ಪ್ರೊ. ಸಿದ್ದು ಸಾವಳಸಂಗ ಕವಿತೆ-ಗೆಳೆಯರೆ

ತಿನ್ನಬೇಡಿ ಗೆಳೆಯರೇ ತಂಬಾಕು
ನೀಡಬೇಡಿ ಕ್ಯಾನ್ಸರ್ ಗೆ ಕುಮ್ಮಕ್ಕು !
ಸೇದಬೇಡಿ ಗುಟ್ಕಾ, ಬೀಡಿ-ಸಿಗರೇಟು
ನೀಡಬೇಡಿ ಶ್ವಾಸಕೋಶಕ್ಕೆ ಏಟು !!

ಮಾಡಬೇಡಿ ಗೆಳೆಯರೇ ಮಧ್ಯಪಾನ
ನೀಡಬೇಡಿ ಮೃತ್ಯುವಿಗೆ ನೀವೇ ಆಹ್ವಾನ !
ತಿನ್ನಬೇಡಿ ಹೊಟ್ಟೆ ತುಂಬಾ ಊಟ
ನೋಡಿದರೆ ಕಾಣುತ್ತೀರಿ ದುಡೂತಿ ಮಾಟ !!

ಪಡಬೇಡಿ ಗೆಳೆಯರೇ ಅನವಶ್ಯಕ ಮತ್ಸರ
ಕೆರೆದುಕೊಳ್ಳಬೇಕಾಗುತ್ತದೆ ತಲೆ ಪರಪರ !
ಎಳೆಯಬೇಡಿ ಮುಂದಿನವರ ಕಾಲು
ಸಿಗಲಾರದು ನಿಮಗೆ ಕುಡಿಯಲು ಹಾಲು !!

ಓಡಿಸಬೇಡಿ ಗೆಳೆಯರೇ ಜೋರಾಗಿ ಯಾವುದೇ ಗಾಡಿ
ಹೊತ್ತುಕೊಂಡು ಹೋಗಬೇಕಾಗುತ್ತದೆ ಸ್ಮಶಾನಕ್ಕೆ ನಿಮ್ಮ ಬಾಡಿ !
ಸುರಿಯಬೇಡಿ ಉರಿಯುವ ಬೆಂಕಿಗೆ ಆಜ್ಯ
ಎಲ್ಲರಿಂದಲೂ ನೀವು ತಿರಸ್ಕೃತ ತ್ಯಾಜ್ಯ !!

ಎಸಿಬೇಡಿ ಗೆಳೆಯರೇ ಕಲ್ಲು ಸಿಹಿ ಹಣ್ಣಿನ ಮರಕ್ಕೆ
ನೀವೇ ಬೀಳುತ್ತೀರಿ ಪಾಪದಿಂದ ನೆಲಕ್ಕೆ !
ಮುರಿಯಬೇಡಿ ಮತ್ತೊಬ್ಬರ ಮನಸ್ಸು
ಹಾಳಾಗುತ್ತದೆ ನಿಮ್ಮ ಸುಂದರ ಕನಸು !!

ಮಾಡಬೇಡಿ ಗೆಳೆಯರೇ ಮುಗ್ಧರಿಗೆ ಮೋಸ
ಮಾಯವಾಗುತ್ತದೆ ನಿಮ್ಮ ಮುಖದ ಸುಹಾಸ !
ಆಡಬೇಡಿ ಮೋಸದ ಇಸ್ಪೀಟು ಮಟಕಾ
ಸಾಲ ಹೆಚ್ಚಾಗಿ ಹೊಡೆಯುತ್ತದೆ ಜಟಕಾ !!

ಕಟ್ಟಬೇಡಿ ಗೆಳೆಯರೇ ಕುದುರೆಯ ಬಾಲಕ್ಕೆ ನಿಮ್ಮ ಹಣ
ಹೊತ್ತುಕೊಂಡು ಹೋಗಬೇಕಾಗುತ್ತದೆ ನಿಮ್ಮ ಹೆಣ !
ಮುಟ್ಟಬೇಡಿ ಯಾವುದೇ ಮೋಸದ ಹಣ
ಕೊಲ್ಲುತ್ತದೆ ನಿಮ್ಮನ್ನು ಬಿಡದೆ ಕಣಕಣ !!

ಬೀಳಬೇಡಿ ಗೆಳೆಯರೇ ಓದುವಾಗ ಪ್ರೀತಿ ಪ್ರೇಮದ ಪಾಶಕ್ಕೆ !
ನಾಂದಿಯಾದೀತು ನಿಮ್ಮ ಭವಿಷ್ಯದ ವಿನಾಶಕ್ಕೆ !!


Leave a Reply

Back To Top