ಎಂ. ಬಿ. ಸಂತೋಷ್ ಆಧುನಿಕ ವಚನಗಳು

ನೋವನ್ನು ನಾನು ತುಂಬಾ ಪ್ರೀತಿಸುತ್ತೇನೆ
ಕಾರಣ, ಈ ನೋವೇ ನನಗೆ ಬದುಕುವ
ಸಾರಿದರಿಯನ್ನು ಕಳಿಸಿದ್ದು
ಜೀವನವನ್ನು ಸಂಪೂರ್ಣವಾಗಿ
ಅರ್ಥ ಮಾಡಿಸಿದ್ದು – ಜಗದೀಶ

ಮಾತು ಹಿತ – ಮಿತವಾಗಿ
ಇದ್ದರೆ ಒಳ್ಳೆಯದು
ವಿವೇಚನೆಯಿಲ್ಲದೆ ಆಡಿದ ಮಾತು
ಎಂದಿಗೂ ಹಿಂದಕ್ಕೆ ಪಡೆಯಲಾಗದು
ಇದನ್ನರಿತು ಬಾಳಿದರೆ ಹೇ ಮನುಜ
ನಿನಗೆ ಒಳ್ಳೆಯದು – ಜಗದೀಶ

ಅದೆಷ್ಟೇ ಬಚ್ಚಿಟ್ಟರೂ ಹಣ
ಒಂದಲ್ಲ ಒಂದು ದಿನ ಛಿದ್ರ ಛಿದ್ರ
ಜ್ಞಾನ ಭಂಡಾರವು ಹಾಗಲ್ಲ
ತಲೆ – ತಲೆಮಾರು ಕಳೆದರೂ
ಎಂದಿಗೂ ಅದು ಸುಭದ್ರ – ಜಗದೀಶ

ಮನದ ನೋವುಗಳಿಗೆ ನಮ್ಮ
ನಗುವೇ ಉತ್ತರವಾಗಬೇಕು
ನಮ್ಮನ್ನು ನೋಯಿಸುವವರಿಗೆ ಮೌನದಿಂದಲೇ
ಉತ್ತರ ನೀಡಬೇಕು – ಜಗದೀಶ

Leave a Reply

Back To Top