ಶೋಭಾ ಹಿರೇಕೈ.ಕಂಡ್ರಾಜಿ. ಕವಿತೆ-ನದಿಯಾಗಿ ಬಿಡಬೇಕು

ಅದೊಂದು
ಪೂರ್ವ ನಿರ್ಧರಿತ
ಭೇಟಿಯ ದಿನ…..

ಹಾಗೇ ಸುಮ್ಮನೆ
ಒಮ್ಮೆಗೇ ……
ನಾನು
ಕಳೆದು ಹೋಗಬೇಕು

ಕಣ್ಣ ಕಣಕಣದಿ
ನನ್ನೇ ತುಂಬಿಕೊಂಡು
ಬೆಳಕ ಸರಿಸರಿಸಿ
ನೀ
ನನ್ನ ಹುಡುಕಬೇಕು

ಬಚ್ಚಿಟ್ಟುಕೊಂಡ ನನ್ನ
ಹುಡುಕಿ, ಗೋಗರೆದು
ಹೀಗೇಕೆ
ಮಾಡಿದೆ ಮುದ್ದು
ಎಂದ ,ನಿನ್ನ
ದಣಿದ ಕಣ್ಣಿಗೆ
ನಾನೊಂದು ಮುತ್ತಿಕ್ಕಿ

ಕಳೆದು ದಕ್ಕುವ ಸುಖಕೆ
ಅನ್ನಬೇಕು.

ಹುಡುಗಾಟ
ಮುಗಿದು
ಹುಡುಕುವ ತ್ರಾಸು
ಕಳೆದು
ಮತ್ತೆ ಹೊರಟು ನಿಂತ ಹೊತ್ತಲ್ಲಿ

ಮುಂದೆಂದೂ..ಕಳೆದು
ಹೋಗದಂತೆ
ನಿನ್ನ ತೋಳೆಂಬ
ಕಡಲಲ್ಲಿ
ನನ್ನ
ಕರಗಿಸಿ ಬಿಡಬೇಕು

ಕರಗಿ ಕರಗಿ
ನಾನೆಂಬ ನಾನು
ನದಿಯಾಗಿ ಬಿಡಬೇಕು.

ಆಹಾ!
ಅದೆಷ್ಟು ರಮ್ಯವೋ
ಈ ಪ್ರೇಮ.
————————————–

One thought on “ಶೋಭಾ ಹಿರೇಕೈ.ಕಂಡ್ರಾಜಿ. ಕವಿತೆ-ನದಿಯಾಗಿ ಬಿಡಬೇಕು

Leave a Reply

Back To Top