ವೈ.ಎಂ.ಯಾಕೊಳ್ಳಿಯವರ “ತನಗ ಸಂಪದ”

ಇರುವಲ್ಲಿ ಇರದು
ಬೇರೆಲ್ಲೊ ಬೇಡುವದು
ಏನಿದರ ಮಾಯೆಯು
ಹೇಳಲಿಕೆ ಬಾರದು

ಧ್ಯಾನಕ್ಕೆ ಕುಳಿತಾಗ
ದೇವಮೂರ್ತಿ ಬದಲು
ನಿಂತಿದೆ ಆ ರೂಪವು
ಭಕ್ತನಾಗಿ ಪೂಜೆಯು

ದಿನವು ತಹತಹ
ಇರುಳಿಗೂ ಬಯಕೆ
ಸೂರ್ಯಂಗೂ ರಜನಿಗೂ
ಬಿಟ್ಟಿಲ್ಲವೀ ತಪನೆ

ಹೇಳಿದಷ್ಟೂ ಕಡಿಮೆ
ಬರೆದಷ್ಟೂ ಮಿಕ್ಕಿತು
ಕೇಳಿದ ಹೃದಯವು
ಹುಚ್ಚನೆಂದು ನಕ್ಕಿತು

ಮಾಡುವ ಕಾರ್ಯವನು
ಮಾಡುತ ಹೋದರಷ್ಟೇ
ದೇವರಿಗೂ ಮೆಚ್ಚಿಕೆ
ದುಡಿಮೆಯೇ ಮಂಚಿಗೆ


Leave a Reply

Back To Top