ಪ್ರೊ.ಸಿದ್ದು ಸಾವಳಸಂಗ ಕವಿತೆ-ನಂಬಿಕೆ ಸತ್ತುಹೋಗಿದೆ

ಕಾವ್ಯ ಸಂಗಾತಿ

ಪ್ರೊ.ಸಿದ್ದು ಸಾವಳಸಂಗ

ನಂಬಿಕೆ ಸತ್ತುಹೋಗಿದೆ

ನಿರಂತರವಾಗಿ ನಡೆಯುತ್ತಿದೆ
ಭ್ರೂಣ ಲಿಂಗಪತ್ತೆ ಮತ್ತು ಹತ್ಯೆ !
ಹೆತ್ತವರಿಗೆ ಇದು ಬೇಕಿತ್ತೆ ?
ಕರುಣೆ ಇಲ್ಲದ ಕಟುಕರು
ಯಾರಿಗೂ ಬೇಡವಾದ ಭ್ರೂಣಗಳು
ಅರಳುವ ಮುನ್ನವೆ ಕಮರುವ ಕುಡಿಗಳು !
ಹೆಣ್ಣೆಂದರೆ ಇಷ್ಟು ತಿರಸ್ಕಾರವೆ ?
ಮಗಳಾಗಿ ಹೆಣ್ಣು ಬೇಡ
ಹೆಂಡತಿಯಾಗಿ ಮಾತ್ರ ಬೇಕೆನ್ನುವ ಅಧಮರು !
ಹಣ ಕೊಟ್ಟು ಕೊಲ್ಲಿಸುವ ಕ್ರೂರಿಗಳು
ಇದನ್ನೇ ದಂಧೆ ಮಾಡಿಕೊಂಡ ವೈದ್ಯಯಮರು !
ಮರಮರ ಮರುಗುತ್ತಿವೆ ತಾಯಿಯ
ಒಡಲ ಕೂಸುಗಳು !
ನಾವು ಮಾಡಿದ ತಪ್ಪಾದರೂ ಯಾವುದು ?
ಈ ಧರೆಯ ಮೇಲೆ ಹುಟ್ಟುವುದು ತಪ್ಪೇ ?
ಅವುಗಳ ಕೂಗು ಯಾರಿಗೂ ಕೇಳದು
ಪ್ರಾಣ ಉಳಿಸುವ ವೈದ್ಯರು ಪ್ರಾಣ ತೆಗೆಯುವುದಾದರೆ ಯಾರನ್ನು ನಂಬುವುದು ?
ನಂಬಿಕೆಯೇ ಸತ್ತ ಮೇಲೆ ಇಲ್ಲಿ
ಮತ್ತೊಮ್ಮೆ ಸಾಯುವುದೇನಿದೆ ?


ಪ್ರೊ.ಸಿದ್ದು ಸಾವಳಸಂಗ,

Leave a Reply

Back To Top