುರವೂ
ಅನುಬಂಧವು ಸ್ನೇಹವು
ಪ್ರೀತಿಯು ಅವಿರಾನ
ಸಂಬಂಧವೂ..

ನಮಗೆ ಧೈರ್ಯವೂ
ಭೂಷಣವು ಸಕಲವೂ
ಆಧಾರವೂ ಮಮತೆಯ
ಮಾಣಿಕ್ಯವು..

ಪದಗಳ ಒಲವು
ಮಾಧುರ್ಯದ ಸೆಳೆವು
ಚಿಲುಮೆ ಚೇತನವು
ನೀ ಜನ್ಮ ಕೊಟ್ಟ ಜನಕನು..


Leave a Reply

Back To Top