ಪರಿಮಳ ಐವರ್ನಾಡು ಸುಳ್ಯ ಕವಿತೆ-ಕೊನೆಯ ಪತ್ರ

ಕಲೆಗಳಲಂಕರಣ: ಆಪತ್ಕಾಲದಲ್ಲಿ ನಿನ್ನೊಡನೆ
ನಾನಿರಲಿಲ್ಲ ನಿಜ
ಆದರೆ ನಾ ನಿನ್ನಲಿಟ್ಟ ಪ್ರೀತಿ
ಮಾತ್ರ ಸುಳ್ಳಲ್ಲ

ನನಗೇನಿಲ್ಲ ಬರಬೇಡವೆಂದೆ
ಬರಲಿಲ್ಲ ಸಖ
ಚೆನ್ನಾಗಿರುವೆ ಹೆದರಬೇಡವೆಂದೆ
ಸಂತುಷ್ಟಳಾದೆ ಪ್ರಿಯಸಖ

ಹತ್ತಿರ ಬಂದು ನೋಡಲು ನಾನಿನ್ನ
ಬಲು ಗಾಬರಿಗೊಂಡೆ
ಒಡನೆ ಬಳಿ ಸೇರದಿರಲು ನಾ
ಮೌನವಾಗಿ ನೊಂದುಕೊಂಡೆ

ಜೊತೆಯಿರಲು ಮನಸಿತ್ತು
ಹೃದಯ ತುಡಿಯುತಿತ್ತು
ಅಂತರಾಳ ಚೀರುತಿತ್ತು
ಸಹವರ್ತಿಗಳ ಭಯ ಕಾಡುತಿತ್ತು

ಕಷ್ಟಕಾಲದಲ್ಲಿ ಸನಿಹವಿರಲಿಲ್ಲ
ತಪ್ಪು ನನ್ನದೇ
ಅವಶ್ಯವಿದ್ದಾಗ ಆರೈಕೆ ಮಾಡಲಿಲ್ಲ
ಬಹು ದೊಡ್ಡ ತಪ್ಪು ನನ್ನದೇ

ಹಾಗಂತ ನಿನ್ನಲಿ ಪ್ರೀತಿಯಿಲ್ಲವೆಂದಲ್ಲ
ನಾ ಸತ್ತರೂ ಸಾಯದಷ್ಟು ಪ್ರೇಮವಿದೆ ನಿನ್ನಲಿ
ನೀ ದೂರ ಸರಿಸಿದರೂ ಸರಿಯಬಾರದೆನ್ನುವ
 ಉನ್ನತ ಒಲುಮೆಯಿದೆ ನಿನ್ನಲಿ

ಹೃದಯವೇ ತೊರೆಯದಿರು ನನ್ನ
ನಿನಗಾಗಿ ಮಾತ್ರ  ಉಸಿರಾಡುವೆ ದಿನಾ
ಕೊನೆಯ ಪತ್ರವಿದು ನನ್ನೊಲವೆ
ಭಾವನೆಗಳಿಗೆ ಭಾವವಾಗು ಭಾವದೊಲವೇ.

——————

Leave a Reply

Back To Top