ನಿರಂಜನ ಕೆ ನಾಯಕ ಅವರ ಕವಿತೆ- ನೋವು

ಬಲೂನ್ ಅಡಿಯಲಿ ನೆರಳು
ಹೊಟ್ಟೆ ಬರಿದು ತುಂಬದ ಕರುಳು
ಹರಿದ ಬಟ್ಟೆ ಬದುಕಲಿ ಇರುಳು
ನಲಿವ ನೀಡಿ ಸಹಜತೆಗೆ ಮರಳು

ಕಾಸಿಗೆ ಪಡೆವರು ಈ ಖುಷಿಯ
ಎದೆಯ ನೋವು ಬೇಡದ ವಿಷಯ
ಅರಿಯರು ಮನದ ಆಳದ ಗಾಯ
ದಣಿವರಿಯದೆ ದುಡಿವ ಈ ಕಾಯ

ಕ್ಷಣಿಕ ನಲಿವು ನೀರಿನ ಬುಗ್ಗೆಯಂತೆ
ಕಾಡುವ ಯೋಚನೆ ನಾಳೆಯ ಚಿಂತೆ
ಹಿಡಿದ ಚಿತ್ರವು ಹೇಳುವ ಕತೆ
ನಿಜವಲ್ಲ ಅದು ಹೇಳುವ ಗೀತೆ

ಇಂದಿನದು ಬೇಗನೆ ಹಿಂದೆ ಸರಿದು
ಮುಂದೆ ಕಾಣದ ಹಾದಿ ಇರುವುದು
ಕೂಸ ತೂಗಲು ತೊಟ್ಟಿಲು ಇರದು
ಇರುವುದ ಬಿಟ್ಟು ಇರದುದ ನೆನೆದು!!

3 thoughts on “ನಿರಂಜನ ಕೆ ನಾಯಕ ಅವರ ಕವಿತೆ- ನೋವು

Leave a Reply

Back To Top