ಹೆಚ್. ಎಸ್. ಪ್ರತಿಮಾ ಹಾಸನ್ ನಗುವಿನೊಂದಿಗೆ ನಲಿವಿರಲಿ

ಕುಣಿಯುವ ನವಿಲನು ನೋಡುತ
ನಗುವಿನೊಂದಿಗೆ ನಲಿವಿರಲಿ ಎನ್ನುತ
ಗೆಳೆಯರ ಬಳಗ ಕೂಡಿ ಹೊರಟಿರಲು
ಎಲ್ಲಾ ರೀತಿಯ ಸಿದ್ಧತೆಯಾಗಿರಲು…..

ಹೊರ ನೋಟಕ್ಕೆ ಚಂದವು ಎಲ್ಲ
ಸಿದ್ಧವಾಗಲು ಬಹಳ ಸಮಯ ಹಿಡಿಯುತದಲ್ಲ
ನೋಡ ತಕ್ಷಣ ಚಂದ ಎನ್ನುವರೆಲ್ಲ
ಬೆಳವಣಿಗೆ ಎಷ್ಟು ಕಷ್ಟ ಎಂಬುದ ತಿಳಿದಿರುವರೆಲ್ಲ …..

ಸೌಂದರ್ಯ ತೋರಲು ಬೆಳವಣಿಗೆ ಬೇಕು
ಬೆಳೆಯುವ ತನಕ ಅದು ಸುರಕ್ಷಿತವಾಗಿರಬೇಕು
ಎಲ್ಲರ ಕಣ್ಣಿಂದ ರಕ್ಷಿಸಿಕೊಳ್ಳಬೇಕು
ಆಗ ತಾನೇ ಚೆಂದದ ಸೌಂದರ್ಯ ಹೊರಹೊಮ್ಮಬೇಕು…..

ಕೊಲಬೇಡ, ನೋಡಿ ಅಣಕಿಸಲು ಬೇಡ,
ಅದರ ಪಾಡಿಗೆ ಅದನು ಬಿಟ್ಟು ಬಿಡಿ
ಕೆಣಕಲು ಹೋಗಬೇಡಿ, ಬೆಳೆಯಲಿ ಬಿಡಿ
ಕಳೆ ಇದ್ದರೆ ಕಿತ್ತುಬಿಡಿ, ಪರಿಸರವನ್ನು ಉಳಿಸಿ ನೋಡಿ….

ಎಲ್ಲ ಸಮಯದಲ್ಲೂ ಒಂದೇ ನಡೆಯುವುದಿಲ್ಲ
ಎಲ್ಲಾ ದಿನ ಸೋಮವಾರವಾಗಿರುವುದಿಲ್ಲ
ಸಮಯ ಎಂಬುದು ಯಾರ ಸ್ವತ್ತು ಅಲ್ಲ
ಬ್ರಹ್ಮನ ಮುಂದೆ ಯಾವ ಬರಹವೂ ಇಲ್ಲ …….


Leave a Reply

Back To Top