ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ”ಒಡೆದ ಚಿಪ್ಪು”

ನೀನು ಮರೆತು ಬಿಟ್ಟೆ
ಏನೋ ಕಳೆದು ಹೋದ
ಮುಗ್ಧ ಬಿಳಿ ನಗೆ

ಆಯ್ದು ಕೊಂಡೆ
ಹವಳ ಮುತ್ತು ರತ್ನ
ಹುಡುಕುತ್ತಿರುವೆ ಪ್ರೀತಿ

ಒಡೆದ ಚಿಪ್ಪು
ಕಳೆದ ಸಮಯ
ನೆನಪು ನಂದಾ ದೀಪ

ಅವಸರ ಆತಂಕ
ಭಯ ಭೀತಿ ನಡುಕು
ಕಾಣುತಿದೆ ಭರವಸೆ ಬೆಳಕು

ತಿರುಗುವ ಭೂಮಿಗೋಳ
ಭೇಟಿ ಆಗಬಹುದು ಒಮ್ಮೆ
ಹಂಚಿಕೊಂಡರಾಯಿತು ಬಿಡಿ

ಕಳೆದುಕೊಳ್ಳುವುದು ಬೇಡ
ಸ್ನೇಹ ಪ್ರೀತಿ ಸಮಯ
ಕೂಡಿ ಸಾಗೋಣ ಒಲವ ಹೊತ್ತು


6 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ”ಒಡೆದ ಚಿಪ್ಪು”

  1. ಭರವಸೆಯ ಬೆಳಕು ಹೊತ್ತು…ಕೂಡಿ ಸಾಗೋಣ… ಎನ್ನುವ ಸಂದೇಶ ಹೊತ್ತ
    ಕವನ ಅರ್ಥವತ್ತಾಗಿದೆ…

    ಸುಶಿ

  2. ಶುಭೋದಯ……..
    *ಕಳೆದು ಕೊಳ್ಳುವುದು ಬೇಡ*
    *ಸ್ನೇಹ ಪ್ರೀತಿ ಸಮಯ*
    *ಕೂಡಿ ಸಾಗೋಣ ಒಲವ ಹೊತ್ತು*….

    –ಕವಿ ಹೃದಯದ ಸವಿ ಆಶಯ
    ಸಾಕಾರವಾಗಿ ನೆನಪ ನಂದಾದೀಪದ
    ಕನಸು ನನಸಾಗಲಿ….. “ಇಂದು”

Leave a Reply

Back To Top