ಡಾ ಅಭಿಷೇಕ್ ಭಾರದ್ವಾಜ್ ಬಿ ಕೆ ಕವಿತೆ,ರಾಗನಾದ

ನಿನಗಾಗಿ ಬರೆದ ಈ ಓಲೆ
 ನನ್ನೆಲ್ಲಾ ಕನಸುಗಳ ಸರಮಾಲೆ ನುಡಿಸುವ ವೇಣುವಿನ ಗಾನ
ನಿನ್ನ ಹೆಸರೇ
 ಈ ಮಾಧವನಿಗೆ ನೀನಾದೆ ಶ್ವಾಸದಾ ಉಸಿರೇ

ನನ್ನ ಕಂಗಳ ಕಾಂತಿಯು ನೀನು ನನ್ನೆಲ್ಲಾ ಭಾವಗಳ ಭಾವ ನೀನು
 ನನ್ನ ವೇಣುವಿನ ಗಾನಕ್ಕೆ ರಾಗ ನೀನು
ನಿನ್ನ ಪ್ರೇಮದೊಲವಿಗೆ ಕಾದ ಮಾಧವನು ನಾನು

ನನ್ನೆದೆಯ
ಹಾದಿಯಲಿ ನಿನಗಾಗಿ ಒಲವ ಹಸಿರ ಹಾಸಿಹೆನು
 ನಿನ್ನೊಲವ ಪ್ರೇಮ ಪಾದದಿ ಸೋಕಿ ಒಲವ ಇಬ್ಬನಿ ಸಿಂಚಿಸುವೆ ಏನು
ನಿನ್ನ ಧನಿಗಾಗಿ ಕಾದ ಮುರುಳಿಯು ನಾನು
 ನನ್ನ ಮನದ ಅಳಲು ಇನ್ನೂ ನಿನಗೆ ಕೇಳಲಿಲ್ಲವೇನು

ನಿನ್ನ ಪ್ರೇಮಕ್ಕೆ ಕಾದ ಚಾತಕವು ನಾನು
ನನ್ನ ತುಟಿಯಂಚಲಿನ ನಗುವಿನ ಮುದವು ನೀನು
 ನನ್ನೆಲ್ಲಾ ರಾಗಗಳಿಗೆ ನಾದ ನೀನು ನನ್ನೊಳಗೆ ನಿನ್ನ ಕಾಣುವ ಭಾವುಕವು ನಾನು

 ನನ್ನೆದೆಯ ಬಡಿತದಿ ಮಿಡಿತಕ್ಕೆ
ನೀ ರುವಾರಿ
ನನ್ನೊಲವಿನ ಅರಮನೆಯ ರಾಜಕುಮಾರಿ
 ನಿನ್ನ ಪವಿತ್ರ ಪ್ರೇಮಕ್ಕೆ ಶರಣಾದ
 ಈ ಮುರಾರಿ
ನನ್ನ ಪ್ರೇಮವ ಸಮ್ಮತಿಸುವೆಯಾ
ಆ ನಿನ್ನ ತುಂಟ ನಗೆ ಬೀರಿ


Leave a Reply

Back To Top