ಕವಿತಾ ವಿರೂಪಾಕ್ಷರವರ ಕವಿತೆ-ಒಲವ ಮರ

ಹೆಚ್ಚೇನು ಇಲ್ಲ
ಮನವಿ ಕೋರಿಕೆ
ಕೊನೆಯಾಸೆ ಯಾವುದು ಇಲ್ಲ..

ಕೊನೆಯದಾಗಿ
ಕೈ ಚಾಚಿರುವೆ…

ತುಸು ಯೋಚಿಸದೆ
ಕೈ ಹಿಡಿದುಎಳೆದುಕೋ ,
ಬಿಡದಂತೆ…!

ಇದೇ ಮಣ್ಣಲ್ಲಿ
ಒಂದಾಗಿ
ಮತ್ತೆ ಮೊಳಕೆಯೊಡೆದು
ಬೆಳೆಯುವ
ಒಲವ ಮರವಾಗಿ…!!!

———————–

Leave a Reply

Back To Top