ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸುಖ

ಕವಿತೆ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸುಖ

ಅಲ್ಲ ಸುಖ
ದೇಹ ಮಿಲನ
ಅಲ್ಲ ವಿರಹ
ನೋವು ವೇದನ
ಕನಸು ಭಾವ
ಹಸಿರು ಚಾರಣ
ಹುಡುಕಾಟ ನೋಟ
ನವ ನವೀನ ಯಾನ
ಪ್ರೇಮ ಪ್ರೀತಿ
ಸ್ನೇಹ ಸ್ಫೂರ್ತಿ
ಚಿಗುರು ಹಸಿರು
ಹೃದಯ ತಾಣ
ಬದುಕು ನಿತ್ಯ
ದೂರ ಪಯಣ
ಲೆಕ್ಕವಿಲ್ಲದ
ಮಧುರ ಕ್ಷಣ
ಗೆಲ್ಲ ಬೇಕು
ಬಾಳ ಪಂದ್ಯ
ಇಟ್ಟು ಒಲುಮೆಯ
ಗಟ್ಟಿ ಪಣ
ಬೇಡ ಬೇಸರ
ನಿಟ್ಟುಸಿರ ಯಾತನ
ನಕ್ಕು ಬಿಡು
ಬದುಕು ಅನುಗಾಲ

ನೂತನ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

9 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸುಖ

  1. ಗೆಲ್ಲಬೇಕು ಬಾಳ ಪಂದ್ಯ
    ಇಟ್ಟು ಒಲುಮೆಯ
    ಗಟ್ಟಿ ಪಣ….
    ನಕ್ಕು ಬಿಡು….ಸುಂದರವಾದ ಜೀವನದ ಅನುಭಾವ….ಸುಖದ ಇನ್ನೊಂದು ಮಗ್ಗುಲು
    …..ಕವನದ ತುಂಬಾ ನಾವು ತಿಳಿದುಕೊಂಡದ್ದಷ್ಟೇ ಸುಖ ಅಲ್ಲ ಅನ್ನುವ
    ಪ್ರತಿಪಾದನೆ ಇಷ್ಟ ಆಯ್ತು.

    ಸುಶಿ

  2. ಗೆಲ್ಲ ಬೇಕು ಬಾಳ ಪಂದ್ಯ
    ಇಟ್ಟು ಒಲುಮೆಯ ಗಟ್ಟಿ ಪಣ..
    ಬಲು ಅರ್ಥಪೂರ್ಣ ಕವನ ಸರ್

  3. ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಕವನ

Leave a Reply

Back To Top