ಪ್ರಜ್ವಲಾ ಶೆಣೈಕವಿತೆ ಸಿಡಿಲಮರಿ

ಗಡಗಡನೆ ನಡುಗಿತು ಪಾಶ್ಚಾತ್ಯ
ಸಿಡಿಲಮರಿಯ ಘರ್ಜನೆಗೆ ಬೆದರಿ
ಪಲಾಯನಗೊಂಡಿತು ಪಾಶ್ಚಿಮಾತ್ಯ
ಸೋಲಿಗಂಜದ ಯುವ ಚೈತನ್ಯಕ್ಕೆ ಹೆದರಿ……

ಸ್ವಾಮಿ ವಿವೇಕಾನಂದರ ಅಪಾರ ಪಾಂಡಿತ್ಯ
ಯುವಶಕ್ತಿಯ ಮುನ್ನಡೆಸುವ ದಾರಿ
ತ್ಯಾಗ,ನಿಷ್ಠೆ,ಶ್ರದ್ಧೆಯ ಸಾಂಗತ್ಯ
ಮತಿಗೇಡಿಗಳ ಮೇಲದುವೆ ಸವಾರಿ…..

ಆಧ್ಯಾತ್ಮದ ಕಿಚ್ಚನು ಬಿತ್ತಿದರು ನಿತ್ಯ
ಚಿಕಾಗೋ ಸಮ್ಮೇಳನಕ್ಕೆ ಆದರಿವರು ರುವಾರಿ
ಬಡಿದೆಬ್ಬಿಸಿದರು ಸ್ವಾಭಿಮಾನ ಅನುನಿತ್ಯ
ಗುರು ರಾಮಕೃಷ್ಣ ಪರಮಹಂಸರೊಡನೆ ಸೇರಿ…..

ದೇಶ ಕಂಡ ಅಪ್ರತಿಮ ದೈತ್ಯ
ವಿಶ್ವಕ್ಕೆಲ್ಲ ಈ ಯುಗಪುರುಷನೇ ಅಂಬಾರಿ
ವಿದೇಶಿ ಸಂಸ್ಕೃತಿಗೆ ಹಾಡಿದರು ಅಂತ್ಯ
ಹಿಂದುತ್ವದ ಸಂದೇಶವ ಯುವಜನತೆಗೆ ಸಾರಿ…


7 thoughts on “ಪ್ರಜ್ವಲಾ ಶೆಣೈಕವಿತೆ ಸಿಡಿಲಮರಿ

Leave a Reply

Back To Top