ಮಹಾಂತೇಶ ಕಮತ-ಬೆಳೆಯುವ ಹುಚ್ಚು ಇದ್ದಾಗ

ಬೆಳೆಯುವ ಹುಚ್ಚು ಇದ್ದಾಗ,
ಎದೆಯೊಳಗೆ ಕಿಚ್ಚು ಇರಲಿ!!
ಸಾಧನೆ ಶಿಖರವೆರಿ ಮೆಚ್ಚುವಂತನಾಗಿ,
ಹಿಂದೆ ಮಾತಾಡುವವರಿಗೆ ಚುಚ್ಚುವಂಗಿರಲಿ!!

ಸಾಧನೆಗೈಯುವಾಗ ಮೌನಿಯಾಗಿದ್ದು,
ಸಾದಿಸಿದ ಮೇಲೆ ಉಸಿರು ಬಿಡಬೇಕು!!
ಚುಚ್ಚಿ ಮಾತಾಡಿದವರು ಹೋಗಳಬೇಕು
ಆಡಿಕೊಂಡವರೆಲ್ಲರೂ ಅಡಗಿ ಕೂರಬೇಕು!!

ಬೆಳೆಯುವಾಗ ಕುಗ್ಗದಿರು ಅರಿತು
ಬೆಳೆದಮೇಲೆ ಹಿಗ್ಗದಿರು ಅದು ಒಳಿತು!!
ಕಷ್ಟ ಸುಖದಲ್ಲಿ ಎಲ್ಲರ ಜೊತೆ ಬೆರೆತು
ತೋರಿಸಬೇಕು ಏನಂತ ನಿನ್ನ ತಾಕತ್ತು!!

ಇದು ಮೋಸದ ಕಾಲ ಎಂದು ತಿಳಿದು
ನಿನ್ನ ಸವಾಲಿಗೆ ಅಡ್ಡ ಬಂದವರನ್ನು ತಿರಸ್ಕರಿಸು!!
ನೀನು ನೀನಾಗಿರು ಯಾರು ಹೇಗೆ ಅಂತಾ ಅಳಿದು
ನಿನ್ನ ಏಳ್ಗೆಗೆ ಬೆಂಗಾವಲಾಗಿ ನಿಂತವರನ್ನು ಸತ್ಕರಿಸು!!


Leave a Reply

Back To Top