ಹೆಚ್.ಮಂಜುಳಾ,ಹರಿಹರ. ಅವರ ಕವಿತೆ-ಬಂತು ನೋಡು ಆಷಾಡ

ಇದೇಕೆ ಬಂದಿತೋ ಆಷಾಢ
ಮನಸ್ಸೆಲ್ಲಾ ಕವಿದ ಕಾರ್ಮೋಡ ॥

ಹೆ:
ತವರವರು ಬಂದಾರೆ ಕರೆಯಲು ನಿಮ್ಮ ಮನಕ್ಕೊಪ್ಪಿಗೆಯೇ ನಾ          
ಹೊರಡಲು  
ತೋಚದು ನನಗೇನೂ ಮಾಡಲು
ಮುಂದಡಿಯಿಡಲೇಕೊ ಹಿಗ್ಗಾಲು ಮುಗ್ಗಾಲು!

ಗಂ:
ನನ್ನವಳಾಗಿ ಮೂರು ದಿನ          
ಕಳೆದಿಲ್ಲ
 ಇದನಾರು ಮಾಡಿದರೋ ನಮಗಿದು ಸಲ್ಲ
ನಿನ್ನನ್ನು ಅಗಲಿರಲು ನನಗೆ ಮನಸ್ಸಿಲ್ಲ
ಈ ಮನಗಳನ್ನು ಇವರೇಕೆ ಅರಿತಿಲ್ಲ?!

ಹೆ: ಬಿರಿದ ಭುವಿಗೆ ಸುರಿದಿದೆ ವರ್ಷಧಾರೆ
ಒಣಗಿದ ಲತೆಗೆ ಹರಿದಿದೆ ಹರ್ಷಧಾರೆ
ನಲಿದು ದುಂಬಿಯೊಡಗೂಡಿದೆ ಸುಮಸಿರಿ
ಇದ ನೋಡುತ ನಿನ್ನನಗಲಿ ನಾ ಹೇಗೆ ಇರಲಿ?!

ಗಂ: ನೀನಿಲ್ಲದೇ ಸುಳಿಯುವ ಗಾಳಿಯೂ ಬಿರುಸು
ನೀ ಮುಡಿಯದ ಪುಷ್ಪದ ಸುಗಂಧವೂ ಹಳಸು
ಚಂದಿರನ ಶೀತಲತೆಯೂ ಸುಡುವ ಬಗೆ
ಮುಂಗಾರು ಮಳೆಯ ಸಿಂಚನವೂ ಧಗೆ

ಹೆ: ನಾ ಹೊರಟ ಗಳಿಗೆಯಲಿ ಓ ಮೋಡ ಬಾ ಕವಿದು
ನಾ ಹೊರಟ ದಾರಿಯಲಿ ಓ ಮಳೆಯೇ ನೀ ಸುರಿದು
ಕೆರೆ ಕಟ್ಟೆಗಳೇ ಒಡೆದು ನನ್ನ ದಾರಿಗೆ ಅಡ್ಡವಾಗಿ
ಪಯಣವ ನಿಲ್ಲಿಸಿ ಉಳಿಯಲು ನೀವು ಸಹಕಾರಿಯಾಗಿ!


One thought on “ಹೆಚ್.ಮಂಜುಳಾ,ಹರಿಹರ. ಅವರ ಕವಿತೆ-ಬಂತು ನೋಡು ಆಷಾಡ

Leave a Reply

Back To Top